ಒಟ್ಟು 381 ಕಡೆಗಳಲ್ಲಿ , 64 ದಾಸರು , 367 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೌರಿ ವಿಮಲಾಂಬರಧರ ಪಾಹಿ ಮುರಾರಿ ಪ ಸುಮನಸನುತ ಪದದನುಜ ಸಂಹಾರಿ ಅ.ಪ ಸರಸಿಜಲೋಚನ ಶರಣಸಂಜೀವನ ಸುರಮುನಿಸೇವನ ಕರುಣಾಸದನ ಅರವಿಂದಾನನ ವರಮಣಿರದನ ದುರಿತವಿಮೋಚನ ನಿರುಪಮ ಗಾನ 1 ಪುರಹರ ವಿನಮಿತ ಪಾವನಚರಿತ ಧರಣಿರಮಾಯುತ ಸುರಮುನಿವಿನುತ ಫಣಿ ಫಣಿಭೂಷಿತ ಮುರಳೀಧರ ಮಾಂಗಿರಿ ಶೃಂಗಸ್ಥಿತ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರದ್ಧಾ ಪಾಲಿಸೇ ಮಾತೇ | ನಂಬಿದೆ ಶೇಷಾರುದ್ರಾದಿ ಸುರ | ವಿನುತೇ ಪ ಉದ್ಧರಿಸುವುದೆನ್ನ | ಅವಿದ್ಯವ ನೀಗಿ ಹೇಬುದ್ಯಭಿಮಾನಿ ಸ | ದ್ಬುದ್ಧಿ ಪ್ರದಾತೇ ಅ.ಪ. ಪುತ್ಥಳಿ ಬೊಂಬೆ 1 ಕೃತಿ ಕುಮಾರಿ | ಬ್ರಹ್ಮಮಾನಸಮಂದಿರೆ ಸಜ್ಜನೋದ್ಧಾರಿ ||ಚಂದಿರೆ ಎನ ಮನ | ಮಂದಿರದಲಿ ಬಲುಸುಂದರ ಶ್ರೀ ಗೋ | ವಿಂದ ಪಾದಾಬ್ಜವತೋರೆ - ಹೇ ನೀರೆ - ವೈಯ್ಯಾರೆ | ಸದ್ಗುಣಗಣ ಗಂಭೀರೆ 2 ನಿತ್ಯ ಕಲ್ಯಾಣೀ ||ಚತುರ ಮೂರುತಿ ಗುರು | ಗೋವಿಂದ ವಿಠಲನಸತತ ಭಜಿಪ ಮತಿ | ಸುಸ್ಥಿರದಲಿ ಕೊಡುನೀನೆ - ಬಲು ಜಾಣೆ :ಎನ್ನಾಣೆ | ಪತಿತ ಪಾವನ್ನೇ 3
--------------
ಗುರುಗೋವಿಂದವಿಠಲರು
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ ನಿತ್ಯ ಅಜಾತಾ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ 1 ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ 2 ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ 3
--------------
ವಿಜಯದಾಸ
ಶ್ರೀ ಕೃಷ್ಣ ಚರಿತ್ರೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1 ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು| ಮನದಲಿ ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2 ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3 ಪದ್ಯ ಭಾರ ಆಘೋರದುಃಖವನು ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ| ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1 ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ ಕೃಷ್ಣನಾಗಿ ಹುಟ್ಟುವಾ1 ಪದ ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ ಭಾವದಲಿ ಜನಿಸಿದರು| ಈ ವಸುಧಿಯೊಳಗವರು ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ| ದೇವ ಪೂಜಕನು ವಸುದೇವ ತಾ ಪ್ರೀತಿಯಲಿ ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ|| ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ| ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1 ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ| ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2 ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ| ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3 ಪದ್ಯ ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ| ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1 ಪದ, ರಾಗ:ಆನಂದಭೈರವಿ ಆದಿತಾಳ ಬೇಡಲೊ ನೋಡಿ ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ ಯಾಕೆಕೊಲ್ಲುವಿಯೋ ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1 ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು ತಿಳಿದು ನೋಡು|| 2 ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು| ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3 ಆರ್ಯಾ ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು ಶೌರಿಯು ಹೀಗೆ || 1 ಪದ, ರಾಗ:ಅನಂದ ಭೈರವಿ ತಾಳ:ಆದಿ ಬೇಡಿದ್ದು ಕೊಡುವೆನು ನಾನು| ಪ ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು ಇನ್ನು ದಾವುದು ಸರಿಯದು || 1 ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ ಕೊಟ್ಟುಬಿಡುವೆನು ಕೇಳು || 2 ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3 ಪದ, ರಾಗ:ಯರಕಲಕಾಂಬೋಧಿ ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ ನಾರಿಯ ಕರಕೊಂಡು ||1 ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ| ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು ಈ ಪರಿಯು || 2 ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು ಇದು ಎಂದು || 3 ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು ಆಗಲ್ಲೆ ಕಂಸ ಇದ್ದಲ್ಲೆ || 1 ಮಾಡಿದಾ | ಮಾತನಾಡಿದಾ|| 2 ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3 ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ| ನಿನ್ನ ಕೊಲ್ಲುವಾ|| 4 ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5 ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ ವಸುದೇವಾದಿಗಳು | ದೇವತಿಗಳು|| 6 ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ ಅನುಸರಿಸೆ ಇರುವುವರು | ಅಸುರರೇ ಅವರು|| 7 ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8 ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ ಕೊಲ್ಲುವನೆಂಬುದದು |ನಿನಗೆ ತಿಳಿಯದು || 9 ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ|| ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1 ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ ಯೂದವರನ್ನು ಬಹುಪೀಡಾ ಬಡಿಸೀದಾ || 1 ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2 ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ| ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3 ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು ರೋಹಿಣಿ ಗರ್ಭದೊಳಿಟ್ಟಳು|| 4 ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5 ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6 ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ ಪಂಜರದೊಳಿರಲು ತೇಜಃ ಪುಂಜಳಾದಳು7 ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8 ಪದ:ರಾಗ:ಶಂಕರಾಭರಣ ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1 ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ತುಳಸಿ ಸ್ತುತಿಗಳು ಇಂದಿರೇಶನ ಅರ್ಧಾಂಗಿ ಬೃಂದೆ ಪಾಲಿಸು ಪ ಸಿಂಧುಶಯನನೊಡನೆ ಬಂದು ಮಂದಹಾಸವನೀಡು ಅ.ಪ ದೇವಿ ನಿನ್ನ ಕೃಪೆಯನೆಳಸಿಭಾವ ಭಕ್ತಿಯಿಂದ ಭಜಿಸಿ ಪಾವನಾಂಘ್ರಿಗಳಿಗೆ ನಮಿಸಿ ಕಾವುದೆಂಬೆವು ತಾಯೆ ತುಳಸಿ 1 ಕಾಮಿತಾರ್ಥದಾತೆ ಮಾತೆ ಪ್ರೇಮಪೂರ್ಣ ಜಗವಿಖ್ಯಾತೆ ಸೂರ್ಯ ವಿನುತೆ ಚರಿತೆ ಭಾವೆ ಮಾಂಗಿರೀಶ ದಯಿತೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಮಹಾದೇವರ ಸ್ತೋತ್ರ ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು ಪೊರೆ ಮಹಾದೇವ ಪ ನಂದಿವಾಹನ ಸುರವೃಂದ ಸುಪೂಜಿತ ಇಂದ್ರವಿನುತ ಭಕ್ತಾನಂದದಾಯಕನೇ 1 ಶುಂಡಾಲ ಮದಹರ ಚಂಡವಿಕ್ರಮ ಮೃಕಂಡಜ ವರದ 2 ಭೂಜಗ ವಿಭೂಷ ವಿಜಯ ಸುಪೋಷ ಅಜಿನಾಂಬರಧರ ತ್ರಿಜಗವಂದಿತನೆ 3 ಗರಕಂಧರ ಹರ ಸುರಗಂಗಾಧರ ಸ್ಮರಸಂಹರ ನಿಜ ಶರಣರಪಾಲ 4 ವರದೇಶ ವಿಠಲನನಿರುತದಿ ಸ್ಮರಿಸುವ ಕರುಣಾಕರಭವಹರ ಶಂಕರ ಶಿವ 5
--------------
ವರದೇಶವಿಠಲ
ಶ್ರೀ ಮಹಾದೇವರು ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ 1 ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ 2 ಸಿರಿರಮಣ ಶಾಮಸುಂದರ ವಿಠಲ ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ 3
--------------
ಶಾಮಸುಂದರ ವಿಠಲ
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಶ್ರೀ ವಾದಿರಾಜರು ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ. ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1 ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2 ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3
--------------
ರಮಾಪತಿವಿಠಲರು
ಶ್ರೀ ಸಂತಾನ ಗೋಪಾಲಕೃಷ್ಣ 141 ಗೋಪಿ ವಿನುತ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ 1 ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ 2 ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು 3 ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆÀಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ 4 ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ 5 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯಬೋಧರು ನೋಡಿದೇ | ಗುರುವರರ ನಾ ನೋಡಿದೇ ಪ ಪಾದ | ಈಡಾಡಿ ಶಿರವನುಬೇಡೆ ಭಕ್ತಿ ಜ್ಞಾನ ನೀಡುತ ಪೊರೆವರ ಅ.ಪ. ಪಾದ ತಾಮರಸವ ಧರಿಸಿಭೂಮಿಯೊಳಗೆ ಚರಿಸಿ | ಮೆರೆಸಿದ ಗುರುಗಳ 1 ಶೇಷರೂಪಿಲಿ ಬಂದ ಹರಿಯಾ | ಗುಪ್ತಭಾಷೆಯ ಕೇಳುತ್ತ ಗೃಹವಾ | ಪೊಕ್ಕುಮೀಸಲೆಂದೆನಿಸಿದ ಧನವಾ | ಲೇಸಾಯಾಸಿಲ್ಲದೆ ತೆಗಿಸ್ಯದನಾ | ಆಹಏಸೇಸೋ ಜನುಮದಿ | ಪೋಷಿಸಿರೂವದನಶ್ರೀ ಶಗರ್ಪೀಸುತಲಿ ತೋಷವ ಪಡಿಸಿದರ 2 ವಿನುತ ಗುರುಗೊವಿಂದ ವಿಠಲನಪಾದ ಪಿಡಿದು ಸವಣೂರಲಿ ಮೆರೆವರ3
--------------
ಗುರುಗೋವಿಂದವಿಠಲರು
ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ ಮಾನವ ಪ. ಶ್ರೀಕರಗುಣಯುತ ಪಾಕಶಾಸನವಿನುತ ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ. ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ [ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್ ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ1 ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ ಪೊಡವೀಶನಡಿಗಿತ್ತ ತೊಡವಾವುದದ ಪೇಳ್ ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ 2 ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ ಘನದಾಕೋಪವನು ತಾಳಿ ದನುಜನ ಉರವ ಸೀಳಿ ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಗದಾಧರ ಪಾಹಿಮಾಂ ಹರೆ ಭೋಗಿಶಯನ ಶೌರೇ ಪ ಯಾಗ ಯೋಗ ಗಮ್ಯ ನೃಹರೆ ತ್ಯಾಗಶೀಲ ಭೋ ಮುರಾರೆ ಅ.ಪ ಮೃತಮಾನವ ಸುಗತಿ ದಾತಾ ಪತಿತಾನತ ದಿವ್ಯ ನೀತ ಹರಣ ಖ್ಯಾತಾ ತಾಪ ಸನ್ನುತ ಚರಿತಾ 1 ಶೃತಿ ಪುರಾಣ ಭರಿತ ವಿದಿತ ರಥಾಂಗ ಮಣಿರಂಜಿತ ವಿನುತ ನಮಿತ ಖ್ಯಾತಮಾಂಗಿರಿ ವರೂಥ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಗರುಡದೇವರು ರಕ್ಷಿಸೆನ್ನನು ಪಕ್ಷೀಂದ್ರನೆ ನೀನು ಪ ರಕ್ಷಿಸೆನ್ನನು | ಪಕ್ಷಿಪ ಕರುಣಿಕ ವಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ ಅ.ಪ ತಂದೆಯನುಜ್ಞದಿ | ಸಿಂಧೂರ ಕೂರ್ಮ ದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ || ಅಂದು ಪೀಯೂಷವ | ತಂದು ಮಾತೆಯ ಬಂಧನ ಬಿಡಿಸಿದ ಬಂಧುರ ಮಹಿಮ ಗಮನ ಪನ್ನಪನೆ ಪ್ರಾರ್ಥಿಪೆ ಮಿಗೆ ಕರುಣದಿ ಯನ್ನಘು ದೂರೋಡಿಸಿ 1 ಧಾರಣಿಯೊಳವತಾರ ರಹಿತ ಶೃಂ ಗಾರವಾದ ಬಂಗಾರ ಶರೀರ 2 ವಿನುತ ನಂದನ ಶಾಮ ಸುಂದರವಿಠಲನ | ಶ್ಯಂದನ ಶೂರ 3
--------------
ಶಾಮಸುಂದರ ವಿಠಲ