ಒಟ್ಟು 663 ಕಡೆಗಳಲ್ಲಿ , 84 ದಾಸರು , 592 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದೇವ ತೋರು ದಯವ ಪ ಕಾವದೇವ ನೀನೆ ಎನ್ನ ಕೈಯಪಿಡಿದು ಕಾಯೊ ಅಭವ ಅ.ಪ ಧ್ಯಾನಿಪ ಭಕ್ತ ದೀನರಭಿಮಾನಿ ನೀನೆ ಕರುಣಿಸೊ ದೀನಸ್ವರದಿ ಬೇಡಿಕೊಂಬೆ ಮಾನರಕ್ಷಿಸಿ ಪೊರೆಯೊ ಜೀಯ 1 ನೀಗಿಸಲು ದುರ್ಬವಣೆಯನು ಬಾಗಿ ನಿಮ್ಮ ಮರೆಯ ಹೊಕ್ಕೆ ಭೋಗಿಶಯನ ಬಾಲನನ್ನು ಬಗಲೊಳಿಟ್ಟು ಸಲಹು ಜೀಯ 2 ಭಾಮೆಮಣಿಯ ಸಮಯಕೊದಗಿ ಪ್ರೇಮದಿಂದ ಮಾನ ಕಾಯ್ದಿ ಸ್ವಾಮಿ ನೀನೆ ಗತಿಯು ಎನಗೆ ಪ್ರೇಮದಿಂದ ಕಾಯೊ ಶ್ರೀರಾಮ 3
--------------
ರಾಮದಾಸರು
ದೇವಕಿಯ ಗರ್ಭದಲಿ ಲೋಕವಕಾವ ಕೃಷ್ಣನು ಬಂದು ನಂದನಠಾವಿನಲಿ ತಾ ಬೆಳೆದು ಗೋವನುಕಾವ ನೆವದಲಿ ಗೋಪಗೋಪೀಭಾವವನು ನೆಲೆಗೊಳಿಸಿ ದುಷ್ಟರಜೀವವನು ನೆರೆ ತೆಗೆದ ಹಾಗೆಮಾವ ಕಂಸಗೆ ಮುಕ್ತಿುತ್ತಾಮಾತೃ ಪಿತೃ ಬಂಧನವ ಬಿಡಿಸಿದಭಾಗವತವೂ ಲಾಲಿಸಿದನೂ ದೇವದೇವಾ 1ನಡೆಯಲುಪನಯನಾಖ್ಯ ಕರ್ಮವದೊಡನೆ ವಿದ್ಯವನೋದಿ ದುಷ್ಟರಬಡಿದು ಪತ್ನಿಯರೆಂಟುಮಂದಿಯಪಡೆದು ದ್ವಾರಕಿಯಲ್ಲಿ ಯಾದವರೊಡನೆ ಭೋಗಿಸಿ ಭೋಗಭಾಗ್ಯವತಡುಕಿದರಿಗಳ ತರಿದು ಕೌರವಪಡೆಯ ಮರ್ದಿಸಿ ಪಾಂಡವರನಾಪೊಡವಿಪಾಲರ ಮಾಡಿದಂಥಾಭಾಗವತವೂ ಲಾಲಿಸಿದನೂ ದೇವದೇವಾ 2ಪರಿಹರಿಸಿ ಭಾರವನು ಭೂಮಿಗೆಪರಮ ಭಕತರ ಸಲಹಿ ಕಥೆಯನುಹರಹಿ ಮುಂದಣ ಜನರು ಸಂಸ್ಕ øತಿಶರಧಿಯನ್ನಿದರಿಂದ ದಾಂಟುವತೆರನ ಮಾಡಿಯೆ ಕಾಯ್ದ ಕರುಣಾಶರಧಿ ತಿರುಪತಿ ವೆಂಕಟೇಶನೆನಿರುಪಮಾಮಿತ ಮಹಿಮ ನೀನೇಚರಿಸಿದಂಥಾ ಚಾರುತರವಹಭಾಗವತವೂ ಲಾಲಿಸಿದನೂ ದೇವದೇವಾ 3ಓಂ ಧೇನುಕಾಸುರ ಭಂಜನಾಯ ನಮಃ
--------------
ತಿಮ್ಮಪ್ಪದಾಸರು
ದೇವದೇವನೆ ಓವುದೆಮ್ಮನು ಶ್ರೀವಧೂವರನೇ ಸಾವಧಾನದಿ ಭಾವಿಸೈ ವಸುದೇವ ಕುವರನೇ ಪ. ನೀಲಮೇಘಶ್ಯಾಮ ರಮಾಲೋಲ ಪಾಲಿಸೈ ಬಾಲಗೋಕುಲಬಾಲ ಶ್ರೀ ವನಮಾಲ ಪಾಲಿಸೈ 1 ಭೋಗಿಶಯನ ಯೋಗಗಮ್ಯ ಸಾಗರಸ್ಥಿತ ಬಾಗಿ ನಮಿಪೆವು ರಾಗದಿಂ ಪೊರೆ ವಾಗಗೋಚರ 2 ಘಳಿಲನೈತಹುದಿಳೆಯ ರಮಣ ತಳುವ ಬೇಡುವೈ ಎಳೆಯರಾವು ಚಲವನರಿಯೆವು ಒಲವನೆರೆವೆವೈ3 ದೇಶದೇಳ್ಗೆಯೊಳಾಸೆಯಿಂದಿಹ ದಾಸರೆಂದು ನೀಂ ಲೇಸ ಪಾಲಿಸು ಆಶೆ ಸಲ್ಲಿಸು ಶೇಷಗಿರೀಶನೇ4
--------------
ನಂಜನಗೂಡು ತಿರುಮಲಾಂಬಾ
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು
ಧನ್ಯತೆಯಾಂತೆನಿಂದು ದೇವಿಯಕಂಡು ಮಾನ್ಯತೆ ಪಡೆವೆನೆಂದು ಪ. ಚಿನ್ಮಯರೂಪನ ಚೆನ್ನೆ ಲಕ್ಷ್ಮಿಯ ಸಂ ಪನ್ನ ಮೂರ್ತಿಯ ಕಂಡಿನ್ನೆನಗೆಣೆಯಾರೆನೆ ಅ.ಪ. ನಾಗವೇಣಿಯರೆಲ್ಲರು ಪಾಡುತ ಶಿರ ಬಾಗಿ ವಂದಿಸುತಿರಲು ರಾಗದಿಂ ನಲವೇರೆ ಭೋಗಭಾಗ್ಯವನೀವ ಯೋಗೇಶ್ವರಿಯ ದಯಾಸಾಗರಿಯ ಕಂಡು 1 ಐದೆಯರತಿಮುದದಿ ವೈದೇಹಿಯೆ ಯೆಮ್ಮ ಆದರ್ಶ ಮಹಿಳೆಯೆಂದು ಆದಿಶಕ್ತಿಯೇ ಈ ಶ್ರೀದೇವಿ ನಿಜವೆಂದು ಆದರಿಸುತ್ತಿರಲಾಮೋದವಾಂತುದರಿಂ 2 ಅರಿದಾವುದೆಮಗಿಳೆಯೊಳು ಶೇಷಗಿರೀಶನ ಅರಸಿಯೆಮ್ಮವಳಾದಳು ದುರಿತರೋಗವು ದೂರ ಸರಿದುದು ಮನವಾರ 3
--------------
ನಂಜನಗೂಡು ತಿರುಮಲಾಂಬಾ
ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ ಪ್ರಜೆಗಳ ಬಾಳು ನಜರು ಕೊಡುವುದಾಯ್ತು ತೆರತೆರುವುದರಿಂದ ವರಹಕೊಂಡು ಬಂದು ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1 ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2 ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3 ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4 ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5
--------------
ಕವಿ ಪರಮದೇವದಾಸರು
ಧೀರತನವ ಪಾಲಿಸೋ ಪ ಭವ ತೀರಕ್ಕೆನ್ನನು ಸೇರಿಸೋ ಅ.ಪ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ ಪಾಲಿಸಿ ||ನಾರಾ|| 1 ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು ಮೊರೆಯಿಟ್ಟು ಬೇಡಲಿ ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ2 ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ ಸುರರು ಭೋಗಿಪ ಸುರಪುರವಾನೊಲ್ಲೆ ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು ನಾನಾ ತೆರದಿ ಭಕ್ತಿಯೊಳಿರಲಿ ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ 1ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ 2ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ 3ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ 4ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ 5
--------------
ಗೋಪಾಲಾರ್ಯರು
ನಡತೆ ಹೀನನಾದರೇನಯ್ಯ - ಜಗದೊಡೆಯನ ಭಕುತಿ ಇದ್ದರೆ ಸಾಲದೆ ಪ ಪುಂಡರಾ ಪಾಂಡುನಂದನರು ಮತ್ತದರೊಳುಕಂಡೋರ್ವಳೈವರು ಭೋಗಿಪರುಖಂಡಿಸಿದರು ರಣದೊಳು ಗುರುಹಿರಿಯರಪುಂಡರೀಕಾಕ್ಷನ ಒಲುಮೆಯೊಂದಲ್ಲದೆ 1 ಪರಿ ಬುದ್ಧಿಯ ಹೇಳಿ ಹಿರಣ್ಯಕಕಂದನ ನಿರ್ಬಂಧಿಸುತಿರಲುಅಂದು ಸಾಧಿಸಲು ಕಂಬದ ಬಳಿಯೆ ತನ್ನತಂದೆಯ ಕೊಲಿಸಿದನೆಂಬರು ಜನರು2 ದಾಸಿಯ ಜಠರದೊಳು ಜನಿಸಿದ ವಿದುರ - ಸ-ನ್ಯಾಸಿಯೆಂದೆನಿಸಿಕೊಂಡಸಾಸಿರನಾಮದೊಡೆಯ ಕೃಷ್ಣ ಬಾಡದಾದಿಕೇಶವನ ಭಕುತಿಯೊಂದಿದ್ದರೆ ಸಾಲದೆ 3
--------------
ಕನಕದಾಸ
ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ. ನಾನಾ ವಿಧದ ನೀಚಯೋನಿಗಳನು ದಾಟಿ ಮಾನುಷೋತ್ತಮ ಮಧ್ವಮತದಿ ಪುಟ್ಟಿ ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು 1 ವೇದ ವಿಹಿತಕರ್ಮವಾದರು ಕ್ರಮವಾಗಿ ಸಾಧಿಸಲಿಲ್ಲ ಸಂತತಿಗಳಿಲ್ಲ ಪಾದ ಪದ್ಮ ಪರಾಗ ಮೋದಾನುಭವದಿ ಶುಭೋದಯಗೊಳಲಿಲ್ಲ 2 ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ ಲಲನೇರ ಮೋಹದಿ ಬಳಲಿದೆನು ಬಲವು ಕುಂದುತ ದೇಹ ಗಳಿತವಾಗುವುದಿನ್ನು ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು 3 ಮೂರೊಂದು ಪುರುಷಾರ್ಥ ತೋರುವ ಪುರುಷ ಶ- ರೀರವ ಕರುಣಿಸಿದವನೆ ನೀನು ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ ಪಾದ ಪರಿಯಂತ 4 ಸಂಚಿತಾಗಾಮಿ ದುಷ್ಕøತಗಳನಳಿಸಿ ಪ್ರಾ ಪಂಚಿಕ ಭೋಗ ಪೂರಣಗೊಳಿಸಿ ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು 5
--------------
ತುಪಾಕಿ ವೆಂಕಟರಮಣಾಚಾರ್ಯ
ನಂದ ಕುಮಾರ ಇಂದುಕುಲ ತಿಲಕ ಪ ಎಂದಿಗು ನಿನ್ನಯ ಸುಂದರ ಚರಣವ ವಂದಿಸಿ ನಲಿಯುವ ನಂದವೆನಗೆ ಕೊಡೊ ಅ.ಪ ಧನಕನಕಗಳನು ದಿನ ದಿನ ಗಳಿಸುವ ಅನುರಾಗಗಳನು ಕೊನೆಗಾಣಿಸೊ ದೇವ ವನಜಸಂಭವಪಿತ ಕನಸಿನಲ್ಲಿಯೂ ನಿನ್ನ ಮನನದಿ ಹಿಗ್ಗುವ ಮನವ ಎನಗೆ ಕೊಡೆಲೊ 1 ಭಯವಿಲ್ಲದೆ ದೋಷಮಯದ ನೋಟಗಳನು ಬಯಸುವ ಮತಿಯನು ಲಯಮಾಡೋ ದೇವ ಮಾಧವ ಎನ್ನ ನಯನಗಳಿಗೆ ನಿನ್ನ ಪ್ರಿಯ ರೂಪದ ಪರಿಚಯವ ಮಾಡಿಸೊ ಸದಾ 2 ಕಾಲವ ಕಳೆಯಲು ಆಲಸವಿಲ್ಲದೆ ಪೇಳಬಾರದ ನುಡಿ ಚಾಲನು ತೊಲಗಿಸೊ ಬಾಲ ಗೋಪಾಲ ಎನ್ನ ನಾಲಿಗೆಯಲಿ ನಿನ್ನ ಲೀಲೆಗಳನು ಸದಾ ಲಾಲಿಸಿ ಪೊಗಳಿಸೊ 3 ಪರಿಪರಿ ಭೋಗಕೆ ಪರಿದಾಡುತ ಸದಾ ಪರರ ಸೇವಿಸುತಿಹ ಕರಗಳ ನಿಲ್ಲಿಸೊ ಮುರಳೀಧರ ಕೃಷ್ಣ ಕರುಣದಿಂದಲಿ ಎನ್ನ ಕರಗಳಿಗೆ ನಿನ್ನ ವರಸೇವೆಯ ನೀಡೊ 4 ಭುವಿಯಲಿ ದುರುಳರ ಸವಿನುಡಿಗಳಿಗತಿ ಕಿವಿಗೊಟ್ಟು ಕೇಳುವ ಲವಲವಿಕೆಯ ಬಿಡಿಸೊ ದಿವಿಜರೊಡೆಯ ಎನ್ನ ಕಿವಿಯೊಳಗೆ ನಿನ್ನ ನವ ನವ ಚರಿತೆಯ ಸವಿರಸ ಸುರಿಸೆಲೊ 5 ಮಾಧವನನು ಮರೆತು ಪಾದಗಳಿಂದಲಿ ಮೇದಿನಿ ತಿರುಗುವ ಮೋದವೆನಗೆ ಬೇಡ ಯಾದವಪತಿ ನಿನ್ನ ಪಾದದರುಶನದ ವಿ ನೋದಕ್ಕೆ ಸುತ್ತಲು ಆದರ ಪೊಂದಿಸೊ 6 ಭಿನ್ನ ಅಂಗಗಳಿಂದ ಎನ್ನ ಕರ್ಮಗಳನು ನಿನ್ನ ಸೇವೆಯೆಂದು ಬಿನ್ನೈಸುವೆ ದೇವ ಎನ್ನ ದುರಿತಗಳ ಭಿನ್ನ ಮಾಡುತಲಿ ಪ್ರ ಸನ್ನನಾಗಿ ಎನಗೆ ಸನ್ಮತಿ ದಯಮಾಡೊ 7
--------------
ವಿದ್ಯಾಪ್ರಸನ್ನತೀರ್ಥರು
ನದಿಗಳು ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ ಭಾಗವತ ತಿಲಕ ನಿಮಿರಾಜಗೊಲಿದು ವಸಿಷ್ಠ ರಾಗದಲಿ ಕೇಳಿ ಜನರಯ್ಯಾ ಪ ಒಂದು ದಿನ ಗೋದಾವರಿಯ ತಟದಿ ನಿಮಿರಾಜ ಸಂದು ಯಜ್ಞವ ಮಾಡುತಿರಲಾಗ ಪರಮೇಷ್ಠಿ ನಂದನೆನಿಪ ವಶಿಷ್ಠ ಮಹಮುನಿ ನಡೆತಂದ ಮೇಧಾಗಾರಕೆ ಬಂದ ಯತಿವರನ ಮಣಿಪೀಠದಲಿ ಕುಳ್ಳಿರಿಸಿ ಸುಂದರಾಧಿಪ ಬೆಸಸಿದಾ 1 ವ್ರತಿಪತಿ ವಶಿಷ್ಠ ವೈಷ್ಣವಕುಲ ಶಿರೋರತುನ ಶ್ರುತಿಶಾಸ್ತ್ರ ಸರ್ವಜ್ಞ ಗಂಗಾದಿ ಪುಣ್ಯತೀ ಮತ್ಪಿತನೆನುತ ಪದಕೆರಗುವಾ ಕ್ಷಿತಿಪನೋಕ್ತಿಯ ಕೇಳುತಾನಂದ ಶರಧಿಯೊಳು ಗತನಾಗಿ ರೋಮ ಲಕ್ಷಣ ಕಳೇವರದಿ ಪುಳ ನೃಪತಿಗಿಂತೆಂದನು 2 ಕೇಳು ಜನನಾಥ ಮಹಭಾಗ ನಿನ್ನಯ ಪ್ರಶ್ನ ದೇಳಿಗೆಗೆ ಎನ್ನ ಸಂತೋಷ ಕಲ್ಪತರು ತ ಶಿಷ್ಯರೊಳು ಮೌಳಿಮಣಿ ನೀನಹುದು ನಿಖಿಳ ನದಿಗೊಳಿಪ್ಪ ಶ್ರೀಲೋಲನ ಸುಮೂರ್ತಿಗಳು ತಾರÀತಮ್ಯ ಸುವಿ ಮಾನವ ಇದನಾಲಿಪುದು ನೀನೆಂದನು 3 ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು ದೊರೆಮೆನಿಪನಾ ತೀರ್ಥಕೆ ಸರಿತಾಗಗಣ್ಯ ಗೋದಾವರಿ ನಳಿನಿಗಿಂ ಕೊರತೆಯೆನಿಪಳೈ ವತ್ತು ಗುಣದಲಿ ಶಂಖ ಚರಣ ಸುಗದಾಬ್ಜ ಶೋಭಿತ ವೀರನಾರಾಯಣ- ರಸೆನಿಪನಾ ಸಲಿಲಕೆ 4 ಹರಜಟೋದ್ಭವ ಕುಶಾವರ್ತಿಗೆ ಸಹಸ್ರಗುಣ ಚಾರು ಕಂ ಬುರಲಿ ವಾರುಚಿ ಧನುರ್ಧಾರಿ ಯಮನಂದನಲಿ ವಿಹರಿಸುತಿಹನಾಜಲದೊಳು ತುರುಗಾಯ್ದ ದೇವನಂಗಜ ನದಿಗೆ ಈರೈದು ವಾಗ್ದೇವಿ ಶರಧಿಯೊಳು ಪು ಗೋದ ರಂಗನಾಥನೆನಿಪ 5 ಆ ಯಮಳನದಿಗಳಿಗೆರಡು ಗುಣಾಧಮ ಸರಯು ತೋಯಾಧಿಪತಿ ರಾಮ ಸರಯು ನೀರೆಂದು ಗುಣ ವಿಹಾಯ ಸಮಮಣಿತನಯಳೆ ಸ್ಥಾಯಕೆ ಚತುರ್ಬಾಹು ವಿಷ್ಣು ಕಾವೇರಿಗೆ ನಾಯಕ ವರಾಹದೇವಾ6 ಸಿಂಧು ಭವನಾಶಿಗೀರ್ವರು ಸಮರು ಕ್ಷೀರಾಬ್ಧಿ ಮಂದಿರ ನೃಸಿಂಹರಲ್ಲಿಹರು ಭವನಾಶನಿಗೆ ತಂದೆಯೆನಿಪ ತ್ರಿವಿಕ್ರಮ ಒಂದೆನಿಸುವುವು ನಾಲ್ಕು ನದಿಗಳು ಗುಣಗಳಿಂದ ಮುಂದಿಹ ಪದದಿ ಪೇಳ್ವೆ ಪೆಸರು ಹರಿರೂಪ ನೆಲ ತಮ್ಮಿಂದೀರಗಿಂತೆಂದನೂ 7 ವಾಜಿವದನು ಮಂಝರಾನದಿಯೊಳಿಹನು ನವ ರಾಜೀವನಯನ ಶ್ರೀಧರ ಭೀಮರಥಿಯೊಳಿಹ ವಿರಾಜಿಪ ಮಲಾಪಹಾರಿ ಭಾಜನದೊಳಿಪ್ಪ ದುಷ್ಟ ಜನರನು ಮರ್ದಿಸುವ ಶ್ರೀ ಜನಾರ್ದನ ನಾಲ್ಕು ನದಿಗಳು ದ್ವಿಗುಣದಿಂದಾ ನಿತ್ಯ ನೈಜಭಕ್ತಿ ಜ್ಞಾನದಿ 8 ಭೀಮರಥಿ ಸಮ ಪಿನಾಕಿನಿಯೊಳಗೆ ಕೇಶವನು ಭೂಮಿಯೊಳು ಪೃಥಕು ಪೃಥಕು ಸುಖ ಜ್ಞಾನದಿ ಶ್ರೀ ಮನೋರಮ ಕೇಶವಾದಿ ರೂಪಗಳಿಂದ ಸ್ವಾಮಿಯೆನಿಸುವನಲ್ಲ ಸ್ನಾನಾದಿ ಸತ್ಕರ್ಮ ಮೋಕ್ಷ ಗಳೀವನೊ 9 ಈ ನದಿಗಳೆರಡು ಗುಣ ಪುಷ್ಕರಣಿನಿಚಯ ನ್ಯೂನವೆನಿಪವು ಮುಕ್ತಿ ದತ್ತಾತ್ರಯನು ಕೃಷ್ಣ ಮಾನಸ ಸರೋವರದೊಳು ಜ್ಞಾನಾತ್ಮ ವಾಮನನ ಶ್ರೀ ಭೂ ಸಹಿತ ಪ್ರಸ ನ್ನಾನನಾಬ್ಜದಿದರೆ ಜಘನಸ್ಥಿತಾಭಯ ಸು ಧೇನಿಪುದು ಎಂದಾ 10 ದೇವಖಾತಗಳು ಶತಗುಣಕಡಿಮೆ ಮಾನಸ ಸ ರೋವರಕೆ ಇತರ ಪುಷ್ಕರಣಿಗಳಿಗಲ್ಪಗುಣ ಪಾವನವಗೈವ ಕ್ಷುದ್ರಾ ಪ್ರಾವಹಿಗಳೀರೈದು ಗುಣದಿ ಕಡಿಮೆ ಲಕ್ಷ್ಮೀ ದೇವಿಪತಿ ನಾರಾಯಣನ ಚಿಂತಿಸೆಂದು ನೃಪ ಭವನೋವ ಪರಿಹರಿಪುದೆಂದು 11 ಈ ಸಲಿಲತೀರ್ಥಂಗಳೆರಡು ಗುಣದಿ ತಟಾಕ ಶೇಷಪರ್ಯಂಕ ಅಚ್ಯುತನಿಹನು ಸಜ್ಜನರ ವಾಸವಾಗಿಹನು ಚಕ್ರಿ ಘೋಷಗೈವ ಧರಾಂತಕೂಪಗಳೊಳಿರುತಿಹ ನಾ ಕೇಶನದಿಗಳ ತಾರÀತಮ್ಯ ರೂಪಗಳನುಪ ಪಾಸನಗೈವುದೆದೆಂದು 12 ಈ ತೆರದಿ ನಿಮಿರಾಜಗೋಸುಗ ವಶಿಷ್ಠಮುನಿ ತಾ ತಿಳಿದ ಕಥಾತಿಶಯ ಪರಮ ವಿಬುಧರು ಧ ಪ್ರೀತಿಯಿಂದಾಚರಿಸಲು ಶೀತಾಂಶು ಕಮಲಾಪ್ತರುಳ್ಳನಕ ಸುರಪತಿ ನಿ ಕೇತನದಿ ವಿವಿಧ ಭೋಗಗಳಿತ್ತು ಶ್ರೀ ಜಗ ಸಂಪ್ರೀತಿಯಿಂದನುರಾಗದೀ 13
--------------
ಜಗನ್ನಾಥದಾಸರು
ನದೀಸ್ತೋತ್ರವು ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತಿ ಸಿಂಧು ಸರಯು ನೇತ್ರಾವತಿ ಕುಮದ್ವತೀ ಭಾಗೀರಥೀ ಭೋಗವತಿ ಜಾಹ್ನವೀ ಜಯಮಂಗಲಿ ತ್ರಿಜಗತ್ವಾವನೀ ವಿಷ್ಣು ಪಾದೋದ್ಭವೆ ದೇವಿ ಕೃಷ್ಣವೇಣಿ ಅಘನಾಶಿನೀ ಗಂಗಾ ಯಮುನಾ ತ್ರಿವೇಣೀ ದಕ್ಷಿಣ ಪಿನಾಕಿನೀ ನರ್ಮದಾ ಸಾವಿತ್ರೀ ಗಾಯತ್ರೀ ಸರಸ್ವತೀ ಸೀತಾ ಮಾಲತೀ ಚಮಲಾಪಹ ವಾರಾಹೀ ವೈಷ್ಣವೀ ಸುಜ್ಯೋತಿ ಶಿವಗಂಗಾ ಪಂಚಗಂಗೀ ತ್ರಿಪದಗಾಮಿನೀ ಬ್ರಹ್ಮಪುತ್ರಾ ತುಂಗಭದ್ರಾ ಭೀಮರಥೀ ಗೋಮತೀ ಶರಾವತೀ ಸ್ವಾಮಿ ಪುಷ್ಕರಿಣೀ ವರಹ ಪುಷ್ಕರಿಣಿ ಪಾಂಡುತೀರ್ಥ ಪಾಪನಾಶಿನೀ ಆಕಾಶಗಂಗಾಧವಳ ಗಂಗಾ ಶಾಲ್ಮಲೀ ಲೋಕಪಾವನೀ ಕುಮಾರ ತೀರ್ಥ ವಿಷ್ಣುತೀರ್ಥ ನಾರಾಯಣತೀರ್ಥ ಕೌಮೋದಕೀ ಕಪಿಲತೀರ್ಥ ಅಲಕನಂದ ವರದಾ ಪಶ್ಚಿಮವಾಹಿನೀ ಸಿಂಧು ನದಿ ಶೋಣನದಿ ಚಂದ್ರಭಾಗ ಅರ್ಕಾವತೀ ಸುವರ್ಣ- ಮುಖರೀ ಗೋಗರ್ಭ ಶಿಂಶಾಕಾಗಿನೀ ಮಂದಾಕಿನೀ ಪ್ರಾತ:ಕಾಲೇ ಪಠÉೀನ್ನಿತ್ಯಂ ದು:ಖದಾರಿದ್ರನಾಶನಂ ಸ್ಮರಾಮಿ ನಿತ್ಯಂ ಭವದುಃಖ ದೂರಾ ಶ್ರಿ ಕಮಲನಾಭ ವಿಠ್ಠಲೋ ವಿಜಯತೇ ಶುಭಂ
--------------
ನಿಡಗುರುಕಿ ಜೀವೂಬಾಯಿ
ನನಗ್ಯಾಕೆ ಬಡತನವು ಸನಕಾದಿನುತ ನಿನ್ನ ಬೆನ್ನು ಬಲವಿರಲು ಪ ಪುಂಡಗಂಡನು ಇರಲು ಹೆಂಡತಿಯ ಭೋಗ ಭೂ ಮಂಡಲದೊಳಗಿನ್ನುತ್ವವ್ಯಾಕೋ ಭಂಡರಕ್ಕಸಹರ ಪುಂಡಮಂಡಲತ್ರಯದೋ ಮಂಡೆ ಮೇಲಿರಲು 1 ಜನರಿಗೆ ಕಾಣದ ಧನವ ಕೂಡಿಟ್ಟು ಅನುದಿನ ಹಿಗ್ಗುವವರಿಗೆ ಬಡತನವುಂಟೇನೊ ಧಣಿಯಾಗಿ ಮೂಲೋಕವನು ಉದರದಿಟ್ಟಾಳ್ವ ಪಾದ ಮನಮಂದಿರದಿರಲು 2 ಕಲ್ಪಿತಸಂಸಾರ ಅಲ್ಪೆಂದು ನಿಜವಾಗಿ ಕಲ್ಪಿಸಿಕೊಂಡವರು ಅಲ್ಪರೇನಯ್ಯ ಕಲ್ಪತರು ಶ್ರೀರಾಮನ ಕಲ್ಪಾಂತರರಿಬಳಿ ಕಲ್ಪರಲ್ಲಿಗೆ ಹೋಗಿ ಅಲ್ಪರಿವರೇನೊ 3
--------------
ರಾಮದಾಸರು
ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ಪ ತುಂಬಿದ ಅಸ್ಥಿ ಮಾಂಸ ರಕ್ತ ಜಂಬುಕನ ಬಾಯ ತುತ್ತ ಅ.ಪ ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳಲಿ ನಂಬಲಾರದೊಂದು ಕ್ಷಣಕೆ ಅಂಬರಕ್ಕೆ ಹಾರುವದ 1 ಮಲವು ಬದ್ಧವಾದ ತನು ಮಲೆತು ಇರುವುದೇನು ಬಲುಹುಗುಂದಿದ ಮೇಲೆ ಫಲವಿಲ್ಲವಿದರಿಂದ 2 ಮಾಳಿಗೆ ಮನೆಯ ಬಿಟ್ಟು ಓಗರ ಬಿಟ್ಟು ಜಾಳಿಗೆ ಹೊನ್ನನು ಬಿಟ್ಟು ಜಾರುವುದು ತನುವ ಬಿಟ್ಟು 3 ಆಸೆಯನ್ನು ನೋಡಿ ಮೃತ್ಯು ಮೋಸವನ್ನು ಯೋಚಿಸುವುದು ಸಾಸಿರನಾಮನ ಭಜಿಸಿ ಅನುದಿನ 4 ಮಡದಿ ಮಕ್ಕಳು ಇದನ ಕಡೆಯ ಬಾಗಿಲೊಳಗಿಟ್ಟು ಒಡವೆ ವಸ್ತುಗಳನು ನೋಡಿ ಅಡಗಿಸಿ ಇಡುವರಂತೆ 5 ಈಗಲೋ ಇನ್ನಾವಾಗಲೊ ಭೋಗದಾಸೆ ತೀರಲೊಂದು ಹಾಗಗಳಿಗೆ ನಿಲ್ಲದಯ್ಯ ಈ ಗರುವ ಪರಮಾತ್ಮ 6 ವಾರಕದಾಭರಣವನ್ನು ಕೇರಿಯೊಳು ಕೊಂಬುವರಿಲ್ಲ ವರಾಹತಿಮ್ಮಪ್ಪಗಿಟ್ಟು ವಂದಿಸಿ ಕೈಗಳ ತಟ್ಟು 7
--------------
ವರಹತಿಮ್ಮಪ್ಪ