ಒಟ್ಟು 21316 ಕಡೆಗಳಲ್ಲಿ , 137 ದಾಸರು , 8969 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ಪ ಚೆಂದಾಗಿ ಮನಸಿಗಾನಂದ ನೀಡುವ ನಿನ್ನಮುಂದೆಯೆ ಕಂದ ತಾ ಬಂದು ನಿಂದಿಹೆನವ್ವ ಅ.ಪ. ಘನದಯಾವಂತೆ ಕಾಯೆ ಇದು ನಿನ್ನಅನುಗ್ರಹವೆಂಬೆ ತಾಯೆಕನಸಿನೊಳಿರಲಿಲ್ಲ ಮನಸಿನೊಳಿರಲಿಲ್ಲಜನನಿ ನೀನೆ ಕರೆಸಿ ದರುಶನವಿತ್ತವ್ವ 1 ಸನಿತೆಯೊಳ್ಬಂದು ನಿಂತು ದಯಾಮೃತವಹನಿಸುವಿ ಜನರಿಂಗಿತುಜನರ ಪಾವನ ಮಾಡಿ ಘನ ಸಂತಸ ನೀಡಿಅನುದಿನ ಜನ ಪಾಡಿ ಕುಣಿಯುವಂತೆ ಕೃಪೆ ಮಾಡೆ 2 ಸದಯಾಮೂರ್ತಿಯು ನೀ ಸತ್ಯ ನಿನ್ನಯ ಪಾದಪದುಮಕೆ ಮಣಿಯುವೆ ನಿತ್ಯಗದುಗಿನ ವೀರನಾರಾಯಣನೆನ್ನಯಹೃದಯದಿ ಸತತ ನಿಲುವಂತೆ ಕರುಣಿಸೌ 3
--------------
ವೀರನಾರಾಯಣ
ಚಂದಿರರಾಮನ ರಾಣಿ ಸೀತೆಯ ಮುಖ ದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ಪ ಭಾರತಿ ಮೊದಲಾದ ಸತಿಯರಕ್ಷಿ ಕುಮುದ ಕೋರಿಕೆ ಬಿರಿಯೆ ರಾಜಿತ ಚಕೋರ ಪಾರವಾರವೆಂಬ ಸುರನಿಕರ ನಲಿಯೆ ವಾರಿಜಮುಖಿಯ ಆನಂದ ಶರಧಿಯುಕ್ಕೆ 1 ನೊಸಲಲೊಪ್ಪುವ ಕಸ್ತೂರಿತಿಲಕ ಕಲಂಕ ಹೊಸ ಮುತ್ತಿನೋಲೆ ವರಹಾರದ ಕುಸುಮ ತಾರೆಗಳಾಗೆ ಆ ಕಿರಣ ಲೋಕಂಗಳು ನಸುನಗು ಬೆಳದಿಂಗಳಾಗೆ ನಗೆಗೀಡಾಯಿತೆಂದು 2 ನಂದ ಮೂರುತಿ ವಿಜಯೀಂದ್ರಸ್ವಾಮಿ ರಾಮ ಚಂದ್ರ ಸೀತೆಯ ಮುಖದೊಳು ಮುಖವ ಸಂದಿಸೆ ಉಪರಾಗದಿ ಪೋಲ್ವ ಈಶ್ವರ ಹಾರ ಮಂದಾಕಿನಿ ಯಮುನ ಎಂದಾಗ ಅವರು ಮೀಯೆ3
--------------
ವಿಜಯೀಂದ್ರತೀರ್ಥರು
ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ. ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ 1 ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ 2 ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ 3 ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ 4 ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ಚನ್ನ ಕೇಶವ ನಮೋ ನಮೋ ಭಿನ್ನ ರೂಪನೆ ನಮೋ ನಮೋ ಪ ಅಜಮಿಳರಕ್ಷಕ ನಮೋ ನಮೋ ಭಜಕರ ಪಾಲಕ ನಮೋ ನಮೋ ಸುಜನರ ಸೇವಕ ನಮೋ ನಮೋ ಕುಜನರ ನಾಶಕ ನಮೋ ನಮೋ1 ಸುರಮುನಿ ವಂದಿತ ನಮೋ ನಮೋ ಸುರಗಣ ಸೇವಿತ ನಮೋ ನಮೋ ತರಳರ ಪಾಲಕ ನಮೋ ನಮೋ ಶರಣರ ರಕ್ಷಕÀ ನಮೋ ನಮೋ 2 ದಾಶರಥೆ ಹರಿ ನಮೋ ನಮೋ ವಾಸುಕಿಶಯನನ ನಮೋ ನಮೋ ಈಶ ಪರಾತ್ಪರ ನಮೋ ನಮೋ ಮಾಧವ ನಮೋ ನಮೋ 3
--------------
ಕರ್ಕಿ ಕೇಶವದಾಸ
ಚನ್ನಕೇಶವ ಚನ್ನಕೇಶವ ಚನ್ನಕೇಶವ ತ್ರಾಹಿಮಾಂ ಪ ಮನ್ನಿಸೆನ್ನನು ರಕ್ಷಿಸೆನ್ನನು ಸನ್ನುತಾಂಗನೆ ಪಾಹಿಮಾಂ ಅ.ಪ. ಭವದಿ ನೊಂದೆನು ಸವೆದು ಬೆಂದೆನು ಜವದಿ ಬಂದೆನು ತ್ರಾಹಿಮಾಂ ಭವಣೆಯನು ಪರಿಹರಿಸಿ ದೇವನೆ ಭವ ವಿದೂರನೆ ಪಾಹಿಮಾಂ1 ನಾನು ಏನನು ನಿನ್ನ ಮರತೆನು ನಾನು ಬಡವನು ತ್ರಾಹಿಮಾಂ ಗಾನ ಲೋಲನೆ ಬಿಡದೆ ಭಜಿಸುವೆ ದೀನ ವತ್ಸಲ ಪಾಹಿಮಾಂ 2 ಭಕ್ತವತ್ಸಲ ಭಕ್ತದಾಯಕ ಭಕ್ತಿಯರಿಯೆನು ತ್ರಾಹಿಮಾಂ ಮುಕ್ತಿದಾಯಕ ಶಕ್ತಿ ಮೂರುತಿ ಮುಕ್ತಿ ಪಾಲಿಸಿ ಪಾಹಿಮಾಂ3
--------------
ಕರ್ಕಿ ಕೇಶವದಾಸ
ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ ನನ್ಯರ ನಂಬೆನು ಸಲಹಯ್ಯ ಹರಿಯೇ ಪ ತರಳಾ ಧೃವನಂತೆ ತಪಸ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಸರಸ ಜಾಂಬುಕಿಯಂತೆ ಸೇವೆಯನರಿಯೆನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ 1 ದಾಸ ಕನಕನಂತೆ ಭಕ್ತಿಯ ನರಿಯೆನು ವಾಸುಕಿಯಂತೆ ನಾ ಯಾಚನೆಯರಿಯೇ ದಾಸ ಮಾರುತಿಯಂತೆ ದಾನತ್ವವರಿಯೆನು ವಾಸವನಂತೆ ನಾ ಕೀರ್ತನೆಯರಿಯೇ 2 ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ ಹರಿಯ ಮನೆ ಘಂಟೆಯ ಬಾರಿಸಲರಿಯೆನು ಸಿರಿ ಚನ್ನಕೇಶವ ಮಹಿಮೆಯನರಿಯೇ 3
--------------
ಕರ್ಕಿ ಕೇಶವದಾಸ
ಚನ್ನಕೇಶವ ಪನ್ನಗಶಯನ ಪ ಚನ್ನಪಾದಪೂಜೆಯನ್ನು ಕರುಣಿಸಯ್ಯ ಅ.ಪ ಸಾಕಲಾರದೆ ನೂಕುತಿರುವೆಯಾ ವಿ ವೇತಕವೇ ಇದು ಸಾಕು ಸುತನ ಸಲಹು 1 ದೂರನುಯೋಚಿಸು ದಾರಿಯಬಿಡದೆ ಸಾರಿಸ್ಮರಿಸುವ ಪಾರುಗಾಣಿಸಯ್ಯ 2 ಶ್ರೀದೇವಿಯ ಸಾಧುವೇನೊ ಕೇಳು ಆಧಾರಿಯೇ ಭೇದ ಸರಿಯೆ ಹೇಳು 3 ತಪ್ಪುಮಾಡದೆ ಇಪ್ಪರಾರೊ ಹರಿ ಅಪ್ಪುತೆಮ್ಮ ಬಂದು ಒಪ್ಪಿ ಪೊರೆಯೊ ಬಂಧು4 ಅಮ್ಮನಾನುಡಿ ಆಲಿಸಂತೆ ನಡಿ ನೆಮ್ಮದಿಯೊಳಡಿಯಿಟ್ಟು ಯೆನ್ನ ಕೈಪಿಡಿ5 ಸುಮನಸಗುಣಾ ಕಮಲಾಕ್ಷದಾ ಅಮರವಾಣಿಪೇಳು ಅಮಿತಸುಖದ ಬಾಳು 6 ಆಗಲೈಮಗು ಭೋಗ ಭಾಗ್ಯಹೊಗು ಯೋಗಿ 7 ನಂಬಿನಡೆವೆ ಸಂಭ್ರಮದ ಕಣಿ ಅಂಬುಜೋದರಾನಂದಸಾಗರಾ ನಾಂ8 ಜಯ ಜಯ ಜಯ ಮಂಗಳಮಯ ಭಯನಿವಾರಣ ಭಕ್ತ ಸಂರಕ್ಷಣಾ 9 ಇದ ಪಾಡುವಾ ಮುದ ಪಡೆಯುವಾ ಅಧಿನಾಥನೆಡೆ ಸುಧೆಸವಿಯಾವಾ 10 ವಿಧಿಪಿತನ ಸೇವೆ ನಿಧಿಯೆಂದರಿತು ಬುಧಮಂಡಲಿಯೊಳಧಿಕರಿಸುವಾಂ 11 ಜಾಜೀಶ್ವರಾ ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಸಾಮ್ರಾಜ್ಯ ಚನ್ನಕೇಶವಾ 12
--------------
ಶಾಮಶರ್ಮರು
ಚಪ್ಪರಿಸಲು ಬೇಕಾದವರು ಬನ್ನಿ ಇಷ್ಪೊದು ಮಧ್ವಾಚಾರ್ಯರಲ್ಲಿದು ಪೆಪ್ಪರ್ ಮೆಂಟ್ ಪ. ಚೀಪೂತಲಿದ್ದರು ಸವೆಯುವದಲ್ಲವು ಜಾತಿ ಭೇದವಿಲ್ಲ ಇದಕೆ ಭಕ್ತಿ ಕಾರಣ ನೀತಿ ಶಾಸ್ತ್ರಾಮೂಲಾಧಾರದ ಪೆಪ್ಪರ್ ಮೆಂಟ್ 1 ಸಾಸಿವೆಯಷ್ಟೊತ್ತು ನೆನದರೆ ಸಾಕೆಂಬ ಕÀಲಿಯುಗ ಮಹಿಮೆಯ ಪೆಪ್ಪರ್ ಮೆಂಟ್ 2 ಆಕುಲ ಈಕುಲ ಇಲ್ಲವೆಂಬುದನರಿಸಲು ನಾಲ್ಕು ವೇದವನೊಂದೇ ಬಾರಿಗೆ ನಾಲ್ಕು ಹಸ್ತದಿ ತಂದ ಪೆಪ್ಪರ್ ಮೆಂಟ್ 3 ನಾಕಚಾರವಂದ್ಯನ ಸ್ತುತಿಗೊದಗುವ ಸಾಕುವ ಭಕ್ತರಿಗಮೃತನೆರೆವ ಸಾಕಾರ ರೂಪದ ಪೆಪ್ಪರ್ ಮೆಂಟ್ 4 ಭೂಮಿಯ ತಂದ ಸೂಕರÀ ರೂಪ ಮೊರೆಯ ತೋರಿದ ಪೆಪ್ಪರ್ ಮೆಂಟ್ 5 ಧರುಣಿಯ ಪಾದದಿಂದಾಕಾಶಾಪಾತಾಳಾತ್ವರ ಧರುಣಿ ಪಾಲರ ಉರುಳಿಸಿ ಕೆಡಹಿದ ಕೊಡಲಿ ಮಹಿಮೆಯ ಪೆಪ್ಪರ್ ಮೆಂಟ್ 6 ಮಂಗನ ಜೊತೆಯಲಿ ಸೇರಿ ನಾರಿಯ ಭೂಜಂಗುಳಿ ನಡುಗಲು ಭೋರ್ಗರೆಯಲು ಮಳೆ ಮಂದರ ನೆಗÀಹಿದ ಪೆಪ್ಪರ್ ಮೆಂಟ್ 7 ರುಚಿ ಪೆಪ್ಪರ್ ಮೆಂಟ್ 8 ಕತ್ತಲೆಯನ್ನು ಹರಿಸುವ ದಿವ್ಯಸೂರ್ಯತೇಜ ಅರ್ಥಿಲಿ ಬುಧರು ಚಪ್ಪರಿಪ ದಿವ್ಯ ಪೆಪ್ಪರ್ ಮೆಂಟ್ 9
--------------
ಸರಸ್ವತಿ ಬಾಯಿ
ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಚರಣಕಮಲವನು ತೋರೋ ಪ ಮನವೆಂಬ ಮನೆಯನು ನಿರ್ಮಲಗೊಳಿಸು ತನುಮನಧನದಾಶೆಯ ನೀ ಬಿಡಿಸೊ 1 ಆರು ಮಂದಿಯು ಯನ್ನ ಗಾರುಮಾಡುವರು ಪಾರಗಾಣಿಸು ಬೇಗ ಶ್ರೀ ರಾಮದೇವ 2 ದಶರxಸುತ ನೀನು ಶಶಿಮುಖಕಾಂತನು ಶಶಿಧರನುತನೀ ಅಪಮಸಾಹಸನೊ 3 ಮೂರಾವತ್ಸೇಗಳಲ್ಯು ದೂರಾಪೋಗದೆ ನೀ ಕಾರುಣ್ಯದಿಂದ ಯೆನ್ನ ಶೇರಿರು ಹರುಷದಿ 4 ಸಿರಿವತ್ಸಾಂಕಿತ ನೀನು ತರಣಿಸುತನ ಸರವ ಕರಕರೆ ಬಿಡಿಸಲು ಸುರರ ವೃಂದವ ಬಿಟ್ಟು 5
--------------
ಸಿರಿವತ್ಸಾಂಕಿತರು
ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ