ಒಟ್ಟು 5585 ಕಡೆಗಳಲ್ಲಿ , 130 ದಾಸರು , 3539 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು
ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ಪ ದೃಢಭಕ್ತ ಸಮೂಹವ ಸಿರಿ ಯೊಡೆಯನು ಕೈಬಿಡನೆಂದು ಅ.ಪ ವಿಧಿಸೃಷ್ಟಿಯೊಳಿಲ್ಲದರೂ- ಪದಿ ಬಂದು ನಖದಿ ಅಸುರನ ಉದರ ಬಗೆದು ಕರುಳ ತೆಗೆದು ಮುದದಿ ಗಳದಿ ಧರಿಸಿದನೆಂದು 1 ಪರರು ತನ್ನ ಹಿಂಸೆಗೈ ದರು ಸಹಿಸಿ ಸಮಾಧಾನದಿ ಸಿರಿಯರಸನ ನೆನೆವಗೆ ಭಯ ವಿರದಿರದಿರದಿರದೆಂದು 2 ದ್ವೇಷಿಗಳನುದಿನ ಯೋಚಿಪ ಮೋಸಗಳನು ತಿಳಿಯುತ ಲ- ಕ್ಷ್ಮೀಶನು ಪರಿಹರಿಸಿ ತನ್ನ ದಾಸರಿಗೊಶವಾಗುವನೆಂದು 3 ತಿಳಿಯಗೊಡನು ಸತ್ಯವಿದೆಂದು 4 ಕಾಮಾದಿಗಳನು ಗೆದ್ದು ಮ- ಹಾಮಹಿಮರೆನಿಸುವರ ಯೋಗ- ಕ್ಷೇಮವನ್ನು ವಹಿಸಿಹ ಗುರು- ರಾಮವಿಠಲ ನರಹರಿಯೆಂದು 5
--------------
ಗುರುರಾಮವಿಠಲ
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು
ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ ಹೋಗುತಿದೆ ಮುತ್ತಿನಂಥಾ ದಿನದೊಳು | ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ ಉತ್ತುಮರ ಸಂಗಡದಲ್ಲಿ | ನಿತ್ಯ ಶ್ರವಣಮನನ ಮಾಡಿ | ಅತ್ತಲಿತ್ತಲಾಗದೆ | ಸು | ವೃತ್ತಿಯೊಳು ಬೆರಿಯಿರೋ 1 ಪಗಡಿ ಪಂಚಿಯಾಡಿ ಪರರಾ | ಬಗಲಿ ಕಳೆದು ಕಳೆವದೇನು | ಯುಗುತಿ ಹೀನ ರಾಗದೆ | ಪಥ ಪಡಿಯಿರೋ 2 ಮಂದ ಮತಿಯ ಕೊಂಡ್ಯಾಡಿ | ಮಂದ ಮತ್ತೆ ದೊರೆಯದಿದ್ದ | ಇಂದು ನಾಳೆಗೆನ್ನದೇ ಮು | ಕುಂದ ನಾಮವ ನೆನೆಯಿರೋ 3 ಇಂದು ನರದೇಹದಿಂದ | ಬಂದು ಬರಡ ಮಾಡಬ್ಯಾಡಿ | ತಂದೆ ಮಹಿಪತಿ ದಯ | ದಿಂದ ಮುಕ್ತಿಯ ಪಡೆಯಿರೋ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದದಿರುವಿ ಯಾಕೆ ಮನವೆ ಇಂದಿರೇಶನ ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ. ಸುತ್ತಿ ಬರುವಿ ನೀ ಮತ್ತೆ ವಿಷಯದಿ ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1 ತೋಷಗೊಳುವೆನೆಂಬಾಸ್ಥೆ ತಾಳುವಿ ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2 ಅರಿಯದಾದಿ ನೀ ಹರಿಯ ಗುಣಗಳ ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3 ಕೇಳು ನುಡಿಯನು ಕರುಣಾಳು ಒಡೆಯನು ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4 ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹೊಂದಬೇಕು ನಿಜನೋಡಿ ತಂದೆ ಗುರುನಾಥ ಬೋಧ ಧ್ರುವ ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ 1 ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ ಸನ್ಮತ ಸುಖಸಾರದೊಳು ಮನಭೇದಿಸಿ ಉನ್ಮನವಾಗಿ ಜೀವನ ಸದ್ಗತಿಗೈದಿಸಿ ಜನ್ಮಕೆ ಬೀಳುವ ಭವಬಂಧನ ಛೇದಿಸಿ 2 ಸಾಯಾಸದಿಂದ ಸಾಧಿಸಬೇಕು ಸಾಧುಸಂಗ ಗುಹ್ಯಗುರುತ ನೋಡಲಿಬೇಕು ಅಂತರಂಗ ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ ಭವ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಿ ಬದುಕಿರೈಯ್ಯಾ ದೇವನಾ | ತರು | ಣೇಂದು ಶೇಖರ ಉಮಾ ಧವನಾ || ವಂದಿಸಿದವರಘವೃಂದ ನಿವಾರಿಸಿ | ಕೈವಲ್ಯ ತಂದು ಕೊಡುವನಾ ಪ ಸ್ಮರಿಸಿದವರ ಬದಿಯಲಿರುವಾ | ತನ್ನ | ಶರಣರಿಷ್ಟಾರ್ಥವಗರವಾ || ಕರುಣದಿ ಪತಿತರುದ್ಧರಿಸಲು | ತಾರಕ | ಗುರುರೂಪ ತಾನಾಗಿ ಧರೆಲಿ ಮೆರೆವನಾ 1 ಗಗನಧುನಿ ಧರಿಸಿದನಾ | ಬೆಟ್ಟ | ಮಗಳಿಗೆ ಅರ್ಧಾಂಗಿ ನೀಡಿಹನಾ || ನಿಗಮಾಗ ಮಂಗಳಯುಗತಿಗೆ | ನಿಲುಕದು | ನಿಲುಕದುರಗ ಭೂಷಣ ಭಸ್ಮಾಂಗ ವಿಗಢ ನಾಟಕನಾ 2 ಘನಸಾರ ಗೌರಾಂಗ ಹರನಾ | ತಪ್ತ | ಕನಕ ವರ್ಣ ಜಟಾಧರನಾ || ಮುನಿಜನ ಶುಭತದವನ ಚೌರ್ಚಿತ | ಪದ || ಅನುದಿನ ಮಹಿಪತಿ ಜನ ಸಲಹುವನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಿ ಬದುಕಿರ್ಯೋ ಪ ಹೊಂದಿ ಬದುಕಿರ್ಯೋ ಒಂದು ಮನದಲಿ | ಮಂದ ಹಾಸ ಮುಕುಂದನಾ | ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ 1 ಕುರುಳ ಗೂದಲು ಸರಳ ಗೊರಳವ | ಗರಳಧರನುತ ಚರಣನಾ | ಸಾರ ಸಂಹರಣನಾ | ತರಳ ಗೊಲಿದ ಕರುಣನಾ 2 ಮರುಳು ಸುಯೋಧನ ಇರಲು ಏಳದೇ | ಉರುಳು ಗೆಡಹಿದ ವೀರನಾ | ಅರಳ ಪೂವಿನ ಹಾರನಾ | ಗರಳಧರ ಮದ ಹಾರನಾ 3 ಹಲ್ಲಿದರಿಗಳ ದಲ್ಲಣಾಗಿಹ | ಪುಲ್ಲಲೋಚನ ರಂಗನಾ | ಮಲ್ಲ ಚಾಣೂರ ಭಂಗನಾ | ಸಲ್ಲಲಿತ ಚಲ್ವಾಂಗನಾ 4 ಸಥಿಯ ನಡೆಸುವ ಇಂಗಿತರ ಮಹಿ | ಪತಿಯ ನಂದನ ಜೀವನಾ | ಸತತ ಭಕ್ತರ ಕಾವನಾ | ಪತಿತ ಪಾವನ ದೇವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಭಜಿಸಿರೆಲೋ ಹರಿನಾಮ ದಯ ಸಿಂಧು ಭಜಕಬಂಧು ಹರಿನಾಮ ಪ ಬಂಧನಿವಾರಣ ಹರಿನಾಮ ಬಹ ಕುಂದು ನಿಂದೆ ದೂರ ಹರಿನಾಮ ಅ.ಪ ವಿಷಯಲಂಪಟಹರ ಹರಿನಾಮ ಮಹ ವ್ಯಸನ ಕಳೆದು ಕಾಯ್ವ ಹರಿನಾಮ ಅಸಮಸೌಖ್ಯಜ್ಞಾನ ಹರಿನಾಮ ಮಾಯಾ ಮುಸುಕು ನಿವಾರಣ ಹರಿನಾಮ 1 ಬೇಡಿದ್ದು ಕೊಡುವುದು ಹರಿನಾಮ ಮಹ ಕೇಡು ತಪ್ಪಿಸುವುದು ಹರಿನಾಮ ಗಾಢಪದವಿನೀಯ್ವ ಹರಿನಾಮ ತಾ ಕೂಡಿ ಅಗಲದಿಹ್ಯ ಹರಿನಾಮ 2 ಗಾನಲೋಲಾನಂದ ಹರಿನಾಮ ಮಹ ದೀನ ದಯಾಪರ ಹರಿನಾಮ ಧ್ಯಾನದಾಯಕ ನಿಜ ಹರಿನಾಮ ಮಮ ಪ್ರಾಣದೊಡೆಯ ಶ್ರೀರಾಮನಾಮ 3
--------------
ರಾಮದಾಸರು
ಹೊಂದಿ ಸುಖಿಸಿ ಹೊಂದಿ ಸುಖಿಸಿ ಒಂದು ಮನದ ಭಾವದಿಂದಾ ನಂದನೀವ ಜನಕ ನಮ್ಮಗುರುರಾಯನಾ ಪ ದಿಟ್ಟತನದಿ ಸಾಗರಧಿಂ ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ ದುಷ್ಟ ರಾವಣ ತನುಜನಬೆ ನ್ನಟ್ಟಿ ಕುಟ್ಟಿ ಲಂಕೆಯನು ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ 1 ಆಪ ನೋಡದೆ ಭೂಪರಾಸಭೆ | ಲೋಪಗಡಿ ಮಂಡಿಸಿ ಗೆಲವು | ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ || ಪಾಪಿಕೌರವ ಧೀಪ ನೆಜ್ಞ ಸ | ಮೀಪಪಶುವಿನೋ ಪಾದಿಯಲಿ ಕೊಪದಿಂದಲಿ ಘಾತಿಸಿದ ಭೂಪಭೀಮನಾ2 ಮತ್ರ್ಯ ದೊಳಗ ಬೆರ್ತು ವಿಷಯ ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು ಸಾರ್ಥಕವನು ಮಾಳ್ಪಾನಂದ ಮೂರ್ತಿ ಮರುತನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸಿನೆರೈಯ್ಯ ನಮ್ಮ ದೇವ ದೇವನಂ | ತಂದೆ ಮಹಿಪತಿ - ಜಪಾಲ ಭಕ್ತ ಜೀವ ಜೀವನಂ ಪ ತೋರ್ಪಕರ್ಪೂರಗಂಗಛವಿಯ | ಸರ್ಪ ಅರ್ಪಿತಾಂಕ ಕಂಠ | ದಿರ್ಪ ಸರ್ಪ ಭೂಷಕಂ - ದರ್ಪ ದರ್ಪ ನಾಶನು 1 ಸ್ಥೈರ್ಯಧೈರ್ಯ ವೀರ್ಯೋದಾರ್ಯ | ವರ್ಯ ಚರ್ಯದೋರಿ ಜನಕ | ಕಾರ್ಯ ಕಾರ್ಯನರ ಹಿಸುವಾ | ಆರ್ಯ ರಾರ್ಯ ಸಾಂಬನಂ | 2 ಕಾಲಕಾಲ ಶಂಭುರಜತ | ಶೈಲವಾಲಯನಿಸಿ ಗಿರಿಜೆ | ನೀಲ ಲೋಹಿತಂಕ | ಪಾಲಿಶೂಲಿ ಶರ್ವನಂ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸು ಹರಿಯ ಪಾದಾ ಧ್ರುವ ನಾನಾ ಪುಣ್ಯ ನಿದಾನದಿ ಧರೆಯೊಳು | ಮಾನವ ಜನುಮಕ ನೀನೀಗ ಬಂದು | ಪರಿ ತಾ ನಿಜವರಿಯದೆ | ಜ್ಞಾನ ಶೂನ್ಯನಾಗೇ-ನಿಹುದಣ್ಣಾ 1 ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ | ನುಡಿವರೇ ಪುಸಿಯನು ಬಿಡುವರೆ ಸತ್ಯವ | ಇಡುವರೆ ದುರ್ಗಣ ಸಿಡುವರೆ ಬೋಧಕ | ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ 2 ಮೂರು ದಿನದ ಸಂಸಾರದೊಳಗ | ಕಂ | ಸಾರಿಯ ಭಕ್ತಿಯ ಸೇರಿ | ಸಾರ ಸ್ವಹಿತ ಸಹ | ಕಾರಿ ಮಹಿಪತಿ ಸಾರಿದ ಬೋಧಾ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು 1ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ2ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ಕøತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ 3
--------------
ಗೋಪಾಲಾರ್ಯರು
ಹೊಂದಿಲ್ಲದೆ ನೀ ಕುಂತೀ ಪ ಪರಮನು ಕೇಳಿದರೇನಂತೀ ಕೆಟ್ಟ ನರಕದೊಳಗೆ ಯಮಬಾದಂತೀ ಅ.ಪ ಅಜನನು ಬೆರೆಯಲು ಬೇಕಂತೀ ಆದು ಭಜನೆಗೆ ಬಾರದು ಯಾಕಂತೀ ನಿಜವೊಂದಿಲ್ಲದೆ ನೀಕುಂತೀ ಆದ ಭಜಿಸಿ ನೋಡದೆ ಸುಮ್ಮನ್ಯಾಕ್ಕುಂತೀ 1 ಸಾಧನೆ ಮಾಡುವೆ ಹೀಗಂತೀ ನಿಜ ಬೋಧೆಯಿಲ್ಲದೆ ಯಾಕೀ ಭ್ರಾಂತೀ ಭೇದಿಸುವನು ಸೂರ್ಯನಕಾಂತಿ ನಿಜ [ದಿಂದ]ತುಲಸಿರಾಮನೆ ಗುರು ವೇದಾಂತಿ 2
--------------
ಚನ್ನಪಟ್ಟಣದ ಅಹೋಬಲದಾಸರು