ಒಟ್ಟು 313 ಕಡೆಗಳಲ್ಲಿ , 18 ದಾಸರು , 306 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತಕಾಲಭೈರವ ನುತಿಪೆ ನಾ ಸತತಕಾಲಕಲ್ಪಿತ ಲೀಲೆಯರಿತು ಸು-ಶೀಲತನವನು ಮೆರೆಯಲೋಸುಗಸ್ಥೂಲಸೂಕ್ಷ್ಮಾಕೃತಿಯ ಧರಿಸಿದಮೂಲಿಕಾ ಶ್ರೀನಿವಾಸ ಭೈರವ 1ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-ವೀರ ಶ್ರೀರಾಮನ ಸೇತು ನೋಡುತ್ತಧರೆಯ ಸಂಚರಿಸುತ್ತ ಬರುತಿರೆಮಿರುಪ ಶೇಷಾಚಲ ನಿರೀಕ್ಷಿಸಿಭರದಿ ಗಿರಿಮೇಲಡರಿ ಶ್ರೀಶನಚರಣಕಾನತನಾಗಿ ಸ್ತುತಿಸಿದೆ 2ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿಇರಿಸಿ ಮೆರೆಸಿದೆ ಕೀರ್ತಿಕರವಲ್ಲಿತ್ವರಿತದಿಂ ನೀನೆಲ್ಲ ದೇಶದಪರಿಪರಿಯ ಕಾಣಿಕೆಯ ತರಿಸುತಹರಿಯ ದರುಶನಗೈವ ಮೊದಲೆಹರುಷದಿಂದಲಿ ಪೂಜೆಗೊಂಬುವೆ 3ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿಧರಿಸಿ ಮೃದುತರವಾದ ವಾಕ್ಯದಲಿಕರೆಸಿ ಒಬ್ಬೊಬ್ಬರ ವಿಚಾರಿಸಿಸರಸದಿಂದಲಿ ಪೊಗಳಿಕೊಳ್ಳುತನರರ್ಗೆ ಸೋಂಕಿದೆ ಭೂತಪ್ರೇತದಭಯಗಳನು ಪರಿಹರಿಸಿ ಪಾಲಿಪೆ 4ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪಖ್ಯಾತ ವೆಂಕಟಪತಿಗೆ ಸಖಿಯಷ್ಪಖ್ಯಾತಿಯಿಂ ದೊರೆಯಿದಿರಿನಲಿ ಸಂ-ನಿಧಿಸನ್ನುತನಾಗಿ ಮೆರೆದಿಹೆಓತು ಕರುಣದೊಳೊಲಿದು ಪಾಲಿಪದಾತಲಕ್ಷ್ಮೀನಾರಾಯಣಾಪ್ತನೆ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶಭಾಗವತಪ್ರಿಯ ಭಾಗೀರಥೀಜನಕ ಪ.ವರುಷವರುಷಕೆ ನಿನ್ನ ದರುಶನವನಿತ್ತೆನ್ನಕರುಣಿಸೈ ಶೇಷಾದ್ರಿವರ ಶ್ರೀನಿವಾಸದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾವರಪ್ರಸಾದವನೀಯೊ ಜನ ಮೆಚ್ಚುವಂತೆ1ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿನಿಯಮತಿಯೀಯೊ ನೀರಜನಾಭನೆದಯಮಾಡೊ ತವ ಪಾದಸೇವೆಯನ್ನಿತ್ತೆನಗೆಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ 2ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾಧೀನನೀನೆಂಬ ಬಿರುದುಂಟಾದಡೆಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಾಣನಾಥ ನಮಾಮಿ ಸಾಷ್ಟಾಂಗಪಾತುಮಾಂ ಪವಮಾನಿ ಕೃಪಾಂಗ ಪ.ದಾತಾರ ರಘುನಾಥದೂತ ವಿಖ್ಯಾತಸೀತಾಮಾತಾಪದಾಬ್ಜ ಪ್ರಣೀತಾ-ನೇಕವಾನರಯೂಥ ಸುಶೀಲಭೂತಳ ಭೂರಿಜೀವನಪಾಲ 1ಆಂಜನೇಯ ಸುರಂಜನಮೂರ್ತಿಕಂಜನಾಭದಾಶ್ರಯವರ್ತಿಭಂಜನಾಸುರನಿಕರ ನಿರ್ಲೇಪರಂಜನಾತ್ಮ ನಿರಂಜನರೂಪ 2ಕರಕೃತಾಂಜಲಿಮನೋಹರ ಶುಭಕಾಯವರಲಕ್ಷ್ಮೀನಾರಾಯಣ ಪ್ರೀಯಪರಮಪಾವನ ನೇತ್ರಾವತಿ ನದೀತೀರವರಮಣಿಪುರಮುಖ್ಯ ಪ್ರಾಣ ಸಾಕಾರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಾಣಾಂತರ್ಗತಪ್ರಾಣ ಅಣುರೇಣುಚರಾಚರಪೂರ್ಣ ಪ.ಕಾಣೆನು ನಿನ್ನ ಸಮಾನ ಮಾನದ ಪು-ರಾಣಪುರುಷಸುತ್ರಾಣವರೇಣ್ಯಅ.ಪ.ಪಂಕಜನಾಭಶ್ರೀವೆಂಕಟರಮಣನೆಕಿಂಕರಜನಮನಃಪ್ರೇಮದನೆಶಂಕರಾದಿ ಸುರಸಂಕುಲ ಸೇವಿತಶಂಖ ಸುದರ್ಶನ ಗದಾಬ್ಜಹಸ್ತನೆ 1ಪಾಪಿಯು ನಾ ನೀ ಪಾಪಹ ಪಾವನರೂಪಪರಾತ್ಪರಗೋಪಾಲಕಾಪಾಡೆಮ್ಮ ಸಮೀಪಗನಾಗಿ ಜ-ಯಾಪತಿಗೋಪತಿಶ್ರೀಪತಿ ನೀಗತಿ2ಚಟುಳ ನೇತ್ರಾವತಿತಟನಿಕಟಪ್ರಕಟವಟಪುರವರ ವೆಂಕಟಧಾಮವಟುವಾಮನ ಲಕ್ಷ್ಮೀನಾರಾಯಣಪಟುವೀರ್ಯ ತಮಃಪಟಲನಿವಾರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿ ಪ.ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ 1ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರಜನನಿಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ 2ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದನು ಸರದಾರ ಸರದಾರಅಂಧಕರಿಪು ಸುಕುಮಾರ ಪ.ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ 1ವಲ್ಲೀದೇವಿಮನೋಹಾರ ಒಲ್ಲದಜನಕತಿದೂರಬಲ್ಲವವೇದವೇದಾಂತದಸಾರಖುಲ್ಲದನುಜ ಸಂಹಾರ2ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರಲಕ್ಷ್ಮೀನಾರಾಯಣನಕಿಂಕರರಕ್ಷಿಸು ನಮಿತಕುಬೇರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದೆ ಭಗವತ್ಪಾದಯುಗಾರವಿಂದಕೆ ಮಿಳಿಂದನಾಗಿವಂದನೀಯರೆ ಯತಿಕುಲಾಬ್ಧಿಚಂದ್ರರ ಭುವನೇಂದ್ರತೀರ್ಥರೆ 1ಪರಮಪಾವನ ಭುವನೇಂದ್ರರಕರಸಂಜಾತ ವರದೇಂದ್ರರಕರಸರೋರುಹಭವರೆ ಮಹಾಕರುಣಾಂತಃಕರಣ ಧೀರರೆ 2ಸುಮತೀಂದ್ರಾದಿ ಯತೀಂದ್ರರವಿಮಲ ಹೃದಯಕಮಲಭಾಸ್ಕರಅಮಮ ನಿಮ್ಮ ಕಾಂಬ ಯೋಗಅಮಿತಸುಕೃತಭೋಗಪೂಗ3ಪೂರ್ಣಪ್ರಜ್ಞಾಚಾರ್ಯವರ್ಯಸನ್ನುತಮತಧೈರ್ಯ ಧುರ್ಯಧನ್ಯನಾದೆನು ನಾನಿಂದುಸನ್ನಿಧಾನವನು ಕಂಡೆನು 4ಶ್ರೀಶ ಲಕ್ಷ್ಮೀನಾರಾಯಣವ್ಯಾಸ ರಘುಪತಿಯ ಚರಣೋ-ಪಾಸಕರೆ ಪಾವನರೆಕಾಶೀವiಠಾಧೀಶ್ವರರೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶಮಾಧವಮಧುರಿಪು ಮಾನುಷವೇಷ ಶರಣಾಗತಪೋಷಪ.ವೇದಾಗಮ್ಯ ದಯೋದಧಿ ಗೈದಪ-ರಾಧ ಕ್ಷಮಿಸಿ ಸುಗುಣೋದಯನಾಗುತ ಅ.ಪ.ಅನಾಥ ಜನರ ಕಾಮಧೇನು ಕಾಯೊ ಎಮ್ಮನುದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನುಆನತಜನ ಸುತ್ರಾಣಿಸುವಂತೆ ಪ್ರ-ದಾನಿಯಂತೆ ಶತಭಾನು ಪ್ರಕಾಶದಿ 1ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮಕಾಟಕ ಮನಸಿನ ಮಾಟವ ನಿಲ್ಲಿಸಿಘೋಟಕಾಸ್ಯ ನರನಾಟಕಧಾರಿ 2ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆಕಾಣಿಸದೆಮ್ಮಲಿ ಮೌನವ ಮಾಳ್ಪರೆದೀನಜನರ ದುಮ್ಮಾನಗೊಳಿಸುವರೆ 3ಹಿಂದೆಮ್ಮ ಕಾಯ್ದವ ನೀನೆಹರಿಸುರನರ ಕೈವಾರಿಮಂದಜ್ಞಾನಿಗಳ ತಪ್ಪನುಮಾರಿಮೂರ್ಲೋಕೋದ್ಧಾರಿಹೊಂದಿದವರಿಗೆಂದೆಂದಿಗು ಬಿಡನೆಂ-ಬಂದವ ತೋರಿ ಆನಂದವ ಬೀರುತ 4ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದಒಪ್ಪಿಸಿದೆಮ್ಮಭಿಪ್ರಾಯವ ತಿ-ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ.ಸರ್ವೋತ್ತಮ ಸರ್ವಾಂತರ್ಯಾಮಕಸರ್ವಾಧಾರ ಪ್ರವೀರ ಶೂರವರ 1ನಿತ್ಯಮುಕ್ತ ಪರಿಪೂರ್ಣಗುಣಾರ್ಣವಸತ್ಯನಿಯಾಮಕ ಸತ್ಯವಾದರೆ ತ್ವರೆ 2ರೂಪತ್ರಯ ಭವತಾಪಶಮನ ಸ-ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3ಭಜಕರ ಭಾಗ್ಯನಿಧಿಯು ನೀನೆಂಬುದುನಿಜವಾಗಿರೆ ಶ್ರೀ ರುಜುಗಣೇಶಪತಿ 4ಶ್ರೀಲಕ್ಷ್ಮೀನಾರಾಯಣ ನಿರ್ಗುಣಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿಬಾ ನಿರ್ಮಲಮತಿ ತೋರಿಭಾರತಿಪ.ಅಜನ ಪಟ್ಟದ ರಾಣಿಭುಜಗಸದೃಶವೇಣಿಭಜಕರ ಚಿಂತಾಮಣಿ ಕೀರವಾಣಿ 1ವೇದಾಂತರಂಗಿಣಿ ನಾದಸ್ವರೂಪಿಣಿಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ 2ಅಕ್ಷಯಸುಖಭಾಷೆ ಆಶ್ರಿತಕಜನಪೋಷೆಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರೋ ಬಾರೋ ಮನುಕುಲಗುರುಗುಹಾಸೇರಿದಾನತರ್ಗೆ ಚಾರುಸುರಭೂರುಹ ಪ.ಮಾನಾಭಿಮಾನ ನಮ್ಮದು ನಿನ್ನಾಧೀನದೀನಜನರಸುರಧೇನುಮಹಾಸೇನ1ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2ಲಕ್ಷ್ಮೀನಾರಾಯಣನ ಧ್ಯಾನಾಭರಣಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿನ್ನಪಲಾಲಿಸಯ್ಯ ಭಕ್ತಪರಾಧ-ವನ್ನು ಕ್ಷಮಿಸಬೇಕಯ್ಯ ಪ.ಅನ್ಯಾಯ ಕಲಿಕಾಲಕ್ಕಿನ್ನೇನುಗತಿಸುಪ್ರ-ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.ಮಕ್ಕಳ ಮಾತೆಯಂದದಿ ಕಾಯುವ ಮಹ-ದಕ್ಕರದಿಂದ ಮುದದಿಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತುರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನುದಿಕ್ಕಿಲ್ಲದವರ ಧಿಕ್ಕಾರ ಗೈದರೆಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-ವರ್ಕಳಮಣಿ ನಿನಗಕ್ಕಜವಲ್ಲವುಕುಕ್ಕುಟಧರವರ ಮುಕ್ಕಣ್ಣತನಯ 1ಜಾತಿ ನೀತಿಯನು ಬಿಟ್ಟು ಡಾಂಭಿಕತನದರೀತಿಗೆ ಪ್ರೀತಿಪಟ್ಟುಸೋತು ಹಣವ ಕೊಟ್ಟು ಖ್ಯಾತರೆಂಬುವಗುಟ್ಟುಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿಯಾತುಧಾನರಗುಣಯಾತಕ್ಕರಿಯದುಭೂತೇಶ್ವರಸಂಜಾತ ಸುರನರ-ವ್ರಾತಾರ್ಚಿತ ಪುರಹೂತಸಹಾಯಕನೂತನಸಗುಣವರೂಥಪುನೀತ2ಯಾವ ಕರ್ಮದ ಫಲವೋ ಇದಕಿ-ನ್ಯಾವ ಪ್ರಾಯಶ್ಚಿತ್ತವೋಯಾವ ವಿಧವೊ ಎಂಬ ಭಾವವರಿತ ಪುರುಷಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲದೇವ ಲಕ್ಷ್ಮೀನಾರಾಯಣನಪಾದಸೇವಕನೀ ಮಹಾದೇವನ ಸುತ ಕರು-ಣಾವಲಂಬಿಗಳಕಾವನಮ್ಮಯ ಕುಲ-ದೇವ ವಲ್ಲೀಪತಿ ಪಾವಂಜಾಧಿಪ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ