ಒಟ್ಟು 8611 ಕಡೆಗಳಲ್ಲಿ , 132 ದಾಸರು , 4839 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಮನಿ ಮನಿಗೆ ಗುರುಭಕ್ತರಾದವರು | ಜಗದೊಳಗೆಲ್ಲಾ | ಘನ ನೆಲೆ ಕಂಡವರೊಬ್ಬರಿಲ್ಲಾ ಪ ಗುರು ಸ್ವರೂಪರಿಯದೆ | ನರಭಾವ ಮರಿಯದೆ | ಗುರು ಭಕ್ತಿ ಶೀಲಾ ತಾ ತಿಳಿಯದೇ 1 ಸಂಪ್ರದಾಯಕರು ಯನಿಸಿಕೋಬೇಕು | ಯಂದು ಬಯಸೀ | ಕ್ಷಿಪ್ರದಿ ಮಂತ್ರವ ಕೊಂಬರು ಅರಸಿ 2 ಸುರಸ ಮಾತಾಡಿದರ | ಗುರುಯಂದಿರುತಿಹರು ಸಾರೆ | ಬಿರುನುಡಿಕೇಳಲು ತೊಲಗುವರು ಬ್ಯಾರೇ 3 ಮೊಲೆ ಬದಿಯೊಲುಣ್ಣಿ | ಮೊತ್ತಾ ಇರುವಂತೆ ನೋಡಿಸತ್ಯಾ | ನೆಲೆ ಭಕ್ತಿಯೆತ್ತಾ ತಾನಿವ್ಹನೆತ್ತಾ 4 ಹುರಡೆ ಡಾಂಭಿಕದಿಂದಾ | ಚರಿಸಿದರೇನು ಛಂದಾ | ಗುರುಮಹಿಪತಿ ಪ್ರಭು ನೆಲಿಯಲಿ ಯಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜದನುಜ ರಿವರೆವೆ ನೋಡಿ | ದನುಜನು ದೈತ್ಯರೊಳೆನ ಬ್ಯಾಡಿ ಪ ಹರಿ ನೆನೆಯುತ ಹರಿಕಥೆಗಳ ಕೇಳುತ | ಹರಿ ಭಕುತಿಗೆ ಬೆರೆದವ ಮನುಜಾ | ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ | ಬರಿದೆವೆ ದಿನಗಳೆವವ ದನುಜಾ 1 ಪರರ ಸದ್ಗುಣ ವಾಲಿಸಿಕೊಳುತಲಿ | ಸಕ | ಲರಿಗೆ ಮನ್ನಿಸುವವನೇ ಮನುಜಾ | ಗರುವ ಹಿಡಿದು ತನ್ನ ಹೊಗಳುತ ಅನ್ಯರ | ಬರಿದೆ ನಿಂದಿಸುವವನೆ ದನುಜಾ 2 ಪಥ | ಸರ್ಕನೆ ತಿಳಿದವ-ನೆವೆ ಮನುಜಾ | ಮೂರ್ಖತನ ಹಿಡಿದು ಸಾಧು ಸಂತರಲಿಕು | ತರ್ಕವ ಮಾಡುವವನೆ ದನುಜಾ 3 ಹುಟ್ಟಿದರಲಿ ಸಂತುಷ್ಟದಿ ಕವಳವ | ನಿಷ್ಠೆಗೆ ತಾರದವನೆ ಮನುಜಾ | ನೃಪರ ನಂಬಿ ಲಾಭಾ ಲಾಭ ಕೊಡುವ | ಸೃಷ್ಟೀಶನನು ಮರೆತವ ದನುಜಾ 4 ತಂದೆ ಮಹಿಪತಿ ಭೋಧವ ಮನದಲಿ | ತಂದು ಹರುಷವ ಪಡುವವ ಮನುಜಾ | ದಂದುಗ ಚಿತ್ತದಿ ಹೇಳಿದ ಮಾತಿಗೆ | ಸಂದೇಹ ಬಟ್ಟವನವ ದನುಜಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ಮನೆ ಮನೆಯು ಹರಿಯ ಆಲಯವಾಗಬೇಕು ಪ ಜನಗಳು ಸದಾಚಾರ ಶೀಲರಾಗಬೇಕು ಅ.ಪ ಭೂತ ಸರ್ಗದಲಿ ಹೊಸ ನೀತಿಗಳ ಕಲ್ಪನೆಯು ಘಾತಕವು ಲೋಕಹಿತಕೆಂದರಿಯದೆ ಜಾತಿ ಬೇಡೆನ್ನುವರ ರೀತಿನೀತಿಗಳು ಆ ಪಾತರ ರಮಣೀಯವೆಂಬುದ ತೋರಬೇಕು 1 ಅಸ್ತವಾಗಲಿ ಜಾತಿ ಮತ ಭೇದವೆಲ್ಲವು ಸ್ವಸ್ಥವಾಗುವುದೆಂದು ಭಾರತವು ಎನ್ನುವರು ಮಸ್ತಕದಿ ಕರವಿಟ್ಟು ಕುಳಿತುಕೊಳ್ಳುವ ತೆರದಿ 2 ಬಹುಮತವು ಎಮ್ಮದೆಂಬುವ ಮದವು ಬೆಳೆಯುತಿರೆ ಸಹನವೇ ಸಾಧುಜನಗಳಿಗೆ ಶರಣ ಇಹಪರಗಳಲ್ಲಿಯೂ ಪ್ರಸನ್ನ ಹರಿ ಸಲಹುವನು ಕುಹಕ ಮಾರ್ಗವು ಬೇಧ ಸಹಜ ಧರ್ಮಗಳಿಂದ 3
--------------
ವಿದ್ಯಾಪ್ರಸನ್ನತೀರ್ಥರು
ಮನೆಗೆ ಬಾರೋ ರಂಗ ಮನಸಿಜಯ್ಯನೆ ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ ಮನಗೆ ಬಾರೋ ರಾಮ ಅ.ಪ ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ ಮನ ದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ ಧನವು ನಿನ್ನದು ಎನ್ನ ಘನವು ನಿನ್ನದು ರನ್ನ 2 ದರಹತಿತಾನನ ಸರಸಿಜನಯನ ವರದವಿಠಲ ಪುಲಿಗಿರಿ ವರಸದನ 3
--------------
ವೆಂಕಟವರದಾರ್ಯರು
ಮನೆಗೆ ಬಾರೋ ರಂಗ-ಮನಸಿಜನಯ್ಯನೆ ಕಣ್ಣಿನೊಳಗೂ ನಿನ್ನನೆನಹು ಬಿಡದುಯನ್ನ ಪ ಮನೆಗೆ ಬಾರೋ ರಂಗ-ಮನೆಗೆ ಬಾರೋ ಕೃಷ್ಣ ಮನೆಗೆ ಬಾರೋ ರಾಮ ಅ.ಪ ಮನೆಗೆ ಬಂದರೆನಿನ್ನ ಮಹಿಮೆಯ ಪಾಡುತ ಮನದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಯನ್ನ ತನುವು ನಿನ್ನುದು ಮುನ್ನ ಧನವು ನಿನ್ನದುಯನ್ನ ಘನವು ನಿನ್ನದು ರನ್ನ 2 ದರಹಸಿತಾನನ-ಸರಸಿಜನಯನ ವರದವಿಠಲ ಪುಲಿಗಿರಿವರಸದನ 3
--------------
ಸರಗೂರು ವೆಂಕಟವರದಾರ್ಯರು
ಮನೋಮಲಹರವಾಗುದು ಗುರು ಬೋಧದಿಂದ ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಧ್ರುವ ಅಂತರಂಗವು ನೋಡಿ ಜರೆವದು ಬಹಿರವಿ ಬೆರೆದು ನೋಡಿಲು ಘನವಸಂತವು ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ 1 ಸಾಧನವ ಮಾಡಿ ಸದ್ಗತಿಯಕಾಂಬೋದವು ಧನ್ಯ ಧನ್ಯವಾಹುದು ಙÁ್ಞನುಪದೇಶಲಿ ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ ಇದೇ ಸದ್ಗುರು ಕೃಪೆಯಯ್ಯ2 ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ ಗುರುಪಾದ ಹೃದಯದಲಿ ಸಾಳಂಗವನು ಮಾಡಿ ಪಾವನ್ನವಾದ ಮಹಿಪತಿ ಗುರುವಿನ ಪಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ
ಮನ್ನಿಸ್ಯಾದವಾ ಮಮತೆಯಿಂದಾಲೆನ್ನ ಮಾಧವಾ ಪ. ನೀರಜಾಕ್ಷನೆ ಪಾಲಿಸು ಜಗದ್ಭರಿತವಾಸನೆ ಮೂರುದಿನದ ಬಾಳ ನೆಚ್ಚಿ ಘಾಸಿಯಾದೆನು ನಾರಾಯಣ ನಿಮ್ಮ ನೆನೆವೆನನುದಿನಾ 1 ಬಿಸಜನೈಯ್ಯನೆ ಶ್ರೀತುಲಸಿಮಾಲಾ ಭೂಷÀನೆ ಹಸಿವು ತೃಷೆಯು ನಿದ್ರೆಯಿಂದಾ ಹೊತ್ತುಗಾಣೆನೈಯ್ಯಾ ದೆಸೆಗೆದೆಸೆಗೆ ಇಂದ್ರಿಯಗಳು ಎಳೆದು ಕಾಡುತಾರೈಯ್ಯಾ ವಸುಧಿಗೊಡೆಯ ನಿಮ್ಮ ನೆನೆಯದೆ ಮುಗ್ಧಳಾದೆನು 2 ದುರಿತನಾಶನೆ ಪಾಲಿಸು ಜಗದ್ಭರಿತವಾಸನೆ ನಿರುತ ವ್ಯಾಧಿಯಿಂದ ಮಂದಳಾದೆನು ಸರ್ವೇಶನೆ ಮರುತನಂತೆ ಮನಸ್ಥಿರವ ಮಾಡಿಸೋ ಲಕ್ಷ್ಮೀಶ ಕರ್ತೃ ಹೆಳವನಕಟ್ಟೆ ವೆಂಕಟೇಶನೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮನ್ಮನೋಜ್ಞಾ ಮನ್ನಿಸಿಲ್ಲಿಗೇ ಪ ಕಷ್ಟ ಪರಂಪರೆ ಕಳೆಯುವಾ ಇಷ್ಟಮೂರ್ತಿ ನಿನ್ನ ನೋಡದಾ 1 ಸಾಧುಗಳು ಸಾಧಿಸುತ್ತಿಹಾ ವೇದವೇದ್ಯ ಧನ್ಯನಾಗದಾ 2 ಪ್ರೇಮ ರೂಪಾ ಜಾಜೀಕೇಶವಾ ಸ್ವಾಮಿನಿನ್ನ ಪಾದಸೇರದಾ 3
--------------
ಶಾಮಶರ್ಮರು
ಮರಣ ಕಾಲವ ತಿಳಿಸೋ ಮಧುಸೂದನಾ ಪ ಶರಣು ಬಂದವರ ಭಯಹರಣಾ ಅ.ಪ. ಸ್ನಾನಮಾಡಲಿಬೇಕು ಮೌನದಿಂದಿರಬೇಕು ಹರಿಜ್ಞಾನಪೂರ್ವಕ ಹರಿಯ ಧ್ಯಾನಬೇಕುನಾನಾ ವಿಷಯದ ಚಿಂತೆ ಮಾನಸದಿ ಬಿಡಬೇಕುದಾನ ಧರ್ಮಗಳನು ಮಾನಸದಿ ಮಾಡಬೇಕು 1 ಸುತ್ತಲು ಜನರುಗಳ ಹತ್ತಿರ ಕೂಡುತಲಿನಿತ್ಯ ಭಾಗವತಾದಿ ಶಾಸ್ತ್ರಗಳನುಮೃತ್ಯು ಕಾಲದಿ ಪರಿಸೆ ಶ್ರೋತ್ರದಿಂ ಕೇಳಿ ಯಮ-ಭೃತ್ಯರು ಓಡಲಿಬೇಕು ಎತ್ತಿ ಕಾಲುಗಳು 2 ಮಕ್ಕಳು ಮನೆಗಳಲಿ ಚಿಕ್ಕ ಯುವತಿಗಳಲ್ಲಿಮಿಕ್ಕಾದ ಪಶು ಕೃಷಿ ರೊಕ್ಕಗಳಲ್ಲಿಪೊಕ್ಕಿ ಮನಸಿಲಿ ವಿಷಯ ಸಿಕ್ಕಿ ತೊಡಕೆನೊ ಎನ್ನವಕ್ರವಾ ತೋರಿಸುತ ಮೆಲ್ಲ ಕೈ ಬಿಡಿಸಿನ್ನು 3 ಕಮಲ ಮಂದಹಾಸವ ತೋರೋಸಿಂಧು ಉದ್ಧರನೆ ವೃಂದಾವನೀಯೋ 4 ಸಿಂಧುವಿನ ತಟದಿ ಗೋವೃಂದದೊಳಗೆ ಚಂದದಲಿ ಕೊಳಲೂದೋ ಸುಂದರ ಮುಖ ಕಮಲಒಂದೇ ಮನದಲಿ ನೋಡಾನಂದದಲಿ ಮಾಡೋಇಂದಿರೇಶ ನಿನ್ನ ಮುಂದೆ ನಿಂತಿರುವಾನಾರಂದ ಮುನಿ ಗುರುವರ ಮಂದಸ್ಮøತಿ ನೀಡೋ 5
--------------
ಇಂದಿರೇಶರು
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು