ಒಟ್ಟು 783 ಕಡೆಗಳಲ್ಲಿ , 93 ದಾಸರು , 630 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
--------------
ವಿಜಯದಾಸ
ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ಪ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಅ.ಪ. ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು ಪರಿ ಪರಿಯಿಂದಲಿ ಶತಾನಂದ 1 ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ ಅಗಣಿತ ವಾಕ್ಯನೆ ಹಗಲಿರುಳು ಮನಸಿಗೆ ಸುಖವಾಗುವ ಬಗೆ ಕರುಣಿಸು ನಮ್ಹಗೆಗಳ ಕಳೆದು 2 ವಾರಿಜಾಸನ ಲೋಕೇಶ ಭಕುತಿವಿಲಾಸ ಚಾರುಸತ್ಯ ಲೋಕಾಧೀಶ ಸಾರಹೃದಯ ವಿಶೇಷ ಮಹಿಮನೆ ದೋಷ ದೂರ ನಿರ್ಮಲ ಪ್ರಕಾಶ ಧಾರುಣಿಯೊಳಗವತಾರ ಮಾಡದ ದೇವ ಸಾರಿದೆ ನಿನ್ನಂಘ್ರಿವಾರಿಜಯುಗಳವ ಸಾರಿಸಾರಿ ವಿಜಯವಿಠ್ಠಲನ್ನ ಆರಾಧಿಪುದಕೆ ಚಾರುಮತಿಯ ಕೊಡು 3
--------------
ವಿಜಯದಾಸ
ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ಪ. ಸುರರು ನಿರುತ ನಿನ್ನನು ಬಿಡರು ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ ಪೂರ್ಣಸುಖವನ್ನೆ ಕೊಟ್ಟು ಅನುದಿನ ಸೇರಿಸೊ ವೈಕುಂಠ 1 ಇಂದು ನಾ ಮಾಡ್ದ ಪುಣ್ಯ ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ ನಂದನ ಕಂದ ರಂಗ ಬಂಧುವೇ ಪಾಂಡುರಂಗ ಕಮಠ ವರಹ ವೇಷಧಾರಕನೆ ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2 ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ ಪಾಡಲಿ ಹಗಲಿರುಳು ಕೊಡದಿರು ವಿಠ್ಠಲಯ್ಯ ಬಲವಂತÀ ರಕ್ಷಿಸೆನ್ನ ವಸಂತ ಶ್ರೀದ ಕೈಯ ಮುಗಿವೆ ಸರ್ವದಾ 3
--------------
ಅಂಬಾಬಾಯಿ
ಪಾದ ಸರೋಜಯುಗಳವ ನೆರೆ ನಂಬಿದೆ ಜೀಯ್ಯ ಪ ತಿಮಿರ ಕಾನನ ಯತಿವರ್ಯ ಮಹಾಶೌರ್ಯ ಮೇರು ಸಮ ಧೈರ್ಯ ತ್ರಿವಿಧ ಜೀವರಿಗೆ ಆಚಾರ್ಯ ಅ.ಪ ರಾಮದೂತಾನಾಗಿ ಸೀತೆಗುಂಗುರವಿತ್ತೆ ಕಲಿಯುಗದಿ ಭೂಸುರಕುಲದಿ ಪುಟ್ಟಿ ನೀ ಮೆರೆದಿ ಆರ್ತಜನ ಕೃಪಾಶರಧಿ 1 ಅನುಸಂಧಾನ ಪೂರ್ವಕ ಕೊಡು ವಿಜ್ಞಾನ 2 ಮೂರವತಾರದಿ ಶ್ರೀರಾಮ ಕೃಷ್ಣ ವ್ಯಾಸ- ರಾರಾಧಿಸಿ ಗೈದ ಧೀರ ಶಿಖಾಮಣಿ ಭವ ಭಯನಾಶ ಕೊಡುವುದು ಲೇಸಾ ಗುರುರಾಮವಿಠಲನದಾಸ 3
--------------
ಗುರುರಾಮವಿಠಲ
ಪಾಲಿಸಬೇಕಯ್ಯ ಪವಮಾನ ದೂತಾ ಪ. ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ. ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1 ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2 ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3
--------------
ಸಿರಿಗುರುತಂದೆವರದವಿಠಲರು
ಪಾಲಿಸಯ್ಯ ಪವನ ಕುವರನೇ | ಪಾವನ್ನ ಮೂರ್ತಿಶೀಲರೂಪಿ ಶೈಲ ಸದನನೇ ಪ ಬಾಲ ಗೋಪಾಲ ಗುಣವ | ತೈಲಧಾರೆಯಂತೆ ಮನದಿಕಾಲಕಾಲ ಸ್ಮರಿಪ ಸುಖ | ಕೈಲಾಸವಾಸ ಕೊಟ್ಟು ಕಾಯೊಅ.ಪ. ಪಂಪಾಪುರ ನಿವಾಸ ಈಶನೇ ಜೈಗೀಷ ಔರ್ವಪೊಂಪೆ ಎಂಬ ಗಿರಿಜೆ ರಮಣನೇ ||ಲಂಪಟಾವ ಬಿಡಿಸಿ ಜ್ಞಾನ | ಸಂಪದಾವನಿತ್ತು ಸಲಹೋನೋಂಪಿ ಗೈವೆ ನಿನ್ನ ಪದದಿ | ಇಂಪನೀಯೊ ಹರಿಯ ಪದದಿ 1 ಕೃಪಣ ಕಲುಷ ಭವ ಸಮುದ್ರದಿಂದಮತ್ತೆ ಪುಟ್ಟಿ ಭಯವು ಕಾಣೆ | ಚಿತ್ತದಲ್ಲಿ ಹರಿಯು ಇರಲು 2 ತೈಜಸ ತಾಮಸಾ | ತ್ರಯವು ಅಹಂಸಾಕಾರಿ ಶುಕನೆ ದುರ್ವಾಸಾ |ಲೌಕಿಕಗಳೆಲ್ಲವು ವೈ | ದೀಕ ವೆನಿಸೊ ತತ್ಪುರೂಷಕಾಕು ಸಂಗ ಕೆಡಿಸೊ ಹರ ವಿ | ಶೋಕ ಹರಿಯ ತೋರಿ ಬೇಗ3 ನಿಕರ ವಾಯು ನಂದನಾ ||ವಾಸ ವಾದ್ಯಮರನುತ ಸ | ದಾಶಿವನೆ ಬ್ರಹ್ಮ ತನಯಮೀಸಲೆನಿಸೊ ಮನವ ಹರಿಯ | ಆಶೆಯಲ್ಲಿ ನಿರುತ ಎನಗೆ 4 ಮಂಗಳಾಂಗ ಗಂಗೆ ಧಾರಕಾ | ಊಧ್ವ5ಟನೆಅಂಗಜಹ ಮೃಕಂಡ ಪಾಲಕಾ ||ರಂಗ ಗುರು ಗೋವಿಂದ ವಿಠಲ | ಸಂಗಿ ಶಿವ£5Éೀಡ್ವೆ ಭಕ್ತಿಸಂಗವಿತ್ತು 5ಗೆ ವಿಷಯ | ಸಂಗ ಬಿಡಿಸಿ ಕಾಯೊ ರುದ್ರ 5
--------------
ಗುರುಗೋವಿಂದವಿಠಲರು
ಪಾಲಿಸೀ ಪಸುಳೆಯನು ಪರಮ ಪುರುಷ ಪ. ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ. ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು ತ್ವರಿತದಲಿ ಕಾಪಾಡು ತಡಮಾಡದೆ ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ ಕರುಣಾಮೃತವಗರೆದು ಕಡುಕೃಪೆಯೊಳಿನ್ನು 1 ಫಣಿರಾಜಶಯನ ಪರ್ಯಂಕ ದೇವರದೇವ ಬಿನಗು ದೇವರ ಗಂಡ ಎಣೆಯುಂಟೆ ನಿನಗೆ ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ 2 ಪ್ರಾಣದೇವನೆ ಸರ್ವ ದೇವತೆಗಳಧಿನಾಥ ಪ್ರಾಣದೇವನು ನಿನ್ನ ಪ್ರಾಣ ಪದಕ ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ 3 ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು ಎನ್ನ ಬಿನ್ನಪವ ನೀ ಬರಿದೆನಿಸದೆ ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು ಮನ್ನಿಸಿ ಕಾಪಾಡು ಮಂಗಳಾತ್ಮಕನೆ 4 ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ ನಿರುತದಲಿ ನಿನ್ನ ಪದಭಕ್ತಿ ಜ್ಞಾನವ ಕೊಟ್ಟು ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಪಾಲಿಸು ಶಂಕರನೆ ಪಾರ್ವತಿ ಪತೆ ಪಾಲಿಸು ಶಂಕರನೆ ಪ. ಹರಚರ್ಮಾಂಬರ ಗೌರಿ ಮನೋಹರ ಸುರನರ ವಂದಿತ ಗರಳಕಂಧರನೆ 1 ಮನದಭಿಮಾನಿಯೆ ಸನುಮತದಲಿ ಎನ್ನ ಮನದಲಿ ಶ್ರೀ ಹರಿ ವನಜ ಪಾದವ ತೊರೋ2 ಪುಟ್ಟ ಮೊಮ್ಮಗ ನೀನೆ ತುಷ್ಟಿಯಿಂದಲಿ ಕಾಯೊ 3
--------------
ಅಂಬಾಬಾಯಿ
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ 1 ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ 2 ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ 3 ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4 ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ5 ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ 6 ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7 ದುಂದುಭಿ ಭೇರಿಯ ರಭಸಾ ಮಹಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ8 ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ಪತಿ ನೀನೆ -ಆಹಾ ನಂದನ ಮನೋಹಂಸಾ 9 ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10 ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ11 ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ12 ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ 13 ಮಧ್ವರಮಣ ಪಾಪಿ ಭಕ್ತಿ ಜ್ಞಾನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ಪತಿ 14 ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
--------------
ವಿಜಯದಾಸ
ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ ಪಾಲಾಬ್ಧಿಶಯನ ಕಾಪಾಲಿಯ ಕಾಯ್ದ ಗೋ ಪಾಲ ಹರಿ ವಿಶ್ವರೂಪ ಲೋಕಾಧೀಶ ಪಾಲಯವಾಗೆನ್ನ ಪಾಲಿಲಿದ್ದ ಶಿಶುಪಾಲಕ ಎನ್ನ ಕಾಯನ್ನಾ ಪ ಮನೆ ನಿನಗಾಗಿ ದೇಹಾ ಸುಮ್ಮನೆ ಪೇಳುವುದಿಲ್ಲ ಹ ಮ್ಮನೆ ಬಿಡಿಸುವುದು ಘಮ್ಮನೆ ಬಂದು ಒಲಿದು ನಿ ಮ್ಮನೆ ಭಕ್ತರ ಕೂಡ ನೆಮ್ಮನೆ ಕೊಟ್ಟ ಬಲನ ತ ಮ್ಮನೆ ನಡಿಸುವುದು ತಿಮ್ಮನೆ ಅಜಿತಾನಂತ ನಾ ಸಾರ್ವಭೌಮನೆಯಾಗಿ ಪುಟ್ಟಿ ಭೀ ಮನೆ ಗುರು ನಿತ್ಯಾ ಸಮನೆ ಎಂದು ಪೇಳಿದಾ ಮನೆಯಲ್ಲಿ ಇಡು ಮಾಮನೆಯುಳ್ಳಾ ಮಹಿಮನೆ ವೆಂಕಟೇಶಾ1 ಮನ ದುರ್ವಿಷಯಕೆ ಗಮನವಾಗಿ ಪೋಗುತಿದೆ ಕಾಮನ ಸಂಬಂಧವುಪಶಮನ ಮಾಡು ಬೇಗ ಸುಧಾ ಮನ ಮಿತ್ರ ಪವಿತ್ರ ಸುಮ್ಮನಸಕೊಡಿಯಾ ವಾ ಮನ ಮೂರುತಿಯೆ ಮನಸಂಹಾರ ಬಮ್ಮನ ಬಿಡಿಸಿದಾ ಹಿ ಮನ ಭಾವನೆ ನಿನ್ನ ಮನನಾದಿ ದಿನಯಸ್ತ ಪರಿಯಂತ ನೇಮನ ಚಿಂತಿಸುವಂತೆ2 ಜನನ ಮರಣ ಶೂನ್ಯಾ ಜನಕಾದ್ಯನಂತಗಂಗ ಜನಕಾಯಿದಾನಾದಿ ದೈವ ಅ ಜನನಯ್ಯ ಸ್ವರ್ಣ ಕಾಯಂ ಜಿನೆ ಪುತ್ರಪ್ರಿಯ್ಯಾ ದುಷ್ಟ ಜನಮರ್ದನಾ ಬಲು ಯೋಜನ ಮೆರೆವ ದೇವ ಸು ಜನಪಾಲ ಗುಣಶೀಲಾ ಜನುಮ ಜನುಮಕ್ಕು - ಜನಮತಿ ಕಳೆದು ರಂ ಜನವಾದಾ ಜ್ಞಾನ ಪುಂಜಿನ ಮಾಡು ದನುಜ ಭಂ ನಿರಂಜನ ನಿರ್ಮಳ ಅಂಜನ ಗಿರಿವಾಸಾ 3
--------------
ವಿಜಯದಾಸ
ಪಾಲಿಸೋಯನ್ನ ಪರಾತ್ಪರಾ - ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನ ಘಣಿಶೈಲ ನಿಲಯ-ಹರಿ ಅ.ಪ ಜಲಜಭವನ ನಿಜಕುಕ್ಷಿಯೊಳಿದ್ದ ಸುಲಲಿತ ವೇದಾಪಹಾರಿಯ ಕಂಡು ಜಲಜರೂಪಿನಿಂದಾ ಖಳ ಸಂಹರ ಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಅಂದು ದೂರ್ವಾಸನ ಶಾಪದಿ ಜಗವು ಇಂದಿರೆ ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ಧರಣಿಯನಪಹಾರಗೈಯ್ಯಲು ಬೇಗ ಸೂಕರ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ3 ಸರಸಿಜಜನ ವರದರ್ಪದಿ ಜಗವನುರುಹಿ ತರಳನ ಬಾಧೆಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ 4 ಬಲಿಯ ಮೂರಡಿಭೂಮಿ ದಾನವ ಬೇಡಿ ಅಳೆದು ಈರಡಿಮಾಡಿ ಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯ ಪೆತ್ತ ಚೆಲುವ ವಾಮನರೂಪ5 ಚಕ್ರಾಂಶನಾದ ಕಾರ್ತಿವೀರ್ಯನ ಭುಜ ಚಕ್ರದೊಡನೆ ದುಷ್ಟ ಭೂಪರ ಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ಕ್ರೂರ ರಾವಣ ಕುಂಭಕರ್ಣರ ಬಲು ಘೋರತನಕೆ ತ್ರಿವೇಶರ ದೊಡ್ಡ ದೂರ ಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀರಾಮ ಮೂರುತಿ 7 ಬಲಭದ್ರನೆಂಬುವ ನಾಮದಿ ಧುರದಿ ಹಲ ನೇಗಿಲುಗಳನು ಹಸ್ತದಿ ಪಿಡಿದು ಬಲವಂತರಾದ ದೈತ್ಯಕುಲವ ತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರನಿಭಚೇಲ 8 ಭಾರ ಸೃಷ್ಟೀಶನಲ್ಲಿ ದೂರಿಡೆ ಬಲು ಭ್ರಷ್ಟ ಕೌರವ ಯುಧಿಷ್ಠಿರಗೆ ವೈರ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ 9 ಕಲಿಯಿಂದ ಕಿಡೆ ನಿಜಧರ್ಮವು ಬಹು ಖಳರಿಂದ ವ್ಯಾಪಿಸೆ ಲೋಕವು ಆಗ ಲಲಿತ ತೇಜಿಯನೇರಿ ಕಲುಷಾತ್ಮಕರ ಕೊಂದು ವಿಲಸಿತ ಧರ್ಮವನು ಸಲಹಿದ ಕಲ್ಕಿರೂಪ 10 ಗಿರಿಜಾವಿವಾಹದಿ ತ್ವಷ್ಟ್ರನ ಶಾಪ ಶರಧಿಯೀಂಟಿದ ಮುನಿಗೈದಲು ಬೇಗ ವರವ್ಯಾಘ್ರ ಗಿರೀಶನೆ ಶರಣೆಂದ ಮುನಿಪಗೆ ವರವಿತ್ತು ಸಲಹಿದ ವರದವಿಠಲಹರಿ11
--------------
ವೆಂಕಟವರದಾರ್ಯರು
ಪಾಲಿಸೋಯನ್ನ ಪರಾತ್ಪರಾ ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ. ವೇದಾಪಹಾರಿಯಕಂಡು ಜಲಚರ ರೂಪಿನಿಂದಾ ಖಳನ ಸಂಹರಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ ಪಹಾರಗೈಯಲು ಬೇಗ ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ 3 ಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ4 ಅಳೆದು ಈರಡಿಮೂಡಿಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ 5 ಚಕ್ರದೊಡನೆದುಷ್ಟಭೂಪರಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ತ್ರಿದಿವೇಶರದೊಡ್ಡ ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀ ರಾಮ ಮೂರುತಿ 7 ನೇಗಿಲುಗಳನು ಹಸ್ತದಿಪಿಡಿದು ಬಲವಂತರಾದ ದೈತ್ಯಕುಲವತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರ ನಿಭಚೇಲ 8 ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ ವೈರಿ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ9 ವ್ಯಾಪಿಸೆಲೋಕವು ಆಗ ಲಲಿತತೇಜಿಯನೇರಿ ಕಲುಷಾತ್ಮಕರಕೊಂದು ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ 10 ಮುನಿಗೈದಲುಬೇಗ ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ ವರವಿತ್ತು ಸಲಹಿದ ವರದ ವಿಠಲ ಹರಿ11
--------------
ಸರಗೂರು ವೆಂಕಟವರದಾರ್ಯರು
ಪುಟ್ಟ ಪುಟ್ಟ ಶ್ರೀನಿವಾಸ ಬೇಗ ಬಾರೊ | ಬಹು ಪಾದ ಎನಗೆ ತೋರೋ ಪ. ಸಿಟ್ಟಿನಿಂದಲಿ ನೀನು ಕೆಟ್ಟ ದೈತ್ಯನ | ಕೊಂದು ಪುಟ್ಟ ಬಾಲನ ಕಾಯ್ದ ನಾರಸಿಂಹ ಅ.ಪ. ಬಿಟ್ಟ ಕಣ್ಣು ಬೆಟ್ಟ ಬೆನ್ನು ಸೊಟ್ಟಕೋರೆ | ಬಹು ದುಷ್ಟ ಘೋರರೂಪಿ ನೀನು ಪುಟ್ಟ ಬಾಲ ದುಷ್ಟ ರಾಜರ ಕೊಂದ ದಿಟ್ಟ ರಾಮನೆ | ಕೃಷ್ಣ ಬಿಟ್ಟ ವಸ್ತ್ರವ ದುಷ್ಟ ಹನನ ಕಲ್ಕಿ 1 ಭಾರ ಪೊತ್ತು ಕೋರೆ ತೋರ್ದೆ | ಬಹು ಘೋರಕಾರ ಬಾಲರೂಪಿ ಕ್ರೂರ ರಾಮ ಜಾರ ಚೋರನು | ಆಗಿ ವಿೂರಿ ಬತ್ತಲೆ ನಿಂದು ಏರಿ ಕುದುರೆ 2 ಅಮೃತ ದಿಟ್ಟ ವರಹ | ಹರಿ ಸಿಟ್ಟು ನಿನಗೆ ಪುಟ್ಟಿ ಭಾರ್ಗವ ಶ್ರೇಷ್ಠ ಶ್ರೀ ರಾಮ ಬುದ್ಧ ಕೆಟ್ಟ ಕಲಿಯ | ಗೆದ್ದ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲ ಈಗ 3
--------------
ಅಂಬಾಬಾಯಿ
ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಓಡುತಲಿಹರಮ್ಮಾ ನೋಡೆಂಬರೋ 1 ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆಇಂದು ಹುಟ್ಟಿದ ದಿನಾ ಎರಕೋ ಕೂಸಮಂದಿರದೊಳು ವಿಪ್ರವೃಂದವ ಪೂಜಿಸಿಛಂದಛಂದದ ವಸ್ತ ತಂದಿಡುವೆ 2 ಮಂದಿ ಮಕ್ಕಳು ನೋಡು ಛಂದದಿ ತಮ್ಮನೆಮುಂದಲೆ ಊರೊಳಗಾಡೆಂಬರೊನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋಇಂದೆಲ್ಲಿ ಪೋಗದಿರಿಂದಿರೇಶಾ 3
--------------
ಇಂದಿರೇಶರು
ಪುಟ್ಟಿ ಬಂದಿಹೆಯಾ ಕಿಟ್ಟಯ್ಯಾ ಪ ಕೆಟ್ಟ ಲೋಕವನೆಲ್ಲ ನೆಟ್ಟನೆ ತಿದ್ದಲುಕಟ್ಟಿ ನೋಡು ಶ್ರಾವಣದಷ್ಟಮಿ ದಿನದಲ್ಲಿ 1 ಹೀನಾದ ಧರ್ಮದ ಜ್ಞಾನೋದಯ ಗೈಸಿದೀನರನುದ್ಧರಿಸಿ ಮಾನವನಾಗಿ 2 ಬಾಧಿಪ ಕುಜನರ ಛೇದಿಸಿ ಜಗದೊಳುಸಾಧು ಸುಜನರನು ಮೋದದಿ ಸಲುಹಲುಮೇದಿನಿಯೊಳು ನೀ ಉದಿಸಿ ಬಂದೆಯಾ 3 ಭಕ್ತರ ಮೊರೆ ಕೇಳಿ ಯುಕ್ತಿಯಿಂದ ಸಲುಹಲುಮುಕ್ತಿಯ ಸ್ಥಾನ ವೈಕುಂಠವ ಬಿಟ್ಟು 4 ಸುರ ಮುನಿಗಳಿಗಿಂತು ವರವಿತ್ತ ಕಾರಣ ಧರೆಯೊಳು ಗದುಗಿನ ವೀರನಾರಾಯಣ5
--------------
ವೀರನಾರಾಯಣ