ಒಟ್ಟು 359 ಕಡೆಗಳಲ್ಲಿ , 77 ದಾಸರು , 323 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಾರ್ಕಳದ ವೆಂಕಟೇಶನನ್ನು ನೆನೆದು)ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲಪಾಹಿಪ.ಭಾನುಕೋಟಿ ಸಮಾನ ಭಾಸಿತ ದಾನವವಿಪಿನನ-ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ.ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದದಾಸಜನರಭಿಲಾಷೆಯನು ಸಂತೋಷದಿ ಕೊಡಲು-ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯರಾಸಿಗಳಿಸಿ ಜಗದೀಶ ಪರೇಶ ಮ-ಹೇಶವಿನುತನಿರ್ದೋಷಜಗನ್ಮಯ1ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ-ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ-ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ-ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ-ಮೂರ್ತಿಧರಿಸಿ ಜನರರ್ತಿಯ ಸಲಿಸುವಚಿತ್ತಜಜನಕ ಸರ್ವೋತ್ತಮ ನಿರುಪಮ 2ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ-ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ-ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭುವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ-ದಾಂಕಿತ ದನುಜಭಯಂಕರವರನಿರ-ಹಂಕರ ನಿಜದ ನಿಷ್ಕಳಂಕಚರಿತ್ರ 3ಮಂದರಾಧರ ಮಾಪತೇ ಮುಖಚಂದಿರ ಮೌನಿವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ-ಸಿಂಧುಶಯನ ಮುಕುಂದಕಂಬುಕಂಧರಶೋಭಿಪಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತಮಂದಹಾಸ ಮುಚುಕುಂದವರದ ಗೋ-ವಿಂದಸಚ್ಚಿದಾನಂದಉಪೇಂದ್ರ4ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟಧೀರಕಾರ್ಕಳಸಾರನಗರಾಧಿಕಾರನೆ ಭೂಸುರ-ಭೂರಿವೇದಪುರಾಣಘೋಷಾದಿಹಾರನೆ ಸಂತತಚಾರುಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮದಾರುಣೀಸುರರಿಂದನವರತ ಮಂಗ-ಲಾರತಿಗೊಂಬ ಲಕ್ಷ್ಮೀನಾರಾಯಣಹರಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
4 ಲೋಕನೀತಿ294ಅಂದೇನಿಂದೇನಯ್ಯ ಶ್ರೀಅರವಿಂದನಾಭನ ಹಗೆಯವ ಅಸುರಎಂದಿಗೆ ಮತಿ ಕವಲಿಲ್ಲದೆ ಹರಿಪದಹೊಂದಿದಗೆ ಮುಕ್ತಿಯವಸರ ಪ.ಅಂದಿಗೆ ಹರಿಮಹಿಮೆಗಳನ್ನು ಆನಂದದಿಂದ ಕೇಳದವ ದ್ವೇಷಿಇಂದಿಗೆ ಹರಿಕಥೆ ತಾತ್ವಿಕ ಜನರನುನಿಂದಿಸುವವನೆ ನಿಜದ್ವೇಷಿ 1ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹುಗರ್ವಿಪ ಕಂಸನು ಅತಿತಾಮಸಉರ್ವಿಲಿ ನರಹರಿ ಚರಣವರ್ಚಿಸದೆಶರ್ವಸರ್ವೋತ್ತಮನೆಂಬವತಾಮಸ2ವಾಸುದೇವನ ಪಾಶದಿ ಬಿಗಿಸುವೆನೆಂದುಆಶಿಸಿ ಕೆಟ್ಟ ಕೌರವ ಕುಮತಿದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ 3ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದರುಕ್ಮನು ಮದಸೊಕ್ಕಿದ ಪಾಪಿಲೆಕ್ಕವರಿಯದೆ ಜೀವೇಶರು ಸಮರೆಂದುಲೆಕ್ಕಿಸುವವ ನರರೊಳು ಪಾಪಿ 4ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದುಅತಿಕ್ಲೇಶವುಂಡ ಪೌಂಡ್ರಕ ಕಲಿಯುಸಕಳ ಜಗದೊಡೆಯ ಪ್ರಸನ್ವೆಂಕಟೇಶನಭೃತ್ಯನಾಗದೆಯೆ ನಾನೆಂದವ ಕಲಿಯು 5
--------------
ಪ್ರಸನ್ನವೆಂಕಟದಾಸರು
ಅಂತರಂಗದಲಿ ಹರಿಯ ಕಾಣದವ ತಾ ಹುಟ್ಟುಗುರುಡನೊಸಂತತ ಶ್ರೀ ಕೃಷ್ಣಚರಿತೆ ಕೇಳದವ ಜಡಮತಿಯೆ ಕಿವುಡನೊ ಎಂದೆಂದಿಗೂ ಪ.ಹರುಷದಿಂದಲಿ ಮುರಹರನ ಪೂಜೆಯ ಮಾಡದವನೆ ಕೈ ಮುರಿದವನೊಕುರುವೀರ ಸೂತನ ಮುಂದೆ ಕೃಷ್ಣ ಎಂದುಕುಣಿಯದವನೆ ಕುಂಟನೊ ||ನರಹರಿ ಪಾದೋದಕ ಧರಿಸದ ಶಿರ ನಾಯುಂಡ ಹಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರಭೋಜನವೋ1ಅಮರೇಶ ಕೃಷ್ಣಗರ್ಪಿತವಲ್ಲದಕರ್ಮ ಅಸತಿಯ ವ್ರತನೇಮವೊರಮೆಯರಸಗೆ ಪ್ರೀತಿಯಿಲ್ಲದ ವಿತ್ತವು ರಂಡೆ ಕೊರಳಸೂತ್ರಕಮಲನಾಭನ ಪೊಗಳದಸಾರ ಸಂಗೀತ ಗಾರ್ದಭರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರ ಮಾಡದವನೆ ಮೃಗವೊ 2ಜರೆ ಹುಟ್ಟು ಮರಣವ ತಡೆವ ಸುದ್ದಿಯ ಬಿಟ್ಟುಸುರೆಯ ಸುರಿಯ ಬೇಡವೊಸುರಧೇನು ಇರಲಾಗಿ ಶ್ವಾನನ ಮೊಲೆಹಾಲಕರೆದು ಕುಡಿಯಬೇಡವೊಕರಿ ರಥ ತುರಗವೇರಲು ಇದ್ದು ಕೆಡಹುವ ಕತ್ತೆ ಏರಲಿಬೇಡವೊಪರಮ ಪುರುಷ ಪುರಂದರವಿಠಲನಿರಲು ನರರ ಭಜಿಸಬೇಡವೊ 3
--------------
ಪುರಂದರದಾಸರು
ಆಗಬಲ್ಲದೆ ಹೀಗಾಗಬಲ್ಲದೆಯೋಗಿಜನವಂದ್ಯನವರಿಗ್ಹೀಗೆ ಯಮನ ಮನೆಯ ಬಾಧೆ ಪ.ಕಾಮನಯ್ಯನರಮನೆಯಪ್ರೇಮದ ದಾಸಿಗೆ ಮಹಾಪಾಮರರಾಕ್ಷಸ ಕ್ರೂರಕಾಮುಕರ ಸಂಯೋಗವಾಗಬಲ್ಲದೆ 1ಸಜ್ಜನರರಸನÀ ಮನೆಯವಜ್ರಪಂಜರದ ಗಿಣಿಯುಮಜ್ಜಿಗೆ ಕಾಣದ ಮುದಿಮಾರ್ಜಾಲನ ಬಾಯಿತುತ್ತಿಗಾಗಬಲ್ಲದೆ 2ರಾಜಾಧಿರಾಜನ ಮನೆಯರಾಜಹಂಸವು ಕುಣಪಭೋಜಕನಾದ ವೃಕನಭೋಜಕನ ಅನುಕೂಲವಾಗಬಲ್ಲದೆ 3ಹರಿಯ ಬೇಂಟೆಯ ಮನೆಯಹರಿಣಗಣಗಳಿಗೆಗಿರಿಯ ಹಳುವದ ಹುಲಿಯಗರಜರದ ಘಸಣೆಯಾಗಬಲ್ಲದೆ 4ಪ್ರಸನ್ನವೆಂಕಟನ ಮನೆಯಕಸಕಡ್ಡಿಯೆಲ್ಲವುವಜ್ರವಿಷಮ ಯಮಬಂಟರೆಂಬಮುಸಲಕೆ ಹುಡಿ ಹಿಟ್ಟು ಆಗಬಲ್ಲದೆ 5
--------------
ಪ್ರಸನ್ನವೆಂಕಟದಾಸರು
ಆರೋಗಣೆಯ ಮಾಡೋ ಎನ್ನಯ್ಯಆರೋಗಣೆಯ ಮಾಡೋ ಪ.ನಾರದಾರ್ಚಿತಪಾದ ನಾರಾಯಣ ಸ್ವಾಮೀ ಅ.ಪಸರಸಿಜಾಲಯೆ ಲಕ್ಷ್ಮಿ ಸರಸ್ವತಿಭಾರತಿಪರಿಪರಿ ಅಡಿಗೆಯ ಸಿದ್ದ ಮಾಡಿಹರೊ ||ಪರಿಮಿತಿಯಿಲ್ಲದ ರುಚಿಯ ಪದಾರ್ಥವಪರಮಪುರುಷ ಉಂಡು ದಯ ಮಾಡೋ ಸ್ವಾಮಿ1ಅಂಬುಜಮುಖಿ ಲಕ್ಷ್ಮಿ ತಾಂಬೂಲ ಕೊಡುವಳುಕಂಬುಕಂಧರನೇ ನೀ ಕೈಕೊಳು ಬೇಗ ||ರಂಭೆ ಊರ್ವಸಿ ಮೇನಕೆ ಮೊದಲಾದವರುಸಂಭ್ರಮದಿ ಬಂದು ನಾಟ್ಯಕೆ ಕಾದಿಹರೊ ಸ್ವಾಮಿ 2ಸರಸಿಜಭವನಯ್ಯ ಪುರಂದರವಿಠಲಸರುವಭೋಗಭುಂಜಿಪ ನರರ ಪಾಲಿಸೊ ದೇವಾ3
--------------
ಪುರಂದರದಾಸರು
ಇದೆಕೊದಧಿಮಥಿಸಿ ಹೊಸ ಬೆಣ್ಣೆ ಕೊಡುವೆನೊಪದುಮನಾಭನೆ ಗೊಲ್ಲ ಗೋರಸಕೆ ಗೋಳಿಡಬ್ಯಾಡೊ ಪ.ಮಲತ ಹಾಲು ಹುಳಿಮೊಸರು ತಂಗಳ ಬೆಣ್ಣೆನಳಿನಾಕ್ಷ ನಿನಗೇನು ರುಚಿಯೊ ಕಂದಕಳವಿನ ಮಾತ್ಯಾಕೆ ಹಸುಳೆ ಗೋವಳೆಯರಗೆಳತನವ್ಯಾತಕೊ ನಿನಗೆ ರಂಗಮ್ಮ 1ಮನೆ ಮನೆ ತಿರುಗಲು ತಿರುಕರ ಮಗನೇನೊಮನೆಯಲೇನು ಗೋರಸ ಕೊರತ್ಯಾಗಿದೈಅನುದಿನವಿಗಡೆÉೀರು ದೂರುತಲೈದಾರೆದಣಿದೆನಾರೋಪಣೆಯಕೇಳಿಕೃಷ್ಣಮ್ಮ2ಎನ್ನ ಮುದ್ದಿನಮೂರ್ತಿಎನ್ನ ಭಾಗ್ಯದ ನಿಧಿಯೆಎನ್ನ ಚಿತ್ತದ ಚಿಂತಾಮಣಿಯೆಚಿನ್ನರರಸನಾದ ಪ್ರಸನ್ವೆಂಕಟ ಕೃಷ್ಣನನ್ನಾಣೆ ಕಣ್ಣ ಮುಂದಿರೊ ನಮ್ಮಮ್ಮ 3
--------------
ಪ್ರಸನ್ನವೆಂಕಟದಾಸರು
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |ಮಾಧವನೆ ಇಂದಲ್ಲ ಜನುಮ ಜನುಮದಲೀ ಪಮಾತಾ ಪಿತರರ ಆಜೆÕ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||ಈತುಚ್ಛವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ 1ಹರಿದಿನದಲಿ ಬಿಂದುಉದಕಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ 2ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ 3ಉತ್ತಮರ ಪೂಜೆಗೆಜಾಗುಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||ನಿತ್ಯಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ 4ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನಭಕುತಿಯನ್ನು ಕೊಡಲಿಬೇಡ 5
--------------
ಪ್ರಾಣೇಶದಾಸರು
ಉಪ್ಪವಡಿಸಯ್ಯ ಕೃಷ್ಣ ಪ.ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪತಿಮ್ಮಪ್ಪವ್ರಜದಿ ದಯದಿಅ.ಪ.ಅರುಣಮೂಡಣವೇರೆ ತ್ವರಿತ ತಮಕುಲ ಜಾರೆಹರಿದವಭ್ರದ ತಾರೆ ತರಣಿಕರ ಬಳಿ ಸಾರೆಸರಸಿಜವಿಕಸತೋರೆ ಮರುತ ಪರಿಮಳ ಬೀರೆ ನೆರೆದುಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿವಸುಧ್ಯೆರೆದಕಾಷ್ಠಗಂಧಕುಸುಮಸರ ತಂದಿಹಳುಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯುಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರುಪಶುಪಸುಸುಪರ್ಣವಸನಉರಗೇಶ ರತುನನಾಸನಮಾಲ್ಯಸುರಪತಿಕಲಶ ವಹಿಸಿ ವರುಣಸ್ಮರತಿಲಕಹಸನ ಮಾಡುವ ಪಾವುಗೆಶಶಿಧರಿಸಿ ನಿಂದ ಸಂತಸದಿಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆಅಜನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆನಿರ್ಧೂತಕಲಿಮಲಕಪರ್ದಿನಿಯು ತಾಮ್ರಪರ್ಣಿಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವಗನ್ನೆಯರುಕಿಂಪುರುಷಪನ್ನಗರು ವಿದ್ಯಾಧರನಿಕರ ತುಂಬುರರು ನಿನ್ನಗುಣಕೀರ್ತನೆಯ ಮಾರ್ಗೋನ್ನತದಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿಸನ್ನುತವಸಂತ ಮಲಹ ನವೀನ ಮಾಳ್ಪ ಶ್ರೀಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತಲೋಲ4ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನುವರದಾಂಕ ಜಹ್ನುಮುನಿ ವರ್ಣಿಕುಲದಗಣಿತರುನೆರೆನೆರೆದುತುತಿಸಿಸುಖಭರಿತರಾಗುತ ನಿಮ್ಮ ಚರಣದೂಳಿಗಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತಪ್ರತಿಸಗರ ನಹುಷಬಲಿಶತಧನ್ವಿದೇಹಿ ದಶರಥಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭರತದ್ವಯ ಪುರೂರವ ಯಯಾತಿ ರಂತಿದೇವ ಪರೀಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿನಂದಗೋಕುಲದ ಗೋವಿಂದಗಾರ್ತರು ನಿದ್ರೆಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದುಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳುದ್ವೀಪ ದ್ವೀಪಾಂತರದ ಭೂಪರರಸನೆ ಏಳುಕಾಪುರುಷ ಕಾಳ ಕುಮುದಾಪಹರಹರಿಏಳು ಕೋಪಹೇಪಾರ್ಥಸಖಸುಪ್ರತಾಪ ಜಗ ಎರಡೇಳುವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳುಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು 8ಶ್ರುತಿಯ ತರಲೇಳು ಭೂಭೃತವ ಹೊರಲೇಳುಶುಭಧೃತಿಯನಾಳೇಳು ದುರ್ಮತಿಯ ಸೀಳೇಳಮರತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆಸತಿಯರಾಳೇಳು ಪತಿವ್ರತೆರ ಗೆಲಲೇಳುಕಲಿಖತಿಯ ಕಳಿಯೇಳು ಪಂಡಿತರುಳುಹಲೇಳು ನಮಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ 9
--------------
ಪ್ರಸನ್ನವೆಂಕಟದಾಸರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಎರೆದು ಪೀತಾಂಬರÀವನುಡಿಸಿದಳಾಗವರಗೋಪಿಯು ಬೇಗಪಮುರುಳಿಯನೂದುತ ಪರಿಪರಿ ಗೆಳೆಯರುಪರಮಾತ್ಮನೆ ನಿನ್ನರಸುತಲಿಹರೆಂದು ಅಪಗುರುಳು ಕೂದಲು ಮುಖದಲ್ಲಿ ಹೊಸ ಬೆವರುಥಳಥಳಿಸುತಲಿಹುದುಎಳೆಯ ಶ್ರೀ ತುಳಸಿಯ ವನಮಾಲೆಗಳುಗಳದಲಿ ಶೋಭಿಪುದುಅರಳು ಮಲ್ಲಿಗೆ ಪುಷ್ಪದ ಹಾರಗಳುಮುತ್ತಿನ ಪದಕಗಳುಕೊರಳೊಳು ಮುತ್ತಿನ ಸರಗಳಿಂದೊಪ್ಪುತಮುರುಳಿಯ ನೂದುತ ಸರಸರ ಬಾರೆಂದು 1ಗುರುಳು ಕೂದಲೊಳೊಪ್ಪುವ ಅರಳೆಲೆಯುಸೊಗಸಿನ ನವಿಲ್ಗರಿಯುಬಿಗಿದು ಸುತ್ತಿದ ಸಿರದಲಿ ಕೇಶಗಳುಅತಿ ಶೋಭಿಸುತಿಹವುಚದುರಿದ ಕೇಶದಿ ಕೆಂದೂಳಿಗಳುಮಧುವೈರಿಯ ಕೇಳುವಿಧವಿಧ ರಾಗದಿ ಪಾಡುತ ನಿನ್ನನುಸದನದಿ ಪೂಜಿಸಿ ನೋಡುವೆ ಬಾರೆಂದು 2ನೊಸಲಲ್ಲಿ ಕುಡಿನಾಮವನಿಟ್ಟಿಹಳುನೋಡುತ ಹಿಗ್ಗುವಳುಎಸಳು ಕಣ್ಣಿಗೆ ಕಪ್ಪನೆ ತೀಡುವಳುಬಣ್ಣಿಸಿ ಕರೆಯುವಳುಎಸೆವೊ ಕರ್ಣಕೆ ನೀಲದ ಬಾವುಲಿಯೂರತ್ನದ ಚೌಕಳಿಯುಬಿಸುಜನಾಭ ನಿನ್ನ ಶಶಿಮುಖಿಯರುಗಳುರಸಕಸಿ ಮಾಳ್ಪರು ಹಸನಾಗಿ ಕೂಡೆಂದು 3ಅರಳುಕೆಂದಾವರೆ ಪೋಲುವಚರಣಸ್ಮರಿಸುವರಘಹರಣಸುರರುಕಿನ್ನರರೋಲೈಸುವಚರಣವರಸುಗುಣಾಭರಣಘಲುಘಲುಘಲುರೆಂದೊಪ್ಪುವಚರಣಸಜ್ಜನರಾಭರಣಅಡಿಯಿಡುತಲಿ ಬಾ ಮೃಡಸಖ ನಿನ್ನಯಅಡಿಗೆರಗುವರೈ ತಡೆಯದೆ ಬಾರೆಂದು 4ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆಬಾರೆನ್ನಯ ದೊರೆಯೆಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನುಬಾ ಭಕುತರ ಪೊರೆಯೆಉಗುರಿಂದ ಗಿರಿಯನು ಎತ್ತಿದ ಧಣಿಯೆಸುರಚಿಂತಾಮಣಿಯೆಹಗಲು ಇರಳು ನಿನ್ನಗಲಿರಲಾರೆ ಶ್ರೀ-ಕಮಲನಾಭವಿಠ್ಠಲ ಬೇಗಬಾರೆಂದು 5
--------------
ನಿಡಗುರುಕಿ ಜೀವೂಬಾಯಿ
ಏಕಾರತಿಯನೆತ್ತುವ ಬನ್ನಿ ನಮ್ಮಲೋಕನಾಥನಸಿರಿಪಾದವ ಬೆಳಗುವಪ.ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟುಒಪ್ಪುವ ದೀಪಕ್ಕೆ ದೀಪಹಚ್ಚಿ ||ತಪ್ಪದೆ ಸಕಲ ಪಾಪಂಗಳ ಹರಿಸುವಅಪ್ಪ ವಿಠಲನ ಪದಾಬ್ಜವ ಬೆಳಗುವ 1ಹರುಷದಿ ಏಕಾರತಿ ಬೆಳಗಿದ ಫಲನರಕದಿಂದುದ್ಧಾರ ಮಾಡುವುದು ||ಪರಮ ಭಕುತಿಯಿಂದ ಬೆಳಗುವ ನರರನುಹರಿತನ್ನ ಹೃದಯದಿ ಧರಿಸುವನಯ್ಯ2ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮತ್ತನ್ಯ ದೇವರನು ಸ್ಮರಿಸದೆ ಅ ||ನನ್ಯವಾಗಿ ಶ್ರೀ ಪುರಂದರವಿಠಲನಪುಣ್ಯನಾಮಗಳ ಧ್ಯಾನಿಸುತ 3
--------------
ಪುರಂದರದಾಸರು
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪನೋಡು||ಖುಲ್ಲಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ1ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||ಮಕ್ಕಮಾರಿಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆಭಿಕ್ಷೆಬೇಡುವನು 2ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು 3
--------------
ಪ್ರಾಣೇಶದಾಸರು
ಏನು, ಬರೆದೆಯೊ ಬ್ರಹ್ಮ ಎಂತು ನಿರ್ದಯನು-ಅಭಿ |ಮಾನವನು ತೊರೆದು ಪರರನು ಪೀಡಿಸುವುದ ಪಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು |ಸೊಲ್ಲುಸೊಲ್ಲಿಗೆಅವರಕೊಂಡಾಡುತ ||ಇಲ್ಲ ಈ ವೇಳೆಯಲಿ ನಾಳೆ ಬಾ-ಎನಲಾಗಿ |ಅಲ್ಲವನೆ ತಿಂದ ಇಲಿಯಂತೆ ಬಳಲುವುದ 1ಗೇಣೊಡಲ ಹೊರೆವುದಕೆ ಹೋಗಿ ನರರೊಳು ಪಂಚ-|ಬಾಣ ಸಮರೂಪ ನೀನೆಂದು ಪೊಗಳೆ ||ಮಾಣು ಎನ್ನಾಣೆ ನೀ ನಾಳೆ ಬಾ ಎಂದೆನಲು |ಗಾಣತಿರುಗುವ ಎತ್ತಿನಂತೆ ಬಳಲುವುದ2ಹಿಂದೆ ಬರೆದಾ ಬರೆಹ ಏನಾದರಾಗಲಿ |ಮುಂದೆನ್ನ ವಂಶದಲಿ ಪುಟ್ಟುವರಿಗೆ ||ಸಂದೇಹಬೇಡ ಶ್ರೀಪುರಂದರವಿಠಲನೇ |ಕಂದರ್ಪನಯ್ಯ ಉಡುಪಿಯ ಕೃಷ್ಣರಾಯ 3
--------------
ಪುರಂದರದಾಸರು
ಏನೆಂದರೇನು ನೀನೆನ್ನ ಕಾಯೊ-|ನೀನೆ ನನಗೆಂದೆಂದು ತಂದೆ-ತಾಯೊ....................... ಪಆಪತ್ತು ಕಾಲಕ್ಕೆ ಅನಂತ ನೀ ಕಾಯೊ |ತಾಪಜ್ವರಕೆ ತ್ರಿವಿಕ್ರಮನೆ ಕಾಯೋ ||ಭೂಪತಿಯು ಮುನಿದರೆ ಶ್ರೀಪತಿಯೆ ನೀ ಕಾಯೊ |ವ್ಯಾಪಾರ ಧರ್ಮವನು ಯದುಪತಿಯೆ ನೀ ಕಾಯೊ.............. 1ಸರುಪ ಸುತ್ತಿದರೆ ಸರ್ವೋತ್ತಮನೆ ನೀ ಕಾಯೊ |ಪರಿಪರಿಯ ದೋಷಗಳಪದ್ಮನಾಭಕಾಯೊ ||ಹರಕು ಸಂಸಾರವನುಹರಿಬಂದು ನೀ ಕಾಯೊ |ದೊರಕದೀ ವೇಳೆಯಲಿ ದೊರೆ ನೀನೆ ಕಾಯೊ....................... 2ನರರು ಮುನಿದಿರಲು ನಾರಾಯಣನೆ ನೀ ಕಾಯೊ |ಪುರಬೆನ್ನುಗೊಳಲು ಪುರುಷೋತ್ತಮನೆ ನೀ ಕಾಯೊ |ಅರಿಯು ಅಡ್ಡಾದರೆ ಅಚ್ಯುತನೆ ನೀ ಕಾಯೊ ||ಕರಕರೆಯ ಸಂಸಾರ ಕೃಷ್ಣ ನೀ ಕಾಯೊ....................... 3ಮದಮತ್ಸರವನು ಮಧುಸೂದನನೆ ನೀ ಕಾಯೊ |ಮದಬಂದ ವೇಳೆಯಲಿ ಮಾಧವನೆ ಕಾಯೊ ||ಹೃದಯದಾ ಕಪಟವ ಹೃಷಿಕೇಶ ನೀ ಕಾಯೊ |ಒದಗಿದ ಕಲ್ಮಷವ ವಾಸದೇವ ಕಾಯೊ....................... 4ಕಾರ್ಪಣ್ಯ ದೋಷವ ಸರ್ಪಶಯನನೆ ಕಾಯೊ |ಒಪ್ಪುವ ಪ್ರಕಾಶವ ಕೇಶವನೆ ಕಾಯೊ |ಅಪ್ಪ ತಿರುಮಲರಾಯ ಪುರಂದರವಿಠಲನೆ |ಒಪ್ಪಿಅನವರತನಿಶ್ಚಿಂತೆಯನು ಕಾಯೊ.......................*5
--------------
ಪುರಂದರದಾಸರು
ಕಲಮದಾನಿ ನಾರಾಯಣರಾವ328ಎಂದಿಗೆ ಕಾಂಬೆನೊಮುರಹರಮಂದರೋದ್ಧರಅಂದುಇಂದುಎನದೇ ಮನ್ಮನಮಂದಿರದೊಳಿಂದಿರಾವರ ಪಭೋಗಿಶಯ್ಯದಿ ಯೋಗ ನಿದ್ರೆಯಲಿಜಾಗರಾದೆನೋಹರಿಜಾಗುಮಾಡದೆ ಹೃದಯ ಪದ್ಮದಿಭಾಗವತರ ಭಾಗ್ಯದ ದೇವ 1ಸಿರಿಯ ಸುರುಚಿರ ಊರುಗಳ ಮೇಲೆಚರಣಯುಗ್ಮವನಿರಿಸಿಪರಮಸುಖಕೆ ಮರಳುಗೊಂಡೆನ್ನಮರತೆಯಾದರೆಸ್ವರಮಣನಿನ್ನ 2ಸುರರುಋಷಿ ಪಿತೃ ಧರಣೀಶ ಗಂಧರುವನರರ ವರದ ಭಕ್ತಿಲಿಕರೆಪ ಸೇವೆಗೆ ಮೆಚ್ಚಿ ಎನ್ನನುತೊರೆದು ಬಿಡಲು ಸಿರಿವಿಠಲ ನಿನ್ನಎಂದಿಗೆ ಕಾಂಬೆನೊಮುರಹರ3
--------------
ಸಿರಿವಿಠಲರು