ಒಟ್ಟು 7252 ಕಡೆಗಳಲ್ಲಿ , 131 ದಾಸರು , 4420 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ ಭೂತಳದೊಳಜಾತನಾಗಿ ಮೆರೆವ ಪ ಏಕಾರಾರ್ಣವದೊಳು ಎಲ್ಲರ ವೊಡಲೊಳು ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು ಲೋಕನಾಯಕ ಹರಿವಟದೆಲಿಯ ಮೇಲೆ ಮಾಕಾಂತಿಯ ಕೂಡ ಮಲಗಿದ ಗುಣನಿಧಿ 1 ಜಿನಮತದಲಿ ಪುಟ್ಟಿ ದಾನವರು ಸ ಜ್ಜನಕರ್ಮ ಮಾಡುತಲಿರೆ ವೇಗಾ ಅನಿಮಿಷರಾಡಿದ ಮಾತಿಗೆ ದೈತ್ಯನ ಮನವಂಚಿಸಿ ಉಪದೇಶ ಮಾಡಿದ ಹರಿ2 ನಂದ ವ್ರಜದಲ್ಲಿ ಪೂತಿನಿ ಶಕಟನ್ನ ಗಜ ಮಲ್ಲರ ಸವೆದು ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು ದೇವಕಿ ಬಾಲಕನಾಗಿ ತೋರಿದಾ 3
--------------
ವಿಜಯದಾಸ
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ಪ ಶ್ರೀಕರ ಕೃಷ್ಣಾತಟದಿ ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ ಸದಾ ಶ್ರೀಕಾಂತನ್ನ ಧ್ಯಾನಂಗತರು 1 ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2 ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ | ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3 ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4 ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5 ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6 ಯಾವ ಸಂಶಯವ್ಯಾಕೆ ಕೋವಿದವರ್ಯರಾದ | ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7 ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8 ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ ಪಿಸಿ ಬಿಂಬೋಪಾಸನಗೈವ ಬುಧರು 9 ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10 ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು | ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11 ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ ಚರಿಯ ನರೆÉದ ಜನಕೆ ತೋರಿ 12 ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ | ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13
--------------
ಶಾಮಸುಂದರ ವಿಠಲ
ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ ಶೇಷನಾಮಕನೆ ವಿಶೇಷ ಜ್ಞಾನವ ನೀಡೋ ದಾಸರಾಯ ಪ ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ ಸಂತೋಷ ತೀರ್ಥರಂತಃ ಕರಣ ಪಾತ್ರ ದಾಸರಾಯ 1 ಚಿಂತಿಪ ಜನರಿಗೆ ಚಿಂತಾಮಣಿತಯ ನೀನೆ ದಾಸರಾಯ ಚಿಂತಿರಹಿತವರ ಚಿಂತಾಮಣಿಯು ನೀನೆ ದಾಸರಾಯ 2 ಚಿಂತ ರಹಿತವರ ಚಿಂತರವೇಲಿವಾಸ ದಾಸರಾಯ ಕದಂಬ ವಿನುತ ದಾಸರಾಯ 3 ಬೆಂಬಿಡದಲೆ ಮನದ್ಹಂಬಲ ಪೂರೈಸು ದಾಸರಾಯ ನಂಬಿದ ದ್ವಿಜರಿಗೆ | ಶಂಭುಗಿರಿಯಲ್ಲಿ ದಾಸರಾಯ 4 ಬಾಂಬೊಳೆ ತೋರಿಸಿ ಸಂಭ್ರಮಗೊಳಿಸಿದ ದಾಸರಾಯ ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ 5 ಹರಿಕೇತು ಹರಿಸುತಾದ್ಯರನ ಸಂಹರಿಸಿದ ದಾಸರಾಯ ಹರಿದಾಡುತಿಹ ಮನ | ಹರಿಯಲ್ಲಿ ನಿಲಿಸಯ್ಯದಾಸರಾಯ 6 ಹರಿವೈರಿ ಮತಕರಿ | ಪರಿಪರಿ ಹರಿಸಘು ದಾಸರಾಯ ಪೂರ್ತಿಸುವ ನಿನ್ನ ವಾರ್ತೆಕೇಳಿ ಬಂದೆ ದಾಸರಾಯ 7 ಪಾರ್ಥಸಾರಥಿ ಭವ್ಯದಾಸರಾಯ ಮೂರ್ತಿಯ ಸ್ಥಾಪಿಸಿ ಕೀರ್ತಿಯ ಪಡೆದ ದಾಸರಾಯ 8 ನೇಮನಿಷ್ಟೆಯ ಬಿಟ್ಟು ಪಾಮರನಾದೆನಗೆ ದಾಸರಾಯ ಶ್ರೀಮಧ್ವನಿಗಮಾರ್ಥ | ಪ್ರೇಮದಿ ತಿಳಿಸಯ್ಯ ದಾಸರಾಯ 9 ಕಾಮಾದಿ ಷಡ್ವೈರಿ | ಸ್ತೋಮಾದಿ ಕುಲಿಶನೆ ದಾಸರಾಯ ಕಾಮಿತ ಫಲದಾಯಕ ಶಾಮಸುಂದರ ದೂತ ದಾಸರಾಯ 10
--------------
ಶಾಮಸುಂದರ ವಿಠಲ
ಪೋಷಿಸೆನ್ನ ಜೀಯಾ | ಗುರು |ಪ್ರಾಣೇಶ ದಾಸರಾಯಾ |ಶ್ರೀಶನ ಗುಣ ಸಂತೋಷದಿ ಪಾಡುವ |ದಾಸ ಕುಲಾಗ್ರಣಿಯೇ | ಎಣಿಯೆ ಪ ಹರಿಸ್ಮರಣೆಯ ಮರೆದೂ | ಸರ್ವದ |ಪದದನ್ನಕೆ ಬೆರಿದೂ |ದುರುಳ ಜನರ ಸಹವಾಸವನ್ನು ಮಾಡಿ |ಬಂದೆ ದಿನವ ಕಳೆದೇ ಉಳದೇ 1 ಪವನ ಮತದೊಳಿಟ್ಟೂ | ಶ್ರೀ ಹರಿ |ಸ್ತವನವನ್ನೆ ಕೊಟ್ಟೂ |ಕವಿಗಳ ಮುಖದಿಂ ತತ್ವವಿಚಾರದಿ |ಕವಲ ಮತಿಯ ಪಾಲಿಸೀ, ಉದ್ಧರಿಸೀ 2 ಮನ್ನ ಭಿನ್ನಪವನ್ನು ಕೇಳಿ |ಮನ್ನಿಸು ಸುರಧೇನೂ |ಘನ್ನ ಶ್ರೀಶ ಪ್ರಾಣೇಶ ವಿಠಲನ ಧ್ಯಾನ |ವನ್ನು ಮಾಳ್ವ ಶಕ್ತಾ ವಿರಕ್ತಾ 3
--------------
ಶ್ರೀಶಪ್ರಾಣೇಶವಿಠಲರು
ಪೋಷಿಸೆನ್ನ ದಾಸಶ್ರೇಷ್ಠನೆ ವಸುಧಿದೇವ ನಿಕರಪಾಲ ವ್ಯಾಸರಾಯನ ಪ್ರೇಮಪಾತ್ರನೆ ಪ ವೇದಸಾರವಾದ ಕವನಗೈದು ಪ್ರಾಕೃತದಿ ಜಗದಿ ಭೇದಜ್ಷಾನ ತಾರತಮ್ಯ ಬೋಧಿಸಿದ ಸಾಧುಶೀಲ 1 ಜ್ಞಾನಿ ವೀಣಾಪಾಣೆ ದೇವ ಮೌನಿ ದಾನಿ | ಸ ನ್ಮಾನಿ ಗಾನಲೋಲ ದೀನಪಾಲನ 2 ನಂದಗೋಪಕಂದ ಶಾಮಸುಂದರವಿಠಲಗೆ ಪರಮ ಯೆಂದು ಸಾರಿ ಸುಪಥ ತೋರಿ ಮಂದÀರನ್ನು ಪೊರೆದ 3
--------------
ಶಾಮಸುಂದರ ವಿಠಲ
ಪೋಷಿಸೆನ್ನ ವೆಂಕಟೇಶ ಶ್ರೀಶ ಶ್ರೀನಿವಾಸ ಶೇಷಗಿರಿನಿಲಯ ಶ್ರೀ ಇಂದಿರೇಶ ಈಶ ಪ ಹೇಸಿಯಿವನೆಂದೆನುತ ದೂಷಣೆಯ ಮಾಡದಿರು ದೋಷದೂರನೆ ನಿನ್ನ ದಾಸ ನಾನಭವ ದಾಸಜನರ ಮನದುಲ್ಲಾಸದೇವರು ನೀನು ದಾಸನ ಆಸೆಯನು ಪೂರೈಸಿ ಸಲಹಯ್ಯ 1 ಕುನ್ನಿಕುಲದಲಿ ಜನಿಸಿ ಬನ್ನಬಡಲಾರದೆ ಉನ್ನತೋನ್ನತಮಹಿಮ ನಿನ್ನ ಬೆನ್ನು ಬಿದ್ದೆ ಭಿನ್ನತಾರದೆ ಎನಗೆ ನಿನ್ನ ದರ್ಶನವಿತ್ತು ಉನ್ನತಮತಿ ನೀಡಿ ಮನ್ನಿಸಿ ಸಲಹು 2 ನಿತ್ಯ ತವ ಶರಣಜನರುಂಡು ಮಿಕ್ಕ ಪರಮಪ್ರಸಾದ ಶರಣೆಂದು ಚರಣಕ್ಕೆ ಮರೆವೊಕ್ಕೆ ನೆರೆನಂಬಿ ತಿರುಪತೀಶನೆ ಭಕ್ತ ಕರುಣಿ ಶ್ರೀರಾಮ 3
--------------
ರಾಮದಾಸರು
ಪೋಷೀಸೊ ಹರಿ ಮಂಚಕ | ಪೆಡೆಗಳುಸಾಸೀರ5ುಭೂಷ5ಪ|| 5ಷ ಎನ್ನ ದೋಷ ನಿ | ಶ್ಯೇಷವ ಗೈಸುತಸಾಸೀರ ನಾಮವ ಮನಾ | ಕಾಶದೊಳು ತೋರಿ ಅ.ಪ. ಬೇಡೂವೆ ವಾತಾಶನಾ | ಎನ್ನನ್ನುಕಾಡೂವ ವ್ಯಜಿನಾಹನಾ |ಮಾಡಿ ಮನ್ಮಾನಸದಿ | ರೂಢಿಗೊಡೆಯ ಹರಿಯನೋಡುವ ಸುಖ ತಡ | ಮಾಡದೆ ಕೊಟ್ಟು ಕಾಯೋ 1 ಚಕ್ಷುವೆ ಶ್ರವ ಕಾಯಾ ಪೂರ್ವದತ್ರ್ಯಕ್ಷಾನೆ ಸುರಗೇಯಾ |ಕುಕ್ಷೀಯೆ ಪಾದವೆಂಬ | ಲಕ್ಷಣ ಶಿರದಲ್ಲಿಲಕ್ಷೀಸದಲೆ ಜಗ | ಸರ್ಪಪಾಯಿತ ನಿನಗೆ 2 ಜೀವ ನಾಮಕ ನೆನಿಪೆ | ಹರಿಯನುಸೇವಿಸುತಲಿ ಸುಖಿಪೆ ||ಕಾವಕೊಲ್ಲುವ ಗುರು | ಗೋವಿಂದ ವಿಠಲನತೀವರ ತೋರ್ಪುದು | ನೀ ವೊಲಿದೆನಗಿನ್ನು 3
--------------
ಗುರುಗೋವಿಂದವಿಠಲರು
ಪೌರಾಣಿಕ ಕಥನ ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು1 ಪಾದರಜದಿಂ ಪೊರೆಯುತ ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ ದಾನವಸೂದನಗಾರತಿಯ ಬೆಳಗಿದರು 2 ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ ವನಕ್ಕೆ ತಾ ಸಂಚರಿಸುತ ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ ಮಾಣಿಕ್ಯದಾರತಿಯ ಬೆಳಗಿದರು 3 ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ ಮುತ್ತಿನಾರತಿಯ ಬೆಳಗಿದರು 4 ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ ಜಾನಕೀಪ್ರಿಯಗಾರತಿಯ ಬೆಳಗಿದರು 5 ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ ಸೀತೆಯ ವಿನಯ ಗೈದಗೆ ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ ನಾರಾಯಣ ರೂಪ ಜಯ ಜಯ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪ್ರಕಾಶರೂಪಿ ವಿಠಲಾ ತೋಕನ್ನ ಸಲಹೋ ಪ ಅಕಳಂಕ ಚಾರಿತ್ರ | ನಿಖಿಲಾಗಮಸುವೇದ್ಯಪ್ರಕಟಿಸಿವನಲಿ ಜ್ಞಾನದಂಕುರವ ಹರಿಯೇ ಅ.ಪ. ಮಧ್ವಮತದಲಿ ದೀಕ್ಷೆ | ಶುದ್ಧ ಭಕುತಿ ಜ್ಞಾನಸಿದ್ದಿಸುವುದಿವನಲ್ಲಿ | ಮಧ್ವಾಂತರಾತ್ಮಾವಿದ್ಯೆಸಂಪದದಲ್ಲಿ | ಸ್ಪರ್ಧಿಸುವ ಮನಕಾಗಿಬುದ್ಧಿ ಪ್ರೇರಿಸು ಹರಿಯೆ ಸಿದ್ಧಮುನಿವಂದ್ಯಾ 1 ಕಾಮಾದಿ ಷಡ್ವೈರಿ | ಸ್ತೋಮವನೆ ಕಳೆಯುತ್ತನೇಮನಿಷ್ಠೆಯಲಿ ಮನ | ಕಾಮನೆಯ ಕೊಟ್ಟೂಪ್ರೇಮದಲಿ ಹರಿಗುರೂ | ಸ್ವಾಮಿ ಕಾರ್ಯವಗೈಸಿಕಾಮಿತಾರ್ಥದನಾಗೊ | ಕಾಮ ಪಿತ ಹರಿಯೇ 2 ಅಂಶದಲಿ ತನುವ್ಯಾಪ್ತಿ | ಸಾಂಶದೇವಾದಿಗಳುಸಂಸಾರ ನಿರ್ವಹಣೆ ಮಾಡಿಮಾಡಿಸುತಾಕಂಸಾರಿ ಪೂಜೆ ಎನೆ | ಶಂಸಿಸುತ ಯೋಗ್ಯರಲಿವಂಶ ಉದ್ಧರವೆಂಬ | ಅಂಶವನೆ ತಿಳಿಸೋ 3 ಕಾಕು ಜನಗಳ ಸಂಗ | ಓಕರಿಸುವಂತೆಸಗಿನೀಕೊಟ್ಟು ಸತ್ಸಂಗ | ಪ್ರಾಕ್ಕರ್ಮ ಕಳೆಯೋಲೌಕಿಕದಿ ಸತ್ಕೀರ್ತಿ | ನೀ ಕರುಣಿಸಿವನಲ್ಲಿಏಕಮೇವನೆ ಇದನೆ | ನಾ ಕೇಳ್ವೆ ಹರಿಯೇ 4 ಜೀವರಂತರ್ಯಾಮಿ | ಜೀವಕರ್ಮವವೆಸಗಿಆವಫಲ ದ್ವಂದ್ವಗಳ | ಜೀವಕರುಣಿಸುವನೇಭಾವುಕರ ಪಾಲಗುರು | ಗೋವಿಂದ ವಿಠ್ಠಲನೆಕಾವುದಿವನನು ಎಂಬ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ಪ್ರಥಮಾಕ್ಷರನೆ ದೇವಾ ಮಹಾನುಭಾವಾ ಪ ಸದ್ಗತಿಗೆ ಕಾರಣ ಸಿದ್ಧ ಮೆನ್ನುತ ಪಥವ ಗೈದು ಪರಂಪರವ ತಾ ಸ್ವತಹನಾಗಿಯು ಪ್ರಜ್ವಲಿಸುತಿಹ 1 ವೇದವೇದಾಂತತಿ ಪರತರ ಪಾದಸೇವೆಯ ಕೊಟ್ಟು ನನಗೆ ನೀ ಬೋಧಿಸೆಂದೆಂತೆನು ಪ್ರಣವಾ 2 ಶಿಕ್ಷೆ ರಕ್ಷೆಗೆ ಅಕ್ಷಗೊಳಿಸಿದ ಮೋಕ್ಷದಾಯಕನೆಂದು ಭಜಿಸಲು ಸೂಕ್ಷ್ಮದ್ವಾರದಿ ಹೊಳೆವ ನಿಜಪದ 3 ವೃಂದ ಮಧ್ಯದೊಳೆಸೆವ ಶುಭಕರ ಚಂದಪಾದವ ತೋರಿ ಕರುಣಿಸೊ ಚಂದ್ರಧರ ಚಾಂಪೇಯವದನನೆ 4 ಅಂಗವಿಲ್ಲದೆ ಪೆಸುಸರುತಾಳಿ ನೀ ಲಿಂಗ ಮುಖವಾಗಿರುವ ಸೊಬಗನೂ ಕಲುಷ ಪ ತಂಗ ವೋಂಕಾರೇಶ್ವರನೇ ವೋಂ 5 ಗುಡಿಯೊಳಿಹ ನಿಷ್ಕಲ ನಿರಂಜನ ಅಡಿಗಳಿಗಡಿಯಾದೆನೀಗಾ 6
--------------
ಚನ್ನಪಟ್ಟಣದ ಅಹೋಬಲದಾಸರು
ಪ್ರಭವನಾಮ ಸಂವತ್ಸರ ಸ್ತೋತ್ರ 145 ಪದ್ಮನಾಭ ಪದ್ಮೇಶ ಪದ್ಮಸಂಭವ ತಾತ ಮೋದಬಲ ಜ್ಞಾನಾದ್ಯಾಮಲ ಗುಣನಿಧಿಯೇ ಸತ್ಯಜಗತ್ ಸೃಷ್ಟಾದಿ ಕರ್ತನೀನೇ ಪ್ರಭವ ಸಂವತ್ಸರ ನಿಯಾಮಕನು ಸ್ವಾಮೀ ನಮಸ್ತೆ ಪ ಈ ಪ್ರಭವನಾಮ ನಿನ್ನ ನಿಯಾಮನಿಂ ಸೋಮನು ಈ ಸಂವತ್ಸರರಾಜನು ಮಂಗಳನು ಮಂತ್ರಿಃ ಸಸ್ಯ ಸೈನ್ಯಾಧಿಪರು ಶುಕ್ರ ವಿಧುಧಾನ್ಯಪತಿ ಬುದನು ರಸಪ ರವಿ ನಿರಸಗುರು ಹೀಗೆ ನಾಯಕರು ನವರು 1 ವಿಷ್ಣುನವ ಶ್ರೀನವ ನರವಾಯುನವ ಪತೀಶನÀವ ಶೇಷನವ ಈ ಬಗೆ ನವ ಮೂರ್ತಿ ಅಧಿಕಾರಿಗಳಿಂ ಸ್ಮರಣೀಯ ವರ್ಷನವನಾಯಕರೊಳೆ ವಾಯ್ವುಂತರ್ಗತನಾಗಿ ಶ್ರೀಸಹ ವಿಷ್ಣು ನೀನೆ ಇದ್ದು ಕೃತಿನಡೆಸಿ ಲೋಕವಕಾಯುತಿ2 ಸೋಮ ರಾಜನು ತನ್ನ ವಶದಿ ಸೈನ್ಯ ವೇಘಗಳಿಚ್ಚಿಹನು ಅಮಾತ್ಯತ್ಯ ಕುಜಗಿಹುದು ಶಿಷ್ಟಪಾಲನತಿದುಷ್ಟರ ತಿದ್ದುವುದಕ್ಕೆ ಅಮ್ಮಮ್ಮ ಏನೆಂಬೆ ಅಮೃತಕರ ಸೋಮದಿಯಲ್ಲಿದ್ದು ರಾಜ ರಾಜೇಶ್ವರ ನೀ ಕಮಲಾಸನಪಿತ ಪ್ರಸನ್ನ ಶ್ರೀನಿವಾಸ ಸಂತಾನಾದಿ ಭಾಗ್ಯ ವೀವಿ ಕರುಣಾಳು 3
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಭುವರ ಮರೆದ್ಯಾ ನಟರಾಜವರದ ಪ ಪ್ರಭುವರ ಮರೆದ್ಯಾ ಸೊಬಗಿನ ಹರಿ ಭಕುತರಭಿಮಾನ ತೊರೆದ್ಯಾ ಅ.ಪ ಭವ ಮಾಯಾಜಾಲದಿ ನಾನು ತೋಯಜಾಕ್ಷನೆ ನಿನ್ನ ಭಾವಿಸಿ ಮೊರೆಯಿಟ್ಟು 1 ಘೋರಸಂಸಾರದೊಳು ಘೋರಬqದೆಯಿನ್ನು ಪಾರಮಹಿಮನೆ ನಿನ್ನ ಸಾರುತ ಮರೆಹೊಕ್ಕೆ 2 ದಾಸರೋಳ್ನಿರ್ದಯ ಭೂಷಣವೆ ನಿನಗಿದು ಪೋಷಿಸು ದಯದಿಂದ ಶ್ರೀಶ ಶ್ರೀರಾಮನೆ 3
--------------
ರಾಮದಾಸರು
ಪ್ರಸನ್ನ ರಾಮಾಯಣ ಸುಂದರಕಾಂಡ ಜಯ ಜಯ ಜಯ ರಾಮಚಂದ್ರ ಜಯ ರಾಮಭದ್ರ ಸರ್ವೇಶ ಜಯ ಜಯ ಜಯ ರಾಮ ಸ್ವರತ ಆಹ ಜಯ ಸೀತಾರಮಣ ನೀ ಭಯಬಂಧ ಮೋಚಕ ಜಲ ಸಂಭವಮುಖ ಸುರಸೇವ್ಯ ನಮೋ ನಮೋ ಪ ಶಾಶ್ವತ ಸುಗುಣಾಬ್ಧಿ ರಾಮ ಸವೇಶ್ವರನೆ ಬಲವೀರ್ಯ ಸಂಪೂರ್ಣಾರ್ಣವ ನಿನ್ನ ನಮಿಸಿ ಆಹ ಶೀಘ್ರ ಆ ಗಿರಿಯೆತ್ತಿ ಹನುಮ ಹಾರಲು ಆಗ ಸಾಗರ ಸರ್ವವು ಕಲಕಿ ಓಡಿತು ಕೂಡ 1 ಹಿಂದೆ ಪರ್ವತಗಳ ಪಕ್ಷ ಹನನ ಕಾಲದಿ ವಾಯು ತನ್ನ ಹಿತದಿ ರಕ್ಷಿಸಿದನು ಎಂದು ಆಹ ಹಿಮಗಿರಿಸುತ ಮೈನಾಕನು ಮೇಲೆ ಬಂದಾಗ ಹನುಮಗೆ ನಮಿಸಿ ವಿಶ್ರಮಿಸಿಕೊಳ್ಳೆಂದ2 ಶ್ರಮರಹಿತನು ಎಂದೂ ಹನುಮ ಶ್ರಮ ನಿವಾರಣ ಅನಪೇಕ್ಷ ಆಶ್ಲೇಷಿಸಿ ನಗವರನ ಆಹ ನಿಸ್ಸೀಮ ಪೌರುಷ ಬಲಯುತ ಹನುಮನು ನಿಲ್ಲದೆ ಮುಂದೆ ತಾ ಸುರಸೆಯೊಳ್ ಹೊಕ್ ಹೊರಟ 3 ಪರೀಕ್ಷಿಸೆ ಸುರಸೆಯ ಸುರರು ಪ್ರೇರಿಸಿ ವರವನ್ನು ಕೊಡಲು ಆಹ ಫಣಿಗಳ ತಾಯಿ ಅವಳು ಬಾಯಿ ತೆರೆಯಲು ಪೊಕ್ಕು ಲೀಲೆಯಿಂ ಹನುಮ ಹೊರಹೊರಟ4 ಸುರರು ಆನಂದದಿ ಆಗ ಸ್ತುತಿಸಿ ಹನುಮನ ಕೊಂಡಾಡಿ ಸುರಿಯಲು ಪುಷ್ಪದ ಮಳೆಯ ಆಹ ಶೀಘ್ರ ಪವನಜನು ಮುಂದೆ ತಾ ಹೋಗುತ್ತ ಸಿಂಹಿಕಾ ರಾಕ್ಷಸಿ ಛಾಯಾಗ್ರಹವ ಕಂಡ 5 ಸರಸಿಜಾಸನ ವರಬಲದಿ ಸಿಂಹಿಕಾ ಲಂಕಾ ಪೋಗುವರ ಸೆಳೆದು ತಾ ನಿಗ್ರಹಿಸುವಳು ಆಹ ಸೆಳೆಯೆ ಆ ರಾಕ್ಷಸಿ ಹನುಮನ ಛಾಯೆಯ ಸೀಳಿದ ಹನುಮ ಅವಳ ಶರೀರದಿ ಪೊಕ್ಕು 6 ತನ್ನ ನಿಸ್ಸೀಮ ಬಲವನು ತೋರಿಸಿ ಈ ರೀತಿ ಹನುಮ ಧುಮುಕಿದ ಲಂಬ ಪರ್ವತದಿ ಆಹ ತೋರ್ಪುದು ಲಂಕಾ ಪ್ರಕಾರದೊಲï ಈ ಗಿರಿ ತನ್ನ ರೂಪವ ಸಣ್ಣ ಹನುಮ ಮಾಡಿದನಾಗ 7 ಆಗಿ ಬಿಡಾಲದೊಲ್ ಸಣ್ಣ ಅಸಿತ ಕಾಲದಿ ಪೋಗೆ ಪುರಿಗೆ ಅಲ್ಲಿದ್ದ ಲಂಕಿಣಿ ತಡೆಯೆ ಆಹ ಅವಳ ಹನುಮ ಮುಷ್ಟಿಯಿಂದ ಕುಟ್ಟಿ ಜಯಿಸಿ ಅನುಮತಿಯಿಂದಲ್ಲೆ ಲಂಕೆಯೊಳ್ ಪೋದ 8 ಶ್ರೀಘ್ರ ಅಶೋಕ ವನದಲಿ ಶಿಂಶುಪಾವೃಕ್ಷ ಮೂಲದಲಿ ಸೀತಾ ಅಕೃತಿಯನು ಕಂಡ ಆಹ ಸೀತೆಗೆ ಏನೇನು ಭೂಷಣ ಉಂಟೋ ಸೀತಾ ಆಕೃತಿಗೂ ಸಹ ಅದರವೊಲಿತ್ತು 9 ಅವನಿಯೋಳು ನಿನ್ನ ವಿಡಂಬ ಅರಿತು ಅನುಸರಿಸಿ ಹನುಮ ಅದರಂತೆ ಪರಿಪಂಥಾವಳಿಗೆ ಆಹ ಅವಶ್ಯ ಮಾತುಗಳಾಡಿ ಅಂಗುಲೀಯಕವೀಯೆ ಚೂಡಾಮಣಿ ನಿನಗೆಂದು ಕೊಟ್ಟಳು 10 ಅರಿಯರು ರಾಕ್ಷಸರಿದನು ಅಮರರು ಕಲಿಮುಖರೆಲ್ಲ ಅವಲೋಕಿಸಿದರು ಈ ಕಾರ್ಯ ಆಹ ಅಮರರು ಲೋಕವಿಡಂಬವಿದೆಂದರಿಯೆ ಅಧಮ ಕಲ್ಯಾದಿಗಳ್ ಮೋಹಿತರಾದರು 11 ಕೃತಕೃತ್ಯವಾಗಿ ತಾ ಹನುಮ ಕೋವಿದೋತ್ತಮ ಬಲವಂತ ಕಾಣಿಸಿಕೊಳ್ಳುವ ಮನದಿ ಕಿಂಚಿತ್ತೂ ಭಯವೇನೂ ಇಲ್ಲದೆ ವನವನು ಕಡಿದು ಧ್ವಂಸವ ಗೈದ ಆ ಶಿಂಶುಪವ ಬಿಟ್ಟು 12 ಕುಜನ ರಾಕ್ಷಸರನು ಕೊಲ್ಲೆ ಕೂಗಿ ಆರ್ಭಟಮಾಡೆ ಹನುಮ ಕೇಳಿ ಚೇಷ್ಟೆಗಳ ರಾವಣನು ಆಹ ಕಪ್ಪು ಕಂಠನ ವರ ಆಯುಧಯುತರು ಕೋಟಿ ಎಂಬತ್ತರ ಮೇಲ್ ಭೃತ್ಯರ ಕಳುಹಿದ 13 ಆರ್ಭಟದಿಂದ ಘೋಷಿಸುತ ಅವರು ಆವರಿಸಿ ಹನುಮನ ಆಯುಧಗಳ ಪ್ರಯೋಗಿಸಲು ಆಹ ಪವನಜ ಮುಷ್ಟಿಪ್ರಹರದಿ ಆ ವೀರರೆಲ್ಲರ ಹಿಟ್ಟು ಮಾಡಿದ ಬೇಗ 14 ಕಡುಕೋಪದಿಂದ ರಾವಣನು ಕಳುಹಿದನು ಏಳು ಮಂತ್ರಿ ಕುವರರ ವರ ಬಲಯುತರ ಆಹ ಖಳರು ಈ ಏಳ್ವರ ಮೆಟ್ಟಿ ಷಿಷ್ಟವ ಮಾಡೆ ಕುಮತಿ ರಾಕ್ಷಸ ಸೈನ್ಯ ತೃತೀಯ ಭಾಗವು ಹೋಯ್ತು 15 ಅನುಪಮ ಬಲಕಾರ್ಯಕೇಳಿ ಅಧಮ ರಾವಣ ತನ್ನ ಸುತನ ಅಕ್ಷನ ಕಳುಹಲು ಹನುಮ ಆಹ ಅಕ್ಷನ ಚಕ್ರಾಕಾರದಿ ಎತ್ತಿ ಸುತ್ತಾಡಿ ಅವನ ಅಪ್ಪಳಿಸಿ ನೆಲದಿ ಚೂರ್ಣ ಮಾಡಿದ 16 ಅತಿ ದುಃಖದಿಂದ ರಾವಣನು ಅಕ್ಷನಗ್ರಜ ಇಂದ್ರಜಿತನ ಒಡಂಪಟ್ಟ ಸ್ವೇಚ್ಛದಿ ಹನುಮ ಬ್ರಹ್ಮಾಸ್ತ್ರಕೆ 17 ರಾವಣನಲಿ ಕೊಂಡು ಪೋಗೆ ರಾವಣ ಪ್ರಶ್ನೆಯ ಮಾಡೆ ರಾಮಗೆ ನಮಿಸಿ ಹನುಮನು ಆಹ ರಘುವರ ರಾಮ ದುರಂತ ವಿಕ್ರಮ ಹರಿ ರಾಕ್ಷಸಾಂತಕ ದೂತ ಮಾರುತಿ ತಾನೆಂದ 18 ರಘುವರ ಪ್ರಿಯೆಯನು ಬೇಗ ರಾಮಗರ್ಪಿಸಲೊಲ್ಲೆ ಎನ್ನೆ ಹನುಮ ಪ್ರಕೋಪದಿ ಅವನ ಆಹ ರಾಜ್ಯ ಮಿತ್ರ ಬಂಧು ಸರ್ವನಾಶ ರಾಘವ ಮಾಡುವನೆಂದು ಪೇಳಿದನು 19 ಅಜ ಶಿವ ಮೊದಲಾದ ಸರ್ವ ಅಮರೇಶ್ವರರು ತಾವು ತಡೆಯ ಆಶಕ್ತರು ರಾಮಬಾಣವನು ಆಹ ಅಂಥ ಬಾಣವ ಅಲ್ಪಶಕ್ತ ರಾವಣ ತಾಳೆ ಅಸಮರ್ಥನೆಂದ ಪ್ರಭಂಜನ ಸುತನು 20 ಪ್ರಭಂಜನ 1 ಸುತ ಮಾತು ಕೇಳಿ ಪ್ರಕುಪಿತನಾಗಿ ರಾವಣನು ಪ್ರಯತ್ನಿಸೆ ಹನುಮನ ಕೊಲ್ಲೆ ಆಹ ಪ್ರಕೃಷ್ಟ ಮನದಿ ವಿಭೀಷಣ ಬುದ್ಧಿ ಪೇಳಲು ಪುಚ್ಛಕ್ಕೆ ಬೆಂಕಿ ಹಚ್ಚೆಂದ ರಾಕ್ಷಸರಾಜ21 ಆತಿಭಾರ ವಸ್ತ್ರ ಕಟ್ಟುಗಳಿಂ ಅಧಮರು ಸುತ್ತಿ ಬಾಲವನು ಅಗ್ನಿಯ ತೀವ್ರದಿ ಹಚ್ಚೆ ಆಹ ಅಗ್ನಿಯ ಪರಸಖ ವಾಯು ಆದುದರಿಂದ ಅಂಜನಾಸುತ ನಿರಾಮಯನ ಸುಡಲೇ ಇಲ್ಲ 22 ಅಧಮ ರಾಕ್ಷಸರ ಚೇಷ್ಟೆಗಳ ಅಸಮ ಬಲಾಢ್ಯನು ಹನುಮ ಅನುಭವಿಸಿ ಕುತೂಹಲದಿ ಆಹ ಅಲ್ಲಲ್ಲಿ ಹಾರಿ ಆ ಲಂಕಾಪುರಿಯ ಸುಟ್ಟು ಅತಿ ಮುದದಲಿ ಗರ್ಜಿಸಿದ ರಾಮದೂತ 23 ಅಧಮ ಸಪುತ್ರ ರಾವಣನ ಅಲ್ಪ ತೃಣೋಪಮ ಮಾಡಿ ಅವರೆದುರಿಗೆ ಪುರಿ ಸುಟ್ಟು ಆಹ ಅಬ್ಧಿಯ ದಾಟೆ ವಾನರರು ಪ್ರಪೂಜಿಸೆ ಉತ್ತಮ ಮಧುವುಂಡು ಪ್ರಭುವೇ ನಿನ್ನಲಿ ಬಂದ 24 ಸಮಸ್ತ ವಾನರ ವರರೊಡನೆ ಸಮರ್ಥ ಹನುಮ ಧೀರ ಬಂದು ಶುಭಸೂಚಕ ಚೂಡಾಮಣಿಯ ಆಹ ಶ್ರೀಶ ನಿನ್ನಯ ಪಾದದ್ವಂದ್ವದಿ ಇಟ್ಟು ತಾ ಸನ್ನಮಿಸಿದ ಭಕ್ತಿಭರಿತ ಸವಾರ್ಂಗದಿ 25 ಭಕ್ತಿ ಸವೈರಾಗ್ಯ ಜ್ಞಾನ ಪ್ರಜ್ಞಾ ಮೇಧಾ ಧೃತಿ ಸ್ಥಿತಿಯು ಪ್ರಾಣ ಯೋಗ ಬಲ ಇಂಥಾ ಆಹ ತುಂಬಿ ಇರುವುವು ಈ ಪ್ರಭಂಜನ ವಾಯು ಹನುಮನಲಿ ಸರ್ವದಾ 26 ಸರ್ವೇಶ ರಾಮ ಅಗಾಧ ಸದ್ಗುಣಾರ್ಣವ ನೀ ಹನುಮನ ಸಂಪೂರ್ಣ ಭಕ್ತಿಗೆ ಮೆಚ್ಚಿ ಆಹ ಸಮ ಯಾವುದೂ ಇಲ್ಲದೆ ನಿನ್ನನ್ನೇ ನೀ ಕೊಟ್ಟೆ ಸುಪ್ರಮೋದದಿ ಹನುಮನ ಆಲಿಂಗನ ಮಾಡಿ27 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ನಮ್ಯ ಮಾರುತಿ ಮನೋಗತನೆ ಆಹ ನೀರಜಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 28
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ನರಸಿಂಹ (ಪ್ರಹ್ಲಾದ ಚರಿತೆ)] ಪ್ರಥಮ ಅಧ್ಯಾಯ - ಹಿರಣ್ಯಕಶಿಪು ಪೂರ್ವ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ತೋಯಸ್ಥ ಪತ್ರಸ್ಥ ತೋಯಜಾಲಯಾ ಸ್ತುತ್ಯ ಅಂಡ ಸ್ರಷ್ಟಾ ಸರ್ವಸ್ಥ ಅಚ್ಯುತಾನಂತ ಗೋವಿಂದ ನೀ ಸಜ್ಜನರ ಭಯ ನಿವಾರಣ ಮಾಳ್ಪಿ ತೋರಿ ಆಗಾಗ 1 ಪ್ರಳಯ ಜಲಚರ ಶೈಲಧರ ಧರೋದ್ಧರ ನಮೋ ಬಾಲಕಗೆ ಒಲಿದು ಬಲಿಯಲಿ ದಾನ ಕೇಳಿ ಖಳ ಕುಪಾಲರ ಸದೆದು ಜಲಧಿಯ ಬಂಧಿಸಿದ ಲಲನೇರ ರಂಜಿತ ಶಿಶು ಶಂಭಳದಿ ತೋರ್ವಿ 2 ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೇ ತಡೆದರು ದ್ವಾರಪಾಲಕರು 3 ಜಯವಿಜಯರೆಂಬ ಆ ದ್ವಾರಪಾಲಕರಿಗೆ0 ಮಾಯೇಶ ಹರಿ ಪ್ರಿಯತರರು ಮುನಿವರರು ಈಯಲು ಶಾಪವ ಆ ವಿಷ್ಣು ಪಾರ್ಶದರು0 ದೈತ್ಯಜನ್ಮವ ಹೊಂದಿದರು ಪತನವಾಗಿ 4 ಸುತಪೋನಿಧಿ ಕಶ್ಯಪ ತೇಜೋಲ್ಬಣದಿಂ ದಿತಿದೇವಿ ಜಠರದಲಿ ವಿಷ್ಣು ಪಾರ್ಶದರು ಪತಿತ ಆ ಜಯ ವಿಜಯರು ಪ್ರವೇಶಿಸಿದರು ದಿತಿ ಹಡೆದಳು ಗಂಡು ಮಕ್ಕಳೀರ್ವರನು 5 ದಿತಿದೇವಿ ಅಗ್ರಸುತ ಹಿರಣ್ಯಕಶಿಪು ಜಯ ದಿತಿ ಅವರಸುತ ವಿಜಯನೇ ಹಿರಣ್ಯಾಕ್ಷ ಉಪಟಳ ಕೊಟ್ಟನು ಈ ಧರೆಯ ಅಬ್ಧಿಯ ಕೆಳಗೆ ಅಡಗಿಸಿದ 6 ಸುರಸುಜನ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಹಿರಣ್ಯಾಕ್ಷನ ಕೊಂದು ಧರೆಯ ಲೀಲೆಯಿಂದ ಮೇಲೆತ್ತಿತಂದಿ ವರಾಹ ಹರಿ ನೀನು 7 ಜಯ ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 -ಇತಿ ಪ್ರಥಮಾಧ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಕಶಿಪು ವರ ವೃತ್ತಾಂತ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಮೂರ್ಜಗದ ದೊರೆ ಹರೇ ನೀ ತನ್ನ ತಮ್ಮನ ಭಂಜಿಸಿದೆ ಎಂದು ಕಡುಕೋಪಗೊಂಡು ದುರ್ಜನ ದಾನವ ವಂದಿತ ಹಿರಣ್ಯಕನು ರಜಸ್ತಮೋಚ್ಛದಿ ದ್ವೇಷ ಮಾಡಿದನು ನಿನ್ನಲ್ಲಿ 1 ಶೂಲದಿಂ ಅಚ್ಯುತನ ಕುತ್ತಿಗೆ ಕತ್ತರಿಸಿ ಗಳರುಧಿರ ತರ್ಪಣ ಕೊಡುವೆ ಎನ್ನುತ್ತ ಖಳ ದೈತ್ಯ ಪ್ರಮುಖರಿಗೆ ಹೇಳಿದನು ವೈಷ್ಣವ ಸ್ಥಳ ದ್ವಿಜ ಗೋ ಭಕ್ತರನ್ನ ತರಿ ಎಂದ 2 ಗರ್ಜಿಸುತ ದೈತ್ಯರು ಪುರ ಗ್ರಾಮ ಆಶ್ರಮ ವ್ರಜಕ್ಷೇತ್ರ ದಹಿಸÀಲು ಹಿರಣ್ಯಕಶಿಪು ಅಜೇಯಾಜರಾಮರತ್ವವ ಅಪ್ರತಿ ಮುಖ್ಯ ರಾಜತ್ವ ಹೊಂದಲು ತಪಸ್ಸು ಮಾಡಿದನು 3 ಊಧ್ರ್ವದಲಿ ಬಾಹುಗಳ ನಭದಲಿ ದೃಷ್ಟಿಯು ಪಾದಾಂಗುಷ್ಟ ಮಾತ್ರದಿ ನಿಂತು ತಪವ ಗೈದನು ಆ ತಪೋಧೂಮಾಗ್ನಿ ಪೀಡಿತ ತ್ರಿದಿವರು ಮೊರೆ ಇಟ್ಟರು ಬ್ರಹ್ಮನಲ್ಲಿ 4 ಪದುಮಭವ ಭೃಗು ದಕ್ಷಾದಿಗಳೊಡೆಯೈದು ದೈತ್ಯೇಶ್ವರ ಹಿರಣ್ಯಕನ ಆಶ್ರಮವ ಭದ್ರಂತೇ ತಪಸಿದ್ಧಿ ಆಯಿತು ವಶೀಕೃತನಾದ ಉತ್ತಿಷ್ಠೋತ್ತಿಷ್ಠ ವರ ಕೊಡುವೆನು ಎಂದ 5 ಬ್ರಹ್ಮನ್ನ ನೋಡಿ ಹಿರಣ್ಯಕನು ಸನ್ನಮಿಸಿ - ಬ್ರಹಾಂತರ್ಗತ ಹರಿ ವಿವಕ್ಷಿತ ಗುಣಗಳ ಬ್ರಹ್ಮ ಹರುಷದಿಂದಲಿ ಸಮ್ಯಕ್ ಕೀರ್ತನೆ ಮಾಡಿ ಆ ಹಂಸವಾಹನನ ವರಗಳ ಬೇಡಿದನು 6 ಸರೋರುಹಾಸನ ಸೃಷ್ಟ ಸರ್ವಭೂತಂಗಳು ಮೃಗ ಪ್ರಾಣ ಉಳ್ಳವು ಇಲ್ಲದವು ಹೊರ ಒಳಗೆ ಭೂಮ್ಯಾಂಬರ ದಿವಾ ರಾತ್ರಿಯು ಸುರಾಸುರ ಮೃತ್ಯು ಮಾ ಭೂನ್ಮ್‍ಮ ಎಂದ 7 ಏಕಪಥ್ಯವು ಅಪ್ರತಿ ಶಕ್ತಿಮತ್ಯವವು ಲೋಕಪಾಲಕರಂತೆ ಬಲವು ಮಹಿಮೆಗಳು ಯೋಗಿ ತಪಸ್ವಿಗಳಂತೆ ಸಿದ್ಧಿಗಳು ಸರ್ವವು ಬೇಕು ತನಗೆಂದು ವರ ಬೇಡಿದ ಬ್ರಹ್ಮನ್ನ 8 ಶತಧೃತಿಯು ಈ ದುರ್ಲಭ ವರಗಳನ್ನಿತ್ತು ತಾ ತೆರಳಿದನು ದೈತ್ಯನಿಂ ಪೂಜೆಗೊಂಡು ಭ್ರಾತೃವಧ ಅನುಸ್ಮರಿಸಿ ಹರಿದ್ವೇಷ ಬೆಳಸಿದನು ಲಬ್ಧವರ ದೈತ್ಯೇಶ ಇನ್ನೂ ಹೆಚ್ಚಾಗಿ 9 ನರಸುರಾಸುರ ಋಷಿ ಗರುಡೋರಗ ಸಿದ್ಧ ಚಾರಣ ವಿದ್ಯಾಧರ ಯಕ್ಷ ಗಂಧರ್ವ ಪಿತೃ ಪ್ರೇತ ಭೂತಪತಿ ರಾಕ್ಷಸ ಪಿಶಾಚೇಶ ಸರ್ವರನು ಜೈಸಿ ತನ್ನವಶ ಮಾಡಿಕೊಂಡ 10 ಮೂರ್ಲೋಕಂಗಳಲ್ಲಿ ದಶದಿಕ್ಕುಗಳಲ್ಲಿ ಈ ಹಿರಣ್ಯಕಶಿಪು ತನ್ನ ಜಯಭೇರಿ ಹೊಡೆದ ಸರ್ವಲೋಕಪಾಲರ ತೇಜಃಸ್ಥಾನಗಳ ಅಪ - ಹರಿಸಿ ತ್ರಿವಿಷ್ಟಪ ಭೋಗದಲಿ ಮನಸ್ಸಿಟ್ಟ 11 ಅಜಿತೇಂದ್ರಿಯ ಹೇಯ ಭೋಗರತ ಅಹಂಕಾರಿ ಮೂರ್ಜಗಾರಿಯು ಧರ್ಮ ಆಚಾರ ದ್ವೇಷಿ ನಿರ್ಜರರು ಅವನಿಂದ ಹಿಂಸೆ ತಾಳದೆ ವಿಷ್ಣೋ ತ್ರಿಜಗದೀಶನೇ ಮೊರೆ ಹೊಕ್ಕರು ನಿನ್ನಲ್ಲಿ 12 ಅಚ್ಯುತ ಈಶ್ವರ ನಿನ್ನ ಭದ್ರವಾಣಿ ಅಭಯ ಹೊಂದಿ ಸುರವರರು ನಿರೀಕ್ಷಿಸಿದರು ಪ್ರಶಾಂತ ಮಹಾತ್ಮಾ ನಿರ್ವೈರ ಪ್ರಹ್ಲಾದ ಹುಟ್ಟುವ ಕಾಲವನು 13 ಜಯತು ಜಯತು ವೇಧಪಿತ ಶ್ರೀ ಪ್ರಸನ್ನ ಶ್ರೀನಿವಾಸ ನರಸಿಂಹ ಜಯ ಗುಣಾರ್ಣವ ಭೂಮಾನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 13 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ - ತೃತೀಯ ಅಧ್ಯಾಯ - ಬಾಲಕ ಪ್ರಹ್ಲಾದ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ಯುಕ್ತ ಕಾಲದಿ ಹೇಮಕಶಿಪುಗೆ ಐದು ಮಕ್ಕಳು ಹುಟ್ಟಿದರು ನಾಲ್ವರು ಗಂಡು ಮಕ್ಕಳು ನಾಲ್ವರಲ್ಲಿ ಪ್ರವರ ಪ್ರಹ್ಲಾದನು ಅಕಳಂಕ ಗುಣಶ್ರೇಷ್ಠ ಮಹದುಪಾಸಕನು 1 ಸತ್ಯಸಂಧನು ಶೀಲಸಂಪನ್ನ ಬ್ರಹ್ಮಣ್ಯ ಜಿತೇಂದ್ರಿಯ ಸಮದರ್ಶಿ ಆರ್ಯರ ವಿಧೇಯ ಸ್ನಿಗ್ಧರಿಗೆ ಭ್ರಾತೃವತ್ ಯಥಾದೇವೋ ತಥಾಗುರೋ ಭೂತಪ್ರಿಯ ಸುಹೃತ್ತಮ ದೀನವತ್ಸಲನು 2 ವಿಧ್ಯಾರ್ಥಿ ರೂಪಾದಿಗಳ ಗರ್ವ ಇವಗಿಲ್ಲ ಶ್ರುತ ದೃಷ್ಟ ವಿಷಯದಲಿ ಗುಣಗ್ರಾಹಿಯು ಶಾಂತನು ದಾಂತನು ಸಾಧುಗಳಲಿ ಪ್ರಿಯ ಸದಾ ಸ್ವಭಾವದಿ ಶ್ರೀ ವಿಷ್ಣುಭಕ್ತಿ 3 ವಾಸುದೇವ ನಿನ್ನಲ್ಲೇ ಸರ್ವದಾ ಮನವನು ನೆಲಸಿ ಈ ಬಾಲ ಸರ್ವ ನಡೆನುಡಿ ಊಟ ಶಯನ ಪರ್ಯಟನ ಸರ್ವಾವಸ್ಥೆಯಲೂ ನಿನ್ನ ಸ್ಮರಿಸುವನು 4 ಅಂಬುಜೋದ್ಭವ ತ್ರ್ಯಿಂಬಕ ಮುಖ್ಯವಿನುತ ನಿನ್ನ ಅಂಬುಜಾಂಘ್ರಿಗಳನ್ನ ಧ್ಯಾನಿಪ ಈ ಬಾಲಕನ ಅಂಬಕದಿ ಸುಜ್ಞಾನ ಭಕ್ತಿ ಪುಳಕಾಂಬುವು ತುಂಬಿ ತುಳುಕಾಡುವುದು ಕಂಡಿಹರು ಅಂದು 5 ಒಮ್ಮೆ ನಗುವನು ಒಮ್ಮೆ ರೋದಿಸುವನು ಒಮ್ಮೆ ಸುಮ್ಮನಿರುವ ಹರಿ ಪ್ರೇಮಾನಂದದಲಿ ಅಮ್ಮಮ್ಮ ಭಕ್ತಿಯಲಿ ಕೂಗಿ ಕುಣಿವನು ಮಹಾನ್ ರಮೆಯರಸ ನಿನ್ನ ದಾಸಾಗ್ರಣಿಯು ಪ್ರಹ್ಲಾದ 6 ಮಹಾತ್ಮನು ಮಹಾಭಾಗ ಮಹಾಭಾಗವತನು ಮಹಾಕಾರುಣಿಕ ಪ್ರಹ್ಲಾದಗೆರಗುವೆನು ಅಹರ್ನಿಶಿ ಧೃತಿಸ್ಥ ಹರಿ ನಿನ್ನಲ್ಲಿ ಭಕ್ತಿ ಇಹಪರದಿ ಸೌಭಾಗ್ಯ ಎಮಗೀಯಲೆಂದು 7 ಜಯ ಗುಣಾರ್ಣವ ಭೂಮನ್ ಲಕ್ಷ್ಮೀಸಮೇತ ಜಯ ಅಜನಪಿತ ನಮೋ ಶರ್ವಾದಿ ಸುರವಂದ್ಯ ಜಯತು ಭಕ್ತೇಷ್ಟಪ್ರದ ಪ್ರಹ್ಲಾದ ಪಾಲ 8 - ಇತಿ ತೃತಿಯಾ ಅಧ್ಯಾಯ ಸಂಪೂರ್ಣಂ - ಚತುರ್ಥ ಅಧ್ಯಾಯ ಪ್ರಹ್ಲಾದರ ವಿಧ್ಯಾಭ್ಯಾಸ ಜಯತು ಜಯ ನರಸಿಂಹ ಅಮಿತಪೌರುಷ ವಿಷ್ಣೋ ಜಯತು ಶ್ರೀಪತಿ ಅನಘ ಬ್ರಹ್ಮ ಶಿವವಂದ್ಯ ಜಯ ಗುಣಗಣಾರ್ಣವನೇ ಪ್ರಹ್ಲಾದ ರಕ್ಷಕನೇ ಜಯ ಸ್ವಜನತೇಷ್ಟ ಚಿಂತಾಮಣಿಯೇ ಶರಣು ಪ ದೈತ್ಯರಾಜನು ಪ್ರಿಯಪುತ್ರ ಪ್ರಹ್ಲಾದನಿಗೆ ವಿದ್ಯೆಕಲಿಸಲು ಶಂಡಾಮರ್ಕರು ಎಂಬ ಬೋಧಕರ ಏರ್ಪಾಡು ಮಾಡಿಸಲು ಆ ಮಹಾನ್ ಇತರ ಬಾಲಕರೊಡೆ ಕೂಡಿ ಓದಿದನು 1 ವಿದ್ಯೆ ಕಲಿಯುವಾಗ ಇತರ ಬಾಲರ ಮೀರಿ ಪ್ರತಿಭೆ ತೋರಿಸಿದನು ಬಾಲಪ್ರಹ್ಲಾದ ಕೇಳ್ದ ಕಲಿತದೆÀ್ದಲ್ಲಿ ಸಾಧು ಹೇಳೆಂದು 2 ಸಂಸಾರಿ ಜೀವರುಗಳು ಸದಾ ಐಹಿಕ ನಿಸ್ಸಾರ ವಿಷಯಂಗಳಲ್ಲಿ ಮುಳುಗಿ ತಮಃಸಿಲಿ ಬೀಳದಿರೆ ಸಾಧು ಜನಸಂಗ ಶ್ರೀಶ ಹರಿ ಸರ್ವವಂದ್ಯನ ಆಶ್ರಯಿಪುದು 3 ಹೀಗೆ ಪ್ರಹ್ಲಾದ ಪೇಳಲು ಹಿರಣ್ಯಕ ಕೇಳಿ ಪರ ಬೋಧಿತನಾಗಿಹನೆಂದು ನೆನೆದು ಶುಕ್ರ ಸುತರು ತಮ್ಮ ಮನೆಯಲ್ಲೇ ಇಟ್ಟುಕೊಂಡು ತಕ್ಕ ವಿಧದಲಿ ಬುದ್ಧಿ ತಿದ್ದಿಸುವುದು ಎಂದ 4 ಗುರುಗಳು ಮನೆಯಲ್ಲಿ ಒಳ್ಳೆಮಾತಿಂದಲಿ ಪರಕೃತವೋ ಸ್ವತಃ ಕೃತವೋ ಈ ಹರಿಪಕ್ಷಬುದ್ದಿ ಅನೃತವಾಡದೆ ಸತ್ಯ ಪೇಳೆಂದು ಕೇಳಿದರು ಭಾಗವತ ಪ್ರಹ್ಲಾದ ಬಾಲನ್ನ 5 ಸತ್ತಾ ಪ್ರವೃತ್ತಿ ಪ್ರತೀತ್ಯಾದಿಪ್ರದ ಸರ್ವ - ಚಕ್ರಧರ ವಿಷ್ಣು ವಿಧಿ ಶಿವಾದೀಡ್ಯನಲಿ ರತತಾನು ಕಾಂತವು ಅಯಸ್ಸನ್ನು ಸೆಳೆವಂತೆ ಎಂದು 6
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು ಶ್ರೀ ಸೂರ್ಯದೇವ ಸ್ತೋತ್ರ 88 ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ ಸೂರಿ ಪ್ರಾಪ್ಯ ಪ ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್ ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ ಅಮಯ ದೂರ ಸುಗುಣ ಗಣಾರ್ಣವ ದೇವ ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1 ಮಕರ ಕುಂಡಲವಾನ್ ಕಿರೀಟಿಯೆ ಅರಿದರ ಧಾರಿ ಅವ್ಯಯಾನಂದ ಚಿತ್ ಚಾಮೀಕರ ವಪು ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2 ಹಿಂಕಾರ ಪ್ರಸ್ತಾವ ಆದಿ ನಮೋ ನಮೋ ಉದ್ಗೀಥ ಪ್ರತಿಹಾರೋಪದ್ರವ ನಿಧನ ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3 ಭೂತೇಂದ್ರಿಯ ಕರ್ಣಾದಿಗಳಿಗೆ ದೂರ ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4 ಸೂರ್ಯದೇವನೆ ದಯಾವಂತನೆ ನಮೋ ನಮೋ ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5 ಸೂರ್ಯ ನೀ ಅಹರಹ ಎನ್ನಸರ್ವಪೀಡೆಗಳ್ ಕಳೆದು ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6 ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ ಸೂರ್ಯ ನಿನ್ನ ಪ್ರೀತಿಪಾತ್ರ ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ ಕರುಣದಿ ಎನ್ನನು ಎನ್ನವರನು ಕಾಯೋ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು