ಒಟ್ಟು 323 ಕಡೆಗಳಲ್ಲಿ , 70 ದಾಸರು , 302 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಶೇಷದೇವರು ಪೋಷಿಸೆನ್ನನು ನಿರುತ ಶೇಷದೇವ ದೋಷ ನಾಶನಗೊಳಿಸಿ ಲೇಸಾಗಿ ಪಿಡಿಕರವ ಪ ತಲ್ಪ ಅನುಜ ಪೂರ್ವಜನಾ ಘನಸೇವೆಯನು ಗೈದು | ಫಣಿರಾಜನೆ ವಿನಯದಲಿ ಬಿನ್ನೈಪೆ | ನಿನಗಶನವಾದಾತ ಅನುದಿನ 1 ಭೂಗಗನ ಪಾತಾಳ | ಸಾಗರವ ವ್ಯಾಪಿಸಿದ ಯೋಗ ಸಾಧನ ಶೂರ | ನಾಗನಾಥ ಬಾಗಿಬೇಡುವೆ ಭವದ ರೋಗಕೌಷಧವಾದ ಭಾಗವತ ಶ್ರವಣ ಸುಖರಾಗದಲಿ ನೀಕೊಟ್ಟು 2 ಸಾನಿಸಿರಾಂಬಕ ನಮಿತ | ಸಾಸಿರಾನನನಾದ ವಾಸುಕೀವರ | ವಾರುಣೀಶ ನಿನ್ನ || ಹಾಸಿಗೆಯಗೈದಂಥ ಶ್ರೀ ಶಾಮಸುಂದರನ ನಿತ್ಯ 3
--------------
ಶಾಮಸುಂದರ ವಿಠಲ
ಶ್ರೀ ಶ್ರೀನಿವಾಸ ಭಕುತರ ಪೋಷ ಮಾಂ ಪಾಹಿ ಸುರೇಶ ಪ ಆರಾಧಕ ಪರಿವಾರವ ಪೊರೆಯಲು ಧಾರುಣಿಯೊಳು ಶಿರಿವಾರನಿವಾಸ ಅ.ಪ ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ ಗುರುಮೂರುತಿ ಪ್ರಿಯ 1 ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ ಸುಂದರಕಾಯಾ 2 ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ ಜಲಧಿ ಶಯನ ಮಂಗಳ ರೂಪನೆಭವ ಕಲುಷ ವಿದೂರ 3 ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ ಲೇಷ್ಟ ಪ್ರದಾತಾ 4 ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ ಶೇಷಗಿರೀಶ5
--------------
ಕಾರ್ಪರ ನರಹರಿದಾಸರು
ಶ್ರೀ ಶ್ರೀಪಾದರಾಜರು ಧರೆಯೊಳು ಮೂರೇಳು ಕುಮತರ ಭಾಷ್ಯವಕಿರುಕು ಹಾವಿಗೆ ಎಂದದಿ ರಚಿಸೆಚರಣದಿಂದಲಿ ತುಳಿದು ಶತ್ರು ಖಳರಾ ಕರೆದುಮೊರೆಯಿಡುತಿವೇ ಶಾಸ್ತ್ರಸೆರೆಯ ಬಿಡಿಸೀರೆಂದು ಪ . . . ಹರಿಪ್ರೀತಿಗಾಗೆ ನಿರ್ಮಿಳ ಸುಕೃತಂಗಳಾಧರಿಸಿದಾ ಕುಸುಮಪರಿಮಳಂಗಳಾನರನೊಬ್ಬ ದೂಷಿಸೆ ಕೇಳಿ ಸರ್ವವನುಳುಹೆಅರಕ್ಷಣದಿ ಅವನ ತನು ಬಿರಿಯೆ ರಕ್ಷಿಸಿದೆ 2 ಸುರನಾಥಪುರಕಂದು ಘನ ಪುಷ್ಪವಿಮಾನದಿಸರಿವುತ್ತಲಿರೆ ರಘುನಾಥೇಂದ್ರರವರಯೋಗಿ ವೃಂದಾವನ ಪ್ರದಕ್ಷಿಣೆ ಗೈಸಿಕರೆದು ಭಾಷಿಸಿ ಕಳುಹಿದಾಶ್ಚರ್ಯ ಚರಿತಾ 3 ಸರಸಿಜಾಕ್ಷನ ಧ್ಯಾನದೊಳಿರೆ ವ್ಯಾಸಮುನಿಯಾಉರಗ ಬಂಧಿಸಲು ಧ್ಯಾನದೊಳೀಕ್ಷಿಸಿಮರುತ ವೇಗದಿ ಪೋಗಿ ಫಣಿಪನೊಡನೆ ಭಾಷಿಸಿತೊಡರು ಬಿಡಿಸಿದ ಅಹಿಪಾಶವ ಗುರುರಾಯ 4 ಸಿರಿಕೃಷ್ಣ ಪದಕಂಜಭೃಂಗನೆಂದಿನಿಸುವವರ ಹೇಮವರ್ಣತೀರ್ಥರ ಕುವರಸುರನರೋರುಗರೋಳು ಪ್ರಖ್ಯಾತರೆನಿಸುವಅರಿಶರಭ ಭೇರುಂಡನೆನಿಪ ಶ್ರೀಪಾದರಾಯ 5
--------------
ವ್ಯಾಸರಾಯರು
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ. ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ ಫಣಿವೇಣಿ ಮಂಜುಳವಾಣಿ ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1 ದೂರೆ ಶುಭ್ರಾಂಬರೆಧಾರೇ ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ ಕರಪಲ್ಲವ ಚತುರೇ 2 ವರದೇ ರಸನದೆ ನಿಂತವಸರದೇ ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ ತೆರದಿಂ ಕುಡುವರಮಂ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ ಲಾಮವೆಸೆವ ವರ ಫಣಿಯಾ ಭ್ರೂಮಧ್ಯದೊಳೆಳೆವರೆಯಂತೊಪ್ಪುವ ನಾಮದ ಪಿರಿನೊಸಲಾ1 ತಾಮರಸಾಯತನೇತ್ರದಾನತಸು ಕ್ಷೇಮಾಂಕುರದ ನೋಟದ ಚಾಮೀಕರ ಕುಟ್ಮಲ ನಾಸಿಕದಭಿ ರಾಮ ಸುಮೌಕ್ತಿಕದಾ2 ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ ಸೋಮವದನದೆಳನಗೆಯೂ ಪೊಳೆವಟ್ಟ ಕೌಮುದಿಯಾ ಸೊಗಸಿನಾ 3 ರಾಮಣೀಯಕವದನ ಮಕರಕುಂಡಲದ ಸು ರಾಮಯದ ಕದಪಿನ ಕಾಮನೀಯ ಕಂಬುಕಂಠದ ಸಿರಿತುಳ ಸೀ ಮಂದಾರಮಾಲೆಯ 4 ಜೀಮೂತ ಸವಿಯನೆ ರಂಜಿಪ ಸು ಶ್ಯಾಮಲ ರುಚಿರಾಂಗದ ಕಮಲ ಕಂಬು ನಿ ಸ್ಸೀಮ ಚಕ್ರಾಯುಧಂಗಳಾ 5 ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ ವ್ಯಾಮೋದ ಗಂಧ ಲೇಪದ ಸೌಮಾನಜಂ ತಾಳ್ದುಪವೀತದ ಮಣಿ ಸ್ತೋಮಾಭರಣಂಗಳಾ 6 ಸಾಮಾಜಿಕರ ಸನ್ನಿಭ ರಂಜನದು ದ್ದಾಮ ಸುಬಾಹುಗಳಾ ನೇಮಿತಾಂಗದ ತೋಳಬಂದಿ ಕಂಕಣಮುಂ ಗೈಮುರಾರಿ ಮುದ್ರೆಯಾ 7 ಐಮೊಗದಹಿಯ ತೆರದ ಕರಕಮಲದ ಸೈಮಿರುಪಂಗುಲಿಗಳಾ ರೋಮಾವಳಿಯ ಪೊಳೆವ ಪೊಡೆವಲರ ಪಿ ತಾಮಹಮುದಿತ ನಾಭಿಯಾ 8 ಹೇಮಾಂಬರದಸಿಮಧ್ಯದ ಕಾಂಚೀ ಧಾಮದ ಕಟಿತಟದ ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9 ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮಹಿಮೆಯ ಚೆಲ್ವಿನಾ ಪ್ರೇಮದೊಳಾನತರಂ ಸಲಹುವ ಸುರಪುರ ಮ - ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10
--------------
ಕವಿ ಲಕ್ಷ್ಮೀಶ
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ
ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ
ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ 1 ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ ರೊಳಗೆ ಮೇಲೆನಿಪ ಸುಶೀಲ ತುಳಿದೆ ಬಕ ಆಘಪ್ರಲಂಬಾದಿ ದೈತ್ಯಜಾಲ ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್ ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ 2 ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ ತೋರಿದ ಪರಾತ್ಪರ ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು ಅಪ್ರಮೇಯ ಜಾಜೀಶ್ವರ 3
--------------
ಶಾಮಶರ್ಮರು
ಶ್ರೀರಂಗ ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ ವಜ್ರಮಾಣಿಕದ ಕಿರೀಟವನಿಟ್ಟು ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು ವಜ್ರದ ಕರ್ಣಕುಂಡಲ ಅಳವಟ್ಟು ಸಾಜದ ಅಧರಚಂದವಿನ್ನೆಷ್ಟು 1 ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ ಅಬ್ಜದಂತೆಸೆವಾ ನಯನದಾನಂದ ಕುಸುಮವ ಪೋಲುವ ನಾಸಿಕದಂದ ಕದಪು ಹೊಳೆಯುತ್ತ ಬಂದ 2 ಕಂಠದೊಳಗೆ ಇಟ್ಟ ಕೌಸ್ತುಭಮಣಿಯು ಎಂಟು ಪದಕಗಳನಳವಡಿಸಿದ ಅಣಿಯು ಗಂಟೆ ಗೆಜ್ಜೆವುಡಿದಾರದ ಫಣಿಯು ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು 3 ಶಂಖಚಕ್ರವು ಗದೆ ಆಭಯಹಸ್ತಗಳು ಪಂಕಜಮುಖಿ ಇರುವ ವಕ್ಷಸ್ಥಳವು ಶಂಕರನಪಿತನ ಪಡೆದ ನಾಭಿದಳವು ಶಂಕೆ ಇಲ್ಲದ ಕಣಕಾಲಿನ ಹೊಳವು 4 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನಳವಟ್ಟು ಚಂದದಿಂ ವಜ್ರದಾವುಗೆಯ ಮೆಟ್ಟು ತ [ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು5 ವಜ್ರಾಂಕುಶ ಧ್ವಜರೇಖೆಗಳಿಂದ ಪದ್ಮಪಾದದ ಕೆಂಪುಗಳು ಬಹುಚಂದ ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ 6
--------------
ಯದುಗಿರಿಯಮ್ಮ
ಶ್ರೀರಂಗನಾಟದ ಪರಿಯ ತೋರುದು ನೋಡಚ್ಚರಿಯ ದೇವಕಿಕಂದ ದೇವಮುಕುಂದ ಮಾವಕಂಸನ ಕೊಂದ ಧ್ರುವ ಫಣಿ ಮೆಟ್ಯಾಡಿದ ಚಂದ ಕಾವನಯ್ಯ ಗೋವಿಂದ 1 ಆಸುಹೀರಿದ ಪೂತಣಿಯ ಮೊಸರು ಹಾಲು ಬೆಣ್ಣಿಗೆ ದಣಿಯ 2 ಕುಸುಮನಾಭನೆ ಶೇಷಶಯ್ಯ ಲೇಸಾಗ್ಹೊರೆವ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಹರಿಸ್ತುತಿ ಜೈ ಹರಿ ವಿಠ್ಠಲ ಪಾಂಡುರಂಗ 1 ರಕುಮÁಯೀಧವ ಪಾಂಡುರಂಗ 2 ಸಾಧುಜನಾರ್ಚಿತ ಪಾಂಡುರಂಗ 3 ಕಾಲಾಂತಕಪ್ರಿಯ ಪಾಂಡುರಂಗ 4 ಕರಿರಾಜವರದ ಪಾಂಡುರಂಗ 5 ವನಜಾಸನನುತ ಪಾಂಡುರಂಗ 6 ಕುಟಿಲಾಂತಕಹರೆ ಪಾಂಡುರಂಗ 7 ಭಾವಜಪಿತಹರೆ ಪಾಂಡುರಂಗ 8 ಫಣಿಪತಿಶಯನ ಪಾಂಡುರಂಗ9 ದುರಿತವಿದೂರ ಪಾಂಡುರಂಗ 10 ವನಜನಾಭಹರೆ ಪಾಂಡುರಂಗ 11 ವಾತಾತ್ಮಜನುತ ಪಾಂಡುರಂಗ 12 ಜಗದೋದ್ಧಾರ ಪಾಂಡುರಂಗ 13 ಪುಂಡರೀಕವರದ ಪಾಂಡುರಂಗ 14 ದೀನಮಂದಾರ ಪಾಂಡುರಂಗ 15 ಸಿಂಧುಶಯನಹರೆ ಪಾಂಡುರಂಗ 16 ಶ್ರೀಕರಸೇವಿತ ಪಾಂಡುರಂಗ 17 ನರಕಾಂತಕಹರೆ ಪಾಂಡುರಂಗ 18 ಸಾಮಗಾನಪ್ರಿಯ ಪಾಂಡುರಂಗ 19 ಕ್ಷಾತ್ರಕುಲಾಂತಕ ಪಾಂಡುರಂಗ | ಧಾತ್ರೀರಮಣ ಪಾಂಡುರಂಗ 20 ಕಾಮಿತಫಲದ ಪಾಂಡುರಂಗ 21 ಪಾವನಚರಿತ ಪಾಂಡುರಂಗ 22 ಉತ್ತಮದೇವನೆ ಪಾಂಡುರಂಗ 23 ಸೋಜಿಗಪುರುಷನೆ ಪಾಂಡುರಂಗ24 ಭಾನುಪ್ರಕಾಶ ಪಾಂಡುರಂಗ 25 ಸುರಭಿನಿವಾಸ ಪಾಂಡುರಂಗ 26 ಭಕುತಪೋಷಕ ಪಾಂಡುರಂಗ27 ತ್ರಿಗುಣಾತೀತಾ ಪಾಂಡುರಂಗ 28 ಚಂದ್ರಮೌಳಿಹಿತ ಪಾಂಡುರಂಗ26 ಸುರಮುನಿಸನ್ನುತ ಪಾಂಡುರಂಗ30 ದಾನವಾಂತಕ ಪಾಂಡುರಂಗ 31 ಭೂಸುರವಂದಿತ ಪಾಂಡುರಂಗ32 ಸೃಷ್ಟಿಗೊಡೆಯ ಶ್ರೀ ಪಾಂಡುರಂಗ 33 ಉರ್ವಿರಮಣ ಪಾಂಡುರಂಗ 34 ಶೃತಿತತಿವಿನುತ ಪಾಂಡುರಂಗ 35 ಜೀವೋತ್ತಮನುತ ಪಾಂಡುರಂಗ36 ನಾಕಾಧಿಪನುತ ಪಾಂಡುರಂಗ 37 ಮೋದದಾಯಕ ಪಾಂಡುರಂಗ38 ಭಾಗವತಪ್ರಿಯ ಪಾಂಡುರಂಗ39 ಕರುಣಿಗಳರಸನೆ ಪಾಂಡುರಂಗ40 ತಾಪತ್ರಯಹರೆ ಪಾಂಡುರಂಗ41 ಕರ್ಮಾಧಿಪತೆ ಪಾಂಡುರಂಗ42 ಕಪಟನಾಟಕ ಪಾಂಡುರಂಗ43 ಬಾದರಾಯಣ ಪಾಂಡುರಂಗ44 ಮುಂದೆ ದಾರಿಯೇನೋ ಪಾಂಡುರಂಗ 45 ಪಾಶಪರಿಹರಿಸೊ ಪಾಂಡುರಂಗ 46 ಎಷ್ಟು ಪೊಗಳಲೋ ಪಾಂಡುರಂಗ 47 ಇಷ್ಟದಾಯಕ ಪಾಂಡುರಂಗ 48 ಜನುಮ ನೀಗಿಸೊ ಪಾಂಡುರಂಗ 49 ಘನ್ನಮಹಿಮನೆ ಪಾಂಡುರಂಗ 50 ದೀನವತ್ಸಲನೆ ಪಾಂಡುರಂಗ 51 ಪಾದ ಪಾಂಡುರಂಗ52 ಶುಭಮಂಗಳಹರೆ ಪಾಂಡುರಂಗ 53 ಶ್ರೀಶಕೇಶವ ಪಾಂಡುರಂಗ 54
--------------
ಶ್ರೀಶ ಕೇಶವದಾಸರು
ಷಟ್ಪದಿ ಭೃಂಗ ದಿವಿಜ ಲಲಾಮ ಶುಭಗುಣ ಸಾಂದ್ರ ಗುರುವರನೇಸೇರಿಹೆನು ತವಶಿಷ್ಯ ಕೋಟಿಲಿ ಬೀರಿ ಕರುಣಾ ದೃಷ್ಟಿ ಶ್ರುತಿ ಭಂಡಾರ ಸೂರೆಯ ಮಾಡ್ವ ಹಾ ಹಾ ಕಾರದಿಂ ತಪಿಪ 1 ಬಾಲ ನೆನ್ನಯ ಶಿರವ ನಿಮ್ಮಯ ಶೀಲಕರದಿಂ ಭೂಷಿಸುತ ಕವಿತಾ ಲತಾಂಗಿಯ ತಾಂಡವಾಡಿಸಿ ಚಂದ್ರಮೌಳಿನುತಕಾಳಿಮನಕುಮುದೇಂದು ಜಗಸಂ ಚಾಲಕ ಪ್ರಭು ಮುಖ್ಯ ಪ್ರಾಣಗುಪಾಲಿಸುತ ಸತ್ತಾದಿ ಸಕಲವ ಪೊರೆದು ಮೆರವಂಥಾ 2 ಪತಿ ಮಾ ವಂದ್ಯ ನಿರುಪಮ ನಾರಸಿಂಹನುಅಂದು ನಿಮ್ಮನು ಕಾಯ್ದ ತೆರಪೊರೆ ಶ್ರೀ ಸುಧೀಂದ್ರ ಸುತ 3 ಏನಿದೇನಿದು ನಿಮ್ಮ ಮಹಿಮೆಯಮಾನವರಿಯಲು ಸುರರಿಗಾಗದುಮಾನವರ ಪಾಡೇನು ಶಿರತೂ ಗುತಿಹ ಫಣಿರಾಜಮಾನ್ಯ ಸುರ ಋಷಿ ಕರುಣ ಬಲವೋಮೇಣ್ಪರಿಸರನ ಕೃಪೆಯೊ ಕಾಣೆನುದಾನಿ ನರಹರಿ ವರದ ಫಲವೋ ಮೊತ್ತವೇ ಯೆಂಬೆ 4 ಜಂಭಾರಿ ಮೇಣಾಬಾಲ ಸುಬ್ರಹ್ಮಣ್ಯನೋ ಶಂಕಿಪುದು ಸುರನೀಕಾ 5ಸೂಕ್ಷ್ಮಮತಿಗಳೆ ಪೇಳಿ ಸರ್ವಾಧ್ಯಕ್ಷನವತಾರವನು ಯಾವ ಸುಲಕ್ಷಣ ಭಕುತಗೇನೆ ಮಾಡಿಹ ನಮ್ಮಗುರುವ ಬಿಡೆಪಕ್ಷ ವಹಿಸದೆ ಪೇಳಿ ಯಾವನು ಲಕ್ಷ್ಯ ಮಾಡದೆ ಕಷ್ಟ ಮಾತೆಯಕುಷಿಯಂ ಬಂದಿಹನು ಮುಮ್ಮುಡಿ ನಮ್ಮ ನುದ್ಧರಿಸೆ 6 ವ್ಯಾಜ ವಿಲ್ಲದಲೆದೈತ್ಯ ಪಿತತಾನಿತ್ತ ಬಾಧೆಗೆ ನಾಥ ನರಹರಿ ಬಂದುದಚ್ಚರಿಯಂತೆ ಭಾವಿಸೆ ಭಕ್ತವತ್ಸಲ ಬಿರುದು ಪೊಳ್ಳೆಬಿಡೆ 7 ಸತಿ ಸಂಹಾರ ಕಾಟವು ಮತ್ತೆ ಯತಿ ಯಂತಾಗೆ ಹಾಗೆಯೆನಿಂತಿರಲು ವೃಂದಾವನದಿ ಕಾಡುವರು ಶಿಷ್ಯಗಣಾ 8 ಸತಿಯ ಬೇಕೆಂದೊಬ್ಬ ನೀಡೈ ಸುತನ ದಂಪತಿ ವ್ಯಾಜ್ಯ ಹರಿಸಿರಿಜತನ ಮಾಡಿಸಿ ವೇತನವ ಹರಿಸಿನ್ನು ವ್ಯಾಧಿಗಳಪಥನ ವಾಯಿತು ಕೂಳುಕೊಡಿಸೈ ಸತತ ವೀತೆರ ಬಯಕೆ ವ್ರಾತದಿಸುತಪ ನೀನೆಂತಾಗೆ ಕುಪಿತನು ಬಲ್ಲ ಬತ ಹರಿಯೇ 9 ತಿರುಗುತಲಿಹರು ತಮ್ಮಯ ಹೀನ ನಡತೆಗಳಿಂದ ಸ್ತ್ರೀಯರು ವಿಧಿಯ ನಡೆಸುವರು ಚೆನ್ನ ಔಷಧ ವಿಹುದು ನಿನ್ನಲಿ ಹಣ್ಣಿನಾಶಯ ತೋರಿನೀ ಭವ ಹುಣ್ಣುವಳಿಯುವೆ ಎಷ್ಟು ಕರುಣಿಯೊ ಗುರುವೆ ಶರಣೆಂಬೆ 1 ಕಳತ್ರ ವೆಲ್ಲವನೆಂತೆನಲು ಬಲು ಹುಚ್ಚುತನವ ರ್ಣಿಸಲು ಮಿಕ್ಕುದುದಾಉಕ್ತಿ ಭಜಿಸುವಗೇನು ಪೇಳ್ವುದು ಮುಕ್ತಿಕರಗತ ವೇಕೆ ಸಂಶಯ ಶಾಸ್ತ್ರ ಭಾಗ್ಯವೆ ಸಾಕು ಕರುಣಿಸಿ ನಮಿಪೆ ಭೂಯಿಷ್ಠ 11 ಸೂತ್ರ ಖರೆ 12 ಪ್ರೀತಿತಮ ಇವನಂಥ ದಾತನ ಗ್ರಂಧ ನಿಚಯವ ಭೋಜ್ಯ ಕಿಡುತಲಿ ಸುತ್ತಿಗೆದ್ದಲು ಹುಳಕೆ ಮೆಚ್ಚುವ ನೇನು ಪಯ ಸುರಿಯೆಪುತ್ರರಿಗೆ ಮದ್ದಿಕ್ಕಿ ಪಿತನಿಗೆ ಮತ್ತೆ ಭೋಜನ ವಿಕ್ಕೆ ಬಹುಸುಪ್ರೀತಿ ಯಾದಂತಾಯ್ತು ಹರಿಹರೀ ಪಾಹಿಮಾಂ ಪಾಹೀ 13 ಶುಂಠನಾದರು ಪಠಿಸೆ ನಮ್ಮಯ ಕಂಠದಿಂ ಬಂದಂಧ ನುಡಿವೈಕುಂಠ ರಮಣನ ಕಾಂಬ ಪಂಡಿತ ನೆನೆಸಿ ಧರೆಯೊಳಗೆಕಂಟಕವ ನಿರಿದು ಭವದಲಿ ವಿಷ ಕಂಠ ಗಾತಪ್ರಿಯ ತನ್ನಯಭಂಟನನು ಮಾಡಿಕೊಳಲೆಂತೆಂದೆನ್ನ ಹರಿಸಿ ಪೊರೆ 14 ಏಳಿರೇಳಿರಿ ಸಂತ ಮಿತ್ರರೆ ಕೇಳಿ ಕೇಳಿದುದೆಲ್ಲ ನೀಡುವಪಾಲಕನು ಶ್ರೀ ರಾಘವೇಂದ್ರನು ಇಲ್ಲ ಮೆರೆಯುತಿರೆಕೇಳಿ ಭವಸುಖ ಮತ್ತೆ ಭವದಲಿ ಬೀಳುವರೆ ವಿಜ್ಞಾನ ಯಾಚಿಸಿಕೊಲ್ಲಿರೀ ಸಂಸಾರ ಬೀಜವ ಕಲಿಯು ಎಷ್ಠರವ15ನಾಲ್ಕುಶತ ಐವತ್ತು ವರುಷವೆ ವೋಲಗವ ಕೈಕೊಂಬ ಮುಂದಿವಅಲಸವ ಮಾಡಿದೆಡೆ ಸುರತರು ಬಿಟ್ಟತೆರವೇನೆಜಾಲ ಮಾತುಗಳೇಕೆ ಮುಂದಿನ ಶೀಲ ಮಾರ್ಗವ ನೋಡ್ವ ಜಾಣನುಪಾಲಿಸೈಧೋರೆ ಕೆಟ್ಟೆ ಕೆಟ್ಟೆನು ಎನ್ನ ಕೈ ಕೊಡುವ 16 ಏಕೆ ಭಯ ನಮಗಿನ್ನು ನರಕದ ಏಕೆ ಕಳವಳ ಅಶನ ವಸನÀಕೆಏಕೆ ಸಂಶಯ ಜ್ಞಾನ ವಿಶಯದಿ ಪಿಡಿಯೆ ಗುರುವರನೆನೂಕಿ ವಿಷಯದಿ ಬಯಕೆ ಬೇಗನೆ ಬೇಕು ಎನ್ನುತ ಜ್ಞಾನ ನಿಧಿಗಳಹಾಕಿ ದಂಡವ ಪಾಹಿ ಗುರುವರ ಪಾಹಿ ಯೆಂತೆನ್ನ 17 ಭುಕ್ತಿ ಹಾಗೆ ವಿರಕ್ತ ಭಕ್ತಿಯು ಭಕ್ತ ವೃಂದಕೆ ಭ್ರಷ್ಟ ಬಿಟ್ಟವನು 18 ಜಯ ಜಯವು ಗುರುಸಾರ್ವಭೌಮಗೆಜಯ ಜಯವು ಮಂತ್ರಾಲಯಸ್ಥಗೆಜಯ ಜಯವು ವಿಜಯೀಂದ್ರ ಪೌತ್ರಗೆ ವ್ಯಾಸರಾಜನಿಗೆಜಯ ಜಯ ಪರಿಮಳಾ ಪ್ರದಾತಗೆ ಜಯಜಯವು ಖಂಡಾರ್ಥ ನೀಡ್ದಗೆಜಯ ಜಯವು ಸಶರೀರ ಬೃಂದಾ ವನದಿ ಸೇರ್ದವಗೇ 19 ಜಯ ಜಯವು ಬಾಹ್ಲೀಕ ರಾಯಗೆ ಜಯ ಜಯವು ಶ್ರೀ ಸತ್ಯಸಂಧಗೆಜಯ ಜಯವು ಪ್ರಹ್ಲಾದರಾಜಗೆ ಶಿಷ್ಯ ವತ್ಸಲ್ಯಗೆಜಯ ಜಯವು ಶ್ರೀ ರಾಘವೇಂದ್ರಗೆಜಯ ಜಯವು ಮಂಗಳವ ಸುರಿಪಗೆಜಯ ಜಯವು ಜಯ ಮುನಿಯ ಪ್ರೀಯಗೆ ನಮ್ಮ ಗುರುವರಗೆ 20 ಮಾನನಿಧಿ ಜಯತೀರ್ಥ ರಾಯರಘನ್ನ ಹೃದಯಗ ವಾಯು ವಂತರಶ್ರೀ ನಿಲಯ ಶ್ರೀ ಕೃಷ್ಣವಿಠಲ ಪ್ರೀಯ ಗುರುರಾಜನಾನು ಪಾಮರ ಬಾಲ ನುಡಿಗಳ ನೀನೆ ತಿದ್ದುತ ಮನ್ನಿಪುದು ನಾನಿನ್ನ ದಾಸರ ದಾಸನೆಂದು ಸ್ವೀಕರಿಸು ಶರಣು 21
--------------
ಕೃಷ್ಣವಿಠಲದಾಸರು
ಸತಿ ಪ ಪೊಳೆವುದು ಫಣಿಯಲಿ ರಂಜಿಪ ಕುಂಕುಮ ಗಿಳಿಯ ವರ್ಣದ ಪಚ್ಚ ಪದಕ ಕಂಡೆ 1 ಮಣಿಯುತ ಕಾಂಚನ ಮೇಖಲ ಕಟಿಯೆ ನುಣ್ಣಮುತ್ತಿನ ನತ್ತೆಸೆವ ನಾಸಿಕೆಯಳೆ 2 ಸರಸಿಜಮುಖಿಯಳೆ ಸ್ಮರಿಸುವೆನೀಗಳೆ ನರಸಿಂಹ ವಿಠಲನರಸಿ ಪ್ರಸನ್ನಮುಖಿ3
--------------
ನರಸಿಂಹವಿಠಲರು
ಸತ್ಸಂಗದ ಫಲ ಸದ್ಭಾವಿಯಾದವ ಸೇವಿಸಿಕೊಂಬುವನೈ | ಮತ್ಸರ ಮದದಲಿ ಯಚ್ಚರಗೊಳದಾಧಮ ಬದಿಲಿದ್ದೆ ನೈ ಪ ಬದಿಲಿಹ ಮಂಡೂಕಗೇನೈ | ಶ್ರೀಮಂತರು ಹಾಲವಕರಕೊಂಬರು | ಉಣ್ಣಿಗೆ ಫಲವೇನೈ 1 ಬಿದಿರು ಬೊಬ್ಬುಹಳಿಗೇನೈ | ಆಗಮಜ್ಞರ ವಿದ್ಯಾ ವ್ಯುತ್ಪನ್ನಗಲ್ಲದೇ ಜಡಮತಿಗಳಿಗೇನೈ | 2 ಭೂಗತ ಧನವದು ವಂಶಜಗವಲ್ಲದೇ | ಕಾದಿಹ ಫಣಿಗೇನೈ | ನುಡಿಯಿದು ನಂದನು ಸಾರಿದನೈ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ ವಸುದೇವ ಸುತನೆಂದೆನಿಸಿ ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ ಕಾಳಿಮಡುವ ಧುಮುಕಿ ಫಣಿಯ ಮೇಲೆ ನಾಟ್ಯವನಾಡಿದವಗೆ ಸನಕಾದಿ ನಾರದ ಮುನಿವಂದ್ಯಗೆ ಸುರ ರಮಣಿಯರು ಹರುಷದಿ 1 ಮಧುರೇಲಿ ಜನಿಸಿದವಗೆ ಮಾವಕಂಸನ ತರಿದವಗೆ ಮಧುವೈರಿಹರಿಗೆ ಮುರಳಿನಾದಗೈದು ಸ್ತ್ರೀಯರ ಮರುಳುಗೊಳಿಸಿ ಆಡಿದವಗೆ ಮುರವೈರಿ ಹರಿ ಮುಚುಕುಂದ ವರದನ ಪಾಡುತಲಿ ಮುದದಲಿ2 ಗೋಪಾಲರೊಡಗೂಡುತಲಿ ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ ಗೋಪಿಯರ ಮನೆಯ ಪೊಕ್ಕು ಬೇಕೆನ್ನುತ ಪಾಲ್ಬೆಣ್ಣೆ ಸವಿದ ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ 3
--------------
ನಿಡಗುರುಕಿ ಜೀವೂಬಾಯಿ