ಒಟ್ಟು 49270 ಕಡೆಗಳಲ್ಲಿ , 136 ದಾಸರು , 11161 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

-------ಅರಿಯೆ ----ನಡತಿ ಮಾರ್ಗವನೂ ಹೀನಮಾನವ ನಾನು ಯಂ ---- ಹರೇ ಪ ನಾನಾಯೋನಿಗಳಲ್ಲಿ ನಟಿಸಿನಟಿಸಿ ಇಲ್ಲದೆ ಇರೊ ವಿಧಾನ ಒಂದಲ್ಲದೆ 1 ದರಿ----ರ್- ಸರತಿ ತಿಳಿದಿನ್ನು ಧೀನ ರಕ್ಷಕ ನಿನ್ನ ದಿನಚರ್ಯ ವರ್ಣಿಸುವರ ಕಾಣುತಲೆ ವಂದಿಸಿ ಕಾಲುಹಿಡಿವದು ಅರಿಯೆ 2 ವೇದಾದಿ ಸಕಲವು ವಿದ್ಯಶಾಸ್ತ್ರವನರಿಯೆ ಮೇದಿನಿಯೊಳು ನಡೆವ ಸುಮಾರ್ಗ ನಾನರಿಯೆ ಗಾಧಿ ಬೋಧಿಗಳೀಗೆ ಒಳಗಾಗಿ ಈ ಪರಿಯೆಗಾಧೆಯೊಳಗೆ ಬಿದ್ದನ ಕೈ ಪಿಡಿಯೊಧೊರಿಯೆ 3 ಆಗ ಅಂತರಂಗದಾ ಭಾವನರಿಯೆ ನಾಗಶಯನ ನಿಮ್ಮ ನಾಮವೆಂಬುದು ಅರಿಯೆ ಕೃಪೆತೋರಿ ರಕ್ಷಿಸಯ್ಯಾ ಹರಿಯೆ 4 ಸಕಲಾವು ನೀನೆಂದು ಸಾರುವ ಧರೆಯಾ ಭಕ್ತವತ್ಸಲನೆಂಬ ಬಿರುದು ನಿಂದರಿಯಾ ಅಕಳಂಕ ಮಹಿಮ `ಹೊನ್ನವಿಠ್ಠಲನೆ’ ಪ್ರೀಯಾ ಮುಕುತಿದಾಯಕ ಆಲಸ್ಯನಾದವನ ಪೊರೆಯಾ 5
--------------
ಹೆನ್ನೆರಂಗದಾಸರು
------ನ್ಯರ ಸಂಗಾ ಘಳಿಗೆ ಸಾಕಯ್ಯ ಪ ಎಲ್ಲಾ ಇದ್ದೂ ದುರ್ಜನ ಸಂಗ ಎಂದಿಗೂ ಬೇಡಯ್ಯ ----- ಹರಿಯಾ ಮರೆಯದೆ ಇರುವಂಥಾ ------ಕೃಷ್ಣನ ----- ನಿರುವಂಥ ಸುಜನಾರ ಸಂಗ ಕೂಡದ ನಿನ್ನಿಂತಾ ಪರಾಸು (?) ಮಕ್ಕಾಳ ಕೂಡಿ----------- 1 ಉದಯದಾವೇಳೆ ಉಚಿತಕರ್ಮ ಮಾಡುವಾ ಸದಯ ಹೃದಯರಾದ ಸಜ್ಜನಸಂಗ------- ಸದಯ ಕಾಲಾದಿ ಯಿ-----ಸನ್ನಿಧಿ ಸೇರುವಾ ಕುದಯಾ ಕುಜನಾರ ಕೂಡಿದವ -----ಸೇರುವಾ 2 ಅನೇವಿಷಾ (ಅನಿಮಿಷಾ) ಶ್ರೀ ಕೃಷ್ಣಾನ ಅರಸುತಿರುವಂಥ ಜನ ಮಹಾಮಹಿವiರಾದ ಶರಣಾರ -------ರದಂಥಾ ಹೊನ್ನ ವಿಠ್ಠಲನ ಕರುಣಾವು ಪಡುವಂಥಾ ಮಾರ್ಗ- ವನ್ನು ಸೌಖ್ಯವು ತೋರುವಂಥಾ 3
--------------
ಹೆನ್ನೆರಂಗದಾಸರು
------ಯು ಮಾಡಿದರು ಏನು ಹರಿಯೆ ಸ್ಪಷ್ಟ ನಿಮ್ಮ ಹರುಷರನು ಮುಟ್ಟುವ ಪರಿ-----ರದೆ ಪ ಹಗಳಿರಳು ಬಗೆ ಬಗೆಯ ಹಲವುÀ ಯೋಚನೆಮಾಡಿ ಸೊಗಸಾಗಿ ದೇಹವನು ಸಲುವದೊಂದೆ ನಿಗಮಗೋಚರ ನಿಮ್ಮ ನಾಮಧ್ಯಾನವು ತೊರೆದು ಭುಗಲಿಗೆ ಒಳಗಾಗಿ ಪರಿಪರಿ ವಿಧದಿಂದಾ 1 ನರಳುತ ನೀ ಎನಗೆ ಇನ್ನಿಲ್ಲವೆಂದು ಹೊರಳಿ ಹೊರಳಿ ದು:ಖ ಹೊಂದಿ ಬಿಡುವುದ ಒಂದೇ ಕರುಣಾ------- 2 ಕರುಣೆ ತೋರಿ ತೋರದೆ ಇನ್ನು ದುರುಳ ಬುದ್ಧಿಯ ಮಾಡಿ ಮೀರಿ ಒಬ್ಬರ ------------- ಮಾಡಿಬಾಳು--------- 3 ಫಣೆಯಲ್ಲಿ ಬರೆದಂಥ ಬರಹವು ತಪ್ಪದಿನ್ನು ನಾನು ಅಪೇಕ್ಷೆಗೆ ಒಳಗಾಗಿ ಬಹಳ----- ---ಲ್ಲದೆ ಉದರ ಧ್ಯಾಸಕ್ಕೆ ಒಳಗಾಗಿ ಮನಸು ನಿಲ್ಲದೊ ಮರಳಿ ಮರುಳುತಲಿ ಇನ್ನೂ 4 ಇಂಥ ಪರಿ-----ಗೆ ಒಳಗಾಗಿ ಭ್ರಾಂತನಾಗಿ ನಿಮ್ಮ ಚರಣ ಭಜನೆ ಮರೆದು ಸಂತತಯಿರುವುದು ವಂದೇ ನಾಥ ----- ಕಂತುಪಿತನಾಥ ಶ್ರೀ ಘನಹೆನ್ನವಿಠ್ಠಲಾ 5
--------------
ಹೆನ್ನೆರಂಗದಾಸರು
(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
(2) ಆಂಡಾಳ್ ಸ್ತುತಿ ಆಂಡಾಳ್ ದೇವಿ ಶರಣೆಂಬೆ ಶ್ರೀಗೋದಾದೇವಿ ಪೊರೆಯೆಂಬೆ ಪ ಮುಡಿದು ಕೊಟ್ಟ ನಾಯಕಿ ತಾಯೆ ರಂಗನಾಥನ ಪರಮಪ್ರಿಯೆ ಮುಡಿಪುಹೊತ್ತು ಸೇವಿಪೆವಮ್ಮ ಶರಣಾಗತಿಯನ್ನ ಅ.ಪ ಅಂದುಗೋಪಿಯರು ಕೃಷ್ಣನ ಸೇರಲು ಚಂದದಿಮಾಡಿದ ಕಾತ್ಯಾಯನಿವ್ರತವ ತಂದೆಯಮತದಿ ಹೊಂದಿಸೇವಿಸಿದೆ ಒಂದು ತಿಂಗಳ ತಿರುಪ್ಪಾವೈಯಲಿ 1 ದಿನಕೊಂದು ಪಾಶುರ ಕಟ್ಟಿಪಾಡುತ ದಿನದಿನ ಸಖಿಯರೊಳು ಮಾರ್ಗಳಿಯಲಿ ದಿನ ಮೂಡುವಮೊದಲೆ ತಣ್ಣೀರ್ಮೀಯುತ ದಿನಪ ಕೃಷ್ಣನ ಕಲೆತ ಕನ್ಯಾಮಣಿಯೆ 2 ಧನುರ್ಮಾಸವನು ಧರಿಸಿ ಭಜಿಸುವೆವು ಧನಂಜಯನ ತೋರೆ ಸಿರಿಬಾಯ್ನುಡಿಯೆ ಧನಕನಕಚಂದನೂ ಬಲ್ಲೆವು ತಾಯೆ ತನು ಕರಗಿಸು ಜಾಜಿಪುರೀಶನಡಿಯಲ್ಲಿ 3
--------------
ನಾರಾಯಣಶರ್ಮರು
(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
(2) ಮಾದದಗೊಂಡನಹಳ್ಳಿ (ಮಹದೇವಪುರ) ಜಯ ಮಂಗಳ ಶ್ರೀಕರ ಹಂಸನಿಗೆ ಪ ಜಯಮಂಗಳ ಸಾಮಜಪೋಷಕಗೆ ಅ.ಪ ಜಯಮಂಗಳ ಫಲ್ಗುಣಪಾಲನಿಗೆ ಜಯಮಂಗಳ ಶ್ರೀಗುರುರಂಗನಿಗೆ1 ಪರತರಗತಿಯಂಪೊಂದುವ ಭರದಿಂ ಶ್ರೀರಂಗದಾಸವರ್ಯನು ಪೆಳ್ದಾ ವರಕವಿತೆಯ ಜರಿಯದೆ ಸ ದ್ಧರಿಭಕ್ತರು ತಪ್ಪ ತಿದ್ದಿ ಮನ್ನಿಸಿ ಮುದದಿಂ ಕಂದ
--------------
ರಂಗದಾಸರು
(2) ವೇದಾಂತದೇಶಿಕರು ವೇದಾಂತ ಗುರು ಸಾರ್ವಭೌಮ ಜ್ಞಾನ ಬೋಧಾನುಕೂಲ ನಿಸ್ಸೀಮ ಪ ಆದಿನೋಡು ಅನಾದಿಯೆನ್ನುತ ಬೋಧೆಗೊಳಿಸುಪದೇಶ ಮಾಡಿದ ಸಾಧುಶಿಖರನೆ ಸರ್ವತಂತ್ರನೆ ವಾದಭೀಕರ ವೈಷ್ಣವೋ ನಿಜ 1 ದ್ವಿದಳ ದಾಸನ ಕೈದಸಿದ ನಿಜ ಪದವಿನೋಡೆಂದೆನುತ ಮನಸನು ಕದಿವ ಕಳ್ಳರ ಕೊಂದು ಹಿಡಿಯೆಂ ದೊದಗಿತ್ತನು ಮೊದಲಿನಕ್ಷರಾ2 ಮೂರು ಬಿಡು ನೀ ಮೂರು ಹಿಡಿ ಕೇ ಳಾರು ಚಕ್ರವ ದಾಂಟಿ ತ್ರಿಕುಟಿಯ ಸೇರಿ ಸಂಪದವಾರಿಯೊಳಗದ್ದು ತೋರಿದ ಪರಮಾತ್ಮ ಪರತರ 3 ಎಂಟು ಹಾರಿಸಿ ಎಂಟುಲಿಪಿಯನು ಗಂಟು ಮಾಡೆಂದೆನುತ ನನ್ನೊಳ ಗುಂಟುಮಾಡಿಯು ತೋರಿದ ವೈ ಕುಂಠನಾಥನ ನನ್ನೊಳಗ ನಿಜ 4 ಶುದ್ಧ ಹಂಸನ ಮಾಡಿ ನನಗಾ ಚಿದ್ವಿವೇಕದ ಕವಚ ತೊಡಿಸಿದ ಸತ್ಸ್ವರೂಪಾಚಾರ್ಯನಹುದೆಲೊ ಮದ್ಗುರುವೆ ಶ್ರೀ ತುಲಶೀರಾಮಾ 5
--------------
ಚನ್ನಪಟ್ಟಣದ ಅಹೋಬಲದಾಸರು
(2) ಸರಗೂರು ರಂಗನಾಥನೇ ವೋ ರಂಗನಾಥನೇ ಪ ಅಂಗಜಕೋಟೀರನೆ ತಿಂಗಳಥರ ಜಂಗಮಂದಿರ ಮಂಗಳ ಹರಿ ಮಾಧವನೇ 1 ಶ್ರೀವರ ದಾಮೋದರ ನಿಜದೇವ ರಂಗನಾಥ 2 ಶರಣರನ್ನು ಪೊರೆಯುವ ತರುಣೀಮಣಿ ಕರುಣಾಕರ ಶರಣೆಂದೆನು ಸರಗೂರಿನ ರಂಗಾ 3 ವಂದಿಪೆ ಶ್ರೀ ತುಲಶಿರಾಮಾ ಸುಂದರಗಿರಿ ಯೆಂದಿಗೊ ನೀ ಬಾರೆಂದಿಪುದು ಮಂದರಧರ 4
--------------
ಚನ್ನಪಟ್ಟಣದ ಅಹೋಬಲದಾಸರು
(3) ನದಿಗಳು ಯಾತ್ರೆ ಮಾಡಿಕೊಂಡೈದೆ ಜಾಹ್ನವಿಗೆ ಹೋಗಿ ತೀರ್ಥ ಪ ಸೂತ್ರಧಾರಿ ತಾನಿಹ ದಿವ್ಯ ಕ್ಷೇತ್ರೋದ್ಭವೆ ಶ್ರೀ ಕಾವೇರಿ ಧಾತ್ರಿಪಾವನೆಜಯಮಂಗಳೆನೇತ್ರೋಂ ಮಧ್ಯಾ ಭಾಗೀರಥಿ 1 ಹರಿಪಾದ ರಜೋರಿ ಝೇಂಕಾರಿ ತರಂಗಧಾರಿ ಗಿರಿಜಾರ ಗುಹಾವಿಹಾರಿತರುಣಿ ಜಯ ಭಾಗಮಂಡಲೆ 2 ಗಂಗೆ ಮತ್ಕಲುಷಾಭಂಗ ಸ್ವರ್ಗಸೋಪಾನಸಂಗ ಮಂಗಳಾಂಗಿಯೆ ತರಳತರಂಗೆ ಯೆನ್ನುತಾ ಕಂಚೀ 3 ಲಲನೆ ನಿನ್ನಯ ಸುದರುಶನ ಫಲಿಸಿದಾಕ್ಷಣವೆ ದು:ಖ ಮಳಿದುಹೋಗುವ ಚಂದಾ ಕಲಿತು ಗುರುಮುಖದಿಂ ಕಾಶೀ4 ಮದನಾರಿಮೌಳಿಯ ತಂ ಘೃತಂಪೂರ್ಣ ಅಸ್ಮಾದಯನೀ ಮದಾಚಾರ್ಯನೆ ಶ್ರೀ ತುಲಶೀಮಧುರಾಮೃತ ಸುರಿಯುವ ದ್ವಾರಕಾ5
--------------
ಚನ್ನಪಟ್ಟಣದ ಅಹೋಬಲದಾಸರು
(3) ರೇವಣ್ಣ ಸಿದ್ದೇಶ್ವರ ಯತಿಗಳು ಬೆಂಗಳೂರು ಭೇಟಿ ಯೋಗಿಶೇಖರನಾಗಿ ಬೆಳಗುವ ಜಗದೊಳಗೆ ತಾ ನಿಜ ಪ ನಾಗಭೂಷಣನಡಿಗಳಂ ಪಿಡಿದಾಗ ಹೊಂದಿದನದ್ವಯಂ ಪದ ಜೋಗಿ ಜಂಗಮದೊಡೆಯ ನಮ್ಮಯ ರೇವಣಾಶಿದ್ಧೇಶ್ವರನೆ 1 ತಾನಿಹ ಶೈವಗಿರಿಯೊಳು ದೀನಜನಮಂದಾರ ಮುನಿಮಹ 2 ಅಂತರಾತ್ಮನೊಳಿಂತು ಹೊಂದಿಪ ರೆಂತು ಲೋಕೋಪಕಾರ ರಾಗಿಯು ಅಂತು ದಯಮಾಡಿರುವ ನೋಡಿ ಅ ನಂತ ಮಹಿಮನೆ ರುದ್ರಮುನಿ 3 ತತ್ಸ್ವರೂಪನು ತೋರಿ ಭುವನಕೆ ಸತ್ಸಹಾಯಕನಾದ ನಮ್ಮಯ ಮತ್ಸ್ಯಮೂರುತಿ ಪ್ರಿಯನೆ ಮುನಿಮಹಾ 4 ತಿರ್ಗಿ ಲೋಕಕೆ ಬಾರದಂದದಿ ಸ್ವರ್ಗಲೋಕದೊಳಿರುವ ಮುನಿಮಹಾ 5 ಭುವನದೊಳಗವತರಿಸಿಯಿರುತಿಹ ಸುಮನ ಸತ್ಯಸಮಾಜ ಭೋಜನೆ ತಾ ನಿವನೆನೆ ಹೊಳೆವ ಮುನಿಮಹಾ 6 ಬರುವ ಭಕ್ತರಿಗಾಗಿ ತನ್ನೊಳ ಗಿರುವ ಪರತತ್ವವನು ಭಕ್ತರ ಕರದುಕೊಡುವುದು ಕಂಡುಕೊಳ್ಳಿರೊ ತರುಣಿಮಣಿಯನು ಧರಸಿ ಧರೆಯೊಳು 7 ಪ್ರಣವಲಿಂಗದೊಳೈಕ್ಯಮಾಗುವ ಕಂಚಿವರದನ ಪ್ರೀಯನಾಗಿಯು 8
--------------
ಚನ್ನಪಟ್ಟಣದ ಅಹೋಬಲದಾಸರು
(3) ಶಿವಸ್ತುತಿಗಳು ನಮೋ ಗಿರೀಶ್ವರ ನಮೋ ಸುರೇಶ್ವರ ನಮೋ ಧರೇಶ್ವರ ಗಂಗಾಧರಾ ಪ ರಮಾರಮಣ ಹರ ಕುಮಾರ ಪಿತಹರ ನಮಾಮಿ ಶಂಕರ ಗಂಗಾಧರಾ ಅ.ಪ ಬಾಲಾರ್ಕ ಸುರುಚಿರ ಬಾಲೇಂದುಶೇಖರ ಬಾಲಾಂಬಿಕಾ ವರಗಂಗಾಧರಾ 1 ಮಹಾಜಟಾಧರ ಮಹಾನಟೇಶ್ವರ ಮಹಾ ಮಹೇಶ್ವರ ಗಂಗಾಧರ 2 ಮಹಾ ಮಹಿಮರ ಮಹಾಚತುರ ಹರ ಮಹಾ ಮುನೀಶ್ವರ ಗಂಗಾಧರ 3 ಪರೇಶ ನಿರುಪಮ ಪರಾಕ್ರಮಾ ಹಿಮ ಗಿರೀಂದ್ರ ಧಾಮಾ ಗಂಗಾಧರ 4 ಸುರಾಸುರೋತ್ತಮ ಕರಾರ್ಚಿತಾ ಮಾಂ ಗಿರೀಶ ನಾಮಾ ಗಂಗಾಧರಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(3) ಶ್ರೀಕೃಷ್ಣ ಲಾಲಿ ಜೋ ಜೋ ಶ್ರೀಕೃಷ್ಣ ಗೋಪಾಲಕನೆ ಜೋ ಜೋ ಗೋಪಿಯ ಕುಮಾರನೆ ಪ ಪಾಡಿತೂಗುವೆನಯ್ಯ ಜೋಜೋಜೋ ಅ.ಪ ಹಾಲಿನ ಹೊಳೆಯಲಿ ಹರಿದು ಬಂದವನೆ ಆಲದೆಲೆಯ ಮೇಲೆ ಮಲಗಿ ಬಂದವನೆ ಕಾಲಿನ ಹೆಬ್ಬೆರಳ ಬಾಯಲಿಟ್ಟವನೆ ಹಾಲುಗಲ್ಲದ ಶಿಶುವೆನಿಸಿಕೊಂಡವನೆ ಪಾಡಿತೂಗುವೆನಯ್ಯ ಜೋಜೋಜೋ 1 ಕೆತ್ತಿದ ಚಿನ್ನದ ತೊಟ್ಟಿಲು ಇಲ್ಲ ಮುತ್ತಿನ ಮಣಿಗಳ ಸರಗಳು ಇಲ್ಲ ಮೆತ್ತನೆ ಹಾಸಿದ ಬಟ್ಟೆಯ ಮೇಲೆ ಹೊತ್ತು ಮೀರಿದೆ ಮಲಗೋ ಕಂದ ಪಾಡಿತೂಗುವೆನಯ್ಯ ಜೋಜೋಜೋ 2 ಚೆನ್ನಯ್ಯ ನೀನು ಮುದ್ದರಂಗಯ್ಯ ಅಣ್ಣಯ್ಯ ಕಾಣೋ ತುಂಟ ಕೃಷ್ಣಯ್ಯ ಸುಮ್ಮನೆ ಮಲಗಯ್ಯ ರಂಪಾಟ ಮಾಡದೆ ಕಣ್ಮುಚ್ಚಿ ಪವಡಿಸೋ ಪರಮಾನಂದನೆ ಪಾಡಿತೂಗುವೆನಯ್ಯ ಜೋಜೋಜೋ 3 ಅಂಗೈಯಲ್ಲೆ ಅದ್ಭುತ ಮಾಡುವೆ ಅಂಗಾಂಗದಲ್ಲಿ ಬ್ರಹ್ಮಾಂಡ ತೋರುವೆ ಭಂಗ ಪಾಂಡುರಂಗ ಚಂಗನೇಳದೆ ಮಲಗೊ ಜಾಜಿಪುರಿರಂಗ ಪಾಡಿತೂಗುವೆನಯ್ಯ ಜೋಜೋಜೋ 4
--------------
ನಾರಾಯಣಶರ್ಮರು
(32ನೇ ವರ್ಷದ ವರ್ಧಂತಿ) ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ. ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ ಭೃತ್ಯನನು ಪೊರೆದಿತ್ತ ಮೋಹದ ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ 1 ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ ಇನ್ನು ಪೊರೆವುದಕೇನುಪೇಕ್ಷ ಪ್ರ- ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ- ಭವ ಮಾಧವ 2 ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ ರಾಮ ವಿಧುರಿತ ಪಾಪಚಯ ಕಮ- ಲಾ ಮನೋಹರ ಸುಂದರಾನನ 3 ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ ಮಂದ ಮರಾಳಗಮನ ಶೀಲಾ ನೀಲ ಮೇಘ ನಿಭಾಂಗ ಪಂಕಜ ಮಾಲಯದುಕುಲಬಾಲ ಪಾಲಯ 4 ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ ಜಾರ ಚೋರ ವಾರಿಜಾಸನ ವಂದ್ಯ ಕರುಣಾ ಪೂರ ಸುರಪರಿವಾರ ಪಾಲಯ 5 ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು ಹಿಂದೆ ಮಾಡಿದ ಕುಂದನೆಣಿಸದೆ ಇಂದು ಕರಪಿಡಿ ಎಂದು ಬಯಸುವೆ 6 ವಿನುತ ಚರಣಾ ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ ಶೇಷಗಿರಿ ನಿಲಯಾಕುವರದ ಕೃ- ಪಾಶ್ರಯನೆ ತವದಾಸ ಪಾಲಿಸು 7
--------------
ತುಪಾಕಿ ವೆಂಕಟರಮಣಾಚಾರ್ಯ
(37ನೇ ವರ್ಷದ ವರ್ಧಂತಿ) ದಯದೋರೊ ದೀನಾನುಕಂಪಾ ಲಕ್ಷ್ಮೀಶಾ ಭಯಹಾರಿ ಭಾಮಾ ಮುಖಾಬ್ಜ ದಿನೇಶ ಪ. ಒಂದೊಂದುಪಾಧಿ ಸಂಬಂಧಿಸಿ ಬರುವಾ ಮಂದಾಭಿಲಾಷಗಳಿಂದ ನಿಂದಿಸುವ ಕುಂದ ನಾನೆಂದಿಗು ಹೊಂದದಂದದಲಿ ನಿಂದು ಮನದಿ ಪೂರ್ಣಾನಂದ ಸಂತಸದಿ 1 ನಾವಿಬ್ಬರೊಂದೆ ವೃಕ್ಷದಿ ಸೇರಿರುವೆವು ಕೋವಿದ ನೀನಾದರಿಂದ ಎನ್ನಿರವು ಜೀವ ಕರ್ತೃತ್ವಾದಿ ಬಳಲುವದೈತು ತಾವಕನೆಂಬ ಭಾವನೆ ದೂರ ಹೋಯ್ತು 2 ಮತ್ತೇಳು ಮೂವತ್ತು ವತ್ಸರಗಳನು ಎತ್ತಿನಂದದಿ ಕಳೆವುತ್ತ ಬಾಳಿದೆನು ಎತ್ತಾಲು ಹೊಂದದೆ ಎರಡೇಳು ವಿಧದ ಭಕ್ತಿಯ ಬಯಸುವ ಭಯ ದೂರ ವರದ 3 ಮನಸಿನ ದೌರಾತ್ಮ್ಯವನು ಪೇಳಲಾರೆ ತನುವ ದಂಡಿಸಿ ಕರ್ಮಗಳ ತಾಳಲಾರೆ ಅನುಕೂಲವಲ್ಲದಿಂದ್ರಿಯಗಳನೆಲ್ಲ ವನಜಾಕ್ಷ ನಾನೆಂತು ಗೆಲ್ಲುವೆ ಶ್ರೀನಲ್ಲ 4 ಈರೇಳು ಭುವನಾಧಿನಾಥ ನಿನ್ನನ್ನು ಸೇರಿದೆ ಶೇಷಾದ್ರಿ ಶಿಖರವಾಸ ಸಾರಿದೆ ಸರ್ವಾಭೀಷ್ಟದ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ