ಒಟ್ಟು 697 ಕಡೆಗಳಲ್ಲಿ , 80 ದಾಸರು , 593 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು
ಪಾಲಿಸೀ ಪಸುಳೆಯನು ಪರಮ ಪುರುಷ ಪ. ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ. ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು ತ್ವರಿತದಲಿ ಕಾಪಾಡು ತಡಮಾಡದೆ ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ ಕರುಣಾಮೃತವಗರೆದು ಕಡುಕೃಪೆಯೊಳಿನ್ನು 1 ಫಣಿರಾಜಶಯನ ಪರ್ಯಂಕ ದೇವರದೇವ ಬಿನಗು ದೇವರ ಗಂಡ ಎಣೆಯುಂಟೆ ನಿನಗೆ ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ 2 ಪ್ರಾಣದೇವನೆ ಸರ್ವ ದೇವತೆಗಳಧಿನಾಥ ಪ್ರಾಣದೇವನು ನಿನ್ನ ಪ್ರಾಣ ಪದಕ ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ 3 ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು ಎನ್ನ ಬಿನ್ನಪವ ನೀ ಬರಿದೆನಿಸದೆ ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು ಮನ್ನಿಸಿ ಕಾಪಾಡು ಮಂಗಳಾತ್ಮಕನೆ 4 ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ ನಿರುತದಲಿ ನಿನ್ನ ಪದಭಕ್ತಿ ಜ್ಞಾನವ ಕೊಟ್ಟು ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಪಾಲಿಸು ಶಾರದೆ ಪರಮ ಪಾವನೆಯೆ ಪಾಲಿಸು ಎನ್ನನು ಪರಬ್ರಹ್ಮನ ಸತಿಯೆ ಪ ತವಪಾದ ಕೃಪೆಯಿಂದ ಕನ್ನಡ ನುಡಿಯಲಿ ವಿವರಿಸಿ ಪೇಳುವೆ ಭಾಗ್ಯ ಸನ್ನುತಿಯ ತವಕದಿ ಬಲಿದೀಗ ಕೊಡು ಸರಸ್ವತಿಯೆ ರವಿ ಕೋಟಿ ತೇಜ ವಿರಾಜಿತಾತ್ಮಿಕೆಯ 1 ಜಲಕೆ ಕ್ಷೀರವು ಮುಟ್ಟಿದಂತೆನ್ನ ಮನದಿ ಸುಲಲಿತ ವಾಕ್ಯವ ಪಾಲಿಸು ದಯದಿ ಜಲಜ ಭವನರಾಣಿ ಕರದಿ ಪುಸ್ತಕವೇಣಿ ಕಲಕೀರ ವಾಣಿ ಕಪಿಲೆ ಸುವಾಣಿ 2 ಧರೆಯೊಳಧಿಕವೆಂಬ ಕೊಡಚಾದ್ರಿಯೊಳಗೆ ಸ್ಥಿರವಾಗಿ ನೆಲೆಸಿದ ಮೂಕಾಂಬೆ ಎನಗೆ ಕರುಣಿಸಿದದಾರನು ವರಿಸಿದರೆನಗೆ ಹರುಷದಿ ಪಾಲಿಸೆ ಪರಮ ಪಾವನೆಯೆ 3
--------------
ಕವಿ ಪರಮದೇವದಾಸರು
ಪಾಲಿಸೆಮ್ಮನು ಗುಹನೇ | ಶ್ರೀ ಸುಬ್ರಹ್ಮಣ್ಯ ಪ ಪಾಲಿಸೆಮ್ಮನು ಗುಹ | ನೀಲಕಂಠನ ಸುತ ಅ.ಪ ನೂರಿಗಟ್ಟಿದ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 1 ದಿಷ್ಟವನಿತ್ತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 2 ವಲ್ಲಿ ದೇವಿಯ ಪ್ರಾಣವಲ್ಲಭನೆನಿಸುವ ಪುಲ್ಲಂಬರೂಪ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 3 ನಂದ ಚಿನ್ಮಯ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 4 ಅಂಬಿಕಸುತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 5
--------------
ಬೆಳ್ಳೆ ದಾಸಪ್ಪಯ್ಯ
ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಓಡುತಲಿಹರಮ್ಮಾ ನೋಡೆಂಬರೋ 1 ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆಇಂದು ಹುಟ್ಟಿದ ದಿನಾ ಎರಕೋ ಕೂಸಮಂದಿರದೊಳು ವಿಪ್ರವೃಂದವ ಪೂಜಿಸಿಛಂದಛಂದದ ವಸ್ತ ತಂದಿಡುವೆ 2 ಮಂದಿ ಮಕ್ಕಳು ನೋಡು ಛಂದದಿ ತಮ್ಮನೆಮುಂದಲೆ ಊರೊಳಗಾಡೆಂಬರೊನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋಇಂದೆಲ್ಲಿ ಪೋಗದಿರಿಂದಿರೇಶಾ 3
--------------
ಇಂದಿರೇಶರು
ಪುಟ್ಟಿದನು ಜಗದೀಶ | ಜಗಭಾರ ನೀಗಲುವೃಷ್ಣಿಕುಲದಲಿ ಈಶ | ದೇವಕಿಯ ಜಠರದಿಕೊಟ್ಟು ಅವಳಿಗೆ ಹರ್ಷ | ಕರುಣಾಬ್ದಿ ಭೇಶ ಪ ಅಟ್ಟಹಾಸದಿ ದೇವದುಂದುಭಿ | ಶ್ರೇಷ್ಠವಾದ್ಯಗಳೆಲ್ಲ ಮೊಳಗಲುಅಷ್ಟಮಿಯ ದಿನದಲ್ಲಿ ಬಲು ಉ | ತ್ಕøಷ್ಟದಲ್ಲಿರೆ ಗ್ರಹಗಳೆಲ್ಲವು ಅ.ಪ. ಪರಿ ದೇ-ವಕ್ಕಿಯಲಿ ಉದ್ಭವಿಸೀ | ಸಜ್ಜನರ ಹರ್ಷೀಸಿ ||ವಕ್ರಮನದವನಾದ ಕಂಸನು | ಕಕ್ಕಸವ ಬಡಿಸುವನು ಎನುತಲಿನಕ್ರಹರ ಪ್ರಾರ್ಥಿತನು ದೇ | ವಕ್ಕಿ ವಸುದೇವರಿಂದಲಿ 1 ದೇವ ಶಿಶುತನ ತಾಳೀ | ನಗುಮೊಗವ ತೋರಲುದೇವ ವಾಣಿಯ ಕೇಳೀ | ಅನುಸರಿಸಿ ಆದ ವಸುದೇವ ತನಯನ ಕೈಲೀ | ಕೊಂಡಾಗ ಬಂಧನಭಾವ ಕಳಚಿತು ಕೇಳೀ | ಶ್ರೀ ಹರಿಯ ಲೀಲೇ ||ಪ್ರಾವಹಿದ ಸರಿದ್ಯಮುನೆ ವೇಗದಿ | ಭಾವ ತಿಳಿಯುತ ಮಾರ್ಗವೀಯಲುಧೀವರನು ದಾಟುತಲಿ ಶಿಶು ಭಾವದವನನ ಗೋಪಿಗಿತ್ತನು 2 ವಿಭವ ||ತಂದು ಶಿಶು ಸ್ತ್ರೀಯಾಗಿ ಮಲಗಿರೆ | ಬಂದು ಕಂಸನು ಕೈಲಿ ಕೊಳ್ಳುತಕಂದನಸು ಹರಣಕ್ಕೆ ಯತ್ನಿಸೆ | ಬಾಂದಳಕ್ಕದು ಹಾರಿ ಪೇಳಿತು 3 ದುರುಳ ಭಯವನೆ ಪೊಂದಿ ತೆರಳುತತರಳರಸುಗಳ ನೀಗ ತನ್ನಯ | ಪರಿಜನಕೆ ಅಜ್ಞಾಪಿಸಿದ ಕಂಸ 4 ಆರೊಂದನೆಯ ದಿನದಿ | ಗೋಕುಲಕೆ ಬಂದಳುಕ್ರೂರಿ ಪೂಥಣಿ ವಿಷದಿ | ಪೂರಿತದ ಸ್ತನ ಕೊಡೆಹೀರಿ ಅವಳಸು ಭರದಿ | ಮೂರೊಂದು ಮಾಸಕೆಭಾರಿ ಶಕಟನ ಮುದದಿ | ಒದೆದಳಿದೆ ನಿಜಪದದಿ ||ಮಾರಿ ಪೂಥಣಿ ತನುವನಾಶ್ರಿತ | ಊರ್ವಶಿಯ ಶಾಪವನೆ ಕಳೆಯುತಪೋರ ಆಕಳಿಸುತ್ತ ಮಾತೆಗೆ | ತೋರಿದನು ತವ ವಿಶ್ವರೂಪ 5 ಭಂಜನ ||ಪಾನಗೈಯ್ಯುತ ದಾನ ವನ್ಹಿಯೆ | ಹನನ ವಿಷತರುರೂಪಿ ದೈತ್ಯನ ಧೇನುಕಾಸುರ ಮಥನ ಅಂತೆಯೆ | ಹನನ ಬಲದಿಂದಾ ಪ್ರಲಂಬನು6 ಪರಿ ಗೋವರ್ಧನ | ಶಂಖ ಚೂಡನ ಶಿರಮಣಿಯು ಬಲು ಅಪಹರಣ | ಅರಿಷ್ಟಾಸುರ ಹನನ ||ಹನನಗೈಯ್ಯಲು ಕೇಶಿ ಅಸುರನ | ಘನಸುವ್ಯೋಮಾಸುರನ ಅಂತೆಯೆ ಮನದಿ ಯೋಚಿಸಿ ಕಂಸ ಕಳುಹಿದ | ದಾನ ಪತಿಯನು ಹರಿಯ ಬಳಿಗೆ 7 ಬಲ್ಲ ಮಹಿಮೆಯ ಹರಿಯ | ಅಕ್ರೂರ ವಂದಿಸಿಬಿಲ್ಲಹಬ್ಬಕೆ ಕರೆಯ | ತಾನೀಯೆ ಕೃಷ್ಣನುಎಲ್ಲ ತಿಳಿಯುತ ನೆಲೆಯ | ಪರಿವಾರ ಸಹಿತದಿಚೆಲ್ವ ರಥದಲಿ ಗೆಳೆಯ | ಅಕ್ರೂರ ಬಳಿಯ ||ಕುಳ್ಳಿರುತ ಶಿರಿ ಕೃಷ್ಣ ತೆರಳುತ | ಅಲ್ಲಿ ಯಮುನೆಲಿ ಸ್ನಾನ ವ್ಯಾಜದಿ ಚೆಲ್ವತನ ರೂಪಗಳ ತೋರುತ | ಹಲ್ಲೆಗೈದನು ಗೆಳೆಯ ಮನವನು 8 ಬವರ | ಗೈವುದಕೆ ಬರ ಹರಿಹಲ್ಲು ಮುರಿಯುತ ಅದರ | ಸಂಹರಿಸಿ ಬಿಸುಡಲುಮಲ್ಲ ಬರೆ ಚಾಣೂರ | ಹೂಡಿದನು ಸಂಗರ ||ಚೆಲ್ವ ಕೃಷ್ಣನು ತೋರಿ ವಿಧ್ಯೆಯ | ಮಲ್ಲನನು ಸಂಹರಿಸುತಿರಲು ಬಲ್ಲಿದನು ಬಲರಾಮ ಮುಷ್ಟಿಕ | ಮಲ್ಲನನು ಹುಡಿಗೈದು ಬಿಸುಟನು 9 ಜಲಧಿ | ಆವರಿಸಿ ಬರುತಿರೆಹರಿಯ ಬಲ ಸಹ ಭರದಿ | ಸಂಹರಿಸಿ ಅವರನುಕರಿಯ ವೈರಿಯ ತೆರದಿ | ಹಾರುತಲಿ ಮಂಚಿಕೆಲಿರುವ ಕಂಸನ ಶಿರದಿ | ಪದಮೆಟ್ಟಿ ಶಿಖೆ ಪಿಡದಿ ||ಗರುಡನುರಗನ ಪಿಡಿದು ಕೊಲ್ಲುವ | ತೆರದಿ ಕೃಷ್ಣನು ಪಿಡಿದ ಕಂಸನ ಕರದಿ ಖಡ್ಗದಿ ಶಿರವ ನಿಳುಹಲು | ನೆರೆದ ಸುಜನರು ಮೋದಪಟ್ಟರು 10 ಮಂದ ಮೋದ ಪಡಿಸುವ 11
--------------
ಗುರುಗೋವಿಂದವಿಠಲರು
ಪುಟ್ಟಿದನು ಮಗನೂ ಮಾದಮ್ಮಗೇ ಪ ಪುಟ್ಟಿದ ವೈಶ್ಯ ಮಾದಮ್ಮಗೆ ಮಗ ರಂಡೆವಿಠ್ಠಲ ಎಂತೆಂದು ಪೆಸರಿಟ್ಟು ಕರೆದರೂ ಅ.ಪ. ನಗು ನಗುತಲೇ ನಾನು ಶ್ರೀಹರಿಗೆ ಕೈಮುಗಿದು ಬೇಡಿಕೊಂಡೇನು ||ನಗಧರ ಮಾಡಿದ ಮಾಡಿದ ಪ್ರಪಂಚವುಜಗದಿಂದಲೇನಹುದೆಂದು ನುಡಿದಳು 1 ನದಿಯ ಮಳಲು ಸರೀ ಪ್ರಜೆಗಳು ಬದಿಯೊಳಗೆ ಕೈಕಾಲು ಮುರುಕೊಂ-ಬದರಿಯದೆ ಒದಗಿರಲು ಮುದದಿಂದಮಾದಮ್ಮ ಸುತ್ತ ಮುತ್ತಿತು ಲೋP À 2 ಆ ರಂಡೆ ವಿಠಲಾನ ಗುಡಿಯೊಳಗಿಟ್ಟುಶ್ರೀ ರಮಣಗೇ ಒಪ್ಪಿಸೇ ||ನೀರೆಣ್ಣೆ ನಾರು ಬತ್ತಿಯ ದೀಪ ಉರಿಯಲುಮೂರು ಲೋಕಕೆ ಆಶ್ಚರ್ಯವಾಯಿತು 3 (ನಾಲ್ಕನೆಯ ನುಡಿ ಸಿಕ್ಕಿಲ್ಲ) ಭ್ರಷ್ಟಳ ಆರುತಿಯ ಮೋಹನ್ನವಿಠಲ ಕೈಗೊಂಡ ||ದೃಷ್ಟಾಂತವಾದುದು ಶಿಷ್ಟ ಜನರಿಗೆಲ್ಲಶ್ರೇಪ್ಠಳಾದರು ಇಹಪರದಲ್ಲಿ ಎಂದರು 5
--------------
ಮೋಹನದಾಸರು
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಪುಂಡರೀಕನಯನ ಕೃಷ್ಣ ಪ ಕಂಡೆನಿಂದು ನಿನ್ನ ಬಹುದಿನ ಬಳಿಕ ಬ್ರ ಉದ್ದಂಡ ಮಹಿಮನೆ ಅ.ಪ ಪುಟ್ಟಿದಂದಿನಿಂದಾ ಕಷ್ಟವಪಟ್ಟೆನು ಗೋವಿಂದ ಸೃಷ್ಟಿಯೊಳಗೆ ನಾ ಪುಟ್ಟಿದನೇತಕೆ ಜಿಷ್ಣುಸಖನೇ ಎನ್ನ ಕೊನೆಗಾಣೆ 1 ಕರಿಗಿರೀಶ ನಿನ್ನ ಚರಣವ ನೆರೆ ನಂಬಿಹರನ್ನ ಪರಿ ಪೊರೆ ಕಂಸಾರಿಯೆ ಸ್ಥಿರ ಸಂಕಲ್ಪನೆ ಕರುಣಾಶರಧಿಯೆ 2
--------------
ವರಾವಾಣಿರಾಮರಾಯದಾಸರು
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
--------------
ವಿಜಯದಾಸ
ಪುಣ್ಯ ಪಡೆಯೆ ನೀನು ಪೂರ್ಣೇಂದುವದನೆ ಪುಣ್ಯ ಪಡೆಯೆ ನೀನು ಪ ಕುಂದಣದಾರತಿ ಬೆಳಗಿ ಅಕ್ಷತೆನಿಟ್ಟು ಆ- ನಂದವಾಗಾಶೀರ್ವಾದ ಮಾಡ್ಹರಸುತಲಿ 1 ಅತಿ ಹರುಷದಿ ಗಂಡು ಸುತರನೆ ಪಡೆದು ನೀ ಪೃಥಿವಿನಾಳೆನುತ ದ್ರೌಪದಿ ಹರಸಿದಳು2 ಅಕ್ಕರದಿಂದ್ಹೆಣ್ಣುಮಕ್ಕಳ ಪಡೆದು ಪ- ಲ್ಲಕ್ಕಿನೇರೆನುತ ದೇವಕ್ಕಿ ಹರಸಿದಳು 3 ಕಟ್ಟಿದ್ದ ಮಾಂಗಲ್ಯ ಕರಿಯ ಕಾಜಿನ ಬಳೆ ಮುತ್ತೈದೆತನಕೆ ಸಾವಿತ್ರಿ ಹರಸಿದಳು 4 ಅನ್ನ ಗೋವ್ಗಳು ಕನ್ಯಾದಾನ ಮಾಡೆನುತ ಸಂ- ಪನ್ನ್ಯಾಗಿರೆನುತ ಅರುಂಧತಿ ಹರಸಿದಳು 5 ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ನೀ ಪಡೆ ಸುಖ ಶ್ರೀಮಹಾಲಕ್ಷ್ಮಿ ಹರಸಿದಳು 6 ಕಾಮಿತ ಫಲ ಇಷ್ಟದಾಯಕನಾದ ಶ್ರೀ ಭೀಮೇಶಕೃಷ್ಣರಾಯನ ಕರುಣದಲಿ 7
--------------
ಹರಪನಹಳ್ಳಿಭೀಮವ್ವ
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಪ ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣಅ ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ1 ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ ಮುದ್ದುಕೃಷ್ಣ 2 ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದುನೀ ಕೇಳಿ ಬಲ್ಲೆಯಾ ಕೃಷ್ಣಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನು ಮಾಡಯ್ಯ ಕೃಷ್ಣರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದುಆಕೆಗಕ್ಷಯವಿತ್ತೆ ಕೃಷ್ಣನಾ ಕಾಣುವಂದದಲಿ ಉಡುಪಿಯಾದಿಕೇಶವಏಕೆ ದರಶುನವೀಯೆ ಕೃಷ್ಣ 3
--------------
ಕನಕದಾಸ