ಒಟ್ಟು 1457 ಕಡೆಗಳಲ್ಲಿ , 96 ದಾಸರು , 906 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೌತಿಯ ದಿವಸ ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ- ಮೌರಿ ರಭಸದಿ ಲಕ್ಷ್ಮೀಕಾಂತ ಭೂರಿ ವೈಭವದಿ ಪೊರಟನೆತ್ತ ಯಾವ ಕಾರಣವೆಂದು ಪೇಳೆಲೆ ಸತ್ಯ 1 ಊರ್ವಶಿ : ದೇವಿ ಕೇಳೆಲೆ ಸುಮ್ಮಾನದಿಂದ ಕುಲ- ದೇವರ ಪೂಜೆಗೋಸುಗ ಬಂದ ಪಾವನಮೂರ್ತಿಯಾದುದರಿಂದ ನಮ್ಮ ಕಾವನು ಕರುಣಾಕಟಾಕ್ಷದಿಂದ2 ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ- ನ್ನಾಥನಿಗ್ಯಾವ ಕುಲವು ಕಾಣೆ ರೀತಿಯನರುಹಬೇಕೆಲೆ ಬಾಲೆ ಸರ್ವ ಚೇತನಾತ್ಮನ ನಾಟಕದ ಲೀಲೆ3 ಊರ್ವಶಿ : ಪಾಂಡವರಾಯುಧಗಳನ್ನೆಲ್ಲ ಪೊತ್ತು- ಕೊಂಡ ಕಾರಣದಿ ಪೂಜೆಗಳೆಲ್ಲ ಕಂಡು ಪೊಗಳಲು ಕವಿಗು ಸಲ್ಲ ಇನ್ನು ಪುಂಡರೀಕಾಕ್ಷನವನೆ ಬಲ್ಲ4 ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ- ಭೋಜನಾಭನು ತಾಕ್ಷ್ರ್ಯನ ಮೇಲೆ ರಾಜಬೀದಿಯೊಳ್ ಬರುವದೇನೆ ಇಂಥ ಸೋಜಿಗವೇನು ಪೇಳೆಲೆ ಜಾಣೆ5 ಊರ್ವಶಿ : ಪಟಹ ಡಿಂಡಿಮವಾದ್ಯರವದಿಂದ ತಂ- ಬಟೆನಿಸ್ಸಾಳರವದಿ ಬರುವ ಚಂದ ಸಟೆಯಲ್ಲ ಕೇಳು ಕರುಣದಿಂದ ನಮ್ಮ ಕಟಕ ರಕ್ಷಿಸಲು ಬರುವ ಗೋವಿಂದ6 ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ- ಗಲಭೆಗಳಿಂದ ಪೋಗುವದೇನೆ ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ- ಜಲಜನಾಭನ ಮಹಿಮೆಯ ಜಾಣೆ7 ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ- ದೀಪವೆಂದೆನುತ ಭಕ್ತರು ಮುದದಿ ಶ್ರೀಪರಮಾತ್ಮ ವಿಲಾಸದಿ ಭಕ್ತ- ರಾಪೇಕ್ಷೆಗಳನು ಸಲ್ಲಿಸುವಂದದಿ8 ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ- ಸ್ತೋಮ ಜೇನುಂಡೆ ಬಿರುಸು ಮಿಗಿಲು ವ್ಯೋಮಕೇಶಗಳ ಪೊಗಳತೀರದು ಸರಿ ಭೂಮಿಯೊಳ್ ಕಾಣೆನೆಂಬಂತಾದುದು9 ಅಮಮ ಇದೇನೆ ಇಂದಿನ ಲೀಲೆ ಜನ- ರಮರಿಕೊಂಡಿಹರೇನಿದು ಬಾಲೆ ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ- ಮ್ಮಮರಾವತಿಗಿಂತಧಿಕ ಬಾಲೆ10 ಊರ್ವಶಿ : ಸಾರ್ಥಕಾಗುವದು ಜನ್ಮವು ಕಾಣೆ ಸಕ- ಲಾರ್ತಿ ಹರಣವಾಗ್ವದು ಜಾಣೆ ಕೀರ್ತಿತರಂಗಮಾಗಿಹುದೇನೆ ಶೇಷ- ತೀರ್ಥವೆಂದರೆ ಕೇಳಿದು ಪ್ರವೀಣೆ11 ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ- ತಾಸನದಂತೆ ಮರೆವುದಲ್ಲೇ ನಾಸಿರ ದೀಪಸೋಪಾನದಲೆ ಮಹಾ- ಶೇಷನಿಹನು ಮಧ್ಯದೊಳಿಲ್ಲೇ12 ಊರ್ವಶಿ : ಕರುಣಾಕರನು ನಮ್ಮೆಲ್ಲರನು ನಿತ್ಯ ಪೊರೆಯಲೋಸುಗ ಬಂದನು ತಾನು ಸುರುಚಿರ ಮಂಟಪವೇರಿದನು ಭೂ- ಸುರರಿಂದ ವೇದಘೋಷವ ಕೇಳ್ವನು13 ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ ಸೃಷ್ಟಿಗೆ ಪೊಸತಾಗಿಹುದು ಕಾಣೆ ಕಟ್ಟಿಸಿದವನು ಪುಣ್ಯೋತ್ತಮನು ಪರ- ಮೇಷ್ಠಿ ಜನಕನ ಕೃಪೆಯಿನ್ನೇನು14 ಭಜಕರ ಮುಖದಿಂದೆಲ್ಲ ತಾನು ಭೂ- ಭುಜನಾಗಿ ನಡೆಸುವನಿದನೆಲ್ಲನು ನಿತ್ಯ ಸಾಕಾರವನು ತೋರಿ ತ್ರಿಜಗವನೆಲ್ಲ ರಕ್ಷಿಸುತಿಹನು15 ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ- ದೊಡೆಯ ಪೊರಡುವ ಕಾಲದಿ ಭಾರಿ ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ ಕಡು ಬೆಡಗನು ಉಸುರೆಲೆ ಬಾಲೆ16 ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ ತನುವಿಗೆ ಸೋಂಕಲದನೆಲ್ಲವ ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ- ಧ್ವನಿಯೆಸಗಿದರು ಕೇಳಿದರಂದವ17 ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು- ಬರುವನು ವೇದನಿನಾದದಲಿ ವರರತ್ನ ಖಚಿತ ಮಂಟಪದಲ್ಲಿ ನಿಂತ ನಿರವದಿ ಸುಖದಾಯಕನಲ್ಲಿ18 ಶರಣರ ಪಾಪ ಮನಕೆ ತಾರ ದುಡಿದ ವರ ಭೇರಿಗೆರೆವ ಬಿಸಿನೀರ ವರಲಕ್ಷ್ಮೀನಾರಾಯಣಧೀರ ಸುರು- ಚಿರ ಸಿಂಹಾಸನವೇರಿದ ವೀರ19
--------------
ತುಪಾಕಿ ವೆಂಕಟರಮಣಾಚಾರ್ಯ
ಚ್ಚಂದಿರವದನೆ ಶಾರದೆ ಪ ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ಅ.ಪ. ಸಿತಾಬ್ಜಾಸನೆ ಸುಖದಾಯಕಿ ಸುರ ನಾಥಾರಾಧಿತೆ ವಿಶ್ವನಾಯಕೀ ವೀತದುರಿತೆ ಶಿವ ಮಾತೆ ಸದ್ಗುಣಮಣಿ ವಾಗ್ದೇವಿ ಮಾತೆ 1 ಕೋಕಿಲವಾಣಿ ಕವಿಸೇವಿತೆ ಎನ್ನ ವಾಕು ಲಾಲಿಸೆ ಮನಿವಂದಿತೆ ತೋಕನೆಂದು ಸುವಿವೇಕ ಬುದ್ಧಿಯನಿತ್ತು ವಾಕು ಮನ್ನಿಸು ತಾಯೆ 2 ಪಾತಕಿಗಳೊಡನಾಡಿ ನಾ ನಿನ್ನ ಪೋತಾಬ್ಜಪದ ಭಜಿಸದ್ಹೋದೆ ನಾ ಪಾತಕವೆಣಿಸದೆ ಸೀತಾರಮಣ ಜಗ ನ್ನಾಥವಿಠ್ಠಲನಘ್ರಿ ಗೀತಾಮೃತವನುಣಿಸು 3
--------------
ಜಗನ್ನಾಥದಾಸರು
ಜಗತ್ಸಾರ ವಿಠಲ | ನೀನಿವಳ ಸಲಹೊ ಪ ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ. ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ 1 ವ್ಯಾಜ ಕರುಣೇಗೋಜು ಸಂಸøತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ 2 ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ 3 ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ 4 ದೇವವರ ಭವ್ಯಾತ್ಮ | ಪಾವನವು ತವ ಸ್ಮøತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ 1 ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ 2 ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ 3 ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು 4 ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ 5 ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು 6 ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ 7
--------------
ಕನಕದಾಸ
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜಗದಾದಿವಂದ್ಯನಿಗೆ ಶರಣುಪ ಪನ್ನಗಾನಗದೊಡೆಯ ಶರಣು 1 ತವಪದನಖಾಗ್ರಕೆ ಶರಣು2 ಮೂಡಲಾಗಿರಿಗೆ ಶರಣು ಗಿರಿಯ ಅಡಿದಾವರೆಗಳಿಗೆ ಶರಣು3 ನಡೆರ್ವಡಿಗಳಿಗೆ ಶರಣು4 ಮೆಟ್ಟು ಮೆಟ್ಟಲಿಗೆ ಶರಣು ಮನಮುಟ್ಟ ಮೆಟ್ಟಲೇರುತಿಹ ನಿನ್ನಿಷ್ಟ ಭಕ್ತರಿಗೆ ಶರಣು 5 ತನುಕಷ್ಟ ಹರಿಸಿ ಮನತುಷ್ಟಿಯನು ತೋರ್ವ ಬೆಟ್ಟದಂದಕ್ಕೆಲ್ಲ ಶರಣು 6 ಪರಿವಾರಕ್ಕೆಲ್ಲ ಶರಣು7 ಸ್ವರಶಬ್ದವಾಚ್ಯತವ ಶರಣು 8 ಚೆಲ್ವ ಗಾಳಿಗೋಪುರ ದ್ವಾರಕ್ಕೆ ಶರಣು 9 ಲೀಲೆಯಿಂದಲಿ ನಿನ್ನನೋಲೈಪ ಭಕ್ತರ ಪಾದಪಲ್ಲವಂಗಳಿಗೆ ಶರಣು 10 ಗೋವಿಂದ ಸಚ್ಚಿದಾನಂದ ಮುಕುಂದನೆಂದು- ಚ್ಚರಿಪ ಭಕ್ತರಿಗೆ ಶರಣು11 ಹರಿ ಹರೀ ಹರಿ ಎಂದು ಹರಿದಾರಿ ಪಿಡಿದ ವರ ಅಡಿದಾವರೆಗಳಿಗೆ ಶರಣು 12 ಪರಿಪರಿ ಭಾಧೆಯಿಂ ತರಳನ್ನ ಕಾಯ್ದ ಶ್ರೀ ನರಹರಿಯ ಚರಣಾರವಿಂದಕ್ಕೆ ಶರಣು 13 ತಿರುದಾರಿ ಮೊಣಕಾಲ ಮುರಿಗೆ ಶರಣು 14 ಭಕ್ತರಾಪತ್ತಳಿವ ಶಕ್ತಿಸಂಪತ್ತೀವ ಉತ್ತಮೋತ್ತಮ ಭಕ್ತರಾ ಮಂಟಪಕ್ಕೆ ಶರಣು 15 ಭಕ್ತಿಯಿಂದಲಿ ಸಪ್ತಗಿರಿಯ ದಾಟಿದ ಹರಿ- ಭಕ್ತಜನಸಂದೋಹಗಳಿಗೆ ಶರಣು 16 ಭಕ್ತರುಧ್ಧರಿಸಲು ನಿಂದ ಸಮೀರನಿಗೆ ಶರಣು17 ಜೀವರಿವರೆನ್ನುವರು ದರುಶನವನೀಯೆಂದು ಕ- ರವ ಮುಗಿದು ಹರಿಯ ಸ್ತುತಿಸುವಗೆ ಶರಣು 18 ಪಾವನಾ ಮೂರ್ತಿಯನು ಮಾನಸದಿ ಧೇನಿಸಲು ಭಾವಶುಧ್ದಿಯನೀವ ಜೀವೇಶನಿಗೆ ಶರಣು 19 ಸಚ್ಚಿದಾನಂದಾತ್ಮ ಶ್ರೀ ಮುಕುಂದನ ದಿವ್ಯ ಅರಮನೆಯ ಮಹಾದ್ವಾರಕ್ಕೆ ಶರಣು 20 ಸಿರಿ ಅವ್ಯಾಕೃತಾಕಾಶಾವರಣಕ್ಕೆ ಶರಣು 21 ತೀರ್ಥಮಹಿಮೋಪೇತ ಸ್ವಾಮಿಪುಷ್ಕರಣೀ- ತಟವಿರಾಜಿತ ಅಶ್ವತ್ಥವೃಕ್ಷರಾಜನಿಗೆ ಶರಣು22 ಭೂದೇವಿಯಾರಮಣ ಆದಿಭೂವರಹ ಮೂರ್ತಿಯ ಶ್ರೀಪಾದಯುಗ್ಮಕ್ಕೆ ಶರಣು 23 ಬ್ರಹ್ಮಾಂಡದೊಡೆಯನ ದಿವ್ಯ ನಿಲಯದೊಳಿರುವ ಬಹಿರಾವರಣಕ್ಕೆ ಶರಣು 24 ಸರ್ವಗುಣಸಂಪೂರ್ಣ ವೈಕುಂಠಮಂದಿರನ ಸ್ವರ್ಣಮಯ ಸುಪರ್ಣಸ್ಥಂಭಕ್ಕೆ ಶರಣು 25 ಗಮನ ನಿರ್ಗಮನವುಳ್ಳ ಸುಮನಸರ ಭಕ್ತಜನಸಂಘಕ್ಕೆ ಶರಣು26 ಅಂತರಾವರಣಕ್ಕೆ ಶರಣು 27 ಕಾಂಚನರೂಪ ಸುವರ್ಣಮುಖರೀನದಿ ವಿ- ರಾಜಿತ ತೊಟ್ಟಿತೀರ್ಥ ಸಮಸ್ತ ತೀರ್ಥಗಳಿಗೆ ಶರಣು 28 ಸುಮನಸರು ಹೃನ್ಮನದಿ ಧೇನಿಸುವ ಕಾಂಚನ ವಿಮಾನದಲಿ ಬೆಳಗುತಿಹ ಶ್ರೀ ಶ್ರೀನಿವಾಸನಿಗೆ ಶರಣು 29 ಭೂಗಿರಿಯ ಸೇರಿದ ಶ್ರೀಹರಿಗೆ ಶರಣು 30 ವಾರಿಯೊಳಗ್ಯೋಲಾಡಿ ಶ್ರೀಶೈಲದೊಳು ನಿಂ- ತ ಶ್ರೀಲೋ¯ನಾಗಿರ್ಪಗೆ ಶರಣು31 ಶೇಷ್ಠನೆನಿಸಿದ ದಿಟ್ಟ ಮೂರುತಿಗೆ ಶರಣು 32 ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ ಮರುಳುಮಾಡಿದ ಮಾಯಾರಮಣನಿಗೆ ಶರಣು 33 ತರಳರೂಪವ ಕೆಡಿಸಿ ಗಿರಿಯ ಹುದರಯೊಳಡಗಿ ಸುರಜೇಷ್ಠನೆಂದೀಗ ಪೂಜೆ ಗೊಂಬುವಗೆ ಶರಣು 34 ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ- ವಾಟವಿಯ ದಾಟಿಸಲು ನಿಂದವಗೆ ಶರಣು 35 ಪೆತ್ತಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು ಉತ್ತಮಾಗತಿಪ್ರದ ಸರ್ವೋತ್ತಮಗೆ ಶರಣು 36 ಕ್ಷಿತಿಸುತೆಯ ಮಾತನು ಹಿತದಿ ಪಾಲಿಸೆ ವೇದ- ವತಿಯ ಪತಿಯಾಗಿ ನಿಂದವಗೆ ಶರಣು 37 ಗುಟ್ಟಾಗಿ ಪಾಲ್ಕುಡಿದು ಪೆಟ್ಟಿನಾ ನೆಪದಲ್ಲಿ ದೃಷ್ಟಿಗೋಚರನಾದ ಬೆಟ್ಟದೊಡೆಯನಿಗೆ ಶರಣು38 ಉತ್ತಮಾಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ ಹುತ್ತದೊಳು ಅಡಗಿಯೆ ಮೆರೆದವಗೆ ಶರಣು 39 ಸಿರಿಯ ಹಯವನು ಮಾಡಿ ಚರಿಸಿ ಹರಿಸಿಕೊಂಡವನಿಗೆ ಶರಣು 40 ಹಿರಣ್ಯಗರ್ಭನ ಜನಕ ಸನ್ಮಹಿಯ ಸನ್ನಿಧಿಯ ಕನಕಮಯಕವಾಟಕ್ಕೆ ಶರಣು 41 ತಟಿಕ್ಕೋಟಿನಿಭ ಪೂರ್ಣ ಸಂಪೂರ್ಣ ಲಕ್ಷಣ ಸನ್ಮಾಂಗಳಾ ಸುಂದರ ಮೂರ್ತೇ ತವ ಶರಣು42 ಮುಕ್ತಾಮುಕ್ತಗಣ ವಂದಿತಾ ತವ ಶರಣು43 ನಂದಸುನಂದನ ಜಯವಿಜಯಾದಿ ಪಾ- ಸಂಸೇವ್ಯಮಾನ ತವ ಶರಣು44 ಸರ್ವಾಂಗುಳ್ಳಂಗುಷ್ಠದಳ ವಿಲಸಿತ ಸತ್ ಪಾದ- ಪಂಕಜ ಧ್ವಜ ವಜ್ರಾಂಕುಶಾದಿ ಸುಚಿಹ್ನ ಚಿಹ್ನಿತ ತವ ಶರಣು 45 ಗುಲ್ಫಾರುಣನಖ ಧೃತಾ ದೀಧಿತಿಯುಕ್ತ ತವ ಶರಣು 46 ಬೃಹತ್ ಕಟಿತಟಶ್ರೋಣಿ ಕರಭೋರು ದ್ವಯಾನಿಶ್ರ ತವ ಶರಣು 47 ವೈಜಯಂತಿ ವನಮಾಲ ತವ ಶರಣು 48 ಪ್ರಲಯ ಪೀವರಭುಜ ತುಂಗಂಶೋರಸ್ಥ ಲಾಶ್ರಯ ತವ ಶರಣು 49 ನ್ವಿತ ತವ ಶರಣು50 ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು- ಭದ್ರನಾಸ ಚಾರುಸುಕರ್ಣ ಸುಕಪೋಲಅರುಣ ತವ ಶರಣು 51 ಸಹಸ್ರ ಫÀಣಶಿರೋಮಣಿಪ್ರಭಾನ್ವಿತ ಶೇಷಶೈಲಸ್ಥ ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣು 52 ಅನಂತವೇದೋಕ್ತ ಮಹಿಮೋಪೇತ ಸರ್ವಸ್ವರವರ್ಣ ಸರ್ವಶಬ್ದವಾಚ್ಯ ಪ್ರತಿಪಾದ್ಯ ಶರಣು 53 ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ ಹೃತ್ಕಮಲಸ್ಥಿತ ತವ ಶರಣು 54 ಅಣುತ್ರ್ಯಣು ತೃಟಿಲವ ಕ್ಷಣಾದಿಕಾಲ ಮಹ- ತ್ಕಾಲಾತ್ಮಕ ನಿತ್ಯನಿರ್ಮಲಮೂರ್ತೇ ತವ ಶರಣು 55 ಪರ ಮೇಷ್ಟಿವಂದಿತ ತವ ಶರಣು 56 ತೈಜಸ ಪ್ರಾಜ್ಞ ತುರ್ಯಾ ದ್ಯಷ್ಟರೂಪಾತ್ಮಕ ತವ ಶರಣು57 ಕಂಸಾರಿ ಮುರಾರಿ ಶ್ರೀಹರಿಯೆ ಶರಣು58 ಭವರೋಗಭೇಷಜ ಭಕ್ತಜನಬಂಧೋ ಮುಚುಕುಂದವರದ ಗೋವಿಂದ ಶರಣು 59 ಮುಕ್ತಾಮುಕ್ತಾಶ್ರಯ ಭಕ್ತಜನಸಂರಕ್ಷಣಾ ವ್ಯಕ್ತಾವ್ಯಕ್ತ ಮಹಿಮ ತವ ಶರಣು 60 ತತ್ತದಾಕಾರ ಜಗದಾಪ್ತ ಶರಣು 61 ಚೇತನಾಚೇತನ ವಿಲಕ್ಷಣ ಸ್ವಗತಭೇದವಿವ- ರ್ಜಿತ ಪತಿತಪಾವನಮೂರ್ತೇ ತವ ಶರಣು 62 ಕ್ಷರಾಕ್ಷರ ಪರುಷಪೂಜಿತ ಪಾದ ಪುರಾಣಪುರುಷೋತ್ತಮನೆ ಶರಣು 63 ರವಿಕೋಟಿಕಿರಣ ರತ್ನಕನಕಮಯ ಮುಕು- ಟಾನ್ವಿತ ತವಶಿರಸ್ಸಿಗೇ ತವ ಶರಣು 64 ಸುಂದರಾನಂದ ಆನನಕೆ ಶರಣು 65 ಶ್ರೀಲೋಲ ಶರಣು 66 ಪೂವಿಲ್ಲನಾ ಬಿಲ್ಲ ಪೋಲ್ವ ಹುಬ್ಬು ಕಂಜ - ದಳದೋಲ್ ಚಂಪಕಾಮುಗುಳಿಗೆಣೆನಾಸಿಕಕೆ ಶರಣು 67 ಮಕರ ಕರ್ಣಕುಂಡಲಾನ್ವಿತ ತವ ಕರ್ಣಕ್ಕೆ ಶರಣು 68
--------------
ಉರಗಾದ್ರಿವಾಸವಿಠಲದಾಸರು
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ಜನ್ಮ ಸಫಲವಾಯಿತು ಪ. ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ. ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ 1 ಒಡ್ಡಿ ನಿಂತದ್ದು ಕಂಡು 2 ಮಕರಕುಂಡಲ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ 3 ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು 4 ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ 5
--------------
ವಾದಿರಾಜ
ಜಯ ಕಮಲಾಲಯ ರಮಣ ಜಯಪಾದಾಶ್ರಿತಭರಣ ಜಯಪೂರ್ಣಾಮೃತ ಕರುಣ ಜಯರತ್ನಾಭರಣ ಪ. ನಳಿನನಾಭನು ಪದ್ಮಲಲನೆಯರೊಡಗೂಡಿ ನಲಿವ ಕಾಲದೊಳೊಂದ ನುಡಿದ ಗೋವಿಂದ ಕಲಿಯೊಳಗವತಾರಗೊಳೆನೆಂದ ಮೊದಲಾಗಿ ಚೆಲುವೆ ದಾಸರಿಗೆನ್ನ ನೆಲೆ ತೋರ್ಪದೆಂದು 1 ಇಂದಿರೆ ತೋಷವ ತಾಳಿ ಮಂದಹಾಸದಿ ಪೇಳ್ದಳೊಂದುಪಾಯವನು ಹಿಂದೆ ಲಂಕಾಪುರದಿ ನೊಂದ ವೇದಾವತಿಯ ತಂದು ಲಗ್ನವ ಗಯ್ಯಲೆಂದು ಪೋಗುವುದು 2 ಹೀಗಾದರವತಾರವಾಗದ ಮರ್ಮವು ಸತ್ಯ ಸಾಗುವುದಖಿಳಾರ್ಥ ಭೋಗವ ನೀಡುವುದು ಈಗ ಮುನಿವ ನೆವದಿ ಸಾಗಿ ಕೊಲ್ಲಾಪುರದಿ ನಾಗಶಯನನೆ ನಿನ್ನ ನೆಲೆಯ ನಂಬಿರುವೆ 3 ವಿಕಸಿತ ಪದ್ಮಾನನೆಯ ಯುಕುತಿಯ ಮಾತಿಗೆ ಮೆಚ್ಚಿ ಸಕಲಾವತಾರ ಸಂಭೃತ ಶಕ್ತಿ ಹೆಚ್ಚಿ ಭಕುತ ವತ್ಸಲ ಭೂವರಾಹ ಮೂರ್ತಿಯ ಕಂಡು ಬಕುಳ ದೇವಿಯ ಸಹಾಯವನೆ ಕೈಗೊಂಡು 4 ರಮಾದೇವಿಯ ಕರಸಿ ಬ್ರಹ್ಮಾದಿಗಳ ಬೆರಸಿ ಬ್ರಹ್ಮ ಘೋಷವ ಬೆಳೆಸಿ ಬಹು ಸಂತೋಷಗೊಳಿಸಿ ಅಮರ ಸಭೆಯಲಿ ಭರ್ಮಪೀಠದಿ ಕುಳಿತ ನಿರ್ಮಲಾತ್ಮನ ನೋಡಿ ನಗುತೆಂದಳೊಧುವು 5 ಶುದ್ಧ ಪೂರ್ಣಾನಂದ ಶುಭಗುಣ ಗಣ ಸಾಂದ್ರ ಮುದ್ದು ಮುಖಾಂಬುಜವ ತೋರೊ ಗೋವಿಂದ ಮುದ್ದೆ ಕಸ್ತೂರಿ ಗಂಧಾ ಮೃಗಮದಾದಿಗಳಿಂದ ಮರ್ದಿಸೀದರಶಿನವ ಕೊಳ್ಳೊ ಮುಕುಂದ 6 ಹೂವ ತರುವೆನೆಂದು ಭಾಮೆಯರೊಡಗೊಂಡು ನಾವಂದು ವನದಲ್ಲಿ ನಿಂತಿರುವಲ್ಲಿ ಕಾವಿದಟ್ಟಿಯನುಟ್ಟು ಕುದುರೆ ಮೇಲಳವಟ್ಟು ಕೋವಿದ ಬಂದ್ಯಲ್ಲಿ ಕೋಪವ್ಯಾಕಿಲ್ಲಿ 7 ಮಾನಸವಾಗ ವಿಷಯದ ಮಾತುಗಳಾಡಿದ ಬಗೆಯ ನೀನಿಂದ ಮರೆತೆಯಾ ನಿನ್ನ ಸಂಸ್ಥಿತಿಯ ನಾನಾ ಚಿತ್ರದ ಗತಿಯ ನಿಜ ತುರಂಗದ ಗತಿಯ ಹೀನವಾದರೆ ಹೀಗೆ ತಾಳುವರೆ ಖತಿಯ 8 ಹಳತಾದದೊಂದಶ್ವ ಕಳದ ಚಿಂತೆಯ ತ್ಯಜಿಸು ಪೊಳೆವ ಸಾಸಿರ ಸಂಖ್ಯಗಳಲಿ ಕಣ್ಣಿರಿಸು ಬಳಲಿಸಿದವಳೆಂಬೊ ಛಲವತಾರದೆ ಮನಕೆ ನಲಿನಾಕ್ಷ ಮುಖವೆತ್ತಿ ತೋರೊ ಮಜ್ಜನಕೆ 9 ಹದಿನಾರು ಸಾವಿರ ಚದುರೆಯರನು ರಮಿಸಿ ಮೂರ್ತಿ ಸಾಕೆನಗೆ ಮದನಜನಕ ನಿನ್ನ ಮಹಾತ್ಮ್ಯಯನು ಬಲ್ಲೆ ಪದ ಪದ ಪಾಲಿಸಿದರರಸಿನ ಹಚ್ಚುವೆನು 10 ಕರಿವರ್ಣ ಸಂಕೋಚ ತರದಿರೊ ಮನದಲ್ಲಿ ಕರಿಯಾದ ಕಸ್ತೂರಿ ಪರಿಮಳವಿರದೆ ಸರಸಿಜಾತನ ಶಿರದ ಮೇಲಿರಿಸಿರುವ ಕರಕಂಜವನು ತೋರಲರಿಸಿನ ಹಚ್ಚುವೆನು 11 ಹಿಂಡು ಕೂಡಿದ ದೇವ ಮಂಡಲದೊಳಗಿಂಥ ಪುಂಡು ಮಾತುಗಳೆಂಬ ದಿಂಡೆಯಾತನವು ಗಂಡರಿದಿರು ಚಿಕ್ಕ ಹೆಂಡಿರಾಡುವ ಪರಿಯು ಪುಂಡರೀಕಾಕ್ಷ ಪಾಲಿಸು ತಪ್ಪಿದರೆಯು12 ಈ ನಿಂದಾಸ್ತುತಿಗಳನು ಧ್ಯಾನಿಸಿ ವೆಂಕಟವರನು ಮಾನಿನಿ ಪದ್ಮಾವತಿಗೆ ಮುಖವ ತೋರಿದನು ಸಾನುರಾಗದಿ ಶ್ರೀಭೂಮಾನಿನಿಯರೊಡಗೂಡಿ ತಾನಾಗಿ ದಯಮಾಡಿಲ್ಲಿಗೆ ಬಂದ ನೋಡಿ 13
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ 1 ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ2 ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ 3 ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ 4 ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ 5
--------------
ಚಿದಾನಂದ ಅವಧೂತರು
ಜಯ ಜಯ ಶ್ರೀ ಹರಿ ಶೌರಿ ಜಯ ಜಯ ಮಂದರಧಾರಿ ಜಯ ಜಯ ಶ್ರೀ ಮುರವೈರಿ ಕಂಸಾರಿ ಪ ಮುತ್ತಿನ ಮಂಟಪದಿ ರತ್ನಪೀಠವನಿರಿಸಿ ಅರ್ಥಿಲಿ ಬಾ ಹಸೆಗೆನ್ನುತ ಕರೆವರು ಮುತ್ತೆ ೈದೆಯರುಗಳು 1 ಇಂದಿರೆ ರಮಣ ಬಾ ಕಂದರ್ಪ ಜನಕ ಬಾ ಸುಂದರಾಂಗನೆ ಬಾ ಹಸೆಗೆನ್ನುತ ಚಂದದಿ ಕರೆದರು 2 ಕಂಬು ಕಂದರೆಯೆ ಬಾ ಅಂಬುಜ ಮುಖಿಯೆ ಬಾ ಸಂಭ್ರಮದಲಿ ಬಾ ಹಸೆಗೆನ್ನುತ ಕರೆದರು ಅಂಬುಜ ಮುಖಿಯರು 3 ನಾರಿ ರುಕ್ಮಿಣಿ ದೇವಿ ನಾರದ ವಂದ್ಯನಿಗೆ ಚಾರು ಪರಿಮಳ ಅರಿಶಿನ ಕುಂಕುಮ ಹಾರವನರ್ಪಿಸುತ 4 ಪರಿ ಕುಸುಮಗಳ ಪದಕÀ ಪುಷ್ಪದ ಮಾಲೆ ಪರಮಾತ್ಮನ ಕೊರಳಿಗೆ ಹಾಕುತ ಅಲಂಕರಿಸಿದಳಾಗ5 ಜಯ ಜಯ ಶ್ರೀ ಕೇಶವನೆ ಜಯ ಜಯ ನಾರಾಯಣನೆ ಜಯ ಜಯ ಶ್ರೀ ಮಾಧವನೆ ಜಯ ಜಯ ಗೋವಿಂದ 6 ಜಯ ಜಯ ಶ್ರೀ ವಿಷ್ಣುಹರೆ ಜಯ ಜಯ ಶ್ರೀ ಮಧುಸೂದನನೆ ಜಯ ಜಯ ಶ್ರೀ ತ್ರಿವಿಕ್ರಮನೆ ಜಯ ಜಯ ವಾಮನನೇ 7 ಜಯ ಜಯ ಶ್ರೀ ಶ್ರೀಧರನೇ ಜಯ ಜಯ ಶ್ರೀ ಹೃಷಿಕೇಶ ಜಯ ಜಯ ಶ್ರೀ ಪದ್ಮನಾಭ ಜಯ ದಾಮೋದರನೆ 8 ಜಯ ಜಯ ಸಂಕರ್ಷಣನೆ ಜಯ ಜಯ ಶ್ರೀ ವಾಸುದೇವ ಜಯ ಜಯ ಶ್ರೀ ಪ್ರದ್ಯುಮ್ನ ಅನಿರುದ್ಧ 9 ಜಯ ಜಯ ಶ್ರೀ ಪುರುಷೋತ್ತಮನೆ ಜಯ ಜಯ ಶ್ರೀ ಅಧೋಕ್ಷಜನೆ ಜಯ ಜಯ ಶ್ರೀ ನಾರಸಿಂಹ ಜಯ ಜಯ ಅಚ್ಚುತನೆ 10 ಜಯ ಜಯ ಶ್ರೀ ಜನಾರ್ದನನೆ ಜಯ ಜಯ ಶ್ರೀ ಉಪೇಂದ್ರಹರೇ ಜಯ ಜಯ ಶ್ರೀ ಹರಿ ಶ್ರೀಶಾ ಜಯ ಜಯ ಶ್ರೀ ಕೃಷ್ಣಾ11 ಇಂತು ದೇವನ ಸ್ತುತಿಸಿ ಸಂತಸದಿ ವೀಳ್ಯವನು ಕಂತು ಪಿತನಿಗೆ ಅರ್ಪಿಸಿ ಮುದದಿ ವಂದಿಸಿ ಭಕ್ತಿಯಲಿ12 ಕಮಲಾಕ್ಷಿಯರು ಕೂಡಿ ಕನಕದಾರತಿ ಪಿಡಿದು ಕಮಲನಾಭ ವಿಠ್ಠಲ ಲಕ್ಷ್ಮೀಯರಿಗೆಬೆಳಗಿದರಾಗ 13
--------------
ನಿಡಗುರುಕಿ ಜೀವೂಬಾಯಿ
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ 1 ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು 2 ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ 3 ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ 4 ಸಿರಿ ಸುಖಲೋಲಗೆ 5 ಅಂತರಾತ್ಮಲಿಹಗೆ ಸಂತತ ಸದೋದಿತಗೆ 6 ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವಿ ಜಗನ್ಮಯೆ ಪಾಹಿ ಜಯ ದೇವಿ ಜಗನ್ಮಯೆ ಪಾಹಿ ಪಜಯ ವಾಗೀಶ್ವರಿ ಜಯ ಕಮಲಾಲಯೆ ಜಯ ಗಿರಿಸುತೆ ಜಯ ಜಾನಕಿ ಅ.ಪಶರಹರಕಲಮಾಯಾಬಿಂದುತ್ರಯಪರಿಶೋಭಿತ ಮನು ಸಂಘಾರಾಧ್ಯೆ 1ಚಂಡಿ ಭಂಡ ಶುಂಭನಿಶುಂಭಾರ್ಧಿನಿಪಂಡಿತವರ್ಧಿನಿ ಪರಮಾರಾಧ್ಯೆ 2ದಶಮುಖ ಪಂಚತ್ವಾಗಮ ಕಾರಣೆದಶದಶವದನಾರ್ದನಿ ನಿರವದ್ಯೆ 3ವಿಧಿ ಹರಿ ಹರ ರುದ್ರೇಶ್ವರ ಭಾವಿತೆಮಧುಸೂದನ ಹೃದಯ ಸದುದವಸಿತೆ 4ವಿಧಿವದನಾಲಯೆ ವಿಧುಧರ ವಾಮಗೆಬುಧ ಹೃನ್ಮುಖ ಕರಣಾಶ್ರಯೆ ಸದಯೆ 5ಷೋಡಶ ಪಂಚಕ ಪಂಚಕ ದಶವಿಧಗೂಢಾಕ್ಷರಮಯ ಶೋಭನ ಗಾತ್ರೆ 6ತಿರುಪತಿ ಕಕುದ್ಗಿರಿ ಪುಣ್ಯ ನದೀ ನದಶರನಿಧಿ ಮಹಿಮಾಸ್ಪದೆ ಶುಭ ವರದೆ 7ಓಂ ಮಾುನೇ ನಮಃ
--------------
ತಿಮ್ಮಪ್ಪದಾಸರು
ಜಯ ಭಾಗೀರಥಿದೇವಿ ಜಯ ಜಾನ್ಹವಿ | ಭವ ಭಯನಿವಾರಿಣಿ ಸುಖಕಾರಣಿ ಪ ಪಟು ತ್ರಿವಿಕ್ರಮನ ಉಂಗುಟ ಸೋಂಕಲಾರ್ಭಟದಿ | ಸ್ಫುಟಿತ ಬ್ರಹ್ಮಾಂಡ ನಿಜಕಟಹದಲ್ಲುದಿಸಿ | ನೆಟನೆ ಪದುಮಜಪಾತ್ರ ತಟಕೆೃದು ತೀರ್ಥೆನಿಸಿ | ನಿಟಲಲೋಚನ ನಘನಜಟೆಗೆ ಬಂದು 1 ಕೆಲವು ಕಾಲಕೆ ಹಿಮಾಚಲದಿಂದ ಭಗೀರಥಗೆ | ಒಲಿದು ಕಾಶೀ ಪ್ರಯಾಗದಲಿ ಬಂದು | ಸಲೆಜಗವ ತಾರಿಸುತಲಿ ಮುಖ ಸಹಸ್ರದಿಂ | ಫಣಿ ನಿಲಯಕಿಳಿದೇ2 ಸ್ಮರಣೆಯಿಂದಘಹರಿಪೆ ದರುಶನದಿ ಗತಿಯೀವೆ | ನೆರೆ ಸ್ನಾನದಾ ಫಲವನರಿವರಾರು | ಗುರುಮಹೀಪತಿಜನುದ್ಧರಿಸು ಕರುಣದಲಿ | ಸಾಗರಪ್ರೀತೆ ಖ್ಯಾತೆ ಲೋಕಮಾತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ರಮಾದೇವಿ ಸಾಗರ ಕನ್ನಿಕೆ ಪ ಪದ್ಮ ಪದ್ಮಾಲಯೇ ಪದ್ಮದಳಲೋಚನೆ | ಪದ್ಮಪ್ರಿಯೆ ದಿವ್ಯ ಪದ್ಮವದನೆ | ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ | ಪದ್ಮಾಸನಾದೆನುತ ಪದ್ಮಚರಣೆ 1 ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ- ತಂಗ ಸನ್ನಿಭ ಕೋಮಲಾಂಗಿ ವರದೆ || ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ | ಅಂಗಜಾಜನನಿ ಶ್ರೀರಂಗಪ್ರಿಯೆ 2 ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ | ನುತಗುಣ ಮಹಿಮಾಯ ಶ್ರುತಿ ಪೂಜಿತೆ || ಪತಿತಪಾವನ ಮಹೀಪತಿನಂದನಿಷ್ಟ | ದೇ ವತಿ ಭಕ್ತ ಜನಸುಖದಿ ಮತಿದಾಯಿತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು