ಒಟ್ಟು 1824 ಕಡೆಗಳಲ್ಲಿ , 115 ದಾಸರು , 1442 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕಾಯೊ ಕರುಣಕಾರ ಗೋವಿಂದ ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಧ್ರುವ ಬೊಮ್ಮನಾ ಪಡೆದ ಪರಾವರ ದೊರಿಯೆ ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ ನಿಮ್ಮ ವಿನಾ ಅನ್ಯಪಥವ ನಾನರಿಯೆ ನಮ್ಮ ದೈವ ನೀನಹುದೊ ನರಹರಿಯೆ 1 ದುರಿತ ಪರಿಹರಿಸೊ ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ ಕಾವಕರುಣನೆ ನಿಮ್ಮ ದಯ ಬೀರಿಸೊ ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ 2 ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ ಕಾಯೊ ಕರುಣಿಸಿ ಎನ್ನ ಜೀವನದ ಕಾಯೊ ದಯದಿಂದ ಎನ್ನ ಅಭಿಮಾನ ಕಾಯೊ ನಿಜ ದಾಸ ಮಹಿಪತಿ ಪ್ರಾಣವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಜಿತಕಾಯ ಗುರು ಬಾದ ರಾಯಣ ತತ್ವಜ್ಞರಾಯ ಪ ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ ಸಿರಿಯರಸನ ದಿವ್ಯ ಮೂರ್ತಿಗಳ ಕರದಿಂದ ಪೂಜಿಸಿ | ಮರುತ ದೇವನ ಮತ ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1 ಜ್ಷಾನಿಗಳರಹುವ | ವಾಣಿಯಿಂದಲಿ ದೇ ಮೌನಿವರಿಯ ಎನ್ನ | ಹೀನಪಾತಕವೆಂಬ ಕಾನನ ದಹಿಸೆಂದು | ಸಾನುರಾಗದಿ ನೋಡಿ 2 ಭೂಸುರ ಪರಿಪಾಲ | ಶ್ರೀ ಶಾಮಸುಂದರನ ಲೇಸಾಗಿ ಒಲಿಸುತಲಿ ಕಿಟಜದಲಿ ಭಾಸುರ ಘನವೇಣಿ | ಭೇಶಪುರದಿ ನೆಲಸಿ ದಾಸರ ಮನದಭಿಲಾಷೆ ನೀಡುವ ದಾನಿ 3
--------------
ಶಾಮಸುಂದರ ವಿಠಲ
ಕಾಯೋ ಕಾಯೋ ಪ ಕಾಯೋ ಕಾಯೋ ಕಮಲಯತಾಕ್ಷ ಭವ ತೋಯಧಿಯೊಳು ಬಿದ್ದು ಬಾಯ ಬಿಡುವನ ಅ ಅದ್ವೈತ ತ್ರಯದಧ್ವ ಪ್ರವರ್ತಕ ಸದ್ವೈಷ್ಣವರ ಪದದ್ವಯತೋರಿ 1 ಸಂಜೆಯ ತೋರಿ ಧನಂಜಯನುಳುಹಿದ ನಿರಂಜನ ಮೂರ್ತೆ 2 ಸತ್ಯಕಾಮ ತವ ಭೃತ್ಯೆಗೆ ಬಂದಪ ಮೃತ್ಯು ಕಳೆದು ಸಂಪತ್ತು ಪಾಲಿಸಿದೆ 3 ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿಕ್ಷಣದಲಿ 4 ಎಲ್ಲರೊಳಿಹ ಕೈವಲ್ಯದರಸು ನೀ ಬಲ್ಲಿದನೆಂಬುದ ಬಲ್ಲೆ ಬಹು ಬಗೆ 5 ನೀ ದಯ ಮಾಡದಿರೀ ದಿವಿಜರು ಒಲಿ ದಾದರಿಸುವರೆ ವೃಕೋದರ ವಂದ್ಯ 6 ಅಧಮ ನಾನಹುದುದಧಿ ಮಥನ ಸ ನ್ಮುದ ಮುನಿಮತ ಪೊಂದಿದವರಣುಗನು 7 ಕ್ಷುದ್ರ ಭೂಮಿಪರುಪದ್ರವ ಕಳೆದು ಸು ಭದ್ರವೀಯೋ ಕ್ಷುದ್ರುಮದಂತೆ 8 ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ 9
--------------
ಜಗನ್ನಾಥದಾಸರು
ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ಪ ಕಾಯೊ ಕಾಯೊ ಜಿತಕಾಯಜಾತ ಶಿತ ಕಾಯೊ ನಿನ್ನ ಪದ ತೋಯಜಕೆರಗುವೆ ಅ.ಪ ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು ಶುಭ ಗುಣನಿಧಿ ಗುರು | ವಿಭುದೇಂದ್ರಕರ ಅಬುಜ ಸಂಭೂತ 1 ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ ದೀನಜ ನಾಮಕರ ಧೇನು ಪುರಾತನ ಗೋನದ ತರು ನಿಜ ತಾಣಗೈದ ಗುರು 2 ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ ಮಂಗಳ ಕೃಷ್ಣ ತರಂಗಿಣಿ ಭೀಮಾ ಸಂಗಮದಲಿ ಸಲೆ | ಕಂಗೊಳಿಸುವ ಗುರು 3 ಶರಧಿ ದುರಿತ ಕದಳಿದ್ವಿರದಿ ದಿವಿಜ ಪರಿವಾರ ನಮಿತ ನಿಜ ಕರುಣಿ ನಂಬಿದೆನು ಮರಿಯದೆ ನಿರುತ4 ವಿನುತ | ಶಾಮಸುಂದರಾಂಘ್ರಿ ದೂತ ಪೊಂದಿದ ಜನರಘ ವೃಂದ ಕಳಿವ ರಘು ನಂದನ ಮುನಿಮನ ಮಂದಿರವಾಸ 5
--------------
ಶಾಮಸುಂದರ ವಿಠಲ
ಕಾರು ಯಾರಮನೆಗುಂಟು ಖೋಡಿ ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ ಕಾಯಜನಯ್ಯನ ದಿವ್ಯ ಚರಿತಗಳನ್ನು ಬಾಯಿಂದ ಪೊಗಳುತ ಕೈಯಿಂದ ಬರೆದು ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1 ನಳಿನನಾಭನ ವಿಮಲ ಸುಲಲಿತ ಮಹಿಮೆಗಳ ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2 ಭೂಮಿಯೊಳಧಿಕ ಶ್ರೀರಾಮನ ದಾತೃತ್ವ ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3
--------------
ರಾಮದಾಸರು
ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ ಪೀಠಿಕೆ ಉತ್ತಮರು ಕೇಳಿರೈ ಉಲ್ಲಾಸದಿಂದ ವರ- ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ ಪ್ರವರವೆತ್ತ ವೆಂಕಟಕೃಷ್ಣನ ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ ಪ್ರವರ್ತಿಸುವುದೆಲ್ಲ ಜನರು 1 ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ- ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ ಸುರನಾರಿಯರು ಪೇಳ್ದ ಸಂವಾದ ತೆರನಂತೆ ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ ಸರ್ವ ಜನರು 2 ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ ಸೇವ್ಯಂ ಸದಾ ತತ್‍ಪದಂ ದೂರ್ವಾದಲಶ್ಯಾಮಲಂ ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ 3 ಆದಿಗುರು ವೇದವ್ಯಾಸರನು ವಂದಿಸುತ ಸಾದರದಿ ಮಧ್ವಯತಿವರರರ ನುತಿಸುತ ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು 1 ಧ್ಯಾನಿಸುತ ಏಕದಂತನ ಪದವ ಭಜಿಸಿ ಮಾನದಿಂ ಶಾರದೆಯನೊಲವ ಸಂಗ್ರಹಿಸಿ ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ 2 ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ ವರಪೂಜೆಗೊಂಡು ಮಂಟಪದಿ ವಿನಯದಲಿ ಚರಣವನು ತೋರಿ ಹನುಮ ಗರುಡನಲಿ ಪರಿವಿಲಾಸಕರ ಸೇವೆಗೊಂಡು ಕರುಣದಲಿ 3 ಭೋಗಿಪತಿಯಲಿ ಮಂಡಿಸಿದ ಲೀಲೆಗಳನು ನಾಗತೀರ್ಥದ ಗಂಭೀರೊತ್ಸಾಹಗಳನು ಭಾಗವತ ಯೋಗವನು ಭೋಜನಾಧಿಕವ ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು 4 ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ ಮಾನನಿಧಿಗಳನು ಮೆರೆಸುವದು ಭೂತಳದೊಳು ಶ್ರೀನಿವಾಸನು ಪಾಲಿಸುವನು ನಿತ್ಯದೊಳು5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ ಪೀಠಿಕೆ ಉತ್ತಮರು ಕೇಳಿರೈ ಉಲ್ಲಾಸದಿಂದ ವರ- ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ ಪ್ರವರವೆತ್ತ ವೆಂಕಟಕೃಷ್ಣನ ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ ಪ್ರವರ್ತಿಸುವುದೆಲ್ಲ ಜನರು 1 ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ- ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ ಸುರನಾರಿಯರು ಪೇಳ್ದ ಸಂವಾದ ತೆರನಂತೆ ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ ಸರ್ವ ಜನರು 2 ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ ಸೇವ್ಯಂ ಸದಾ ತತ್‍ಪದಂ ದೂರ್ವಾದಲಶ್ಯಾಮಲಂ ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ 3 ಆದಿಗುರು ವೇದವ್ಯಾಸರನು ವಂದಿಸುತ ಸಾದರದಿ ಮಧ್ವಯತಿವರರರ ನುತಿಸುತ ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು 1 ಧ್ಯಾನಿಸುತ ಏಕದಂತನ ಪದವ ಭಜಿಸಿ ಮಾನದಿಂ ಶಾರದೆಯನೊಲವ ಸಂಗ್ರಹಿಸಿ ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ2 ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ ವರಪೂಜೆಗೊಂಡು ಮಂಟಪದಿ ವಿನಯದಲಿ ಚರಣವನು ತೋರಿ ಹನುಮ ಗರುಡನಲಿ ಪರಿವಿಲಾಸಕರ ಸೇವೆಗೊಂಡು ಕರುಣದಲಿ3 ಭೋಗಿಪತಿಯಲಿ ಮಂಡಿಸಿದ ಲೀಲೆಗಳನು ನಾಗತೀರ್ಥದ ಗಂಭೀರೊತ್ಸಾಹಗಳನು ಭಾಗವತ ಯೋಗವನು ಭೋಜನಾಧಿಕವ ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು 4 ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ ಮಾನನಿಧಿಗಳನು ಮೆರೆಸುವದು ಭೂತಳದೊಳುಶ್ರೀನಿವಾಸನು ಪಾಲಿಸುವನು ನಿತ್ಯದೊಳು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಲ ಪ ಏಳು ಏಳು ಎಂದು ಯಮನ ಆಳು ಬಂದು ಪಾಶವಿಕ್ಕಿ ಕಲ್ಲು ಮುಳ್ಳು ಮೇಲೆ ಎಳೆದು ಒಯ್ವ ಹೊತ್ತು 1 ಅಷ್ಟಪುರದ ಕಾವಲವರು ಕಟ್ಟ ಕಡೆಗೆ ತೊಲಗೆ ಬಾಯ ಬಿಟ್ಟು ಹೊರಗೆ ಜೀವ ಕೆಂಗಟ್ಟು ಹೋಗುವಂಥಕಾಲ 2 ದಾರಿಯೊಳಗೆ ಪಾಪಿಗಳನು ಘೋರ ಬಡಿಸಿ ದಂಡದಿಂದ ಗೊಯ್ವ ಹೊತ್ತುವ್ಯಾಳ್ಯಾ 3 ಹೆಂಡಿರಿಲ್ಲ ಮಕ್ಕಳಿಲ್ಲ ಬಂಧು ಬಳಗವಿಲ್ಲವಲ್ಲಿ ಕಾಲ 4 ಬುದ್ದಿವಂತರಾದರೆಚ್ಚರಿದ್ದು ಪಾಪವನ್ನು ಮಾಡ ಭವನಗೆಲವ ಹೊತ್ತು 5
--------------
ಕವಿ ಪರಮದೇವದಾಸರು
ಕಾಲ ಕಾಯೋನೀ ಬಹುಮುಖಾ ಪರಿ ಹರಿಯೇ ಪ ನಾನಲ್ಲ ಪುರುಷೋತ್ತಮ ಬೆಳೆದೆ ನಾ ಪರಮಾತ್ಮ ಪರಿ 1 ಕೆಲವು ದಿವಸಾಯಿತು ಸಂಶಯವೆಂಬುದು ತಿಳಿದು ಜನಕನೇ ಹಿಂಸೆಯೊಳಗೆ ಬಿದ್ದು ಈ ಪರಿಯಿಂದ 2 ನಾನು ಭಗವಂತಾ ನಾಡಿಯೊಳಗಾದಂಥಾ ಮಂದರಧರ ಶ್ರೀ ಮಧುಸೂದನ ಗೋವಿಂದ `ಹೆನ್ನೆವಿಠ್ಠಲ’ ರಾಮಾ 3
--------------
ಹೆನ್ನೆರಂಗದಾಸರು
ಕಾವೇರಿ ಕನ್ಯಾರ್ಚಿತ ಸುಚರಿತ ದಿವಾಕರಾನತ ಸುರೇಶ ವಿನಮಿತ ಪ ಭವಾಬ್ಧಿ ವಿರಹಿತ ಸಮೀರಸುತನುತ ಶಿವಾ ನೃಹರಿ ಮಾಧವಾ ಕೃಪಾಯುತ ಅ.ಪ ರಮೇಶ ಧರಣಿಪ ಕುಮಾರ ಶಿರಧರ ಸುಮಾನ ವಿರಹಿತ ಪರಾತ್ಪರಾ ಶಮಾ ದಮಯು ತಕ್ಷಮಾ ಸುಧಾಕರ ನಮಾಮಿಶಂಕರ ವಿಮಾನಮಂದಿರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಶಿಯಿಂದ ಬಂದ ಬಾಗೀರಥಿಯು ತನ್ನ ವಾಸಕ್ಕೆ ತೆರಳಿದಳು ಲÉೀಸಾಗಿ ತನ್ಹ ಮನದ ಸಂಕಲ್ಪವು ವಾಸಿಯಾಗಲು ತನ್ಹಾಶೆ ಪೊರೈಸಿಸಿ ಪ ಮದದಾನೆ ತನ್ನ ಕಾಲುಗಳ ಸಂಕೋಲೆಯ ನೊದೆದು ಕಳೆವ ತೆರದಿ ಪದುಳದಿ ಶ್ರೀಗುರು ಮುದದಿ ಬಿಡಿಸಿ ತನ್ನ ಸದಮಲಾನಂದವ ಸತತ ಪಡೆವೆನೆಂದು 1 ಮುತ್ತೈದೆತನದಿ ತೆರಳಿಹೋಗಬೇಕೆಂಬ ಚಿತ್ತದಿವಿಸ್ಮರಣೆಗೈದು ಪ್ರತ್ಯುಗಾತುಮ ಆತ್ಮಾರಾಮನ ಸಂಗಡ ಚಿತ್ತೈಸಿದಳು ತನ್ನ ಉತ್ತಮ ಕಾಶಿಗೆ 2 ಪತಿಯ ವಚನದ ಸಂಗತಿಗಳ ಕೇಳುತ ಅತಿ ಹಿತ ತನಗಾಗಲು ಮತಿಗೆ ಮಂಗಲವಾದ ಮುಕುತಿಯ ಸಾಧಿಸಿ ನುತ ವಿಮಲಾನಂದ ಸತತ ಪಡುವೆನೆಂದು 3
--------------
ಭಟಕಳ ಅಪ್ಪಯ್ಯ
ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ಪ. ಗಣನೆ ಇಲ್ಲದೆ ದ್ರವ್ಯ ಕೊಡುವೋನರಾಯಗೆ ಕ್ಷಣ ತೆರವಿಲ್ಲವೆಂಬೊ ಬಿರುದು 1 ಸಟಿ ಇಲ್ಲದೆ ದ್ರವ್ಯ ಕೊಡುವೋನು ರಾಯಗೆ ತೃಣ ತೆರವಾಗದೆಂಬೋ ಬಿರುದು 2 ಹಲವು ದಾನಗಳನ್ನ ಕೊಡುವೋನುರಾಯಗೆ ಹಲವು ಕೊಡುವೋನೆಂಬ ಬಿರುದು 3 ಲೆಕ್ಕವಿಲ್ಲದೆ ದಾನ ಕೊಡುವೋನು ಕೀರ್ತಿಸಲು ಶಕ್ಯವಿಲ್ಲ ಆತನ ಬಿರುದು4 ಮಿತಿ ಇಲ್ಲದೆ ದ್ರವ್ಯ ಕೊಡುವೋನು ಕೀರ್ತಿ ಅತಿಶಯವಮ್ಮ ಆತನ ಬಿರುದು 5 ಕರ ತೆರವಾಗದೆಂಬ ಬಿರುದು 6 ಕೃಷ್ಣಾರ್ಪಣೆಂತೆಂಬೋದು ರಾಯಗೆ ಇಷ್ಟಕರತೆರವಾಗದು7 ಅತ್ಯಂತ ಪ್ರೇಮ ಸೂಸುತ ರಾಯ ದಿವ ರಾತ್ರಿಯಲಿತತ್ವ ಕೇಳುತಲಿವ 8 ನಿದ್ರೆ ಇಲ್ಲವು ರಾಯಗೆ ಏನೇನುನಮ್ಮ ಮುದ್ದು ರಮೇಶ ನಂಫ್ರಿಯ ಧ್ಯಾನ 9
--------------
ಗಲಗಲಿಅವ್ವನವರು
ಕುಣಿದಾಡೊ ರಂಗ ನಲಿದಾಡೊ ಪ. ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ. ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1 ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2 ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3
--------------
ವಾದಿರಾಜ
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ ಸತ್ಸಭೆ ಕೇಳಲೀ ಕೃತಿಯ ಪ. ಈ ಯುಗದವರಿಗೆ ಕಲಹ ಮಂಡಿಸಿದಗೆ ಆ ಯುಗದವರುಕ್ತಿ ಬೇಕು ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ ಹೇಯವೆಂದಾರು ಪೇಳುವರು1 ನಿಮ್ಮವರಾಗಮ ನಮ್ಮವರಿಗೆ ಸಲ್ಲ ನಮ್ಮೋಕ್ತಿ ನಿಮಗೆ ಮೆಚ್ಚಲ್ಲ ಇಮ್ಮನದವರಿಗೆ ಇನ್ನೊಬ್ಬ ಹಿರಿಯರ ಸಮ್ಮತಿ ಬೇಕು ನಿರ್ಣಯಕೆ2 ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ ಯುಕ್ತಿ ಸರ್ವತ್ರ ಬಂದಿಹುದು ಕುತ್ಸಿತ ದೇಹಬಂಧವ ಬಿಡಿಸುವ ನರ- ರುತ್ತಮರೆಂದರೇನೆಂಬೆ 3 ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ ಏಸು ಕೂದಲ ಕೀಳುತಿರಲು ಏಸೋ ಜೀವಗೆ ನೋವು ಅದು ಹಿಂಸೆ ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4 ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ ಸೂಸುವ ನಯನಾಂಬುಧಾರೆ ಆ ಸಮಯದಿ ಪರಮಸುಖವೆಂಬ ಮಾತು ಸತ್ಯವ್ರತಕೆ ಎಂತೊಪ್ಪಿಹುದೊ 5 ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು- ಟ್ಟಿದ ದಿವಸ ಮೊದಲಾಗಿ ಪಾತಕಿ ತಮ್ಮೊ - ಳಾದನೆಂಬುದು ಬಲು ಚೋದ್ಯ6 ಪಾಪ ಸಲ್ಲದು ಗಡ ಪರನಿಂದೆಯಿಂದಾದ ಪಾಪವೆ ತಾವು ಶುದ್ಧರೆಂಬ ಪರಿ ಆತ್ಮಸ್ತುತಿಯಿಂದೊಂದಾ ಪಾಪ ಲೇಪಿಸದಿಹುದೆ ತಮ್ಮವರ 7 ಸ್ಥಾವರಜೀವರ ಸಾವಿರ ಕೋಟಿಯ ಆವಾಗ ಕೊಂದು ತತ್ತನುವ ಜೀವಿಪೆನೆಂದು ಬೇಯಿಸಿ ತಿಂಬ ಪಾಪವ ಆವ ನಿಮಗೆ ಅಹುದೆಂದ 8 ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ- ಗೆಂದ ಗುರುವ ನಾನೇನೆಂಬೆ ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ ನಿಂದ್ಯ ಹಿಂಸೆಯ ಸಲಿಸುವರೆ 9 ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ ಹಿಂಗೂಡಿದುದಕ ಸ್ವಾದನಾದಿ ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ- ರಂಗಳು ಜಂಗಮದಂತೆ 10 ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು ನಿರ್ಮಾಯನದೊಳಗೇಸೊ ಹಿಂಸೆ 11 ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ ಇಕ್ಕು ಬಾಯೊಳು ದಂತದೆಲುವೆ 12 ಕರದ ತುಂಬವಿದೇನು ಕೊರಳ ಹಾರವಿದೇನು ಚರಣದ ನಖಪಂಕ್ತಿಯಿದೇನು ಖರ ಭೂತಪಂಚಕ ಅನ್ನ ಮಾಂಸಗಳೊಳು ಬರಿದೆ ನಿಂದಿಸಲೇಕೆ ಪರರ 13 ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ- ರಲ್ಪ ದೋಷಗಳರಸುವರೆ ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು- ತಿಪ್ಪ ನೃಪಗೆ ಜಿನಮಾರ್ಗ 14 ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ ಸುತ್ತ ಯಾತ್ರೆಯ ಮಾಡಲೇಸೊ ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ ವಸ್ತ್ರ ಒಗೆಯಲೇಸೋ ಹಿಂಸೆ 15 ಸಲ್ಲದ ಹಿಂಸೆಯ ಸಲಿಸಿದರೆಂಬರ ಬಲ್ಲವಿಕೆಯ ನಾನೇನೆಂಬೆ ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ- ಕೈವಲ್ಯ ಸಾಧಕರು 16 **** ತೊಳೆಯದ ಬಲುಹಿರಿಯರ ನಾತಕ್ಕೆ ಸೋತು ಬೆಂಬಿಡದೆ ಆತುರದಿಂ ಬಪ್ಪನೊಣಗಳ ಗೀತವ- ನೋತು ಕೇಳುವ ಶಿಷ್ಯ ಧನ್ಯ 17 ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ ಗಾತ್ರ ನಾಸಿಕದ ಮಲ ಯಾತ್ರೆಯ ಮಾಡುವರಕ್ಷಿಗೆ ಕೌತುಕ ಪಾತ್ರವಾಯಿತು ಬಲು ಚಿತ್ರ 18 ******************* 19 ಏಕ ಭಾಗದೊಳು ಸ್ತ್ರೀ ವಾಸ ಏಕಾಂತದಿಪ್ಪುದು ಲೋಕಸಲ್ಲದೆಂಬರ ಈ ಕಾಮನೆಂತು ಬಿಟ್ಟಿಹನು 20 ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು ಮುಕ್ತರಿಗೀಭೋಗ ಸಲ್ಲ ಮುಕ್ತರÀಲ್ಲದ ಜೀವ ದೇವರೆಂತಹರೆಂದು ವ್ಯರ್ಥವಾಯಿತು ನಿನ್ನುತ್ಸಾಹ 21 ನೋಡುವ ನಯನಕ್ಕೆ ಮಾಡುವ ಪೂಜೆಗೆ ಕೂಡಿದ ಬಹುವಿತ್ತ ವ್ಯಯಕ್ಕೆ ಈಡಾಯಿತಂಶ ಕೇವಲ ಬೊಂಬೆ ಶಿವಶಿವ ಆಡುವ ಶಿಶುಗಳ್ಪೇಳಿದರೆ 22 ಹೆಂಡಿರೆ ಸಂಸಾರವಾದರೆ ಹಸಿತೃಷೆ ಉಂಡು ಮಲಗುವುದು ಮುಕ್ತರಿಗೆ ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ- ಕೊಂಡ ಮಾತ್ರದಿ ಮುಕ್ತರಹರೆ 23 ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ ಸತ್ತಮೇಲೇನಾದರೆಂತೊ ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ- ಕರ್ತೃ ಶ್ರೀಹರಿ ತಾನೆ ಬಲ್ಲ 24 ದುಃಖವೆ ಸಂಸಾರ ದುಃಖವಿಲ್ಲದ ಸುಖ ಮುಕ್ತಿಯೆಂಬುದು ಬುಧರ್ಗೆ ಮಾತ್ರ ಮಿಕ್ಕದೆ ದುಃಖವಿತ್ತರೆ ಭವವೆನಿಪುದು ದುಃಖವೆ ದೂರ ಮುಕ್ತರಿಗೆ 25 ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ ಜನನ ಮರಣವಿಲ್ಲದಖಿಳ ಜನರ ದುಃಖವನವತರಿಸಿ ಕಳೆವ ನಾರಾ- ಯಣನೆ ನಿರ್ದೋಷ ನಿತ್ಯಸುಖಿ 26 ಪಾತಕ ವ್ರತವ ಕೈಗೊಂಡ ಸ್ತ್ರೀ- ಜಾತಿಯ ಮುಟ್ಟಲ್ಲೆಂಬುವನು ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ ಮಾತನದೇಕೆ ಮನ್ನಿಸನು 27 ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ- ವೈರಿ ಸೂರ್ಯನೊಳು ತಮವೆ ವಿಷಹರ ಗರುಡಗೆ ವಿಷ ಲೇಪಿಸುವುದೆ ಕ- ಲುಷ ಮುಟ್ಟುವುದೆ ಪಾಪಾಂತಕನ 28 ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ ತಡೆಯಬಲ್ಲರೆ ತುಡುಕುವರೆ ಬಿಡು ಮನಭ್ರಾಂತಿಯ ಹಯವದನನೆ ಜಗ- ದೊಡೆಯ ಸರ್ವತ್ರ ನಿರ್ದೊಷ 29
--------------
ವಾದಿರಾಜ
ಕುಶಲವರೆ ಲಾಲಿಸಿರಿ ಕಥೆಯನೆಲ್ಲವ ಪೇಳ್ವೆ ಕುಶಲಮತಿಗಳೇ ನಿಮ್ಮ ಕೌತುಕವು ಸಹಜವಲೆ 1 ಬಿಸರುಹಾಕ್ಷನ ಚರಿತೆ ಚಿತ್ರತರಮಹುದಲ್ತೆ ಉಸುರುವೆನು ಪೂರ್ವ ವೃತ್ತಾಂತವನು ನಾ ಮೊದಲೆ 2 ಅಸುರರುಪಟಳದಿಂದ ವಸುಧೆ ಭಾರವು ಹೆಚ್ಚೆ ಬಿಸಜಭವಮುಖ ಸುರರ ಮೊರೆ ಕೇಳಿ ಮನ ಮೆಚ್ಚೆ 3 ಬಿಸಜನೇತ್ರನು ತಾನು ದಶರಥನ ಸುತನೆನಿಸಿ ವಸುಮತಿಯಲುದಿಸಿ ಸಜ್ಜನರ ಸಂತಸಗೊಳಿಸಿ 4 ಹಸುಳೆತನದಲಿ ಅಸುರೆ ತಾಟಕಿಯ ಸಂಹರಿಸಿ ಕುಶಿಕಸುತನಧ್ವರವ ಕಡು ರಕ್ಷಣೆಯ ಮಾಡಿ 5 ಅಶಮವಾಗಿದ್ದಹಲ್ಯೆಯ ತಾನುದ್ಧರಿಸಿ ಅಸಮಾಕ್ಷಚಾಪವನು ಲೀಲೆಯಲಿ ತುಂಡರಿಸಿ 6 ಕರ ಪದ್ಮವನು ಗ್ರಹಿಸಿ ಎಸೆವೆರಡು ರೂಪದಲಿ ಘನಲೀಲೆ ಪ್ರಕಟಿಸಿ 7 ಕುಶಲದಿಂ ಯುವರಾಜ ಪಟ್ಟಕ್ಕೆ ಸನ್ನಾಹ ವೆಸೆದಿರಲು ವಿಧಿಲೀಲೆಯೇನೆಂಬನಾಹ 8 ದಶರಥನ ಕಿರುಮಡದಿ ಪಡೆದ ವರಕನುವಾಗಿ ಸತಿ ಅನುಜ ಸಹಿತನಾಗಿ 9 ವಸುಮತಿಯೊಳವತರಿಸಿ ಬಂದ ಕಾರ್ಯವ ನೆನೆದು ಅಸಮ ನಾಟಕ ಸೂತ್ರಧಾರಿ ಅಡವಿಗೆ ನಡೆದು 10 ಎಸೆವ ಗಂಗೆಯ ದಾಟಿ ಗುಹನನ ಧನ್ಯನಗೈದು ಋಷಿ ಭರದ್ವಾಜರಿಂ ಸತ್ಕಾರವನು ಪಡೆದು 11 ವಸುಮತೀಧರ ಚಿತ್ರಕೂಟದಲಿ ನಿಂತಿರಲು ಅಸಮ ಭಕ್ತವರೇಣ್ಯ ಭರತ ತಾನೈತರಲು 12 ಬಿಸಜಾಂಘ್ರಿ ಸಂಪೂತ ವರ ಪಾದುಕೆಗಳನಿತ್ತು ಕುಶಲಮತಿ ತಾನವನ ಕಳುಹಿ ಯೋಚಿಸಿ ಮತ್ತು 13 ಪೆಸರಾಂತ ದಂಡಕಾ ವನ ಪ್ರವೇಶವ ಮಾಡಿ ಅಸುರರನೇಕರು ಅಂತಕನ ಬಳಿದೂಡಿ14 ಋಷಿವರ್ಯ ಶರಭಂಗಗೀಕ್ಷಣದಿ ಸುಗತಿಯನು ಹಸನಾಗಿ ಕರುಣಿಸಿದ ಬಳಿಕ ಕುಂಭೋದ್ಭವನು 15 ಒಸಗೆಯಿಂದಿತ್ತ ದಿವ್ಯಾಸ್ತ್ರಂಗಳ ಸಂಗ್ರಹಿಸಿ ಪಸರಿಸಿಹ ವಿಲಸಿತದ ಪಂಚವಟಿಯಲಿ ನೆಲಸಿ 16 ಒಸಗೆಯಿಂದಿರೆ ಬಂದ ಶೂರ್ಪನಖಿಗತಿಭಂಗ ವೆಸಗಿ ಸೋದರನಿಂದ ಶೋಭಿಸೆ ಶುಭಾಂಗ 17 ಮಾಯಾ ಮೃಗಾಕಾರ ದಸುರ ಮಾರೀಚನಂ ಸಂಹರಿಸಿ ರಘುವೀರ 18 ಅಸಮ ಸೋದರ ಸಹಿತ ಆಶ್ರಮಕ್ಕೈತಂದು ದೆಸೆದೆಸೆಯೊಳರಸೆ ತನ್ನರಸಿ ಕಾಣದಿರಲು 19 ಹುಸಿವೇಷದಿಂ ಬಂದ ಖಳ ಕುಲಾಗ್ರಣಿಯಿಂದ ಶಶಿಮುಖಿಯು ಹಗರಣವಾಗಿರಲು ನಿತ್ಯಾನಂದ 20 ದೆಸೆಗೆಟ್ಟವನ ಪರಿಯಲತಿಶಯದಿ ಶೋಕಿಸುತ ದೆಸೆದೆಸೆಯೊಳರಸುತ್ತಾ ಬಸವಳಿದು ತಾ ಬರುತ 21 ಎಸೆವವರ ಋಷ್ಯಮೂಕಮತಂಗಾಶ್ರಮದಿ ಬಿಸಜಾಪ್ತಸುತನ ಕಂಡವನೊಡನೆ ತಾ ಮುದದಿ 22 ಉಸುರಿ ವಾಲಿಯ ವಧೆಗೈವೆನೆಂದಭಯವನು ಎಸೆವ ವಿಲಸಿತ ಮಹಿಮ ಕರಿಗಿರೀಶನು ತಾನು 23
--------------
ವರಾವಾಣಿರಾಮರಾಯದಾಸರು