ಒಟ್ಟು 949 ಕಡೆಗಳಲ್ಲಿ , 80 ದಾಸರು , 631 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ಕøತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ 2 ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
--------------
ಚಿದಾನಂದ ಅವಧೂತರು
ದಾರ ಕಂದನಮ್ಮ ಕೇರಿಗೆ ಬಂದು ಗಾರುಮಾಡುವ ನೋಡಲಾರೆ ಗೋಪ್ಯಮ್ಮ ಈರೇಳು ಲೋಕದೊಡೆಯನೊ ದಾರಮ್ಮ ಪ ಪಿಡಿದಿದ್ದ ಕೊಳಲೂದುವ ಬಾಯಲಿ ಬೆಣ್ಣೆ ಕಡಗೋಲ ಪಿಡಿದಿದ್ದ ಬೆಡಗು ನೋಡಮ್ಮ ಬಿಡಿಮುತ್ತಿನ ಉಡಿದಾರವು ಉಡಿಗಂಟೆ ಮುಡಿದ ಮಲ್ಲಿಗೆ ಕುಸುಮಗಳು ನೋಡಮ್ಮ ಕುಡಿಹುಬ್ಬು ಕಡೆಗಣ್ಣನೋಟದ ಚೆಲುವ ತಾ ಹುಡುಗರಂತಾಡುವ ತುಡುಗ ತಾನಮ್ಮ 1 ಕಮಲ ನಕ್ಷತ್ರದ ಪತಿಯಂತೆ ಇಪ್ಪೊ ವಜ್ರದ ಪದಕಗಳ ನೋಡಮ್ಮ ಅರ್ಕನಂತಿರಲತಿ ಕೋಮಲಪಾದಕೆ ಶುಕ್ಲಗೆ ಮಿಗಿಲಾದ ಗುರು ಕೇಳಮ್ಮ ಕತ್ತಲೊಳಗೆ ಕಳ್ಳತನದಿಂದೋಡಾಡುತ ಕಟ್ಟಿದ ಪಂಜಿನಂತ್ಹೊಳೆವೊ ಕೇಳಮ್ಮ 2 ಕಟ್ಟಿದ ನೆಲವಿನೊಳ್ ಮಕ್ಕಳ ಮಲಗಿಸಿ ಎಷ್ಟು ಘಾತಕÀ ತಾ ಕೈಬಿಟ್ಟ ನೋಡಮ್ಮ ತೊಟ್ಟಿಲೊಳಗೆ ಕೆನೆಮೊಸರಿನ ಚಟ್ಟಿಗೆ ಇಟ್ಟು ತೂಗುತ ಮೆಲ್ಲುವನು ಕೇಳಮ್ಮ ಕಟ್ಟಿದ್ದಾಕಳ ಕಣ್ಣಿ ಬಿಚ್ಚಿ ಮೊಲೆಗೆ ಬಾಯ್ಹಚ್ಚಿ ಕ್ಷೀರವ ಸುರಿದುಂಬುವನಮ್ಮ 3 ತೋಳ ಬಾಪುರಿ ವಂಕಿ ತೋಡ್ಯ ಬಿಂದಲಿ ಚಕ್ರ- ಪಾಣಿಯಲ್ಲೊ ್ಹಳೆವೊ ಮುದ್ರಿಕೆಯ ನೋಡಮ್ಮ ಆಣಿ ಮುತ್ತಿನ ಸರ ಅರಳೆಲೆ ಪದಕವು ಕಾಲ ಕಿಂಕಿಣಿ ನಾದಗಳ ಕೇಳಮ್ಮ ತೋರ ಮುತ್ತುಗಳೋಣಿಯಲುದುರುತ ಒ- ಯ್ಯಾರದೊಲಪಿನ ಚೆದುರ್ಯಾರು ಪೇಳಮ್ಮ4 ಮನ್ಮಥನಿಗೆ ಮಿಗಿಲಾದ ಸ್ವರೂಪಲಾವಣ್ಯನೆ ನೀಲದ ವರ್ಣ ಕೇಳಮ್ಮ ಹುಣ್ಣಿಮೆ ಚಂದ್ರಮನ್ನ ಸೋಲಿಸೋಮುಖ ಇನ್ನು ಇವನÀ ಸೌಂದರ್ಯ ನೋಡಮ್ಮ ಹೆಣ್ಣು ಮಕ್ಕಳ ಸೆರಗನ್ನು ಕೈಯ್ಯಲಿ ಸುತ್ತಿ ಬೆನ್ನು ಬೆನ್ಹತ್ತಿ ತಾ ತಿರುಗುವನಮ್ಮ 5 ಚೀನಿ ಅಂಗಿಯ ಮ್ಯಾಲೆ ಚಿತ್ರದ ನಡುಕಟ್ಟಿ ಜಾರ ಜರದ ಛಾದರವ ನೋಡಮ್ಮ ಸೋಗೆ ನವಿಲು ಗಿಳಿ ಕೋಗಿಲೆ ಸ್ವರದಂತೆ ವೇಣು ಕೊಳಲ ಗಾಯನವ ಕೇಳಮ್ಮ ಮೇಘಮಂಡಲ ತಲೆತಾಕುವ ಹರಿಯದೆ ತಾ ಜಿಗಿದಾಡೋನಂಗಳದಿ ಕೇಳಮ್ಮ 6 ಎಷ್ಟು ಹೇಳಿದರೀ ಮಾತು ಮನಕೆ ನಿಜ ಹುಟ್ಟವಲ್ಲದೇನೀಗ ಬಾರೆ ಗೋಪಮ್ಮ ಬಿಟ್ಟು ಕೆಲಸ ಭೀಮೇಶಕೃಷ್ಣಗೆ ಬುದ್ಧಿ ಎಷ್ಟು ಹೇಳುವಿ ಮುಂದ್ಹೇಳಲೇಕಮ್ಮ ಸಿಟ್ಟು ಮಾಡುವರೇನೆ ಸಿರಿಪತಿ ಆಟ ನಿನ್ನ ದೃಷ್ಟಿಂದ ನೋಡೆ ನಿಜಹುಟ್ಟುವುದಮ್ಮ7
--------------
ಹರಪನಹಳ್ಳಿಭೀಮವ್ವ
ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ಮುದ್ದು ವೈಯ್ಯಾರಿ ನಿನ್ನಯಮಾರಿ ತೋರೆಂದು ದಾರಿ ನೋಡುವನು ಪ. ಏಳು ಸಾವಿರ ಮನೆಯು ತೆರವೆಂದು ಹೇಳಿದನಿಮಗಾಗಿ ಜಾಳಿಗೆ ಮುತ್ತು ಜಡಿಸೆಂದ ಜಾಳಿಗೆ ಮುತ್ತು ರಂಗಯ್ಯ ಜಡಿಸೆಂದ ಪಾಂಡವರ ಆಳು ಮಂದಿಗಳ ತಂದು ಇಳಿಸೆಂದ 1 ಕುಂದಣ ಕುಂದಣ ರತ್ನ ರಚಿಸೆಂದ ರಂಗಯ್ಯಪಾಂಡವರ ಬಂಧುಗಳ ತಂದು ಇಳಿಸೆಂದ 2 ನೀಲಮೇಘಶ್ಯಾಮ ಮುತ್ತಿನ ಮಹಲು ರಚಿಸೆಂದಮ್ಯಾಲೆ ಮಾಣಿಕವ ರಚಿಸೆಂದ ಮ್ಯಾಲೆ ಮಾಣಿಕವ ರಚಿಸೆಂದ ರಂಗಯ್ಯ ಪಾಂಡವರ ಬಾಲಿಯರ ತಂದು ಇಳಿಸೆಂದ 3 ಸದನ ವಿಸ್ತರಿಸೆಂದಹದಿನದಿ ರತ್ನ ರಚಸೆಂದಹದಿನದಿ ರತ್ನ ರಚಸೆಂದ ರಂಗಯ್ಯಪಾಂಡವರ ಮುದದಿಂದ ತಂದು ಇಳಿಸೆಂದ 4 ಚದುರ ರಾಮೇಶನು ಮಡದಿಯರೆದುರಿಗೆಮುದದಿ ದ್ರೌಪತಿಯ ಕರೆಯೆಂದಮುದದಿ ದ್ರೌಪತಿಯ ರಂಗಯ್ಯ ಕರೆಯೆಂದ ವಜ್ರದ ಸದನದಿ ತಂದು ಇಳಿಸೆಂದ 5
--------------
ಗಲಗಲಿಅವ್ವನವರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ದುರಿತ ತಿಮಿರಕೆ ಸೂರ್ಯ ಶರಣ ಜನ ಭಾಗ್ಯೋದಯ ಪ ನರಹರಿಯ ದಾಸಾರ್ಯ ಮರುತಮತ ಪರಿಚರ್ಯ ಶಿರಬಾಗಿ ಮುಗಿವೆ ಕೈಯ್ಯ ಅ.ಪ. ಘೋರತರ ಸಂಸಾರ ಸಾರತರವೆಂದರಿದು ಪಾರಮಾರ್ಥಿಕವ ತೊರೆದು ಭೂರಿ ನರಕದಿ ಬೆಂದು ಗಾರಾಗಿ ಪೋಪರಂದು ನಾರದರೆ ನೀವ್ ಬಂದು ನಾರಾಯಣಾ ಎಂದು ಚೀರಿದಾ ಧ್ವನಿಗೆ ಅಂದು ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು ಸೇರಿ ಸುಖಿಸಿದರು ಎಂದು 1 ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು ಮೆರೆವ ಕನ್ನಡ ದೇಶದಿ ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ ಇರುವ ಭೂಸುರ ವಂಶದಿ ವರಗರ್ಭದಲಿ ಜನಿಸಿದಿ ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ ಸರ್ವಭಾಗ್ಯವ ಗಳಿಸಿದಿ 2 ಚಿನಿವಾರ ವ್ಯಾಪಾರದನುವರಿತು ನವಕೋಟಿ ಧನಕಧಿಪನೆಂದೆನಿಸುತ ಧನಕನಕ ವಸ್ತು ವಾಹನನಿಚಯ ಸಂಗ್ರಹದಿ ತನುಮನಂಗಳ ಶ್ರಮಿಸುತ ಕನಸಿಲಾದರು ದಾನಧರ್ಮಗಳ ನೆನೆಯದೆಲೆ ದಿನಮಾನಗಳ ಕಳೆಯುತ ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ ಘನ ಮಹಿಮ ಬಂದ ನಗುತ 3 ಅಂದು ತಾನೊಲಿದಿತ್ತ ಚೆಂದದಾ ವರಗಳನು ಇಂದು ಸಲಿಸುವೆನು ಎಂದು ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ ಕಂದನಿಗೆ ಮುಂಜಿಯೆಂದು ಮಂದ ಭಾಗ್ಯನ ತೆರದಿ ಪೊಂದಿ ಯಾಚಿಸಲು ನಿಂದು ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು ಸಿಂಧು 4 ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ ಪತ್ನಿಯನು ಯಾಚಿಸಿದನು ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು ಇತ್ತ ಬಂದಿಹೆನೆಂದನು ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ ನಿತ್ತು ಕಳುಹೆನು ಏನನೂ ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ ನತ್ತನ್ನು ಕೊಡು ಎಂದನು 5 ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ ಮೂಗುತಿಯ ತೆಗೆದಿತ್ತಳು ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ ಸಾಗಿ ಬಂದನು ಇತ್ತಲು ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು ಮೂಗುತಿಯ ಕ್ರಯಕೆ ಕೊಡಲು ಈಗ ಬಂದಿಹೆನೆಂದು ನಿಮಗದನು ತೋರಲು ಹೇಗೆ ಬಂದಿತು ಎನ್ನಲು 6 ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ ವನಜನಾಭನು ಪೇಳ್ದನು ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ ಅನುವರಿತು ಬಹೆನೆಂದನು ಸಂತೈಸಿ ಪೊರಮಡಿಸಿ ನಿನಗೆ ನಾಮವನಿಡುವೆನು ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ ವನಿತೆಯಾ ಬರಿ ಮೂಗನು 7 ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು ಮುತ್ತೈದೆ ಮನದಿ ನೊಂದು ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು ಇತ್ತ ತಾರೆನಲು ನಿಂದು ವಿಪ್ರ ಮತ್ತೇನು ಮಾಡುವರೊ ಕತ್ತಲೆಯು ಮುತ್ತಿ ತಿಂದು ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು ಕುತ್ತು ಪಾರಾಹುದೆಂದು 8 ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು ಕರದಿ ಬಟ್ಟಲನು ಹಿಡಿದು ಹರಣದಾಸೆಯ ತೊರೆದು ಸಿರಿವರನ ಪದನೆನೆದು ಕುಡಿಯುವನಿತರೊಳು ತಿಳಿದು ಕರುಣದಿಂ ಮೂಗುತಿಯ ಗರಳದಲು ಕೆಡಹಲಾ ಮಣಿ ಹರುಷದಳೆದು ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು ಭರದಿ ಅಂಗಡಿಗೆ ಬಂದು 9 ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ ಮೂಗುತಿಯು ಕಾಣದಿರಲು ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು ಬೇಗನೆ ಮನೆಗೆ ಬರಲು ಹೇಗೆಂದು ತಿಳಿಸದಿರಲು ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ ಬಾಗಿ ವಂದಿಸಿ ನುಡಿದಳು 10 ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು ಪೊದ್ದಿಯಾಚಿಸಲು ಜರಿದೆ ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ ವೃದ್ಧಿಗೋಸುಗವೆ ಬರಿದೆ ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ ಉದ್ಧಾರವಿಲ್ಲೆಂದು ತಿಳಿದೆ ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು ಹೆದ್ದಾರಿ ಹಿಡಿದು ನಡೆದೆ 11 ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ- ಶಿಷ್ಟವನು ದಾನಗೈದು ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು ವಿಠ್ಠಲನ ಪುರಕೆ ನಡೆದು ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ ಇಷ್ಟಾರ್ಥ ಸಿದ್ಧಿಗೈದು ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ ಶ್ರೇಷ್ಠರಿಂದುಪದೇಶ ಪಡೆದು 12 ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ ಗದ್ಯಪದ್ಯಗಳಿಂದಲಿ ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು ಮುದ್ದಾಗಿ ವರ್ಣಿಸುತಲಿ ಮದ್ದಳೆಯ ತಾಳ ವೀಣೆಗಳ ಗತಿಹಿಡಿದು ಶುದ್ಧರಾಗಗಳಿಂದಲಿ ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು ಪೊದ್ದಿ ಕುಣಿಯುವ ತೆರದಲಿ 13 ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ- ವಿರ ಗ್ರಂಥ ರಚಿಸಿ ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ ಸಾರ ಮಹಿಮೆಗಳ ತುತಿಸಿ ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ ಪಾರಣೆಯ ವಿಧಿಯ ತಿಳಿಸಿ ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು ಸಾರಿ ಡಂಗುರವ ಹೊಯಿಸಿ 14 ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ ಧರೆಯನೆಲ್ಲವ ತಿರುಗುತ ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ ಕೊರಳುಬ್ಬಿ ಶಿರ ಬಿಗಿಯುತ ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ ಹರಿ ಮಹಿಮೆ ಕೊಂಡಾಡುತ ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ ಹರುಷದಿಂದಲಿ ಉಣಿಸುತ 15 ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು ಶಕ್ತನಹ ದೇವ ಬಂದ ಓಗರ ಉಂಡ ಸುತನಾಗಿ ನೀರ ತಂದ ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ ಕ್ಷಿತಿಪತಿಗೆ ದೃಢ ತೋರಿದ ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು ಪಥದಲ್ಲಿ ತಲೆಗಾಯಿದ 16
--------------
ಲಕ್ಷ್ಮೀನಾರಯಣರಾಯರು
ದುರಿತ ಬ್ರಹ್ಮಾಸ್ತ್ರಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ ಉಟ್ಟಿಹ ಕಾಶಿಯ ಉಡಿಗೆತೊಟ್ಟಿಹ ಎದೆ ಕಟ್ಟುಕಟ್ಟಿದ ಖಡ್ಗ ಕಠಾರಿರಕ್ತದ ತಿಲಕವಿಟ್ಟುಮುಷ್ಠಿಯಲಿ ಮುದ್ಗರ ಶೂಲಧನು ಶರವಳವಟ್ಟುಬಿಟ್ಟ ಕಂಗಳ ಕಿಡಿಯುಛಟಛಟ ಛಟವಿಟ್ಟು 1 ಏರಿಸಿ ಪಟ್ಟೆಯ ಹಲಗೆಎಡಬಲ ನೋಡದೆಹರಿಯ ಘನ ಶತ್ರುವಿನನಾಲಗೆ ಹಿಡಿದೆಳೆಯೆವೀರ ಮಂಡಿಯ ಹೂಡಿಅವುಡನೇ ಕಡಿಕಡಿದೇಹಾರಿಸಿದೆ ತಲೆಗಳನುಹಾ ಎನುತಲಿ ಬಿಡದೆ 2 ಮುಕುಟ ಕಾಂತಿಯಮಿಹಿರಕೋಟೆಯ ಕಳೆಯು ಹಳಿಯೆಲಕಲಕನೆ ಬೆಳಗುತಿಹಕುಂಡಲ ಸರಪಳಿಯೆಚಕಚಕನೆ ಮೂಗುತಿಯಮುತ್ತು ಹೊಳೆಹೊಳೆ ಹೊಳೆಯೇಸಬಲೆ ಎನಿಪ ಚಿದಾನಂದಬಗಳಾಂಬ ತಿಳಿಯೆ3
--------------
ಚಿದಾನಂದ ಅವಧೂತರು
ದೂರ ತರುವಿರೇನೆ ಕೃಷ್ಣನ ಮೇಲೆ ಪ ದೂರ ತರುವಿರೇನೆ ಚೋರಾಗ್ರೇಸರನೆಂದು ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು ಕರದಿಂದಲೆತ್ತಿ ಮುತ್ತಿಟ್ಟೆಯಂತೆ ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ ಕೊರಳಿಟ್ಟು ಬರಿಗೈಯ ತೋರಿದೆಯಂತೆ 1 ಹಸಿದೆ ಬಾ ಕಂದ ಮೊಸರ ಕುಡಿಯೆಂದು ಹುಸಿನಗೆಯ ಬೀರಿ ಕೈಹಿಡಿದರವಳು ಉಸಿರಾಡದಂತೆ ಅಧರಕಧರವನ್ನಿಟ್ಟು ಹಸಿವಾರಿತಿನ್ನು ನೀ ಹೋಗೆಂದಳಂತೆ 2 ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3 ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು ಸಣ್ಣ ತೋಳನು ಹಿಡಿದು ಎಳೆದಾಡಲವಳು ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ಪ ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾಇಟ್ಟ ಕಿರುಗೆಜ್ಜೆ ಪೆಂಡ್ಯೆ ದಿಟ್ಟತನದಿಘಟ್ಟಿ ಸಾಸಿರ ಬಾಳುವ ಪಟ್ಟೆಯನೆ ಬಿಗಿದುಟ್ಟು ಮೇಗಿಲ್ಲದ ಬೆಲೆಯಾದ ಪಟ್ಟದುಡುದಾರವಿಟ್ಟು 1 ಸಿರಿಯಿರುವ ಉರದಲ್ಲಿ ಪರಿಮಳ ಗಂಧವ ಪೂಸಿಪರಿಪರಿ ಪದಕ ಮುತ್ತು ಸರ ವೈಜಯಂತಿಕೊರಳ ಕೌಸ್ತುಭದ ಕಾಂತಿ ನಿರುಪಮ ಶ್ರೀವತ್ಸಲಾಂಛನ ಸರಿಗೆ ತಾಳಿ ಪದಕವು ಸೇರಿದ ಮುತ್ತಿನ ಜಲ್ಲೆ 2 ಉಗುರ ಗೋರಂಟಿ ಛಾಯಾ ಚಿಗುರು ಪೋಲುವ ಬೆರಳುಬಗೆಬಗೆ ರತುನಂಗಳ ನಗಗಳನಿಟ್ಟುನಗವನೆತ್ತಿದ ಭುಜಕೆ ಬಿಗಿದ ಬಾಹುಪುರಿ ಕೆಂಪುನಿಗಿನಿಗಿಗುಟ್ಟುವ ಕಾಂತಿ ನಗುತಿದೆ ಬಾಲಭಾನುವ 3 ನಾಸಿಕ ಲಲಾಟಚೆಲುವ ಪುಬ್ಬು ಕಸ್ತೂರಿಯ ತಿಲಕ ಒಪ್ಪುವ ಮುಖದಿ 4 ಕೋಟಿ ಹೊನ್ನು ಬಾಳುವ ಕಿರೀಟವಿಟ್ಟು ಕಡೆಗಣ್ಣನೋಟದಿಂದ ತರುಣೇರ ಪೋಟಿ ಮಾಡುತಚಾಟು ಮಾತುಗಳಾಡುತ ಪೊಟ್ಟನಂತೆ ತಿರುಗಿದರೆನೀಟಲ್ಲವೋ ನಿನಗದು ಪಾಟಲಾಧರನೆ ಕೇಳು 5 ಬಿಂಕದಿಂದ ಎರಡು ಕರದಿ ಶಂಖ ಚಕ್ರವ ಪಿಡಿದುಅಂಕಿತ ವೇಣುನೂದುತ ಶಂಕೆ ಇಲ್ಲದೆ ಮಂಕು ಮಾಡುತ ಬಾಲೇರ ಪಂಕಜಾಕ್ಷ ಸುಳಿದರೆÉಮಂಕುಗಾರನೆಂದು ನಿನ್ನ ಅಂಕಿತ ಮಾಡುವರಲ್ಲೋ 6 ಮಂಗಳಮೂರುತಿ ಮುಂಚೆ ಶೃಂಗಾರಗಳನೆ ಮಾಡಿಪೊಂಗೊಳಲನೂದುತ ಶ್ರೀರಂಗ ಸುಳಿದರೆಹೆಂಗಳ ರಂಭೇರೊಂದಾಗಿ ಕಂಗಳಿಡಲು ಉನ್ನಂತರಂಗವಿಠಲಗಲದಿರೋ ಹಿಂಗದೆ ನರಸಿಂಗನೇ 7
--------------
ಶ್ರೀಪಾದರಾಜರು
ದೇವತಾ ಸ್ತುತಿ ರಾಧೆ ತಿಲಕದ ಒಲುಮೆ ಮೇಲು ರಾಧೇ ನಿನ್ನ ತಿಲಕದೊಲುಮೆ ಪ ತಿಲಕದೊಲುಮೆ ಹರಿ ಬಂಧ ಒಲುಮೆ ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ. ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1 ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2 ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3 ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4 ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5 ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6 ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
--------------
ಶ್ರೀದವಿಠಲರು
ದೇವತಾಸ್ತುತಿ ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರದೆಣಿಕ್ಯಾಕ ಧ್ರುವ ಯತಿ ಫಲ ಗಣ ಪ್ರಾಸವ್ಯಾಕೆ ಸ್ತುತಿಸ್ತವನ ಕೊಂಡಾಡಲಿಕ್ಕೆ ಹಿತದೋರದು ಮಿತಿ ಮಾಡಲಿಕ್ಕೆ ಅತಿ ಶೋಧಿಸಲಿಕ್ಕೆ 1 ಮುತ್ತಿಗೆ ಬುದ್ಯುಶದೆಂದು ಉತ್ತಮರಪೆಕ್ಷರೆಂದೆಂದು ನೆತ್ತಿಲಿಟ್ಟು ಕೊಂಬರು ಬಂದು ಅತಿ ಪ್ರೀತಿಲೆ ನಿಂದು 2 ಸಾರಸ ಸ್ವಾನಂದದ ಸರಳು ಮತಿ ಹೀನರು ಬಲ್ಲರೇನದರೊಳು ಮಾತಿನ ಮರಳು 3 ಬಾಯಲಿ ಧೂಳಿ ಪರಿ ಸ್ತುತಿಯಲಿ 4 ಮಹಿಪತಿ ಸ್ತುತಿನುಡಿದು ಅಪ್ಪವ್ವನುತಾ ಎನ್ನ ಕಡಿಯ ತಪ್ಪನೆ ತುಸು ಹಿಡಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ- ಹೂವ ಕೊಡೆ ನೀ ವರವ ಕೊಡೆ ಪ ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳು ಮುತ್ತೈದೆತನವ ಮುದದಿ ಬೇಡುವೆ ಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ 1 ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳು ಬಂಧುಗಳಿಗೆಲ್ಲ ಬಲುಕ್ಷೇಮ ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ ಇಂದಿರಾದೇವಿ ದಯಮಾಡೆ 2 ದಂಪತಿ ನಲಿಸುತ ಸಂಪತ್ತು ಸೌಭಾಗ್ಯ ಇಂಥ ಮಂದಿರಕೆ ಬಹುಮಾನ ಇಂಥ ಮಂದಿರಕೆ ಬಹುಮಾನಯಿರುವಂತೆ ಸಂತೋಷದಿ ವರವ ದಯಮಾಡೆ 3 ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನಹಿ- ರಣ್ಯದಾನಗಳ ಹಿತದಿಂದ ಹಿ- ರಣ್ಯದಾನಗಳ ಹಿತದಿಂದ ಮಾಡುವಂತೆ ಸಂ- ಪನ್ನ ನೀ ವರವ ದಯಮಾಡೆ 4 ಇಂದಿಗೆ ಮನೋಭೀಷ್ಟ ಎಂದೆಂದಿಗೆ ನಿನಪಾದ ಹೊಂದಿರಲೆಂದೂ ಮರೆಯದೆ ಹೊಂದಿರಲೆಂದೂ ಮರೆಯದೆ ಭೀಮೇಶಕೃಷ್ಣನ- ರ್ಧಾಂಗಿ ನೀ ವÀರವ ದಯಮಾಡೆ 5
--------------
ಹರಪನಹಳ್ಳಿಭೀಮವ್ವ
ದೈವ ಭಕ್ತಿ ಸಂಸಾರದೊಳಿಲ್ಲ ಪ ಜೀವಗಭಿಮಾನವು ಬಿಡದಲ್ಲ ಅ.ಪ ವನಜಲೋಚನನ ಅರ್ಚನೆಗೆ ಆಲಸ್ಯ 1 ದಾನಕ್ಕೆ ದಾರಿದ್ರ್ಯ ತನಗೋಸುಗ ಸಾಲ ಮಾನವ ಜನಕೆ 2 ಮಕ್ಕಳ ಮದುವೆಗೆ ರೊಕ್ಕಸಾವಿರ ಹೊನ್ನು ಪಕ್ಕಿವಾಹನಗೆ ದೊರೆಯದೊಂದು ಕಾಸು 3 ಮತ್ತೆ ತನ್ನ ಹೆಂಡತಿಗೆ ಹತ್ತುವರಹದ ಸೀರೆ ಮುತ್ತೈದೆಗೀವರೆ ಮೂರಾಣೆಯ ಕುಬಸ 4 ಮದುವೆ ಮುಂಜಿಗೆ ಸಾಲ ಮಾಡದಿದ್ದರೆ ಹ್ಯಾಂಗೆ ಬುಧರು ಯಾಚಿಸಿದರೆಯಿಲ್ಲ ಎಂಬುವುದೇ? 5 ಎಷ್ಟು ಬಂದರು ಸಂಸಾರಕ್ಕೆ ಸಾಲದು ಭ್ರಷ್ಟ ಯಾಚಕರಿಗೇತಕೆ ಕೊಡಬೇಕು 6 ಸತಿಸುತನು ನಾವು ಸಲಹಿದರೆ ಸಾಕು ಅತಿಶಯದಾನ ಧರ್ಮಂಗಳು ಬೇಡ 7 ದಾಕ್ಷಿಣ್ಯಗಾರರಿಗೆ ಭಕ್ಷ್ಯ ಭೋಜ್ಯಗಳ ಊಟ ಕುಕ್ಷಿಂಭರರು ಕೇಳೆ ಭಕ್ಷ್ಯವೂ ಇಲ್ಲ 8 ಶ್ರೀನಿಧಿ ಗುರುರಾಮ ವಿಠಲ ವಲಿವನೆ? 9
--------------
ಗುರುರಾಮವಿಠಲ
ದ್ರೌಪದಿ ಸುಳಾದಿ ಪುರಂದರ ಗುರು ನಾಗೇಶಾವೇಶ ಗುರು ಶ್ರೀಪಾದ ರಾಯ ಗುರು ಯೋಗಿ ಟೀಕಾರ್ಯ ಗುರು ಶ್ರೀಮದಾಚಾರ್ಯ ಗುರು ನಾಗಶÀಯನ ನೀನು ಸಕಲ ಜಗದ್ಗುರು ಈತ ಗುರು ಸಂತತಿಗೆ ವಂದೀಸಿ ತಾತ್ವಿಕರ ಜಾಗು ಮಾಡದೆ ನಮಿಪೆ ಜ್ಞಾನ ಪ್ರದಾತರೆಂದು ಆಗಮ ಪೌರಾಣ ಶೃತಿ ತತಿಗಳೊಳೆಲ್ಲ ಆಗುವಳಭಿಮಾನಿ ಭಾರತೀದೇವಿ ಎಂದು ಈಗ ಈ ಮಹಿಮಳ ಚರಿತೆ ಬುದ್ಧಿಗೆ ದೇವಿ ತಾಗಿಸಿದಂದದಿ ಸಾಗಲಿ ನುಡಿವುದು ನಾಗರಾಜನ ಜನನಿ ಸ್ವಪ್ನದಿ ಸುಳಿದಳು ಕೂಗಿದೆ ಅಯೋನಿಜೆ ದುಃಖರಹಿತಳೆಂದು ಭಾಗವತರ ಕಾಯ್ವ ಭಾಗ್ಯ ಸಂಪನ್ನದೇವಿ ಯೋಗಿ ಜನರಿಗೆಲ್ಲ ಗುರುಪತ್ನಿ ಎಂದೆನಿಪೆ ಆಗಾಗ ಅವತರಿಸಿ ಅನಿಲನ ಕಾರ್ಯಕ್ಕೆ ಆಗುವೆ ಸಹಕಾರಿ ಅಸುರರ ಸಂಹಾರಿ ಶ್ರೀ ಗುರೋರ್ಗುರು ಹರಿ ಗೋಪಾಲಕೃಷ್ಣವಿಠಲ ಭಾಗವತರ ಕಾಯ್ವ ನಿನ್ನದ್ವಾರದಿ ಸ್ಮರಿಸೇ 1 ಕೃತಿಸುತೆ ಕೊಂಡದಿ ಉದಿಸಿ ಸುತೆ ಎನಿಸಿದೆ ದ್ರುಪದನಿಗೆ ಚ್ಯುತರಹಿತ ಯೌವನಯುತೆ ಐವರಿಗರಸಿಯು ಆದೆ ಪ್ರತಿಯಿಲ್ಲದ ಪತಿವ್ರತೆ ಸುರತತಿ ಜನನಿಯು ನೀನೌ ಮಾ- ರುತ ಸುತನಲ್ಲದೆ ನಿನಗಿನ್ನಿತರರ ಸಂಗವು ಉಂಟೆ ಸುತರಂದದಿ ನಾಲ್ವರ ತಿಳಿದತಿಶಯದಲಿ ಅವರವರಾ ಸತಿಯರ ನಿನ್ನೊಳಗಡಿಗಿಸಿ ರತಿ ಕಾಲದಲೊಲಿದಿತ್ತೆ ಮತಿವಂತರಿಗಲ್ಲದೆ ಪ್ರತಿ ಜನರಿಗೆ ಮೋಹಕವು ಕ್ಷಿತಿಯೊಳು ನೀನವತರಿಸೀ ಕ್ಷಿತಿಗೇ ತೋರಿದ ಲೀಲೆ ಅತಿ ಸೌಭಾಗ್ಯದಿ ಮೆರೆದೆ ಕ್ಷಿತಿಪತಿಸೂಯಾಗದಲಿ ಖತಿಗೊಳ್ಳಲು ಖಳ ಜನರು ಸ್ಥಿತ ಸಾಮ್ರಾಜ್ಯವ ಕಂಡು ಕ್ಷಿತಿಭಾರವನಿಳುಹಲು ಶ್ರೀಪತಿ ಪತಿಮನವರಿಯುತ ಕುರು ಪತಿಸಭೆಯಲಿ ಭ್ರಮಿಸುತ ಜಾರುತ ಸರಸಿಯೋಳ್ ಬೀಳುತಿರೆ ಪತಿ ಶ್ರೀಪತಿ ಮೊಗವೀಕ್ಷಿಸಿ ಅತಿ ಹಾಸ್ಯದಿ ನೀ ನಗಲು ಖತಿಗೊಳ್ಳಲು ಕುರುಪತಿ ಕಲಕಿತು ದ್ವೇಷದ ಭಾವಗಳು ಪತಿ ಭಾರದ ಹರಣಕೆ ಮೂಲಾಯಿತು ನಿನ್ನಯ ನಗೆ ಕಿಡಿ ತಾ ಕಾತುರಕ್ಕಸ ತರುಗಳಿಗೆ ಸೋಕಿತು ಕಾಮನ ಬಿಸಿಯು ಮತಿಹೀನರು ನಿನ್ನನು ಬಯಸುತ ಬರೆ ದ್ವೇಷಾಗ್ನಿ ಜ್ವಲಿ ಸುತ ವಾಯು ಸಹಾಯದಲಿ ಹುತಗೈಸಿದೆ ಖಳತತಿಯ ಪತಿಯಂತರ್ಗತ ಕೃಷ್ಣನ ನುತಿಸುತ ಭಕ್ತ್ಯಾಜ್ಯಾಹುತಿ ಕ್ಷಿತಿ ಭಾರವನಿಳುಹಿಸಿದೆ ಹಿತತಂಗಿಯೆ ಗೋಪಾಲಕೃಷ್ಣವಿಠ್ಠಲಗೇ ನೀ ಪ್ರತಿಯುಂಟೆ ನಿನಗೆ ಈ ಕ್ಷಿತಿಯೊಳು ನಾಕಾಣೆ 2 ಮಡಿಯದೆ ದುರ್ಯೊüೀಧನನು ಮುಡಿಯನು ಕಟ್ಟೆನು ಎಂಬ ದೃಢ ಸಂಕಲ್ಪಳೆ ಪುಷ್ಪ ಮುಡಿಯಲಪೇಕ್ಷಿಸಿದೆ ನೀ ಒಡೆಯುವರುಂಟೇ ಇದರ ಒಡಲಿನ ಮರ್ಮವ ದೇವಿ ಒಡೆಯ ವೃಕೋದರ ನಿನ್ನ ನುಡಿ ಕೇಳುತ ವನ ಪೊಕ್ಕು ಮಡುಹುತ ಯಕ್ಷರ ತಂದು ಮುಡಿಸಿದ ಸೌಂಗಂಧಿಕವ ಪೊಡವಿಯೊಳ್ಹರಡಿತು ವಾರ್ತೆ ಒಡಲರಿಯದೆ ಜನತತಿಗೆ ಪಿಡಿಯುತ ಕರದಲಿ ಪುಷ್ಪ ಒಡೆಯನ ಪ್ರೇಮದಿ ನೋಡಿ ಮುಡಿಸಿದೆ ಸಿರಿಹರಿ ಮುಡಿಗೆ ಕಡು ಭಕ್ತಿಯೊಳಂತರದಿ ಬಿಡುಬಿಡು ಬಿಂಕವ ಲೀಲೆ ಕೊಡು ಕೊಡು ಭಕ್ತಿಯ ಬಾಲೆ ಪಡಿಸಾನಂದವ ಶೀಲೆ ನುಡಿಸಡಿಗಡಿಗ್ಹರಿ ಲೀಲೆ ಒಡಗೂಡತ ಪತಿಯೊಡನೆ ನಡೆಸಿದ ಚರಿತೆಗಳೆಲ್ಲ ಕಡು ಮೋಹವು ರಜ ತಮರಿಗೆ ಕೊಡುವುದು ಸುಖ ಸುಜನರಿಗೆ ಪೊಡವಿಪತಿ ಗೋಪಾಲಕೃಷ್ಣವಿಠಲ ನಿನ್ನ ನಡೆನುಡಿ ಮೆಚ್ಚುತ ನಡೆಸಿದ ಭಾರತ ನಾಟಕವÀ 3 ಆನಂದ ಜ್ಞಾನಪೂರ್ಣೆ ಆಗಾಗ ಒದಗಿದ ಹೀನ ದುಃಖದ ಸÉೂೀಂಕು ಉಂಟೆ ನಿನಗೆ ಇನ್ನು ಪ್ರಾಣಪತಿಗಳೈವರೆದುರಲಿ ಖಳ ನಿನ್ನ ಮಾನ ಹಾನಿಯ ಗೈಸೆ ಜಗವೆ ತಲ್ಲಣಿಸಿತು ಮಾನಾಭಿಮಾನ ಬಿಟ್ಟು ಶ್ರೀನಿಧಿ ಗತಿ ಎನ್ನೆ ಅಕ್ಷಯ ವಸನವು ಪ್ರಾಣಪಂಚಕ ಹರಿಯಾಧೀನವೆಂಬುವ ತತ್ವ ಪ್ರಾಣಕ್ಕೆ ಪ್ರಾಣಬಿಂಬ ಸ್ವಾಮಿ ಎಂಬುವ ತತ್ವ ಮಾನಾಭಿಮಾನ ತೊರೆದು ಪ್ರಾಣೇಂದ್ರಿಯವ ಜರಿದು ಮಾನಸದಲಿ ಹರಿಯ ಸ್ಮರಿಸಿದರಕ್ಷಯ ಸ್ಥಾನಪ್ರಾಪ್ತಿಯು ಎಂಬ ತತ್ವರಹಸ್ಯಗ- ಳಾನು ಸೂಚಿಸೆ ನಿನ್ನ ಕೃತಿಯಲ್ಲದಿನ್ನಿಲ್ಲ ದಾನವರೆಲ್ಲ ನಿನ್ನ ಕಾಮಿಸಿ ನೋಡಲವರು ಏನೆಂಬೆ ಮಾಡಿದಂಥ ಅಲ್ಪಸ್ವಲ್ಪದ ಪುಣ್ಯ ಕ್ಷೀಣಗೈಸುತ ಸೆಳೆದು ಹೀನ ಪಾಪದಿ ನೂಕಿ ಹಾನಿಗೈಸಿದೆ ಪವಮಾನಸುತನಿಂದಲಿ ಮಾನುನಿಮಣಿ ಸರ್ವಕ್ಷೇಮ ಪಾಲಿಪ ಭಕ್ತ- ರಾನನದಲಿ ನೋಡೆ ಜ್ಞಾನಾನಂದವನಿತ್ತು ಹೀನ ನರಕದಿ ಬಿದ್ದ ಭ್ರಾತೃಸಹಿತದಿ ಕುರುಪ ಕಾಣದೆ ನಿನ್ನ ಮಹಿಮೆ ಜ್ಞಾನರಹಿತನಾಗಿ ಜಾಣೆ ಶ್ರೀ ಗೋಪಾಲಕೃಷ್ಣವಿಠ್ಠಲನ ನಿಜ ಜ್ಞಾನ ಪಾಲಿಸಿ ಕಾಯೆ ಭೀಮಸೇನನ ಜಾಯೆ 4 ಮುಕ್ತರ ಬಂಧುವೆ ನೀನು ಭಕ್ತಿಯದಾತಳÉ ನೀನು ತತ್ವ ತಿಳಿಸುವೆ ನೀನು ಚಿತ್ತದೆ ನೆಲಸುವೆ ನೀನು ಹತ್ತದು ದುಃಖವು ನಿನಗೆ ಸುತ್ತದು ಶೋಕವು ನಿನಗೆ ಮುಕ್ತಾರ್ಥವ ಕೊಡುವವಳೆ ಮತ್ತೆ ಅಯೋನಿಜಹಳೆ ಮುತ್ತು ಮಾಣಿಕ್ಯವು ನವರತ್ನದ ಆಭರಣಗಳ ಕಂಚುಕ ನೆತ್ತಿಲಿ ಮಕುಟವನಿಟ್ಟು ಚಿತ್ತದೊಲ್ಲಭನಂಕದಲಿ ಹತ್ತಿ ಸಿಂಹಾಸನದಲಿರೆ ಸುತ್ತಲು ಸೌಪಣ್ರ್ಯಾದಿ ಸುರಸ್ತ್ರೀಯರು ಓಲೈಸೆ ಚಿತ್ತದಿ ಸಿರಿಹರಿಯನು ಭಕ್ತಿಲಿ ಭಜಿಸುತ ಮುಕ್ತಾ- ಮುಕ್ತರ ಕೃಪಪಾಂಗದಲಿ ಸುತ್ತಲೀಕ್ಷಿಸಿ ಕಾವೆ ಭಕ್ತಿಲಿ ದ್ರೌಪದಿ ಎಂದು ಎತ್ತಿದ ಸ್ವರದಲಿ ಕೂಗೆ ಚಿತ್ತದೊಲ್ಲಭನೊಡನೆ ಚಿತ್ತೈಸೆನ್ನಯ ಮನಕೆ ಹತ್ತಿಕಾಡುವ ಎನ್ನ ದುಷ್ಕøತ ಕರ್ಮಗಳೆಲ್ಲ ಕತ್ತರಿಸುತ ಕಾಯಮ್ಮ ಸತ್ಯಾಪ್ರಿಯನನು ತೋರೆ ಆರ್ತಜನರ ಪಾಲ ಗೋಪಾಲಕೃಷ್ಣವಿಠ್ಠಲನ್ನ ಅರ್ಥಿಯಿಂದಲಿ ಎನ್ನ ಚಿತ್ತದಿ ತೋರೆಲೆ ಜನನಿ 5 ಜತೆ ತತ್ವದೇವತೆಗಳ ಜನನಿ ತತ್ವಾರ್ಥ ತಿಳಿಸೇ ಆಪ್ತ ಗೋಪಾಲವಿಠ್ಠಲನೆಂದೆನಿಸೇ
--------------
ಅಂಬಾಬಾಯಿ
ದ್ವಾರಕೆಯ ಅರಸಗೆ ಪ. ಸುರೂಪಿಸೀರೆಯನುಟ್ಟು ಥೋರ ಮುತ್ತನೆ ಕಟ್ಟಿ ತೇರಿನಾರುತಿಯ ಮುರಾರಿಯ ಮುಂದೆತ್ತುವರು1 ರಂಜಿಸೊಸೀರೆಯನುಟ್ಟು ಪಂಜರ ದ್ವಾಲೆನಿಟ್ಟು ನೀರಾಂಜನ ಎತ್ತಿದರು 2 ತಾಕೀತೆಂದು ಕೆಲರು ಓಕುಳಿ ನಿವಾಳಿಸುವರು ಲೋಕನಾಯಕಗೆ 3 ಕೃಷ್ಣರಾಯನ ಮುಖಕೆ ದೃಷ್ಟಿ ನೆಟ್ಟೀತೆಂದು ಕೆಲರು ಬಟ್ಟು ಮುತ್ತು ನಿವಾಳಿಸಿ ಇಟ್ಟು ಕಸ್ತೂರಿ ಕಪ್ಪು 4 ಕದಳಿ ಸಾಲು ಜಗಲಿ ತೋರಣ ವಿಶಾಲ ಬೀದಿಯೊಳು 5 ನಿವಾಳಿಸಿ ನಿವಾಳಿಸಿ ನಾಲ್ಕು ಕಡೆಗೆ ಒಗೆದು6 ಶ್ರೀಲೋಲ ರಾಮೇಶನ ಭಕ್ತರು ವಾಲೈಸುವರು ಹೀಗೆ7
--------------
ಗಲಗಲಿಅವ್ವನವರು