ಒಟ್ಟು 11932 ಕಡೆಗಳಲ್ಲಿ , 136 ದಾಸರು , 6615 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ
ನಾನಾನಂತಪರಾಧಿ ಎನ- ಗೇನಿಲ್ಲವು ದೃಢಬುದ್ಧಿಪ. ನೀನೇ ಗತಿ ನಿನ್ಹೊರತು ಕಾವರನು ಕಾಣೆನು ಕರುಣಾಂಬೋಧಿಅ.ಪ. ಹಂದಿಯಂತೆ ತಿಂದು ಬೆಳದೆ ಎನ್ನ ಮುಂದಣ ಗತಿಯನು ಮರೆತೆ ಹಿಂದಿಲ್ಲವು ಮುಂದಿಲ್ಲವು ಲೋಕದಿ ನಿಂದ್ಯಾಪಾತ್ರ ತಾನಾದೆ1 ಮುತ್ತಿತು ಯೆನಗಜ್ಞಾನ ಎನ್ನ ಚಿತ್ತದಿ ಕೊಡು ನಿನ್ನ ಧ್ಯಾನ ನಿತ್ಯ ತವಚರಣ ಭಕ್ತಿಜ್ಞಾನವ ನಿತ್ತು ಕಾಯೊ ಸುತ್ರಾಣ2 ಗತಿಯಾರಿಲ್ಲನ್ಯತ್ರ ಶ್ರೀ- ಪತಿಯೆ ಕಾಯೊ ಸುಚರಿತ್ರ ಕ್ರತುಪಾಲ ಲಕ್ಷ್ಮೀನಾರಾಯಣ ಭಾ- ರತಿಪತಿನುತ ಸುರಮಿತ್ರ3
--------------
ತುಪಾಕಿ ವೆಂಕಟರಮಣಾಚಾರ್ಯ
ನಾನಿನ್ನ ತೆಗಳಿದೆನೇ ರಂಗಯ್ಯ ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ ನೀನೇತಕೆನ್ನೊಳು ದಯತೋರದಿರುವೆ ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ ನೀನೇ ಕಮಠನಾಗಿ ನಗವೆತ್ತಿ ನಿಂದೆ ದಾನವ ಸಂಹಾರಕಾಗಿ ಸೂಕರನಾದೆ ನೀನೇ ನರಹರಿಯೆಂದು ನುತಿಸಿದೆನಲ್ಲದೆ 1 ಭೂಮಿಯನಳೆದವನೆಂದೆ ನೀನೇ ಭೂಮಿಪರನು ಕೊಂದೆ ಎಂದೆ ಭೂಮಿಜೆಯರಸ ರಾವಣವೈರಿಯೆಂದೆ ಕಾಮಪಾಲನು ಹಲಧರನೆಂದೆನಲ್ಲದೆ 2 ತರುಣಿದ್ರೌಪದಿಗಾಗಿ ಕುರುಕುಲವಿರಿದೆ ತುರಗವನೇರಿ ದುಷ್ಟರನೆಲ್ಲ ತರಿದೆ ಶರಣ ಜನರಿಗಾಗಿ ಹರಿಹರ ನೀನಾದೆ ವರದ ಮಾಂಗಿರಿರಂಗ ನೀನೆಂದೆನಲ್ಲದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ ನಾನರಿಯದಿರ್ದಡಿದ ನೀನರಿಯದವನೇ ಪ ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು ಕೊಂದು ಚೂತದ ನೆಳಲಸಾರಿ ನಾನು ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ ಲೊಂದು ತಕ್ಷಕ ಬಂದು ವನವ ಹೊಕ್ಕಿರಲು 1 ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು ಜಲಮೃತ್ತಿಕೆಗಳಿಂದ ತೊಳೆದು ತೊಳೆದು ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು 2 ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ ನಂತಿ ಕಕೆ ಸಲಿಲಮಂತಿದ್ದಿ ಜಪವಾ ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು ಗೊಂತಿಗೈತಂದವನು ಮರಳಿಧರಿಸಿ 3 ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ 4 ನೀ ಕೊಲುವ ಕಾಲದೊಳು ಕೊಲುವರಿಲ್ಲ ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ ನೀ ಕರುಣದಿಂ ಕಾಯ್ದೆ ಎನ್ನಸುವನು 5
--------------
ಕವಿ ಪರಮದೇವದಾಸರು
ನಾನು ನಿನ್ನ ಏನು ಅಂದೆನೊ ರಂಗರಾಯಾ ನಾನು ನಿನ್ನ ಏನು ಅಂದೆ ನಾಲ್ಕು ದಿಕ್ಕಿನೊಳಗೆ ನಿಮ್ಮ ಧ್ಯಾನಪಥವು ದೊಡ್ಡದೆಂದು ದೃಢವು ಮಾಡಿ ಹೇಳ್ದೆನಲ್ಲದೆ ಪ ಕುಂಡಲೀಶ ಶಯನನಾದ ಪುಂಡಲೀಕವರದ ಬ್ರ ಹ್ಮಾಂಡವೆಲ್ಲ ನಿಮ್ಮ ಉದರ ಅಂಡದಲ್ಲಿ ಇರುವುದೆಂದೆ ಮಂಡಿಗೊರಳನು ಇದೆವೆಂದನೆ ಮತ್ತೆ ಮತ್ತೆ ಕುಂಡಗೊಳರ [ಪುಂಡಗೊಲ್ಲರ] ಕುಲದೈವವೆಂದೆನೆ ಹಿಂಡುಲೋಕಗಳಿಗೆಲ್ಲ ಹಿರಿಯ ನೀನೆಯಂದೆನಲ್ಲದೆ 1 ಸಕಲಯೋಗಿ ಜನರ ಹೃದಯ ನಿಖರವಾಗಿ ನಿಂತು ಎಲ್ಲ ಭಕುತರನ್ನು ರಕ್ಷಿಸುವ ಲಕುಮಿರಮಣಾನಂದೆ ನಲ್ಲದೆ ಕಕುಲಾತಿಯ ಮಾಡೆನೆಂದೆನೆ ಅಕಳಂಕ ಮಹಿಮನಾದ ಆದಿ ಮೂರುತಿ ಎಂದೆನಲ್ಲದೆ 2 ಬೊಟ್ಟಿನಿಂದ ಧರೆಯನೆತ್ತಿ ಚೇಷ್ಟೆಜನರ ಉರಳಿಸಿದ ಕೃಷ್ಣ ಮೂರುತಿನೀನೆಯೆಂದು ಇಷ್ಟದಿಂದ ಪಾಡುವೆನಲ್ಲದೆ ಸೃಷ್ಟಿನೀಟಗೊಲ್ಲನೆಂದೆನೆ ನಿನ್ನ ಮಗನ ಸುಟ್ಟು ಅವನ ಮಿತ್ರನೆಂದೆನೆ ಸೃಷ್ಟಿಗಧಿಕವಾದ `ಹೊನ್ನವಿಠ್ಠಲ' ರಾಯನಂದೆನಲ್ಲದೆ 3
--------------
ಹೆನ್ನೆರಂಗದಾಸರು
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ 1 ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ2 ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ3
--------------
ವಿಜಯದಾಸ
ನಾನೆ ಭ್ರಮಿಸಿದೆನೊ ವಿಷಯದಿ ಮಮತೆ ನೀನೆ ಸೃಜಿಸಿದೆಯೊ ಪ. ಅನಾದಿ ನಿಧಾನ ನೀನೆ ತಿಳಿದು ನೋಡೊ ಅ.ಪ. ಬನ್ನ ಬಡಿಸುತಿದೆಕೈವಲ್ಯದರಸನೆ ನೀ ವಿಚಾರಿಸಿ ಕಾಯೊ 1 ಸ್ವತಂತ್ರ ನೀನು ಅಸ್ವತಂತ್ರ ನಾನು ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ2 ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ ದಣಿದು ಮೊರೆ-ಯಿಕ್ಕುವೆ ನಿನಗೆ ಬಂದು ಬೇಗ ನೀ ತಕ್ಕೊನೀ ಕೈಗೆ ಎನ್ನವಗುಣ ಲೆಕ್ಕಿಸದಲೆ ಕಾಯ್ಯಬೇಕಯ್ಯ ಕೊನೆಗೆ 3 ಪ್ರಿಯ ನೀನೆನಗೆಂದು ಅಯ್ಯ ನಿನ್ನ ನಂಬಲು ಮಯ್ಯ ಮರೆಸಿ ವಿ-ಷಯದುಯ್ಯಾಲೆಗೊಪ್ಪಿಸಿದೆ ಸಯ್ಯಲೊ ದೊರೆಯೆ ಇಂಥವನೆಂದುಅಯ್ಯೊ ಮುನ್ನರಿಯೆ ಕರುಣಿ ಎಂಬೊ ಹಿಯ್ಯಳಿ ಸರಿಯೆ ಇನ್ನಾದರುಕಯ್ಯ ಪಿಡಿಯಲು ಕೀರ್ತಿ ನಿನಗೆಲೊ ಹರಿಯೆ4 ಮೊದಲೆಮ್ಮಾರ್ಯರು ನಿನ್ನ ಪದನಂಬಲವರಘ ಸದೆದು ಸಮ್ಮುದದಿಸಂ-ಪದವ ನೀಡಿದೆಯಂತೆ ಅದನು ಮರೆದೆಯೊ ಶಕುತಿಯು ಸಾಲದಲೆ ಜ-ರಿದೆಯೊ ಜನರು ಪೇಳಿದ ಮಾತು ಪುಸಿಯೊ ನಿಜ ತೋರಲು ಬುಧನುತ ಗೋಪಾಲವಿಠಲ ಕೀರುತಿಯೊ 5
--------------
ಗೋಪಾಲದಾಸರು
ನಾನೆಂತರಿವೆನೈ ನಿನ್ನಂತರಂಗವ ಸಾನಂದಗೋವಿಂದ ನೀನಿಂದು ದಯೆದೋರು ಪ ಆದಿ ಮೂರುತಿಯೆ ನಾನೀದೀನ ನರ ಭೇದರಹಿತನೇ ಅದರ ಹಾದಿಯರಿಯೆನೊ ವೇದ ವಂದ್ಯನು ನೀನು ಓದನರಿಯದ ನಾನು ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ 1 ಜ್ಞಾನಪ್ರಕಾಶ ನಾ ಮಾನಾಭಿಮಾನಿ ಮೌನಿರಕ್ಷಕನೇ ಆಂ ಹೀನನಡೆಯವ ದಾನಿಪರಮಾತ್ಮನು ದೀನ ತಾಪತ್ರಿಯೆನು ನೀನಮೃತದವನೈ ನಾನು ಮತ್ರ್ಯನು 2 ಸರುವಲೋಕೇಶಾ ನಾಪರದೇಶಿಯಹುದೋ ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ ಶರಣಸುಧಾರಕ ಬಿರುದಿನಿಂ ಮೆರೆಯುವ ವರದ ಜಾಜೀಶ ಪೊರೆ ಶ್ರೀನಿವಾಸ 3
--------------
ಶಾಮಶರ್ಮರು
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ಪ ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1 ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ ನಗವೈರಿಯಂತೆ ಯುದ್ಧವ ಮಾಡಲಿಲ್ಲ 2 ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3 ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4 ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5 ನಿನ್ನಾ ಕುವರರು ಸುಭದ್ರೆಯ ಮದುವೆಯ ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6 ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ- ನುಷನೆಂದು ನಾನೇನು ತಿಳಿದುಕೊಂಡಿಲ್ಲ 7 ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8 ರಾಜೇಶಹಯಮುಖ ಭಜಕರೊಳಗೆ ಮತ್ತೆ ನಿತ್ಯ ಭಕ್ತರಾರಿಹರು 9
--------------
ವಿಶ್ವೇಂದ್ರತೀರ್ಥ
ನಾನೇನಂದನೆ ಭಾವಕಿ ಒಳ್ಳೆಆನಂದಮಯ ಹರಿಹರ ಮುನಿದಿತ್ತಬಾರ ಪ ರಮಣಿ ಕುಚ ಕುಂಕುಮಾಂಕಿತ ವಕ್ಷವಾರಿಧಿಶಯನ ಶ್ರೀವಾಸವಾರ್ಚಿತನಾರದನುತ ಪಂಕಜದೈತ್ಯ ಸಂ-ಹಾರ ಶ್ರೀ ಹರಿಹರನೆಂದೆನಲ್ಲದೆಮಾರಮರ್ಧನನೆಂದೆನೆ ಮೆರೆವ ಸರ್ಪಹಾರ ಕುಂಡಲನೆಂದೆನೆ ಶೋಭಿಸುವ ವೈಯ್ಯಾರ ವಿಭೂಷಣ ಶಂಕರನೆಂದೆನಲ್ಲದೆ 1 ಮಡದಿಯೋರ್ವಳ ನುಡಿ ಕಳ್ಳನೆಂದೆನಲ್ಲದೆ ಮಿಗೆಜಡೆದಲೆಯವನೆಂದನೆ ಪುಲಿದೊಗಲದೃಢದಿ ಹೊದ್ದಿಹನೆಂದೆನೆ ತ್ರೈಲೋಕ್ಯದೊಡೆಯ ಮುರಾರಿ ಮಹದೇವನೆಂದೆನಲ್ಲದೆಧರೆಯನಳೆದು ಕ್ಷತ್ರಿಯರ ಕೊಂದು ಶರಧಿಯನಿರದೆ ಕಟ್ಟಿದ ಕೃಷ್ಣ ಬಹುರೂಪವರಕವಿಗುರುವ ಕರದಿ ಪಿಡಿದು ರಕ್ಷಿಪಬಿರುದಿನ ರಾಯ ರಾವುತನೆಂದೆನಲ್ಲದೆ2 ಗಿರಿಜಾರಮಣನೆಂದೆನೆ ಗುಹಾರಣ್ಯವಾಸಎರಡು ರೂಪದಲಿರುವ ಮೂರುತಿಯೆಂದೆ ನಾ ನಂಬಿದ-ವರಪೊರೆವ ಶ್ರೀಹರಿಹರಲಿಂಗನೆಂದನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನಾನೇನಿನಗಂದೆನೋ ಬಿಡದೆ ಪವ ಮಾನ ಪಾಲಿಸೋ ಎನ್ನನು ಪ ದೀನರ ಪಾಲಿಪ ದಾನವಾಂತಕ ಎನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೊ ಅ.ಪ ಶರಧಿ ಲಂಘಿಸಿ ರಘು ವರನ ಕುಶಲವಾರ್ತೆಧರೆಜಾತೆಗೆ ಅರುಹಿ ದಶಾಶ್ಯನ ಪುರವ ದಹಿಸಿದಂಥ ಪರಮಸಮರ್ಥನೆಂದರಿತ ಕೊಂಡಾಡಿದೆನಲ್ಲದೆ || ತರು ಚರುವರನೆಂದಿನೆ | ಶಿರದಿ ಕಲ್ಲು ಧರಿಸಿ ತಂದವನೆಂದಿನೆ | ಬ್ರಹ್ಮಾಸ್ತ್ರಕೆ ಭರದಿ ಸಿಲ್ಕಿದಿ ಎಂದೆನೆ ಭಕ್ತೀಲಿ ಭಾವಿ ಸರಸಿಜಾಸ್ರನನೆಂದು ಸ್ಮರಿಸಿದೆನಲ್ಲದೆ 1 ಕೃತಯುಗದಲಿ ಕುಂತಿಸುತನಾಗಿ ಜನಿಸುತ ಪತಿ ಪಿತನಂಘ್ರಿ ಭಜಿಸುತಲಿ ಕ್ಷಿತಿ ಭಾರಕೆ ಖಳ ತತಿಯ ಸಂಹರಿಸಿದಾ ಪ್ರತಿಮಲ್ಲ ನೀನೆಂದು ಸ್ತುತಿಸಿದೆ ನಲ್ಲದೆ ಖತಿವಂತ ನೀನೆಂದಿನೆ ದುನುಜಾತೆಗೆ ಪತಿಯಾದವನೆಂದಿನೆ ಅವಳ ಕೂಡಿ ಸುತನ ಪೆತ್ತವನೆಂದನೆ ಯಾಮಿನಿಯಲಿ ಸತಿಯೆನಿನದವ ನೆಂದೆನೇ ನಿನ್ನನು ಬಿಟ್ಟು ಗತಿನಮಗಿಲ್ಲೆಂದು | ನುತಿಸಿದೆ ನಲ್ಲದೆ 2 ನಡುಮನಿಸುತನಾ ಪೊಡವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸಂದರನ ಧೃಡವಾಗಿ ಸ್ಥಾವಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿಸುತನಾಗಿ ಪೊಡೆವಿಯೊಳಗೆ ಪುಟ್ಟ ಉಡುಪಿ ಕ್ಷೇತ್ರದಿ ಶಾಮಸುಂದರನ ಧೃಡವಾಗಿ ಸ್ಥಾಪಿಸಿ | ಜಡ ಕುಮಾಯ್ಗಳಗೆದ್ದ ಸಡಗರ ಮುನಿ ಎಂದು ನುಡಿದೆನಲ್ಲದೆ ಹುರಳಿಮೆದ್ದ ಬಡದ್ವಿಜ ಶಿಶುವೇದಿನೆ | ಎತ್ತಿನ ಬಾಲ ಪಿಡಿದೋಡಿ ದವನೆಂದಿನೆ | ಬೆಸರದಿಂದ ಮಡದಿ ಬಿಟ್ಟವ ನೆಂದಿನೆ ಕಡಿಗೆ ಬೋರಿ ಗಿಡವ ಸೇರಿದಿ ತೋರೆಂದು ಅಡಿಗಳಿಗೆರಗಿದೆ ನಲ್ಲದೆ 3
--------------
ಶಾಮಸುಂದರ ವಿಠಲ
ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ನಾನೊಬ್ಬಳ್ಭಾರತದಲ್ಲಿದ್ದೆ ಬಂದೆ ಪೂರ್ವದ ಹಿಂದೆ ಪ ಹೊಂದಿ ಐವರಿಗಾನಂದ ಸುಂದರಿ 1 ಮಾರಿ ಕೌರವರಿಗೆ ಹಾರ ಪಾಂಡವರಿಗೆ ಭಾರತಿ ಧಾತ್ರಿಗೆ ಕ್ಷೀರ ಮಾರಪಿತಗೆ 2 ನರಸಿಂºವಿಠಲಗೆ ಕರುಣದ ಕರಡಿಗೆ ಉರಿ ದುರುಳರಿಗೆ ಮರೆ ಶರಣರಿಗೆ 3
--------------
ನರಸಿಂಹವಿಠಲರು