ಒಟ್ಟು 3977 ಕಡೆಗಳಲ್ಲಿ , 126 ದಾಸರು , 2593 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಜ್ಜೆಗಳಿವೆ ನೋಡಿರಿ ರಂಗಯ್ಯನಹೆಜ್ಜೆಗಳಿವೆ ನೋಡಿರಿ ಪಹೆಜ್ಜೆಗಳಿವೆ ನೋಡಿರಿ ಮೂರ್ಜಗದÉೂಡೆಯನಅಬ್ಜಭವಾದ್ಯರ ಹೃದ್ಗøಹವಾಸನ ಅ.ಪಮಧುರಾಪುರದಿ ಜನಿಸಿದನ ಬೇಗಮಾವ ಕಂಸನ ಛೇದಿಸಿದನಚದುರೇರಿಗೊಲಿದ ಶ್ರೀಶನ ದಿವ್ಯಮದನಮೋಹನ ಕೃಷ್ಣವಿಧಿಭವಾರಾಧ್ಯನ1ಗೋಕುಲವಾಸನೆಂದೆನಿಪ ದಿವ್ಯನಾಕೇಶವಂದ್ಯ ಸರ್ವೇಶನಭೀಕರ ದೈತ್ಯರ ಸದೆದನ ಸವ್ಯ-ಸಾಚಿಯ ರಥದೊಳು ಏಕಾಂತ ನುಡಿದನ 2ವೇದ ಚೋರನ ಭೇದಿಸಿದನ ಗಿರಿಭಾರಬೆನ್ನಿಲಿ ಪೊತ್ತು ನಿಂತನಆದಿ ದೈತ್ಯನ ಸೀಳಿ ಭೂಮಿಯ ತಂದುಕ್ರೂರ ದೈತ್ಯನ ಕರುಳ್ಹಾರ ಮಾಡಿದ ಹರಿಯ 3ಬಲಿಯ ದಾನವ ಬೇಡಿದನ ಬಲುಛಲದಿ ಕ್ಷತ್ರಿಯರ ಸೋಲಿಸಿದನಲಲನೆಯ ತಂದ ಶ್ರೀವರನಗೊಲ್ಲರ ಕುಲದಲ್ಲಿ ಬೆಳೆದ ಶ್ರೀಚಲುವ ಗೋಪಾಲನ 4ದುಷ್ಟಕಾಳಿಂಗನ ಮದವನಳಿದುಮೆಟ್ಟಿನಾಟ್ಯದಿ ಸಿರದಿ ತುಳಿದನಪುಟ್ಟಪಾದದ ದಿವ್ಯ ಚಲುವನ ಗೋವ್ಗ-ಳಟ್ಟಿ ಹೋಗುವ ನಮ್ಮ ಪುಟ್ಟ ಗೋಪಾಲನ 5ಶಂಖು ಚಕ್ರವು ಗದ ಪದ್ಮವು ಹೊಳೆವÀಕಿಂಕಿಣಿಪೈಜನಿನಾದವುಬಿಂಕದಿ ಊದುವ ಕೊಳಲಗಾನವು ನಿ-ಶ್ಶಂಕೆಯಿಂದಲಿ ಭಕ್ತವೃಂದವ ಪೊರೆದನ 6ಥಳಥಳಿಸುವ ದಿವ್ಯ ತಿಲಕವು ಹೊಳೆಯೆಬರಿಮೈಯ್ಯ ತೋರುತ ನಿಂತನಕುದುರೆಯನೇರುತ್ತ ಬರುವನಸಿರಿಕಮಲನಾಭ ವಿಠ್ಠಲ ಭಕ್ತಪೋಷನ7
--------------
ನಿಡಗುರುಕಿ ಜೀವೂಬಾಯಿ
ಹೆಂಡತಿಯ ಮಾಡಿಕೊಂಡೆ ಯಾಕೋ ಕಟ್ಟಿ-ಕೊಂಡುಮಂಡೆತುರುಸುವುದ್ಯಾಕೋಪಮಕ್ಕಳಿಲ್ಲವೆಂದು ಬಳಲುವುದೇಕೋ ಎಲ್ಲಮಕ್ಕಳಳಿದರೆಂದು ಅಳುವುದೇತಕೋ1ಎಲ್ಲವ ಉಳಿದು ಹೋಹೆಯಾಕೋ ಮೋಹನವಲ್ಲಭೆಯ ಬಿಟ್ಟು ತೆರಳುವೆ ಯಾಕೋ2ಒಪ್ಪಿಸಯೋ ಸತಿಯ ಸುತರನ್ಯಾಕೋ ನೀನುಬರ್ಪಣಿಲ್ಲ ಪರಾಂಬರಿಕೆ ಯಾತಕೋ3ದುಡ್ಡನೀಗ ಕೈಲಿ ಕೊಟ್ಟೆಯಾತಕೋ ನೀನುದೊಡ್ಡ ಚೇಳು ಕಡಿಸಿಕೊಂಬೆಯಾತಕೋ4ಹೆಂಡತಿಯ ಸಂಗತಿ ಸಾಕೋಮುಂದೆ ಚೆನ್ನ ಚಿದಾನಂದನಾಗಬೇಕೋ5
--------------
ಚಿದಾನಂದ ಅವಧೂತರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
--------------
ಪ್ರಸನ್ನವೆಂಕಟದಾಸರು
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು
ಹೇ ಮನವೆ ಈ ದೇಹ ಗಾಳಿದೀಪ ಪ.ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರುಇಳೆಯೊಳು ಒಯ್ಯಲಿಲ್ಲ ದಾರೂ 1ಹಂಬಲಗಡಲೊಳು ಮುಳುಗಲಿನ್ನಾವ ಸುಖಅಂಬುಜಾಕ್ಷಗೆ ಸಲ್ಲಲೀ ಲೆಕ್ಕ 2ಧರ್ಮವ ಹಳಿದು ಸತ್ಕರ್ಮವ ಜರೆದರೆನಮ್ಮ ಪ್ರಸನ್ನವೆಂಕಟ ದೂರ 3
--------------
ಪ್ರಸನ್ನವೆಂಕಟದಾಸರು
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು
ಹೇಸಿದೆನಯ್ಯಾ ಹೇಸಿದೆನೋಹೇಸಿದೆನಯ್ಯಾ ಹೇಸಿದೆನೋದೋಷ ಸ್ವರೂಪ ನಾರಿಯು ಸುಂದರದುಷ್ಮಾನನು ನಿನಗ್ಹೇಳಿವೆನುಪಮೊಲೆಗಳು ಮಾಂಸದ ಗಟ್ಟಿಯ ಕರಣೀಮೂಗದು ಸಿಂಬಳ ಸೋರುವಭರಣಿಬಲುದುರುಬದು ನರಕದ ಹೊಕ್ಕರಣಿಬಾಯದು ಕಲಗಚ್ಚಿನ ದೋಣಿ1ಶೋಣಿತಮೂತ್ರವು ಹರಿವಾ ಭಗವುಶ್ವಾನನ ಹಲ್ಲಿನತೆರದಿಹ ನಗುವುಕಾಣಿಸುವುದು ತನುದುರ್ಗಂಧವುಕೆಟ್ಟದರೊಳು ಕೆಟ್ಟವಿಷಯವು2ಸಿದ್ಧವು ಗತಿಗೆ ಸ್ತ್ರೀ ದೊರಕೆಂಬುದು ಸಮನಿಸಿವೇದಾಂತದಿ ತಿಳಿದಂದು ಸಿದ್ಧಚಿದಾನಂದಬೋಧಯಲಂದು ಸೀಮಂತಿಯನು ಬಿಡಬೇಕೆಂದು3
--------------
ಚಿದಾನಂದ ಅವಧೂತರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು
ಹೇಳೆಕಾಮಿನಿರಂಗಗೆ ಬುದ್ಧಿಯಹೇಳೆಕಾಮಿನಿರಂಗಗೆಪ.ಹೇಳಿದಂದದಿಕೇಳಿಕಾಲಿಗೆರಗುವಳಮ್ಯಾಲೆ ಕೋಪಿಸಿಕೊಂಡು ಬಾಲೇರ ನೆರೆವಂಗೆ ಅ.ಪ.ತನ್ನ ಮೈಗಂಪು ಕಸ್ತೂರಿಗಿಂದಧಿಕ ಕಂಡೆತನ್ನಧರದ ರಸಾಮೃತಗಿಂತ ಸವಿದುಂಡೆತನ್ನ ದಂತದ ಘಾಯಕೆ ಅಂಜದೆಕರಜನ್ನಟ್ಟಿಸಲು ಕುಚಕ್ಕೆ ಸುಂದರಿಯರನ್ನು ಮೆಚ್ಚಿದ ದಾನಕ್ಕೆ ಇನಿಯಳಿರೆಅನ್ಯರ ಮೋಹಿಪಗೆ ಕಲಿಮಾನವಗೆ 1ಸ್ನೇಹ ನೋಟಕೆ ಮೆಚ್ಚಿ ಸುಖಭಾರ ತನಗಿತ್ತೆಬಾ ಹೆಣ್ಣೆ ಎನಲು ಭಾಗ್ಯಾಂಬುಧಿಗೊಶವಾದೆತಾ ಹೊನ್ನಾಸೆಗೆ ಮಂಚದಿ ಘಾತಿಸಿದರೆನೇಹಿಯ ಬೆರದೆಕೆಲದಿಕರಾಳ ಚೇಷ್ಟೆಗೆನೇಹದಾರದಲೊಪ್ಪಿದೆ ಎನ್ನನು ಬಿಟ್ಟುಬಾಹು ಜೋರಿನಬುದ್ಧವಾಜಿಯಲ್ಲೇರ2ಚಪಲತೆಯಲ್ಲಿಕಪಟವಿದ್ಯದಲಿ ಭೂಪಕುಪಿತಾಶಾಯಿಲ್ಲ ಹೆಜ್ಜೆ ಹೆಜ್ಜೆಗೆ ಕಥೆಯಿಲ್ಲನೃಪಕೃಷ್ಣ ಸಲಹೆಂದರೆ ಎನ್ನಿಂದಾದಅಪರಾಧ ಕ್ಷಮಿಸೆಂದರೆ ಪ್ರಸನ್ವೆಂಕಟಕೃಪಿ ಧರ್ಮಿಯೆಂದರೆ ಇದಕೆ ತಾವಿಪರೀತ ತಿಳುಹನಂತೆ ಹಾಗಲ್ಲಂತೆ 3
--------------
ಪ್ರಸನ್ನವೆಂಕಟದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು
ಹೊಲೆಯ ಹೊರಗಹನೆ ಊರೊಳಗಿಲ್ಲವೆಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.ಭಾಳದಲಿ ಭಸಿತ ಭಂಡಾರವಿಡದವ ಹೊಲೆಯಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ 1ಇದ್ದ ಧನ ದಾನ - ಧರ್ಮವ ಮಾಡದವ ಹೊಲೆಯಕದ್ದು ತನ್ನೊಡಲ ಹೊರೆವಾತನೇ ಹೊಲೆಯಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ 2ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯಲೇಸು ಉಪಕಾರಗಳನರಿಯದವ ಹೊಲೆಯಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯಹುಸಿಮಾತನಾಡುವವನೇ ಸಹಜ ಹೊಲೆಯ3ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆiÀುಭಂಡ ಮಾತುಳಾಡುವವನೆ ಹೊಲೆಯಗಂಡ - ಹೆಂಡಿರ ನಡುವೆ ಭೇದಗೈವವ ಹೊಲೆಯಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ 4ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯಅರಿತು ಆಚಾರವನು ಮಾಡದಿದ್ದವ ಹೊಲೆಯಪುರಂದರವಿಠಲನನು ನೆನೆಯದವ ಹೊಲೆಯ 5
--------------
ಪುರಂದರದಾಸರು
ಹ್ಯಾಂಗಾದರು ದಾಟಿಸೊ ಭವಾಬ್ಧಿಯಹ್ಯಾಂಗಾದರು ದಾಟಿಸೊ ಪ.ಗಂಗಾಜನಕನಾ ನಿನ್ನವನೆಂದುಹ್ಯಾಂಗಾದರು ದಾಟಿಸೊ ಅ.ಪ.ನಗುತ್ತಾದರು ಉಂಡೆ ಅಳುತ್ತಾದರು ಉಂಡೆಬಗೆ ಬಗೆ ದುರ್ಜನ್ಮ ಸುಖದು:ಖವತಗೆ ಬಗೆ ನಿರಯದಿ ಹೊರಳ್ಯಾಡುವನ ತಂದುಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ 1ತಿಳಿದಾದರು ಮಾಡಿ ತಿಳಿಯದಾದರು ಮಾಡಿಹಲವು ದೋಷದ ರಾಶಿ ಒದಗಿಸಿದೆಬಲುತಪ್ಪು ನೋಡದೆ ನಾಮಾಮೃತವನಿತ್ತುಸಲಹುವ ಮನಬಲ್ಲ ಎಲ ಎಲೋ ಮುಕುಂದ 2ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದುಎಂದಿಗುಭೋಗಭೋಗಿಸಲಾಪೆನೆತಂದೆ ಪ್ರಸನ್ನವೆಂಕಟಪತಿಗೊಲಿದುನಿಂದೆನ್ನ ಛಿದ್ರವನೆಣಿಸುವರೆ ರಂಗ 3
--------------
ಪ್ರಸನ್ನವೆಂಕಟದಾಸರು