ಒಟ್ಟು 11932 ಕಡೆಗಳಲ್ಲಿ , 136 ದಾಸರು , 6615 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನೇ ನಂಬಿದೆನಯ್ಯಾ ಪ ನಿನ್ನನೇ ನಂಬಿದೆನಯ್ಯಾ | ಎನ್ನ ಬಿಡದಿರು ಕೈಯ್ಯಾ | ಬೀರೆಲೋದಯಾ 1 ತರಳ ತಾಯಿಯಲ್ಲದೆ | ನೆರೆಹೊರೆಯ ಬಲ್ಲದೇ | ಮರಳು ಮಂದನೆನ್ನದೆ | ಅರಹು ಕೂಡಿಸೋ ತಂದೆ 2 ಹೋದೆಣಿಕೆಯ ಬಿಟ್ಟು | ಪಾದಸ್ಮರಣೆ ಕೊಟ್ಟು | ಸಾಧುಸಂಗದಲಿಟ್ಟು | ಬೋಧಾಮೃತವನಿಟ್ಟು 3 ಜ್ಞಾನ ಭಕುತಿ ಇಲ್ಲಾ ಮೌನ ಸಾಧನವಿಲ್ಲಾ | ಏನೇನು ಸಾಧನವಿಲ್ಲಾ | ನೀನು ಪೇಕ್ಷಿಸುದಲ್ಲಾ4 ಗುರು ಮಹಿಪತಿ ಸ್ವಾಮೀ | ಶರಣರ ರಕ್ಷಕ ನೇಮಿ | ಸುರಮುನಿಜನ ಪ್ರೇಮಿ | ಹೊರಿಯೋ ಸಾಸಿರ ನಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನನೇ ನಂಬಿಹೆನೋ ಶ್ರೀನಿವಾಸಾಪನ್ನಗ ನಗಧೀಶ ಉದಯಾದ್ರಿ ವಾಸಾ ಪ ನಿತ್ಯ ನೂತನ ಮಹಿಮ ಎತ್ತ ನೋಡಿದರತ್ತ ಮುಕ್ತ ಜನ ಸೇವ್ಯಾ |ಕೀರ್ತಿ ಭವ್ಯ ವಿಶಾಲ ವರ್ತಿಪುದು ಸದಾಕಾಲಆರ್ತವರಿಗಪವರ್ಗ ಮೋಕ್ಷಮಾರ್ಗಾ 1 ಸೇವ್ಯ ಸೇವಕ ಭಾವ ದಿವ್ಯ ಸುಜ್ಞಾನವನುಪ್ರೀತಿಯಿಂದೆನಗಿತ್ತು ಕಾಯಬೇಕೋ |ಪ್ರೇರ್ಯ ಪ್ರೇರಕ ನೀನೇ ಕಾರ್ಯ ಕಾರಣ ಕರ್ತೃಭಾರ್ಯರಿಂದೊಡಗೂಡಿ ವೀರ್ಯಪ್ರದನಾಗೋ 2 ಸೃಷ್ಠಿ ಸ್ಥತಿ ಸಂಹಾರ ಅಷ್ಟಕರ್ತೃಸ್ವಾಮಿನಷ್ಟ ಗೈಸಜ್ಞಾನ | ಇಷ್ಟ ಮೂರ್ತೇದಿಟ್ಟ ಗುರು ಗೋವಿಂದ | ವಿಠಲನೆ ಮದ್ ಹೃದಯಅಷ್ಟ ಕಮಲದಿ ತೋರೋ | ಶಿಷ್ಟಜನಪಾಲಾ 3
--------------
ಗುರುಗೋವಿಂದವಿಠಲರು
ನಿನ್ನನೇನು ಮರೆಹೊಕ್ಕೆನು ಪ ನಿನ್ನನೇ ನಾ ಬೇಡ್ವೆನುಅ.ಪ ದುರಿತ ಶರಧಿ ನಿತ್ಯಾನಂದನೆ 1 ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ 2 ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ 3 ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ 4 ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ 5
--------------
ಬೆಳ್ಳೆ ದಾಸಪ್ಪಯ್ಯ
ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ ಎನ್ನ ನೀ ಕಾಯಬೇಕೊ ಪ ದೀನದಯಾಳು ದೇವ ನೀನೆ ಕಾಯದೆ ಬಿಟ್ಟ ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ ಉನ್ನತ ಹೃದಯನೆ ಮುನ್ನ ನಾ ಮಾಡಿದ ಗನ್ನಗತಕತನವನ್ನು ದಯದಿ ಕ್ಷಮಿಸು ಇನ್ನೀಭವದಿ ಎನಗೆ ನಿನ್ನಯ ಸನ್ನುತಿ ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ 1 ಶರಣಾಗತರಕ್ಷಣಾನಾಥಜನಬಂಧುವೇ ಕರುಣದಿ ನಿಮ್ಮಂಥ ದೇವರನುಕಾಣೆ ದುರಿತದೂರನೆ ಎನ್ನ ದುರಿತದುರ್ಗಣವನ್ನು ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ 2 ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ ದಯ್ಯ ಶ್ರೀರಾಮ ವಿಜಯವಿಠಲರಾಯ ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ ಜೀಯ ದಯದಿ ಕಾಯೊ ಪಂಢರಿರಾಯ 3
--------------
ರಾಮದಾಸರು
ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ ಇನಚಂದ್ರ ಮಂಗಳಬುಧಗುರು ಭಾರ್ಗವ ಶನಿರಾಹುಕೇತು ನವಮಹರ್ದಶನು ನೀನೆ ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ ದೊನರುಹ ಭುವನಂಗಳಾಳುವವ ನೀನೆ 1 ನಕ್ಷತ್ರಯೋಗಾದಿಕರಣಂಗಳು ನೀನೆ ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2 ಪರಮವೇದ ಪುಣ್ಯಪುರಾಣಕಥೆ ನೀನೆ ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3
--------------
ರಾಮದಾಸರು
ನಿನ್ನವಗುಣ ಜರಿದು ಎನ್ನ ಮನವೇ | ನಿನ್ನವಗುಣ ಜರಿದೆನ್ನ ಮನವೇ | ಶಿರಿ | ಪನ್ನಗಾದ್ರೀಶನಾ ಕೂಡೋ ಸುಖ ಸೂರ್ಯಾಡೋ ಪ ಕೆಲವು ಪುಣ್ಯವನೇ ಮಾಡಿ | ನರದೇಹದಲ್ಲಿ | ಇಳಿಯೊಳಾಗ್ರದಲಿ ಮೂಡಿ | ಹಲವು ಹಂಬಲಿಂದ ಗೆಳೆಯರೈವರ ಛಂದಾ | ಬೆಳೆಸಿ ಸದ್ಗುಣ ಬಿಡುವರೇ ಅಂಧರಾಗುವರೇ 1 ಮರಹು ಮನೆಯನೆ ಸೇರಿ | ಮಂದತನದೀ | ಅರಿವ ಪಂಥದಲಿ ಜಾರಿ | ಅನುದಿನ | ಕೊರವನಾ ಕೋಡಗದಂತೆ ಕುಣಿದುಚಿತೆ 2 ಒಂದೇ ನಿಷ್ಟೆಯಾ ವಿಡಿದು | ಸದ್ಭಾವದಿಂದಾ | ದುಂದುಗಾವೃತ್ತಿ ಕಳೆದು | ತಂದೆ ಮಹಿಪತಿದಯಾ ನಂದ ಪಡೆದು | ನಿನ್ನಾ ಬಂದ ಸಾರ್ಥಕದಿ ಬಾಳು ಮುನ್ನಿನ ಕೇಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ. ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ 1 ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ 2 ಗದುಗಿನನೊಳ್ಮೆರೆವ ವೀರನಾರಾಯಣಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ 3
--------------
ವೀರನಾರಾಯಣ
ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ ಭಕುತ ವತ್ಸಲ ಕೃಷ್ಣಾ ಪ ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ ಕವಿತದನುಡಿಯ ಚಾತುಯ್ರ್ಯವಿಲ್ಲಾ ತವಚರಣವನಂಬಿ ಅವನಿಯೋಳಗನಿಶಿ ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1 ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ ಉನ್ನತ ದ ವ್ಯತಶೀಲ ಕರ್ಮವಿಲ್ಲಾ ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ ನಿನ್ನವರಪರಿಚಾರ ತನದಲ್ಲಿ ರಮಿಸುತಾ 2 ಮರೆದೊಮ್ಮೆನೆನೆದರೆ ಸರಿವದಘರಾಶಿ ಅರಿದೊಮ್ಮೆನೆನೆಯಲು ಗತಿಸಂಪದಾ ದೊರೆವುದೆನುತಶೃತಿ ನಿರುತ ಸಾರುತಲಿದೆ ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನವರ ಸಂಗ ಎಂತಹದಯ್ಯಾ ಅನಂತ ಜನ್ಮದ ಪಾಪ ಪುಂಜರ ನಾನು ಪ ಬಾರೆ ಸುಜನರ ಮನಕೆ ತಾರೆ ಗಂಗೋದಕವ ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ1 ಏಕಾದಶಿ ದಿನ ಬೇಕೆಂದು ಮನವಿಟ್ಟು ಪಾಕನ್ನ ಮಾಡಿಸುವನೊ ನೇಕಪರಿ ಮಾಡಿಸುವನೊ ಪೋಕತನದಲ್ಲಿ ವಿವೇಕ ರÀಹಿತನಾಗಿ ಗೋಕುಲವ ಹಳಿದು ಕೋ ವಾರೆವಿದ್ದವನಿಗೆ2 ಪರರ ವಡವೆಯ ನೋಡಿ ಧರಿಸಲಾರದೆ ಮನ ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ- ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ ಮರಳಿ ಜನಗಳಲ್ಲಿ ಜನಮವಾಗುವನಿಗೆ 3 ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ ಮತಿಹೀನವಾಗಿ ಭ- ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ ಚತುರೋಕ್ತಿಯಲಿ ನೆನೆಸಿ ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ 4 ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ ಹಾದಿಯನು ತಿಳಿತಿಳಿದು ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ5 ದುರ್ಧನಕೆ ಕೈಕೊಡುವೆ | ಮೊದಲೆ ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ ಕ್ಷಣವಾದರು ತನುವಿನ ಕ್ಲೇಶದಲಿ ದಿನವ ಹಾಕಿದೆ ವ್ಯರ್ಥ ದಣಿದಣಿದು ಈ ಪರಿಯನು ಮಾಡಿದವನಿಗೆ 6 ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು ಕೆಟ್ಟ ಬಾಳಿದೆ ಧರಣೀಲೀ ಸುಟ್ಟ ಸಂಸಾರದೊಳು ಸಟಿಯಾಡಿ ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ 7
--------------
ವಿಜಯದಾಸ
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ಪ ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ ಅನುಗಾಲವೂ ಕಾಯೋ ಅನುಪಮ ಚಿಂತನ 1 ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2 ಕದರೂರು ಹನುಮೇಶ ಹಸನ್ಮುಖವಿಠಲನ ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3
--------------
ಮಹಾನಿಥಿವಿಠಲ
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು