ಒಟ್ಟು 356 ಕಡೆಗಳಲ್ಲಿ , 59 ದಾಸರು , 290 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೀತಾರಾಮ ಶ್ರೀರಘುರಾಮ ಕಾ ಕುತ್ಸ್ಥರಾಮ ಕರುಣಾಳು ರಾಮ ಪ ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ ಭಕ್ತವತ್ಸಲನ ಚರಿತ್ರೆ ಪೇಳುವೆನು 1 ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ ಭೇದಬುದ್ಧಿಗೆ ಇದು ಬೋಧವಾಗುವುದೆ 2 ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ 3 ಆದಿಸೃಷ್ಟಿಯಲಿ ಆದುದು ಈ ಆತ್ಮ ಬಾಧೆಯ ಪಡುತಿಹುದು ಭವರೋಗದಲಿ 4 ಜನನ ಮರಣವೆಂಬ ಜಾಡ್ಯವನು ಬಿಡಿಸಿ ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ 5 ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು ವಿಷಯಕೆ ಎನ್ನನು ವಶವ ಮಾಡುವರೇ 6 ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ 7 ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ [ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ 8 ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ 9 ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ ನಂದದಿಂದಲಿ ಕಾಯೊ ಇಂದಿರಾರಮಣ 10 ಸುರರೆಲ್ಲ ಪೋಗಿ ಮೊರೆಯಿಡಲಾಗಿ ಅರಿತನು ಭೋಗಿಶಯನ ತಾನಾಗಿ11 ವಸುಧೆಯ ಭಾರವನಿಳುಹುವೆನೆಂದು ದಶರಥನುದರದಿ ಜನಿಸಿ ತಾ ಬಂದು 12 ಪಂಕಜನೇತ್ರ ಪರಮಪವಿತ್ರ [ಸು]ಕೋಮಲಗಾತ್ರ ಕೌಸಲ್ಯಪುತ್ರ 13 ಪುತ್ರರ ನೋಡಿ ಸಂತೋಷಗೂಡಿ ಅರ್ತಿಯಿಂದಲೆ ಚೌಲ ಉಪನಯನ ಮಾಡಿ 14 ನೋಡಿ ಕೌಶಿಕನ ಚಿಂತೆಯ ಮಾಡಿ ಕೂಡಿ ಅನುಜನ ಮುನಿವರನೊಡನೆ ವೋಡಿ 15 ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ 16 ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ 17 ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ ನೋಡಿ ಧನುವ ಮುರಿದು ಜಾನಕಿ ಕೂಡಿ 18 ಮಾರ್ಗದಲ್ಲಾಗ ಭಾರ್ಗವನ ಆಗ್ರಹವ ಬೇಗ ಮುರಿದು ತಾ ಶೀಘ್ರದಿಂ ಬಂದ 19 ಸತಿ ಸಹಿತನಿಂದು ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ 20 ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ 21 ಪೋಗಿ ಜನಕನಿಗಾಗಿ ವನಕೆ ತಾ ಯೋಗಿ 22 ಬೇಗ ಭರತನಿಗಾಗಿ ಪಾದುಕೆಗಳ ಅನು ರಾಗದಿಂದಿತ್ತು ಯೋಗದಿಂ ಪೋಗಿ 23 ಅತ್ರಿಮಹಾಮುನಿ ಇತ್ತ ಆಭರಣವ ವಸ್ತ್ರವ ಗ್ರಹಿಸಿದ ಪುರುಷೋತ್ತಮನು 24 ವಿರಾಧನ ಕೊಂದು ಹರುಷದಿಂ ಬಂದು ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] 25 ದನುಜೆನಾಸಿಕವರಿದು ಖರದೂಷಣರ ತರಿದು ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು26 ಬಂದು ರಾವಣ ಜಾನಕಿಯ ಕದ್ದೊಯ್ಯಲಂದು ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] 27 ಕಬಂಧನ ಗೆಲಿದು ಪಂಪಾತೀರದಿ ನಲಿದು ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು 28 ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ 29 [ಭರದಿವಾನರ] ಕೈಲಿ ಉಂಗುರವಿರಿಸೆ ಆ ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ 30 ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ ದುರುಳನೊಡನ್ಹೋರಿ ಮಣಿಯ ತಂದನಾಧಾರಿ 31 ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ [ವನೊ]ಲಿದು ರಾವಣನೆದುರಲ್ಲಿ ನಲಿದು 32 ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು 33 ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ] ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ 34 [ವರರಾಮ] ತಾ ನೋಡಿ ವ್ಯಸ ಮಾಡಿ ಹರಿಯನ್ನು ಕೂಡಿ ಆಲಿಂಗನೆ ಮಾಡಿ 35 ಹರಿಗನ ಕೂಡಿ ಭರದಿಂದಲೋಡಿ ಶರಧಿಯ ನೋಡಿ ಯೋಚನೆ ಮಾಡಿ 36 ವರುಣನ ವಂದಿಸಿ ವಿಭೀಷಣನ ಮನ್ನಿಸಿ ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ 37 ಇಂದ್ರಜಿತುವೊಡನೆ ಛಂದದಿಂದಲೆ ಕಾದಿ ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ 38 ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ ಭಂಗಿಸಿ ತಾ ಜಗದೊಡೆಯನೆಂದೆನಿಸಿ 39 ಕುಂಭನಿಕುಂಭ ಕುಂಭಕರ್ಣರ ಕೊಂದು ಕುಂಭಿನಿಯೊಳು ನಿಂದನಂಬುಜನಾಭ 40 ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ ಹಿತದಿಂದೌಷಧಿ ತಂದ ಮಾರುತನ ಕುಮಾರ 41 ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ ಪಾಯದಿಂದಲೆ ಬಂದ ಮಾಯಾವಿಯೆಡೆಗೆ 42 ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು 43 ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ ಶತ್ರುವ ಜಯಿಸಲೆಂದನಾಗ 44 ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ 45 ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ ಕರಾಕ್ಷನ ಕೊಂದ ಮಹಾನುಭಾವರಾವಣನ 46 ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ ರ್ಮೂಲನ ಮಾಡಿ[ದ] ಲೀಲಾವಿನೋದದಿ 47 ಬಂಧುಗಳೆಲ್ಲರು ಮರಣ ಪೋಗಲು ಕಂಡು ಬಂದ ರಾವಣನು ತಾನು ಒಂದೆಮನಸಿನಲಿ 48 ಯಾರು ಇಲ್ಲದಾಗ ಚೋರತನದಲ್ಲಿ ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] 49 ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ ಮತ್ತೆ ಆಕಾಶವ ಮುತ್ತಿತು ಬಾಣ 50 ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ ಪ್ರೇಮದಿಂದಲೆ [ಹರಸಿದರು] ಆನಂದಗೂಡಿ 51 ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ 52 ದಶಕಂಠನೆಂತೆಂಬ ಹಸನಾದ ವೃಕ್ಷವ ದಶರಥಸುತವಾತ ಬಂದು ಮುರಿಯಿತು 53 ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ ಘವನೆಂಬ ಕೇಸರಿಯು ಮುರಿಯಿತು 54 ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು [ಕುಲದ] ವ್ಯಾಘ್ರವು ಭಕ್ಷಿಸಿತಾಗ 55 [ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ] ರಾಮಜೀಮೂತವು ಬಂದು ಕೆಡಿಸಿತು 56 ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು ಶಿರದಲ್ಲಿ ಧರಿಸಿದ [ತಾ] ಪರಮಪುರುಷನು 57 ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ 58 ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ ನಂದದಿಂದಲೆ ಕೂಡಿನಿಂದ ರಾಘವನು 59 ಅಜಭವಸುರರೆಲ್ಲ ಭುಜಗಶಯನನ ನೋಡಿ ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ 60 ವೇದವನಿತ್ತು ಅಜನಿಗೆ ಭಾರವ ಹೊತ್ತು [ಆ] ಧಾರುಣಿಯ ತಂದು ಕಂಬದಿಂ ಬಂದು 61 ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ ಜಾನಕಿಯ ತಂದು ಪ್ರಲಂಬನ ಕೊಂದು 62 ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ 63 ಜಗದೋದ್ಧಾರ ದುರಿತಕ್ಕೆ ದೂರ ಜಗಕೆ ಆಧಾರ ದುಷ್ಟರಿಗೆ ಕ್ರೂರ 64 ಪೃಥುವಿಯ ಪಾಲ ದಿಟ್ಟಗೋಪಾಲ ಸತ್ಯದಲಿ ಶೀಲ ರುಕ್ಮಿಣೀಲೋಲ 65 ಅರಿ ನಿ ಸ್ಸೀಮ ಭಕ್ತರಾಪ್ರೇಮ 66 ವಿಶಾಲನೇತ್ರ ಪರಿಪೂರ್ಣಗಾತ್ರ [ವ ರ] ಸೀತಾಕಳತ್ರ ಸುಗ್ರೀವಮಿತ್ರ 67 [ರಾಜ] ದಶರಥ ಬಾಲ ಜಾನಕೀಲೋಲ ಮೂರ್ಜಗಪಾಲ ಕೀರ್ತಿವಿಶಾಲ 68 ಸತ್ಯಮೂರುತಿ ಪವಿತ್ರ ನೀನೆ ಜಗಕೆ ಕರ್ತನೂ ಕಾರಣಮೂರ್ತಿಯೂ ನೀನೆ 69 ನಂದನಕಂದ ಮುಕುಂದ ಗೋವಿಂದ ಇಂದಿರಾರಮಣ ನೀನೆಂದು ಪೊಗಳಿದರು 70 ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]<
--------------
ಯದುಗಿರಿಯಮ್ಮ
ಸುಖಿಯಾದೆನು ಶ್ರೀ ಪಾದಾ ಹೊಂದಿ ಗುರುವಿನಾ ಪ ಸರಿತ ಮಹಾನದಿಯೊಳು ಬೆರೆತಂತೆ | ನೆರೆ ಕೀಟಕ ಭೃಂಗಿ ಬೆರೆಸಿದಂತೆ 1 ಬಡವಗ ನಿಧಾನವ ದೊರೆತಂತೆ | ಪೊಡವಿ ಬೆಳೆಗೆ ಘನ ಮಳೆಗರೆದಂತೇ ಜಡ ಮತಿಗೇ ಶಾರದೆ ಒಲಿದಂತೆ 2 ತಂದೆ ಮಹೀಪತಿ ಕಂದಗ ವಲಿದು | ಛಂದದಿ ಭಕುತಿಯ ದಾರಿಗೆ ತಂದು | ಬಂದದ ಸಾರ್ಥಕ ಮಾಡಿದೆ ನಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಸುಮ್ಮನೆಲ್ಯದ ತಾ ನೋಡಿ | ನಮ್ಮಯ್ಯನ ಕೃಪೆ | ಸುಮ್ಮನೆಲ್ಲ್ಯದ ತಾ ನೋಡಿ ವಮ್ಮನಾಗದೇ ಪ ಅಂದಿಗಿಂದಿಗೇ ಒಂದೆರಡಲ್ಲದೆ | ಸಂಧಿಸಿ ಬಂದಿಹ ಜನ್ಮಗಳಲ್ಲಿ | ಕುಂದದೆ ಪುಣ್ಯದ ವೃಂದದ ಪಡೆದಾ | ನಂದದ ಛಂದದಿ ನಿಂದವರಲ್ಲದೆ 1 ಗಾಧವ ಸೂಸುವೆ ಸಾಧಕನಾಗಿ | ಸದರದಲಿ ಗುರು ಬೋಧದ ಲಿಂದಾ | ಸಾಧಿಸಿ ಸಾಧಿಸಿ ಬೇಧಿಸಿ ತನ್ನೊಳು | ವೇದಾಂತರಿ-ತಿಹ ಸಾಧುರಿಗಲ್ಲದೆ 2 ಬಂದದ ನುಂಡು ಬಾರದ ಬಯಸದೆ | ನಿಂದಿಸಿ ಲೊಂದಿಸಿ ಕುಂದದೆ ಹಿಗ್ಗದೆ | ತಂದೆ ಮಹಿಪತಿ ನಂದನ ನುಡಿ ನಿಜ | ವೆಂದನುಭವಕೆ ತಂದವಗಲ್ಲದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು
ಸ್ಮರಿಸಿ ಬೇಡುವೆ ಗುರುವರರ ಪಾದ- ಸರಸಿಜ ಸ್ಮರಿಪರಘುಪರಿಹರಿಸುವರಪ ಇಂದಿರೇಶನ ಮಹಿಮೆ ಬಲ್ಲ ಭಕ್ತ ಸಂದಣಿಯೊಳು ಇವರಿಗೆ ಸಮರಿಲ್ಲ ತಂದೆ ವೆಂಕಟೇಶ ವಿಠ್ಠಲನೆಂದು ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1 ಸಿರಿವೆಂಕಟೇಶನ್ನ ಸ್ಮರಿಸಿ ಬಹು ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ ಗಿರಿಯ ವೆಂಕಟನನ್ನು ಭಜಿಸಿ ನಮ್ಮ ಉರಗಾದ್ರಿವಾಸ ವಿಠ್ಠಲದಾಸರೆನಿಸಿ2 ಸದ್ವೈಷ್ಣವರ ಸುರಧೇನು ಸರ್ವ ರುದ್ಧಾರವಾಗಲು ಜನಿಸಿದರಿನ್ನು ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ ಮುದ್ದು ಮೋಹನ್ನ ವಿಠ್ಠಲದಾಸರನ್ನು 3 ಸುಂದರ ಮೂರ್ತಿಯ ತಂದು ದುರ್ಗ ಮಂದಿರದಲಿ ಸ್ಥಾಪಿಸಿದರೊ ಅಂದು ಛಂದದಿ ಸೇವಿಸಿರೆಂದು ಶಿಷ್ಯ ಮಂಡಲಿಗಳಿಗೆ ಬೋಧಿಸಿದರೆಂತೆಂದು 4 ಕಳವಳ ಪಡುತಿಹೆನಲ್ಲ ಕಾಲ ಕಳೆದು ಹೋಗುತಲಿದೆ ಅರಿವು ಬರಲಿಲ್ಲ ಪರಮ ಭಕ್ತರ ಪರಿಯನೆಲ್ಲ ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5
--------------
ನಿಡಗುರುಕಿ ಜೀವೂಬಾಯಿ
ಹನುಮ ಶ್ರೀರಾಮ ದೇವರ ಅತಿ ತ್ವರದಲಿ ಬಾ ಹನುಮ ಪ ದಿನವೊಂದು ಯುಗವಾಗಿ ದೈತ್ಯರಬಾಧೆಗೆ ಪರಿ ತಲ್ಲಣುಸುತಲಿದೆ ಅ.ಫ ಚಂಡ ಪ್ರಚಂಡನಾದ ದೇವಾ ಸದ್ಗುಣಭಾವಾ ಶೌರಿ ಹರೇ ಜಗದೋದ್ಧಾರಿ ಹಿಂಡು ಬಲದಿ ಬಂದೀ ದೈತ್ಯರನೆಲ್ಲ ಛಂಡಿಸಿ ಬಿಡುವಾ ಶರ್ತು ಬಿರುದು ನಿಂದ್ಹನುಮಾ 1 ಹತ್ತು ಮಾಸವು ಆಯಿತ್ಹನುಮಾ ಭಕ್ತರ ಪ್ರೇಮಾ ಒತ್ತಿಸೈನ್ಯದಿಂದ ವಾರಿಧಿ ಬಂಧಿಸಿ ಮತ್ತಿನ ದೈತ್ಯರ ಮರ್ದನ ಮಾಡೆಂದ್ಹೇಳ್ಹನುಮಾ 2 ರಾಜಾಧಿ ರಾಜನಾದಂಥಾ ರಾಮನಂತಾ ಭೋಜ ಮಹಿಮ ಬಲವಂತ ವಿಜಯನಂತ ಈನಗರ ರಕ್ಷಕ 'ಹೊನ್ನವಿಠ್ಠಲ' ರಾಜೀವಾಕ್ಷಗೆ ರೋಷವು ಇದ್ದರೆ 3
--------------
ಹೆನ್ನೆರಂಗದಾಸರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ
ಹನುಮಾ ಹನುಮಾಯನ್ನೆ ಉದ್ಧರಿಸುವೆ ನೀ ಜನುಮಾ ಪ ಭಂಜನ ನಿರಂಜನ ಎನ್ನ ಗುರುವೇ 1 ಸರ್ವಾಂತರಂಗಾ | ಕಿನ್ನರ ಫಣವರ ಯಕ್ಷ ವಿಧ್ಯಾಧರ ವಂದಿತನೇ 2 ವೃಂದವನಾಳಿ ಕುಠಾರಿ | ಛಂದದಿಂದಲಿ ಮಹಿಪತಿ ನಂದನ ಸಲಹುವಾನಂದದ ಮಾರುತಿ ಮೂರುತಿಯೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ಗೋವಿಂದ ಯನಬಾರದೇ ಪ್ರಾಣಿ ಪ ಹರಿ ಹರಿ ಗೋವಿಂದಯನಲು ಭಕುತಿಯಲಿ | ಹರಿಸುವ ಪಾಪೌಘವನು ಸಾರಂಗ ಪಾಣೀ 1 ವೃತ ತಪ ಸಾಧನದಿಂದಲೀ ನಿಲುಕದ ನಿಜಗತಿಯಾ| ಕ್ಷೀತಿಯೋಳು ಸುಲಭದಿ ಕೊಡುವನು ದೀನಾಭಿಮಾನಿ 2 ತಂದೆ ಮಹಿಪತಿ ಕಂದಗ ಸಾರಿದ ಯಚ್ಚರ ನೀ | ಛಂದದಿ ಇಹಪರ ನೀವದು ಯದುರಾಜ ಸ್ಮರಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಕೃಪೆಯೋಗ್ಯ ಮುಮುಕ್ಷನು ಧರಿಯೊಳು ಕಾಂಬ ಪರೋಕ್ಷನು ಪ ಹಿಂದಿನ ಪುಣ್ಯದಿ ಬಂದೆನೈ ದೇಹದಿ ಮುಂದಾವಗತಿಯಂದು ಮುಮುಕ್ಷನು ನೊಂದು ಮನದಿ ಪಶ್ಚಾತ್ತಾಪ ವಿರಕ್ತಿಯ ಹೊಂದಿದ ದಡದಲಿ ಮುಮುಕ್ಷನು ನಿಂದು ವಿವೇಕದಿ ಪರಮ ಶುಭೇಚ್ಛವ ಛಂದದಿ ಹಿಡಿವನು ಮುಮುಕ್ಷನು ಇಂದಿರೆ ಪತಿಗೋವಿಂದ ಮುಕ್ಕುಂದ ಸಲ ಹೆಂದು ಮೊರೆಯಿಡುವ ಮುಮುಕ್ಷನು 1 ಅಷ್ಟಮದ ಮುರಿದು ಆರರಿಗಳ ಇಟ್ಟಣಿ ಗಿಡಿಸುವ ಮುಮುಕ್ಷನು ದುಷ್ಟತನ ಬಿಡಿಸಿ ಮನನಿನ ಮಲ್ಲನೆ ಕಟ್ಟಲೆಳಿರಿಸುವ ಮುಮುಕ್ಷನು ನಿಷ್ಠೆಯಿಂದಲಿ ಗುರುಚರಣ ವಭಕುತಿಲಿ ಮುಟ್ಟಿಭಜಿಸುವನು ಮುಮುಕ್ಷನು ಇಷ್ಟಸ್ವಧರ್ಮಪಕರ್ಮಗಳನ್ನು ಕಾಮ್ಯವ ಬಿಟ್ಟು ನಡೆಸುತಿಹ ಮುಮುಕ್ಷನು 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿದಾಸನವನೇ ನೋಡಿ| ಬರೇ ವೇಷ ದೋರಲ ಬೇಡಿ ಪ ಒಂದರ ಘಳಗೆಯ ಕುಂದದಿ ಕಳೆಯಾ|ಮು| ಕುಂದನ ನಾಮವ ಛಂದದಲಿಹ 1 ಅನ್ಯರ ದೂಷಿಸಿ ತನ್ನನೇ ಹೊಗಳನು| ಸಣ್ಣ ದೊಟ್ಟದರಲಿ ಘನ್ನರಿತಿಹ 2 ಹುಲ್ಲ ಮನುಜರಿಗೆ ಹಲ್ಲವದೆರಿಯದೆ| ಫುಲ್ಲನಾಭನಪದದಲಿಹ ಮನ 3 ಮುಂದಿನ ಹಾನಿಯು ಇಂದಿವೆ ತೋರಲಿ| ಮುಂದಿಟ್ಟಟಡಿಯನು ಹಿಂದಕೆಳೆಯ 4 ನುಡಿವದು ಸಲಭ ನಡೆವುದು ದುರ್ಲಭ| ನಡೆನುಡಿಯಲಿ ಸಮಧೃಡಗಂಡಿಹ 5 ಹಂಗವಳಿದು ಸತ್ಸಂಗದಿ ಶ್ರವಣದಿ| ಕಂಗಳ ಸಿರಿಸುಖ ಮಂಗಳಲಿಹ 6 ತಂದೆ ಮಹಿಪತಿ ನಂದನ ಪ್ರಭುದಯ| ದಿಂದ ಭವಾಲಯ ಸಂದ ಜರಿದ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1 ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2 ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3 ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4 ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು