ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನ್ನ ಗುರು ಯೆಂತಪ್ಪ ದೊಡ್ಡವನೋ [ಘನ್ನ] ಸೀತಾಮನೋಹರ ಪ ನಿನ್ನೆಯೆನಗೊದಗಿದ ದು:ಖದಿ ಬನ್ನಬಡಿಸುವದಾಗಿ ಅಳುತಿರೆ ಚನ್ನಕೇಶವನಾಗಿ ತಾನೆ ಪ್ರ ಸನ್ನನಾದ ಮಹಾತ್ಮ ಜಯಜಯ1 ಭಗವದಾಜ್ಞೆಯನನುಗೊಳಿಸದಲೆ ಕುಗುಣ ಕುಚಿತದೊಳಿರಲು ಬಂದದ ಸಿಗಿದು ಹೊಡೆದು ಬಿಸಾಡಿದಾ ನಮ್ಮ ಸಗುಣ ಸಾಕ್ಷಾತ್ಕಾರ ನಿರ್ಗುಣ2 ದುರ್ಗುಣವು ದುಸ್ಸಂಗ ದುವ್ರ್ಯಾವಾರದೊಳು ದುರ್ಗತಿಕುಮತಿ ನಾನಧಿಕನಾಗಿರೆ ಸ್ವರ್ಗನಾಯಕ ಬಂದುಮೆನ್ನುಪ ಸರ್ಗಮಳಿದ ಮಹಾನುಭಾವಾ 3 ಅರಿಯದರಿಲಿಕೆ ಅರಿಗಳಾರನೂ ಹರಿಯೆ ತಾನಾಗೈದು ತೋರಿದ ಪರಮಗುರು ಶ್ರೀ ತುಲಸಿರಾಮನ ಚರಣ ಸೇವಕನಾದೆನಹುದೆಲೊ 4
--------------
ಚನ್ನಪಟ್ಟಣದ ಅಹೋಬಲದಾಸರು
ನನ್ನವ್ವ ಕಲ್ಲ ಬಿಡೆ ಈ ಧೋತ್ರವಚೆನ್ನಾಗಿ ಒಗೆಯಬೇಕು ಪ ಕರ್ಮ ಹೋಗುವ ಹಾಗೆಚೆನ್ನಕೇಶವನ ಪ್ರಸಾದಕ್ಕೊದಗಬೇಕು ಅ ಉಟ್ಟ ಧೋತ್ರವು ಮಾಸಿತು - ಮನದೊಳಗಿರುವದುಷ್ಟರೈವರುಗಳಿಂದ ಕಷ್ಟ ದುರಿತಗಳುಬಿಟ್ಟು ಹೋಗುವ ಹಾಗೆ ಮುಟ್ಟಿ ಜಲದೊಳುಗಟ್ಯಾಗಿ ಒಗೆಯಬೇಕು 1 ವೇದವನೋದಬೇಕು ಮನದೊಳಗಿದ್ದಭೇದವ ಕಳೆಯಬೇಕುಸಾದರಣೆಯಿಂದ ತಿಳಿದು ನಿಶ್ಚಯವಾಗಿಕ್ರೋಧಕರ್ಮಗಳೆಲ್ಲ ಬಿಟ್ಟು ಹೋಗುವ ಹಾಗೆ 2 ವೇಲಾಪುರದ ಚೆನ್ನಕೇಶವನ ಸೇವೆಗೆಆಲಸ್ಯವನು ಮಾಡದೆಕೋಲ ಹಿಡಿದು ದ್ವಾರಪಾಲಕನಾಗುವೆನೀಲ ಕುಂತಳೆ ಕಲ್ಲ ಬಿಟ್ಟು ಆ ಕಡೆ ಸಾರೆ 3
--------------
ಕನಕದಾಸ
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ಪ ತುಂಬಿದ ಅಸ್ಥಿ ಮಾಂಸ ರಕ್ತ ಜಂಬುಕನ ಬಾಯ ತುತ್ತ ಅ.ಪ ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ 1 ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲವಿದರಿಂದ 2 ಮಾಳಿಗೆ ಮನೆಯ ಬಿಟ್ಟು ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು 3 ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ಅನುದಿನ 4 ಮಡದಿ ಮಕ್ಕಳು ಇದನ ಕಡೆಯ ಬಾಗಿಲೊಳಗಿಟ್ಟು ಒಡವೆ ವಸ್ತುಗಳನು ನೋಡಿ ಅಡಗಿಸಿ ಇಡುವರಂತೆ 5 ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು ಹಾಗಗಳಿಗೆ ನಿಲ್ಲದಯ್ಯ ಈ ಗರುವ ಪರಮಾತ್ಮ 6 ವಾರಕದಾಭರಣವನ್ನು ಕೇರಿಯೊಳು ಕೊಂಬುವರಿಲ್ಲ ವರಾಹತಿಮ್ಮಪ್ಪಗಿಟ್ಟು ವಂದಿಸಿ ಕೈಗಳ ತಟ್ಟು 7
--------------
ವರಹತಿಮ್ಮಪ್ಪ
ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ ನಂಬಿ ಕೆಟ್ಟವರಿಲ್ಲವೊ ನಂಬದೆ ಗುರುವಿನ ಜ್ಞಾನದ ಬೋಧವ ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ ಕೇಳಬೇಡೆಲೊ ದುಃಖವಾ ಏಳು ಎಚ್ಚರಗೊಳ್ಳು ಕೀಳುತನವ ಬಿಡು ಹೇಳಿಕೊಡುವೆನೆಂಬ ಗುರುವಿನ ನುಡಿಯನು 1 ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ ಸೋಹವೆಂಬುವ ಮಹಾಮಂತ್ರವ ಬೋಧಿಸಿ ಮೋಹವನೋಡಿಸಿ ಕಾಯುವ ಗುರುವಿನ 2 ಸಂಚಿತ ಮೊದಲಾದ ಕರ್ಮವ ನೀಗಿಸಿ ಹಂಚಿಕೆಯಿಂದಲಿ ಮುಕ್ತನ ಮಾಡುವ ಪಂಚಕಸಾಕ್ಷಿ ಶ್ರೀಗುರುವಿನ ಬೋಧವ 3 ಸ್ವಾನುಭವನೀಡುವಾ ಏನೊಂದು ಬಯಸದೆ ಜ್ಞಾನದಾನವ ಮಾಳ್ಪ ಜ್ಞಾನಿ ಶಂಕರಗುರುರಾಯನ ನುಡಿಯನು 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಂಬಿ ಕೆಟ್ಟವರಿಲ್ಲವೊ, ರಂಗೈಯನನಂಬದೆ ಕೆಟ್ಟರೆ ಕೆಡಲಿ ಪ ಅಖಿಳ ಲೋಕೇಶನಕಂಬು ಕಂಧರ ಕೃಷ್ಣ ಕರುಣಾ ಸಾಗರನಅ.ಪ ತÀರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದಕರಿರಾಜನೊಬ್ಬ ಸಾಕ್ಷಿ ಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವ ರಹಿತನ ದೊರೆಯೂರು ಯೇರಬಂದ ಪುತ್ರನನ್ನುಕೊರಳಿÀ್ಹಡಿದ್ಹೊರಡಿಸಲು ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ ಸಿರಿ
--------------
ವ್ಯಾಸರಾಯರು
ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಪ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ಅ.ಪ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ 1 ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು 2 ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ ನೋಡು ಹಾಲುಸಕ್ಕರೆ ತುಪ್ಪ ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ3 ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ4 ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ ಪರಿಪರಿಯಾಸ್ವಾದ ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ ನಿತ್ಯ ನರಕವಾಸ ಎನ್ನತಲಿದೆ ವೇದ 5
--------------
ವಿಜಯದಾಸ
ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ| ಭಾವಿಸೆಲೋ ನಿಷ್ಕಾಮಾ| ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ| ನೋಡೆಲೋ ಹರಿ ಬಿರುದಾ| ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ 1 ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ| ಭಜಿಸೆಂದು ಉದಾರಿ| ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ2 ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ| ತಂದೆ ಮಹಿಪತಿ ಸೊಲ್ಲಾ| ಮನ್ನಿಸಿ ನಡೆಯಲು ಸುಲಭ ಕೈವಲ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ನೋಡಿರೋ ಅಂಬುಜಾಕ್ಷನ ಗುಂಭಗುರುತ ಹಂಬಲಿಸದೆ ಇಂಬುದೋರುದು ಧ್ರುವ ಬಿಡದೆ ವಂದಿಸಿ ನೋಡಿ ಸಂಧಿಸಿದರೆ ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಕೂಡಿಕೊಂಬ ಧನ್ಯಗೈಸಿ ಜೀವ ಪ್ರಾಣ ಪಾವನ ಮಾಡುವ 1 ಕಂತು ಪಿತನ ನಿತ್ಯ ಯೋಗಕ್ಷೇಮ ತಾ ಹೊತ್ತು ನಡೆಸುವ ಹತ್ತಿಲೆ ತಂದು ತಪ್ಪದೆ ತುತ್ತು ಮಾಡ್ಯುಣಿಸುವ 2 ಸಣ್ಣ ದೊಡ್ಡದೆನ್ನ ಗುಡದೆ ಕಣ್ಣದೆರಿಸಿ ಚಿನ್ನುಮಯದ ಬಣ್ಣ ಭಾಸುತ ಪುಣ್ಯಮಹಿಮೆ ಕಾಣಿಸುವದು ವಾಸನೆ ಪೂರಿಸಿದ ವಾಸುದೇವ ನಿಶ್ಚಯ ಲೇಸಾಗಿ ಪಾಲಿಸುತಿಹ್ಯ ದಾಸ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿ ಭಜಿಸಿರೈಯ್ಯಾ ಶರಣರು ಪ ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ| ಹಂಬಲ ಬಿಡಿ ಅನ್ಯ ಮಾರ್ಗದಾ| ಅಂಬುಜಾಂಬಕ ಪರದೈವನು ಗಡಾ| 1 ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ| ಲಾ ಮುನಿಯಮರರು ಕಳುಹಲು| ಪರದೈವವೆಂದನು ಗಡಾ|2 ದೇವಾ|ಸುರರೆಲ್ಲ ತವಕದಿ ಕುಳಿತಿರೇ| ಇಂದಿರೆ ಬಂದು|ಹರಿಗೆ ಮಾಲೆಯ ಹಾಕಿದಳು ಗಡಾ 3 ಶ್ರೀ ಚರಣವ ತೊಳೆಯಲು| ಸುರನದಿ ಬರೆ| ಮೃಢ ಶಿರಸದಿ ಧರಿಸಿದ ಗಡಾ4 ಮೂರಕ ಮೂರ ಮೂರುತಿಯಾಗಿ ಗುಣ| ಮೂರಕದೂರವದೆನಿಸುವಾ| ಸಾರಿದವರಾ ಕಾವಾ ಮಹಿಪತಿಸುತ| ಸಾರಥಿಯಾಗಿ ರಕ್ಷಾಪ ಗಡಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ ಕ್ಲೇಶ ಯಾತಕೇ ಕಾಸು ಕಳಕೊಂಡು _ ಅತಿಘಾಸಿ ಯಾತಕೇ ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1 ನೇಮ ಯಾತಕೇ _ ನಿಷ್ಠೆ ಯಾತಕೇ ಹೋಮ ಯಾತಕೇ _ ಕಷ್ಟಯಾತಕೇ ಪ್ರೇಮದಿಂದಲೀ _ ಇವರ ಭಜಿಸಲೂ ತಾಮಸಗುಣ _ ತಾನೇ ಓಡೋದು 2 ಮಧ್ವಶಾಸ್ತ್ರದ _ ಚಂದ್ರರಿವರು ಅದ್ವೈತವಾದವ _ ಗೆದ್ದಸಿಂಹರು ಮಧ್ವರಾಯರಾ _ ಮುದ್ದುಮೊಮ್ಮಗ ಸಿದ್ಧಸೇವ್ಯರು _ ಸುಧೆಯ ಕರ್ತರು 3 ಇವರ ಧ್ಯಾನವೂ _ ಜ್ಞಾನದಾಯಕಾ ಇವರ ಪೂಜೆಯೂ _ ಪಾಪನಾಶನ ಇವರ ಸ್ಮರಣೆ _ ಕಲಿವಿ ಭಂಜನೆ ಇವರ ಸೇವೆಯು _ ಮುಕ್ತಿಸೋಪಾನ 4 ಶ್ರೀಕಳತ್ರನಾ _ ಆಜ್ಞೆಯಿಂದಲಿ ನಾಕದಿಂದಲೀ _ ಇಲ್ಲಿ ಬಂದರು ಏಕಮನದಿ _ ಶರಣು ಹೋಗಲು ಪಾಪನಾಶನ _ ಪುಣ್ಯವೆಗ್ಗಳಾ 5 ಮಳಖೇಡದೀ _ ನೆಲಸಿ ಇಪ್ಪರೂ ನಳಿನನಾಭನ _ ಒಲಿಸುತನುದಿನಾ ನಲಿಸಿ ಮನದೊಳು _ ಒಲಿಸುವಾತನೆ ಶೀಲವಂತನು _ ಧನ್ಯ ಮಾನ್ಯನು6 ನರನ ವೇಷದಿ _ ಸುರರ ಒಡೆಯನೊ ಹರಿಯ ಕರುಣದಿ _ ಮೆರೆಯುತಿರ್ಪರು ಶರಣಜನರ _ ದುರಿತರಾಶಿಯ ತರಿದು ಶೀಘ್ರದಿ _ ಪೊರೆಯುತಿಪ್ಪರು7 ಎತ್ತಿನ್ವೇಷದಿ _ ವಾತದೇವನ ಪ್ರೀತಿ ಪಡೆದು _ ಖ್ಯಾತಿಆದರು ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ ಬಿತ್ತರಿಸಿದರು, ತತ್ತ್ವಶಾಸ್ತ್ರವ 8 ಕಾಗಿನೀನದೀ _ ತೀರವಾಸರು ವಿಗತರಾಗರು _ ನಿತ್ಯತೃಪ್ತರು ಜಾಗರೂಕದಿ _ ಪೊಗಳಿ ಪಾಡಲು ನಿಗಮವೇದ್ಯನು _ ಬೇಗ ಪೊರೆಯುವ 9 ಶೇಷಾವೇಷದಿ _ ವಾಸಿಸುವರು ಶೇಷಶಯನನ _ ದಾಸರೀವರು ಬೆಸರಿಲ್ಲದೆ _ ಆಸೆ ತೊರೆದು ದಾಸನೆನ್ನಲು _ ಪೋಷಿಸೂವರು 10 ಕೆರೆಯ ಏರಿಯು _ ಬಿರಿದು ಪೋಗಲು ಮೊರೆಯ ಇಟ್ಟರು _ ಇವರ ಅಡಿಗೆ ಭರದಿ ಕರುಣದಿ ಹರಿಯ ಸ್ತುತಿಸಿ ಕರದಿ ಮುಟ್ಟಲು _ ಏರಿ ನಿಂತಿತು 11 ಯರಗೋಳದ _ ಗುಹೆಯ ಒಳಗೆ ಮರುತದೇವನ _ ಕರುಣದಿಂದಲಿ ಪರಿಪರಿಯಲಿ _ ಬರೆದು ಟೀಕೆಯ ಕರೆದು ಸುರಿದರು _ ತತ್ತ್ವಕ್ಷೀರವ 12 ಇವರ ನಾಮವು _ ವಿಜಯ ಸೂಚಕ ಇವರ ಕೀರ್ತನೆ _ ಭವಕೆ ಔಷಧ ಇವರ ಕರುಣದಿ _ ಅನಿಲನೊಲಿವನು ಇವರ ಶಿಷ್ಯರೇ _ ಅವನಿಶ್ರೇಷ್ಠರು 13 ಸರ್ವಕ್ಷೇತ್ರದ _ ಯಾತ್ರೆಯಾ ಫಲ ಸರ್ವದಾನವ _ ಮಾಡಿದ ಫಲ ಇವರ ಪಾದವ _ ನಂಬಿ ಭಜಿಸಲು ತವಕದಿಂದಲಿ _ ತಾನೇ ಬರುವುದು 14 ಜಯತೀರ್ಥರ _ ಹೃದಯವಾಸಿಯು ವಾಯುಹೃದಯಗ _ ಕೃಷ್ಣವಿಠ್ಠಲನು ದಯದಿ ನುಡಿಸಿದಾ _ ಪರಿಯು ಪೇಳಿದೆ ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15
--------------
ಕೃಷ್ಣವಿಠಲದಾಸರು
ನಂಬಿ ಭಜಿಸು ಹರಿಯಾ| ಅಂಬುಜನಾಭನ ಹಂಬಲದಿಂದಾ ಪ ಶ್ರವಣ ಕೀರ್ತನ ಮೊದಲಾಗಿಹ ನವವಿಧ| ಹವಣದ ಭಕುತಿಯ ಸವಿಸವಿಯಿಂದಾ 1 ಏನೂ ಇಲ್ಲದ ಮೂರು ದಿನದ ಸಂಸಾರಕ| ನಾ ನನ್ನದು ಯಂದೆನುತಲಿ ಶ್ರಮಿಸದೆ 2 ಶರೀರಿಂದ್ರಯಗಳು ಸ್ಥಿರವಿದ್ದ ಕೈಯಲಿ| ಜರೆ ಬಂದೆರಗುತ ಮರೆಸದೆ ಮುನ್ನಾ 3 ಕೇಳೀಕೋ ಗುರುವಿನಾ ತಿಳಿಯದಿದ್ದರೆ ಕೀಲರಿ| ಹೇಳುವ ಸ್ಪಹಿತವ ಜಾಳಿಸಿ ಸಂಶಯ4 ಹೊಂದಿದವರ ಕೈಯ್ಯಾ ಎಂದೆಂದು ಬಿಡನೆಂದು| ತಂದೆ ಮಹಿಪತಿ ಕಂದಗ ಸಾರಿದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿಗಿಟ್ಟ ಸಂಸಾರ ಇದು ನಂಬಿ ಹಂಬಲಿಸದಿರು ಪೂರಾ ಪ ಕಾಯವೆಂಬುದು ಸ್ಥಿರವಲ್ಲಾ ಅತಿ ಮಾಯಕೆ ಬಂದು ಸಿಕ್ಕಿದೆಲ್ಲಾ ಬಾಯಿ ರುಚಿಗಳು ಬಿಡು ಎಲ್ಲಾ ರುಚಿ ರುಚಿಸೆಲ್ಲಾ ತಂದೆ ತಾಯಿಗಳು ಇನ್ನು ಹೊಂದಿದ ಅದರಲ್ಲೆ ಬಗೆ ಮಾಯದೊಳು ಇರುವಾಗೆ ಆನಂದ ತೋರುವದು ನಿನ್ನೊಳಗೆ 1 ಧೊರೆತನ ದೌಲತ್ತು ಸ್ಥಿರವೆಂದು ಪರಿ ಪರಿಯಲಿ ವಿಹರಿಸು ಎಂದೂ ಪರಮಾತ್ಮನ ಭಜನಿಲ್ಲದೆಂದೂ ವ್ಯರ್ಥ ಪಾಪಕೆ ಒಳಗಾಗಿ ಕೆಡುವೆಂದೂ 2 ಬದುಕು ಬಾಳುವೆ ನಂಬಿಕೊಂಡು ಮುಂದೆ ತುದಿಗಾಣದೆ ಹೋಗ್ವದು ಕಂಡೂ ----------------------- ---------------------- 3 ಅಷ್ಟೂ ಶ್ರೀಹರಿ ಮಾಯವೆಂದೂ ಸ್ಪಷ್ಟದಿ ಮನದಲಿ ತಿಳಿಯಿಂದೂ ಶಿಷ್ಟ ಹೆನ್ನ ವಿಠ್ಠಲನೆಂದೂ ಉತ್ಕøಷ್ಟದಿ ಹೃದಯದಿ ಸ್ಮರಿಸಿಂದೂ 4
--------------
ಹೆನ್ನೆರಂಗದಾಸರು
ನಂಬಿದೆ ಕುಮಾರ ತವ ಪಾದಾಂಬುಜವ ಧೀರಾ ಪ ಶ್ರೀ ಶಂಭು ಸುಕುಮಾರ ಅ.ಪ ಯೋಗಿಜನವಂದ್ಯ ಸದ್ಗುಣ ಸಾಗರಾನಂದ ನಿರುಪಮ ರಾಗ ಲೋಭವ ತ್ಯಾಗಗೈದಿಹ ಶ್ರೀ ಗಿರಿಜೆಕಂದಾ 1 ಶಕ್ತಿ ಮೊದಲಾದ ಆಯುಧ ಹಸ್ತದೊಳು ಪಿಡಿದಾ ನಿರ್ಮಲ ಚಿತ್ತ ಶ್ರೀಧರ ಮಿತ್ರ ಪರಮ ಪವಿತ್ರ ಖಳ ಛೇದಾ 2 ವಾಸವಾರ್ಚಿತನೇ ಸರ್ವದಾ ದಾಸ ರಕ್ಷಕನೇ ರವಿಶತ ಭಾಸ ಚಂಪಕನಾಸ ಪಾವಂಜೇಶ ಷಟ್ಶಿರನೇ 3
--------------
ಬೆಳ್ಳೆ ದಾಸಪ್ಪಯ್ಯ
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ ವಿನುತ ಮನ | ದ್ಹಂಬಲವನು ಸಲಿಸೆಂದು ನಿರುತ ನೆರೆ ಪ ತಾವರೆದಳನಯನಾ ಭವಹರಣ ತವಕದಿ ಸುಜ್ಞಾನವಗರೆಯೋ 1 ತಂದೆ ನಾ ಜನಿಸುತ ಭೂಸುರ ಜನ್ಮದಿ ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್ ನೊಂದೆನೋ ಕರುಣಿಸು 2 ಹೇಸಿ ಸಂಸಾರದ ಪಾಶÀವ ಬಿಡಿಸುತ ಶ್ರೀಶಾಮಸುಂದರವಿಠಲನೆ ದೋಷವ ನೋಡದೆ | ಪೋಷಿಸು ಮರೆಯದಲೆ ವಾಸುಕಿಶಯನನೆ 3
--------------
ಶಾಮಸುಂದರ ವಿಠಲ