ಒಟ್ಟು 6899 ಕಡೆಗಳಲ್ಲಿ , 128 ದಾಸರು , 4614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ಪ ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ 1 ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ ಕಡಿದು ನಿ ಸಿರಿ ಕೈಕೊಂಡು ಆ ಮಹಾ ರಚನೆಯಲ್ಲಿ ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ ಹುಯಿಸಿ ಕಾವನೈಯನ ಕುಣಿಸಿದ 2 ಸಿರಿ ವಿಠ್ಠಲನ್ನ ಮೃದು ಪದ್ಮಗಂಧವನು ಮಧುಪÀನಂತೆ ಸೇವಿಸುತ್ತ ಬುದ್ಧಿ ಪೂರ್ವಕದಿಂದಲಿ ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ 3 ವರದಪ್ಪನೇ ಸೋಮ ಗುರುರಾಯ ದಿನಕರನು ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ ಕರಣ ಚರಿತೆಯಲಿ ನಲಿದಾಡಿದ 4 ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ ಹಿತನಾಗಿ ದೃಢನೋಡಿದ ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ ಸುತನಾಗಿ ನೀರು ನಿಶಿತದಲಿ ತಂದ ಅ ಪ್ರತಿ ದೈವತಾ ಕಿಂಕರ 5 ವಜ್ರ ಪ್ರಹರವಿದು ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು ಹೆಚ್ಚು ಲಜ್ಜೆಯನು ತೊರೆದು ನಿತ್ಯ ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ ಅಬ್ಜಭವನೊಡನೆ ಗತಿಗೆ 6 ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ ದಾಸರನ ಸಂತರಿಸಿ ಧರೆಗೆ ತೋರಿ ಸಿರಿ ವಿಠಲನ ಸ್ಮರಿಸುತ ಸು ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು ಚಿಂತೆಯೊಳಗಿಟ್ಟ ಗುರುವೆ 7
--------------
ವಿಜಯದಾಸ
ಭೃಂಗ ಭಕ್ತ ಕಾಮಿತಾರ್ಥದ ಮಂಗಳಾಂಗ ತಾಮಸಬಲ ನಿಗ್ರಹಣ ಪತಂಗ ಭ ವಾಮಯಹರ ಭಾರತಿ ಮುಖ ಸಂಗ ಪ. ಮಾನ ಸೇವರಾತಿ ಭೂಪ ಭಾನುಸರಣ ಸುಪ್ರತಾಪ ದೈತ್ಯ ಕ್ಷೋಣಿ ಸಂದರ್ಶಿತ ಕೋಪ ಜಾನಕಿವರನ ನಿಜಾನುಗನೆನಿಪ ಮ- ಹಾನುಭಾವ ಪವಮಾನ ದಯಾಪರ 1 ಇಂದು ಕುಲದಿ ತಾ ಜನಿಸಿ ನಿಜ ಬಂಧುಗಳನು ಸತ್ಕರಿಸಿ ಇಂದಿರೆಯರಸನ ಒಲಿಸಿ ಜರಾ- ಸಂಧ ಮುಖರನು ಸಂಹರಿಸಿ ಒಂದೇ ಕ್ಷಣದಿ ಸೌಗಂಧಿಕ ಕುಸುಮವ ತಂದು ಮಡದಿಗಾನಂದ ತೋರಿದ 2 ಕಲಿಯುಗದೊಳು ತಾ ಬಂದು ಮಾಯಿ ಬಲಿ ಭುಜರನು ಗೆಲವಂದು ಜಲಜನಾಭವ ಕರೆತಂದು ರೌಪ್ಯ ನಿಲಯದಿ ಸ್ಥಾಪಿಸಿ ನಿಂದು ಚೆಲುವ ಶೇಷಗಿರಿ ಪತಿಗತಿಯೆಂದು ನೆಲೆಯ ತೋರಿದ ಪುರುಕರುಣಾಸಿಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ
ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ ಪ ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ ಅನುದಿನ ಪಾಲಿಸು ಘನ ಹರಿನಾಮವ | ಸ್ತಂಭ ನಿವಾಸನೆ ದಯತೋರೋ 1 ಪೋತನೊಳೀಪರಿ ಯಾತಕೆ ನಿರ್ದಯ ತಾತನೆ ನಿನಗೆ ರೀತಿಯ ನೋಡೈ | ಸುತನಪರಾಧವ ಪಾತಕ ಬಿಡಿಸೊ ಮತಿ ಬೀರೋ 2 ಕರುಣಿಸು ಶಾಮಸುಂದರ ವಿಠಲ | ವರಿಚರಿ ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ 3
--------------
ಶಾಮಸುಂದರ ವಿಠಲ
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಭೋರನೆ ನಿಜಪರಿವಾರವೆಲ್ಲವೂ ಸೇರಿ ಪ. ಮಕರಕುಂಡಲಧರ ವಿಕಸಿತ ಮುಖಪದ್ಮ ಕೌಸ್ತುಭ ಶುಭ ವನಮಾಲಿ ಭಕುತ ವತ್ಸಲನೆಂಬ ಬಿರುದು ತೋರುತ ನಮ್ಮ ಶಕುತಿಗೆ ಸರಿಯಾದ ಸೇವೆ ಕೊಳ್ಳುವೆನೆಂದು 1 ಒಡೆಯನೀ ಗತಿಯೆಂಬ ಬಡವ ಭಕ್ತರನೆಲ್ಲು ಬಿಡನೆಂದು ಭವಸಿಂಧು ಪೊತ್ತನಿಂದು ತಡವ ಮಾಡದಲೆ ಸಂಗಡ ಬಂದೀ ನಿಲಯದಿ ನಡು ಮನೆಯಲಿ ನಿಂದು ಕೊಡುವೆ ಸೌಖ್ಯವನೆಂದು 2 ತುಳಸಿಧಾಮ ಸುಶೋಭಿತ ನಮಗೆ ಬೆಂ- ಬಲವಾಗಿರುವ ಸರ್ವ ಸ್ಥಳಗಳಲಿ ಅಲಸನಾಗದೆ ಶೇಷಾಚಲವಾಸನು ಶ್ರೀಭೂ- ಲಲನೆಯರೊಡಗೂಡಿ ನಲಿವ ಸಂಭ್ರಮದಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ ವಿಮಲಚರಣಕಮಲ್ಹಿಡಿ ದೃಢದಿ ಪ ಸುಮನಸರಗೂಡಿ ನೀ ಸುಮಶರ ಪಿತನಂ ಸಮಯ ತಿಳಿದು ಭಜಿಸನುದಿನದಿ ಅ.ಪ ಸಾರವಿಲ್ಲದ ಸಂಸಾರ ಇದು ಮೇರೆನಿಲ್ಲದ ಸಾಗರ ಆರಿಗೆ ನಿಲುಕದೆ ಮೂರುಲೋಕವದ್ದಿ ಮೀರಿಬಡಿಸುವುದು ಬಲುಘೋರ 1 ಹೆಂಡರು ಮಕ್ಕಳೆಂದು ನಂಬಿದಿ ನಿನ್ನ ಹಿಂಡಿನುಂಗುವುದು ಅರಿಯದ್ಹೋದಿ ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ ದಂಡನೆಗೆಳಪುದು ಅಂತ್ಯದಿ 2 ಕಾಕುಜನರ ಸಂಗ್ಹಿಡಿದಿದ್ದಿ ನೀ ಲೋಕನೆಚ್ಚಿ ನೂಕುನುಗ್ಗಾದಿ ಲೋಕಗೆಲಿದು ಭವನೂಕಿ ನಲಿಯುವರ ಸಾಕಾರಗಳಿಸದೆ ಕೆಟ್ಟ್ಹೋದಿ 3 ಧರೆಯ ಭೋಗವನು ಸ್ಥಿರ ತಿಳಿದಿ ನೀ ಹರಿದು ಹೋಗುವದಕೊಲಿತಿದ್ದಿ ಮರೆಮೋಸದಿ ಬಿದ್ದರು ಮೈಯಮರೆದು ಸ್ಥಿರಸುಖ ಪಡೆಯದೆ ದಿನಗಳೆದಿ 4 ಭೂಮಿಸುಖಾರಿಗೆ ನಿಜವಲ್ಲ ಇದು ಕಾಮಿಸಬೇಡೆಲೊ ಶೂಲ ಕಾಮಿತಗಳನಿತ್ತು ಕ್ಷೇಮದಿ ಸಲಹುವ ಸ್ವಾಮಿ ಶ್ರೀರಾಮನ ತಿಳಿಮಿಗಿಲ 5
--------------
ರಾಮದಾಸರು
ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ಪ ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?1 ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? 2 ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ 3 ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ ? 4 ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬಕೃತಕ ಶಾಸ್ತ್ರವು ಲೌಕಿಕಭಾವಕೆಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ-ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ? 5
--------------
ಕನಕದಾಸ
ಮಂಗಳಂ ಕೃಷ್ಣ ಯೋಗೀಂದ್ರ ದಿವ್ಯಮಂಗಳ'ಗ್ರಹ ನಿನ್ನ ನೆನಹು ಸರ್ವ ಪನಿನ್ನ ಚರಿತೆಗೇಳಿ 'ಗ್ಗಿ ಜೀ'ಪರಿಗೆನಿನ್ನೊಲವನು ಬಯಸುವ ಧನ್ಯಗೆನಿನ್ನ ಭಕತರ ಸಂಗತಿಯೊಳಿರುವರಿಗೆನಿನ್ನ ಮೂರುತಿಗಂಡು ನ'ುಪ ಮಹಾತ್ಮಗೆ 1ನಿನ್ನ ವಾಗಮೃತಪಾನದಿ ಮತ್ತರಾದರ್ಗೆನಿನ್ನ ಸೇವೆಗೆ ಮೈಗೊಟ್ಟಿರುವರಿಗೆನಿನ್ನ ಚರಣ ಸೋಕಿದೆಡೆಯೊಳಿರುವರಿಗೆನಿನ್ನಂಗ ಸಂಗ ಮರುತಪೂತದೇಹರ್ಗೆ 2ಕರುಣದಿಂ ಚಿಕನಾಗಪುರದಿ ವಾಸುದೇವಾರ್ಯಗುರುವಾಗಿ ನರಸಾರ್ಯನೆಂದೆನಿಸಿತಿರುಪತಿಯರಸನೆ ಕೃಷ್ಣಯೋಗೀಂದ್ರ ಶ್ರೀಕರ ರಾಮದಾಸಾರ್ಯನೆಂದರಿತೆಮಗೆಲ್ಲಾ 3
--------------
ತಿಮ್ಮಪ್ಪದಾಸರು
ಮಂಗಳ ಜಯ ಜಯ ಜಯ ಮಂಗಳ ಪ. ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ ಮಂಗಳ ದೇವಿಯರರಸನಿಗೆ ಮಂಗಳ ಮನುಮಥಪಿತನಿಗೆ ಮಂಗಳ ಮಂಗಳ ಮಹಿಮಗೆ ಮಂಗಳ 1 ಅಚ್ಚುತಾನಂತ ಗೋವಿಂದಗೆ ಮಂಗಳ ಸಚ್ಚÀರಿತ್ರನಿಗೆ ಸಕಲ ಮಂಗಳ ಸಚ್ಚಿದಾನಂದ ಸ್ವರೂಪಗೆ ಮಂಗಳ ಅಚ್ಚಹೃದಯನಿಗೆ ಅತಿ ಮಂಗಳ 2 ಕೇಶವ ನಾರಾಯಣನಿಗೆ ಮಂಗಳ ಕೇಶಿಸೂದನನಿಗೆ ಅತಿ ಮಂಗಳ ಶೇಷಶಯನ ಹೃಷೀಕೇಶಗೆ ಮಂಗಳ ವಾಸುದೇವನಿಗೆ ಸಕಲ ಮಂಗಳ 3 ದಾನವವೈರಿ ದೆಸೆದೆಸೆಗಳಿಗೆ ಮಂಗಳ ಹೀನಕುಲದವಗೆ ಹೆಚ್ಚು ಮಂಗಳ ಆನಂದತೀರ್ಥಮುನಿಯ ಮುದ್ದುಕೃಷ್ಣಗೆ ಶ್ರೀನಾರಿಯೆತ್ತುವ ಶುಭಮಂಗಳ 4 ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ ನಗಧರ ಕೂರ್ಮಗೆ ಅತಿಮಂಗಳ ಜಗತಿಯನೆತ್ತದ [ವರಾಹಗೆ]ಮಂಗಳ ಮಗುವ ಕಾಯಿದ ನೃಸಿಂಹಗೆ ಮಂಗಳ 5 ದಾನವ ಬೇಡಿದ ಸ್ವಾಮಿಗೆ ಮಂಗಳ ಕ್ಷೋಣಿಶಾಂತನಿಗೆ ಸಕಲ ಮಂಗಳ ಜಾನಕೀರಮಣ ರಾಮಗೆ ಮಂಗಳ ಶ್ರೀನಂದಾಚ್ಯುತನಿಗೆ ಶುಭಮಂಗಳ 6 ಬುದ್ಧವತಾರ ಶ್ರೀಬದ್ಧಗೆ ಮಂಗಳ ಸದ್ಧರ್ಮ ಮೂಲಸ್ವಾಮಿಗೆ ಮಂಗಳ ಮಧ್ವವಲ್ಲಭ ಹಯವದನರಾಯನಿಗಿಂಥ ಶುದ್ಧಸ್ವಭಾವಗೆ ಶುಭಮಂಗಳ 7
--------------
ವಾದಿರಾಜ
ಮಂಗಳಂ ಜಯ ಜಯ ಮಂಗಳಂ ಪ ಪರಮಾಸನದಲಿ ಕುಳಿತವಗೆ ಪರತತ್ವವ ತಾ ತಿಳಿದವಗೆ ಕರುಣದಿಂದ ದುರಿತಾವಳಿಗಳನು ಸ್ಮರಿಸಿದ ಮಾತ್ರದಿ ಪರಿಹರಿಸುವಗೆ 1 ಪೊಡವಿಯಲಿ ಶೋಭಿಸುವವಗೆ ಕಡಲಶಯನನ ಭಕ್ತನಿಗೆ ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ ಕಡುತರ ಜ್ಞಾನವ ನೀಡುವಗೆ 2 ಸತ್ಯಧೀರರ ಕುವರನಿಗೆ ಸತ್ಯಜ್ಞಾನನೆಂದೆನಿಸುವಗೆ ಅತ್ಯಾದರದಿಂದ ರಾಮನ ಧ್ಯಾನಿಸಿ ಪ್ರತ್ಯಕ್ಷವ ಕರೆಸಿರುವವಗೆ 3 ಕಾಮಕ್ರೋಧವ ಬಿಟ್ಟವಗೆ ಪ್ರೇಮ ಆಶೆಗಳ ಸುಟ್ಟವಗೆ ಧೂಮಕೇತು ಸಖ ಸೂನುವಾಹನನ ನೇಮದಿಂದ ಆರಾಧಿಪಗೆ 4 ದಂಡ ಕಮಂಡಲ ಪಿಡಿದವಗೆ ಪಂಡಿತರಿಂದತಿ ಪೂಜಿತಗೆ ಕೊಂಡಾಡಿದರ್ಯಮ ದಂಡನೆ ತಪ್ಪಿಸಿ ಶೊಂಡನಾದ ನರಹರಿ ತೋರ್ಪಗೆ 5
--------------
ಪ್ರದ್ಯುಮ್ನತೀರ್ಥರು
ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಜಯ ಸುಂದರ ಮೂರುತಿಗೆ ಮಾ ಮನೋಹರನಿಗೆ ಪ ಮಂಗಳ ಮಧುಸೂದನನಿಗೆ ಮಂಗಳ ಮುರಮರ್ದನನಿಗೆ ಮಂಗಳಾಂಗ ಶ್ರೀ ಮದನಂತ- ರಂಗನಿಗೆ ಶುಭಾಂಗ ಹರಿಗೆ 1 ರಂತಿದೇವನನ್ನು ಪೊರೆದ ಚಿಂತಿತಾರ್ಥ ಪ್ರದಾತನಿಗೆ ಸಂತತವು ಭಕುತರನು ಸಂತೋಷದಿ ಪೊರೆವ ಹರಿಗೆ2 ಪಾಂಡವರನು ಪೊರೆದÀಗೆ ಪುಂಡರೀಕಗೆ ಒಲಿದಗೆ ತಂಡತಂಡದ ಭಕ್ತರನ್ನು ಕಂಡುಪೊರೆವ ಮಹಮಹಿಮಗೆ3 ನಾರಿ ರುಕ್ಮಿಣಿ ಭಾಮೆ ಸಹಿತದಿ ದ್ವಾರಕಾಪುರ ವಾಸನಿಗೆ ಸೌಳಸಾಸಿರ ಸತಿಯರಾಳ್ದ ಸಾರಸಾಕ್ಷ ಹರಿಗೆ ಬೇಗ4 ಕಡಲೊಡೆಯಗೆ ಮೃಡಸಖನಿಗೆ ಕಡುಹರುಷದಿ ಕಾಮಿನಿಯರು ಸಡಗರದಲಿ ಕಮಲನಾಭ ವಿಠ್ಠಲನಂಘ್ರಿ ಭಜಿಸಿನಲಿದು5
--------------
ನಿಡಗುರುಕಿ ಜೀವೂಬಾಯಿ