ಒಟ್ಟು 3287 ಕಡೆಗಳಲ್ಲಿ , 121 ದಾಸರು , 2495 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಪ ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸÀವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ 1 ವ್ರಾತ | ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ || ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು | ತುತಿಪ ಗತಿಗೆ ರಘು | ಪತಿನಾಮ ಎನಗೀಯೋ 2 ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ | ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ || ಸಿರಿ | ವಿಜಯವಿಠ್ಠಲನ | ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ 3
--------------
ವಿಜಯದಾಸ
ಉಗಾಭೋಗ ಪರಮಪುರುಷ ಕೇಳು ಒರೆದ ಮಾತಿಗೆ ನಾನು ನೆರೆ ತಪ್ಪುವನಲ್ಲ ವಂಚನೆ ಲೇಶವಿಲ್ಲ ಉರುದೈವ ವ್ಯಾಪಾರಕ್ಕೇನ ಮಾಡಲಿ ನಾನು ಸರ್ವವು ನಿನಗೆಂದು ಒಪ್ಪಿಸಿಹೆನಲ್ಲ ನರಕವಾಸಕೆ ನಾನು ಅಂಜÀುವನಲ್ಲವು ಮರಣಪಾಶಕೆಯಿನ್ನು ಅಂಜುವ ನಾನಲ್ಲ ಸರ್ವಸ್ವ ಹೋದರೂ ಚಿಂತೆ ಎನಗಿಲ್ಲ ಥರಥರ ಅಂಜುವೆ ನೊಂದೆ ವಿಷಯಕ್ಕೆ ಅರಿಯಲು ಅನೃತಕ್ಕೆ ಅಂಜುವೆ ನಾನಿನ್ನು ಸಿರಿ ಪರಾಕ್ರಮ ಶೌರ್ಯ ಇವುಗಳಿಂದಲಿ ಕೂಡಿ ಗರುವಪಡುತ ನಾನು ಮದಾಂಧನಾಗಿದ್ದೆ ಉರು ಶಿಕ್ಷೆ ಎನಗಿತ್ತು ಉದ್ಧಾರ ಮಾಡಿದೆ ಕುರುಡಗೆ ನೇತ್ರವು ದೊರೆತಂತೆ ಆಯಿತು ಪರಮ ಭಕ್ತನು ಆತನೆ ಪ್ರಹ್ಲಾದನು ಪರಿ ಪೀಡೆಗೆ ಗುರಿಯಾಗಿದ್ದರು ನಿನ್ನ ಸ್ಮರಿಸಿ ತಾನುತ್ತಮ ಗತಿಯನ್ನು ಪಡೆದನು ಸಿರಿಮದ ಕಳೆದೆನ್ನುನುದ್ಧಾರ ಮಾಡಿದೆ ಪರಮಪುರುಷ ನಿನಗೆ ಪ್ರಣಾಮ ಮಾಡುವೆ ಕರಿಗಿರೀಶನೆ ಕರುಣಿ ಕಾಯಬೇಕೆನ್ನನು
--------------
ವರಾವಾಣಿರಾಮರಾಯದಾಸರು
ಉಡುಪಿ ಪರಿಸರದ ದೇವತೆಗಳು ಕಣ್ವ ಋಷಿ ತಪಗೈದ ಅಜ್ಜರ್ಕಾಡೆಂಬಲ್ಲಿ ಅವನಿಗೊಲಿದಿರುವ ದುರ್ಗೆ ವಾಸವಾಗಿಹಳು ಒಳಕಾಡು ಎಂಬ ತಾನವೆ ಚಂದ್ರನ ತಪೋ ಭೂಮಿ ಇಲ್ಲಿಯೇ ಸಕಲ ವಿದ್ಯಾಲಯವಾಯ್ತು 132 ಬೆಳ್ಳಿ ಮಂಚದ ಕಾಲುಗಳು ನಾಲ್ಕು ಎಂಬಂತೆ ಆರ್ಮೊಗನ ರೂಪಗಳು ನಾಲ್ಕು ದೆಸೆಗಳಲಿ ಮಾಂಗೋಡು ತಾಂಗೋಡು ಆರಿತೋಡು ಮುಚ್ಲಿಕೋಡು ನಾಮದಿಂ ಬೆಳಗುವವು ಷಷ್ಠಿದಿನದಂದು 133 ಕಡಿಯಾಳಿ ಎಂಬಲ್ಲಿ ಮಹಿಷಮರ್ದಿನಿಯಾಗಿ ದುರ್ಗಾಲಯವು ಉಡುಪಿ ಪೂರ್ವದ್ವಾರದಲ್ಲಿ ಪುತ್ತೂರು ಬೈಲೂರು ಬಡಗು ತೆಂಕು ದೆಸೆಯಲ್ಲಿ ಕೃಷ್ಣ ಸೇವೆಗೆ ದುರ್ಗೆ ಕಟಿಬದ್ಧಳಿಹಳು 134 ಸತ್ಯ ನುಡಿಯಲ್ಲಿರಲಿ ಧರ್ಮ ನಡೆಯಲ್ಲಿರಲಿ ಸ್ವಾಧ್ಯಾಯದಲಿ ಎನಗೆ ಎಚ್ಚರವದಿರಲಿ ಅಜ್ಞಾನದಂಧಕಾರದ ದಿಕ್ಕಿನಿಂದೆನ್ನ ನಿನ್ನ ಬೆಳಕಿನ ಕಡೆಗೆ ಕರೆದೊಯ್ಯು ದೇವಾ 135 ಪರಶುರಾಮಕ್ಷೇತ್ರ ಹುಟ್ಟುಭೂಮಿಯು ಎನಗೆ ಪರಶುರಾಮನು ನೀನೆ ನಿನ್ನ ಕ್ಷೇತ್ರವಿದು ಪರಮಹಂಸಾಖ್ಯಯತಿಗಳ ಮಾನಸಹಂಸ ಸೋಹಂ ಎನ್ನುವ ಬ್ರಹ್ಮ ಎನ್ನೊಳಗೆ ಇರುವೆ 136 ಕೃಷ್ಣಾರ್ಪಣವದಿಲ್ಲದಾವುದು ಫಲ ಕೊಡದು ಅದರಿಂದ ಕೃಷ್ಣನಿಗೆ ಕೃತಿಯನರ್ಪಿಸುತ ಸಾಲೋಕ್ಯ ಸಾಮೀಪ್ಯವನ್ನು ಬಯಸುವೆ ನಾನು ಯೋಗ್ಯತಾನುಗುಣವಾಗಿ ಫಲವ ಕೊಡು ಹರಿಯೆ137 ಪರಶುರಾಮನು ರಾಮ ಪರಶು ರಾಮನು ಕೃಷ್ಣ ರಾಮದಾಸನು ನಾನು ಕೃಷ್ಣದಾಸನಿಹೆ ಬರೆದ ಕೃತಿಯಿಂದ ನೀನ್ ಸುಪ್ರಸನ್ನತೆ ಪಡೆದು ಭಕ್ತಿ ಮುಕ್ತಿಗಳ ಕೊಟ್ಟು ರಕ್ಷಿಸು ಶ್ರೀಶ 138 ಉಡುಪಾನ್ವಯಜ ನಾನು ಉಡುಪಾನ್ವಯದ ನೀನು ಉಡುಪಿ ಹುಟ್ಟೂರೆನಗೆ ನೀನುಡುಪಿಗತಿಥಿ ಮಧ್ವ ಹೃದಯವು ನಿನಗೆ ವಾಸದ ಸ್ಥಾನವಿರೆ ಮಾಧ್ವಕೋಟಿಗಳಲ್ಲಿ ಕೀಟನಾಗಿಹೆ ನಾನು 139 ವಿಷ್ಣು ಪದದೊಳಗಿರುವ ಜ್ಯೋತಿಲೋಕದ ಒಡೆಯ ಆ ಜ್ಯೋತಿಲೋಕಕ್ಕೆ ಕರೆದೊಯ್ಯುತ ನನ್ನ ಭಕುತರಿಗೆ ಮುಕುತಿ ಕೊಡುವುದೆ ನಿನ್ನ ಸಂಕಲ್ಪ ಅದರಿಂದ ನಿನ್ನನ್ನು ಶರಣು ಶರಣೆಂಬೆ 140 ಚಾಂದ್ರಮಾನದ ಪಿಂಗಳಾಖ್ಯ ಸಂವತ್ಸರದಿ ಚೈತ್ರ ಮಾಸದ ನವಮಿಯ ದಿನದಲ್ಲಿ ಕಾಲ ಇದನರ್ಪಿಸುತ ನಾನು ಕೃತಕೃತ್ಯನಾದೆ ಶ್ರೀಕೃಷ್ಣ ಕಾಪಾಡು 141
--------------
ನಿಡಂಬೂರು ರಾಮದಾಸ
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಉದಯದಲೆದ್ದು ಶ್ರೀಹರಿಯ ನಾಮಂಗಳನು | ವದನದಿಂದುಚ್ಚರಿಸಿ ಪಾಡುವ ನರರು ದುರಿ | ಮುದದಿಸದಮಲಾನಂದ ಸುಖವ ಪ ಕೃಷ್ಣ ಕಮಲೇಶ ಕಂಜಾಕ್ಷ ಕರುಣಾಬ್ಧಿ ಶ್ರೀ | ವಿಷ್ಣು ವಿರಂಚಿಪಿತ ವಿಮಲ ವಿಶ್ವೇಶ ಭ್ರಾ | ತುಷ್ಣಿಕರ ಕೋಟಿತೇಜಾ || ವೃಷ್ಣಿ ಕುಲತಿಲಕ ವೃಂದಾವನ ವಿಹಾರಿ ಗೃಹ | ಜಿಷ್ಣು ಸುರಸೇವೆ ಸಜ್ಜನ ಪ್ರಿಯ ಸರ್ವೇಶನ | ಅಭಿಮಾನಿ ಎಂದು1 ಪರಮ ಪುರುಷೋತ್ತಮ ಪರಂಧಾಮ ಪರಬ್ರಹ್ಮ | ಪರಮಾತ್ಮ ಪರಂಜ್ಯೋತಿ ಪರತರಾನಂದ ಗುಣ ಪರಿಪೂರ್ಣ | ಪದ್ಮನಾಭ | ಮುರಮಥನ ಮದನಮೋಹನ ಮುರಲಿಲೋಲ ಮಧು | ಹರಹಲಾಯುಧ ಹಯವದನ ಸ್ಮರಹರಾರ್ಚಿತ | ಚರಣ ಸಚರಾಚರ ವ್ಯಾಪ್ತ ಚಿದ್ವನರೂಪ ಚಾರುಚರಿತ ಚಲರದಹಿತನೆಂದು 2 ಕಾಮಜಿತರೂಪ ಕೌಸ್ತುಭಧಾರಿ ತ್ರಿ | ಧಾಮ ತ್ರಿವಿಕ್ರಮ ತ್ರಿಕಾಲಙ್ಞ ತ್ರಿಜಗನುತ | ಹರಣ || ಶುಭ | ನಾಮ ನಾರದ ಪ್ರಿಯ ನಾರಾಯಣ ಜನಕ | ಕಾಮಪೂರಿತನೆಂದ 3 ಅನಿರುದ್ಧ ಧೋ ಕ್ಷಜಾಕ್ಷರತೀತಕ್ಷಯ ಗದಾಂ | ಪವನಜ ಪ್ರಿಯ ನರಕಾಂತಕಾ | ಗಜಗತಿಪ್ರದ ಗರುಡಗಮನ ಗೋವಿಂದ ಗೊ | ವ್ರಜಪಾಲ ವನಮಾಲಿ ವಸುದೇವಸುತ ಶಾರಂಗಿ | ಕುಜಹರ ಕಿರೀಟಧರ ಜಂಭಾರಿಧೃತ ಚತುರ್ಭುಜ ಭುವನ ಭರಿತನೆಂದು4 ಶ್ರೀರಂಗ ಮುನಿಸಂಗ ಸುರತುಂಗ ಗೋಪಾಂಗ | ನಾರಿಮಣಿ ನೀಲಾಂಗ ಕಾಳಿಂಗ ಮದಭಂಗ | ಸಹಕಾರನೆಂದು | ನೂರೆಂಟು ನಾಮಾವಳಿಯ ರತ್ನಮಾಲಿಕೆಯ | ನಾರುಧರಿಸುವರವರ ಇಷ್ಟಾರ್ಥಗಳ ಕೊಟ್ಟು | ಸಹಕಾರ ನಿಜಪದವಿತ್ತು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉದಯವಾಯಿತು ಹೃದಯ ಕಮಲದೊಳಗೆ ಧ್ರುವ ಗುರುಕರುಣಾನಂದಬೋಧ ಅರುಣೋದಯವಾಯಿತು ಸ್ಮರಣಿಗರವು ದೊರೆಯಿತು ಹರಿಯ ಚರಣದ 1 ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು ತಾಮಸನಿದ್ರೆ ಹರಿಯಿತು ತಿಮಿರಾಂಧದ 2 ಥಳಥಳಿಸುವ ರವಿಕೋಟಿ ಬೆಳಗಾಯಿತು ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ 3 ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ ಉದಯವಾಯಿತದೃಷ್ಟವು ಸದೃಷ್ಟವಾಗಿ 4 ಸದ್ಗತಿ ಸುಖವಿದು ಸದೋದಿತವಾಯಿತು ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದ್ದಂಡ ಚಿದಾನಂದ ಪ ಅವರಿಗೆ ನಾ ಮರುಳಾಗಿ ತನಯರೈವರ ಬಿಟ್ಟೆ ನಾಲ್ವರು ಭಾವಂದಿರನು ಬಿಟ್ಟೆ ಸನುಮ-ತವಾಗಿದ್ದ ಸರಿವರ್ಗತನವ ಬಿಟ್ಟೆನಿನಗೆ ಮಾಡಿದ ಲೇಸ ಎನ್ನಲೇಸನು ನೀನು1 ಅರಸನೊಳ್ಳಿದನೆಂದು ಆರಣ್ಣರ ಬಿಟ್ಟೆಹಿರಿಯ ಮಮತೆಯಲ್ಲಿದ್ದ ಅಕ್ಕಂದಿರನು ಬಿಟ್ಟೆಸರಿಹೋಗಿ ಎನಗಿಷ್ಟದ ಸವತಿ ಮೂವರ ಬಿಟ್ಟೆಕರುಣಾಕರನು ಕೈ ವಿಡಿಯ ಲಂತಾದುದಾ2 ಅತಿಮೋಹ ಮಾಡುವ ಅಷ್ಟಾಪ್ತರನು ಬಿಟ್ಟೆಪಿತರೀರ್ವರನು ನಾನು ಹೇವರಿಸಿ ಬಿಟ್ಟೆಸತತ ಚಿಂತಿಪ ಹತ್ತು ಸಖಿಯರನು ನಾ ಬಿಟ್ಟೆಮತಿ ಎನಗಿನ್ನೇನೆ ಮಂದಗಮನೆ ಹೇಳೆ 3 ನಿತ್ಯ ಕಾಲದಿ ಅವನ ನಿಜಸೇವೆ ಮಾಡುತಿಹೆಸತ್ಯ ಸತ್ಯವೆ ಎಂಬ ತೆರದಿಂದಲಿಪ್ರತ್ಯಗಾತ್ಮನು ತನ್ನ ಕೀರ್ತಿವಾರ್ತೆಯ ನೆಲ್ಲಕೂರ್ತು ಮರೆಯಾದಂತೆ ಎನಗೆ ಮಾಡಿದುದ ನೀನು4 ಎನ್ನ ಸುಖದುಃಖ ಫಲ ಎನ್ನ ಕೈ ಮೇಲುಂಟೆನೆಚೆನ್ನ ಚಿದಾನಂದ ಗುರುವಿನಿಂದಉನ್ನತ ನಂಬುಗೆ ಎಂಬುದಿಂತಾಯಿತೇಬಣ್ಣಿಸಲೇನವ್ವ ಬಯಲ ಕೂಡಿಸಿ ಬಿಟ್ಟ 5
--------------
ಚಿದಾನಂದ ಅವಧೂತರು
ಉದ್ದಾಳಿಕನ ಕಥೆ ಪಾಶಾಂಕುಶ ಧರನೆ ಕರಿಣಿಸೊ ಮತಿಯ 1 ಮಾನಿನಿಕುಲಕೆ ಕಟ್ಟಾಣಿ ಕರುಣಿಸೆ ಮತಿಯ2 ಮನೋಹರನೆ ನಿಜಮತಿಯ 3 ಅಂಬರ ಮೇಲಾದಷ್ಟದಿಕ್ಪಾಲಕರು ಪುಣ್ಯಕಥೆಯ 4 ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ5 ವೇದವೇದಾಂತ ಪಾರಗನು ಧರ್ಮ ಪತ್ನಿ 6 ಸುತಜನಿಸಿದ ಉದ್ದಾಳಿಕ ಮಾಡಿದ ಕ್ರಮದಿಂದ 7 ಮೌಂಜಿಯ ಕಟ್ಟಿ ನಡೆದರು ಪರಗತಿಗೆ 8 ನಾಲ್ಕು ವೇದಗಳ ಘನತಪವನಕಾಗಿ ನಡೆದ 9 ನಿಂದು ಬೆಳಗುವ ಜ್ಯೋತಿಯಂತೆ ಸಂದವರುವತ್ತು ಸಾವಿರವು 10 ಪಟ್ಟಣದಿ ರಾಜ್ಯವಾಳುವನು 11 ಕನ್ಯಾದಾನವು ಭೂದಾನ ರಾಜ್ಯವಾಳುವನು 12 ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು ದೇಶದೊಳಗೆ 13 ಪುಣ್ಯಸಾಧನರು ಸಜ್ಜನರು ಧರ್ಮಗಳಾ ದೇಶದೊಳಗೆ 14 ಬಡವರಿಲ್ಲಿ ಚಾರರುಂಟು ದೇಶದೊಳಗೆ 15 ಧರ್ಮವ ನಡೆಸಿ ರಾಜ್ಯವಾಳುವನು 16 ಮಕುಟವೆಂದೆನಿಸಿ ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು17 ಸಂತೋಷದೋರಲು ಹುಟ್ಟಿದಳ್ ಚಂದ್ರಾವತಿಯು 18 ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು ಮಾಣಿಕವೆ ಸಂತಾನ 19 ನಡೆಯೋಳು ದಟ್ಟಡಿಯಿಡುತ ಕಡುಲಾಲಿಕೆ ಬಾಲಲೀಲೆ 20 ಬಡವಾದಾಳೆಂದು ಕಡುಹರುಷದಲಿ ಹಿಗ್ಗಿದರು 21 ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ ಪುತ್ರಿಗಭ್ಯಾಸ ಮಾಡಿಸಿದ 22 ಯೌವನವು ತೋರಿದವು ಆಲಯವನೆ ಕಟ್ಟಿಸಿದ 23 ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ24 ಮುನಿಕೌಶಿಕನು ನೋಡುತಲಿ 25 ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ] ಯಮ ಲೋಕವನು ಜೀವಿಗಳ ತಾಕಂಡ 26 ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ] ಯಲ್ಲಿ ನಿಂತು ಮಾತಾಡಿ ತಿಳಿದು ಹೇಳುವುದು ಎನ್ನೊಡನೆ 27 ಜಗದೊಳಗೆ ಎಮಗೆ ಪತನಕ್ಕೆ ಬಿದ್ದೆವೆಂದೆನಲು 28 ಕಾಣಿಸುವ ದೌಹಿತ್ರರು ಮುನಿಯು ಕೇಳಿದನು 29 ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ ತಿಳಿದು ಹೇಳುವುದು 30 ಪುತ್ರಸಂತಾನವ ಪಡೆದು ವಿಸ್ತಾರವಾಗಿ ಹೇಳುವುದು 31 ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ ತಪೋವನವ 32 ಕರವಿಡಿದು ಕರೆ ತಂದನಾಗ ಬರವೇನೆಂದು ಕೇಳಿದನು 33 ಯಮ ಲೋಕವನು ಅತ್ಯಂತ ನರಕಕೈದುವರು 34 ಆಲಸÀ್ಯವಿಲ್ಲದೆ ಬೀಳ್ಪರು ಪತನಕ್ಕೆ º
--------------
ಹೆಳವನಕಟ್ಟೆ ಗಿರಿಯಮ್ಮ
ಉದ್ಧರಿಸ ಬೇಕಿನ್ನು ಗುರು ರಾಘವೇಮದ್ರರಾಯಾ ಪ ನಿನ್ನ ಬಿಟ್ಟರೆ ನನಗಿಲ್ಲ ಬೇರಾರು ಗತಿಯಿಲ್ಲ ಕಾವ ಕರುಣಿಯು ನೀನೆ ರಾಘವೇಂದ್ರಾ ಅ.ಪ ಮೋದ ಪಡಿಸೆಮ್ಮನು ಆದರಿತಿಪೂದಯ್ಯ ಗುರುರಾಘವೇಂದ್ರಾ 1 ಒಂದು ದಿನವೂ ನಿಮ್ಮ ನಾಮ ನುಡಿಯಲಿಲ್ಲವೊ ನಾನು ಮಂದ ಮತಿನಾನಾದೆ ಗರುರಾಘವೇಂದ್ರಾ ಕುಂದುಗಾ ಳೆಣಿಸದಿರು ನೊಂದೆನೈಯ್ಯಾ ನಾನು ತಂದೆಯಂದದಿ ಕಾಯೊ ಗುರುರಾಘವೇಂದ್ರಾ2 ನಮೊ ನಮೋಗುರುರಾಜ ನಮೊ ನಮೋ ನಮೋ ಗುರು ರಾಘವೇಂದ್ರಾ 3
--------------
ರಾಧಾಬಾಯಿ
ಉದ್ಧರಿಸೆನ್ನ ಶುದ್ಧ ಮಧ್ವಮತದ ಧೊರೆಯೆ ಬಿದ್ದು ಪೇಳುವೆ ಪ ಮಾನವ ಜನ್ಮವ ವಹಿಸಿ ಸಾನುರಾಗದಿ ನಿನ್ನ ಭಜಿಸಿ ಮಾನ್ಯನೆನಿಸಿದೇ 1 ಎಷ್ಟು ಕಷ್ಟ ಬರಲಿ ಇನ್ನು ದುಷ್ಟ ಮನಸು ಕಳೆದು ಮುನ್ನಾ ಸೃಷ್ಟಿಕರ್ತಾ ಭೃತ್ಯಘನ್ನ ತುಷ್ಟಿನೀಡ್ವುದೈ2 ಸ್ಮರಿಸಿ ನರಸಿಂಹವಿಠಲನ ಭರದಿ ನಿನಗೆ ಮರೆ ಇಡುವೆನಾಗಿ ದುರುಳ ನರರ ಸಂಗತಿಯನು ಮರಿಸಿ ಪೊರೆವುದೈ 3
--------------
ನರಸಿಂಹವಿಠಲರು
ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ ನೀಲ ಲೋಹಿತ ವಿಗತ ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ ಕೊಂಡ ಮೇತೌಷಧವನಿತ್ತು 1 ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ ಪಂಚಭೇದ ಜ್ಞಾನವನರುಹಿ 2 ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ ಕಳತ್ರ | ತಾಮರಸ ಭವಪುತ್ರ ಧವಳಗಾತ್ರ 3
--------------
ಶಾಮಸುಂದರ ವಿಠಲ
ಉಪಾಧಿ ರಹಿತ ಧ್ರುವ ಆಶ್ರೈಸಿಹ್ಯ ದಾವನು ಶ್ರಯಧೇನು ನಾಸ್ತಿಕ್ಯವಗೆಲ್ಲಿಹುದು ತಾನು 1 ಇವ್ಹದಾವನು ಸುರತರುವಿನ ಬಲಿ(ಳಿ?) ಯು ಅವಗೆಲ್ಲಿಹುದುದರದ ಕಳವಳಿಯು 2 ಸುರನದಿಯಲ್ಲಿ ದಾವನ ಸಹವಾಸ ಧರೆಯೊಳಗವಗೆಲ್ಲಿಹ ಮಹಾ ದೋಷ 3 ರವಿ ಪ್ರಭೆಯೊಳು ದಾವನಿಹನು ಕೂಡಿ ಅವಗೆಗೆಲ್ಲಿಯ ಕಗ್ಗತ್ತಲೆ ನೋಡಿ 4 ದಾವ ಮಹಿಪತಿ ಗುರು ಪಾದ್ಹೊಂದಿಹ್ಯ ಅವಗೆಲ್ಲಿಹದು ತಾ ಭವಬಂಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ. ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ ರಿದಕೆ ಕೋಪಿಸಿ ಬಂದರು ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ ಮದನಪಿತ ತಾಳದೆ ಇಳೆಗೆ ನಡೆತಂದ ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1 ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ ಮಧ್ವಸದ್ಭಾಷ್ಯಕಾರ ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ- ಬುದ್ಧಜನೆನುತ ಬಂದ ವೇದಾಂತದೇವಿಯರು ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ- ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2 ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ- ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ ಅಪ್ರಬುದ್ಧರ ಮುಂದೆ ಆಡುವಾಟಗಳು ಈ ಸುಪ್ರಬುದ್ಧರ ಸಭೆಯಲಿ ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ ಸುಪ್ರಭಾತವು ಬಂತು ಹಯವದನ ದಿನದಿನದಿ ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3
--------------
ವಾದಿರಾಜ
ಋಣವ ಮಾಡಿದ ಪತಿತನು ನಾನು ಸ್ಮøತಿಧನವ ಪಾಲಿಸು ಸೀತಾರಾಮ ನೀನು ಪ'ರಿಯರ ಮಾತನು 'ಂದುಗಳೆದು ಮುಂದೆಬರುವ ದುಃಖಗಳ ಬಗೆಗೊಳದೆದುರುದುಂಬಿತನದಿಂದ ದುಷ್ಟಸಂಗತಿಗೈದುಪರರ ಮೆಚ್ಚಿಸಿ ಬಾಳ್ವ ಪೌರುಷ್ಯವನು ನೀಗಿ 1ಹೆಮ್ಮೆಯ ಬಲು'ಷ ಹೆಡತಲೆಗೇರಿರೆಸುಮ್ಮಾನಬಡುತತಿಸುಖ'ದೆಂದುಉಮ್ಮಳಿಪರ ಠಕ್ಕಿಗುಬ್ಬಿ ುೀ ಪರಮಾತಿಗೊಮ್ಮೆಯು ಮನಗೊಡದೊರಟುಮಾರ್ಗವ ಸಾರಿ 2ಕಾಶಿಯೊಳ್ಮರಣವ ಕಾ'ುಸಿದರೆಯುಸನ್ಯಾಸವ ಮಾಡ್ದರು ಸನ್ಮುಕ್ತಿಯುತಾ ಸೋಕದು ಋಣತಗು'ದ್ದವನನೆನ್ನು'ೀ ಸೊಲ್ಲ 'ರಿಯರು ಸಾರಿದರೆಯು 'ುೀರಿ 3ಗೋವ ಕೊಂದವನಿಗೆ ಗಂಗೆಯ ಹಳಿದಗೆಭಾವೆ ಭೂಸುರರನು ಬಡಿದವಗೆಯಾವದು ಗತಿಯದು ನಿಷ್ಕøತಿ ಋಣಿಗಿಲ್ಲೆಂದುಭಾವಜ್ಞರರು'ದ ಭಯವನು ಗಣಿಸದೆ4ಬಡ್ಡಿಯ ಹೆಚ್ಚಿಸಿ ಬಹು ಧನವನು ತಂದುಕಡ್ಡಿಗೆ ಸರಿಮಾಡಿಕೊಟ್ಟವರಾಅಡ್ಡಿಯ ತೋರಿಸುತ ಸುಲಭ ಮುಳುಗಿಸಿದುಡ್ಡು ದುಗ್ಗಾಣಿಯ ತಿರಿದುಂಬ ರೀತಿಗೆ 5ಋಣಕರ್ತೃ ಪಿತೃಶತ್ರು ಧನಕರ್ತೃ ಪಿತೃ ಸಖಯೆನುವ ಗ್ರಂಥಾರ್ಥಗಳನು ಕೇಳಿಯೂಗಣಿಸದೆ ಸತಿ ಸುತರ್ಕೊರಗಿದರೆಯು ಕೆಟ್ಟುತೃಣಕಿಂತ ಕಡೆಯಾಗಿ ತಬ್ಬಿಬ್ಬನಾಡುತ್ತ6ಸಾಲವ ಕೊಟ್ಟವ ಸಾರಿ ಸಾರಿಗೆಕೇಳಿದರವನಿಗೆ ಕದ್ದೋಡುತಾಬೇಳುವೆ ಮರಣವ ಬಾಯಲಾಡುತ ಬುದ್ಧಿಜಾಳಾಗುವಂದದಿ ಜಡಿದು ಹೆದರಿಸುತ 7
--------------
ತಿಮ್ಮಪ್ಪದಾಸರು