ಒಟ್ಟು 355 ಕಡೆಗಳಲ್ಲಿ , 66 ದಾಸರು , 323 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರಾಡ್ಯೇನು ಭಾಗವತರಾವೆಂದುಬಲ್ಲವರೆ ಬಲ್ಲರು ಹರಿಯ ಊಳಿಗವ ಪ.ಸಟೆಯನ್ನೀಗಿದ ಭಕ್ತಿ ಮಿಶ್ರವಿಲ್ಲದ ಜ್ಞಾನಜಠರಾನುಕೂಲಕಲ್ಲದ ವಿರಕ್ತಿದಿಟವಾಗಿ ಮಾಡುವ ಮಹಿಮರಿಗಲ್ಲದೆಘಟಿಸದು ಒಣಮಾತಿನ ಕೋವಿದಂಗೆ 1ಡಂಬವಿಲ್ಲದ ದಾನ ಕಳವಳಿಸದ ಪೂಜೆಡೊಂಬಿಯಾಗದ ಜಪಧ್ಯಾನ ಮೌನಕುಂಭಿಣಿಯೊಳು ಮಾನುಭವಗಲ್ಲದೆಭವಸಂಭ್ರಮಕುಬ್ಬುವ ಸುಖಿಪುಂಸಂಗೇನು 2ಹೇಯವಿಲ್ಲದ ಕೀತ್ರ್ನೆ ಹೇವವಿಕ್ಕದವಿದ್ಯೆಬಾಹ್ಯ ತೋರದಹರಿಭೃತ್ಯವೃತ್ತಿದೇಹ ಚಿತ್ತವ ಕದಿಯದ ಧರ್ಮವ್ರತ ಕೃಷ್ಣಸ್ನೇಹಿತಗುಂಟು ಸಂಸಾರಿಗಗಾಧ 3ವಂಚಿಸದ ಬುಧಸೇವೆ ಠೌಳಿಸದ ಮಂತ್ರ ಪ್ರಪಂಚ ಕೂಡದ ತತ್ವ ಚರ್ಚಂಗಳುಮುಂಚುವ ಮುಕುತರಿಗಲ್ಲದೆ ಯಾತನೆಯಸಂಚಕಾರವಿಡಿದ ಸುಖಿ ಪುಂಸಂಗೇನು 4ಯಾಗವ ತಾ ನಿಯೋಗವ ತಾನಾತ್ಯಾಗವ ತಾನಾಗಿಹದು ಸುಲಭಭೋಗವತಿಯ ತಂದೆ ಪ್ರಸನ್ವೆಂಕಟೇಶನಭಾಗವತಾಂಘ್ರಿ ಪರಾಗ ದುರ್ಲಭವು 5
--------------
ಪ್ರಸನ್ನವೆಂಕಟದಾಸರು
ಏನು ಧನ್ಯಳೋ - ಲಕುಮಿ - ಎಂಥ ಮಾನ್ಯಳೋ ಪಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳೊ ಅ.ಪಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಪೂರ್ಣಗುಣಳು ಸರ್ವಕಾಲ ಮಾಡುತಿಹಳು 1ಛತ್ರ ಚಾಮರವ್ಯಜನಪರ್ಯಂಕ ಪಾತ್ರರೂಪದಲ್ಲಿ ನಿಂತು |ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು 2ಸರುವಸ್ಥಳದಿ ವ್ಯಾಪ್ತನಾದ | ಸರುವದೋಷರಹಿತನಾದ |ಗರುಡಗಮನನಾದ ಪುರಂದರವಿಠಲನ ಸೇವಿಸುವಳೋ 3
--------------
ಪುರಂದರದಾಸರು
ಔಪಾಸನವಮಾಡುದಾಸ ನಾನೆಂದುಶ್ರೀಪತಿದಾನ ಧರ್ಮವೆ ಮೋಕ್ಷವೆಂತೆಂದೂ ಪ.ವನಿತೆ ಲಕುಮಿಯು ದಾಸಿ ಮುಕ್ತಾಮುಕ್ತಗಣವೆಲ್ಲ ಹರಿದಾಸರುಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯವನು ಹೊಂದಿವಿರಿಂಚಿಪದವಿಯ ಪಡೆದನು1ಅನಾದ್ಯನಂತಕಾಲಸಂಸೃತಿಯಲ್ಲಿಆನಂದವು ಮುಕ್ತಿಲಿನೀನೆಂದಿಗು ಸ್ವಾಮಿ ನಾನು ಭೃತ್ಯರಭೃತ್ಯಅನಿಮಿಷರೆಲ್ಲ ನಿನ್ನೂಳಿಗದವರೆಂದು 2ದಾರಾಪತ್ಯಾದಿ ಬಳಗ ದಾಸಿ ದಾಸರುನಾರಾಯಣ ದೇವನವರವರ ಯೋಗ್ಯತೆಸಾರಸಂಬಳ ಸೇವೆಮೀರದೀವ ದೀನೋದ್ಧಾರ ಕೃಷ್ಣನೆಂದು 3ಕರಣತ್ರಯಗಳಿಂದ ನಿರಂತರಮರೆಯೂಳಿಗವ ಮಾಡಿಸಿರಿದಾರಿದ್ರ್ರ್ಯತೆಗಳಿಗ್ಹಿಗ್ಗಿ ಕುಗ್ಗದೆಪರಮಭಕುತಿ ಭಾಗ್ಯ ದೊರಕಿದುಲ್ಲಾಸದಿ4ದುರಿತಕೋಟಿಗಂಜದೆ ಸಾಧುನಿಕರಹರಿಯ ಸೇವೆಯ ಬಿಡದೆವರವಿರತಿ ಜ್ಞಾನ ಭಕ್ತಿಲಿ ಪ್ರಸನ್ವೆಂಕಟಹರಿಕೊಟ್ಟಷ್ಟೆ ಪರಮಸಂಬಳ ಸಾಕೆಂದು5
--------------
ಪ್ರಸನ್ನವೆಂಕಟದಾಸರು
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು
ಗುರುಪದವ ನಂಬಿ ಹರಿಪದವ ಕಾಂಬೆಮರುತ ಸಂತತಿಗೆ ನಮಿಸುವೆ ನಮಿಸುವೆ ಪ.ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀಹರಿಕಾರ್ಯದಲಿ ಧುರಂಧರನೆನಿಸುವಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗದ್ಗುರು ಪರಮಹಂಸ ಮಧ್ವತ್ರಿರೂಪಿಯ 1ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿಕರ್ತಮೂಲರಾಮ ಮೆಚ್ಚಿದ ನರಹರಿಯಮತ್ರ್ಯ ಮಾಯಿಜನ ತುಹಿನರವಿಭಮಾಧವಾಭಿಜÕ ಅಕ್ಷೋಭ್ಯತೀರ್ಥೆನಿಪ ಮಲ್ಲರ 2ಸುಖತೀರ್ಥಗಂಭೀರ ವಾಕ್ಯವಾರಿಧಿಚಂದ್ರಅಕಳಂಕ ಜಯವರ್ಯ ಯತಿಸಮೂಹಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯಸುಕವೀಂದ್ರ ವಾಕ್ಸಿದ್ಧ ವಾಗೀಶರ 3ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿಗುರುಆಜ್ಞಾಪಾಲ ವಿದ್ಯಾನಿಧಿಗಳದುರುವಾದಿಗಜಮೃಗಪ ರಘುನಾಥ ತೀರ್ಥಶ್ರುತಿಪರಮಾರ್ಥ ಪರಿಚರ್ಯ ರಘುವರ್ಯರ 4ವೈರಾಗ್ಯ ವೈಭವಾನ್ವಿತ ರಘೋತ್ತಮ ಮುನಿಪವೈಷ್ಣವ ತತ್ವಜÕ ವೇದವ್ಯಾಸರಕೈವಲ್ಯಮಾರ್ಗಜÕ ವಿದ್ಯಾಪತಿಯು ಹೊನ್ನಮೈಯ ಮರುತಂಶ ವಿದ್ಯಾಧೀಶರ 5ವೇದಾಮೃತಾಬ್ಧಿಯೊಳು ಮಗ್ನ ವೇದನಿಧಿಗಳಸಾಧುನಿಕರಲಲಾಮ ಸತ್ಯವ್ರತರಬಾದರಾಯಣರಾಮಪಾದರತ ಸತ್ಯನಿಧಿಮೇದಿನಿಗೆ ಕಲ್ಪತರು ಸತ್ಯನಾಥರ 6ಶ್ರೀ ಸತ್ಯನಾಥರತ್ನಾಕರಕರೋದ್ಭವಕುಮುದಅಶೇಷಯಾಚಕ ಸುಖದ ಸುಗುಣಶ್ರೀ ಸತ್ಯಾಭಿನವ ಮುನಿ ಭಾಗವತೇಢ್ಯಜÕಶಾಶ್ವತ ಪರೋಕ್ಷ ಗುರುಪದನಿಷ್ಠರ 7ದುಷ್ಟ ಪರವಾದಿ ನರಕುಲಿಶ ಜಿತಕಾಮ ತಪೋನಿಷ್ಠ ವಿದ್ಯೋನ್ನತ ವಿಚಾರಶೀಲಶಿಷ್ಟ ಜನಪಾಲಶ್ರುತಿಜಲಾಭ್ಧಿ ಕಲ್ಲೋಲಇಷ್ಟಾರ್ಥದಾತ ಸತ್ಯಾಧೀಶರ 8ಕೃಷ್ಣ ಪಾದಾಸಕ್ತ ಗುರುಕೃಪಾಸಂಯುಕ್ತಇಷ್ಟಾರ್ಥದಾತ ಸತ್ಯಾಧಿರಾಜರಸೃಷ್ಠೇಶ ಪ್ರಸನ್ನವೆಂಕಟಪತಿಯಅನವರತತುಷ್ಟೀಕರಿಸುವ ವಾಯುಮತ ಮಹಿಮರ 9
--------------
ಪ್ರಸನ್ನವೆಂಕಟದಾಸರು
ಗೆಲಿಸು ಭವವಗುರುಹನುಮಂತಖಳಜಲಧಿ ವಡವಾನಳ ಬಲವಂತ ಪ.ದಾಶರಥಿüಯ ಪದವನೆ ನಂಬಿ ಇತರಾಶೆಯಿಲ್ಲದೆ ಭಕ್ತಿರಸತುಂಬಿತೋಷವೃತ್ತಿಗೆ ಕಡೆಮೊದಲಿಲ್ಲ ಕ್ಷುದ್ರದೇಶ ಕೋಶದೆಣಿಕೆ ನಿನಗಿಲ್ಲ 1ಅಂಧಕಾತ್ಮಜ ತೃಣಸುರಧೇನುಗೋವಿಂದಾಂಘ್ರಿಬಿಸಜಮಧುಪನೀನುಸಂಧಕಾಯನ ಸದೆದ್ಯೈ ದೇವ ದಯಾಸಿಂಧುವೈಷ್ಣವಜನ ಸಂಜೀವ2ಶ್ರೀ ಸತ್ಯವತಿಜನ ನೇಮದಲಿಹರಿದ್ವೇಷಿಗಳನು ಗೆದ್ದೆ ಭೂಮಿಯಲಿಶ್ರೀಸುಖತೀರ್ಥಭೀಮ ಕಪಿವರದ ಸ್ವಾಮಿಪ್ರಸನ್ನವೆಂಕಟೇಶ ಭೃತ್ಯಗಣಮುದದ 3
--------------
ಪ್ರಸನ್ನವೆಂಕಟದಾಸರು
ಜಯ ಜಯ ಶ್ರೀಹರಿಪ್ರಿಯೆ ಮಹಾ-ಭಯಹರೆ ಜಗದಾಶ್ರಯೆಲಯವರ್ಜಿತ ನಿತ್ಯಾತ್ಮೆ ಚಿನ್ಮಯೆಜಯಶೀಲೆ ನಿರಾಮಯೆ 1ನಿತ್ಯಮುಕ್ತಿ ನಿರ್ವಿಕಾರೆ ನಿಜ-ಭೃತ್ಯನಿಚಯ ಮಂದಾರೆಪ್ರತ್ಯಗಾತ್ಮ ಹರಿಭಕ್ತಿರಸಪೂರೆಸತ್ವಾದಿಗುಣವಿದೂರೆ 2ಲಕ್ಷ್ಮೀನಾರಾಯಣಿ ಹರಿ-ವಕ್ಷಸ್ಥಲವಾಸಿನಿಅಕ್ಷರರೂಪಿಣಿ ಬ್ರಹ್ಮಾಂಡಜನನಿಸುಕ್ಷೇಮಪ್ರದಾಯಿನಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2ಅನಘಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದೋಷ ಎಣಿಸದೆ ಕಾಯೊ ಜೀಯಾ ಪಕಂಡ ಕಂಡವರ ಭಜಿಸೀ -ಬೇಡಿತೋಂಡವತ್ಸಲ ಕರುಣೆ ಸಲಿಸೀಪಾದಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1ಮಾqಬಾರದ ಕೃತ್ಯವಾ - ನಾ ಬಲುಮಾಡಿದೆಗೃಹಕೃತ್ಯವಾಬೇಡದಕಿ ಭೃತ್ಯತ್ವವಾ - ಈ ದೋಷನೋಡದಲೆ ಭಕ್ತತ್ವವಾ ನೀಡೊ 2ದೀನ ಜನಪಾಲ ನಿನ್ನಾ-ರೂಪಧ್ಯಾನ ಮಾಡಿದೆ ಬಿಡದೆ ಘನ್ನಾ-ಗತಿಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3ಗುರುರಾಘವೇಂದ್ರರಾಯ - ಎನ್ನಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4ಮಾತ ಪಿತ ಭ್ರಾತ್ರÀ ಬಂಧೂ - ಎನಗೆದಾತನಿನ್ನ ದೂತನೆಂದೂ- ಬಂದ-ನಾಥನನು ನೀ ಕಾಯುವುದು ಪ್ರಭುವೇ 5ಕರುಣಸಾಗರನೆ ಈಗ - ತವರೂಪಶರಣು ಪೊಕ್ಕವನ ವೇಗಾ-ಭವ-ಅರಣ ದಾಟಿಸುವಂಥ ಯೋಗಾ ಪೇಳಿ 6ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆಆಗುವದೊ ನಿನ್ನಅಪರೋಕ್ಷಜಾಗುಮಾಡದೆಸಲಿಸ್ಯನ್ನಪೇಕ್ಷಾ ಸ್ವಾಮಿ7ಪಾರದೋಷಗಳನ್ನೆ ತಾಳೋಘೋರಅಙ್ಞÕನ ಕೀಳೋ- ಪರಲೋಕಸೇರಿಸೆನ್ನನು ಕೃಪಾಳೋ ಸ್ವಾಮಿ 8ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -ದೃಷ್ಟಿಯಲಿನೋಡುನಾನಿನ್ನ ಪೋತಾಧಿಟ್ಟ ನೀಗುರುಜಗನ್ನಾಥಾ- ವಿಠಲನನಿನ್ನೊಳಗೆ ತೋರೋದಾತಾಖ್ಯಾತಾ9
--------------
ಗುರುಜಗನ್ನಾಥದಾಸರು
ನಂದನ ಕಂದ ಗೋವಿಂದ ಮುಕುಂದಇಂದಿರಜವಂದಿತ ಇಂದುಕುಲೇಂದ್ರ ಪ.ಗೋರಸಚೋರ ಗೋಪೀರಮಣ ಧೀರಗೋರಜಪೂರಿತಚಾರುಅಲಂಕಾರಗೋರಕ್ಷ ಕ್ರೂರಸಂಹಾರ ಉದಾರವೀರ ಸುಯಮುನಾತೀರ ವಿಹಾರ 1ಶೇಷಶೀರ್ಷನೃತ್ಯ ಹಾಸ ವಿಲಾಸವಾಸವಮದನಾಶ ವ್ರಜಪೋಷ ನಿರಾಶರಾಸಕ್ರೀಡಾಸುಖಾಧೀಶ ರಮೇಶದಾಸಾಕ್ರೂರಾಶ್ರಯ ಕಂಸವಿನಾಶ 2ಪುಣ್ಯಗುಣಾನ್ವಿತ ಸುವರ್ಣವೇಣುಗಾಯನ್ನಚಿನ್ಮಯಪನ್ನಗನಾಗನಿಲಯ ಪೂರ್ಣಮನ್ನಿಸು ನಿನ್ನ ಭೃತ್ಯನ್ನ ಪ್ರಸನ್ವೆಂಕಟ ಧನ್ಯ ಇವ ನನ್ನವನೆನ್ನೆ 3
--------------
ಪ್ರಸನ್ನವೆಂಕಟದಾಸರು
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು
ನಾರಾಯಣ ನಿನ್ನ ನಾಮವನು ನೆನೆದರೆ |ಹಾರಿಹೋಹುದು ಪಾಪ ಜನ್ಮಜನ್ಮಾಂತರದಿ |ಶ್ರೀ ರಮಣ ನಿನ್ನ ಕೃಪೆಯಿತ್ತೆಮಗೆ ಮುಕ್ತಿಯ -ದಾರಿ ತೋರಿಸೊ ಮುರಾರಿ ಪಸಕಲ ವೇದ ಪುರಾಣ _ ಶಾಸ್ತ್ರವನು ತಿಳಿದೋದಿ |ತಿಯಿಂಭಕುತ ತಾಯ್ತಂದೆಗಳ ಚಿತ್ತವಿಡಿದರ |ರಕುಷಣೆಯ ಮಾಡಿ ಜಗದೊಳಗೆ ವಿಖ್ಯಾತ ಸುಕು -ಮಾರ ತಾನೆಸಿಸಿಕೊಂಡ1ಪ್ರಕೃತಿಯಲಿ ಹೋಮಕೋಸ್ಕರ ಸಮಿಥೆ ತರಹೋಗಿ |ಶುಕರುಮಗಳಿಂದ ಚಾಂಡಾಲಿಲೆಯ ಕಂಡು ತಾ - |ಮೂಕನಾಗಿನಿಂದು ಮೈಮರೆದು ಪಾತಾಕಿಯ ಬಹ -ದುರಿತವನು ತಾನರಿಯದೆ 2ನಿಲ್ಲು ನಿಲ್ಲೆಲೆ ಕಾಂತೆ, ನಿನಗೊಲಿದೆ ನೀನಾರೆ |ಸೊಲ್ಲಿಸೆನ್ನೊಡನೆ ಸತಿಯರ ಕುಲಕೆಕಟ್ಟಾಣಿ |ಚೆಲ್ಲೆನ್ನ ಮೇಲೆ ಕರುಣವನಿಂತು ಕೋಮಲೆಯೆನಿಲ್ಲೆಂದು ಸೆರಗ ಪಿಡಿದ 3ಎಲೊವಿಪ್ರ ಕೇಳು ನಾ ಕುಲಹೀನೆ ನಮ್ಮ ಮನೆ |ಹೊಲನೆನದು ಗೋಮಾಂಸ ಚರ್ಮದಾ ಹಾಸಿಕೆಯು |ಎಲುವಿನಾ ರಾಶಿ ಒದರುವ ನಾಯ ಹಿಂಡುಗಳು -ಬಹು ಘೋರಘೋರ ವಿಹುದು 4ಬಲೆಗೆ ಸಿಲ್ಕಿದ ಪಕ್ಷಿ ಬೇಟೆಗಾರನದಲೇ ? |ಕುಲವನ್ನು ಕೂಡೆ ನಾ ಕಾಮಿನೀರನ್ನಳೆ |ಚಲದಿಂದ ಬದುಕುವೆನು ಸುಖದಿಂದಲಿರುವೆ ನೀಒಲವು ನನಗೊಂದೆ ಎಂದ 5ವ್ಯರ್ಥ ಎನ್ನೊಡನೆ ಮಾತೇತಕೆಲೊ ಹಾರುವಾ |ಚಿತ್ತ ನನ್ನಲ್ಲಿ ಇದ್ದರೆ ಹೋಗಿ ನೀ ನಿನ್ನ |ಹೆತ್ತ ತಾಯ್ತಂದೆಯರ ಕೇಳು ಸಮ್ಮತಿಸಿದರೆ -ಮತ್ತೆ ನಿನಗೊಲಿವೆನೆನಲು 6ಅತ್ತ ಕಾಮಿನಿಯ ಒಡಗೊಡಿ ತನ್ನಯ ಪಿತನ |ಹತ್ತಿರಕೆ ಹೋಗಿ ಕೇಳಿದರೆ ಆತನು ಎಂದ |ಉತ್ತಮದ ಕುಲವನೀಡಾಡಿ ಈ ಪಾತಾಕಿಯ -ಹಸ್ತಕೊಳಗಾಗದಲಿರೈ 7ಆಗದಾಗದು ನನ್ನ ಕುಲಬಂಧು - ಬಳಗವನು |ನೀಗಿ ನಿನ್ನೊಡನೆ ಕೂಡುವೆನೆಂಬ ಮತವೆನಗೆ |ನಾಗಭೂಷಣನ ಪಣೆಗಣ್ಣಿಲುರಿದನ ಬಾಣತಾಗಿತೆನ್ನೆದೆಗೆ ಎಂದ 8ಕೂಗಿ ಹೇಳುವೆ ನಿನ್ನ ಕುಲವಳಿಯದಿರು ಎಂದ |ಹೋಗಿ ಕೂಡದೆ ನಿನ್ನ ಹೆತ್ತ ತಾಯ್ತಂದೆಗಳಿ - |ಗಾಗದಿದ್ದರೆ ಆಚೆಯಾ ಮನೆಯೊಳಗೆ ಹೋಗಿಇಬ್ಬರೂ ಇರುವೆವೆಂದ 9ಹಾಲಂತ ಕುಲವ ನೀರೊಳಗದ್ದಿ ಪೂರ್ವದಾ |ಶೀಲವನ್ನಳಿದು ಸತಿಯಳ ಕೂಡಿ ತಾನು ಚಾಂ - |ಡಾಲಿತಿಗೆ ಹತ್ತು ಮಕ್ಕಳನು ಪಡೆಕೊಂಡವರಲೀಲೆ ನೋಡುತಲಿ ಹಿಗ್ಗಿ 10ಬಾಳಿನಲ್ಲೀ ರೀತಿ ಅಜಮಿಳನು ಇರುತಿರಲು |ಕಾಲ ಬಂದೊದಗಿತ್ತು ಕರೆಯಿರೆವೆ ಪಾತಕನ |ಜೋಲುದುಟಿಡೊಂಕು ಮೋರೆಯ ಅಬ್ಬರದಿ ಯಮನ -ಆಳುಗಳು ಬಂದರಾಗ 11ಎಡಗೈಯೊಳಗೆಪಾಶ ಹಿಡಿದು ಚಮ್ಮತಿಗೆಗಳ |ಒಡನೆ ಜಾವಳಿನಾಯಿ ವಜ್ರಮೋತಿಯ ಕಾಯಿ |ತುಡಿಕಿರೋ ಕೆಡಹಿ ಕಟ್ಟಿರೋ ಪಾತಕನನೆಂದುಘುಡುಘುಡಿಸಿ ಬಂದರಾಗ 12ಗಡಗಡನೆ ನುಡುಗಿ ಕಂಗೆಟ್ಟು ಅಜಮಿಳನು ತಾ |ಕಡೆಯ ಕಾಲಕೆ ಅಂಜಿ ಮಗನ ನಾರಗನೆಂದು |ಒಡನೊಡನೆ ಕರೆಯಲ್ಕೆ ಯಮನಾಳ್ಗಳೋಡಿದರುಮುಟ್ಟಿದುದು ಹರಿಗೆ ದೂರು 13ಕೊರಳ ತುಳಸಿಯ ಮಾಲೆಯರಳ ಪೀತಾಂಬರದ |ವರಶಂಖ ಚಕ್ರದ್ವಾದಶನಾಮಗಳನಿಟ್ಟ |ಹರಿಯ ದೂತರು ಅಂಜಬೇಡ ಬೇಡನ್ನುತಲಿಹರಿದೋಡಿಬಂದರಲ್ಲಿ 14ಪುಂಡರೀಕಾಕ್ಷನೀ ಭೃತ್ಯನನು ಬಾಧಿಸುವ |ಲಂಡಿರಿವರಾರು ನೂಕಿರಿ ನೂಕಿರೆಂತೆಂದು |ದಂಡವನು ತೆಗೆದು ಬೀಸಾಡಿ ಯಮನವರಿಗು - |ದ್ದಂಡರಿವರೆಂದರಾಗ 15ತಂದೆ ಕೇಳಿರಿ ಒಂದು ಭಿನ್ನಪವ ಲಾಲಿಸಿರಿ |ಒಂದು ದಿನ ಹರಿಯೆಂದು ಧ್ಯಾನವನ್ನರಿಯ ನಾವ್ - |ಬಂದಾಗ ಆತ್ಮಜನ ನಾರಗನೆ ಎಂದೆನಲುಕುಂದಿದುವೆ ಇವನ ಪಾಪ ? 16ಹಂದೆ - ಕುರಿಗಳಿಗೆ ನಿಮಗಿಷ್ಟು ಮಾತುಗಳೇಕೆ |ನಿಂದಿರದೆ ಹೋಗಿ ನಿಮ್ಮೊಡೆಯನಿಗೆ ಪೇಳೆನಲು |ಸಂದಲಾ ಯಮಭಟರು ಅಜಮಿಳನ ಹರಿಭಟರುತಂದರೈ ವೈಕುಂಠಕೆ 17ಮದ್ಯಪಾನವ ಮಾಡಿ ಪೆಂಗಳನು ಒಡಗೂಡಿ |ಅದ್ದಿದೆನು ನೂರೊಂದು ಕುಲವ ನರಕದೊಳೆಂದು |ಹದ್ದಿನಾ ಬಾಯೊಳಗಿನುರಗನಂತಜಮಿಳನುಇದ್ದನವ ನೆರೆಮರುಗುತ 18ವಿಪ್ರಕುಲದಲಿ ಹುಟ್ಟಿ ವೇದಶಾಸ್ತ್ರವನೋದಿ |ಮುಪ್ಪಾದ ತಾಯಿ - ತಂದೆಗಳೆಲ್ಲರನು ಬಿಟ್ಟು |ಒಪ್ಪಿ ಧಾರೆಯನೆರೆದ ಕುಲಸತಿಯ ಬಿಟ್ಟು ಕಂ -ದರ್ಪನಾ ಬಲೆಗೆ ಸಿಕ್ಕಿ 19ವಿಪ್ರ ನಾನಾದರೂ ಜಗದಿ ನಿಂದ್ಯನು ಆಗಿ |ಇಪ್ಪೆ ನೀ ಪರಿಯೊಳೆನ್ನಂಥ ಪಾತಕಿಯಿಲ್ಲ |ತಪ್ಪಲಿಲ್ಲವೊ ಹಣೆಯಬರೆಹವಿದು ಭುವನದೊಳುಬೊಪ್ಪರೇ ವಿಧಿಯೆಂದನು 20ಇಳೆಯೊಳಗೆ ಶ್ರೀಪುರಂದರ ವಿಠಲನಾಮವನು |ನೆಲೆಯರಿತು ನೆನೆವರಿಗೆ ಯಮನ ಬಾಧೆಗಳಿಲ್ಲ |ಸುಲಭದಿಂದಲ್ಲಿ ಸಾಯುಜ್ಯಪದವಿಯು ಸತ್ಯಬಲುನಂಬಿ ಭಜಿಸಿ ಜನರು21
--------------
ಪುರಂದರದಾಸರು
ನೀನೆ ಗತಿಯೆಂದು ನಂಬಿದೆ ಕಾಯಯ್ಯ ಶ್ರೀನಿವಾಸ ಎನ್ನಹೀನಗುಣಗಳೆಣಿಸಲಿ ಬ್ಯಾಡ ದಯಮಾಡೊ ಶ್ರೀನಿವಾಸ 1ನಾನಾ ದುಷ್ಕøತಫಲವ ಉಂಡೆ ಇನ್ನಾರೆ ಶ್ರೀನಿವಾಸಎಂದೂ ದುರ್ವಿಷಯಕೆಮನ ಎರಗದಂತೆ ಮಾಡೊ ಶ್ರೀನಿವಾಸ 2ಸತ್ಕಥಾ ಶ್ರವಣ ಭಾಗ್ಯವ ಕೊಡುಅನುದಿನಶ್ರೀನಿವಾಸ ಎನ್ನಹೃತ್ಕಮಲದಿ ವ್ಯಕ್ತನಾಗಯ್ಯ ಶ್ರೀನಿವಾಸ 3ಪುತ್ರಕಳತ್ರಮಿತ್ರರು ನಿನ್ನ ದಾಸರೊ ಶ್ರೀನಿವಾಸ ತ್ವದ್ಭøತ್ಯಭೃತ್ಯರ ಪರಿಚಾರಕ ನಾನು ಶ್ರೀನಿವಾಸ 4ಅನಂತ ಜನ್ಮದ ಸತ್ಕರ್ಮ ನಿನಗೇವೆ ಶ್ರೀನಿವಾಸನಿತ್ಯದೀನೋದ್ಧಾರÀ ಪ್ರಸನ್ನವೆಂಕಟ ಮುಕುಂದ ಶ್ರೀನಿವಾಸ 5
--------------
ಪ್ರಸನ್ನವೆಂಕಟದಾಸರು
ನೀನೆ ದಯಾಸಂಪನ್ನನೊ - ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
--------------
ಪುರಂದರದಾಸರು
ನೀನೆಕರ್ತಎನ್ನಕರ್ತನಾ ನಿನ್ನಭೃತ್ಯಹಿತಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.ತನುಧನ ನೆಚ್ಚಿಕಿಲ್ಲಮಾನಿನಿತನ್ನವಳಲ್ಲಸೂನುಬಂಧುಗಳೆಲ್ಲ ಕ್ಷಣದವರಲ್ಲನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ 1ಭವಾಂಧಕಾರದೊಳನುಭವಿಸಿ ಬೆಂಡಾಗುವೆನುವಿವರಿಸಿನಿತ್ಯಹಿತವ ಕಾಣೆನುಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ 2ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆಶ್ರೀಮಂತ ಭಾಗವತರ ಪ್ರೇಮಾನ್ವಿತರಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು