ಒಟ್ಟು 6410 ಕಡೆಗಳಲ್ಲಿ , 128 ದಾಸರು , 3576 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಿತಪ್ಪುಗಳ ಗೊಡವೆ ನನಗೇತಕೋ ಸರಿತಪ್ಪ ನಡೆಸುವವನು ನೀನಾಗಿರೇ ಪ ಹರಿ ನಿನ್ನ ಕೈಗೊಂಬೆ ನಾನಾಗಿರೆ ಪರಿಪರಿಯ ಯೋಚನೆಯು ನೀನಾಗಿರೇ ಅ.ಪ ಹಗಲಿರುಳ ಬಗೆ ಭಾವ ಎನಗೇತಕೆ ನಗುವಳಲ ಶೋಕಂಗಳು ಇನ್ನೇತಕೇ ಜಗವೆಲ್ಲ ತುಂಬಿರುವೆ ಭಯವೇತಕೆ ಭಗವಂತ ನಿನ್ನದಯೆ ಇರದೇತಕೆ 1 ಹರಿಚರಣ ಶರಣೆಂಬುದೆನಗಾಗಲಿ ಕರವಿಡಿದು ನಡೆಸುವುದು ನಿನಗಾಗಲೀ ಗುರುದೇವ ನೀನೆಂಬುದರಿವಾಗಲೀ ಸಿರಿ ಮಾಂಗಿರಿಯರಂಗ ದಯೆದೋರಲಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸರೋಜದಳ ನೇತ್ರೀ | ಅಜಸತಿ ಗಾಯತ್ರೀಪದ | ಸರೋರುಹವ ನಮಿಪೆ | ಸುರ ಜೇಷ್ಠನ ಪ್ರಿಯೆಮುರಾರಿ ಪದ ತೋರು || ಕರುಣವ ನೀ ಬೀರು ಪ ನಿತ್ಯ ಹರಿಯ ಪದಚಿತ್ತದೊಳಗೆ ಇರಸು | ಗುಣವ ಪೊಗಳಿಸು ಅ.ಪ. ವೀಣೆ ಹಸ್ತಳೆ | ಗಾನಲೋಲ ಪ-ದಾನುರಾಗದಿ | ಗಾನ ಗೈವೆ ವೇ |ದಾನುಸಾರ ಬ್ರ | ಹ್ಮಾಣಿ ತುತಿಸುತವೇಣುಗೋಪನ | ಪ್ರೀಣ ನವ ಗೈವೇ 1 ಹಂಸವಾಹಳೆ ಹಂಸ ಹರಿಪದ ಪಾಂಸು ಶಿರದಿ ಅ | ಸಂಶಯದಿ ಧೃತ ಅಂಶ ಅವತಾ ರಾಂಶದೊಳು ನಿ-ಸ್ಸಂಶಯಳೆ ಪzಸÀ | ಪಾಂಸು ಯಾಚಿಪೆ 2 ನಾಲಿಗಿಂದಲಿ | ಬಾಲ ಗೋಪನ |ಶೀಲ ಗುಣಕ್ರಿಯ ಜಾಲ ನುಡಿಸು ವಿಶಾಲಫಣೆ ಕಮ | ಲಾಸನನ ಪ್ರಿಯೆ |ಪೇಳಲಳವೆ ವಿ | ಶಾಲ ತವಗುಣ3 ಪಾದ ನಂಬಿದೆ 4 ಕಾವ ಕೊಲ್ವನು | ಮಾವಿನೋದಿಯಭಾವ ಬಲ್ಲಳೆ | ದೇವ ಮಾತೆಯ |ಭಾವದೊಳು ಗುರು | ಗೋವಿಂದ ವಿಠಲನಪಾವನದ ಪದ | ಭಾವವನು ಕೊಡು 5
--------------
ಗುರುಗೋವಿಂದವಿಠಲರು
ಸರ್ವ ವಿದ್ಯದಾಗರಾ | ಪಾರ್ವತಿ ಕುಮಾರಾ | ದೋರ್ವ ವಿಘ್ನ ಸಂಹಾರಾ | ಶ್ರೀಗಣ ನಾಯಕನೇ | ಊರ್ವಿಲಿ ನಿನ್ನ ಬಲಗೊಂಬೆ 1 ತರುವಾಣಿ ಕರುಣಾ ಸಾಗರೆ | ಶರಣು ಶರಣು ಕಲ್ಯಾಣಿ 2 ಸಾರಸ ಲೋಚನ | ಕಾರುಣ್ಯ ನಿಧಿಯೇ ಸಲಹಯ್ಯಾ 3 ಮೂರಾವ ತಾರಿ ಸಹಕಾರೋ | ಶ್ರೀ ಹನುಮಂತಾ | ತಾರಿಸೋ ಭವದಿಂದಾ 4 ರಜನೀಶ ಮೌಳಿ | ನಿಜ ದೋರಿ ಎನ್ನ ಸಲಹಯ್ಯಾ 5 ಛಂದಾಗಿ ಸಲಹು ತಂದೆ ಗುರು ಮಹಿಪತಿ ರಾಯಾ 6 ಇಂದು ನಮ್ಮನಿಯಲಿ ಮುಂದಾಗಿ ನೀವು ವದಗೀರೇ 7 ಬನ್ನಿ ಭಾವಕಿಯರು ಮುನ್ನಿನಾಗುಣಬಿಟ್ಟು | ಅನ್ಯ ಕೆಲಸಕೆ ತೊಡಗದೇ | ನೈವೇದ್ಯಕೀಗ | ಸನ್ನೆಲ್ಲಕ್ಕಿ ಮಾಡೀರೇ 8 ಸೇರಲಿ ಅನುಮಾನಾ ತವಕದಿ ನೀವು ಕುಳ್ಳಿರೆ 9 ಉರ್ವಿಲಿ ನೀವು | ಕುಟ್ಟರೆ | ಜ್ಞಾನ ವಿಜ್ಞಾನದಿ | ಮೆರ್ವ ವನರೆಯಾ ಧರಿಸೀಗಾ 10 ಅಮೃತ ನಾಮವಾ ನೀವು ಬೆರೆಯಿರೇ 11 ಸಮಭಾವ ಯಾರಿಯಾ ಕ್ರಮಗೊಂಡು ಹಾಕುತಾ | ದಮಿಸಿ ಕ್ರಮ ಈಡ್ಯಾಡಿ ಕುಟ್ಟಿರೆ 12 ಕೆಟ್ಟ ಹೊಟ್ಟವ ಹಾರಿಸಿ | ಶುದ್ಧ ಅಕ್ಕಿಯ ನೆಟ್ಟನೆ ನೀವು ವಡಗೂಡೀ 13 ಏಕೋ ದೇವಗೆ ಅರ್ಪಿಸ | ದಯದಿಂದ ದೇವ | ಬೇಕಾದ ಸುಖ ಕೊಡುವನು 14 ಸಾರಥಿ ಬಂಧು ಬಳಗವು ಯನಗಾಗಿ | ಸಲಹುವಾ ನಮ್ಮ ಎಂದೆಂದು ಸಿಂಹಾದ್ರೀಶನು 15
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವ ವಿಪತ್ ಪರಿಹಾರ ಸ್ತುತಿ ಕರ್ಮ ಫಲದಾತನು ಶೂನ್ಯ ಪ ವಾಹನ ಪತನ ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ ಏಕ ಕಾಲದಿ ಸಂಗ ಮರಣ ಸಂಭವಿಸುವುದು ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1 ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ ಮಂದ ಮಾರುತ ಪುಷ್ಪವನದಿ ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು ಹೀಗೆ ಜನ ಸಂಘದಲಿ ನಾನಾ ಸಂಭವವು 2 ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ ಹಿತಕರವೊ ಅಹಿತವೊ ಕರ್ಮಗತಿ ಸಂಭವವು ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3 ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು ಪ್ರವಹಿಸುವ ನದಿ ಹರಡುವ ದಾವಾಗ್ನಿ ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4 ಘೋರ ಭೂಕಂಪದ ಪೀಡೆಗೆ ಯೋಗ್ಯರು ಯಾರು ಯಾರೊ ಒಳ್ಳೆವರೋ ಕೆಟ್ಟವರೊ ಹರಿಯು ಆ ಜನರನ್ನು ಕಂಪನಕೆ ಒಳಮಾಡಿ ಮರಣಾಂಗ ಹೀನತೆಯು ರಕ್ಷಣೆಯು ಈವ 5 ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು ಭಿನ್ನ ಫಲಯೋಗ್ಯರು ಆದ ಕಾರಣದಿ ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6 ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ ಹಾನಿಗೊಳಿಸುವ ಕಂಪನಕೆ ಸಿಲುಕದಂತೆ ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7 ಸಿಂಧು ವಿಜ್ಞಾನಂದ ಹರಿಯೇ ಕರ್ಮಾಧ್ಯಕ್ಷನು ಕರ್ಮಫಲದಾತ ಕರ್ಮ ಕೊಡದು ಫಲ ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8 ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು ಐಹಿಕ ವಿಷಯಜವು ಉದಾನಿಸಿ ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9 ನರಜನ್ಮ ಹೊಂದಿದವ ಹರಿನಾಮ ಸರ್ವದಾ ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು ನರಪಶÀು ಜಡಮತಿ ಮೂಢನು ನುಡಿಯ 10 ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11 ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ ದೇಹ ಬೆಳಸುವ ಪೋಷಿಸುವ ರಕ್ಷಿಸುವನು ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12 ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ ಹರನು ಕೈಲಾಸ ವಾಸನು ಆ ತೀರ್ಥ ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ ಸತಿ ಪಾರ್ವತಿಗೆ ಎರೆದ 13 ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ ಬರೆಯುವ ಪಠಿಸುವ ಕೇಳುವ ಭಕ್ತರನ್ನು ಶ್ರೀರಮಾಯುತ ಹರಿ ಸುರವೃಂದ ಸಹ ಬಂದು ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14 ವರಾಹ ನರಸಿಂಹ ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ ಸದಾ ಶರಣು ಮಾಂಪಾಹಿ ಸಜ್ಜನರ 15
--------------
ಪ್ರಸನ್ನ ಶ್ರೀನಿವಾಸದಾಸರು
ಸರ್ವಾಂತರ್ಯಾಮಿ ನೀನೆ ಸರಿ ಸರ್ವಜ್ಞನು ಸ್ವಾಮಿ ಪ ಸರ್ವಶರೀರಕ ಸರ್ವನಿಯಾಮಕ ಅ.ಪ ಹರಿ ಕೊಡುವನು ಬಂದು ಹರಿಸುತನನು ಗುರಿಮಾಡಿದೆ 1 ಮನೆ ಕಾಣಿಸುವನು ಎಂದೂ ಜಾಣತನದಿ ಸಪ್ರಾಣರ ಮಾಡಿದೆ 2 ಕರದಪ್ಪುವನೆಂದು ಶರಣರ ಹರಣವನುಳುಹಿದೆ 3 ಶೈಲದ ಗುಹೆಯೊಳಗೆ ಮಲಗಿದ್ದ ನೃ ಪಾಲನ ಖತಿಯೊಳಗೆ ಮೇಲೆ ಶರಧಿಯೊಳಾಲಯ ಮಾಡಿದೆ 4 ದುರುಳ ಪುಲಿಯು ಬಂದು ಶರಣನ ಸಲಹಿದ ವರದವಿಠಲಹರಿ 5
--------------
ವೆಂಕಟವರದಾರ್ಯರು
ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸರ್ವೋತ್ತಮ ಸರ್ವಜೀವನ ಪ್ರಾಣ ಸರ್ವೋತ್ತಮ ಪರಿಪೂರ್ಣ ಸರ್ವೋತ್ತಮ ಧ್ರುವ ಸತ್ಯಜ್ಞಾನ ಅನಂತ ಬ್ರಹ್ಮ ಶ್ರುತಿ ಸಾರುತಲ್ಯದೆ ನೇಮ ಮತ್ಪಾತಕ ಹಿಡಿವುದು ಬರಿ ಭ್ರಮೆ ನಿತ್ಯನಾಗಿರೋ ಘನಮಹಿಮ 1 ಸರ್ವೋತ್ತಮ ಶ್ರೀ ಹರಿ ಸಾಕ್ಷಾತ ಪೂರ್ವಾಪರ ಪ್ರಖ್ಯಾತ ದೋರ್ವನು ತಾ ಘನಮಯ ಸದೋದಿತ ಸರ್ವಾನಂದಭರಿತ 2 ವಾಸುದೇವನೊಬ್ಬನೆ ಸರ್ವೇಶ ಭಾಸ್ಕರಕೋಟಿ ಪ್ರಕಾಶ ಭಾಸುತಲೀಹ್ಯ ವರ ಗುರುದೇವೇಶ ದಾಸ ಮಹಿಪತಿ ಪ್ರಾಣೇಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹಿಕೊಂಬವರಿಲ್ಲವೋ ವೆಂಕಟರಾಯ ಗೆಲುವ ಪರಿಯ ಕಾಣೆನು ಪ ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ ಅರಳಿಯ ವೃಕ್ಷದೊಳು ಆನೆಯ ತಂದು ಸ್ಥಿರವಾಗಿ ಕಟ್ಟಿದಂತೆ ದುರುಳರು ಬಂದೆನ್ನ ಕೊರಳು ಕೊಯ್ದೀಗ ಪರಿ ಇರವ ಕಾಣುತ ಮುಂದೆ 1 ಮಾಡಿದ ಉಪಕಾರವ ಮರೆತು ಮುಂದೆ ಕೇಡನು ನೆನೆವರಿಗೆ ನೋಡಿದೆ ಯಾತಕೆ ಮಾಡದೆ ಶಿಕ್ಷೆಯ ಆಡಿದೆ ನಿನ್ನೊಳು ಬೇಡ ಇನ್ನವರೊಳು 2 ವಾರಿಧಿ ತೀರದಲಿ ನೆಲ್ಲನು ತಂದು ಹಾರಿಸಿ ಬಿತ್ತಿದಂತೆ ಭವ ಘೋರ ಕಾನನದೊಳು ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ 3 ಒದಗಿದ ನ್ಯಾಯದಲಿ ಇದಿರು ಬಂದು ಕದನವ ಕಟ್ಟುತಲೆ ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ 4 ನೊಂದೆನು ಬಹಳವಾಗಿ ಈ ಭವದ ಸಿಂಧುವ ದಾಟಿ ಹೋಗಿ ಚಂದದಿ ನಿನ್ನಯ ಚರಣಾರವಿಂದವ ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ | ಸಲಹೆನ್ನ ಪರಮ ಗೇಹ್ಯಾ ಪ ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ | ಸಿಕ್ಕಿ ಬಹು ನೊಂದೆನೆಂದು | ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ | ಮಕ್ಕಳಂದದಲಿ ಚೆನ್ನಾಗೆನ್ನಾ 1 ಪಿಂತಿನಾ ಭವಣೆಗಳು | ಎಂತಾದರಾಗಲೀ | ಶಾಂತ ಮೂರುತಿಯೇ ಎನ್ನಾ | ಅಂತರಂಗದಲಿನ್ನು ನಿಂತು ನಿನ್ನಯ ರೂಪ | ಸಂತತವಾಗಿ ದೋರೋ ಬೀರೋ 2 ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ | ನಿನ್ನ ಪದಯುಗಳ ದೋರಿ | ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ | ಇನ್ನಾರೆ ದಯಮಾಡೋ ನೋಡೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ| ವಿನುತ ಪದಪಾವನಾ| ನೆಲಿಗೆ ಪಡೆದಿಹೆ ಕಾವನಾ| ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ 1 ಕರವ ದರಿತು ಶರಣವ ಬಂದೆನಾ| ಕೊರತೆ ನೋಡದೆ ಹಿಂದಿನಾ| ಅರಹು ಮತಿಯಲಿ ಮಂದನಾ| ಹರಿಯ ಸಾರ್ಥಕ ನರಜನುಮವನು | ಭರದಿ ಮಾಡು ನೀ ಇಂದಿನಾ 2 ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ| ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ| ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ| ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲ್ಲಾ ಸಲ್ಲಾ ಭಕುತಿಗೆ ಸಲ್ಲಾ ಸಲ್ಲಾ | ರತಿಯಿಲ್ಲದೆ ಡಾಂಭಿಕನು | ಬೆಲ್ಲದೊಳಗಿನ ಕಲ್ಲಿನಂದದಲಿಹನು | ಪರಿಪಾಕದಲ್ಯವ ದೂರಾಹನು | ಅವನೀಗ ಪ ಗುರುವಿನಂಘ್ರೀಯ ಕಂಡು | ಗುರುತಕ ಬಾರದೆ | ಧರಿಯೊಳು ವ್ಯಭಿಚಾರಿತೆರನಂದದಿ | ಗುರುಭಕ್ತನೆನುಸುವ ಗುರಶೇವೆಘೋದಲುವ | ಗುರುನಾಮ ಜಾಗಿಸುವನು ಯಲ್ಲರೊಳು | ಗುರುದಯ ದೋರಿಸು | ನಿಷ್ಠಿಗೆ | ಹುರುಳಿಲ್ಲ ಮಾನಿಸನು 1 ಎಲ್ಲಾ ಶಾಸ್ತ್ರವ ಕಲೆ ಬಲ್ಲವ ನಾನೆಂದು | ಸೊಲ್ಲು ಸೊಲ್ಲಿಗೆ ತನ್ನ ಹೊಗಳುತಲಿ | ಒಳ್ಳೆವರನು ಕಂಡು ಮನ್ನಿಸಿಕೊಳ್ಳದೆ | ನಿಲ್ಲದೇ ವಾದಿಸುವ ಅವರಾಚು ಸೊಲ್ಲಿಗೆ | ಸೊಲ್ಲಿಗೆ ಕುಂದಿಡುವ | ಆಚಾರ | ಕ್ಷುಲ್ಲಕತನದಿ ನೋಡುವಾ ಅವನಿಗೆ 2 ಘನ ಗುರು ಮಹಿಪತಿ ಸ್ವಾಮಿಯ ಸೂತ್ರದಿ | ಅನುವಾದಾ ಲಾಭಾ ಲಾಭಗಳೆನ್ನುತ | ಜನರಿಗೆ ಹೇಳುವಾತಾ ಹಾದಿತಪ್ಪುವಾ | ಧನ ಮದಾಂಧರ ಮನವಾ | ಹಿಡಿವುತ | ತನುಪರವಶ ಮಾಡುವಾ | ಸಿದ್ಧಾಂತ | ಅನುಭವ ನುಡಿಮರವಾ ಅವನೀಗ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಪ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ 1 ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ 2 ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಸಂಸಾರದೊಳ್ ಪ ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ ತಂದೆ ತಾಯಿಯು ಬಂಧು ಬಳಗವು ಸಂ ಬಂಧಿಗಳೆಲ್ಲರು ಸತಿಸುತರೂ ಎಂದಿಗು ರಕ್ಷಕರೆಂದು ನೀ ತಿಳಿದು ಮಂದಮತಿಯೆ ಮುಂದೇ ಕೆಡುವೆಯೊ 1 ದುರ್ವಿದಗ್ಧ ವಿಜ್ಞಾನನಾಗಿ ಗರ್ವಪಡಲೂ ಸುಪರ್ವರ್ ನಗರೇ 2 ಸತ್ಯವೆಂಬುವದು ಮಾತೃ ಪಿತನು ಸ- ರ್ವೋತ್ತಮ ಜ್ಞಾನವು ಭೂತದಯೆಯು ಸ- ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು 3 ನಡೆವುದು ಯಾತ್ರೆಯು ನುಡಿವುದು ಮಂತ್ರ ನಡೆಸುವನು ಎಂದು ಧೃಡವಾಗಿ ನಂಬದೆ4 ಧ್ಯಾನನದೀಯೊಳು ಸ್ನಾನಮಾಡಿಸು- ಶ್ರೀನಿವಾಸನ ಸೇವೆಯಿದೆನ್ನದೆ 5 ಮೂರು ವಿಧವಾದ ಜೀವ ಕೋಟಿಯೊ- ಳಾರು ನಾನೆಂದು ದೂರದೃಷ್ಟಿಯಿಂ ಧೀರ ನಾಗಿದರ ಪರವ ಗಾಣದೆ 6 ನೀಮನವಲಿದು ವ್ಯರ್ಥನಾದೆ ನಾಮಾ ಜಪಿಸೀ ಕಾಮಿತ ಪಡಿಯದೆ 7
--------------
ಗುರುರಾಮವಿಠಲ
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು