ಎಂದು ದೂರಮಾಡುವಿ ಎನ್ನ ಬಂಧನವನು
ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ
ಸತಿಪತಿಯ ರತಿಯ ಕಲಹದಿ
ಪತನಾದಿಂದ್ರಿಯಿಂದೆ ನಾನು
ಪೃಥಿವಿಮೇಲೆ ಬಿದ್ದು ಘನ
ವ್ಯಥೆಯಬಡುವ ತಾಪತ್ರಯವ 1
ಮಂದಭಾಗ್ಯನಾಗಿ ಆಗಿ ನಾನಾ
ಸಂದಿನೊಳಗೆ ಬಂದು ಬಂದು
ಮಂದಿಸೇವೆಗೈದು ನರಕ
ಬಂಧರುರುಳವಂಥ ಕೆಡುಕು 2
ಆಸೆದೆಳಸಿ ಪರರಾಸ್ತಿ
ಮೋಸತನದಿ ಕದಿಸಿ ಯಮನ
ಪಾಶದೊಳಗೆ ನೂಕುವಂಥ
ಹೇಸಿ ಎನ್ನ ನಾಶಬುದ್ಧಿ 3
ಅವನಿಯೊಳು ಜನಿಸಿಬಿಟ್ಟ
ಬವಣೆ ನೆನೆಸಿ ನೆನೆಸಿ ಎನಗೆ
ಸವೆಯದಯ್ಯೋ ದು:ಖ ಈ ದು
ರ್ಭವ ಪಾಪ ಸಂಕಟ 4
ದಾಸಜನರ ಪ್ರಾಣಪ್ರಿಯ
ಶ್ರೀಶ ಶ್ರೀರಾಮ ನಿಮ್ಮ ಚರಣ
ಧ್ಯಾಸ ಮರೆಗೆ ಬಳಲಿಸುವ
ಹೇಸಿಭವದ ವಾಸನವ 5