ಒಟ್ಟು 446 ಕಡೆಗಳಲ್ಲಿ , 66 ದಾಸರು , 396 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರ (ಶಿವ) ಸ್ತುತಿ ಲೋಕರಕ್ಷಕನೆಂಬೊ ಹರ ಗಂಗಾಧರಗೆ ಪ ನೀಕಮಲಮುಖಿ ಅಖುವೈರಿ ಅ- ನೇಕ ಮೈಯೊಳು ಸುತ್ತಿಕೊಂಡು ವಿ- ವೇಕವಿಲ್ಲದೆ ವಿಷವನುಂಡ ಪಿ- ನಾಕಧರನಿಗೆ ಸೋಲುವುದೆ ಅ.ಪ ಶಿರದೊಳು ಶಶಿಯ ಕೆಂಜಡೆಯಿಪ್ಪಭೋಗಿ ಸ್ಮರನದಹಿಸಿ ಭಸ್ಮ ಹಣೆಗಿಟ್ಟಯೋಗಿ ಇರುವೊಡೆ ಸ್ಥಳವಿಲ್ಲ ದಂತೆ ತಾ ಪೋಗಿ ಬೆರೆವ ಸ್ಮಶಾನ ಮಂದಿರ ಸುಖವಾಗಿ ಬರಿದೆ ಒಲಿವುದೆ ಗರುವೆ ಪಾರ್ವತಿ1 ಜಾಹ್ನವಿ ಶಶಿಯನ್ನೆ ಮಾಡಿ ರುಂಡಮಾಲೆಗಳ ಕೊರಲೊಳಗಿಟ್ಟು ಆಡಿ ಕುಂಡಲಗಳ ಧರಿಸಿರುವನ ನೋಡಿ ಖಂಡಪರಶುವೆಂದು ಅವನ ಕೊಂಡಾಡಿ ದಿಂಡೆಯಾಹ ಪ್ರಾಯದವಳು ನೀ ಕಂಡು ನೀನವ ಗಂಡನೆಂದು ಪ್ರಾ- ಚಂಡಗೊಲಿದಿಹೆ ಸರಿಯೆ ಪಾರ್ವತಿ 2 ವಿರಚಿಸುವ ಲೀಲಾವಿನೋದನ ವರದ ಶ್ರೀ ಗುರುರಾಮವಿಠಲನ ಪರಮ ಪ್ರಿಯ ಪರಮೇಶ ಶಿವಗೆ 3
--------------
ಗುರುರಾಮವಿಠಲ
ರೂಪನ ಗುಡಿನಿ¯ಯಾ ವೇಂಟಕರಾಯಾ ರೂಪನ ಗುಡಿ ನಿಲಯಾ ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ ದಂಡಿ ದಾನವಮರ್ದನ ಸಕಲಜಗ ಉ- ದ್ದಂಡ ರಕ್ಷಕ ಪಾವನಾ ಚಂಡ ಪ್ರ- ಚಂಡ ಮಾರ್ತಾಂಡ----ದ್ಭವ ಕುಂಡಲಿ ಶಯನ ಕೋದಂಡ ಪಾಣಿ ಹರಿ 1 ಗಂಗಾಜನಕ ದೇವಾ ಸಕಲಮೋಹ- ನಾಂಗನಾ ಪಡೆದನಾ ಶೃಂಗಾರದಲಿ ಕುಜ ರಂಗ ಮಂಟಪದಲಿ ಮಂಗ ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ 2 ಮಂದರಾದ್ರಿಯ ಧರಿಸಿ ಸುಜನರಿಗೆ ಆ- ನಂದದಿ ಸುಧೆಯನುಣಿಸಿ ಅಂದು ಭಕ್ತರ ಆನಂದದಿ ಸಲುಹಿದ ತಂದೆ 'ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ 3
--------------
ಹೆನ್ನೆರಂಗದಾಸರು
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ ಹರಿಯರಾಣಿ ಭುಜಗವೇಣಿ ಪರಿಪರಿಯ ಕ್ಲೇಶಗಳಳಿವ ದುರಿತದೂರನ ಕರಪಿಡಿಯುತ ಬಾ ಪರಿ ವೈಭವದಿ 1 ವಂದಿಸುವೆ ನಿನ್ನ ಪದಕೆ ಅಂಬುಜಾಕ್ಷಿ ಕರುಣವ ಮಾಡಿ ಕಂಬು ಕಂಧರನೊಡಗೂಡುತ ಬಾ ಸಂಭ್ರಮ ಸೂಸುತಲಿ 2 ಗೆಜ್ಜೆ ಪೈಜನಿ ಪಾಡಗರುಳಿಯು ಸಜ್ಜಾಗಿಹ ಕಾಲುಂಗುರ ಧ್ವನಿಯ ಮೂರ್ಜಗದೊಡೆಯನ ಕರಪಿಡಿಯುತ ಬಾ ಸಜ್ಜನ ರಕ್ಷಕಳೆ 3 ನಡುವಿಗೆ ನವರತ್ನದ ಪಟ್ಟಿ ಬಿಡಿಮುತ್ತುಗಳುದುರುವ ಪೀತಾಂಬರ ಬಡನಡÀು ಬಳುಕುತ ಅಡಿ ಇಡು ಬಾ ನಿ- ನ್ನೊಡೆಯನ ಕೂಡುತಲಿ 4 ಕರದಲಿ ಕಂಕಣ ಹಾಸರ ಬಳೆಗಳು ಬೆರಳಲಿ ಉಂಗುರ ಥಳಥಳಿಸುತಲಿ ಗರುಡಗಮನ ನೊಡಗೂಡುತ ಬಾ ಬಾ ಗರುವವು ಮಾಡದಲೆ5 ವಂಕಿನಾಗಮುರುಗಿ ಕರದಲಿ ಬಿಂಕದಿ ಪಿಡಿದಿಹ ತಾವರೆ ಕುಸುಮವು ಪಂಕಜಾಕ್ಷನೊಡಗೂಡುತ ಮನ ಶಂಕೆಯು ಮಾಡದಲೆ6 ಕಠ್ಠಾಣಿಸರ ಪದಕಗಳ್ಹೊಳೆಯುತ ಕಟ್ಟಿದ ಉಂಗುರಡ್ಡಿಕಿ ಶೋಭಿಸುತ ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ 7 ಥಳಥಳಿಸುವ ಗಲ್ಲಕೆ ಅರಿಶಿನವು ನಲಿಯುವ ಮೂಗುತಿ ಮುಖುರ ಬುಲಾಕು ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ ಘಳಿಲನೆ ಬಾರಮ್ಮ 8 ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ ಮುಗುಳ್ನಗೆ ಮುಖವು ಉರುಗಾದ್ರೀಶನ ಕರಪಿಡಿಯುತ ಬಾ ಕರೆ ಕರೆ ಮಾಡದಲೆ 9 ಘಣೆಯಲಿ ಕುಂಕುಮ ಬೈತಲೆ ಬಟ್ಟು ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು ಎಳೆಬಾಳೆಯ ಸುಳಿಯಂದದಿ ಬಳುಕುತ ಘಳಿಲನೆ ಬಾರಮ್ಮ10 ಕೆಂಪಿನ ರಾಗುಟಿ ಜಡೆ ಬಂಗಾರವು ಸಂಪಿಗೆ ಮಲ್ಲಿಗೆ ಸರಗಳ ಮುಡಿದು ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ ಸಂತಸ ತೋರಮ್ಮ11 ಇಂದಿರೆ ಶ್ರೀರಮೆ ಭಾರ್ಗವಿಯೆ ನಂದತ್ರಯಾ ಸದಾಸುಶೀಲೆ ಸುಗಂಧಿ ಸುಂದರಿ ಮಂದಗ ಮನೆಯೆ ಚಂದದಿ ಬಾರಮ್ಮ 12 ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ ಛತ್ರ ಚಾಮರದರ್ಪಣ ಪಿಡಿದು ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ 13 ಶ್ರಮ ಪರಿಹರಿಸೆನುತಲಿ ಬೇಡುವೆನು ಮಮತೆಲಿ ಕರಗಳ ಮುಗಿಯುತ ಬೇಡಲು ಕಮಲನಾಭ ವಿಠ್ಠಲನೊಡನೆ ಶ್ರೀ- ಕಮಲೆಯು ಬರುತಿಹಳು14
--------------
ನಿಡಗುರುಕಿ ಜೀವೂಬಾಯಿ
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ಲಕ್ಷ್ಮೀಶ ಹರಿ ವಿಠಲ ರಕ್ಷಿಸೋ ಇವಳಾ ಪ ಕುಕ್ಷಿಯೊಳಗನ್ಯರೆನೆ | ರಕ್ಷಕರ ಕಾಣೇ ಅ.ಪ. ಮಧ್ವ ಮತದಲ್ಲಿಹಳು | ಶ್ರದ್ಧೆ ಭಕ್ತೇಯುತಳುಪದ್ಧತಿಗಳಲವಡಿಸಿ | ಶುದ್ಧ ಸಾಧನದಾ |ಅಧ್ಯಾನ ಕಳೆ ತಂದು | ಬದ್ಧಳನ ಮಾಡುತ್ತಉದ್ಧರಿಸೋ ಶ್ರೀ ಹರಿಯೆ | ಪದ್ಮನಾಭಾಖ್ಯಾ 1 ಸಿರಿ ಭವ ಹಾರೀ 2 ಸಾರ ಸಾಧನಕೇ |ಚಾರು ನಿನ್ನಯ ನಾಮ | ಸಾರಸದಿ ಸವಿದುಂಬಭರಣಿಯಲಿರಿಸಯ್ಯ | ಮಾರಪಿತ ಹರಿಯೇ 3 ಕರ್ಮಗಳ ಮಾಳ್ಪವಲಿ | ಮರ್ಮಗಳ ತಿಳಿಸಯ್ಯನಿರ್ಮಮತೆ ನೀಡುತ್ತ | ಧರ್ಮ ಸಾಧನಕೇ |ಕರ್ಮ ನಾಮಕ ಹರಿಯೆ | ಪೇರ್ಮೆಯಲಿ ಇವಳನ್ನಕ್ರಮ್ಮಿಸೋ ಕರ್ಮದಲಿ | ಧರ್ಮಗುಪ್‍ಧರ್ಮೀ 4 ಧಾವಿಸೀ ಬಂದಿಹಳು | ದೇವ ತವ ದಾಸ್ಯವನೆ ಭಾವುಕಳಿಗಿತ್ತಿಹೆನೋ | ಓವಿ ಉಪದೇಶಾಗೋವಳರ ಪ್ರೀಯ ಗುರು | ಗೋವಿಂದ ವಿಠ್ಠಲನೆನೀವೊಲಿದು ಪೊರೆ ಇವಳ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ ಪ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ 1 ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ2 ನವನೀತ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ 3 ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ4 ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ 5
--------------
ಕನಕದಾಸ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ವೆಂಕಟ ನರಸಿಂಹ ದೇವಾ ಎನ್ನ ಸಂಕಟ ಪರಿಹರಿಸುವಾ ಶಂಕೆಯಿಲ್ಲದ ಬಿರುದಾಂಕ ಮಹಿಮನಾದ ಪಂಕಜನಾಭ ಶ್ರೀ ಪರಮಾತ್ಮ ಪರಬ್ರಹ್ಮ ಪ ಸÀಕಲಲೋಕ ಕರ್ತನಾದ ಶ್ರೀಲಕುಮಿರಮಣ ವೇಣುನಾದ ಮುಕುತಿದಾಯಕ ಕೃಷ್ಣ---ಲ್ಲಾ ಮೂರ್ತಿ ಅಮಿತ ಪರಕ್ರಾಮ ಸುಜನ ರಕ್ಷಕ ಹರಿ 1 ಸಿಂಧುಶಯನ ಜಗದೀಶ ಆನಂದ ಪರಿಪೂರ್ಣ ವಿಲಾಸ ಮಂದರಧರ ಮುಕುಂದ ಅತಿಸುಂದರ ರೂಪ ಗೋವಿಂದ ಅನುದಿನ ಇಂದು ಇರುವಾ 2 ಆದಿ ಮಧ್ಯಾಂತ ರಹಿತ ಸಕಲ ವೇದಾಂತರ ಪ್ರಖ್ಯಾತ ಸಾಧು ಸಜ್ಜನರೊಡೆಯಾನೀತಾ ಅತಿ ಮೋದದಲಿರುವಂಥ ದಾತಾ ಮಾಧವ ವೈಕುಂಠ ಮನಿಯಾಗಿ ಇರುವಂಥಾ 3
--------------
ಹೆನ್ನೆರಂಗದಾಸರು
ವೆಂಕಟಗಿರಿವಾಸ ವೆಂಕಟಗಿರಿವಾಸ ವೆಂಕಟಗಿರಿವಾಸ ಶ್ರೀ ವೆಂಕಟೇಶ ಪಸುರ ಸಮುದಾಯ ಶಿರೋಮಣಿ ರಾಜಿತಚರಣಸರೋರುಹ ಶ್ರೀ ವೆಂಕಟೇಶ 1ಕಮನೀಯ ವಿಗ್ರಹ ಕಮಲಾಲಯಾಕರಕಮಲಶೋಭಿತಪಾದ ಶ್ರೀ ವೆಂಕಟೇಶ 2ವಿಧಿಮುಖಾಮರಗಣ ವಿಧಿವಿಹಿತಾರ್ಚಿತಬುಧಹೃದಯಾಲಯ ಶ್ರೀ ವೆಂಕಟೇಶ 3ಸನಕಾದಿಮುನಿವಂದ್ಯ ಸಾಧುಸಂರಕ್ಷಕವನಧಿಸುತಾ ಭೂಮಿಧವ ವೆಂಕಟೇಶ 4ಅಂಜನವೃಷಶೇಷ ವಿನತಾತನುಜ ನಾಮರಂಜಿತಾಚಲವಾಸ ಶ್ರೀ ವೆಂಕಟೇಶ 5ನಾರಯಣಾದ್ರಿ ಸಿಂಹಾದ್ರಿ ಶ್ರೀಶೈಲೇತಿಸಾರ ವೆಂಕಟನಾಮಾಷ್ಟಕ ಭೂಧರೇಶ 6‘ವೆಂ ಪಾಪಂ ಕಟತಿ ನಾಶಯತೀತಿ’ ವಿಖ್ಯಾತಸಾಂಪ್ರತ ಸುಸ್ಥಿರ ಶ್ರೀ ವೆಂಕಟೇಶ 7ನಿತ್ಯ ನಿಜಾನಂದ ನಿರುಪಮಾಮಿತಶಕ್ತಿವೃತ್ತಿ ಪ್ರವರ್ತಕ ಶ್ರೀ ವೆಂಕಟೇಶ 8ದಿವ್ಯ ದಕ್ಷಿಣಮುಖ್ಯದೋರ್ಧೃತ ಶ್ರೀ ಚಕ್ರಸವ್ಯದೋರ್ಧೃತ ಶಂಖ ಶ್ರೀ ವೆಂಕಟೇಶ 9ಭಜಿತವ್ಯಂ ಪಾದಪಂಕಜಮಿತಿ ದರ್ಶಿತನಿಜ ದಕ್ಷಾಧಃಪಾಣೇ ಶ್ರೀ ವೆಂಕಟೇಶ 10ಭಜತಾಂ ಭವಾಂಭೋಧಿ ಕಟಿಮಿತಮಿತಿ ವಾಮಕಟಿ ನ್ಯಸ್ತ ಕರಕಂಜ ಶ್ರೀ ವೆಂಕಟೇಶ11ಹಾರ ಕಿರೀಟ ಕುಂಡಲ ಗಾತ್ರ ಶ್ರೀ ವೆಂಕಟೇಶ 12ಕಂಕಣ ಕೇಯೂರ ವಲಯ ಶೋಭಿತ ಕರಕುಂಕುಮಾಂಕಿತ ಮಾಲ ಶ್ರೀ ವೆಂಕಟೇಶ 13ಕಟಿಸೂತ್ರ ಕಲಿತ ಪೀತಾಂಬರ ಕಿಂಕಿಣಿಕಟಕಮಂಡಿತಪಾದ ಶ್ರೀ ವೆಂಕಟೇಶ 14ತಿರುಪತೀತಿಖ್ಯಾತ ತೀರ್ಥಭೂತಾದ್ರೀಶವರದ ವಿಶ್ವಾಧಾರ ಶ್ರೀ ವೆಂಕಟೇಶ 15ಓಂ ಮುರಾರಯೇ ನಮಃ
--------------
ತಿಮ್ಮಪ್ಪದಾಸರು
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ || ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು | ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ ಉರಗಾದ್ರಿ ಸ್ಥಿರನಿವಾಸ || ಶಿರೆಯೆರಗುತಿರುವರು ಮಹಿಮ ನಿನ್ನದು 1 ಅಂಡಜವಾಹನ ಧೋರೆ | ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ | ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ ಮಂಡಲಾಧಿಪ ದೇವ ದೇವ 2 ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ | ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ | ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ | ಮಂಗಮನೋಹರ3
--------------
ಹೆನ್ನೆರಂಗದಾಸರು
ವೇಣುನಾದ ಪ್ರಿಯ ಗೋಪಾಲಕೃಷ್ಣ ಪ. ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ಅ.ಪ. ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ 1 ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ2 ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ 3
--------------
ವಾದಿರಾಜ
ವೇದವೇದ್ಯರೂಪ ವಿಶ್ವವ್ಯಾಪಕನೇ (ರಾಮ) ನಾದರೂಪಪ್ರೀತ ವಿಶ್ವರಕ್ಷಕನೇ ರಾಮ ಪ ಆದಿಮಧ್ಯರಹಿತದೇವ ನಾದರಂಜಿತನೇ ರಾಮ | ಮಾಧವಾ ಮಧುಸೂದನ ಹರೇ ಮಧುರಭಾಷಿತನೇ ರಾಮ ಅ.ಪ ಕಮಲಸದನ ಕಮಲಶೋಭಿತ ಕಮಲಜಾಪ್ರಿಯನೇ ಕಮಲಸಂಭವಾದಿ ನಮಿತ ಕಮಲಾರಾಧಿಕನೇರಾಮ 1 ಸನ್ನುತ ಭೃಂಗಕುಂತಳ ಮಾಂಗಿರೀಶ ರಂಗನಾಥನೇ ರಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ. ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು ಮುಕ್ತಿದಾಯಕ ದೇವ ಮುನಿವರದ ಕಾವ ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1 ಭಾರ ಬೆನ್ನೊಳು ವಹಿಸಿ ಕೋರೆ ಹಲ್ಲನು ತೆರೆದು ಕಂಭದಲಿ ಬಂದ ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ ವೀರ ರಾವಣನಸುವ ಹೀರಿದ ಹರಿಯು 2 ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ- ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3
--------------
ಅಂಬಾಬಾಯಿ
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ