ಒಟ್ಟು 4540 ಕಡೆಗಳಲ್ಲಿ , 127 ದಾಸರು , 2949 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ ಲೊಳು ಬಿದ್ದಾದ ಸಂಕೋಲಿ ನಾಳೆಗೆ ಬರುತಾದ ಕಾಲನ ದಾಳಿಯು ತಾಳದೆಳಿತಾರ ಜಡಿದ್ವಜ್ರದ ಕೀಲಿ 1 ಹಂದಿಯ ಜನುಮಕೆ ಬೀಳಬೇಡ ಬೇಡಿ ಮಂದರ ನಿಲಯನ ಹೊಂದಿ ಭಜಿಸಿ ಆನಂದಪಡಿ 2 ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ ಪಾರ ಮಾಡಿಕೊಳ್ಳೊ ಭರ್ಜರಿ ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ ವಾರಿಜ ನಂಬಿ ಹೊಡಿ ಜಯಭೇರಿ 3
--------------
ರಾಮದಾಸರು
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಹೆದರಿಕೆ ಯಾತರದೋ ತ್ರಿಜಗದಿ ಪಾದ ಸದಮಲದಾಸರಿಗೆ ಪ ಗರುಡನ ಮಂತ್ರಕೆ ಉರಗನ ಭಯವುಂಟೆ ದುರಿತದಂಜಿಕೆಯುಂಟೆ ನರಹರಿಸ್ಮರಣೆಗೆ 1 ಬಿರುಗಾಳಿ ಬೀಸಲು ಗಿರಿ ನಡುಗುವುದುಂಟೆ ಪರಿಭವ ಬಂಧಮುಂಟೆ ಸಿರಿವರನರ್ಚಕರಿಗೆ 2 ಶ್ರೀರಾಮನಡಿವಾರಿಜಭಜಕರ್ಗೆ ಸಾರಮೋಕ್ಷಂಗಳು ದೂರವಿನ್ನುಂಟೆ 3
--------------
ರಾಮದಾಸರು
ಹೆಳೆಲೆ ಸಖಿ ಘಮ್ಮನೆ ಸುಳಿದವನಾರೇ | ಕೇಳಮ್ಮ ಒಮ್ಮಿಂ ದೊಮ್ಮೆಲೆ ಕಂಡೆ ನಾನೀರೆ | ಒಲಿದು ಕರೆ ತಂದೆನಗಿನ್ನೊಮ್ಮೆ ದೋರೇ | ಚಲುವಿಕೆಯವನ ಉಸುರಲಾರೆ ಪ ಪದುಮ ಶಂಖ ಚಕ್ರಾಂಕಿ ತರುಣ ತಳದಾ | ಬಿದಿಗೆ ಚಂದ್ರಮನ ನೀಲಮಣಿಯಂತೆ ಹರಡಿನ ಪಾದಾ | ಚದುರ ನೂಪುರ ಗೆಜ್ಜೆ ರವದಾ 1 ಜಾನೂರು ಪೋಂಬಾಳೆ ಕಟಿ ತಟಾ | ಸುನಾಭಿ ತ್ರಿವಳಿಯ ಕೂಟಾ 2 ಕಿರಿಡೊಳ್ಳು ಮಧ್ಯ ಯಳೆ ವಾಸೆ ಹೃದಯಲಿ ಪದಕಾ | ಸಿರಿವತ್ಸ ಗ್ರೀವ ಕರ ಕಡಗ ತೋಳ ಬಂದಿ ಕುಂಡಲ ರನ್ನನೇಕಾ 3 ಕುರು ಮರಿಯಂದದಿ ಕದಪಿನಮುಖಾ | ಕಿರುನಗೆ ದಂತಾರ ನಯನ ಭ್ರೂತಿಲಕಾ | ನೊಸಲು ಕಸ್ತೂರಿ ತಿಲಕಾ 4 ತೆರಳಿದ ಬೆರಳುಂಗುರ ಸನ್ನೆ ಮಾಡುತಾ | ಗುರು ಮಹಿಪತಿ ನಂದನ ಪ್ರಭುನಿವಸತ್ಯ | ಧರಿಯೋಳಳಿವನ ಗಾಣಿ ಪರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇ ದಯಾಸಾಗರ ಸ್ವಾಮಿ ವೇದ ಮಾಧವ ಮುಕುಂದ ಮನುಮುನಿ ಪ್ರೇಮಿ ಪ ವೇದಗೋಚರ ಸಾಧುಸನ್ನುತ ನಾದಪ್ರಿಯ ಭವಬಾಧೆರಹಿತ ಭೇದಹರ ಜಗ ಪಾದ ಭಜಿಸುವೆ ಪಾಲಿಸೆನ್ನ ಅ.ಪ ಮದಗಜ ಮುದದಿಂದ ಪೊರೆದಿ ಪ್ರಭುವೆ ಮದಗಜಗಮನೆಯ ಮಾನದಿಂ ಕಾಯ್ದೆ ಪದುಮವದನೆಶಾಪ ಕಳೆದೆ ಕರುಣಿ ಸದಮಲಬಾಲನ ತಪಕೆ ನೀನೊಲಿದಿ ಸುದಯಹೃದಯ ಸುಸದನಪಾಲ್ಸಿದಿ ಸದಮಲಾಂಗನೆ ಪದುಮವದನ ಮುದದಿ ನಿಮ್ಮಡಿ ಪದುಮಗಳು ಎ ನ್ಹøದಯ ಮಂದಿರದಿರಿಸಿ ರಕ್ಷಿಸು 1 ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ ಸ್ಮರಿಪರಿಗೆ ದರುಶನಕೊಡುತಲಿ ನಡೆದಿ ತರುಣಿಯ ಎಂಜಲ ಸವಿದಿ ವನ ಚರನಿಗೆ ವಶನಾಗಿ ಅಭಯ ಪಾಲಿಸಿದಿ ಭರದಿ ದಕ್ಷಿಣಶರಧಿ ಹೂಳಿಸಿ ಮೆರೆವ ಲಂಕಾಪುರವ ಮುತ್ತಿದಿ ದುರುಳರ್ಹಾವಳಿ ದೂರಮಾಡಿ ಧರೆಯ ಭಾರವ ನಿಳುಹಿದಯ್ಯ 2 ನುಡಿಸಿದರೆನ್ನಿಂದಲಾವ ವಚನ ನುಡಿಸಿದ ಬಳಿಕದನು ನಡೆಸಿಕೊಡಭವ ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ ನ್ನೊಡಲೊಳಗದಂತೆಯಿರು ಅನುದಿನವು ಪೊಡವಿ ಮೂರನು ಒಡಲೊಳಿಟ್ಟಿಡೆ ಬಿಡದೆ ಆಳುವ ಒಡೆಯ ಶ್ರೀರಾಮ ದೃಢದಿ ನಿಮ್ಮಯ ಅಡಿಯ ನಂಬಿದೆ ಬಿಡಿಸು ಎನ್ನಯ ಮಂದಜ್ಞಾನವ 3
--------------
ರಾಮದಾಸರು
ಹೇಳಯ್ಯಾ ಶ್ರೀ ಗುರುವೇ ಬಾಳುವೆನದರಂದವಿ ಸುರ ತರುವೇ ಪ ಹೀನ ಯೋನಿಯ ಮುಖದಲಿ ಬಂದು ನಾನಾ ತಾಪತ್ರಯದಿ ಬಹುನೊಂದು ನೀನೆ ಗತಿಯನುತ ಬಂದೆ ನಿಂದು ನಾನು ಭವದಿಂದ ತರಿಸುವ ಉಪಾಯವ ವಂದು 1 ಕೇಳಯ್ಯಾ ನೀ ಕಂದಾ ಹೇಳುವ ನುಡಿ ಗ್ರಹಿಸಲಾನಂದಾ ಆದಿಯಲಿ ದುರ್ಜನ ಸಂಗವಳಿದು ಸಾಧುಜನಸಂಗವನೇ ಬೆರೆದು ಬೋಧೆಯಂದಲಿ ಮನನವ ಬಲಿದು ಸಾಧಕನ ಉದ್ಯೋಗಿಸ ಸಿದ್ಧಿಯಹುದು2 ಸ್ವಾಮಿ ಸಜ್ಜನ ಸಂಗವನೇ ಬಯಸಿ ಪ್ರೇಮದಿರಬೇಕು ಇದೇ ನಿತ್ಯವೆನಿಸಿ ತಾಮತ್ತರ ಘಳಿಗಿಯೊಳು ವಲಿಸಿ ಭ್ರಮಿಸುತಿಹಿದು ಅದು ಏನೆಂದು ವಿಸ್ತರಿಸಿಹೇ3 ಕೇಳಯ್ಯಾ ಲೋಕವೆಲ್ಲಾ ಛಲನೆ ಮಾಡುವುದು ವಿಕಲ್ಲುಳ್ಳದು ನೋಡುಮನವದು ನಾಕು ತೆರದೊಳಿಸಿ ಕೊಳ್ಳಲದು ಬೇಕಾದುದನು ವಸ್ತು ಇದಿರಿಡುತಲಿಹುದು4 ನಳಿನ ಜಪರಾಸುರಗಳಿಗೆ ಛಲಿಸಲಿಕೆ ಮನ ಅಂಗನಿಗೆ ಬಲಿ ವಿಡಿದು ಮೋಹಿಸಿದ ರಾಗ ಇಳಿಯೊಳಗ ವಶಯಂತಹುದು ಮನುಜಗ5 ಕೇಳಯ್ಯಾ ಶುಕನಾರದ ಭೀಷ್ಮರ ನೋಡಾ ವಿಕಳಿಗೊಳ್ಳದೆ ಮನಕೂಡಾ ಸಕಲಗೆದ್ದರು ಅತಿಗಾಢಾ ಯುಕುತಿಲೆ ಮನೊಲಿಕೊವೈರಾಗ್ಯದಿಂದ ಧೃಡಾ6 ಹೇಳೈಯ್ಯಾ ಜ್ಞಾನಸಾಧನವೆಂಬುದನರಿಯೇ ಎನಗೆಂತಹದಿಂತಿದು ಧೋರಿಯೇ ನೀನೇ ತಾರಿಸುದಯದೆನ್ನ ಸಿರಿಯೇ ನಾನು ಎಂದೆಂದು ತವಪಾದಸ್ಮರಣಿ ಮರಿಯೆ7 ಎಂದು ಬಾಗುವ ಕಂದನನು ನೋಡಿ ಕರ ನೀಡಿ ಛಂದದಲಿ ತರಿಪಂತೆ ಮಾಡಿ ಬಂದು ಧನ್ಯ ಗೈಸಿದ ಗುರು ಮಹಿಪತಿ ಕೈಯ್ಯಗೂಡಿ8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1 ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2 ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ 3 ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4 ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
--------------
ವಿಜಯದಾಸ
ಹೊಂಗೊಳಲೂದುತ ಬರುವ ರಂಗ ಮಂಗಳ ಗಾನಕೆ ನಲಿವ ಪ ಅಂಗನೆಯರ ಕೂಡಾಡುತೆ ಕುಣಿವ ರಂಗನ ಪಾದಕೆ ಮಣಿವ ಅ.ಪ ಕಿರುನಗೆ ನಸುನಗೆ ನಗುವ ಮರಕತಹಾರದಿ ಹೊಳೆವ ಸ್ಮರವರನಂದವ ಹಳಿವ ಕರುಣವ ಬೀರುತ ಒಲಿವ 1 ಗಾನದಿ ಮನವನು ಸೆಳೆವ ಧ್ಯಾನಕೆ ತನುಮನ ತೆರುವ ಸನ್ನುತ ಪದವಿಯ ಕೊಡುವ ಮಾಂಗಿರಿ ರಂಗಗೆ ಮಣಿವ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊಡಿ ಚೋಕ ಒಡೆಯ ಶ್ರೀ ಹರಿಪಾದ ಪೊಡವಿತ್ರಯದಧಿಕೆಂದು ಪ ಸಾಧು ಸಜ್ಜನರಿಗೆ ಆಧಾರವಾದ ಪಾದ ಪಾದ ಬಹು ಮಿಗಿಲೆಂದು 1 ಪಾರವಾರಿಧಿ ಕಡೆದು ಪೀರಿದಮೃತಪಾದ ಘೋರರಕ್ಕಸರೊದೆದಪಾರಮಹಿಮ ಪಾದೆಂದು 2 ಗೋವಳರಾಳಿದ ಪಾವನ ಶ್ರೀಪಾದ ದೇವ ಶ್ರೀರಾಮಪಾದಕಾವಪಾದೀಡಿಲ್ಲೆಂದು 3
--------------
ರಾಮದಾಸರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಂದಿ ಸುಖಿಸಿ ಹೊಂದಿ ಸುಖಿಸಿ ಒಂದು ಮನದ ಭಾವದಿಂದಾ ನಂದನೀವ ಜನಕ ನಮ್ಮಗುರುರಾಯನಾ ಪ ದಿಟ್ಟತನದಿ ಸಾಗರಧಿಂ ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ ದುಷ್ಟ ರಾವಣ ತನುಜನಬೆ ನ್ನಟ್ಟಿ ಕುಟ್ಟಿ ಲಂಕೆಯನು ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ 1 ಆಪ ನೋಡದೆ ಭೂಪರಾಸಭೆ | ಲೋಪಗಡಿ ಮಂಡಿಸಿ ಗೆಲವು | ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ || ಪಾಪಿಕೌರವ ಧೀಪ ನೆಜ್ಞ ಸ | ಮೀಪಪಶುವಿನೋ ಪಾದಿಯಲಿ ಕೊಪದಿಂದಲಿ ಘಾತಿಸಿದ ಭೂಪಭೀಮನಾ2 ಮತ್ರ್ಯ ದೊಳಗ ಬೆರ್ತು ವಿಷಯ ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು ಸಾರ್ಥಕವನು ಮಾಳ್ಪಾನಂದ ಮೂರ್ತಿ ಮರುತನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೊಂದಿ ಸುಖಿಸು ಹರಿಯ ಪಾದಾ ಧ್ರುವ ನಾನಾ ಪುಣ್ಯ ನಿದಾನದಿ ಧರೆಯೊಳು | ಮಾನವ ಜನುಮಕ ನೀನೀಗ ಬಂದು | ಪರಿ ತಾ ನಿಜವರಿಯದೆ | ಜ್ಞಾನ ಶೂನ್ಯನಾಗೇ-ನಿಹುದಣ್ಣಾ 1 ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ | ನುಡಿವರೇ ಪುಸಿಯನು ಬಿಡುವರೆ ಸತ್ಯವ | ಇಡುವರೆ ದುರ್ಗಣ ಸಿಡುವರೆ ಬೋಧಕ | ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ 2 ಮೂರು ದಿನದ ಸಂಸಾರದೊಳಗ | ಕಂ | ಸಾರಿಯ ಭಕ್ತಿಯ ಸೇರಿ | ಸಾರ ಸ್ವಹಿತ ಸಹ | ಕಾರಿ ಮಹಿಪತಿ ಸಾರಿದ ಬೋಧಾ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು