ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಶ್ರೀರಾಮ ಏನು ಕಾರಣ ಮಲಗಿದಿಯೊ ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ ಪಾತಕ ಹರದೈತ್ಯ ಭಂಜಾ ತಿಳುಪುವದು ಜ್ಯೋತಿರ್ಮಯರೂಪ ದರ್ಭಶಯನಾ1 ವನವಾಸ ತಿರಗಲಾರೆನೆಂದು ಮಲಗಿದೆಯೊ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ ಜನನ ಮರಣರಹಿತ ರಾಮ ತಿಳುಹುವದು ಪಾದ ಶ್ರೀದರ್ಭಶಯನಾ 2 ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ ಜನನಾಥ ಜಾನಕಿಕಾಂತ ತಿಳುಪುವದು ಎನಗೊಲಿದ ವಿಜಯವಿಠ್ಠಲ ದರ್ಭಶಯನಾ 3
--------------
ವಿಜಯದಾಸ
(ಈ) ಸರ್ವದೇವತಾಸ್ತುತಿಗಳು 1. ಶಂಕರ ಭಾಗವತಾಗ್ರೇಸರಾ ಶಿವಶಂಕರ ಭಾಗವತ ಪ್ರಿಯಂಕರ ಪ ಯೋಗಿ ಹೃತ್ಪದ್ಮಸ್ಥಿತ ಆಗಮನುತ ವಿಶ್ವನಾಥ ಶ್ರೀಗಣಪತಿ ಷಣ್ಮುಖ ಪಿತ ಭಾಗ್ಯದಾತ ಪ್ರಖ್ಯಾತ ಅ.ಪ ಬಾಲಚಂದ್ರಶೇಖರ ಹರ ಭವಹರ ಕಾಲಕಾಲ ಕಲ್ಮಷಹರ ಕರುಣಾಕರ ಶೂಲಪಾಣಿ ಡಮರುಗಾಕರ ಬಾಲಗೊಲಿದ ಭಸ್ಮಧರ ಶ್ರೀಲಲಿತಾ ಮನೋಹರ ನೀಲಕಂಠ ಮಹೇಶ್ವರ 1 ರಾಮನಾಮ ಬೋಧಕ ಭಕ್ತಪ್ರೇರಕ ಪ್ರೇಮರೂಪ ತ್ರ್ಯಂಬಕ ತ್ರಿಪುರಾಂತಕ ವಾಮದೇವ ವರಗಿರೀಶ ಕಾಮವೈರಿ ಕೃತ್ತಿವಾಸ ಶ್ರೀಮಜ್ಜಾಜಿಕೇಶವ ಸ್ವಾಮಿ ಭಜನದಾಯಕವರ 2
--------------
ಶಾಮಶರ್ಮರು
(ಉ) ಆತ್ಮನಿವೇದನಾ ಕೃತಿಗಳು ಅಭಯ ಪ್ರದಾಯಕ ಶ್ರೀರಮೇಶ ಉಭಯವೇದ ಪೂಜಿತ ಪಾದಪದ್ಮ ಪ ಅನುಮಾನಿಸದಿರೊ ಶಿಶುವಾದೆನ್ನೊಳು ಏನತಿ ಕೋಪವೂ ಅಪ್ರಮೇಯದೇವ ಅ.ಪ ಅನ್ನ ವಸ್ತ್ರಗಳನೀವುದೆನಗೆ ಯೆಂದು ಯನ್ನ ತಂದೆ ಜಾಜೀಶನೆಂದು ಬಂದೆನಲ್ಲದೆ 1 ಇನ್ನು ಕಾಯ್ವರಾರಿರುವರಯ್ಯಾ ಮನ್ನಿಸುತ್ತಾ ನೀ ನಿನ್ನಕಂದನಾ ಬಿನ್ನಪವನು ಕೇಳು ಚೆನ್ನಕೇಶವಾ 2
--------------
ಶಾಮಶರ್ಮರು
(ಉ) ಗುರುನಮನ ಶ್ರೀ ರಾಘವೇಂದ್ರರು ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ 1 ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ 2 ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ವೀರನಾರಾಯಣಭಕುತರ ಸಲಹದೆ 3
--------------
ವೀರನಾರಾಯಣ
(ಉ) ರುದ್ರದೇವರು ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ಪ ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ಅ.ಪ ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ 1 ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ 2 ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೊ ಸರ್ವತ್ರಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರತೆತ್ತಿಗನಂತೆÉ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ3
--------------
ವ್ಯಾಸರಾಯರು
(ಉ) ವಿಶೇಷ ಸಂದರ್ಭದ ಹಾಡುಗಳು 486 (1) ಹೆಜ್ಜಾಜಿಕೇಶವಸುಪ್ರಭಾತ ಏಳಯ್ಯ ಜಾಜಿಪುರೀಶ ಕೇಶವರಾಯ ಬೆಳಗಾಯಿತೇಳಯ್ಯ ಎದ್ದುರುಳಯ್ಯ ಪ ಕೋಟೆ ಚನ್ನಿಗನೆಂದು ಹೆಸರಾದವನೆ ಪೇಟೆ ಚನ್ನಿಗನಾಗಿ ನೆಲೆಸಿರುವವನೆ ಏಳಯ್ಯ ಬೆಳಗಾಯಿತು 1 ಗರುಡ ವಾಹನನಾಗಿ ಕಣ್ಗಾವಲಾಗಿಹನೆ ಕು- ದುರೆ ವಾಹನನಾಗಿ ಊರೆಲ್ಲ ಕಾಯುವನೆ ಏಳಯ್ಯ ಬೆಳಗಾಯಿತು 2 ಶ್ರೀದೇವಿ ಭೂದೇವಿಯರ ನಡುವೆ ಅರಸಾಗಿ ಬಾಧೆಹೊತ್ತಾಜನರ ಹಾರೈಸುತಿರುವನೆ ಏಳಯ್ಯ ಬೆಳಗಾಯಿತು 3 ನಾರದರು ತುಂಬುರರು ದೇವತೆಗಳೆಲ್ಲ ಎ- ದುರಲಿ ನಿಂದು ವಂದಿಸುತಿಹರಲ್ಲ ಏಳಯ್ಯ ಬೆಳಗಾಯಿತು 4 ವಂದಿ ಮಾಗಧರು ಜಯಘೋಷ ಮಾಡುತ್ತ ಮಂದಿ ಮಂದಿಯೆ ನಿಂತು ನುತಿಸುತ್ತಿಹರು ಏಳಯ್ಯ ಬೆಳಗಾಯಿತು 5 ಭಂಟರು ಬಂದು ಮಂಗಳರವದಿಂದ ಗಂಟೆ ಜಾಗಟೆಗಳ ನುಡಿಸುತಲಿಹರು ಏಳಯ್ಯ ಬೆಳಗಾಯಿತು 6 ಮುನ್ನಿನ ರವಿಯು ಉದಯಿಸುತಿರುವನು ಹೊನ್ನಿನ ಕಿರಣಗಳ ಪಸರಿಸುತಿರಿವನು ಏಳಯ್ಯ ಬೆಳಗಾಯಿತು 7 ಬೀದಿಯ ಜನರೆಲ್ಲ ಬೇಗ ಬೇಗನೆ ಎದ್ದು ಹಾದಿಯ ಸಿಂಗರಿಸಿ ಕಾಯುತಲಿರುವರು ಏಳಯ್ಯ ಬೆಳಗಾಯಿತು 8 ಪೇಟೆ ಚೆನ್ನಿಗನ ಕಡೆಯಿಂದ ದಂಡೊಂದು ಭ ರಾಟೆ ವಾದ್ಯಗಳ ನುಡಿಸುತ್ತ ಬರುತಿಹುದು ಏಳಯ್ಯ ಬೆಳಗಾಯಿತು 9 ಕೊಂಬು ಕಹಳೆಗಳ ಊದುವರು ಕೆಲವರು ತುಂಬು ಮಂತ್ರಗಳ ಹೇಳುವರು ವೈಷ್ಣವರು ಏಳಯ್ಯ ಬೆಳಗಾಯಿತು 10 ಸುಮಂಗಲೆಯರು ಕಳಸ ಹೊತ್ತಿಹರು ಸುಮ್ಮಾನದಿ ಭಕುತರು ಕುಣಿಯುತಲಿಹರು ಏಳಯ್ಯ ಬೆಳಗಾಯಿತು 11 ಅಭಯ ಹಸ್ತನೆ ಏಳ ಕಮಲವದನನೆ ಏಳು ಉಭಯ ಜನರುಗಳೆಲ್ಲ ದರುಶನಕೆ ಕಾದಿಹರು ಏಳಯ್ಯ ಬೆಳಗಾಯಿತು 12 ನಿನ್ನ ಭಕ್ತರು ನಿಂತು ಧ್ಯಾನ ಮಾಡುತಲಿಹರು ಎನ್ನರಸ ಜಾಜಿಪುರ ವರದ ಕೇಶವರಾಯ ಏಳಯ್ಯ ಬೆಳಗಾಯಿತು 13
--------------
ನಾರಾಯಣಶರ್ಮರು
(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ) ಬೇಡಿಕೊ ಮೂಢಾ ಬೇಡಿಕೊ ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ ಮಾಡು ಪೂಜೆಯನು ಯಥಾಮತಿ ಶಕ್ತಿ ದೂಡುತ್ತ ದುರುಳರ ಕುಚಿತ್ತಯುಕ್ತಿ ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ. ಲಾಭಾಲಾಭ ಜಯಾಪಜಂiÀiಗಳು ಸ್ವಾಭಾÀವಿಕವಾಗಿ ಬಹ ಹಗಲಿರುಳು ನಾ ಭಾಗಿ ವರದನ ಪದ ಪದ್ಮ ನೆರಳು ನೀ ಭಜಿಸಿದ ಮೇಲೆ ಬಾಯೊಳು ಬೆರಳು 1 ಯತ್ನವಿಲ್ಲದೆ ಬಹ ನಷ್ಟಗಳಂತೆ ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ ನೂತ್ನವಾದ ಮೋಹವನು ಬಿಡು ಭ್ರಾಂತೆ ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ 2 ಅರಿ ಮಿತ್ರೋದಾಸೀನರಿಲ್ಲವು ಹರಿಗೆ ಸರಿಯಾಗಿ ನಡೆಸುವ ಸರ್ವ ಜೀವರಿಗೆ ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ ಸುರ ವೃಕ್ಷದಂತೆ ಕಾರಣವಾಹ ಸಿರಿಗೆ 3 ಋಣವಿಲ್ಲದೆ ವಸ್ತು ಕ್ಷಣವಾದರಿರದು ಉಣುವ ಭೋಗಗಳೆಂದು ತಪ್ಪವು ನೆರದು ಅಣು ಮಹತ್ತುಗಳಂತರಾತ್ಮನ ಬಿರುದು ಗಣನೆ ಮಾಳ್ಪರ ಕೂಡಿ ನೆನೆ ಮನವರಿದು 4 ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ ಶ್ರೀಶನ ನೆನೆವುದೆ ಸಕಲ ವೇದಾರ್ಥ ಶೇಷಗಿರೀಶನು ಸತ್ಪುರುಷಾರ್ಥ ದಾಸಗೆ ತಾನಾಗಿ ಕೊಡಲು ಸಮರ್ಥ5
--------------
ತುಪಾಕಿ ವೆಂಕಟರಮಣಾಚಾರ್ಯ
(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
(ಊ) ಕ್ಷೇತ್ರವರ್ಣನೆ ಹುಲಿಗನಮೊರಡಿ ಶೇಷಾದ್ರಿಯನು ನೋಡಿರೋ ಸೇವಕಪರಿ ತೋಷಾದ್ರಿಯನು ಕಾಣಿರೊ ಪ ಶೇಷಾದ್ರಿಯನು ನೋಡಿ ದೋಷಾದ್ರಿ ಹುಡಿಮಾಡಿ ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ ಚಿನ್ನದಗಿರಿಯಂದದಿ ರಂಜಿಸುವುದು ಬಣ್ಣದೊಳತಿ ದೂರದಿ ಸಣ್ಣದಾಸರು ಗಿರಿ ರನ್ನಪೋಲು ವರ್ಣಹ ಶಯನನ ಕಣ್ಣಲಿ ಕಾಣಿಪ 1 ಬಗೆ ಬಗೆ ವೃಕ್ಷಗಳು ಬನಂಗಳು ಬಗೆ ಬಗೆ ಪಕ್ಷಿಗಳು ಬಗೆ ಬಗೆ ಮೃಗಗಳು ಸೊಗಸಿನೊಳಿರೆ ಬಹು ಬಗೆ ಬಗೆ ಧಾತುಗಳಿಗೆ ನೆಲೆಯಾಗಿಹ 2 ಯುಗಗಳ ಸಂಖ್ಯೆಯೊಳು ನಾಮಂಗಳು ಯಗಳದ್ವಯ ಮೆನಲು ಯುಗಮೊದಲೊಳಗೆ ಪನ್ನಗಗಿರಿಯನೆ ತ್ತೇತಾ ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3 ದ್ವಾಪರಯುಗದೊಳಗೆ ವೆಂಕಟನಾಮ ವೀ ಪರ್ವತತಕ್ಕೊದಗೆ ಶ್ರೀಪುಲಗಿರಿಮುಖ ರೂಪನೀಯುಗದೊಳು ಶ್ರೀಪತಿಯುತ್ತ ನಿರೂಪದೊಳೊಪ್ಪುವ 4 ದೂರದಿ ಶೋಭಿಸುವ ದುರ್ಜನರಿಗೆ ದೂರವೆ ಮಂದಿರವು ಚಾರುವಿಮಾನ ಪ್ರಾಕಾರವ ತೋರಿಪ ವಾರಿಜಾಸನ ಪಿತ ವರದ ವಿಠಲನಿಹ 5
--------------
ವೆಂಕಟವರದಾರ್ಯರು
(ಊ) ಯತಿವರರು ಶ್ರೀ ಜಯತೀರ್ಥರು ಎದುರಾರೊ ಗುರುವೆ ಸಮರಾರೊ ಪ ಮದನ ಗೋಪಾಲನ ಪ್ರಿಯ ಜಯರಾಯ ಅ.ಪ ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡÀÀಗೋರು ನಿಮ್ಮ ಭೀತಿಯಲಿ 1 ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆಂತೆಂಬಚಟುಲಾ ತಪದಿಂದ ಖಂಡಿಸಿ ತೇಜೋ-ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ2 ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರÀ ಹೃತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ 3 ವೇದ ಶಾಸ್ತ್ರಗಳೆಂಬೊ ಶೃಂಗಗಳಿಂದ ಸು-ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು 4 ವ್ಯಾಸ ಸೂತ್ರಗಳೆಂಬ ಮಂದರವನು ವೇದರಾಸಿಯೆಂಬ ವಾರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯ ಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದೆ ಯತೀಂದ್ರ5 ವನಜನಾಭನ ಗುಣಮಣಿಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಡಗಿರೆ ಸ-ಜ್ಜನರಿಗೆ ಟೀಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೊ ಧೀರ 6 ಅರ್ಥಿಮಂದಾರ ವೇದಾರ್ಥ ವಿಚಾರ ಸ-ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ-ತೀರ್ಥಕರ ಜಾತ ಜಯತೀರ್ಥ ಯತೀಂದ್ರ 7
--------------
ವ್ಯಾಸರಾಯರು
(ಊ) ಲೋಕನೀತಿ ಹರೇ ಪಾಹಿ ಮಾಂ ಸದಾ ಪ ಭವದೊಳೆನ್ನ ಬಳಲಿಸಲಿ ತವ ಹಿತವೇನಿಹುದಿದರೊಳು ತವಕದಿಂದ ಕೊಡು ದಯಾಳು ನವವಿಧ ಭಕುತಿ ನಿನ್ನೊಳು 1 ಲೋಕ ಪಾಲಕನೆಂಬೊ ಬಿರುದು ಈ ಕಾಲಕೆ ತೋರೊ ಒಲಿದು ಸಾಕಲಾರೆನೆನಲು ಬಿಡದು ನೀ ಕರುಣಿಸು ದÀಯಾಸಿಂಧು 2 ಧೀರ ಶ್ರೀ ಹನುಮೇಶವಿಠಲಾ ಮೀರಿದ ಕಾರ್ಯವು ಇದಲ್ಲಾ ಸಾರ ಮಾರ್ಗ ತೋರಿ ಸುಫಲಾ ಮಾರಜನಕ ಕೊಡು ಗೋಪಾಲ 3
--------------
ಹನುಮೇಶವಿಠಲ
(ಊ) ಲೋಕನೀತಿ ತತ್ವ ಕೃತಿಗಳು ಅನುಭವವಿಲ್ಲದೇ ಅರಸಿದಡಾಹುದೇ ಆ ಹರಿದರುಶನವೂ ಪ ಮನುಮುನಿಯಾಗಲೀ ಮಾನ್ನವರಾಗಲೀ ಸನಮುಖರಾಗಲೀ ಸಾಧುಗಳಾಗಲೀ 1 ಅರಸು ತಾನಾಗಲೀ ಆಣಯತನಾಗಲಿ ಸುರಮಣಿ ಸೋಲಿಪ ಸುಂದರನಾಗಲಿ 2 ಪಂಡಿತನಾಗಲೀ ಪಾಮರನಾಗಲೀ ಅಂಡಜಗಮನನಾಗಲೀ ಶ್ರೀಗುರುವೆ ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಊ) ಲೋಕನೀತಿಯ ಕೃತಿಗಳು ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು ಭ್ರಷ್ಟನೆನಿಸದೆ ಬಿಡವು ಇವನ ಪ ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು ಹರಿಯಿಂದ ಹತನಾಗಿ ಹೋದಾ ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ ತರಿದನಲ್ಲವೆ ಭೀಮ ತಾನು 1 ದಾಯವನು ಲೋಭದಿಂ ಕೌರವನು ಪಾಂಡವರಿ ಗೀಯದುದಕವನೇನು ಪಡೆದಾ ರಾಯದಶರಥ ತನ್ನ ಸತಿಸುತರ ಮೋಹವಿರೆ ಆಯುವಿಂ ಗತನಾಗಿ ಹೋದಾ 2 ಜಮದಗ್ನಿಯ ಹೋಮಧೇನುವಂ ಮದದಿಂದೆ ಕಾರ್ತಿವೀರ್ಯಾರ್ಜುನನು ಕೊಳಲು ಅಮಿತಬಲನಾಪರಶುಧಾರಿಯು ತಾನು ಸಮರದೊಳೆ ಸವರುತ್ತ ಅವನ ಕಳೆದ3 ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು ವಿಷ್ಣುಚಕ್ರವು ಕೊಂದಿತವನ ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು 4 ವಾಸುದೇವನ ಮೇಲಸೂಯೆಯಿಂ ಪೌಂಡ್ರಕ ವಾಸುದೇವನೊಳು ಅಳಿದ ಕಂಡ್ಯಾ ದೂಷಣೆಯು ಡಂಬಗಳು ನಾಶನವ ಗೈಯುವುವು ಈಶ ಸುಜನರಿಗಾಗಿ ಭಾವಿಸುವ ಜಗದೀ5 ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ ಅಪಹಾರಗೈದ ಶ್ರೀರಾಮ ತಲೆಯಾ ರಿಪುಗಳಾ ಮಧು ಕೈಟಭರ ಮಮತೆಯನು ಉಪಮೆಯಲ್ಲಿದು ಮಾಯಿ ಮುರಿದ ನೋಡಾ 6 ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ ಸರ್ವವೂ ಹೆಜ್ಜಾಜಿ ಕೇಶವಾ ಯೆಂದು ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ ಒರ್ವನೇ ಜಗದೀಶನೆಂದು ನಮಿಸೀ 7
--------------
ಶಾಮಶರ್ಮರು
(ಋ) ಕ್ಷೇತ್ರವರ್ಣನೆ (1) ಮೇಲುಕೋಟೆ ಯತಿರಾಜ ಸಂಪತ್ಕುಮಾರಾ ಸ ತ್ಕøತದೊಳಗಿರಿಸೆನ್ನ ಧೀರಾ ಪ ಸತತ ಶ್ರೀಮದ್ವೈಷ್ಣವರನಾ ನುತಿಸುವಾನಂದ ದೊಳಗಿರಿಸೈ ಪತಿತಪಾವನ ಕಂಕಣಾಧ್ರುತ ಕ್ಷಿತಿಯ ಪಾಲ ಮಹಾನುಭಾವನೆ 1 ನೋಡಲಿಚ್ಚೈಸಿ ನಾಂ ಬಂದೆ ನನ್ನ ಮೂಢಾಕೃತದೊಳು ನಿಂದೆ ಕೇಡುಗಳು ಬಂದೆನ್ನ ವಿಧ ವಿಧ ಬಾಧೆ ಪಡಿಸುತ್ತಿರುವದಿದೆಕೊ ನೋಡಿ ಸುಜನರ ಕೂಡಿ ಭಜನೆಯ ಮಾಡುವೆನು ಶ್ರೀಮಾಧವಾಗ್ರಣಿ 2 ತುಲಶಿಮಣಿಹಾರ ಲೀಲಾ ಸ ತ್ಫಲತಂತ್ರ ದಾಸಾನುಕೂಲಾ ಕಾಲಕಲನಹುದೊ ಶ್ರೀಮನ್ ಬಾಲಬ್ರಹ್ಮಚಾರಿ ಮದ್ಗುರು ಮೇಲುಕೋಟೆಯೊಳಿರುವೊ ನಿಜವರ ಲೀಲಾಮಾನುಷವಿಗ್ರಹನೆ ನಿಜ ಯತಿರಾಜ ಸಂಪತ್ಕುಮಾರಾ 3
--------------
ಚನ್ನಪಟ್ಟಣದ ಅಹೋಬಲದಾಸರು
(ಋ) ತಾತ್ತ್ವಿಕ ಕೃತಿಗಳು ಜಗವ ಪೆತ್ತಿಹ ಪ್ರಭು ನೀನಯ್ಯ ಶ್ರೀರಂಗದ ವಿಜಯ ಪ ಸಾಸಿರ ಶೀರ್ಷನೆ ಸಾಸಿರನೇತ್ರನೆ ಭಾಸಿಸುವಾನಂತ ಪಾದನೆ ಹಸ್ತನೆ 1 ಆದಿಮಧ್ಯಾಂತರಹಿತ ಅಸಂಖ್ಯನಾಮನೆ ಆಧಾರಮೂರುತಿ ಸಾಧುಸಂರಕ್ಷಕ 2 ಆಖಿಲಾಂಡಕೋಟಿ ಬ್ರಹ್ಮಾಂಡ ನಾಯಕನೆ ಸಕಲಚರಾಚರ ಕರ್ತೃವು ನೀನೆ 3 ಚರಂಗಳೆಲ್ಲ ಯೀ ಭೂಮಿತಳವೋ ಪರಮನಾಭಿಯೆ ಆಕಾಶವಯ್ಯ 4 ಶಿರವೇ ವೈಕುಂಠ ಕವಿಗಳೆ ದಶದಿಕ್ಕು ಉರುತರ ಮನಸೇ ಮನ್ಮಥನಹುದು 5 ಹರಿಯ ಪಾಶ್ರ್ವಂಗಳೆ ಹಗಲು ರಾತ್ರಿಗಳು ಪರಮವೇದಂಗಳು ಸಕಲಶರೀರವು 6 ಮುಖ ಭುಜ ತೊಡೆ ಪಾದಗಳಲಿ ವರ್ಣಂಗಳ ಸುಕರದಿ ಪಡೆದ ಭೂಸೂತ್ರಧಾರಿಯು ನೀಂ7 ಇಂದ್ರ ಮೊದಲಾದ ದೇವರೆಲ್ಲ ನಿನ್ನಯ ಮುಖ ಚಂದ್ರಸೂರ್ಯರ ಕಣ್ಣಿನಿಂದ ಪಡೆದಾತನೆ 8 ಮಗುವಾದೆನ್ನ ಪಿಡಿ ಮೂಜಗದೊಡೆಯ ಹಗರಣ ಹರಿಯೊ ಜಾಜಿಕೇಶವ 9
--------------
ಶಾಮಶರ್ಮರು