ಒಟ್ಟು 504 ಕಡೆಗಳಲ್ಲಿ , 77 ದಾಸರು , 449 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲೆಯಾವುದಯ್ಯ ಹೊಲಬಾವುದಯ್ಯತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ ವೇದ ಸಾರವನೋದಿ ವೇದದರ್ಥವ ಕಂಡುಆದಿಯಾಗಿಹಅನಾದಿ ಮೂರುತಿಯನ್ನುಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ 1 ತನುದುಸ್ಥಿತಿಯ ಕಂಡು ತನುವಲಿಹನ ಕಂಡುಚಿನುಮಯವಾದ ಚಿದ್ರೂಪನೆಂಬನಮನದ ಕೊನೆಯಲಿಟ್ಟು ಮಥಿಸಲಾರದೆ ತಾನುಘನ ದುಃಖದೊಳು ಬಿದ್ದು ಗಲಭೆಯಾದವಗೆ2 ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡುಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನುವರ ಚಿದಾನಂದ ಪದ ಹೊಂದಲಾರದೆ ನರಕದೊಳಗೆ ಬಿದ್ದು ನರಳಾಡುವವನಿಗೆ 3
--------------
ಚಿದಾನಂದ ಅವಧೂತರು
ನೋಡಿ ನೋಡಿ ನೋಡುದರೊಳಗೆ ನೋಡಿದ ನೋಟ ಸದ್ಭನವಾಗುವ್ಹಾಂಗ ಧ್ರುವ ಮನದಿಂದಲಿ ಮನನೋಡುವ ಯೋಗ ಘನಸುಖ ತೋರುವದಿದೆ ಬ್ರಹ್ಮಭೋಗ 1 ಕಣ್ಣಿನಿಂದಲಿ ಕಣ್ಣುದೆರುವ್ಹಾಂಗ ಮಾಡಿ ಚನ್ನಾಗಿ ಉದಯವಾಗುದು ಘನ ಮೂಡಿ 2 ಭಾವ ಬಲಿದು ನೋಡುವುದು ಬಲುಚೆಂದ ಆವಾಗ ಮಹಿಪತಿಗಿದೆ ಬ್ರಹ್ಮಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿದೆ ಗಿರಿಯ ತಿರ್ಮಲನ ನಿತ್ಯ ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ಪ ನೀರೇರ ಕೂಡಾಡಿದವನಾ ದೇವ ನೀರೊಳಗೆ ಸದನವ ಬಿಗಿದವನಾ ನೀರದ ಶ್ಯಾಮ ವರ್ಣನನಾ ಭವ ನೀರಜ ಭವವಂದ್ಯಾ ದಯಾಸಾಗರನಾ 1 ನೀರು ಪಾದದಲಿ ಪೆತ್ತವನಾ ಮಹಾ ನೀರು ದಾಟಿ ಮಕ್ಕಳ ತೋರಿದವನಾ ನೀರಧಿ ಬಿಗಿದ ಪ್ರಬಲನಾ ಅಂದು ನೀರುಪತಿಯ ಭಂಗವ ಮಾಡಿದವನಾ 2 ನೀರು ಕಟದ ನಿಃಸಂಗನಾ ಸರ್ವ ನೀರು ಸೇದುವನಾಗಿ ಜಗವ ಸುತ್ತುವನ ನೀರೊಳಗಾಡುವ ನಿಜನಾ ಓರ್ವ ನೀರೇಳ ನಾರಿಯ ಮಾಡಿದ ಗುಣನಾ 3 ನೀರಜೋದರ ನಿರ್ಮೋಹನನಾ ಏಳು ನೀರಜ ದಳದಲ್ಲಿ ಪೊಳೆವ ಚನ್ನಿಗನಾ ನೀರು ಬಯಲು ಮಾಡಿದವನಾ ಅನ್ನ ನೀರೊಳಗಿದ್ದು ಜಗವ ಪೊತ್ತವನಾ 4 ನೀರಜಪಾಣಿ ವಲ್ಲಭನಾ ತೇಜ ನೀರನ್ನ ತತ್ವ ವ್ಯಾಪಿಸಿಕೊಂಡವನಾ ನೀರೆ ಗತಿಯ ಮಾಡಿದವನಾ ನಮ್ಮ ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ 5
--------------
ವಿಜಯದಾಸ
ನೋಡಿದ್ಯಾ ನೋಡಿದ್ಯಾ ಪ ನೋಡಿದ್ಯಾ ಶ್ರೀ ಗುರುಗಳನ್ನು | ಈ ಡಾಡಿ ಕೊಂಡಾಡಿದ್ಯಾ ಆಹಾ ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ ನಿಂತರೆದುರಲ್ಲೆ ಮುಖ್ಯ ಪ್ರಾಣಾ | ಜಗ ದಂತ ರೊಳಗೆಲ್ಲಿ ಅತಿ ಪ್ರಾಣಾ ಅಂತರಂಗದಲ್ಲಿ ಶಾಂತ ಮೂರುತಿಗಳು ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ 1 ಹೊದ್ದ ಕಾವೀಶಾಟಿಯಿಂದಾ ಶ್ರೀ ಮುದ್ರೆ ಹಚ್ಚಿದ ದೇಹ ದಿಂದಾ ಕೇಸರಿ ಗಂಧಾ | ಬಲು ಮುದ್ದು ಸುರಿವನಾಮದಿಂದಾ ಅಂಗಾರ ಮುದ್ರೆಯೊಳಕ್ಷತೆ ಎದ್ದು ಬರೂವಂಥ ಮುದ್ದು ಗುರೂಗಳಾ 2 ಮುದ್ದು ಬೃಂದಾವನದ ಮಾಟಾ ಅಲ್ಲಿದ್ದು ಜನರ ಓರೆನೋಟಾ ಪ್ರಸಿದ್ದ ರಾಯರ ಪೂರ್ಣನೋಟ ನಮ್ಮಲ್ಲಿದ್ದ ಪಾಪಗಳೆಲ್ಲ ಓಟ ವಾಹನ ನರಸಿಂಹ ವಿಠಲಾ | ಅ ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ನೋಡಿರೋ ನಿಜ ನೋಡಿರೋ ನೋಡಲು ಗುರುಸೇವೆ ಮಾಡಿರೋ ಧ್ರುವ ನೋಡದರೊಳಗೊಂದಡಗ್ಯಾದೆ ಅಡಗಿದಕೊಂದು ಮನೆ ಮಾಡ್ಯಾದೆ ಮಾಡಿದರೊಳಗೊಂದು ಮೂಡ್ಯಾದೆ ಮೂಡಿದಕೊಂದು ಗೂಢವಾಗ್ಯಾದೆ 1 ಆಡುವೆರಡು ಮಧ್ಯಾನಾಡ್ಯಾದೆ ನಾಡಿ ಮಧ್ಯೊಂದು ಕೂಡಿಹದ್ಯಾದೆ ಕೂಡಿದ ಹಾದಿಗೊಂದು ಮಾಡ್ಯಾದೆ ಮಾಡಿದಕೊಂದು ಕೈ ಗೂಡ್ಯಾದೆ 2 ಮುಂದ ನೋಡಲು ಹಿಂದವಾಗ್ಯಾದೆ ಹಿಂದನೋಡಲು ಮಂದವಾಗ್ಯಾದೆ ಹಿಂದ ಮುಂದ ತಾನೆ ತುಂಬ್ಯಾದೆ ಕಂದ ಮಹಿಪತಿಗಾನಂದಾಗ್ಯಾದೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುದರೊಳಗಡಗೆದ ಘನ ನೀಟ ಧ್ರುವ ಅರವ್ಹಿನ ಮುಂದದ ಮರವ್ಹಿನ ಹಿಂದದ ಕುರುಹು ತಿಳಿದರತಾ ಇರಹು ಅಗ್ಯದೆ 1 ಎರಡಕ ಬ್ಯಾರ್ಯದ ಮೂರಕ ಮಿರ್ಯದ ಗುರುಕೃಪೆ ಅದರೆ ಸಾರೆ ತಾನ್ಯದ 2 ಬಾಹ್ಯಕ ದೂರ ಗುಹ್ಯಕ ಗೂಢದ ಮಹಿಪತಿ ಮನದೊಳು ಘನವಾಗ್ಯದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಡಿ ಪಡಿ ಜೀವನ್ಮುಕ್ತಿ ಪ ಗುರುವರನು ತಾ ಪರಶಿವನೆಂದು | ಅರಿದು ಪೂಜಿಸು ಮನದೊಳಗಿಂದು 1 ವ್ರತನೇಮಗಳೊಳು ಫಲವಿಲ್ಲಾ | ಸದ್ಗತಿ ನಿನಗದರೊಳಗಾಗುವದಿಲ್ಲ 2 ಭವತಾರಕನ ಭಜಕರ ನೋಡು | ಕಂಡರೆ ಕರೆದರ್ಚನೆಯನು ಮಾಡು 3
--------------
ಭಾವತರಕರು
ಪಾದ ಭಜಿಸಿದವಗನವರತವಿಜಯವಾಗುವದಕ್ಕೆ ಸಂದೇಹವ್ಯಾಕೆ ಪ ಗಜರಾಜ ವರದನಿಗೆ ನಿಜದಾಸರೆಂದೆನಿಸಿದ್ವಿಜಕುಲದಲ್ಲಿ ಮೆರೆವರಾ ಯಿವರ ಅ.ಪ. ಭವ ಬಂಧು ಮುನಿವೃಂದಹೃದಯ ಸಂಶಯ ಹೊಂದಲು (ಹೊಂದಿಸಲು)ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆಮದಡ ಭಾವವ ವೊಹಿಸಲು ||ಒದಗಿ ಭೃಗುಮುನಿಗಳೇ ಸರ್ವೇಶ ವೈಕುಂಠಸದನನೆಂದರುಹಿದವರೊ ಯಿವರೊ 1 ಪುರಂದರ ದಾಸರಾಗಿ | ಈ |ಮೇದನೀ ತಳಕೆ ಬರಲೂಸಾಧು ಸಮ್ಮತವಾದ ಪದಪಂಚಲಕ್ಷಕೆ (ತ್ರಿ)ಪಾದವೇ ನ್ಯೂನವಿರಲು | ಆ |ಪಾದವನು ಪೂರ್ತಿಪರು ಮತ್ಪುತ್ರರಿವರೆಂದುಆದಿಯಲಿ ಸೂಚಿಸಿರಲೂ ||ಭೂದೇವ ಜನ್ಮದಿಂದಾ ದಾಸರಭಿಲಾಷೆಸಾಧಿಸಿದ ಸದಯರಿವರೊ ಯಿವರೊ 2 ವೀ ಯೆನಲು ವಿಮಲತೆಯು ಜ ಯೆಂದವಗ ಜಯವುಯ ಯೆನಲು ಯಾಗಫಲವುರಾ ಯೆನಲು ರಾಜ್ಯವು ಯ ಯೆನಲು ಯಮಭಟರುನೋಯಿಸರು ಯಿವನ ಕುಲವೂ ||ಈ ಯಾವದಕ್ಷರವ ಓಂಕಾರ ಸಹ ಪಠಿಸೆಕಾಯಭವ ಪಿತನ ಬಲವೊ ||ಜಾಯಾ ಸಮೇತ ಮೋಹನ್ನ ವಿಠಲನ ಪಾದತೋಯಜ ಭ್ರಮರರಿವರೊ ಯಿವರೊ 3
--------------
ಮೋಹನದಾಸರು
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದುಕೆಗಳ ಭಾಗ್ಯಶ್ರೀಗುರುವು ಶ್ರೀರಂಗಪಟ್ಟಣಕಾಗಿ ಬಿಜಯಂಗೈದು ಮಠದಲಿಯೋಗಪೀಠದಲಿರ್ದ ಸಮಯದಿ 'ಪ್ರಕುಲ ಬಂದುಆಗ ಚಾತುರ್ಮಾಸ್ಯ ಒದಗಿರಲಾಗಿ ಪ್ರಾರ್ಥನೆಗೈದ ಕಾರಣರಾಗರ'ತನು ವಾಸುದೇವನು ನೆಲಸಿದನು ದಯದಿ 1ತೀರಿ ವ್ರತವನು 'ಶ್ವರೂಪದ ದಾರಿಯಲಿ ಸಂಚರಿಸಿ ಪುನರಪಿಮಾರಹರನಾಲಯದ ಮುಂದಣ ಮಠಕೆ ಬಂದಿರುತಾಸಾರಿ ಸಾಯಂಕಾಲದಲಿ ಕಾವೇರಿಯಲಿ ಸ್ನಾನವನು ಮಾಡಿಯೆನಾರೆಯಣನಾಮವನು ಸ್ಮರಿಸುತ ಬಹುದ ನಾಂ ಕಂಡೆಂ 2ಕಂಡ ಬಳಿಯಲೆ ಭಕ್ತಿಭಾವದಿ ದಂಡದಂತಾನೆರಗೆ ಕೃಪೆುಂಮಂಡೆಯೆತ್ತೇಳಾರು ನೀನೆಂದಾಗ ಮಂದಲಿಸಿಪುಂಡಾರೀಕಾಂಬಕನ ದಾಸನೆ ಗಂಡುಗಲಿಯಾಗಿಹೆಯ ಕ್ಷೇಮವೆಕಂಡೆ'ಂದಿಗೆ ಬಹುದಿವಸಕೆಂದಾಗ ನುಡಿಯುತಿರೆ 3ಆ ಬಳಿಯ ಮನೆುರಲು ಮಾಳಿಗೆ ಶೋಭಿಸುತ ಬೆಳುದಿಂಗಳಿಗೆ ಬಲುಗಾಬರಿಯ ಸಂದಣಿ ಮಹಾನವ'ುಯ ಮಹೋತ್ಸವದಾಕಾಬರಿದ ಮೇಲಿದ್ದ 'ಪ್ರನು ತಾ ಭುಜಿಸಿ ತಾಂಬೂಲಶೇಷವತೂಬಿರಿಯೆ ಮುಕ್ಕುಳಿಸಿ ಗುರುಶಿರದೊಳಗೆ ಬಿದ್ದುದದು4ಹರಹರಾಗುರುಕೃಪೆಯೆಕೋಪವುಬರಬಹುದುನಿನಗೆನುತನುಡಿಯಲು ಗುರುವು ಕಂಡಾ ಬಳಿಯ ಕೇಶವಮೂರ್ತಿಯೆಂಬವನುಅರಿಯದಾದೈ ಮೇಲೆ ಕುಳಿತೀ ಬರುವ ಯತಿಗಳ ನ್ಯಾಯವೇಯೆಂದರುಹಲಾ ದ್ವಿಜಬೆದರಿ ಧುಂ'ುಕ್ಕಿದನು ಭೂತಳಕೆ 5ತಪ್ಪಿದೆನು ದಮ್ಮೈಯ ಗರ್ವವನೊಪ್ಪಿಕೊಳಬೇಕೆನಗೆ ಗತಿಯೇನಪ್ಪುದೋ ಕಂಗಾಣದಾದೆನು ವಾಸುದೇವಾರ್ಯಾತಪ್ಪಿದೆನು ತಪ್ಪಿದೆನು ತಪ್ಪಿದೆ ತಪ್ಪಿದೆನು ತಪ್ಪಿದೆನೆನುತ್ತಲಿಧೊಪ್ಪನಡಗೆಡ'ದರ ತನುವನು ನೋಡ್ದ ಗುರುವರನು 6ತಂದೆ ಬಾ ಯನ್ನಯ್ಯ ಬೆದರದಿರೆಂದಭಯವನು ಕೊಡುತ ಕರುಣಾಸಿಂಧು ವಾಗಮೃತದಲಿ ನೆನಸಿದ ಪರಿಯನೇನೆಂಬೆಕಂದನಪ್ಪನು ಸುಗುಣವಂತನು ಮುಂದಣೀ ದಿವಸಕ್ಕೆ ನಿನಗೆನುತೆಂದು ಮತ್ತವರಾಡಿದುಕ್ತಿಯನೆಂತು ಬಣ್ಣಿಪೆನು 7ಸಹಜ ತಂಬುಲ ಶಿರದ ಮೇಲಕೆ ಬಹುದು ಗುರುಕೃಪೆ ರೂಪವೆತ್ತೀ''ತ ಪ್ರಾಯಶ್ಚಿತ್ತಗೈದುರು 'ರತಿಯನು ಕಲಿಸಿಸಹಜ ಸುಖಸಂ'ತ್ಪದ' ತಾ ಬಹುದುನೊದಗಿಸಿತಾಗಿ ಮುಂದೀಬಹು ಜನರ ಗ್ಠೋಯನು ಬಿಡಿಸಿದುದೆಂದರುತ್ತರವಾ 8ಇರುವುದನುಚಿತ ಜನಸಮೂಹದಿ ಬರುವುದನುಚಿತ ಬರದ ಮಾರ್ಗದಿಕರದು ಮನ್ನಿಸಿ ಜನರ ಕ್ಷೇಮವ ಕೇಳ್ವುದನುಚಿತವುಅರಿಕೆದಟ್ಟಿತು ಮನಕೆ ಗುರು ತಾನುರುಹು ಸಂನ್ಯಾಸವನು ಥೂಯೆಂದಿರದೆ ಮೋರೆಯ ಮೇಲೆ ತಾನುಗುಳಿದನು ಸಿದ್ಧ'ದೂ 9ಪ್ರೇಷೆ ತಾ ಜ್ಞಾನಕ್ಕೆ ಮಾತೃವು ಪ್ರೇಷೆಯೇ ಜ್ಞಾನಕ್ಕೆ ತಂದೆಯುಪ್ರೇಷೆ ಭವಸಾಗರವ ದಾಂಟಿಪ ನಾವೆ ಸುಖಕರವೂಪ್ರೇಷೆ ಸರ್ವೋತ್ಕರುಷವಪ್ಪುದು ಪ್ರೇಷೆಯನ್ನುಚ್ಚರಿಸಿ ಮತ್ತಭಿಲಾಷೆುಂ ಜನಸಂಗಗೈಯ್ಯಲ್ಕಾಯ್ತೆ ನಿಗ್ರಹವೂ 10ಭಲರೆ ಗುರುವರ ಧನ್ಯನಾದೆನು ಮರೆತೆ ತಪ್ಪಿದೆ ಮುಂದೆ ಜನರೊಳಗಿರೆನು ಗುಹೆಯನು ಪೊಕ್ಕು ಮೌನವ್ರತ ಸಮಾಧಿಯಲಿುರುವವೋಲ್ ವೈರಾಗ್ಯವನು ನೀ ಕುರುಣಿಸಿದೆಯೆಂದೆನುತ ನಗುತಲಿಹರುಷದಿಂ ಕಾವೇರಿಗೈತಂದನು ಗುರೂತ್ತಮನು11ಸಾ'ರದ ಸಂಖ್ಯೆಯಲಿ ಮೃತ್ತಿಕೆ ುೀವುದಕ್ಕೆನ್ನುವನು ನೇ'ುಸಿಭಾ'ಸುತ ಪ್ರಣವವನು ಸ್ನಾನವ ಮಾಡಿ ನಿಯಮದಲಿಭಾವವಳಿಸಿ ಕಮಂಡಲವ ಜಲಕೀವ ಸಮಯದಲುಗುಳ್ದ 'ಪ್ರನಭಾವದಲಿ ನಡುಗದಿರು ಸುತನಹನೆಂದ ಗುರುವರನು 12ಏನನೆನ್ನುವೆನಾ ದ್ವಿಜನು ಸುತ 'ೀನನತಿ ಯತ್ನಗಳ ಮಾಡುತಭಾನು'ಂಗೆರಗುತ್ತಲಿದ್ದನು ಪುತ್ರಕಾಮುಕನುಏನು ಕೃಪೆಯೋ ತಿಂಗಳೆರಡಕೆ ಮಾನಿನಿಯು ತಾ ಗರ್ಭದಾಳಿಯೆಸೂನುವನು ತಾ ಪಡೆದಳೀ ಗುರು ಪೇಳ್ದ ದಿವಸದಲಿ 13'ುಂದು ಕಾವೇರಿಯಲಿ ಗುರುವರ ಬಂದು ಮಠಕಾಕ್ಷಣವೆ 'ಪ್ರರಸಂದಣಿಯ ನೆರೆ ಕಳು'ಯೆನಗಪ್ಪಣೆಯ ಕೊಡಲಾಗಿಬಂದು ಮನೆಯೊಳಗಿದ್ದು ರಾತ್ರಿಯು ಸಂದ ಬಳಿಕಾನೈದಿ ನದಿಯೊಳು'ುಂದು ಗುರವರಗೆರಗಲೈದಿಯೆ ಕಾಣೆ ನಾನಲ್ಲಿ 14ಸ್ನಾನಕೈದಿದರೇನೊ ಬಂದರೆ ಕಾಣುವೆನು ನ'ುಸುವೆನುಯೆಂದೇನಾನು ನೋಡಿದೆ ಬಾರದಿರೆ ಮಧ್ಯಾಹ್ನ ಪರಿಯಂತಭಾನು'ಂಗಘ್ರ್ಯವನು ಕೊಟ್ಟು ಮಹಾನುಭಾವರ ನೆನನೆನದು ದುಂಮಾನದಿಂದಿರುತಿದ್ದೆ ಸಾಯಂಕಾಲ ಪರಿಯಂತ 15ಇರುಳಿಗೂ ಬರದಿರಲು ಪಾದುಕೆುರಲು ಪೂಜಿಸಿ ನ'ುಸಿಯಗಲಿದಪರಮ ತಾಪದಿ ಕುದಿದು ರೋದನಗೈದೆ ಪಂಬಲಿಸಿಗುರುವರನೆ ನಿನ್ನಂಘ್ರಿಕಮಲದ ದರುಶನವು ಮರೆಯಾಯ್ತೆ ದೀನನಕರೆದು ಮನ್ನಿಸಿ ಕಾಯ್ದೆಯಲ್ಲೈ ವಾಸುದೇವಾರ್ಯಾ 16ಏನು ಗತಿ ಮುಂದೆನಗೆ ಮಾರ್ಗವದೇನನುಗ್ರ'ಸಿಪ್ಪ ಮಂತ್ರ 'ದೇನು ಜಪಿಸುವ ಮಾನವೆಂತಿದರರ್ಥವೇನಹುದುನಾನರಿಯದವನೆಂಬುದನು ನೀ ಜ್ಞಾನದ್ಟೃಯೊಳರಿದು ರಕ್ಷಿಸುದೀನನನು ಕೈ'ಡಿದು ಬಿಡುವರೆ ವಾಸುದೇವಾರ್ಯಾ 17ಭವಸಮುದ್ರದಿ ಮುಳುಗುತೇಳುತ ಲವಚಿ ತೆಗೆವರ ಕಾಣದಳಲುತಕ'ದು ತಮ ಕಂಗಾಣದಿರೆ ನೀನಾಗಿ ದಯತೋರಿಭವಭವಾಂತರದುರಿತಗಳ ಪರಿಭ'ಸಿಯಭಯವನಿತ್ತು ಸಲ'ದದಿ'ಜವಂದ್ಯನೆಯಗಲಿದೈ ಶ್ರೀ ವಾಸುದೇವಾರ್ಯಾ 18ಅರಿಯೆ ಹೃತ್ಕಮಲದಲಿ ಭಾ'ಪ ಪರಿಯನಿದಿರಿಟ್ಟಿರಲು ನೀ ಶುಭಕರದ ಮೂರುತಿಯಾಗಿ ಗ್ರಂಥಾರ್ಥಗಳ ಶೋಧಿಸಿಯೆಅರಿಯಬೇಕೆಂಬಿಚ್ಛೆ ಬರಲಿಲ್ಲುರುವ ನಿನ್ನಯ ವಾಗಮೃತ ರಸಸುರಿಯೆ ತಾನೇ ಪಾನಗೈಯುತ ಮತ್ತನಾಗಿದ್ದೆ 19ಜೀ'ಸುವೆ ನಾನೆಂತು ಧರೆಯೊಳು ಪಾವನದ ಮೂರುತಿಯ ಕಾಣದೆಭಾವದಲಿ ಸುಖಗೊಳಿಪ ವಾಕ್ಸುಧೆಯರತ ಕಾರಣದಿಂದೇವ ಮರೆಯಪರಾಧ'ದ್ದರು ಕಾವ ಕರುಣೆಗೆ ಕೋಪವೇ ಸಂಜೀವ ನೀ ಭುವನಕ್ಕೆ ತೋರೈ ವಾಸುದೇವಾರ್ಯಾ 20ಮೊರೆುಡುತಲೀ ರೀತಿುಂದಿರುತಿರಲು ಪಾದುಕೆಗಳಿಗೆ ನ'ುಸುತಬರಲು ಪಲ್ಲವ ಬಾಯ್ಗೆ ಗುರುಕೃಪೆುಂದ ತಾನಾಗಿತಿರುಪತಿಯ ವೆಂಕಟನೆ ಮೂರ್ತಿಯ ಧರಿಸಿ ಯತಿವರನೆನಿಸಿದುದನಾಹರುಷದಿಂ ಪಾಡಿದೆನು ಕೀರ್ತನ ನೆವದಿ ಮೈಮರೆದೂ 21
--------------
ತಿಮ್ಮಪ್ಪದಾಸರು
ಪಾರ್ವತಿದೇವಿ ಕರುಣದಿ ಕಾಯೆ ತಾಯೆ ಕರುಣಾಭರಣೆ ವಿಶ್ವಂಭರಣೆ ಪ. ಕರುಣಿಸಿ ಕಾಯೆ ತಾಯೆ ಮರೆಯದೆ ನಿನ್ನಯ ಚರಣಸ್ಮರಣೆಯಿತ್ತು ಭರದಿ ಕಾಪಾಡೆ ಅ.ಪ. ಅಂಬಾ ಲೋಕೇಶ್ವರಿ ಅಂಬಿಕೆ ನಿನಪಾದ ನಂಬಿದವರಿಗೆ ಕಷ್ಟಗಳುಂಟೆ ತಾಯೆ ನಿನ್ನ ಕಂಬುಕಂಠನರಾಣಿ ಬೆಂಬಿಡದಲೆ ಕಾಯೆ ಸಂಭ್ರಮದಲಿ ನಿನ್ನ ಇಂಬ ತೋರಿಸುತ 1 ಅಖಿಳಾಂಡನಾಯಕಿ ಸುಖಪ್ರದಾಯಕಿ ಸಖ ಶಂಕರನೊಳು ಸುಖಿಪ ಕಲ್ಯಾಣಿ ಅಕಳಂಕ ಮಹಿಮಳೆ ಸಕಲಕಾಲದಿ ನಿನ್ನ ಭಕುತಿಯೊಳ್ ಪೂಜಿಪÀ ಸಖರೊಳಗಿರಿಸೆ 2 ಭಕ್ತ ಮಂದಾರೆ ಭಕ್ತಿ ಮುಕ್ತಿಯನೀಯೆ ಸಹೋದರಿ ಕಾಯೆ ಭುಕ್ತಿಗೋಸುಗ ನಿನ್ನ ಸ್ಮರಣೆ ನಾನೊಲ್ಲೆನೆ ಶಕ್ತಿ ಸ್ವರೂಪಿಣಿ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ
ಪಾಲೊಳಗದ್ದು ನೀರೊಳಗದ್ದು ಹರಿನಾ ನಿನ್ನ ನಂಬಿದೆನೋ ಪ ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯ ಅ.ಪ ಸುಕೃತ ದುಷ್ಕøತ ಮಾಡುನಿಖಿಳ ದುರಿತದೊಳೆನ್ನನೋಲ್ಯಾಡಿಸುಅಖಿಳ ಖಿಳನೆನಿಸು ಅಭಯ ಭಯವ ಸೂಸುಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ1 ಜ್ಞಾನಾಜ್ಞಾನದೊಳಗಿಡು ಮಾನಾಪಮಾನವೆ ಮಾಡುಅನಾಥ ನಾಥರೊಳೆನ್ನ ಅನವರತಾಗಿರಿಸುದೀನಾದೀನತೆಯೊಳಗೆನ್ನ ನೀನೀಡ್ಯಾಡುಶ್ರೀನಾಥ ನಿನ್ನಯ ಮತ ಮತವೆ ಸನ್ಮತವಯ್ಯ 2 ಪ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸುಘನ ದಾರಿದ್ಯ್ರದಿ ನೂಕು ಸುಖವೆ ಸುರರೊಳಗ್ಹಾಕುಮುನಿಜನರ ಸಂಗ ಪೊರೆವ ರಂಗವಿಠಲನಿನ್ನಯ ಮತ ಮತವೆ ಸನ್ಮತವಯ್ಯ 3
--------------
ಶ್ರೀಪಾದರಾಜರು
ಪಾವಮಾನಿಯೇ ಪಾಲಿಸೋ ಕರಪಿಡಿದುದ್ಧರಿಸೋ ಸೇವಕರೊಳಗಾಡಿಸೋ ಪ ಶೇವಿಸುವವರಿಗೆ ದೇವತರುವೆನಿಸಿ ಭೂವಲಯದಿ ಶು¨sಛಾವಣಿ ನಿಲಯ ಅ.ಪ ಜೀವೋತ್ತುಮಾನೀನೆನ್ನುತ ಹೇ ಪ್ರಾಣನಾಥ ಭಾವಿಸುವೆನೊ ಸಂತತ ಪಾವನ ಚರಿತ ಕೃಪಾವಲೋಕನದಿ ಪಾವನ ಮಾಡೈ ಭಾವಿ ವಿಧಾತ 1 ತುಂಗತರಂಗದುದಧಿ ಲಂಘಿಸುತ ಮುದದಿ ಅಂಗನೆ ಸೀತೆ ಕರದಿ ಉಂಗುರವ ಕೊಡುತ ಮಂಗಳಾಂಗ ರಘು ಪುಂಗವಗೆರಗಿ ಸುಸಂಗತಿ ತಿಳಿಸಿದ 2 ಇಂದು ಕುಲದಿ ಜನಿಸಿ ರಿಪುವೃಂದವ ಮಥಿüಸಿ ಇಂದ್ರಜನಣ್ಣನೆನಿಸಿ ಅಂದು ರಣದಿ ಕುರು ವೃಂದವ ಮಥಿಶ್ಯಾ ನಂದ ಕಂದ ಮುಕ್ಕುಂದನ ನೊಲಿಸಿದ 3 ಮೇದಿನಿಯೊಳು ಜನಿಸಿ ಮೋದಮುನಿಯೆನಿಸಿ ಭೇದಮತವ ಸ್ಥಾಪಿಸಿ ವಾದಿಗಳನು ನಿರ್ವಾದಗೈಸುತಲಿ ಸಾಧು ಜನಕೆ ಬಲು ಮೋದವಗರೆದ 4 ಪುರಮರ್ದನಾದಿ ಸುರವರ ನಿರುತ ಸೇವಿಪರ ತಿಮಿರ ಭಾಸ್ಕರ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ಗತಿಪ್ರೀಯ 5
--------------
ಕಾರ್ಪರ ನರಹರಿದಾಸರು
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ಮಹದಾದಿ ದೇವ ವಂದ್ಯ | ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು ರಹಸ್ಯಮತಿ ಕೊಡುವುದು ಸ್ವಾಮಿ ಪ ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ ಅನಂತ ಜನುಮವಾಗೆ ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು ಜ್ಞಾನಿಗಳಿಗರಿವಾಗಿದೆ ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ ಮಾನವನ ಕ್ಲೇಶಕೆಣಿಯೆ ಆನಂದ ನಂದನನೆ ತೃಣವ ಪಿಡಿದು ರುತುನ ವನು ಮಾಡಿ ತೋರುವ ಸ್ವಾಮಿ 1 ನಿನ್ನಧೀನ ಕರ್ಮಸ್ವಭಾವ ಮೊದಲಾಗಿ ಅನ್ಯಥಾ ಯಲ್ಲಿ ಕಾಣೆ ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ ಬಿನ್ನಪವ ಬರಿದೆನಿಸದೆ ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ ನಿನ್ನ ದಾಸನ ದಾಸನು ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ ಸನ್ನನಾಗೋ ಪಾವನ್ನರನ್ನ 2 ನರರಿಗೆ ಸಾಧನ ಸತ್ಕೀರ್ತನೆ ಎಂದು ಪರಮೇಷ್ಠಿ ಒರೆದನಿದಕೊ ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ ದುರಿತ ಬೆಮ್ಮೊಗವಾಗವು ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ ಶರಣರೊಳಗಿಟ್ಟು ಕಾಪಾಡು ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ ಪರಿಪೂರ್ಣವಾಗಿ ಇರಲಿ ಸ್ವಾಮಿ3
--------------
ವಿಜಯದಾಸ
ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಓಡುತಲಿಹರಮ್ಮಾ ನೋಡೆಂಬರೋ 1 ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆಇಂದು ಹುಟ್ಟಿದ ದಿನಾ ಎರಕೋ ಕೂಸಮಂದಿರದೊಳು ವಿಪ್ರವೃಂದವ ಪೂಜಿಸಿಛಂದಛಂದದ ವಸ್ತ ತಂದಿಡುವೆ 2 ಮಂದಿ ಮಕ್ಕಳು ನೋಡು ಛಂದದಿ ತಮ್ಮನೆಮುಂದಲೆ ಊರೊಳಗಾಡೆಂಬರೊನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋಇಂದೆಲ್ಲಿ ಪೋಗದಿರಿಂದಿರೇಶಾ 3
--------------
ಇಂದಿರೇಶರು