ಒಟ್ಟು 13403 ಕಡೆಗಳಲ್ಲಿ , 136 ದಾಸರು , 5923 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿ ಏನೋ ಬಾಲ ಹನುಮ ಪ. ಬಂಧಿಸಿದರಾರಿಲ್ಲಿ ನಿನ್ನ ಹನುಮ ಅ.ಪ. ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದು ಒಂದು ಸಲ ನೋಡುವೆನೆ ಅಜಗರವಿದಲ್ಲ ಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದು ಒಂದೆರಡು ಕೋಣವೆರಡರ ಮಧ್ಯೆ ಇರುವ 1 ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳು ಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕು ಗುಣದಂತೆ ಆವರಣ ವರ್ತುಳಾಕಾರದಲಿ ತೆನೆಗಳಲಿ ಕೋತಿಗಳ ಕಾವಲಿನ ಕಟ್ಟು 2 ಬೀಸಿದೀ ಬಲೆ ತೆಗೆಯೆ ಶ್ರೀ ಶನಿಗು ಅಳವಲ್ಲ ವಾಸುದೇವನೆÀ ಬಲ್ಲ ಈ ಮರ್ಮವ ದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠ್ಠಲ ವ್ಯಾಸರಿಂದಲಿ ನಿನಗೆ ಮೋಸಗೈಸಿದನೋ 3
--------------
ಅಂಬಾಬಾಯಿ
ಪರಿ ನೆಲಸಿದೀ ಏ ಸ್ವಾಮಿ ಪರಿ ನೆಲಸೀದಿ ಏಸುಪರಿ ನೆಲಸೀದಿ ದಾಸಜನ ಹೃದಯದಿ ಭೂಸ್ವರ್ಗ ಪಾತಾಳ ಬ್ಯಾಸರ ಮಾಡಿದಿ ಪ ಎಸೆವ ಚಂಚಲ ಶಿರಿಯು ತವರ್ಕಣ್ ಮಸಕು ಮಾಡಿದಳೇನೋ ಬಿಸಜಸಂಭವ ವೇದಪಠಣದಿ ಕುಶಲ ನುಡಿಯನೇನೋ ಅಸ್ವಧಿಪ ಪ್ರಾಣ ಸೊಸಿಯ ವಾಣಿಯು ಸ್ವಸುತೆ ಭಾರತೀ ಉಸುರಿಬಿಟ್ಟಳೇನೋ 1 ಮುಪ್ಪೊಳಲುರಿಗಾನು ಪೌತ್ರನು ವೊಪ್ಪುವ ಮೈಗಣ್ಣಾ ತಪ್ಪದೆ ಸೇವಿಸುವ ಸುಮನಸರಪ್ಪಣಿತ್ತರೇನೋ ತಪ್ಪದಾಸರನ ಮುಗಿಪ್ಪ ಗರುಡ ಶೇಷ- ರೊಪ್ಪಿಗಿಯಿಲ್ಲದೆ ತಪ್ಪಿಸ್ಯೋಡಿ ಬಂದ್ಯಾ 2 ಸುರಲೋಕವಾಸಾವು ಶ್ರೀಹರೆ ಪರಮಸೌಖ್ಯವಲ್ಲೆ ಸುರತರುಧೇನುಗಳು ನಿನಗೆ ತಾವ್ ಕೊರತೆ ಮಾಡಿದವೇನೋ ಸುರಮುನಿಗಂಧರ್ವರ ಗಾಯನ ಬಿಟ್ಟು ಸರಸವೇನು ಕಂಡಿ ನರಸಿಂಹವಿಠಲ3
--------------
ನರಸಿಂಹವಿಠಲರು
ಪರಿ ಪಾಹಿ ಶಿವ ಪ ಭವ ಶರಣಾಗತ ಪರಿಪಾಲ ಶಿವ ಗಿರಿಜಾ ಹೃದಯವಿಲೋಲ ಶಿವ 1 ಖಂಡಚಂದ್ರಧರ ಪಾಹಿ ಶಿವ ಕುಂಡಲೀಂದ್ರಧರ ಪಾಹಿ ಶಿವ ಚಂಡದನುಜ ಸಂಹಾರ ಶಿವ ತಾಂಡವೇಶ ಜಿತಮಾರ ಶಿವ 2 ಭಾನು ಸೋಮ ಶಿಖಿ ನೇತ್ರ ಶೀವ ಧೇನುನಾಥ ವರವಾಹ ಶಿವ ಸ್ವಾನುಭೂತಿ ಪರಿಪೂರ್ಣ ಶಿವ ಧೇನುನಗರ ಸುವಿಲಾಸ ಶಿವ 3
--------------
ಬೇಟೆರಾಯ ದೀಕ್ಷಿತರು
ಪರಿ ಪೋಷಿಸುತ ಎನ್ನ ಪ ಸತಿ | ಅಕ್ಷರಳೆ ಕೃಪೆ ಈಕ್ಷಣೇಯಲೆತ್ರ್ಯಕ್ಷ ಸುರಮುಖ | ರಕ್ಷೆ ಭಕುತಿಯ | ಬಿಕ್ಷೆ ಪಾಲಿಸಿ | ರಕ್ಷಿಸೆನ್ನನು 1 ಸ್ತವ್ಯನನ ಶ್ರೋ | ತವ್ಯನನ ಧ್ಯಾ | ತವ್ಯನನ ಮಂ | ತವ್ಯ ಭವ್ಯನನ |ಅವ್ಯಯನ ಅನ | ವದ್ಯ ರೂಪನ | ಸುವ್ಯಕ್ತಿಗೈ | ಅವ್ಯಕ್ತಮಾನಿಯೆ 2 ಭಾವ ಜಾರಿಯ | ಭಾವ ಕೊಲಿದು ವಿ | ಭಾವ ಸುಪ್ರಭೆ | ಭಾವ ತೋರಿದೆಗೋವಳನು ಗುರು | ಗೋವಿಂದ ವಿಠಲನ | ತಾವಕಗೆ ತೋರೂವುದೆಲೆ ತಾಯೆ 3
--------------
ಗುರುಗೋವಿಂದವಿಠಲರು
ಪರಿ ಮೋಸ ವಚನಗಳು ನಾಚಿಕೆಯಿಲ್ಲವೇನೊ ಕೃಷ್ಣ ಪ ಯೋಚಿಸುತಿರೆ ನಿನ್ನ ಸತತ ಮನದಲಿ ಯಾಚಿಸುತಿರುವೆಯೋ ಪರರನ್ನು ಅ.ಪ ಚಂಚಲತನದಲಿ ನಿನ್ನ ಸೇವಕಳನು ವಂಚಿಸುತಿರುವುದು ಸರಿಯೇನೊ ಪಂಚಬಾಣನು ತನ್ನ ಜನಕನಾಗಿಹ ನಿನ್ನ ಮಿಂಚಿ ನುಡಿಯುವುದು ಅಚ್ಚರಿಯು 1 ಸಾರಸಲೋಚನೆ ಬೇರೆ ಯೋಚಿಸದಿರು ಮಾರನು ಎನ್ನಯ ಮೀರುವನೆ ಜರನೆಂದರಿಯುವ ನಾರೇರಿಗೆನ್ನ ವಿ ಚಾರವನರುಹಲು ಸೇರಿದೆನು 2 ಅಂಬುಜಮುಖಿಯರ ಸಂಭ್ರಮದಲಿ ನೀ ಹಿಂಬಾಲಿಸುತಿರೆ ನಂಬುವೆನೆ ರಂಭೆಯರವರು ನೀ ಹಿಂಬಾಲಿಸುವೆ ಡಂಭದ ವಚನವ ನಿಲ್ಲಿಸೆಲೊ3 ಪೋತ ನಾನಾಗಿರೆ ಪ್ರೀತಿಯ ನಟಿಸಿದ ಪೂತನಿಯನುಭವವೆನಗಿಹುದೇ ಘಾತಕರವರೊ ನೀತಿವಂತರೊ ಮಾತಿನಂದರಿಯೆ ಹಿಂಬಾಲಿಸಿದೆ 4 ಲಲನೆಮಣಿಯರ ಜಲವಿಹಾರದ ಸ್ಥಳಕೆ ನೀನೇತಕೆ ತೆರಳಿದೆಯೊ ತಿಳಿದು ಇದನು ನಿನ್ನ ಸುಳಿವನು ಅರಿಯಲು ಸುಲಭವೇನೆಲೊ ಶ್ರೀ ಕೃಷ್ಣ 5 ಹೊರಗಿನ ರೂಪದಿ ನರರನು ಸುಲಭದಿ ಮರುಳು ಮಾಡುತಿಹ ತರಳೆಯರು ಸರಳರೊ ಈ ಜನ ದುರುಳರೊ ಇವರ ಅಂ ತರಗಳನರಿಯಲು ತೆರಳಿದೆನು 6 ಅಂತರಂಗಗಳನರಿಯಲು ನಿನ್ನಯ ತಂತ್ರಗಳೆಲ್ಲವು ನಟನೆಗಳು ಚಿಂತೆಯ ಪಡದೆ ಸ್ವತಂತ್ರನಾಗಿರುವೆ ಸಂತಸದಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ ಧರ್ಮಪಥವನು ತೋರಿ ಉದಾರಿ ಪ ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ ನಿರಯಾ ಪಾತ್ರರ ಸಲಹಿದಿನೀ 1 ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ ವನಜನಾಭನ ಸ್ತಪಿಸಿದ ನೀ 2 ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ ಚರಿಪ ಜ್ಞಾನಿಯೆ ನಮಿಸುವೆನು 3
--------------
ಶಾಮಸುಂದರ ವಿಠಲ
ಪರಿಪಾಲಿಸೈ ವರ ವೆಂಕಟೇಶ ಚರಣಾಬ್ಜಯುಗ ಸ್ಮರಣೆಯನಿತ್ತು ಪ ದುರಿತಾಧಿದೂರ ಪರತತ್ವಸಾರ ಪರಮಾತ್ಮನೆ ಪೊರೆ ಎನ್ನುತ ಕರಿರಾಜ ಮೊರೆಯಿಡುತಿರಲು ನೀ ಗರುಡನ ಏರಿ ತ್ವರೆಯಿಂದ ಬಂದೆ ಪರಮ ದಯಾಕರ ಶ್ರೀನಿವಾಸ 1 ಪಾಪಿಷ್ಠನು ಅಜಾಮಿಳನೆಂದು ಕೋಪದಿ ಯಮ ಭಟರೆಳೆಯುತಿರೆ ತಾಪಕೆ ತನ್ನ ಪುತ್ರನ ಕೂಗುತಲಿರೆ ಕೃಪೆಯಿಂದ ನಿಜಪುರಕೆ ಒಯ್ದೆ 2 ಕನಕಾಚಲನಿಧಿ ಲಕ್ಷ್ಮೀಕಾಂತ ಪ್ರಣತಾರ್ಥಿಹರ ಆನಂದಕರ ವನಜಾಸನಾದಿ ಅಮಿಷಪಾಲ ಯೋಗಿ ಮನ ಕುಮುದಲೋಲ 3
--------------
ಲಕ್ಷ್ಮೀನಾರಯಣರಾಯರು
ಪರಿಪಾಹಿ ಗುರು ರಾಘವೇಂದ್ರ ಪ ಶರಣರ ಪೊರೆಯಲು | ವರ ಮಂತ್ರಾಲಯಪುರದಲಿ ನೆಲಿಸಿಹೆ | ಕರುಣಿಗಳರಸಅ.ಪ. ಪಿತನ ಬಾಧೆಗೆ ಲವ | ವ್ಯಥೆಯನು ಪಡದಲೆರತಿಪತಿ ಪಿತನೆ ಸ | ರ್ವೋತ್ತಮನೆಂದೂರದೆ 1 ದ್ವಿತಿಯ ಯುಗದಲಿ | ದೈತ್ಯನಲ್ಲುದಿಸುತಸೀತೆಯ ರಮಣನ | ಪ್ರೀತಿಯ ಪಡೆದೆಯೋ 2 ದ್ವಾಪರದಲಿ ಪ್ರ | ತೀಪನ ಸುತನೆನಿಸೀ ಶ್ರೀಪತಿ ಕೃಷ್ಣನ | ಪ್ರೀತಿಯ ಪಡೆದೇ 3 ಇಷ್ಟವಿಲ್ಲದ ಪುಣ್ಯ | ಎಷ್ಟೂ ಗಳಿಸಿ ನೀವುಶಿಷ್ಟರ ಪಾಲಿಸೆಂದು | ಕೃಷ್ಣನ ಮೊರೆಯಿಟ್ಟೆ 4 ವ್ಯಾಸರಾಯರಾಗಿ | ಭೂಸುರ ಸುಜನರಕ್ಲೇಶವ ಹರಿಸಿದೆ | ದಾಸಕೂಟಕೆ ಹಿರಿಯಾ 5 ಶ್ರೀಶನರಹರಿ | ವ್ಯಾಸ ರಾಮಾ ಕೃಷ್ಣಈಸು ರೂಪಗಳಲ್ಲಿ | ವಾಸವು ವೃಂದಾವನದಿ 6 ಪರಿಪರಿ ವಿಧ ನಿಮ್ಮ | ಚರಣವ ಸ್ಮರಿಸುವನರರ ಮನೋರಥ | ಹರಿಯ ಕರುಣಿಪ 7 ಸರಸಿಜಾಸನ ಮುಖ | ಸುರಪ ದೇವರ್ಕಳಲ್ಲಹರಿಯನು ಚರರೆಂಬಾ | ವರಮತಿ ಪಾಲಿಸೋ8 ಭವ ಭಯ ಹರಿಸೀ 9
--------------
ಗುರುಗೋವಿಂದವಿಠಲರು
ಪರಿಪೂರ್ಣಕಾಮೆ ಶ್ರೀ ರಮೆ ಪ ಕಮಲದಳ ಸಮ ವಿಮಲ ಚರಣಯುಗೆ ಅಮಲ ಜಂಘಾನ್ವಿತೆ ಶುಭಗೆ 1 ಕರ ಸದ್ಯೋರು ಇಭರಿಪು ಸಮಕಟೆ ಶುಭತಮ ಶುಭತಮ ನಾಭಿ ಸುತ್ರಿವಳೆ2 ಗುರು ವಾಸುದೇವವಿಠಲ ಪರಮಪ್ರಿಯೆ ಭವ- ಶರಧಿ ತಾರಕೆ ಚಂದ್ರಫಲಕೆ3
--------------
ವ್ಯಾಸತತ್ವಜ್ಞದಾಸರು
ಪರಿಭವ ತಾಪಹರಣ ಪ ದಯದಿ ಯುವತಿಯಕುಲ ಉದ್ಧಾರಣ ಜವದಿ ಕರಿಧ್ರುವಬಂಧಮೋಚನ ಯುವತಿಗಕ್ಷಯವಿತ್ತು ಒಲಿದು ಹಯವ ಪಿಡಿದು ರಥವ ನಡೆಸಿದ ಭುವನ ಬ್ರಹ್ಮಾಂಡ ಸೂತ್ರಧಾರಕ ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ ಮಾಧವ ಭೋಗ ಗರುಡಗಮನ ಪತಿತಪಾವನೆ ಇಂದಿರೆಂiÀi ಜೀವ ಜಗದಾದಿದೇವ ಯತಿತತಿನುತ ಪವಿತ್ರನಾಮ ಕ್ಷಿತಿಸುತೆಪತಿ ಪವಿತ್ರ ಮಹಿಮ ಸತಿಯರವ್ರತಹರ ಜಿತಮಹಮುಪ್ಪುರ ಕೃತ್ರಿಮ ಮುರಹರ ಮಥನಸಾಗರ ನುತಿಪರ್ಹಿತಕರ ಸುಪಥರಾಧಾರ ಹಿತದಿ ಪೊರೆಯೆನ್ನ ಕರುಣಾನಿಕರ 1 ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ ಸ್ಮರಿಸಿ ಬೇಡ್ವರ ಪರಮಸುರಧೇನು ಸುರಗಂಗಾಜನಕ ಶರಣು ಸಜ್ಜನರಮಿತ ದಯಾ ಪರನು ವಿಶ್ವರಕ್ಷಕನು ಮರಣರಹಿತ ಮದನತಾತ ಶುಭ ಸಚ್ಚರಿತ ದುರುಳ ಸಂಹರ ಶರಣುಮಂದಾರ ಸುಗುಣರೋದ್ಧಾರ ಶರಣಭಜಕರ ವರಸುಖಕರ ಕರಣಿಸಭವನೆ ತ್ವರಿತ ಸುವರ 2 ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ ಕುಸುಮನಾಭ ಕೌಸ್ತುಭಾಂಬರ ಅಸಮ ತುಲಸಿಮಾಲಾಲಂಕಾರ ಒಸೆದು ದಾಸನ ಪುಸಿಯೆಂದೆನಿಸದೆ ಹಸನುಮತಿಯಿತ್ತು ಪೋಷಿಸನುದಿನ ಎಸೆವ ತವಪಾದ ನಂಬಿ ಮರೆಬಿದ್ದ ಅಸಮದಯಾನಿಧಿ ಮಮ ಶ್ರೀರಾಮ 3
--------------
ರಾಮದಾಸರು
ಪರೇಶ ಸರ್ವೇಶ ಗಂಗಾಧರಾ ಗಿರೀಶ ಗೌರೀಶ ಕೃಪಾಕರಾ ಪ ಸುರೇಶ ಸುಖಕರ ಬಾಲೇಂದುಧರ ಹರ ಧರೇಶ ಶುಭಕರ ಭವಾಭ್ದಿ ಪರಿಹರ ಅ.ಪ ಉಮಾಮಹೇಶ್ವರ ಕುಮಾರಪಿತ ಹರ ನಮಾಮಿ ಶಂಕರ ಪರಾತ್ಪರಾ 1 ಪಿನಾಕಧರಕರ ಪುರಾರಿ ಸ್ಮರಹರ ತ್ರಿನೇತ್ರ ಹರ ಮಾಂಗಿರೀಶ ಸಹಚರ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಲಿಮಾರು ಮಠದ ಶ್ರೀರಘುವರ್ಯರ ಕೃತಿಗಳು ಯುಗ್ಮ ಉಡುಪಿನ ಕೃಷ್ಣನೇ 1 ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ2 ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ 3 ಮೊಸರು ಭಾಂಡವನೊಡೆದು ಬೆಣ್ಣೆಯನಸುನಗುತಲೀ ಭಕ್ಷಿಸೀ ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ4 ಸತಿ ನುಡಿದಳು 5 ವಿತತ ವೈಭವ ಈ ಪರಿಯಲಿಪ್ರತಿಮೆಯನ್ನೇ ಮಾಡಿಸಿ ಸತತ ಪೂಜೆಯ ಮಾಳ್ಪರೀ ಅತಿ ಪ್ರೀತಿಯಿಂದಲಿ ಕೊಡು ಎನಗೆ 6 ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ ಕಮಲನಾಭನು ಇತ್ತು(ದ್ದು) ಅದರಲಿ ವಿಮಲ ಪೂಜೆಯ ಕೊಂಡನು 7 ಶರಧಿ ತೀರದಲಿತ್ತನು8 ನಾವೆಯಲ್ಲಿ ಗೋಪಿಚಂದನ ಸಂವೃತಾರ್ಚಯು ಬರುತಿರೆ ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದನು 9 ಅವರರೊಡೆಯ ಶ್ರೀ ಮರುತಪತಿತತ್ ಪ್ರತಿಷ್ಠೆಯ ವಿರಚಿಸಿ ಕುಮುದ ಬಂಧು ಕ್ಷೇತ್ರದಲಿ ನಿ-ನ್ನಮಿತ ಪೂಜೆಯ ಮಾಡಿದ 10 ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ 11 ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ 12
--------------
ಅನ್ಯದಾಸರು
ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಪವಮಾನ - ಪವಮಾನ - ಪವಮಾನ ಪ ಪ್ರಧಾನ ಮರುತ ನಿ | ನ್ನಾಧೀನವು ಜಗ ನಿನ | ಗೇನು ಬೇಡೆ ಸುಜ್ಞಾನ ವೀವುದೆಂ | ದಾ ನಮಿಸುವೆನೊ |ಗಾನ ಲೋಲ ಹರಿಗಾನಕೆ ಮನ್ಮನ | ಪೋಣಿಸುತನುದಿನ | ಪಾಲಿಸು ಪ್ರಾಣಾ ಅ.ಪ. ಮಣಿ ಭವ ಸಿಂಧು ಇಂದಿರೆ ಲೋಲನಅಂದ ಪದಾಬ್ಜಾನಂದದಿ ತುತಿಪಾನಂದೈಶ್ವರ್ಯವ ಇಂದೆ ಪಾಲಿಸಿ ಪೊರಿಮಂದಜಾಸನ ಸರಿ | ವಂದೇ ಅಸುರಾರಿ 1 ವಜ್ರ ಗರ ಅಧ್ವರ ಕರಿ ಸಿರಿ ಭೃಂಗ ಸಿರಿ ರಂಗನ ತೋರಿಸು ಎಂಬೆನು ಜೀಯಾ | ನಮಿಸುವೆನು ಹರಿಪ್ರಿಯಾ 2 ಕಲಿ ಪ್ರಾಬಲ್ಯ | ದೈತ್ಯರು ಎಲ್ಲ ವೈರಂಗಳೆಲ್ಲಸಾಧಿಸೆ ಬಲ್ಲ | ಮಣಿಮನ ಸೊಲ್ಲ | ಕೇಳುತಲೆಲ್ಲ ಬರುತಿಲ್ಲೆಲ್ಲ | ದುರ್ಮತಗಳ ಬೀರುತ ಬರುತಿರಲು |ಜಗಪುಸಿ ಎನಲು | ದೇವರಿಲ್ಲೆನಲು | ಐಕ್ಯ ಪೇಳಲುಜ್ಞಾನವಳಿಯಲು | ಸಜ್ಜನ ನೋಯಲು | ಮನವು ಕರಗಲುಹರಿಯು ಪೇಳಲು | ನೀ ಬರೊಸೊಲ್ಲು | ಎಲ್ಲೆಲ್ಲು | ಎಲ್ಲೆಲ್ಲು ||ತಪವನು ಮಾಡಲು | ನಡುಮನೆ ದ್ವಿಜನುವರ ಕೊಟ್ಟನು ತಾನನಂತೇಶ್ವರನುಕಂಬದ ಮೇಲೇ ರೋರ್ವ ಪೇಳಿದನುನಿನ್ನವತಾರ ವಿಚಾರವನು |ನೀನರಿದಂದೇ | ನಿನ್ನಿಂದೇ | ನಿನ್ನಿಂದೇ ||ದ್ವಿಜನಲಿ ಬಂದೆ | ಹುರಳಿಯ ತಿಂದೆ | ತಿಂತ್ರಿಣಿಯಿಂದೆ ಋಣ ತೀರಿ ತೆಂದೆ | ಹರಿ ಪ್ರೇಕ್ಷರಿಂದೆ | ಸನ್ಯಾಸ ಪೊಂದೆ ಗಂಗೆಯ ತಂದೆ | ಎನ ತಂದೆ | ಎನ ತಂದೇ ||ವ್ಯಾಸರ ಕಂಡುಪದೇಶವಗೊಂಡೆ | ಹೇ ಸಮೀರ ದು-ರ್ಭಾಷ್ಯವ ಖಂಡಿಸಿ ಶ್ರೀಶ ಸರ್ವೋತ್ತಮಆ ಶಿವ ಮುಖ ಹರಿ | ದಾಸರೆಂದು ಮ |ತೀ ಸಮಸ್ತ ಜಗ ಲೇಸು ಸತ್ಯವೆಂದುಪದೇಶಿಸಿದೆ ಗುರುವರ್ಯ | ಗುರುವರ್ಯ ||ಇಪ್ಪತ್ತು ಒಂದೆ | ಕು ಭಾಷ್ಯವ ಜರಿದೆಮುವತ್ತಾರೊಂದೆ | ಗ್ರಂಥವ ಮಾಡ್ಡೆಶಿಷ್ಯರಿಗ್ಹೇಳ್ದೆ | ಮಾಯವ ಜರಿದೆಉಡುಪಿಗೆ ಬಂದೆ | ಗೋಪಿಯಲಿಂದೆಕೃಷ್ಣನ ತಂದೆ | ಇಲ್ಲೆ ನಿಲಿಸಿದೆಅಷ್ಟ ಯತಿಗಳಿಗೆ | ಪಟ್ಟವಗಟ್ಟುತ | ಕೃಷ್ಣನಪೂಜೆ ನಿರ್ದಿಷ್ಟದಿ ನಡೆಸಿದೆ | ದುಷ್ಟಾದ್ವೈತವಕುಟ್ಟಿ ಸುಜನರುಗ | ಳಟ್ಟುಳಿ ಕಳೆಯೆ ವ |ರಿಷ್ಟರನೆಲ್ಲರ | ಕಟ್ಟಾಳೆನಿಸಿದೆ ||ದಿಟ್ಟ ಮೂರುತಿ ಜಗಜಟ್ಟಿ ಭೀಮಆನಂದತೀರ್ಥ ಗುರು ಗೋವಿಂದ ವಿಠಲನಹೃದದಿಷ್ಟಾನದಿ ತೋರಿಸೆಂದು ತವಪಾದಾಬ್ಜಕೆ ಶಿರ ಇಟ್ಟು ಬೇಡ್ವೆ ಋಜುವರ್ಯಗುರುವರ್ಯ | ಔದಾರ್ಯ | ಔದಾರ್ಯ 3
--------------
ಗುರುಗೋವಿಂದವಿಠಲರು