ಇದಿರುಗೊಂಡಳು ಇಂದಿರಾದೇವಿ |
ಮದನ ಮೋಹನ ದಿವ್ಯ ಮೂರುತಿಯಾ ||
ಸದಮಲಾನಂದ ಕೀರುತಿಯಾ ಪ
ನವ ಸ್ವರ್ಣ ಹರಿವಾಣದಿ ಕಂಚ ಕಲಶನಿಕ್ಕಿ |
ಹವಳದಾರತಿ ರನ್ನ ಜ್ಯೋತಿಯಲಿ ||
ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು |
ನವರತ್ನ ನಿವಾಳೆಯ ಕೊಡುತಾ1
ಮತ್ಸ್ಯ ಕ್ರೋಢ ನರಸಿಂಹ |
ಜಯ ಮುನಿವಟು ಭಾರ್ಗವ ರೂಪನೆ ||
ಜಯ ರಾಮ ಶ್ರೀ ಕೃಷ್ಣ ಜಯ ಬೌದ್ಧ್ಯ ಕಲ್ಕಿಯೆ |
ಜಯವೆಂದು ಬೆಳಗಿ ಪಾದಕೆ ನಮಿಸಿ ||2
ಕರೆದೊಯ್ದು ತೂಗು ಮಂಚದಿ ಕುಳ್ಳರಿಸಿ |
ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ ||
ಗುರು ಮಹೀಪತಿ ಸುತ ಪ್ರಭುವಿನ ಸವಿ ಸವಿ |
ಕರುಣ ಮಾತುಗಳಾಡಿಸುತಾ ಹರಿಯಾ ||3