ಒಟ್ಟು 44128 ಕಡೆಗಳಲ್ಲಿ , 139 ದಾಸರು , 10983 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೆ ಗೆಲಿಸಮ್ಮ ನಮ್ಮ ಪಂಥವ ಶ್ರೀರಂಗನ ರಾಣಿಯರ ಸೋಲಿಸುವೆ ಪ. ಭಾರ ವಹಿಸಿದ 1 ಸಗರನ ಮಕ್ಕಳ ಅಘದೂರವಾಗಲೆಂದುಭಗೀರಥ ಭಾಳ ತಪಮಾಡಿಭಗೀರಥ ಭಾಳ ತಪಮಾಡಲು ವ್ಯಾಜ್ಯದಿಜಗವ ನುದ್ಧರಿಸಿದ ಜಾಹ್ನವಿ2 ನಾಗಶಯನನ ಮಗಳು ಸಾಗರನ ನಿಜರಾಣಿಈಗ ನೀ ನಮ್ಮ ಗೆಲಿಸೆಂದುಈಗ ನೀ ನಮ್ಮ ಗೆಲಿಸೆಂದು ಸುಭದ್ರೆಬೇಗನೆ ಕೈಯ ಮುಗಿದಳು3 ಪ್ರಯಾಗ ರಾಜನ ಮುಂದೆ ವೇಗದಿ ಹರಿದಳುಹೋಗಿ ಸರಸ್ವತಿಯ ನೆರೆದಳುಹೋಗಿ ಸರಸ್ವತಿಯ ನೆರೆದು ಯಮುನೆಯ ಸೇರಿಸಾಗಿಹಳು ಕಾಶಿಪುರಕಾಗ 4 ಕಂಚಿ ಕಾಶಿ ಮುಂದೆ ಪಂಚಗಂಗೆಯೆನಿಸಿಅಂಚು ಅಂಚಿಗೆ ಮೆರೆಯೋಳುಅಂಚು ಅಂಚಿಗೆ ಮೆರೆಯುವರಾಮೇಶನ ಪಂಚಪ್ರಾಣಳ ಬಲಗೊಂಬೆ 5
--------------
ಗಲಗಲಿಅವ್ವನವರು
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ಗಂಗೆ ಮಂಗಲ ತರಂಗೆ ಪಾಹಿ ಪಾಪಭಂಗೆ ಹರಿಪಾದಸಂಗೆ ಪ ನಿತ್ಯ ನೆಲಸಿದೆ ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ 1 ಸಗರಪುತ್ರರ ಪವಿತ್ರಿಸಿದೆ ಜಗವರಿಯೆ ಜಹ್ನುತನಯೆಯಾದೆ 2 ರಾಜೇಶ ಹಯಮುಖ ತನಯೆ ರಾಜಧರ್ಮನು ನಿನ್ನ ತಟದಲ್ಲಿ ಮೂಜಗವು ತಾ ಪೊಗಳುವಂದದಿ ವಾಜಿಮೇಧನ ಗೈದನಾದರದಿ 3
--------------
ವಿಶ್ವೇಂದ್ರತೀರ್ಥ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಗಂಗೆ-ಕಾವೇರಿ ವಾತ ಸಂಗದಿ ಆವ ದೇಶವು ಧನ್ಯವೊ ಪ ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ ಗೈವ ಸುಜನರೇ ಧನ್ಯರೋಅ.ಪ ಆದಿ ಮಧ್ಯಾಂತರಂಗರ ಸೇವೆಯನು ಮಾಡಿ ಸಾಧಿಸಿದೆ ಮಾಂಗಲ್ಯವ ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ ಮಾದರದಿ ಸೇವಿಸುವರು 1 ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ ಲಾಲನೆಯ ಪಡೆಯುತಿರಲು ಕೇಳುವನು ನಿನ್ನಯ ಕೃಪಾಲವದಿ ತನು ಮನವ ಕೀಳು ವಿಷಯಕೆ ಬಿಡದಿರು 2 ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು ಮಾನ್ಯಳಾಗಿರುವೆ ಮಾತೆ ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ ಸನ್ನ ಮುಖಿ ನಿಶ್ಚಯವಿದು 3
--------------
ವಿದ್ಯಾಪ್ರಸನ್ನತೀರ್ಥರು
ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ತರಂಗಿಣಿ ಹರಿಪಾದ ಸಂಗಿಗೆ ಕೋಲ ಕೋಲೆನ್ನಿರೆ ಪ. ಗೋದಾ ನಿನ್ನಯ ಪಾದಾ ಆದರದಿ ಬಲಗೊಂಬೆಸಾಧು ಸಜ್ಜನರ ಸಲಹುವಿಸಾಧು ಸಜ್ಜನರ ಸಲಹುವಿ ನಮಗಿನ್ನುಮೋದದಿ ಮುಯ್ಯವ ಗೆಲಿಸೆಂಬೆ1 ಕೃಷ್ಣ ನಿನ್ನಯ ಪಾದಮುಟ್ಟಿ ಭಜಿಸುವೆನುಇಷ್ಟವ ಕೊಟ್ಟು ಕಾಲಕಾಲಕ್ಕೆಇಷ್ಟವ ಕೊಟ್ಟು ಕಾಲಕಾಲಕ್ಕೆ ಸಲಹುವಿಶ್ರೀ ಕೃಷ್ಣನ ಮಗಳ ಬಲಗೊಂಬೆ 2 ಚಾರು ಚರಣವ ಬಲಗೊಂಬೆ 3
--------------
ಗಲಗಲಿಅವ್ವನವರು
ಗಂಗೆಯ ಶಿರದಿ ಪೊತ್ತವಗೆಮಂಗಳಪ್ರದಗೆ ಶಂಕರಗೆಪುಂಗವರಾಜವಾಹನಗೆಮಂಗಳಾರತಿಯನೆತ್ತಿರೆ 1 ಪಾಕಾರಿ ಪೂಜಿತಪಾದಗೆಮಾಕಾಂತನೇತ್ರಾರ್ಚಿತಗೆಶ್ರೀಕರಗೇಕೋರುದ್ರಗೆಏಕಾರತಿಯನೆತ್ತಿರೆ 2 ಪಂಚಬಾಣನ ಗೆಲಿದವಗೆ ತ್ರಿಪಂಚನೇತ್ರಗೆ ಪಂಚಮುಖಿಗೆಪಂಚಕೃತ್ಯಾಧೀಶ್ವರಗೇಪಂಚಾರತಿಯನೆತ್ತಿರೆ3 ಕಮಲಸಂಭವನುತಿ ಪಾತ್ರಗೆಕಮಲಾಪ್ತಕೋಪ್ತಕೋಟಿಭಾಸುರಗೆಕಮಲಾಹಿತ ಭೂಷಣಗೆಕಮಲದಾರತಿಯನೆತ್ತಿರೆ 4 ನಾಗೇಂದ್ರಚರ್ಮಾಂಬರಗೆನಾಗೇಂದ್ರ ಹಾರಶೋಭಿತಗೆನಾಗೇಂದ್ರ ಶಯನಸನ್ನುತಗೆನಾಗಾರತಿಯನೆತ್ತಿರೆ 5 ಸರ್ಪಕಂಕಣ ಸದಾಶಿವಗೆಮುಪ್ಪುರವನು ಗೆಲಿದವಗೆಕಪ್ಪು ಗೊರಲಗೆ ಕಾಮದಗೆಕಪ್ಪುರದಾರತಿಯನೆತ್ತಿರೆ 6 ಜಯ ಜಯ ಕೆಳದಿ ಪುರೇಶಜಯ ಜಯ ಶ್ರೀ ಪಾರ್ವತೀಶಜಯ ಜಯ ಶ್ರೀ ರಾಮೇಶ್ವರಜಯವೆಂದಾರತಿಯನೆತ್ತಿರೆ7
--------------
ಕೆಳದಿ ವೆಂಕಣ್ಣ ಕವಿ
ಗಂಗೇ ಜನನೀ ಮಂಗಳರೂಪಿಣಿ ತುಂಗ ಮಹಿಮನ ಪಾದಾಂಗುಳಿಜಾತೆ ಪ ಸಂಗತಿಯರುಹಲು ಬಂದಿರುವೆವು ಕೃಪಾ ಪಾಂಗವ ತೋರೆಲೆ ಇಂಗಿತವರಿತು ಅ.ಪ ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು ಶೂಲಧರನ ಶಿರ ಆಲಯ ಮಾಡಿದೆ ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ ಪೇಳಲಳವೆ ನಿನ್ನ ಶೀಲವ ಸುಲಭದಿ 1 ಚಾರು ನದಿಗಳು ಹೇರಳವಿದ್ದರು ಭಾರತ ದೇಶದಿ ಭಾಗ್ಯದೇವತೆ ನೀ ದೂರ ದೂರ ದೇಶಗಳಲಿ ನೆಲೆಸಿಹ ಧೀರರು ನಿನ್ನಯ ಕೋರುತಲಿರುವರು 2 ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಂಗಲ್ಯವ ಪಡೆವುದು ಶೃಂಗಾರದ ನಿಧಿ ರಂಗನ ಸೇವೆಗೆ ಗಂಗೇ ಎನ್ನಂತರಂಗವ ಶೋಧಿಸೆ 3 ಭೂಮಿಯ ಭೇದಿಸಿ ಸುಂದರ ರೂಪದಿ ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ ಆ ಮಹಾತ್ಮರ ದರುಶನದಿ ಪ್ರಸನ್ನಳೇ ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ 4
--------------
ವಿದ್ಯಾಪ್ರಸನ್ನತೀರ್ಥರು
ಗಜವÀದನ ಪಾಲಿಸೊಗಜವÀದನ ಪಾಲಿಸೊ ಪತ್ರಿಜಗದೊಡೆಯ ಶ್ರೀ ಭುಜಗಭೂಷಣಗಜವÀದನ ಪಾಲಿಸೊ ಅ ಪಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿಪಥವ ತೋರೊ ಶಕ್ತಿ ಸ್ವರೂಪನೇ 1 ವಾಸವ ಪೊಗಳುವೆಲೇಸಪಾಲಿಸೊ ನಿತ್ಯವಾಸವನುತ2 ಪೊಡವಿಯೊಳಗೆ ನಿನ್ನ ಬಿಡುವರ್ಯಾರೊ ಎನ್ನಕಡುಹರುಷದಿ ಕಾಯೋ ವಿಜಯ ವಿಠ್ಠಲದಾಸ 3
--------------
ವಿಜಯದಾಸ
ಗಜವದನಾ ಬೇಡುವೆ ತ್ರಿಜಗದೊಳ್ ನಿನಗ್ಯಾರು ಸರಿ ಪ. ಕಾಣಿ ಪುಸಿಯಲ್ಲೆನ್ನಾಣೆ ಅ.ಪ. ವಾಹನ ನಮೋ ಶೇಷಶಯನನ ತಂದು ತೋರಿಸುವೊ ನವೋ 1 ಚಾರದೇಷ್ಠನೆಂಬೊ ನಾಮದಿಂದ ರುಕ್ಮಿಣಿ ಉದರದಲ್ಲಿ ಜನಿಸಿದಾತಗೆ ನಮೋ 2 ಎಷ್ಟು ವರ್ಣಿಪೆ ನಿನ್ನ ಮಹಿಮೆಗೆ ನಮೋ ದಿಟ್ಟ ಮೂರುತಿ ನಮ್ಮ ಕಾಳೀಮರ್ಧನಕೃಷ್ಣ ದಾಸಗೆ ನಮೋ 3
--------------
ಕಳಸದ ಸುಂದರಮ್ಮ
ಗಜವದನಾ ಸುಂದರವದನನೆ ವೋ ಪ ಭುಜಗಬಂಧನಪಾದಾ ಭಜಿಪೆನಹುದೊ ರಾಜಾ ಅ.ಪ ಗೌರೀನಂದನ ಸರ್ವಸಿದ್ಧಿ ಪ್ರದಾಯಕ ಶೌರೀ ಮೂಷಕವಾಹನ ಕುಶಲ ಅಂತಕದೇವ 1 ದೇವಿಜನಿತ ಪುತ್ರಾಭಾವ ಲಂಬೋದರನೇ ಪಾವನಂಘ್ರಿಯ ತೋರೋ ಪಾಶ ಅಂಕುಶ ಹಸ್ತಾ 2 ಅಸುರಸಿಂಧುಕನರಿದೂ ವಸುಧೆ ಬಾಧಿಸುತಿರೆ ನಶಿದು ಹೋಗಲಿಯೆಂದ ನಾರಾಯಣನೆ ದೇವಾ 3 ಬಾಲನಾಗಿರೆ ಚೆಲ್ವ ಬಾಲೆಯೀಶ್ವರಿಯೊಳೊ ಫಾಲಲೋಚನ ಶಂಭೋ 4 ನಮಿಸುವ ಪ್ರಮಧಾರಿಗಮಿತ ಫಲವನೀವಾ ಕಮಲಜಪಿತನಾದದಾ ಕಾಣುವರಿಗೆ ಬ್ರಹ್ಮ5 ನಿತ್ಯ ಮಂಗಳನಾಮ ಪ್ರತ್ಯಕ್ಷಮಾದಾ ಮದ್ಗುರುವೇ ತುಲಸೀರಾಮಾ 6
--------------
ಚನ್ನಪಟ್ಟಣದ ಅಹೋಬಲದಾಸರು
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು
ಗಂಡ ಎನಗೆ ಹಾದರ ಮಾಡೆಂದು ಹೇಳಿದನು | ಭೂಮಂಡಲದೊಳಗೆಂಥ ಪುಣ್ಯ ಪುರುಷನವ್ವಾ ಪ ಹತ್ತು ಮಂದಿಯೊಳಗೆ ನಾನು | ಗುತ್ತಿಗಿಲಿದ್ದೆನೇ | ಮತ್ತೆ ಎನ್ನ ಕರೆದು ಒಯ್ದು | ಬ್ಯಾರೆ ಇಟ್ಟನೇ | ಅತ್ತ ಇತ್ತ ನೋಡ ಬೇಡ | ಇನ್ನು ಎಂದನೇ | ಕತ್ತಲೆಯ ತೆಗೆದು ಸುತ್ತ | ಬೆಳಕ ತಂದನೇ1 ಆರು ಮನಿಯ ಮೇಲಕಿನ್ನು | ಏರು ಎಂದನೇ | ಆರು ಮಂದಿ ನಾದಿನೇರ ಮೂಗ ಕೊಯ್ದನೇ | ಮೂರು ಕೋಣೆಯೊಳಗೊಬ್ಬನ | ತೋರಿ ಕೊಟ್ಟನೇ | ಆರ ಅಂಜಿಕೇನವನೊಳು | ಸೇರು ಎಂದನೇ 2 ಇಂದು ಬಂದನೇ | ಒಂದು ಮಾತಿನಿಂದ ಜೀವವನ್ನು ಕೊಂದನೇ | ಹಿಂದೆ ಹತ್ತಿ ಬಾರದಂತೆ ಮುಂದೆ ನಿಂತನೇ | ಕುಂದು ಕೊರತೆಯೆಲ್ಲ ತೆಗೆದು | ಆನಂದವಿಟ್ಟನೇ 3
--------------
ಭಾವತರಕರು
ಗಂಡ ಬಂದರೇನೆಲೋ ರಂಗಾ ಯನ್ನ ಗಂಡ ಬಂದರೇನೆಲೋ ರಂಗ ಪ ಒಗೆತನ ಭಂಗಾ ಯನ ಗಂಡ ಅ.ಪ. ಬಾಗಿಲ ತೆಗೆಯೆಂದಾರ್ಭಟದಿಂದಲಿ ಕೂಗುವ ಧ್ವನಿ ಕೇಳೈ ಇದಕೋ ಹ್ಯಾಗೆ ಮಾಡಲಿ ಹಾದಿಯ ಮನೆ ಯೆನ - ಗಾಗದವರು ಬಂದೀಗ ನಗುವರೆನ್ನ1 ನಂದಗೋಕುಲದಿ ನಾನೇ ಗರತಿ - ಯೆಂದು ಮೆರೆಯುತ್ತರಲೀಗ ಬಂಧು ಬಳಗದೊಳು ಬಂಡಳಾಗಿಯೆಂ- ದೆಂದಿಗೂ ತಲೆಯೆತ್ತಿ ತಿರುಗದಂತೆ ಯನ್ನ 2 ದಕ್ಕಲಿಲ್ಲ ಮನದೊಳಗೆ ಮಾಡಿಕೊಂ - ಡಕ್ಕರ ತೀರಲಿಲ್ಲ ಮುನ್ನಾ ಗಕ್ಕನೆ ಗೋವಳ ಬರಬಹುದೆ ಖಳ ಸಿಕ್ಕಿದೇವÀಲ್ಲವೊ ಶ್ರೀದವಿಠಲ ಯನ್ನ 3
--------------
ಶ್ರೀದವಿಠಲರು