ಒಟ್ಟು 11370 ಕಡೆಗಳಲ್ಲಿ , 137 ದಾಸರು , 5713 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ ಎಂಥ ಸುಂದರ ಪಾದಎಂಥೆಂಥವರಿಗದರ ಅಂತ ತಿಳಿಯದಂಥಾ ಅ.ಪಸರ್ವದಾ ಸಿರಿದೇ'ಯು ತೊಡೆಯಮೇಲೆಇಟ್ಟು ಮೆತ್ತಗೆ ಒತ್ತುತಾ ದಿಟ್ಟಿಸಿ ನೋಡುತಾದ್ಟೃತಾಕೀತೆಂದು ಗಟ್ಟಿ ಹಣೆಯ ಹಚ್ಚಿಬಚ್ಚಿಟ್ಟುಕೊಂಡಂಥಾ 1ಹುಡಗರ ಕೂಡಿಕೊಂಡು ಗಡಿಗೆಯ ಒಡೆದುಕುಡಿದು ಕೆನೆಪಾಲ್ ಮೊಸರು 'ಡಿತುಂಬ ಬೆಣ್ಣೆಯ'ಡಕೊಂಡು ಓಡುತ 'ಡಿಯಬಂದರೆ ದೊಡ್ಡಗಿಡವೇರಿ ಅಡಗು' 2ಚಲುವ ಗಂಗೆಯ ಪಡೆದ ಪಾವನಪಾದಶಿಲೆಯು ಸತಿಯ ಮಾಡಿತು ಪ್ರಲಯಕಾಲದ ಆಲ-ದೆಲೆ ಮೇಲೆ ಮಲಗುತ ಬಲಪಾದಾಂಗುಟಚೀಪುವ ಭೂಪತಿ'ಠ್ಠಲ 3
--------------
ಭೂಪತಿ ವಿಠಲರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಪಾದ ತೋರೆಂದು ಪಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ 1ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮ'ಮೆ ತೋರಿದ ಗುರು2ಶ್ರೀ ಸ'ುೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ 3ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ 4ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿ'ಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ 5
--------------
ಭೂಪತಿ ವಿಠಲರು
ಪಾದ ನಂಬೋ ಸಿದ್ಧಾಂತ ಸಾರವ ಹೃದಯದಿ ತುಂಬೋಪ ಶತಕೋಟಿ ಜನ್ಮ ಸುಕೃತದಿ ಅತುಳ ವೈಷ್ಣವಜನ್ಮ ದೊರಕಿತು ನಿಜದಿ ಪಾದ ರಜದಿ ಮುಣುಗುತ ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ 1 ಈತನ ವಾಕ್ಯವೆ ವೇದವಾಕ್ಯಗಳೆಂದರಿಯೊ ಜಿಷ್ಣು ಸರ್ವೇಶ ಧಾತೃಗಳೊಂದೆಂಬ ದು ರ್ವಾದಿ ದುರ್ಗಜಕೆ ಕೇಸರಿಯಾಗಿರುವ 2 ವಟು ವೃಷ್ಟಿವಂಶ ಲಲಾಮ ತಟಿತಾಭ ಜಗನ್ನಾಥ ವಿಠಲಗೆ ಪ್ರೇಮಾ ಸ್ಫುಟರೂಪತ್ರಯನೆ ನಿಷ್ಕಾಮಾ ನಿ ಷ್ಕುಟಿಲ ಭಾರತಿರಮಣ ಹನುಮಂತ ಭೀಮ 3
--------------
ಜಗನ್ನಾಥದಾಸರು
ಪಾದ ನಾ ನಂಬಿದ ಭಕುತರ ಇಂಬಾಗಿ ಪೊರೆದೆನೆಂತೆಂಬ ವಾರುತಿ ಕೇಳಿ ಪ ದೂರವಾದರೆ ತಾನು ನಾರಿಯ ಮೊರೆ ಕೇಳಿ ಚೀರಿ ಕರೆದಳೆಂದು ಶೀರಿಗಳನೆ ಇತ್ತು ಬೀರಿದನರಿಯಾ ಬಿಂಕವ ಬಿಟ್ಟು ಸೇರಿಕೊ ಹರಿಯ ದಾರಿ ಕಾಣದೆ ವನ ಸೇರಿದ ಕುವರನ್ನ ಸಾರೆಗರೆದು ಸೌಖ್ಯ ಪೂರೈಸಿದನೆಂದು 1 ಕಾಡಾನೆ ವ್ರಜದೊಳು ಕೂಡಿದ್ದ ಗಜರಾಜ ಗಾಡಾಹ ತಾಪದಿಂದ ಬಾಡಿ ನೀರಡಿಸಲು ಗೂಢ ಸರೋವರ ನೋಡಿ ನೀರನೆ ಪೊಕ್ಕು ಆಡಾಲು ಮದದಿ ನಕ್ರನು ಬಂದು ಪೀಡಿಸೆ ಭರದಿ ಮೂಢ ನಾನೆಲೊ ಕೃಷ್ಣ ಮಾಡೊ ರಕ್ಷಣೆಯನ್ನು ಪರಿ ನೋಡಿ 2 ಕಾಸು ಬಾಳದ ಸ್ತ್ರೀಯಳಿಗೆ ಆತನೆ ವಶವಾಗಿ ಹೇಸಿಕಿಲ್ಲದೆ ಅಲ್ಲಿ ತಾ ಸೂನುಗಳ ಪಡಿಯೆ ಸಹ ವಾಸರ ಕಳಿಯೆ ಕಾಲನು ಘೋರ ಪಾಶದಿ ಶಳಿಯೆ ಆ ಸಮಯದಿ ಕೊನೆ ಕೂಸನ್ನೆ ಕೂಗಲುವಾಸುದೇವವಿಠಲ ತಾ ಸಲಹಿದನೆಂದು 3
--------------
ವ್ಯಾಸತತ್ವಜ್ಞದಾಸರು
ಪಾದ ನೋಡಿದೆ ಪ ಚೆನ್ನದೇವಿಯ ಪಾದಕೆರಗಿದೆ ಮನ್ನಿಸೆಂತೆಂದವಳ ಬೇಡಿದೆ ಅ.ಪ. ಚರಣ ಯುಗಳಲಿ ಮೆರೆವ ನೂಪುರಧರಿಸಿ ಪೀಠದೊಳಿಂದಿರೆಜರದ ಶೀರೆಯನುಟ್ಟು ನಡುವೊಳುಹಿರಿದು ಒಡ್ಯಾಣದೊಳು ನಿಂದಿರೆ 1 ಕುಂಡಲ ಮೂಗು ಮುಕುರವುಪರಮ ತೇಜದ ಸೊಬಗ ತಂದಿರೆ 2 ಹೊಳೆವ ಕಂಗಳು ಹಣೆಯ ಕುಂಕುಮಥಳಿಸೆ ಸರಸಿಜ ಮಂದಿರೆಬಿಳಿಯ ಕೊಡೆಯನು ಹಿಡಿವ ತೆರದಲಿಎಳೆಯ ನಾಗವು ಹಿಂದಿರೆ 3 ಬೆರಳೊಳುಂಗುರ ಕುರುಳು ಸುಂದರಹೆರಳು ಸಿಂಗರದಿಂದಿರೆತಿರುಳು ಗಂಧದ ಸರಳ ಮೂರ್ತಿಯತರಳೆ ಎನ್ನಾಯ ಮುಂದಿರೆ 4 ಧೀರ ಭಕುತರ ಪೊರೆವುದಕೆ ಕರವೀರ ಪುರದೊಳು ಬಂದಿರೆಧಾರುಣೀಯೊಳು ಮೆರೆವ ಗದುಗಿನವೀರನಾರಾಯಣನ ಚಂದಿರೆ5
--------------
ವೀರನಾರಾಯಣ
ಪಾದ ಪ ಪಾದ ಪಾದ ಪಾದ 1 ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ2 ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ3
--------------
ಕನಕದಾಸ
ಪಾದ ಪರಮಭಕ್ತಿಲಿ ಎನ್ನ ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ ತಾಳಿ ವಿಮಲಭಕ್ತಿ ತಾಳದಂಡಿಗೆ ಸ ಮ್ಮೇಳದೊಡನೆ ತ್ರಿಕಾಲವು ಬಿಡದೆ ನೀಲವರ್ಣನ ಭಜನೆ ಮೇಲಾಗಿ ಮಾಡುವ ರಾಲಯದಿ ನಲಿದಾಲಿಸಾನದಿಂದಪ 1 ನಿಲಯದಂಗಳದೊಳು ತುಲಸಿವನವ ರಚಿಸ ನಿತ್ಯ ಜಲಜನಾಭಂಗೆ ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ 2 ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ 3 ಮರೆವು ಮಾಯವ ನೀಗಿ ಅರಿವಿನಾಲಯದೊಳು ಸಿರಿಯರರಸನ ನಿಜ ಚರಿತಂಗಳರಸುತ ಪರಮಸಾಲಿಗ್ರಾಮದ್ವರಮಹಿಮೆಯನರಿತು ನಿರುತದಿಂ ಪೂಜಿಸಿ ಪರಮಪಾವನರೆನಿಪ 4 ಕಾಮಿತಂಗಳ ನೀಗಿ ಕೋಮಲ್ಹøದಯರಾಗಿ ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್ ನೇಮನಿತ್ಯದಿ ನಿಸ್ಸೀಮರಾಗಿ ಸತತ ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ 5
--------------
ರಾಮದಾಸರು
ಪಾದ ಬಿಡಲಾರೆ ಎನ್ನೊಡೆಯ ರಂಗ ಭಾರ ನಿನ್ನಗೆ ಕೂಡಿತು ಪ ನೀನೆ ಚಿಂತಾಮಣಿ ನೀನೆ ಪರುಷದ ಖಣಿ ನೀನೆ ಎನ್ನಗೆ ಧಣಿ ವೇಣುಗೋಪಾಲ 1 ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ 2 ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ 3
--------------
ರಾಮದಾಸರು
ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ. ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ 1 ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ 2 ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ 3
--------------
ಮೋಹನದಾಸರು
ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ. ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ 1 ಸೂತ್ರ ಮಾರುತಉತ್ತರ ಲಾಲಿಸೋ ಉತ್ಕøಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) 2 ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ 3 ಕಾಯ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ 4 ಜಾಗರ ಮೂರುತಿ 5
--------------
ಗುರುವಿಜಯವಿಠ್ಠಲರು
ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ 1 ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ 2 ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ3 ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ 4 ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ 5 ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ 6 ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ 7 ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು 8 ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ 9 ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ 10 ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ 11 ಪುರಂದರ ಸಾರ ಭಾಷೆ | ಪ್ರಾಕೃತ ವೆನಿಸೀ 12 ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ 13 ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ 14 ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ 15
--------------
ಗುರುಗೋವಿಂದವಿಠಲರು
ಪಾದ ಸಲಹವೆ ಬಿಡಲಾರೆ ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ ಪಾದ 1 ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ ಪಾದ 2 ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3 ಆರು ವೈರಿಗಳು ಮಿತಿಮೀರಿರುವರು ಕೇಳು ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4 ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು ನರಸಖ ನಿನ್ನಯ ಕರುಣವ ಬೀರು 5
--------------
ಸಿರಿವತ್ಸಾಂಕಿತರು
ಪಾದ ಕಂಡೆ ಕಂಡೆನು ಕೇಶವಾ ಪ ಪದ್ಮದಳಾಕೃತಿಯಲ್ಲಿರುತಿರುವಂಥ ನಿತ್ಯ ನಿಲಿದಾಡುವಂಥ ಪದ್ಮಾಕ್ಷಿ ಶ್ರೀದೇವಿ ಸೇವಿಸುತಿರುವಂಥ ಮೋದದಿ ಹೃದಯದಿ ನೆಲೆಸಿರುವಂಥ 1 ದುಷ್ಟರ ತಲೆಯನ್ನು ಪಿಡಿದೊತ್ತಿ ತರಿದಂಥ ಭ್ರಷ್ಟರ ಯೆದೆ ಮೇಲಿಟ್ಟುರುವಂಥ ನಿತ್ಯ ಪೂಜಿಸುತಿರುವಂಥ ಶಿಷ್ಟರ ಕಷ್ಟವ ಸಿಗಿದೊಗೆವಂಥ 2 ಅಂಧಕಾರವ ಬೇಗ ಹರಿದು ಪಾಲಿಸುವಂಥ ಸೂನು ಇಚ್ಛಿಸಿದಂಥ ಚಂದದಿ ಬಲಿಯ ಪಾತಾಳಕ್ಕೆ ತುಳಿದಂಥ ಅಂದದಿ ನರನ ಸಾರಥಿಗೊಪ್ಪುವಂಥ 3 ಸುರರು ಕಿಂನರರು ಕಿಂಪುರುಷರೇ ಮೊದಲಾದ ಸುರಗಣ ಸೇವಿಪ ಭಜಿಪ ಪಾದವನು ಸರಸದಿ ಭಕ್ತರ ಸಲಹೆ ರಕ್ಕಸರನ್ನು ತರಿದ ಶ್ರೀ ಚನ್ನಕೇಶವನ ಪಾದವನು 4
--------------
ಕರ್ಕಿ ಕೇಶವದಾಸ