ಒಟ್ಟು 10034 ಕಡೆಗಳಲ್ಲಿ , 132 ದಾಸರು , 5388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿರಮಣ ಕರುಣಾಭರಣ ಪಾಹಿಪುರಮಥನ ತ್ರಿಲೋಚನ ಪ ಪಾವನವೇಷ ಫಣಿಗಣಭೂಷ ಭೂತೇಶ ಮಹೀಶ 1 ಕಲುಷ ವಿದೂರ ಸೋಮಶೇಖರ ಶಂಕರ 2 ಕರಿಗಿರೀಶಪ್ರಿಯ ಕೈಲಾಸನಿಲಯಪರಮ ಕೃಪಾಮಯ ಸುಕಾಯ 3
--------------
ವರಾವಾಣಿರಾಮರಾಯದಾಸರು
ಪಾರ್ವತೀಪತಿಯೆ ಎನ್ನಪಾಲಿಸುವುದು ಪ ದೂರು ನೋಡದೇ ಗುರುವ ಸಾರುವುದು ಸತತಾ ಅ.ಪ ಭಜಕರ ಸರ್ವಕಾವನ ನಿಜದಾಸರೊಳ್ಕೂಡಿಸಿ ಭಜನೆಯ ಮಾಡಿಸೋಬೇಗ ಭುಜಗಭೂಷಣನೆನೀನು 1 ನಂದಿ ವಾಹನನೆ ಎನ್ನಾ ಮಂದಮತಿಗಳ ಹರಿಸಿ ಕಂದುಗೊರಳನೆ ನೀನು ಆನಂದದಿಂದಲಿ ಕಾಯೋ 2 ಇಂದು ಗರ್ವವ ಬಿಡಿಸಿ ಕಾರಣಕರ್ತಹರಿಯೆ ಶ್ರೀರಮಣನ ತೋರೋ 3 ಭೂತನಾಥನೆ ನೀನು ಮಾತನು ಲಾಲಿಸುವುದು ದಾತಾನೆ ಸಲಹೊ ಎನ್ನಾ ಪಾತಕವನು ಹರಿಸಿ 4 ಶುದ್ಧಭಕುತಿಯನೆ ಕೊಟ್ಟುಸದ್ವೈಷ್ಣವರ ಪ್ರೀಯನೆ ಮಧ್ವಾಂತರ್ಗನಾದ ಮುದ್ದುಮೋಹನವಿಠಲನ ತೋರು 5
--------------
ಮುದ್ದುಮೋಹನವಿಠಲದಾಸರು
ಪಾರ್ವತೀಶ ಎನ್ನಿರೋ ಮನಸಾರೆ ಪಾರ್ವತೀಶ ಎನ್ನಿರೊ ಪ. ಪಾರ್ವತೀಶನ ಭಜಿಸಿ ನಿಮ್ಮನು ದ್ಧಾರ ಮಾಡುತ ಹರಿಯ ಮಹಿಮೆಯ ಸಾರಿ ಭಜಿಸಲು ಮನವನೀಯುವ ಕಾರ್ಯ ದುರಂಧರ ಈಶನನ್ನು ಅ.ಪ. ತರುಣಿ ಅಸ್ತಂಗತನಾಗುತಿರೆ ಹರುಷದೊಳೊಮ್ಮೆ ಶಂಭೊ ಎಂದು ವರ ಉಚ್ಚಾರವ ಮಾಡಲಾಕ್ಷಣ ತರಿದು ನಿಮ್ಮಯ ಸಕಲ ಪಾಪವ ಪೊರೆವ ಕರುಣಿ ಈಶನೆನ್ನುತ ಸ್ಮರಿಸಿ ಸುಖದೊಳು ಬಾಳಿ ಜಗದೊಳು 1 ಪಾದ ನೆನವ ಶಂಭೋ ಎಂ ದೀ ಸುನುಡಿಯ ತಿಳಿದು ಭಾಸುರಾಂಗನ ಮೊಮ್ಮಗನ ಸ್ತುತಿ ಲೇಸು ಎಂದು ಧ್ಯಾನವ ಮಾಡಲು ಸೂಸಿ ಕರುಣವ ಬೀರಿ ನಿಮಗೆ ಲೇಸು ಮಾಡುತ ಹರಿಯ ತೋರುತ 2 ಪಾಶಾಂಕುಶಧರನೆನಲು ನಿಮ್ಮಯ ಪಾಪ ರಾಶಿ ಖಂಡಿಸಿ ಪೊರೆದು ಶ್ರೀ ಶ್ರೀನಿವಾಸ ಪದವನು ಈಶ ಧ್ಯಾನಿಪ ಮನವನೀವನು ಸೂಸಿ ಭಕ್ತಿಯೊಳ್ ಶ್ರೀಶ ಭಕ್ತರು ವಿಶ್ವಾಸದಿಂದಲಿ ಈಶ ಎನ್ನಿರೋ ಈ ಸಂಸಾರ ಈಸಲೋಸುಗ 3
--------------
ಸರಸ್ವತಿ ಬಾಯಿ
ಪಾಲಯ ಕೃಪ ಆಲಯ ಬಾಲಗೋ ಪಾಲ ಬೇಗ ಪಾಲಿಸು ಪಿಡಿದೆನ್ನ ಪ ನಿತ್ಯನಿರ್ಮಲ ಸತ್ಯಚರಿತ ದೇವ ಸತ್ಯಭಾಮೆಯ ಪ್ರಿಯನಾಥ ಸ್ವಾಮಿ ನಿತ್ಯನಿಗಮ ವೇದವಿನುತ ಜಗ ಕರ್ತು ಕಾರುಣ್ಯರಸಭರಿತ ಆಹ ಭಕ್ತಾಂತರ್ಗತ ಕಾಲಮೃತ್ಯುಸಂಹರ ಸ ಚ್ಚಿತ್ತಾನಂದ ಹರಿ ಸತ್ಯ ಸರ್ವೋತ್ತಮ 1 ದಿನಮಣಿಕೋಟಿಪ್ರಭಾಕರನುತ ವನಜಸಂಭವ ಸುರನಿಕರ ದಿವ್ಯಗುಣ ಘನನಿಧಿಗಂಭೀರ ಜೀಯ ಅನುಪಮ ಭೂಗಿರಿವರ ಆಹ ಮನಸಿಜಪಿತ ಮನುಮುನಿಮನಮಂದಿರ ತನುತ್ರಯದಲಿ ನಿನ್ನ ನೆನಹನು ಪಾಲಿಸು 2 ಶ್ಯಾಮಸುಂದರ ಕೋಮಲಾಂಗ ಭಕ್ತ ಕಾಮಿತಫಲಪ್ರದಪುಂಗ ದುಷ್ಟ ಸೋಮಕಸುರಮದಭಂಗ ಪುಣ್ಯ ನಾಮಕ ಸುಜನತರಂಗ ಆಹ ತಾಮಸ ಪರಿಹರ ಭೂಮಿಜನಕ ಜಯ ಕ್ಷೇಮ ಕರುಣಿಸು ಮಮಸ್ವಾಮಿ ಶ್ರೀರಾಮಯ್ಯ3
--------------
ರಾಮದಾಸರು
ಪಾಲಯ ಗಂಗಾಧರಪ್ರಿಯ ರಮಣಿ ಬಾಲಾಂಬಿಕೆ ಫಣಿವೇಣಿ ಕಲ್ಯಾಣಿ ಪ ಶ್ರೀಲಲಿತೆ ವರದಾಯಕ ಮಹಿತೆ ಬಾಲಗೋಪಾಲ ಸೋದರಿ ಶುಭಚರಿತೆ 1 ದೇವಿ ಭವಾನಿ ಶಿವೆ ಕಾತ್ಯಾಯಿನಿ ಪಾವನಿ ಭಾಮಿನಿ ತ್ರಿಜಗನ್ಮೋಹಿನಿ 2 ಮಂಗಳದಾಯಕಿ ಶಂಕರನಾಯಕಿ ಮಾಂಗಿರಿರಂಗ ಕೃಪಾಂಬರದಾಯಕಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ ವಿನುತ ಸಂಜೀವ ದೇವ ಲೀಲಾ ಖೇಲನ ಸ್ತಂಭ ವಿದಾರಣ 1 ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ 2 ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ ಸಾರ ಪೊರ ಹರೆ 3 ಕಾಲ ಲೋಲ ಭಂಜನ ರಂಜನ 4 ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ ನೀಲ ನಿಭಾಕೃತಿ ಧೇನುನಗರ ಪತೇ 5
--------------
ಬೇಟೆರಾಯ ದೀಕ್ಷಿತರು
ಪಾಲಯಮಾಂ ಪರಮೇಶಚಿತಕಾಲಿ ಸಂತತಮಂಬಿಕೇಶಭೂರಿಲೀಲ ಶಂಕರವಿಯತ್ಕೇಶಕರುಣಾಲಯಹೃತಪಶುಪಾಶಧೃತಶೂಲ ವಿಶಾಲ ಕಪಾಲ ಕರಾಲಕಂ-ಕಾಲಿಕಾಕೂಲ (?) ವಿಲೋಲಾಸ್ಥಿಮಾಲಾ ಪ ವಾರಣಾಸುರ ಚರ್ಮಚೇಲಸುರವಾರಸೇವಿತ ಗಾನಲೋಲಭಕ್ತಾಧಾರ ಸಕಲ ಜಗನ್ಮೂಲನಿರ್ವಿಕಾರ ಮೃಕಂಡು ಕಸಾಲಹಾರ ಹೀರ ಮಂದಾರ ಪಟೀರ ನೀಹಾರಗೋಕ್ಷೀರ ಕರ್ಪೂರ ಸುಧಾರಸಗೌರ1 ವ್ಯೋಮತರಂಗಿಣೀಜೂಟಜಿತಕಾಮಪಾಲಿತ ಸರ್ವಖೇಟವಿತತಾಮಲಾಂಬರ ಪುಷ್ಪವಾಟರಘುರಾಮಪೂಜಿತ ಪಾದಪೀಠಪೂರ್ಣಕಾಮಾತಿಧಾಮಾಭಿರಾಮ ನಿಸ್ಸೀಮಸುತ್ರಾಮ ಮುಖ್ಯಾಮರಸ್ತೋಮಲಲಾಮ 2 ಗೋಪತಿರಾಜಿತುರಂಗಘೋರಪಾಪಾಂಧಕಾರಪತಂಗದಿವ್ಯತಾಪಸಹೃದಯಾಬ್ಜಭೃಂಗವಿಶ್ವವ್ಯಾಪಕನಿಗಮಾಂತರಂಗಯಾಮಿನಿಪಕಲಾಪಾದ್ರಿಚಾಪರಮಾಪತಿರೂಪನಿರ್ಲೇಪ ಕೆಳದಿ ರಾಮೇಶ ಚಿದ್ರೂಪ 3
--------------
ಕೆಳದಿ ವೆಂಕಣ್ಣ ಕವಿ
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ 1 ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ 2 ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ ಋಷಿಯಾಗವ ಕಾಯ್ದ ದೇವಾ 3 ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ 4
--------------
ಶಾಂತಿಬಾಯಿ
ಪಾಲಯಾನಂತ ಶಯನಾ| ಶ್ರೀ ಲೋಲಂಬುಜ ನಯನಾ ಪ ಸರಸಿಜಾಸನ ಜನಕಾ ವರ ಯದುಕುಲ ತಿಲಕಾ| ಸುರಮುನಿಜನ ಪ್ರೀಯ ಪಾಂಡವ ರಕ್ಷಕ| ಶರಣಾಗತ ವತ್ಸಲಾ ವಿಶ್ವವ್ಯಾಪಕಾ 1 ಭವ ಪಾಶಾ| ಮುರಹರ ಸರ್ವೇಶಾ| ಕರುಣಾ ಸಾಗರ| ಮುಕುಂದ ಹೃಷಿಕೇಶಾ| ಸರಸಿರುಹ ಸಖ| ಕೋಟಿ ಪ್ರಕಾಶ2 ನವನೀತ ಚೋರಾ| ಗಿರಿವೈರಿ ಸೋದರಾ| ದುರಿತ ನಿವಾರಣ| ಪೀತಾಂಬರ ಧರಾ| ಗುರುವರ ಮಹಿಪತಿ| ಸುತ ಮನೋಹರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಯಾಂಶು ಭೂಮಿಸುತೇ ಪುಷ್ಪಮಾಲಾ ಶೋಭಿತೇ ಪನೀಲ ಮೇಘಶ್ಯಾಮ ಮಹಿತೇ ಶ್ರೀಪ್ರಬಂಧ ವಿಲಸಿತೇ ಅ.ಪವಿಷ್ಣುಚಿತ್ತ ಪರಿಪೋಷಿತೇ ಕೃಷ್ಣ ಸುಧಾಮೃತ [ವಿಸ್ತ]ರತೇಕೃಷ್ಣಭಕ್ತ ಸ್ತುತಿಭಾಜಿತೇ ವಿಷ್ಣುಲೋಕದಾತೆ ಮಾತೇ 1ಮಂಗಳಾಂಗಿ ಸುಗುಣಭರಿತೇಇಂಗಿತಾರ್ಥದಾತೆ ಪ್ರೀತೆರಂಗನಾಯಕೀ ಸಮೇತ ಮಾಂಗಿರೀಶ ದಯಿತೇ ಮಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿತ ಸುರನರ ಜಾಲಸುಚರಿತ ಪ ಫಣಿ ಮಾಲಶ್ರೀಲೋಲ 1 ಜಾಲವಿಮೋಹಿತ ಬಾಲಾನು ಕೂಲ 2 ಧಾರಾಧರಾಭ ಶರೀರ ತಿರಸ್ಕøತದೂರ ವಿಹಗಸಂ ಚಾರವುದಾರ3 ನಿಗಮ ವಿಚಾರ ವಿಹಾರ 4 ಸುಖಕರಣ ಶ್ರೀರಮಣ 5 ಮನೋಹರಭೂಷ ಸುವೇಷ 6 ದ್ವಿರದವರದ ಶ್ರೀವರದ ವಿಠಲ 7
--------------
ಸರಗೂರು ವೆಂಕಟವರದಾರ್ಯರು
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ ಪ ಪದ್ಯ ನಿತ್ಯ ನಿರ್ಧೂತಮಾಯಾ ಕವಿಜನ ವರಗೇಯಾ, ಕಾಮಿತಾರ್ಥಾಭಿಧೀಯಾ ದಿವಿಭುವಿ ನಿಜಗೇಯಾ, ನೀತ ಸದ್ಭಕ್ತ ಪ್ರೀಯಾ ತ್ರಿವಿಧಜನ್ವ ಸುಕಾಯಾ ನಿಲಯ ವಾಙ್ಮನೋ ಪ್ರೀಯಾ ನಿಗಮ ವಂದಿತ ಮುಖ್ಯಗುಣಧಾಮಾ ಸ್ವಾಶ್ರಿತಪ್ರೇಮಾತೋಷಿತ ಶ್ರೀರಾಮಾ ಜಗಕೆ ಜೀವನÀನಾದ ಹನುಮಾ ಕಾಮದ ಭೀಮಾ ಮೋಕ್ಷದ ಮಧ್ವನಾಮಾ ಮುಗಿವೆ ಕರದ್ವಯ ನಿಮಗಯ್ಯಾ ನಮೋ ನತಜೀಯಾ ಸಂತತ ಪಿಡಿ ಕೈಯಾ 1 ಪದ್ಯ ಜಲರುಹಭವಪೋತಾ ಭೂತನಾಥೈಕತಾತಾ ಸುಲಲಿತಜನದಾತಾ ಶುದ್ಧಸತ್ತಾ ್ವಧಿನಾಥಾ ಕಲಿಮಲ ಪ್ರವೀಫಾತಾ ವಿಶ್ವಕೋಶವ್ಯತೀತಾ ವಿಲುಲಿತ ದಿತಿಜಾತಾ ಧೂತ ಸರ್ವತ್ರಾಭೀತಾ ಪದ ಏಕವಿಂಶತಿ ಸಹಸ್ರ ಷಟ್‍ಶತಾ ಜಪಮಾಡುತಾ ತ್ರಿವಿಧರೊಳಿರುತ ಎಕೋ ನಾರಾಯಣನುತ್ತಮಾ ಸರ್ವ ಸುರೋತ್ತಮ ಜೀವಗಣವೆಂಬೋದು ಅಥವಾ ಎಕೋ ಭಾವಭಕ್ತಿವಿಜ್ಞಾನಾ ಭವದೊಳು ಜ್ಞಾನಾ ಕಲ್ಪಿಸಿ ಅಜ್ಞಾನಾ ಏಕವಾಗಿತ್ತು ಸತ್ವರಾ ಭವದಿಂದ ಮುಕ್ತರಾ ಮಾಡುವಿ ಸತ್ವರಾ 2 ಪದ್ಯ ಶ್ರುತಿತತಿಸ್ಮøತಿವೇದ್ಯಾ ಸೂತ್ರನಾಮಾಮರಾದ್ಯಾ ವಿತತವಿಮಲಗಾತ್ರಾ, ವೀಶಶೇಷತ್ರಿನೇತ್ರಾ ಶತಮಖ ಮುಖಧ್ಯಾತಾ, ಧೀತವೇದಾಂತಜಾತಾ ಪದ ವಿಶ್ವೇಶ ವಿಶ್ವಾಂತರಾತುಮಾ ಚಿÉಚ್ಛುಕಾತುಮಾ ಸರ್ವಜೀವರುತ್ತಮಾ ವಿಶ್ವಾಸದಿಂದಲಿ ತವಪಾದಾ ಮೋದ ದಾಯಕ ಮುಕ್ತಿಫಲದಾ ವಿಶ್ವನಾಟಕ ವಿಷ್ಣುಪದ ಭಕ್ತಾ ಸಜ್ಜನಸಕ್ತ ಪಾಲಿಸು ನಿನ ಭಕ್ತಾ ವಿಶ್ವೇಶÀ ಗುರುಜಗನ್ನಾಥ ಮೋದ 3
--------------
ಗುರುಜಗನ್ನಾಥದಾಸರು
ಪಾಲಿಸಯ್ಯ ಪವನ ಕುವರನೇ | ಪಾವನ್ನ ಮೂರ್ತಿಶೀಲರೂಪಿ ಶೈಲ ಸದನನೇ ಪ ಬಾಲ ಗೋಪಾಲ ಗುಣವ | ತೈಲಧಾರೆಯಂತೆ ಮನದಿಕಾಲಕಾಲ ಸ್ಮರಿಪ ಸುಖ | ಕೈಲಾಸವಾಸ ಕೊಟ್ಟು ಕಾಯೊಅ.ಪ. ಪಂಪಾಪುರ ನಿವಾಸ ಈಶನೇ ಜೈಗೀಷ ಔರ್ವಪೊಂಪೆ ಎಂಬ ಗಿರಿಜೆ ರಮಣನೇ ||ಲಂಪಟಾವ ಬಿಡಿಸಿ ಜ್ಞಾನ | ಸಂಪದಾವನಿತ್ತು ಸಲಹೋನೋಂಪಿ ಗೈವೆ ನಿನ್ನ ಪದದಿ | ಇಂಪನೀಯೊ ಹರಿಯ ಪದದಿ 1 ಕೃಪಣ ಕಲುಷ ಭವ ಸಮುದ್ರದಿಂದಮತ್ತೆ ಪುಟ್ಟಿ ಭಯವು ಕಾಣೆ | ಚಿತ್ತದಲ್ಲಿ ಹರಿಯು ಇರಲು 2 ತೈಜಸ ತಾಮಸಾ | ತ್ರಯವು ಅಹಂಸಾಕಾರಿ ಶುಕನೆ ದುರ್ವಾಸಾ |ಲೌಕಿಕಗಳೆಲ್ಲವು ವೈ | ದೀಕ ವೆನಿಸೊ ತತ್ಪುರೂಷಕಾಕು ಸಂಗ ಕೆಡಿಸೊ ಹರ ವಿ | ಶೋಕ ಹರಿಯ ತೋರಿ ಬೇಗ3 ನಿಕರ ವಾಯು ನಂದನಾ ||ವಾಸ ವಾದ್ಯಮರನುತ ಸ | ದಾಶಿವನೆ ಬ್ರಹ್ಮ ತನಯಮೀಸಲೆನಿಸೊ ಮನವ ಹರಿಯ | ಆಶೆಯಲ್ಲಿ ನಿರುತ ಎನಗೆ 4 ಮಂಗಳಾಂಗ ಗಂಗೆ ಧಾರಕಾ | ಊಧ್ವ5ಟನೆಅಂಗಜಹ ಮೃಕಂಡ ಪಾಲಕಾ ||ರಂಗ ಗುರು ಗೋವಿಂದ ವಿಠಲ | ಸಂಗಿ ಶಿವ£5Éೀಡ್ವೆ ಭಕ್ತಿಸಂಗವಿತ್ತು 5ಗೆ ವಿಷಯ | ಸಂಗ ಬಿಡಿಸಿ ಕಾಯೊ ರುದ್ರ 5
--------------
ಗುರುಗೋವಿಂದವಿಠಲರು
ಪಾಲಿಸಯ್ಯ ವರವ ಹರಿಹರಿ ಪಾಲಿಸಯ್ಯ ವರವ ಪ ಪಾಲಿಸಯ್ಯ ವರ ಬಾಲಗೆ ಬೇಗನೆ ಕಾಲಕಾಲದಿ ನಿನ್ನ ಲೀಲಾನಂದವ ಅ.ಪ ಸತತದಿ ತವಭಜನೆ ಅಗಲಿಸ ದತಿ ಗುಪ್ತ ತತ್ವವನು ಯತಿತತಿ ಪೊಗಳುವ ಸ್ಮøತಿಶಾಸ್ತ್ರರ್ಥವನಿತ್ತು ಸುತಗೆ ಮಹಗತಿಯ ಪಥಕೆ ಹಚ್ಚು 1 ಮತಿ ಮಾನ್ಯರು ಸದಾ ಪೊಗಳುವ- ಪಾದ ಸತತ ನುತಿಪ ಅತಿಹಿತ ಮತಿಯಿತ್ತು ಪತಿತ ಪಾವನ ಮಾಡು ರತಿಪತಿಪಿತನೆ 2 ಜಡ ಬಡತನ ಕಡಿದು ಗಡನೆ ನ್ನೊಡಲಾಶೆಯ ತೊಡೆದು ನುಡಿನುಡಿಗಡಿಗಡಿಗೆಡಬಡದಲೆ ನಿ ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ 3
--------------
ರಾಮದಾಸರು