ಒಟ್ಟು 277 ಕಡೆಗಳಲ್ಲಿ , 68 ದಾಸರು , 263 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸ್ವತಿಮಾತೆ ಪರತರಚರಿತೆ ವರ ಪುಣ್ಯನಾಮಳೆ ಪ ಕರುಣಿಸಿವರವ ಕರುಣಾಕರಳೆ ಕರುಣದಿ ಕಾಯೆ ಅ.ಪ ಪದುಮಾಸನನ ಸುವದನ ನಿವಾಸೇ ತ್ರಿಭುವನಾರ್ಚಿತೆ ಸತತವಾಗಿ ಸುದಯೆ ಹೃದಯೆ ಸ್ಥಿರ ಸದುಮತಿ ಪಾಲಿಸೆ ಪರಮದಯದಿ ಪದುಳಂಗೆ ದಯದಿ 1 ವೀಣಾಧರಿ ಸುವಾಣಿ ಕಲ್ಯಾಣಿ ಮಾನಿನಿ ಬ್ರಹ್ಮನ ಜನನಿಯೆ ಜಗದಜಾಣೆ ಸುತ್ರಾಣೆ ನಿಜ ಜ್ಞಾನಾಧಿಕಾರಿ ಜ್ಞಾನವ ನೀಡೆ ಮಾಣದೆ ಎನಗೆ 2 ಪಾಮರತನ ನಿವಾರಣೆಗೊಳಿಸೆ ಪ್ರೇಮದೆನಗೆ ಸುಜಾಣೆ ನುಡಿಗಲಿಸಿ ವಿಮಲೆ ಅಮಲಸುಖ ಗಮಕದಿ ನೀಡ್ವೆ ಭುವಿಜಪತಿ ಶ್ರೀರಾಮನ ಸೊಸೆಯೆ 3
--------------
ರಾಮದಾಸರು
ಸರ್ಪಭೂಷಣನ ಸುತನ ಭಕ್ತಿಯಿಂದ ಬಲಗೊಂಡು ಮತ್ತೆ ಅಜನಸತಿಯ ಪಾದಕ್ಕೆ ಎರಗುವೆ 1 ಎಲ್ಲ ದೇವತೆಗಳಿಗೆ ಎರಗಿ ಭಕ್ತಿಯಿಂದ ಲಕ್ಷ್ಮೀ- ವಲ್ಲಭನ ಕತೆಗಳ ವರ್ಣಿಸುವೆನು 2 ಸ್ವಾಮಿ ಶ್ರೀಕೃಷ್ಣನ ಪ್ರೇಮವನ್ನು ಪಡೆದ ಸು- ದಾಮನೆಂಬೊ ಭಕ್ತ ಬಡವ ಬ್ರಾಹ್ಮಣಿದ್ದನು 3 ಸ್ನಾನ ಹೋಮ ಜಪವಮಾಡಿ ನೇಮ ನಿಷ್ಠೆಲಿಂದ ಉಪ್ಪು ಕಾಲ ಕಳೆಯುತಿದ್ದನು 4 ಅಶನವಿಲ್ಲ ವಸನವಿಲ್ಲ ಹಸಿದ ಮಕ್ಕಳನ್ನು ನೋಡಿ ವ್ಯಸನದಿಂದ ಪತಿಯ ಪಾದಕ್ಕೆರಗಿ ನಿಂತಳು 5 ತಂದೆ ತಾಯಿಗಳ ಕಡೆಯ ಬಂಧು ಬಳಗ ಯಾರು ಹತ್ತಿ ದ್ಹೊಂದಿದವರುಯಿಲ್ಲೆ ನಿಮಗೆ ಎಂದು ನುಡಿದಳು 6 ಪತ್ನಿ ಮಾತು ಕೇಳಿ ಪರಮ ಭಕ್ತಿಯಿಂದ ನುಡಿದ ಧ- ರ್ಮಾರ್ಥ ಕಾಮ್ಯಗಳನೆ ಕೊಡುವೋ ಮೋಕ್ಷದಾಯಕ 7 ಆದಿಮೂರುತಿ ಕೃಷ್ಣ ಓದಿಕೊಂಡ ಗೆಳೆಯನೊಬ್ಬ ಮಾಧವನ ಬಿಟ್ಟು ಮತ್ತೊಬ್ಬರಿಲ್ಲವು8 ಆತನ ಕಂಡು ಬಂದರ್ಯಾತರ ದಾರಿದ್ರ್ಯ ನಮಗೆ ಪ್ರೀತಿಯಿಂದ ಹೋಗಿಬನ್ನಿರೆಂದು ನುಡಿದಳು 9 ವರಮಾಲಕ್ಷ್ಮಿ ಅರಸು ಕೃಷ್ಣನರಮನೆಗೆ ಪೋಗಲಿಕ್ಕೆ ನ- ದರ ಏನುವೊಯ್ಲೆ ನರಹರಿಗೆ ಎಂದನು 10 ಲಕ್ಕುಮೀಶನ್ನ ದರ್ಶನಕ್ಕೆ ಒಯ್ಯಲಿಕ್ಕೆ ಮೂರು ಮುಕ್ಕು ಅವಲಕ್ಕಿ ತಿರಿದು ತಂದುಕೊಟ್ಟಳು 11 ಅದನು ಗಂಟು ಕಟ್ಟಿ ತನ್ನ ಹೆಗಲಮ್ಯಾಲೆ ಇಟ್ಟುಕೊಂಡು ನ- ಗಧರನ್ನ ನಗರಕ್ಕಾಗ ಬರುತಲಿದ್ದನು 12 ಲಕ್ಷಣಾದ ಶಕುನವ ಆ ಕ್ಷಣದಿ ಕಂಡು ವಿಪ್ರ ಲಕ್ಷ್ಮೀಪತಿಯ ದಯವು ನಮಗೆ ಆಗೋದೆಂದನು 13 ಹಾದಿಲ್ಹರಿವೊ ಜಲವ ಕಂಡು ಸ್ನಾನವನ್ನು ಮಾಡಿಕೊಂಡು ವೇದ ಪುಸ್ತಕವ ಹಿಡಿದು ಓದಿಕೊಳುತಲಿ 14 ಮಲ್ಲೆ ಮಲ್ಲಿಗೆ ದವನ ಅಲ್ಲೆಯಿದ್ದ ಫಲಗಳು ಲಕ್ಷ್ಮೀ- ವಲ್ಲಭಗೆ ಅರ್ಪಿತವೆಂದು ನಡೆದನು 15 ಗೋಪುರವ ಕಂಡು ದ್ವಾರಕಾಪುರಕ್ಕೆ ಕೈಯಮುಗಿದು ಶ್ರೀಪತಿಯ ಬಾಗಿಲಲಿ ಬಂದು ನಿಂತನು 16 ದ್ವಾರದಲ್ಲಿ ನಿಂತವರು ದಾರುಯೆಂದ್ವಿಚಾರಿಸಲು ನಾರಾಯಣನ ಸಖನು ನಾನೆಂದ್ಹೇಳುತಿದ್ದನು 17 ನುಡಿದ ನುಡಿಯ ಕೇಳುತ ನಡೆದು ಬಂದು ಚಾರಕರು ಒಡೆಯ ನಿಮ್ಮ ಗೆಳೆಯನಂತೆ ಬಡವ ಬ್ರಾಹ್ಮಣ 18 ಹುಟ್ಟ ಮೊದಲೆ ಅನ್ನ ತನ್ನ ಹೊಟ್ಟೆಗುಂಡ ಮನುಜನಲ್ಲ ಗಟ್ಟಿಗಾಳಿ ಬರಲೀಗ್ಹಾರುವಂತೆ ತೋರುವ 19 ಅಸ್ಥಿ ಚರ್ಮ ಆತನಂಗಕ್ಹತ್ತಿಕೊಂಡ ಹೊಟ್ಟೆಬೆನ್ನು ಮತ್ತೆ ನಡೆಯಲಾರ ಮಾತನಾಡಲಾರನು 20 ಒಡೆದ ಗುಂಡುತಂಬಿಗೆ ಬಡಿದನದರ ಸುತ್ತ ಮ್ಯಾಣ ಹಿಡಿದ ಗಂಟ ಬಿಡದಲ್ಹೊತ್ತು ನಡೆದು ಬಂದನು 21 ಮರದ ಗುಂಡು ಸರದಗುದ್ದಿ ಕೊರಳೊಳಗೆ ಹಾಕಿಕೊಂಡು ಎರಳೆ ಚರ್ಮ ಸುತ್ತಿ ಎಡದ ಬಗಲಲ್ಲಿಟ್ಟನು22 ದೊಡ್ಡನಾಮ ಹಚ್ಚಿಕೊಂಡು ಮುದ್ರೆಮಯ್ಯಲೊತ್ತಿಕೊಂಡು ಶುದ್ಧ ಚಂದ್ರಮನ ಕಾಂತಿ ತೋರುತಿದ್ದನು 23 ಛಿದ್ರವಾದ ಬಟ್ಟೆನುಟ್ಟು ಚಿಗುರು ತುಳಸಿ ಕಿವಿಯಲ್ಲಿಟ್ಟು ಪದ್ಮನಾಭ ಪಾಲಿಸೆನುತ ಕೂಗುತಿದ್ದನು24 ನಾಮಾಂಕಿತÀವ ಕೇಳಲು ಸುದಾಮನೆಂದು ಹೇಳುವ ನಾನಾ ಪರಿಯಲ್ನಿಮ್ಮ ಸ್ತುತಿಯ ಮಾಡುತಿದ್ದನು 25 ಅಪ್ಪುಣಾದರಾತನ ಇತ್ತ ಕರೆದು ತಾವೆನೆನಲು ಭಕ್ತರೊಡೆಯ ಭಾಳ ಸಂಭ್ರಮದಿ ಎದ್ದನು 26 ಕರವ ಪಿಡಿದು ಕುಳ್ಳಿರಿಸಿ ದಿವ್ಯಾಸನದ ಮ್ಯಾಲೆ ತರಿಸಿ ಚಾಮರದ ಗಾಳಿ ಹಾಕುತಿದ್ದನು 27 ಪನ್ನೀರು ತಂದು ಪಾದತೊಳೆದು ದ್ರಾಕ್ಷಿ ಕಿತ್ತಳೆ- ಹಣ್ಣು ಎಳನೀರು ತಂದು ಮೆಲಲು ಕೊಟ್ಟನು 28 ಮದುವೆ ಆಯಿತೇನೊ ಸಖನೆ ಎಂದು ಕೇಳಿದ 29 ಸೋಳಸಾವಿರ ಸತಿಯರಾಳುವೊ ಶ್ರೀರಮಣ ಕೇಳೊ ರಾಣಿವೊಬ್ಬಳಿರುವೊಳಯ್ಯ ನಮಗೆಯೆಂದನು 30 ಇಷ್ಟುದಿವಸ ಇಲ್ಲಿಗೆ ಬಾರದಿದ್ದ ಕಾರಣೇನು ಚಿಕ್ಕಂದಿನ ಸ್ನೇಹವೆಲ್ಲ ಮರೆತ್ಯ ಎಂದನು 31 ಬರದಲಿದ್ದೆ ನಾನು ಪಾಮರನೂ ಆದಕಾರಣ ಕಳುಹಿಕೊಟ್ಟಳೆನ್ನ ಭಾರ್ಯಳೀಗ ಎಂದನು 32 ಅಣ್ಣ ನಮ್ಮತ್ತಿಗೆ ನಮಗೇನು ಕಳಿಸಿದಳು ನಿನ್ನ ಹೆಗಲ ಗಂಟು ಬಿಚ್ಚಿ ತೋರಿಸೆಂದನು 33 ವಿಪ್ರ ನಾಚಿ ನೆಲನ ನೋಡುತಿರಲು ಕೃಷ್ಣ ಸಲಿಗೆಲಿಂದ ಗಂಟನೆಳೆದು ಬಿಚ್ಚಿಸಿದನು 34 ಸುಜನ ಜನರು ಮಾಡುವಂಥ ಭಜನೆಯೊಂದೆ ಸಾಕುಯೆನೆಗೆ ಹೇಮ ರತ್ನಾಭರಣವ್ಯಾತಕೆಂದನು 35 ಕುಂದಣದ ಪಾತ್ರೆಯೊಳಗೆ ತಂದು ಸುರುವೆ ಪ್ರತಕವನ್ನು ಮಂದರೋದ್ಧರನು ಮುಷ್ಟಿ ತೆಗೆದುಕೊಂಡನು36 ಮುಷ್ಟ್ಟಿಗೊಂದು ಬಾರಿ ಶ್ರೀಕೃಷ್ಣ ತೆಗೆದು ಮೆಲ್ಲುತಿರಲು ಕಷ್ಟ ದಾರಿದ್ರ್ಯವೆಲ್ಲ ಹರಿದು ಹೋಯಿತು 37 ಎರಡನೇ ಮುಷ್ಟಿ ಪಾಲ್ಗಡಲಶಯನ ಮುಕ್ಕುತಿರಲು ಸಡ- ಸಡಗರ ವೈಕುಂಠಪದವಿ ಮುಕ್ತಿ ಆಯಿತು 38 ಮೂರನೇ ಮುಷ್ಟಿಗೆ ನಾರಿ ರುಕ್ಮಿಣಿ ಬಂದು ಕೃಷ್ಣಯೇನು ಕೊಡುವಿ ಕರವ ಪಿಡಿದಳು 39 ಭಾವನವರು ತಂದುಕೊಟ್ಟ ದೂರದ ಪದಾರ್ಥವನ್ನು ನೀವೆ ಸವಿಯ ನೋಡುವೋದು ದಾವ ನೀತಿಯು40 ಅಕ್ಕ ಕಳಿಸಿದ್ದು ಅವಲಕ್ಕಿ ನಮಗಿಲ್ಲದ್ಹಾಗೆ ಮುಕ್ಕಿ ಬಿಡುವರೇನೊ ಎಂದು ನÀಕ್ಕಳಾಗಲೆ41 ಇಷ್ಟು ಮಂದಿಯೊಳಗೆ ಎನ್ನ ಮುಷ್ಟಿ ಹಿಡಿದು ನಿಲ್ಲುವಂಥ ದಿಟ್ಟತನಗಳೆಲ್ಲ್ಲಿ ಕಲಿತೆ ಹೇಳೆಯೆಂದನು 42 ಚಿಕ್ಕ ಸತ್ಯಭಾಮೆ ನೋಡಿ ನಕ್ಕಾಳೆಂಬೊ ನಾಚಿಕಿಲ್ಲ ಮುಕ್ಕು ಅವಲಕ್ಕಿಗೆನ್ನ ಕÀರವ ಪಿಡಿವೋರೆ 43 ಸರ್ವರೊಳಗೆ ಅಧಿಕಳೆಂಬೊ ಗರುವಿನ ರುಕ್ಮಿಣಿಗೆ ಬುದ್ಧಿ ಕರೆದು ಹೇಳಬಾರೆ ಸತ್ಯಭಾಮೆಯೆಂದನು 44 ಎನ್ನ ಭಕ್ತರಲ್ಲಿ ಪ್ರೇಮ ನಿನಗೆ ಉಂಟಾದರೆ ಇನ್ನೂ ಒಂದು ಮುಕ್ಕು ನಿನಗೆ ಕೊಡುವೆನೆಂದನು45 ಅಕ್ಕಗಾಡೋ ಮಾತಕೇಳಿ ಚಿಕ್ಕ ಸತ್ಯಭಾಮೆ ತಾನು ಅಕ್ಕರದಿ ಬಂದು ಕೃಷ್ಣನೆದುರು ನಿಂತಳು 46 ರಂಗ ನಿನ್ನ ಪಟ್ಟದರ್ಧಾಂಗಿಯಾದ ರುಕ್ಮಿಣಿಗೆ ಮುಂಗೈ ಹಿಡಿವೋದಕ್ಕೆ ದಾರಭಯವೇನೆಂದಳು47 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ ಪ ಅನ್ನಪೂರ್ಣದೇವಿ ರಮಣ ವಿಶ್ವನಾಥ ದಿ ವ್ಯಾನ್ನ ಕೊಟ್ಟುಯನ್ನು ಪಾಲಿಸು ವಿಶ್ವನಾಥ 1 ತಾರಕೋಪದೇಶವನ್ನು ವಿಶ್ವನಾಥ | ನಿ ನ್ನಾರಾಧಕರಿಗೆ ಈವೆ ವಿಶ್ವನಾಥ 2 ಪಾಮರ ನಾನೈಯ್ಯ ಕೇಳು ವಿಶ್ವನಾಥ ಗುರು ರಾಮ ವಿಠಲನ ಚರಣವ ತೋರಿಸು ವಿಶ್ವನಾಥ 3
--------------
ಗುರುರಾಮವಿಠಲ
ಸಿರಿ ಮನುಜಕೇಸರಿ ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ ಸರಸಿಜಾನನ ನಜಕ ತವಪದ ಮರೆದ ಪಾಮರನಾಗಿ ನಾ ಭವ ಶರಧಿಯೊಳು ಬಿದ್ದು ಪರಿದು ಪೋಗುವೆ ಎರಗರಿಪುಧ್ವಜನಾಗಿ ನೀ ಬಂದು ಸೂನು | ಸರ್ವೇಶ ರಾಘವ ಭಜಕಜನ ಸುರಧೇನು | ಸ್ವರತ ಸುಖಮಯ ಸುಜನ ವಾರಿಜ ಭಾನು ಖಳವನ ಕೃಶಾನು ತ್ರಿಜಗ ಪೋಷಕ ಪರಮ ಸುಲಭ ನೀ ನಿಜದಯದಿ ಹರಿಮದವ ಖಂಡ್ರಿಸಿ ವೃಜದ ತುರುಗಳ ಕಾಯ್ದ ಸಜನುತ ದ್ವಿಜಪ ಸುತೆ ಪತಿಧ್ವಜನ ಸುತನೆ 1 ಪತಿತ ಪಾವನ ರಂಗ | ಸಂತತದಿ ನಿನ್ನನು ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ ತತಿ ಮಾತಂಕ ಮರಿಗಳಿಗೆ ಸಿಂಗ ಸಿತ ತುರಂಗನ ರಥದಿ ಶೋಭಿಪ ಅತುಳ ಮಹಿಮನ ಜನನಿ ಅನುಜನಿಗೆ ಹಿತದಿ ಭ್ರಾತದಿ ಭೀತಿ ಬಿಡಿಸಿದ ಶೃತಿಗೆ ನಿಲುಲದ ಚ್ಯುತ ವಿದೂರನೆ 2 ಸಾಮಗಾನ ವಿಲೋಲ ಸುರರಾಜ ಪೂಜಿತ ಕಾಲ | ಕರಿದನುಜ ಹರನುತ ಸ್ವಾಮಿ ಶ್ರೀವನಮಾಲಧರ ಸುಗುಣಶೀಲ ಕಾಮಪಿತ ಹಿಮಧಾಮ ವದನ ಸು ಧಾಮಸಖ ಸುರಸ್ತೋಮ ವಂದಿತ ಯಾಮಿನೀ ಚರವೈರಿ ವಾಮನ ಶ್ರೀಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ ಕಾಲ ಕಳೆವ ಪಾಮರ ಮನುಜನ ಅ.ಪ ಹರಿದಿನದುಪವಾಸ ಮರುದಿನ ಪಾರಣೆ ಸರಿಯಾಗಿ ಮಾಡಿದೆನೆ ಕೊರಳಲ್ಲಿ ತುಳಸೀ ಸರಗಳ ಧರಿಸಿ ಹರಿಗೆ ಮೈಮರೆದಾನೊಂದಿಸಿದೆನೆ 1 ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ ಕ್ಷೇತ್ರಗಳ ಬಳಸಿ ಪಾದ ನೇತ್ರದಿಂದ ನೋಡಿ ಕೃತಾರ್ಥ ನಾನಾದೆನೆ 2 ವರ ನಾರೇರ ಕಂಡು ನರಕ ಭಯವಿಲ್ಲದೆ ಕರೆದು ಮನ್ನಿಸುವ ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು ನಿರುತ ನಾ ಜಪಿಸುವೆನೆ 3 ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ ಲಲಿತದಿಂ ಕುಣಿಯುವೆನೆ ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ ಬಾಲಲೀಲೆ ಪಾಡಿ ಲೋಲನಾಗುವೆನೆ 4 ಕಂದರ್ಪ ಪಿತನಾದ ವಿಜಯ ರಾವi ಚಂದ್ರವಿಠಲನ್ನ ಮಂದಹಾಸ ಮುಖವನ್ನು ಒಂದಿನವಾದರು ನೋಡ್ಯಾನಂದಪಟ್ಟು ಮಂದ ಜ್ಞಾನ ತೊರೆದನೆ 5
--------------
ವಿಜಯ ರಾಮಚಂದ್ರವಿಠಲ
ಸೂರ್ಯ ಯತಿವರ್ಯ | ಮ ಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ಪ ಬುಧಜನ ವಂದಿತ ಸುಧಿ ಸುವೃತೀಂದ್ರರ ಸದಮಲ ಘನ ಸದ್ ಹೃದಯಾ ಕಾಶಕೆ 1 ಧರಣಿ ಸುರಾಗ್ರಣಿ ಗುರು ಸುವೃತೀಂದ್ರರ ಸುರಚಿರ ಸರಸಿಜಕರ ಪೂರ್ವಾದ್ರಿಗೆ 2 ಭೂಸುರ ಸೇವಿತ ಪೂಶರ ನಿರ್ಜಿತ ಭಾಸುರ ವರ ಸನ್ಯಾಸ ಸುಚ್ಭಾಯಕೆ 3 ಬಗೆ ಬಗೆಯಿಂದಲಿ ನಿಗವೋಕ್ತಿಯಲಿ ರಘುವರನರ್ಚಿಪ ಸುಗುಣವೆಂಬ್ಹಗಲಿಗೆ 4 ಶಾಮಸುಂದರನ ನಾಮ ಪೊಗಳಿದ ಪಾಮರ ಮತಿ ಜನಸ್ತೊಮ ಯಾಮಿನಿಗೆ 5
--------------
ಶಾಮಸುಂದರ ವಿಠಲ
ಸ್ಥಿರ ನೀಡೆನ್ನ್ವದನಾಬ್ಜದಿ ಪರಮ ಪುರುಷ ನಿನ್ನ ಸ್ಮರಣೆ ಪ ಸೌಖ್ಯ ಸುಭೋಗದಿರಲಿ ಬೇನಿಯಿಂದ ಒರಲುತಿರಲಿ ತ್ರಾಣಗುಂದಿ ತೊಳಲುತಿರಲಿ ದಾನವಾಂತಕ ನಿನ್ನ ಧ್ಯಾನ 1 ಭೂಮಿಪರು ಸನ್ಮಾನ ಕೊಡಲಿ ಪಾಮರೆಂದು ಒದೆದು ನೂಕಲಿ ಭೂಮಿಜನರಪಹಾಸ್ಯ ಗೈಯಲಿ ಸ್ವಾಮಿ ನಿಮ್ಮ ಭಜನಾನಂದ 2 ಚಿಂತೆಯಿರಲಿ ಶ್ರೀಮಂತಿಕಿರಲಿ ಸಂತಸೆಂಬುದು ಸಿಗದ್ಹೋಗಲಿ ಅಂತಕಾರಿ ಶ್ರೀರಾಮ ನಿನ್ನ ಚಿಂತನೆ ಎನ್ನ ಅಂತ್ಯಕಾಲದಿ 3
--------------
ರಾಮದಾಸರು
ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ
ಸ್ವಾಮಿಯ ನೆನೆಯೋ ಪಾಮರ ಮನಸೆ ನೀ ತಾಮಸವನು ನೀಗಿ ಪ ಕಾಮಾದಿಗಳ ಜೈಸಾಮಹಿಮ ಸತ್ಯ ಭಾಮೇಶಗತಿಯೆಂದು ನೇಮವಹಿಸಿ ಬಿಡದೆ ನಾಮ ಪೊಗಳುವರ ಕಾಮಿತಗಳನಿತ್ತು ಪ್ರೇಮದಿಂ ಕಾಯ್ವಂಥ 1 ಗೋಪ ಗೋಪತಿ ನಮಿತ ಗೋಪಿಯ ಪ್ರಿಯಬಾಲ ಪಾಪನಿವಾರಣ ಆ ಪರಬ್ರಹ್ಮನ ಶ್ರೀಪಾದ ಪೊಗಳಲು ತಾಪತ್ರಯಂಗಳ ಲೋಪಮಾಡುವಂಥ 2 ಪರಮ ಶ್ರೀಗುರು ಎಂದು ಪರಮಾತ್ಮ ಶ್ರೀರಾಮ ಚರಣಸಾನ್ನಿಧ್ಯಕ್ಹೊಂದು ನರಕಯಾತನೆ ಗೆಲಿಸಿ ಬರುತಿರ್ಪ ಕಷ್ಟಗಳ ಪರಿಹರಿಸಿ ಕರಪಿಡಿದು ಕರುಣದಿ ಸಲಹುವ 3
--------------
ರಾಮದಾಸರು
ಸ್ವಾಮಿಯು ನೀನಲ್ಲವೊ ಪಾಮರನೆ ಪ ಸ್ವಾಮಿಯು ನೀನಾಗೆ ಭೃತ್ಯಾನು ನಿನಗ್ಯಾರು ಈ ಮಾತಿಗೇನೆಂಬೆಯೊ ಸೋಮಾರಿ ಮನುಜನೆ ಅ.ಪ. ನಿತ್ಯತೃಪ್ತನು ದೇವದೇವೋತ್ತಮನವನು ಸತ್ಯ ಸಂಕಲ್ಪನು ಸಕಲ ಜಗವರಿಯೆ ಹೊತ್ತು ಹೊತ್ತಿಗೆ ಗ್ರಾಸಕಿಲ್ಲದವ ಗೃಹಪಾಲ ಸತ್ಯದನುಭವವಿಲ್ಲವೊ ನಿನಗೆ 1 ಸ್ವಾಮಿ ಭೃತ್ಯರಿಗೆ ಬೇಧವಿಲ್ಲೆಂಬುವ ನಿನ್ನ ಭೃತ್ಯ ತಾ ಬರಲು ಕಾಮಾರಿಯಂತೆ ಕೋಪವ ತಾಳುವೆ ನಮ್ಮ ಸ್ವಾಮಿಗೆ ತಾಮಸ ಗುಣವೆಲ್ಲಿಹುದೊ 2 ಕಾಸು ಕೊಟ್ಟರೆ ನೀನು ಹೇಸಿಕ್ಯಾದರು ಬಳಿವೆ ದಾಸ ನೀನಲ್ಲದೆ ಈಶನೆಂತಾದೆಯೊ ವಾಸುದೇವ ನೀನೆಂದು ಘಾಸಿಯಾಗಲು ಬೇಡ ರಂ- ಗೇಶವಿಠಲನ ದಾಸರ ದಾಸ ನೀನಾಗೊ 3
--------------
ರಂಗೇಶವಿಠಲದಾಸರು
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹರಿ ನಿನ್ನ ಭಕುತಿಗುನ್ಮತ ಬಿಡಬೇಕು ಗುರು ಹೇಳುವ ಮಾತು ಕೈಗೂಡಬೇಕು ಧ್ರುವ ಕಾಮೋನ್ಮತ್ತಗೆಲ್ಲಿಹದೊ ನಿಜಭಕ್ತಿ ನೇಮ ಉಂಟೆ ಪರಾಮರಿಸುವ ಶಕ್ತಿ ಕೋಮಲತಿಯರ ಕಂಡು ಕಳವಳಾದ್ಯುಕ್ತಿ ಪಾಮರಗಳಿಗೆಲ್ಲಿಹ್ಯದೊ ವಿರಕ್ತಿ 1 ಧನೋನ್ಮತ್ತಗೆಲ್ಲಿಹುದೊ ನಿಜಧ್ಯಾನ ಕಾಣನೆಂದಿಗೆ ಕಣ್ದೆರದು ತಾ ಖೂನ ಹೆಣ್ಣು ಹೊನ್ನಿನ ಮ್ಯಾಲೆ ಇಟ್ಟಿಹ ಜೀವ ಪ್ರಾಣ ಹೀನ ಮನುಜರಿಗೆಲ್ಲಿಹುದೊ ಸುಜ್ಞಾನ 2 ಉನ್ಮತ ಹೋದರೆ ಸನ್ಮತದಿಂದ ತನ್ಯಯಾಗುವರು ಸದ್ಘನ ಕೃಪೆಯಿಂದ ಉನ್ಮನಾಗುವಂತೆ ನೋಡೋ ಮುಕುಂದ ಚಿಣ್ಣ ಮಹಿಪತಿಗೆ ಸದ್ಬೋಧ ಆನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ಹರಿ ತವಕೃಪೆ ಕರುಣಿಸು ದೀನನೋಳ್ ಚರಣದಾಸನ ಮೊರೆ ಆಲಿಸು ದಯದಿಂದ ಪ ಸಂಸಾರ ನಿಧಿ ಭಯ ಧ್ವಂಸಗಾರನು ನೀ ಕಂಸಾರಿ ಭಕುತರ ಹಿಂಸಿಸದೆ ಕಾಯ್ವ 1 ಆಧಾರ ನೀನೆ ಭವಭಾದೆ ನಿವಾರಕ ಪಾದದಾಸರ ಅಭಿಮಾನದ ದೇವ ನೀ 2 ಪಾಮರನಾದೆ ಶ್ರೀರಾಮ ಮರೆದು ನಿನ್ನ ಪ್ರೇಮದಿಂ ಸಲಹೆನ್ನ ಕ್ಷೇಮವ ಪಾಲಿಸಿ 3
--------------
ರಾಮದಾಸರು
ಹರಿ ಹರಿ ಹರಿ ಎನ್ನದೆ ಈ ನಾಲಿಗಿ- ನ್ನಿರುವುದ್ಯಾತಕೆ ಸುಮ್ಮನೆ ಪ ಸÀರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು ಪರರವಾರ್ತೆಲಾಸಕ್ತಿ ಪಾಮರನಾಗುವುದ್ಯಾಕೆ1 ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು ಕಲ್ಲಿಗೆ ಕಡೆಯಾದೆ ಮಲ್ಲರಂತಕÀಗೆ ಬ್ಯಾಗ 2 ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ 3 ಅರ್ಕಸುತನ ಭಯ ಅಂಕೆಯಿಲ್ಲದಂತಿರೆ ಸಿಕ್ಕು ಸಿಗದಂತಿರೆ ಯುಕ್ತಿ ರತ್ಕಸಾಂತಕನಲ್ಲಿಟ್ಟು 4 ಈಸು ಮಾತ್ಯಾಕÉಶೋದೆ ಕೂಸಿನಾಲಾಪ್ವೊಂದಿರಲಿ ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ 5
--------------
ಹರಪನಹಳ್ಳಿಭೀಮವ್ವ
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು