ಒಟ್ಟು 5363 ಕಡೆಗಳಲ್ಲಿ , 130 ದಾಸರು , 3529 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮ-ಭೀಮ-ಮಧ್ವ ಸ್ತೋತ್ರ ಅಪಮೃತ್ಯು ಪರಿಹರಿಸೊ ಅನಿಲದೇವಾ ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು ಎನಗಿಲ್ಲವಾವಾವ ಜನ್ಮದಲ್ಲಿ ಅನುದಿನ ನೀನೆಮ್ಮನುದಾಸೀನ ಮಾಡುವುದು ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1 ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ ದೊರೆಯು ನಿನ್ನೊಳಗಿಪ್ಪ ಸರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2 ಭವರೋಗ ಮೋಚಕನೆ ಪವಮಾನರಾಯಾ ನಿ ನ್ನವರನು ನಾನು ಮಾಧವಪ್ರಿಯನೇ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3 ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ ಚಾನನಾದ್ಯಮರರಿಗೆ ಪ್ರಾಣದೇವಾ ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ 4 ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವು ಅಲ್ಲ ಸಾಧುಪ್ರಿಯಾ ವೇದವದೋದಿತ ಜಗನ್ನಾಥ ವಿಠಲನ ಮೋದ ಕೊಡು ಸತತ5
--------------
ಜಗನ್ನಾಥದಾಸರು
ಹನುಮ-ಭೀಮ-ಮಧ್ವರು ಅಖಿಳ ಬೊಮ್ಮಾಂಡ ನಾಯಕ ಸಕಲ ಜೀವೋತ್ತುಮ ಪಾದ ನಿಖಿಳ ಲೋಕವ್ಯಾಪ್ತಾ ಲಕುಮಿರಮಣನ ಪ್ರಾಣ ಸಂಭೂತ ಸುಖಙÁ್ಞನಮಯ ಸ್ವರೂಪ ಸುಮನೋತ್ತಂಸ ಶಿಖಿಸಖೋದಿತರವಿ ಪ್ರಕರ ಸನ್ನಿಭ ಮುಖ ಸುಖಪೂರ್ಣ ಶುದ್ಧ ಸತ್ತ್ವ್ವಶರೀರ ಆಖಣಾಶ್ಮ ಸಮಚರಣ ಭಕ್ತಾಭರಣ ಲೋಕೈಕ ವೈದ್ಯಾಭಾರತೀಕಾಂತಾ ಲೌಕಿಕ ಸುಖದಾತಾ ಪ್ರಖ್ಯಾತಾ ಕಾಕೋದರ ಶಾಯಿ ನಮ್ಮ ಗುರುಜಗನ್ನಾಥವಿಠಲನಾ ಲೋಕನವಿತ್ತು ಪೊರೆಯೋ ಪ್ರಾಣರಾಯ
--------------
ಗುರುಜಗನ್ನಾಥದಾಸರು
ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ ಪ ಅನುಮಾನ ಸಲ್ಲ ಸುರಧೇನುವೆನಿಸುವನು ತನ್ನ ನೆನೆವರಿಗೆ ಅ.ಪ. ಅಂಜನದೇವಿಯೊಳ್ ಪುಟ್ಟಿ | ಪ್ರ- ಭಂಜನ ಸುತ ಜಗಜಟ್ಟಿ | ಶ್ರೀ ಕಂಜನಾಭನನು ಕಂಡು ಭಜಿಸುತಲಿ ತಾನು ರಂಜಿಪನು 1 ಪಾಥೋದಿಯನು ನೆರೆದಾಟಿ | ರಘು - ನಾಥನ ಮಡದಿಗೆ ಭೇಟಿ | ಇತ್ತು ಖ್ಯಾತ ಲಂಕೆಯನು ವೀತಿ- ಹೋತ್ರನಿಗೆ ಕೊಟ್ಟ ಬಲುದಿಟ್ಟ 2 ಸಂಜೀವನಾದ್ರಿಯ ತಂದು | ಕಪಿ ಪುಂಜವನೆಬ್ಬಿಸಿ ನಿಂದು | ತುಸ ಅಂಜಕಿಲ್ಲದಲೆ ಅಸುರರನು ಭಂಜಿಸಿ ನಿಂತ ಜಯವಂತ 3 ಶ್ರೀರಾಮಚಂದ್ರನು ಒಲಿದು | ಮಹ ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ ಹಾರ ಪಡೆದ ಗಂಭೀರ ಶೂರ ರಣಧೀರ ಉದಾರ 4 ಎಂತೆಂತು ಸೇವಿಪ ಜಂತು | ಗಳಿ ಗಂತಂತೆ ಫಲವೀವನಿಂತು | ಶ್ರೀ - ಕಾಂತ ನಾಮವನು ಆಂತು ಭಜಿಪರಲಿ ಪ್ರೇಮ ಬಹುನೇಮ 5
--------------
ಲಕ್ಷ್ಮೀನಾರಯಣರಾಯರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ
ಹನುಮಂತ ಹನುಮಂತ ಹನುಮಂತ ಪ ಜನರ ಪೊರೆಯುತ ತತುವರೊಳು ಪ್ರೇರಿತ ಅ.ಪ ಪವಮಾನ ಪವಮಾನ ಪವಮಾನ ಪವಮಾನ ಪರಮ ಪಾವನ ಅಣುಮಹದ್ಘನ ವನಧಿಲಂಘನ ವೀತಿಹೋತ್ರನ ಪಡಿಸಿತೃಪ್ತನ ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ ಕುಶಲವಾರ್ತೆಯ ಪೇಳಲು ಜೀಯಾ ರಾಮಾಲಿಂಗನದಿಂದ ಆನಂದ ತಾ ನಿಂದಾ ತಾ ನಿಂದ ತಾ ನಿಂದ ನೆರಹಿ ಆನಂದ ರಣಮುಖಕೆಂದಾ ಮಾಡಿಸಿ ನಿಂದಾ ರಾವಣವಧೆಗೆಂದಾ 1 ತ್ರಿಜಗ ಖ್ಯಾತ ಅತಿ ಮಹಾರಥ ಯದುಪತಿ ಪ್ರೀತಾ ಸುರರ ಸೇವಿತಾ ಗರಳಭುಂಜಿತಾ ಸತಿಗೆ ಪೂವಿತ್ತ ಭುಜಬಲಯುತಾ ಧೀಮಂತಾ ಧೀಮಂತಾ ಧೀಮಂತಾ ಧೀಮಂತಾ ಭಾರತೀಕಾಂತಾ ದುರಳ ಮಣಿಮಂತಾ ಸೆಣಸಿಬರೆ ನಿಂತಾ ಹರಣ ಮಾಡಿ ಪಂಥಗೆಲಿದು ತಾ ನಿಂದಾ ಪ್ರಣಯನಾಗಿ ನಿಂತಾ ಕೀಚಕನ ಧ್ವಾಂತದೊಳು ತಾ ನೋಡಿ ತಾ ನೋಡಿ ತಾ ನೋಡಿ ತಾ ನೋಡಿ ಅವನೊಳು ಕೂಡಿ ಕೈಯ ಹಿಡಿದಾಡಿ ಕೇಳಿಯೊಳು ಕೂಡಿ ಉರದಿಶಿರ ನೆಲಕೆ ಈಡಾಡಿ ನಲಿದು ತೋರಿದಾ 2 ಆನಂದ ಆನಂದ ಆನಂದ ಆನಂದ ತಾ ನಿಂದ ಶ್ರೀಮ ದಾನಂದ ಆನಂದ ಬುಧಜನಕ್ಲೇಶದಿಹ ಮನ ನೋಡಿ ಜೀ ಸೂತ್ರ ವ್ಯಾಖ್ಯಾನ ಮಾಡಿ ಪಾವನ ವಾದಿಭಂಜನ ಬಾದರಾಯಣ ಪ್ರೀತಿಪಾತ್ರ ಏಕಾಂತ ಭಕ್ತ ತಾನಿತ್ತ ತಾನಿತ್ತ ತಾನಿತ್ತ ತಾನಿತ್ತ ಜಗಕತಿಮೋದ ಶಾಸ್ತ್ರ ತ್ರಿವಿಧ ತರತಮಭೇದ ನಿತ್ಯ ಕಾರಣ ನಿತ್ಯ ಕಾರ್ಯ ಅನಿತ್ಯ ಪ್ರಕೃತಿ ಸತ್ಯ ಸುಗುಣವೆ ನಿತ್ಯ ನಿತ್ಯ ದ್ವೈತವು ಸತ್ಯವೆಂದ ಶ್ರೀವೇಂಕಟೇಶನ ನಿಜದೂತ 3
--------------
ಉರಗಾದ್ರಿವಾಸವಿಠಲದಾಸರು
ಹನುಮಂತಾ | ಮದ್ಗುರುವೆ | ಹನುಮಂತ ಪ ಹನುಮಂತ - ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ. ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ 1 ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ 2 ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು 3 ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ 4 ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ 5 ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ 6 ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ 7
--------------
ಗುರುಗೋವಿಂದವಿಠಲರು
ಹನುಮನ ಮತದಲಿ ಅನುಮಾನ ಬೇಡವೊ ಮನಮುಟ್ಟಿ ಭಜಿಸಲೊ ಎಲೆ ಮನವೇ ಪ ಸನಕಾದಿ ವಂದಿತ ಮನಸಿಜ ಜನಕ ವನಜನಯನ ಹರಿಗನುಮತವಾದಂತ ಅ.ಪ ವಿಧಿ ಭವಾದಿಗಳಲ್ಲಿ ಅನುಚರರಿವನಿಗೆ ಪರತಂತ್ರರು ವಿವಿಧ ತಾರತಮ್ಯ ನಿರತ ಪೊಂದಿರುವರು ಸಕಲ ಜಗಂಗಳು ನಿಜವೆಂದು ಬೋಧಿಪ1 ಮುಕುತಿಯೆಂಬುದು ನಿಜಾನಂದದ ಅನುಭವ ಭಕುತಿಯೇ ಪಡೆಯಲು ಸಾಧನವು ಪ್ರಕೃತಿ ಸಂಯುತವಾದ ದೇಹವ ಕಳೆಯಲು ಯುಕುತಿ ಬೇರಿಲ್ಲವೆಂದು ಭರದಿ ಸಾರುವಂಥ 2 ನಯನಕೆ ಗೋಚರ ಒಣ ಊಹೆಯಿಂದಲಿ ತಿಳಿಯಲು ಹರಿಯನು ಅಳವಲ್ಲವು ನಿಗಮಗಳಿಂದಲೆ ಅರಿತ ಜ್ಞಾನಿಗೆ ಪ್ರ ಸನ್ನನಾಗುವನೆಂದು ದೃಢದಿಂದರುಹುವ 3
--------------
ವಿದ್ಯಾಪ್ರಸನ್ನತೀರ್ಥರು
ಹಬ್ಬವೆನಗಿಂದು ಧರೆಯೊಳು ನೋಡಿ ಇಬ್ಬರೊಂದಾದ ನೆಲೆನಿಜಗೂಡಿ ಉಬ್ಬಿ ಉನ್ಮನವಾಗಿ ಎನ್ನೊಳು ಕೊಬ್ಬಿದೆನು ಘನಸುಖ ಬೆರದಾಡಿ 1 ಉಬ್ಬಸೆನಗಿನ್ನು ಹಿಂಗಿತು ನೋಡಿ ಹಬ್ಬದೂಟದ ಸವಿರಸಗೂಡಿ ಹಬ್ಬಿಹವಣಿಸಿ ಬೀಳುವ ಗರ್ಭಪಾಶವನೆಗಳೆದೆನು ಈಡ್ಯಾಡಿ 2 ಹಬ್ಬವಾಯಿತು ಮಹಿಪತಿಗಿಂದು ಒಬ್ಬನಿಜವಾದ ಗುರು ಕೃಪಾಸಿಂಧು ಹಬ್ಬಹರುಷದಿ ನೆಲೆನಿಭಗೊಂಡಿÀನ್ನು ಶೋಭಿಸಿತು ಶುಭಕರ ದಿವಸಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಯ ಮುಖ ಪದಾಬ್ಜ ಮಧುಪಾ | ದುರ್ಭವಭಯವ ತಾರಿಸು ಮುನಿಪಾ ಪ ವ್ರಯವಾಯಿತು ಮಮ | ಆಯುವು ಎಲ್ಲವುಪ್ರಿಯ ನೀನಲ್ಲವೆ | ಭಯ ಪರಿಹರಿಸೈ ಅ.ಪ. ರಜತ ಪುರಿಲಿ ನಿಂದೂ | ವಿಧಿಸಿದಿಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇಅಜನ ಸುಪದವಿಗೆ | ನಿಜದಿ ಬರುವ ಯತಿ 1 ಸೋದೆ ಪುರದಿ ವಾಸಾ | ಭಕ್ತರ$ಗಾಧ ದೋಷ ನಾಶಾ ||ವಾದಿ ಜನರ ಮದ | ಛೇದನ ದಶಮತಿಬೋಧಪ್ರೀಯ ಗುರು | ಮೋದವ ಪಾಲಿಸು 2 ಪಂಚ ವೃಂದಾವನವಾ | ರಚಿಸುತಪಂಚರೂಪಿ ಹರಿಯಾ ||ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲುಸಂಚುಗೊಳಿಸಿ ಪ್ರ | ಪಂಚವ ತೊರೆದೇ 3 ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||ಸಮಯವಲ್ಲವಿದು | ನಿಮಗೆಂದೆನುತಲಿಕ್ರಮಿಸುವ ತೆರ ನೀ | ಮಾಡಿದೆ ಯತಿವರ 4 ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||ಭಾವದಿ ಕಾಣುತ ಮೈಮರೆದ್ಹಿಗ್ಗುವಈ ವಿಧ ಸುಖ ಯಾವಾಗಲೂ ಕಾಣುವ 5
--------------
ಗುರುಗೋವಿಂದವಿಠಲರು
ಹಯಾನನ ವಿಠಲಾ ನೀ ದಯದಿ ಸಲಹೊ ಇವಳಾ |ದಯಾಪಯೋನಿಧಿ ಎಂದು ನಿನಗೆ ಭಿನ್ನೈಪೇ ಪ ಕುಕ್ಷಿಯೊಳು ಜಗಧರಿಪ ಪಕ್ಷಿವಾಹನದೇವಲಕ್ಷಿಸದಲೇ ದೋಷ | ಲಕ್ಷವನು ಇವಳಾಈಕ್ಷಿಪುದು ಕರುಣಾಕಟಾಕ್ಷದಲ್ಲೆಂದೆನುತಲಕ್ಷ್ಮೀರಮಣನೆ ಹರಿಯೆ ಪ್ರಾರ್ಥಿಸುವೆ ನಿನಗೇ 1 ವಿನುತ | ಬಾಗಿ ಬೇಡುವೆನೋ |ಜಾಗುಮಾಡದೆಲೆ ವೈ | ರಾಗ್ಯ ಭಕ್ತಿಜ್ಞಾನಯೋಗ ಕೊಟ್ಟುದ್ದರಿಸು | ಸಾಗರಜೆ ರಮಣಾ 2 ವಾಚಾಮ ಗೋಚರನೆ | ನೀಚೋಚ್ಚಕ್ರಮ ತಿಳಿಸಿಮೋಚ ಕೇಚ್ಛೆಯ ಮಾಡೊ | ಪಾಚಕಸುವಂದ್ಯಾಪ್ರಾಚೀನ ಕರ್ಮಾಳಿ ಯೋಚಿಸಲು ಅಳವಲ್ಲಆಚರಿತ ಸಂಚಿತವ | ಮೋಚಿಸಾಗಾಮೀ 3 ಸಿರಿ | ನಲ್ಲ ನಿನಗೀಪರಿಯಸೊಲ್ಲ ಪೇಳುವುದುಚಿತೆ | ಚೆಲ್ವ ಹಯವದನಾಬಲ್ಲಿದನೆ ನೀನಾಗಿ | ಚೆಲ್ವ ರೂಪವ ತೋರೆಸಲ್ಲಲಿತ ಅಂಕಿತವ | ಸಲ್ಲಿಸಿಹೆ ದೇವಾ 4 ಭಾವುಕಾರ್ಜುನ ಬಂಡಿ | ಬೋವನಾಗುತ್ತ ಭವನೋವಕಳೆವೋಪಾಯ | ನೀವಲಿದು ಪೇಳೀತಾವಕರ ಪೊರೆದಂತೆ | ಭಾವುಕರ ಪೊರೆ ಬೇಡ್ವೆಗೋವುಗಳ ಪಾಲ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಹರಕೆಯ ಮಾಡಿಕೊಳ್ಳೀ ಕೇಶವನಿಗೆ ಹರಕೆಯ ಕಟ್ಟಿಕೊಳ್ಳೀ ಪ ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ. ಭಜನೆಯ ಮಾಳ್ಪೆನೆಂದೂ ಕೇಶವನಿಗೆ ಭಜನೆಯರ್ಪಿಸುವೆನೆಂದೂ ಅಜಪಿತ ಶ್ರೀಹರಿದಾತನಾಗಿರುವಾಗ ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1 ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ ಸ್ಮರಣೆಯರ್ಪಿಸುವೆನೆಂದೂ ನಿತ್ಯ ತೃಪ್ತನುಯಿರೆ ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2 ಸೇವೆಯ ಮಾಳ್ಪೆನೆಂದು ಕೇಶವನಿಗೆ ಸೇವೆಯರ್ಪಿಸುವೆನೆಂದೂ ಭಾವಜನಯ್ಯನೆ ತ್ರಿಜಗಪಾಲಕನಾಗಿ ದೇವತಾನಿರುತಿರೆ ಭವಭಯವ್ಯಾಕೇ 3 ವಂದನೆ ಮಾಳ್ಪೆನೆಂದು ಕೇಶವನಿಗೆ ವಂದನೆ ಕೊಡುವೆನೆಂದೂ ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ ಅಂದದಿ ಕೊಡುವ ದಾನಗಳವಾಗ್ಯಾಕೇ 4 ಆತ್ಮವ ಕೊಡುವೆನೆಂದೂ ಕೇಶವನಿಗೆ ಅತ್ಮವರ್ಪಿಸುವೆನೆಂದೂ ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5
--------------
ಕರ್ಕಿ ಕೇಶವದಾಸ
ಹರಣ ಪ ಜಗದಿ ಧರ್ಮಾ ಧರ್ಮವೆಂಬ ಅನುವರವು ಹುಟ್ಟುವ ಕಾರಣ ಅಗಣಿತಾಘಘನ ನಿವಾರಣ ಅರಿನಿಕರ ಸಂಹಾರಣ 1 ಸುಗುಣ ದುರ್ಗುಣಗಳ ಸಮೂಹಕೆ ಸುಲಭವಾಗಿಹುದೀ ಕಥಾ ಸುಜನ ಮೇಲುಪಂಕ್ತಿಯೆನಿಸುತಿಹುದು 2 ತಾಮಸರ ನಿರ್ನಾಮ ವೈದಿಸಿ ತಾಮನವಲಿದ ಸುಜನಕೆ ಸ್ವಾಮಿ ಶ್ರೀಗುರುರಾಮ ವಿಠಲನ ಪ್ರೇಮ ಸಂಪಾದಿಸುವುದಕೆ 3
--------------
ಗುರುರಾಮವಿಠಲ
ಹರಣ ಸೀಳಿದ ದಾರಿತಾರಾತಿಸಂಘ ನಮಿಪೆನನವರತ ಪ ಜ್ಞಾನ ಜ್ಞೇಯ ಜ್ಞಾತೃನಾಮಕ ರಮಾಪತಿಗೆ ಕರ್ಮ ಕರಣಾ ನೀನೆನಿಸಿ ತತ್ವದೇವತೆಗಳಿಂದೊಡಗೂಡಿ ಪ್ರಾಣಪಂಚಕ ರೂಪ ಜಗವ ಪಾಲಿಸುವೆ1 ಕಾರುಣ್ಯನಿಧಿಯೆ ಇಪ್ಪತ್ತೊಂದು ಸಾವಿರದ ಈ ರೀತಿ ಮಾಳ್ಪೆನೆಂದೆಲ್ಲರಿಗೆ ತೋರ್ಪಿ 2 ಉದ್ಧರಿಸಬೇಕು ಯಂತ್ರೋದ್ಧಾರ ಪ್ರಾಣ ಶ್ರೀ ಮದ್ಧನುಮ ಭೀಮ ಗುರುಮಧ್ವ ಮುನಿಪ ಸಿದ್ಧಾಂತ ತತ್ವಜ್ಞ ಸದ್ವೈಷ್ಣವರ ಸಭಾ ಮಧ್ಯದೊಳಗಸಮ ಸದ್ವಿದ್ಯೆಗಳನೊರೆದೆ3 ದಾಶರಥಿ ಪ್ರೀಯತಮ ವಿಭೀಷಣನ ಮನದಭಿ ಲಾಷೆಗಳನೆಲ್ಲ ಪೂರೈಸಿ ನಿಂದೆ ವ್ಯಾಸಮುನಿ ಹೃತ್ಕುಮುದ ಭೇಶ ಬಿನ್ನೈಪೆ ಸಂ ತೈಸು ನಿನ್ನವರ ಭವಕ್ಲೇಶಗಳ ಕಳೆದು 4 ಅಪರೋಕ್ಷ ಪವ ಮಾನ ನಿನ್ನವತಾರ ಅಂಶಗಳಲಿ ನ್ಯೂನವಿಲ್ಲದೆ ಜಗನ್ನಾಥವಿಠಲನ ಚರಿ ತಾನುಸಾರದಲಿ ತವ ಚರಿತೆ ತೋರಿಸುವೆ 5
--------------
ಜಗನ್ನಾಥದಾಸರು
ಹರಷದಿ ತಾ ಸಖಿ ತ್ವರದಿ ಆರುತಿಯ ದ್ವಿರದ ವರದ ಶಿರಿನರಹರಿಗೆ ಪ ನಿಗಮ ತಂದವಗೆ ನಗಧರ ಕ್ರೋಢಗೆ ಮಗುವಿನ ಸಲಹಿ ಜಗವ್ಯಾಪಿಸಿದಗೆ ಭೃಗುಜಾ, ರಘುಜಾ ವ್ರಜಜಾರ್ತಿ ಹರಣ ವಿಗತವಸನ ತುರುಗನೇರಿದಗೆ 1 ಗರುಡ ಗಮನಗೆ ಶರಧಿಶಯನಗೆ ಸುರನದಿ ಪಿತ ಭೂಸುರ ಪ್ರಿಯಗೆ ಅರುಣಾ, ಚರಣಾ ಕರುಣಾಕರಮಂ- ದರಧರ ಶರಣರ ಪೊರೆವ ಸಿರಿವರಗೆ 2 ಛಳಿಮಳೆ ಸಹಿಸುತ ಛಲದಲಿಧೇನಿಪ ಬಲುವಿಧ ಭಕ್ತಾವಳಿ ಹೃನ್ಮಧ್ಯದಿ ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ 3
--------------
ಕಾರ್ಪರ ನರಹರಿದಾಸರು
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ