ಒಟ್ಟು 270 ಕಡೆಗಳಲ್ಲಿ , 61 ದಾಸರು , 226 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ಥಾನ ದ್ವಾದಶಿಯ ದಿವಸ(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)ರಂಭೆ : ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.ಮಾನಿನೀಮಣಿ ಈತನ್ಯಾರೆ ಕರುಣಾನಿಧಿಯಂತಿಹ ನೀರೆ ಹಾ ಹಾಭಾನುಸಹಸ್ರ ಸಮಾನಭಾಷಿತ ಮ-ಹಾನುಭಾವನು ಸುಪ್ರವೀಣನಾಗಿಹ ಕಾಣೆ 1ಭಯಭಕ್ತಿಯಿಂದಾಶ್ರಿತರು ಕಾಣಿ-ಕೆಯನಿತ್ತುನುತಿಸಿಪಾಡಿದರು ನಿರಾ-ಮಯ ನೀನೇ ಗತಿಯೆಂದೆಲ್ಲವರು ಹಾ ಹಾಭಯನಿವಾರಣ ಜಯ ಜಯವೆಂದು ನುತಿಸೆ ನಿ-ರ್ಭಯಹಸ್ತತೋರುತ ದಯಮಾಡಿ ಪೊರಟನೆ2ಭೂರಿವಿಪ್ರರ ವೇದ ಘೋಷದಿಂದಸ್ವಾರಿಗೆ ಪೊರಟ ವಿಲಾಸ ಕೌಸ್ತು-ಭಾರತ್ನ ಹಾರ ಸುಭಾಸ ಹಾ ಹಾಚಾರುಕಿರೀಟಕೇಯೂರಪದಕಮುಕ್ತಾಹಾರಾಲಂಕಾರ ಶೃಂಗಾರನಾಗಿರುವನು 3ಸೀಗುರಿ ಛತ್ರ ಚಾಮರದ ಸಮವಾಗಿ ನಿಂದಿರುವ ತೋರಣದ ರಾಜಭೋಗನಿಶಾನಿಯ ಬಿರುದ ಹಾ ಹಾಮಾಗಧಸೂತ ಮುಖ್ಯಾದಿ ಪಾಠಕರ ಸ-ರಾಗ ಕೈವಾರದಿ ಸಾಗಿ ಬರುವ ಕಾಣೆ 4ಮುಂದಣದಲಿ ಶೋಭಿಸುವ ಜನಸಂದಣಿಗಳ ಮಧ್ಯೆ ಮೆರೆವ ತಾರಾವೃಂದೇಂದುವಂತೆ ಕಾಣಿಸುವ ಹಾಹಾಕುಂದಣಖಚಿತವಾದಂದಣವೇರಿ ಸಾ-ನಂದದಿ ಬರುವನು ಮಂದಹಾಸವ ಬೀರಿ 5ತಾಳ ಮೃದಂಗದ ರವದಿಶ್ರುತಿವಾಲಗಭೇರಿರಭಸದಿ ಜನಜಾಲಕೂಡಿರುವ ಮೋಹರದಿ ಹಾಹಾಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.ಈತನೆ ಈರೇಳು ಲೋಕದದಾತನಾರಾಯಣ ಮಹಾ ಪುರು-ಹೂತ ಮುಖ್ಯಾಮರವಿನುತನಿ-ರ್ಭೀತ ನಿರ್ಗುಣ ಚೇತನಾತ್ಮಕ ಅ.ಪ.ಮೀನ ರೂಪವೆತ್ತಾಮಂದರಪೊತ್ತಭೂನಿತಂಬಿನಿಯ ಪ್ರೀತಮಾನವಮೃಗಾಧಿಪ ತ್ರಿವಿಕ್ರಮದಾನಶಾಲಿ ದಶಾನನಾರಿ ನ-ವೀನ ವೇಣುವಿನೋದ ದೃಢ ನಿ-ರ್ವಾಣ ಪ್ರವುಢ ದಯಾನಿಧಿ ಸಖಿ 1ವಾರಿಜಾಸವಾನವಂದಿತ ಶ್ರೀಪಾದಯುಗ್ಮವತೋರಿಕೊಂಬುವ ಸಂತತಕೇರಿಕೇರಿಯ ಮನೆಗಳಲಿ ದಿ-ವ್ಯಾರತಿಯ ಶೃಂಗಾರ ಭಕ್ತರ-ನಾರತದಿ ಉದ್ಧಾರಗೈಯಲುಸ್ವಾರಿ ಪೊರಟನು ಮಾರಜನಕನು 2ಮುಗುದೆ ನೀ ನೋಡಿದನು ಕಾಣಿಕೆಯ ಕ-ಪ್ಪಗಳ ಕೊಳ್ಳುವನು ತಾನುಬಗೆಬಗೆಯ ಕಟ್ಟೆಯೊಳು ಮಂಡಿಸಿಮಿಗಿಲು ಶರಣಾಗತರ ಮನಸಿನಬಗೆಯನೆಲ್ಲವ ಸಲ್ಲಿಸಿ ಕರುಣಾಳುಗಳ ದೇವನು ಕರುಣಿಸುವ ನೋಡೆ 3ರಂಭೆ : ದೃಢವಾಯಿತೆಲೆ ನಿನ್ನ ನುಡಿಯು ಸುರಗಡಣಓಲಗಕೆ ಇಮ್ಮಡಿಯು ಜನ-ರೊಡಗೂಡಿ ಬರುತಿಹ ನಡೆಯು ಹಾ ಹಾಮೃಡಸರೋಜ ಸುರಗಡಣ ವಂದಿತಕ್ಷೀರಕಡಲ ಶಯನ ಜಗದೊಡೆಯನಹುದು ಕಾಣೆ 1ಮದಗಜಗಮನೆ ನೀ ಪೇಳೆ ದೇವಸದನವ ಪೊರಡುವ ಮೊದಲೇ ಚಂದ-ನದಪಲ್ಲಂಕಿಯ ತಂದು ಮ್ಯಾಲೆ ಹಾ ಹಾಮುದದಿಂದ ಬಾಲಕರೊದಗಿ ಸಂತೋಷದಿಚದುರತನದಿ ಪೋಗುವನು ಪೇಳೆಲೆ ನೀರೆ 2ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವಶ್ರೀರಮಾಧವನ ಲೀಲೆಘೋರದೈತ್ಯಕುಠಾರ ಲಕ್ಷ್ಮೀನಾರಾಯಣನ ಬಲಕರ ಸರೋಜದಿಸೇರಿ ಕುಳಿತ ಗಂಭೀರ ದಿನಪನಭೂರಿತೇಜದಿ ಮೆರೆವುದದು ತಿಳಿ 1ದೊರೆಯು ಬರುವನು ಎಂದು ಎಲ್ಲರಿಗೆ ಗೋ-ಚರಿಸುವನೊಲಿದುಇಂದುತರ ತರದ ಆರತಿಗಳನು ನೀವ್ಧರಿಸಿ ನಿಂದಿರಿಯೆಂದು ಜನರಿಗೆ-ಚ್ಚರಿಗೆಗೋಸುಗ ಮನದ ಭಯವಪ-ಹರಿಸಿ ಬೇಗದಿ ಪೊರಟು ಬಂದುದುರಂಭೆ :ಸರಸಿಜನಯನೆ ನೀ ಪೇಳೆಸೂರ್ಯಕಿರಣದಂತಿಹುದೆಲೆ ಬಾಲೆ ಸುತ್ತಿಗೆರಕವಾಗಿಹುದು ಸುಶೀಲೆ ಆಹಾಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1ಊರ್ವಶಿ : ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧದ್ವಾದಶಿಯೊಳಗೆ ಬಾಲೆಮಾಧವನ ಪ್ರೀತ್ಯರ್ಥವಾಗಿ ಶು-ಭೋದಯದಿ ಸಾಲಾಗಿ ದೀಪಾರಾಧನೆಯ ಉತ್ಸಹದ ಮಹಿಮೆಯಸಾದರದಿ ನೀ ನೋಡೆ ಸುಮನದಿ 1ನಿಗಮಾಗಮದ ಘೋಷದಿ ಸಾನಂದ ಸು-ತ್ತುಗಳ ಬರುವ ಮೋದದಿಬಗೆ ಬಗೆಯ ನರ್ತನ ಸಂಗೀತಾದಿಗಳ ಲೋಲೋಪ್ತಿಯ ಮನೋಹರದುಗುಮಿಗೆಯ ಪಲ್ಲಂಕಿಯೊಳು ಕಿರು 2ನಗೆಯ ಸೂಸುತ ನಗಧರನು ಬಹಚಪಲಾಕ್ಷಿ ಕೇಳೆ ಈ ವಸಂತ ಮಂ-ಟಪದಿ ಮಂಡಿಸಿದ ಬೇಗಅಪರಿಮಿತ ಸಂಗೀತ ಗಾನ ಲೋ-ಲುಪನು ಭಕ್ತರ ಮೇಲೆ ಕರುಣದಿಕೃಪೆಯ ಬೀರಿ ನಿರುಪಮ ಮಂಗಲಉಪಯಿತನು ತಾನೆನಿಸಿ ಮೆರೆವನು 3ಪಂಕಜಮುಖಿನೀ ಕೇಳೆ ಇದೆಲ್ಲವುವೆಂಕಟೇಶ್ವರನ ಲೀಲೆಶಂಕರಾಪ್ತನು ಸಕಲ ಭಕ್ತಾತಂಕವನು ಪರಿಹರಿಸಿಕರಚಕ್ರಾಂಕಿತನು ವೃಂದಾವನದಿ ನಿಶ್ಯಂಕದಿಂ ಪೂಜೆಯಗೊಂಡನು 4ಕಂತುಜನಕನಾಮೇಲೆ ಸಾದರದಿ ಗೃ-ಹಾಂತರಗೈದ ಬಾಲೆಚಿಂತಿತಾರ್ಥವನೀವ ಲಕ್ಷ್ಮೀಕಾಂತ ನಾರಾಯಣನು ಭಕುತರತಿಂಥಿಣಿಗೆ ಪ್ರಸಾದವಿತ್ತೇ-ಕಾಂತ ಸೇವೆಗೆ ನಿಂತಮಾಧವ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎತ್ತಿಕೊಳ್ಳೆ ಗೋಪೀ ರಂಗನ |ರಚ್ಚೆಮಾಧವರಾಯ ನಿಲುವನಲ್ಲ||ಪ||ಕರ್ಣದ ಮಾಗಾಯಿ ಕದಪಲಿ ಹೊಳೆಯುತ |ಎಣ್ಣೆಮಣಿಯ ಕೊರಳಲಿ ಹುಲಿಯುಗುರು ||ಚಿನ್ನದ ಬಾಯೊಳು ಅಮೃತವ ಸುರಿಯುತ್ತ |ಬೆಣ್ಣೆ-ಹಾಲನುಂಬುವೆನೆಂದು ಬಂದ 1ಅಂಬೆಗಾಲಿಕ್ಕುತ ತುಂಬಿಯೊಲ್ ಮೊರೆಯುತ &mಜಚಿsh; |[ಚೆಂದದ] ಅರಳೆಲೆ ನಲಿದಾಡುತ ||ಬಂದು ಸರಳನಂದದಿ ಬಾಯ ಬಿಡುತ ಮು &mಜಚಿsh; |ಕುಂದನು ಮೊಲೆಯನುಂಬುವೆನೆಂದು ಬಂದ 2ಬಿಗಿದ ಪಟ್ಟೆಯಲಿ ಬಾಯ್‍ತಲೆಯು ಹೊಳೆಯುತಿರೆ |ಚಿಗುಟುತ ಎಡದ ಕೈಯಲಿ ಕುಚವ ||ನಗುತ ನಾಚುತ ಗೋಪಿಯ ಮುಖ ನೋಡುತ |ಮಿಗೆ ನಲಿನಲಿದುಂಡ ಪುರಂದರವಿಠಲ 3
--------------
ಪುರಂದರದಾಸರು
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿನ್ನೆಂದಿಗೆಂದಿಗೂ ತೀರದು ಪ.ಎಂದೆಂದಂದದಿ ಸಂಧಿಸಿ ಪೊಂದಿದಾಇಂದಿರೆಸುಂದರೆ ಬಂದಾನೆಂದೆಂತೆಂದಳುವೃಂದಾರಕಾರವಿಂದಜಾಹೀಂದ್ರರು ನಿಂದರೂತಂದೆ ಮುಕುಂದ ಆನಂದನಂದನ ಮಹಿಮೆ 1ನಿಗಮಗಳು ಗುರುತ ಪೊಗಳಲು ಮಿಗೆ ತಪಸಿಗಳೆಣಿಕೆಗೆ ಮೈಯಗೊಡದೆ ನಗುವನಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿಅಘದೂರ ಸುಗುಣಗಣನ ಮಹಿಮೆ 2ಉನ್ನತಕುನ್ನತ ಇನ್ನಣುಗಿನ್ನಣುಘನ್ನಕೆ ಘನ್ನ ಜಗನ್ನುತ ಸನ್ನಿದತನ್ನವನೆನ್ನಲು ಮನ್ನಿಪ ಚಿನ್ಮಯಚೆನ್ನ ಪ್ರಸನ್ವೆಂಕಟನಾಥನ ಮಹಿಮೆ 3
--------------
ಪ್ರಸನ್ನವೆಂಕಟದಾಸರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಕರತಾರೆ ಕರತಾರೆ ಶ್ರೀನಿವಾಸನಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆಸಿರಿರಾಣಿರಮಣ ಘನಾಂಗಗೆಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ 1ಸುಂದರ ಸುಂದರ ಶುಭಮಂದಿರನ್ನ ದಯಾರಸಸುಂದರನ್ನ ವರಕಂಬುಕಂದರನ್ನಚೆಂದಾವರೆಗಣ್ಣವನಸಿಂಧೂರವರದನ್ನ ದೇವೇಂದ್ರಜಿತ ಪಾರಿಜಾತ ತಂದನ್ನ 2ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರದಾಯಿತೀ ಅವಸ್ಥೆ ಹುಟ್ಟು ಹೊಂದಿಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟರಾಯ ಬಂದ ಫಲಿಸಿತಾನಂದ 3
--------------
ಪ್ರಸನ್ನವೆಂಕಟದಾಸರು
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು
ನಾರಾಯಣ ಪಂಜರನಾರಾಯಣಾಯ ನಮೊ ನಾರಾಯಣಾಯ ನಮೊನಾರಾಯಣಾಯ ನಮೊ ನಾರಾಯಣನಾರದರ ಮುಖದಿಂದ ನರಕಸ್ಥರೆಬ್ಬಿಸಿದೆನಾರಾಯಣಾಯ ನಮೊ ನಾರಾಯಣ ಪ.ಮತ್ತಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ 1ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆಪೃಥುಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ2ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ 3ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆಮುಖದಿಶ್ರುತಿಪಿಡಿತಂದು ವಾರಿಜಾಸನಗಿತ್ತೆ4ಪುರುಹೂತಗಖಿಳ ಪರಮಾರ್ಥವನು ಅರುಹಿದೆಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ 5ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ 6ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ 7ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆಮಕರಧ್ವಜಾರಿ ಧನು ಮುರಿದವನಿಜೇಶ8ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ 9ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆಶರದಿ ರಾವಣನರಿದು ಸುರರ ಸಂಕಟ ಹರಿದೆ 10ಅನುಜನಗ್ನಿಗೆÉ ಧುಮುಕಲವಧಿ ಮೀರದೆ ಪೊರೆದೆಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ 11ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ 12ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆಕ್ರತುಭೋಕ್ತø ಕ್ರತುಗಾತ್ರ ಕ್ರತುಪಾಲ ಕ್ರತುಶೀಲ13ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗಗೋಪೀ ಜನಜಾರನವನೀತದಧಿಚೋರ14ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣವಂಶವರ್ಧಕಸುಜನವಂಶಮರ್ದಕ ಕುಜನ15ಅಕ್ರೂರವಂದ್ಯಕಂಸಾರಿಕುಬ್ಜಾರಮಣಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ 16ಅದಿತಿ ಕುಂಡಲದಾತ ಭಗದತ್ತವರದನೆಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ 17ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯಶಂಬರಾರಿಯ ಜನಕ ಯಜÕಪೂಜಾಗ್ರಣಿಯೆ 18ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆಪೌಂಡ್ರಕಶೃಗಾಲಕೌರವ ಭೂಮಿ ಭಾರಹರ19ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ 20ಗರುಡ ಗಂಧರ್ವಕಿನ್ನರಗೀತ ಸಂಪ್ರೀತಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ 21ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ 22ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವಮಾನವಪ ಕೃಷ್ಣಬುದ್ಧಕಲ್ಕಿ ಕಪಿಲಾತ್ರೇಯ23ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ 24ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ 25ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆಭಕ್ತವತ್ಸಲ ಕೃಪಾಂಬುಧಿಪರಾತ್ಪರಕೃಷ್ಣ26ವಸುಧೆವೈಕುಂಠ ಮಂದಿರವಾಸ ಶ್ರೀನಿವಾಸವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ 27ಆದಿನಾಥÀಪ್ರಮೇಯಾದಿ ಪುರುಷೋತ್ತಮನೆಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು 28ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ 29ಕಿವಿಯಲ್ಲಿ ಮುಖದಲ್ಲಿ ನಾಮಾಮೃತವÀ ತುಂಬುಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು 30ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆಭವವಿರಿಂಚ್ಯಾದಿ ಕರಿಗಭಯದನೆ ನೀ ಸಲಹು31ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗನೀತಿಗಳನರಿಯೆ ನಿನ್ನಯ ನಾಮವೆ ಗತಿಯು 32ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲತನಯತರುಣಿ ಕೊನೆಯ ಸಂಗತಿಗೆ ಆರಿಲ್ಲ33ದೋಷಗಳನರಸದೆನ್ನನು ಸಾಕು ಸಾಕಯ್ಯದಾಸಪಾಲಕ ದೇವ ಡಿಂಗರರ ಸಂಜೀವ 34ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ 35ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ 36ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ 37ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲಸತ್ಕರ್ಮಗಳಿಗೆ ಬಹಿಷ್ಕøತನಾಗಿ ಬಾಳುತಿಹೆ 38ಒಂದು ಜಾವದ ತಪ್ಪನೆಂದೆಂದಿಗುಣಲಾರೆವಂದಿಸುವೆ ಸಾಷ್ಟಾಂಗತ್ರಾಹಿತ್ರಾಹಿಪಾಹಿತ್ರಾಹಿ39ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜಹರಿ40ಏನರಿಯೆನೇನರಿಯೆ ನೀನೆ ನೀಗೆಲೆಲೆಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ 41
--------------
ಪ್ರಸನ್ನವೆಂಕಟದಾಸರು
ಪರಮೇಶ್ವರಿ ಪಾರ್ವತಿಸತಿವರದೆ ಶ್ರೀವನದುರ್ಗಾ ಪ.ತರುಣಾರುಣಶತಕೋಟಿಕರುಣಾನನೆ ಮಾಂಪಾಹಿಅ.ಪ.ಜಗದ್ಭರಿತೆ ಜನಾರ್ದನಿಜಗದೇಕ ಶರಣ್ಯೆನಿಗಮಾಗಮಶಿರೋರತುನೆಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1ಸದಾನಂದೆ ಸರೋಜಾಕ್ಷಿಸದಾವಳಿಸನ್ನುತೆತ್ರಿದಶಾರ್ಚಿತೆ ತ್ರಿಗುಣಾತ್ಮಕಿಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ 2ವಿರಾಜಿಸುವ ವಿಶ್ವೋತ್ತಮವರಚಿತ್ರಪುರೇಶ್ವರಿಹರಿಲಕ್ಷ್ಮೀನಾರಾಯಣಿಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಥಮ ಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪಅಖಿಳಗುಣಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1ಪುರುಷೋತ್ತಮತೀರ್ಥಅಚ್ಯುತಪ್ರೇಕ್ಷರಿಗೆಪುರುಷೋತ್ತ ಮಾರ್ಯರಕರಕಮಲಜಾತವರವಾತಅವತಾರ ಆನಂದತೀರ್ಥರಚರಣಪದ್ಮದಲಿ ನಾ ಶರಣಾದೆ ಸತತ2ಶ್ರೀ ಮಧ್ವ ಆನಂದತೀರ್ಥಕರಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆನಮಿಪೆಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲುಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕವಾತನ್ನೊಲಿಸಿಕೊಳ್ಳ ದವರ್ಗೆಹರಿಒಲಿಯಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4ವಾತಾವತಾರ ಹನುಮಂತನೇ ದ್ವಾಪರದಿಕೌಂತೇಯ ಭೀಮನು ಅವನಿಗೆಅನುಜಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜಪಾದಮೂಲದಿ ಕುಳಿತ ಕೃಷ್ಣನು ಒಲಿದ5ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸಅಕಳಂಕ ಸುಖಜಿತ್ವಪುಷಶ್ರೀಪತಿಯು6ಆಮ್ನಾಯತತಿಪುರಾಣಗಳು ಪೇಳ್ವಂತೆರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್ಭೀಮನೇ ಯತಿ ರೂಪದಲ್ಲಿ ಬಂದಿಹನೆಂದುಸುಮನಸರಾಜ ಪುಟ್ಟಿದನು ಪುನಃ7ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದುಹೊತ್ತು ಮಧ್ವಾಚಾರ್ಯರ ಪುಸ್ತಕಗಳಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿವಿನಯದಿ ಕೇಳ್ದರು ಶಿಷ್ಯರು ಟೀಕೆಗಳಗ್ರಂಥಗಳಿಗೆ ಯಾರು ಮಾಡುವುದು ಎಂದು 9ಈ ಗೋರಾಜನೇ ಟೀಕೆಗಳ ಸಂರಚಿಸಿಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲುಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10ಯುಕ್ತ ಕಾಲದಿ ಈ ಗೋರಾಜ ನೇವೆರಘುನಾಥ ದೇಶಪಾಂಡೆ ರುಕ್ಮಾಬಾಯಿಗೆಮಗನಾಗಿ ಜನಿಸಿದನು ಮಂಗಳವೇಢೆಯಲಿಈ ಗ್ರಾಮ ಪಂಢರಪುರದ ಸಮೀಪ 11ಧೋಂಡುರಾಯನು ಎಂಬ ನಾಮದಲಿ ಬೆಳೆದಗಂಡಿಗೆ ಉಪನಯನ ಮದುವೆಯೂ ಆಯ್ತುಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿಚಂಡ ಶ್ರೀಮಂತರ ಮನೆತನದವಳು 12ಒಂದುದಿನ ಧೋಂಡುರಾಯನು ನದೀ ದಡಕೆಬಂದನು ಕುದುರೆಯ ಮೇಲೇರಿಕೊಂಡುಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರುಎದುರಾಗಿ ನದಿಯಲ್ಲಿ ಆಚೆದಡದಿಂದಕುದುರೆ ಸವಾರನು ವರ್ಚಸ್ವಿ ಯುವಕನುಬೆದರದೆ ಪ್ರವಾಹದಲಿ ಬರುವದು ನೋಡಿದರು 14ಕುದುರೆ ಮೇಲ್ ಅಸೀನನಾಗಿದ್ದ ಯುವಕನುಕ್ಷುತ್ತೃಷೆಶಮನಕ್ಕೆ ಯತ್ನ ಮಾಡುತ್ತಾಉದಕವ ಕೈಯಿಂದ ತುಂಬಿಕೊಳ್ಳದಲೇಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15ಮಾಧವಮಧ್ವರು ಮೊದಲೇ ಸೂಚಿಸಿದಂತೆಇಂದುಆ ಕುರುಹ ಅರಿತು ಅಕ್ಷೋಭ್ಯರುಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರುಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16ಪ್ರವಾಹದ ನಗಾರಿಯ ಸಮಬಲಿ ಧೋಂಡುವೇಗ ಲೆಕ್ಕಿಸದಲೇ ದಡಕೆ ತಾ ಬಂದುಮುಗಿದಕರಬಾಗಿ ಶಿರ ನಮಿಸಿ ಅಕ್ಷೋಭ್ಯರಆಗಲೇ ಸಂನ್ಯಾಸಕೊಡಲು ಬೇಡಿದನು 17ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪಈತ ರಾಯರ ಸುತನಾದರೂ ವೈರಾಗ್ಯಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದುಹರಿಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷಜಯ ಷೋಷ ಹರಡಿತು ಪರಿಮಳ ಸುಗಂಧ 19ತಂದೆ ರಘುನಾಥರಾಯನು ಸುದ್ದಿಕೇಳಿಬಂದು ಅಕ್ಷೋಭ್ಯರ ಕಂಡು ಬಲುಕೋಪದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿಎಂದು ವಾದಿಸಿದನು ಪುತ್ರ ಮೋಹದಲಿ 20ಪೂರ್ವಧೋಂಡುರಾಯ ಈಗ ಜಯತೀರ್ಥರುತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸಈ ವಿಷಯ ತಿಳಕೊಂಡರೂ ಸಹ ರಘುನಾಥಸೇವಕರ ಸಹ ಮಗನ ಕರಕೊಂಡು ಹೋದ 21ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆಶಯನಗೃಹದೊಳು ಪತ್ನಿ ಸಹಿತ ಕಳುಹಿದನುಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿಭಯದಿಂದ ಹೊರಬಂದು ಹೇಳಿದಳು ವಿಷಯ 22ತನ್ನಪತಿಧೊಂಡರಾಯನ್ನ ತಲ್ಪದಲಿಕಾಣದೆ ಅವರಿದ್ದ ಸ್ಥಾನದಲಿ ಸರ್ಪಘನಧೀರ್ಘಗಾತ್ರವಿಸ್ತಾರ ಹೆಡೆಯಿಂದಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23ರಘುನಾಥರಾಯನು ಹರಿಚಿತ್ತ ಇದು ಎಂದುಮಗನ ಪ್ರಭಾವವ ಅರಿತು ತ್ವರಿತದಲಿಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದುದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àುಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದಶ್ರೀ ರಮಾಪತಿ ಪೂಜಾ ಸತ್ತತ್ವವಾದದುರ್ಮತ ಖಂಡನದ ರೀತಿಯ ಜಯಾರ್ಯರಿಗೆಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26ಶಕ ವರುಷ ಹನ್ನೊಂದು ನೂರು ಅರವತ್ತೇಳುಮಾರ್ಗಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತದಿಗ್ವಿಜಯದಲಿ ದುರ್ವಾದಿಗಳ ಗೆದ್ದುಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿಪ್ರಖ್ಯಾತರಾದರು ಜಯತೀರ್ಥ ಆರ್ಯ 28ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನ ಕರುಣಿಜಯತೀರ್ಥಗುರುನಮೋಪಾಹಿ29|| ಪ್ರಥಮ ಕೀರ್ತನೆ ಸಮಾಪ್ತ ||ದ್ವಿತೀಯಕೀರ್ತನೆಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿವರವ ಪಡೆದಿಹರು ಈ ಜಯತೀರ್ಥ ಆರ್ಯಬರೆವುದಕೆ ಲೇಖನವು ಅಡಿಕೆಯುಅರದೂರದುರ್ಗೆಯು ಕೊಟ್ಟಿಹಳು ಇವರ್ಗೆ1ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರಪರಸುಖಪ್ರಮೂಲಗ್ರಂಥಗಳ ಟೀಕಾಬರೆದಿಹರು ಅನುಪಮ ಉತ್ತಮ ರೀತಿಯಲಿಭರದಿ ಓದುವವರೇ ಬಲ್ಲರು ಮಹಿಮೆ 2ಶ್ರೀ ಮಧ್ವಕೃತವು ಶ್ರೀ ಬ್ರಹ್ಮಸೂತ್ರಭಾಷ್ಯವುಆ ಮೂಲಗ್ರಂಥವು ಎರಡು ಸಾವಿರವುಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವುಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3ಅನುವ್ಯಾಖ್ಯಾನದ ನಾಲಕ್ಕು ಸಾವಿರಘನತರ ಗ್ರಂಥಕ್ಕೆ ಜಯತೀರ್ಥರಜ್ಞಾನಪ್ರದ ಅಜ್ಞಾನಗಿರಿವಜ್ರಟೀಕೆಯಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದಘನ್ನ ಶುಭತರ ಮಧ್ವ ವಿಜಯದಲ್ಲಿಅನುವ್ಯಾಖ್ಯಾನದ ಟೀಕಾ ಸುಧಾ ಎಂದುಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂತತ್ವೋದ್ಯೋತಕ್ಕೂಕರ್ಮನಿರ್ಣಯಕ್ಕೂ6ಮಾಯಾವಾದಉಪಾಧಿಖಂಡನಗಳಿಗೂಮಿಥ್ಯಾತ್ವಾನುಮಾನ ಖಂಡನಕ್ಕೂನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂಅಷ್ಟಾದಶ ಈ ಗ್ರಂಥಗಳಿಗೆಪಟು ಪಟೀಯಸವಾಗಿ ಟೀಕೆಯಾ ಬರೆದಿಹರುಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8ಪ್ರತ್ಯಕ್ಷ ಅನುಮಾನಆಗಮಪ್ರಮಾಣಗಳರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯುಮಾಧವನ ಸರ್ವೋತ್ತಮ ಜಗತ್ ಸತ್ಯತ್ವಇಂಥಾದ್ದು ಸಾಧಿಸುವ ವಾದಾವಳಿಯು 9ತಂತ್ರಸಾರಪಾಂಚರಾತ್ರಾಗಮಾನುಸರಿಸಿಪದ್ಯಮಾಲಾನಾಮ ಗ್ರಂಥದಲ್ಲಿಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರುಶತಾಪರಾಧ ಸ್ತೋತ್ರವು ಮಾಡಿಹರು 10ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾದುರ್ವಿದ್ಯಾ ದುರ್ಮತಗಳನ್ನ ಛೇದಿಸುತಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವಗ್ರಂಥ ಓದಿ ನೋಡಿ ಅರ್ಥವಾಗದಲೆಗ್ರಂಥಕ್ಕೆ ಜಯರಾಯರು ಬರೆದ ಟೀಕೆಯಓದಲು ಅರ್ಥವು ವಿಶದವಾಯ್ತು 12ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥಸರ್ವ ಪ್ರಕಾರದಲೂ ಉತ್ತಮವಾಗಿಹುದುಸರ್ವಜÕ ಮುನಿಗಳ ಗ್ರಂಥದ ಸರಿಯಾದಭಾವವ ವಿವರಿಸುವುದೆಂದು ಹೇಳಿದರು 13ಈ ರೀತಿ ವಿದ್ಯಾರಣ್ಯರು ಕೊಂಡಾಡಿಪುರಿ ರಾಜಬೀದಿಯಲಿ ಆನೆ ಅಂಬಾರಿಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾಮರ್ಯಾದೆ ಮಾಡಿದರು ವಿಜಯನಗರದಲಿ 14ಮಧ್ವಗಂಥಗಳನ್ನು ಜಯಾರ್ಯ ಬರೆದಿರುವಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತವಿದ್ಯಾರಣ್ಯರು ನಮಸ್ಕಾರ ಮಾಡಿದರುಎಂದು ಇತಿಹಾಸವ ಸುಜನರು ಪೇಳುವರು 15ಸ್ವಮತ ಪರಮತ ವಿದ್ವಜ್ಜನರಿಂದಈ ಮಹಾಮಹಿಮ ಟೀಕಾಚಾರ್ಯ ಆರ್ಯಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನಶೀಲತಮ ಜಯರಾಯ ಅಲ್ಲಿಯೇ ನಿಂತರುಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17ಹನ್ನೊಂದು ತೊಂಭತ್ತು ಶಕವಿಭವಆಷಾಢಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರುತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿಶ್ರೀ ನಾರಾಯಣನಪಾದಸೇರಿದರು18ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ24ಪ್ರಥಮ ಅಧ್ಯಾಯಪ್ರಾದುರ್ಭಾವಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನುಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿನೀ ಲಯಾಬ್ಧಿ ಸುಖವ ರಮೆಗಿತ್ತಿಸ್ವರತ1ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನುಗುಣತ್ರಯಮಾನಿಮಾಅನಘಸಂಸ್ತುತಿಸಿಆನಂದಮಯನೀನು ಆನಂದ ಲೀಲೆಯಿಂಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತವಿಧಿಯಪ್ರತಿದಿನದಲ್ಲಿ ಅವತಾರ ಮಾಡಿಸಾಧು ಸಾತ್ವಿಕರಿಗೆಅಭಯಸದ್ಗತಿ ಇತ್ತುಅಧಮ ಅಸುರರ ಸದೆದು ಭೂಭಾರ ಕಳೆದಿ 3ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳುಎಲ್ಲವೂ ಪೂರ್ಣವು ನಿತ್ಯವು ಅಭಿನ್ನಳಾಳುಕನೇ ನಿನ್ನಮಲ ರೂಪವಿಶೇಷವಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4ವೇದ ಉದ್ಧಾರನೇ ಮತ್ಸ್ಯರೂಪನೇ ನಮೋಮಧುಕೈಟಭಹಾರಿ ಹಯಗ್ರೀವ ಶರಣುಮಂಡಲಾದ್ರಿಯ ಪೊತ್ತಕೂರ್ಮಧನ್ವಂತರಿಸುಧೆಸುರರಿಗುಣಸಿದ ಸ್ತ್ರೀರೂಪಪಾಹಿ5ಸುರಪಕ್ಷಅಜಅಜಿತ ಸಿಂಧುಜಾಪತಿ ಧರೋ-ದ್ಧಾರವರಾಹನಮೋ ಪುರುಟಾಕ್ಷಹಾರಿಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದವರಚಕ್ರಧರಾಅಭಯಭೂಧರಶಾಮ6ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವುಹಸ್ತದ್ವಯ ಅಜಾನುದರಾರಿಧರ ಕೋಟಿಆದಿತ್ಯಾಮಿತತೇಜಮಾಲಕ್ಷ್ಮೀಯುತ ವೀರಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇಹಿರಣ್ಯಕಶಿಪುವ ಸೀಳ್ದಿ ಪ್ರಹ್ಲಾದಪಾಲಮೂರಡಿಯ ಕೇಳ್ದ ವಾಮನಬಲಿಬಂಧಕಶರಣು ಶ್ರೀತ್ರಿವಿಕ್ರಮನೇ ಧೂರ್ಜನಕಪಾಹಿ8ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿಕೋಟಿ ಸೂರ್ಯಮಿತೋಜ್ವಲ ಪರಶುರಾಮಸಾಟಿ ಇಲ್ಲದ ಹನುಮತ್ಸೇವ್ಯಸೀತಾರಮಣಪಟ್ಟಾಭಿರಾಮನಮೋ ರಾವಣ ಧ್ವಂಸೀ 9ಭಜಿಸುವೆ ನರಸೇವ್ಯ ನಾರಾಯಣ ವ್ಯಾಸಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶಕುಜನಮೋಹಕ ನಮೋ ಸುರ ಸುಬೋಧಕಬುದ್ಧದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10ಕ್ರೂರ ದೈತ್ಯರ ಭಾರಿಭಾರಧರಿಯಿಂದಿಳಿಸಿದೆವಾರಿಜಾಸನ ಶಿವಾದ್ಯಮರರ ಮೊರೆಕೇಳಿಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯಪರಮಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ11ವಸುದೇವ ದೇವಕೀಸುತನೆಂದು ತೋರಿದವಾಸುದೇವನೇ ನಿನ್ನ ಸುಚರಿತ್ರೆ ಕೇಳೆಶ್ರೀಶ ನಿನ್ನಯ ದಯದಿಕಲುಷಪರಿಹಾರವುಸುಶುಭ ಪಾವನಕರವು ಸರ್ವಭಕ್ತರಿಗೂ 12ಕಲಿಕಲಿಪರಿವಾರ ದೈತ್ಯ ದುರ್ಜನರುಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿಶೀಲ ಹರಿಭಕ್ತರ ಕಂಡು ಸಹಿಸದೇ ಬಹುಬಲಕಾರ್ಯ ವಂಚನೆಯಿಂದ ಪೀಡಿಸಿದರು 13ಎಂಟನೇ ಮಗು ತನ್ನ ಮೃತ್ಯುವಾಗುವುದೆಂದುದುಷ್ಟ ಕಂಸನು ತಂಗಿ ಸಪತಿ ದೇವಕಿಯಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14ಏಳನೇ ಗರ್ಭವು ವ್ಯಾಳದೇವನ ಅಂಶಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟುಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದಸುರರುಸೇವಿಸುವುದಕೆ ನಿನ್ನಿಚ್ಛೆ ದಯದಿಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿಪರಿಪರಿವಿಧದಲ್ಲಿ ಕೃತ ಕೃತ್ಯರಾದರು16ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿಅವತಾರಕ್ಕನುಸರಿಸಿ ಬಂದು ತೆರಳಿದಳುದೇವ ನಿನ್ನ ಕಲಾ ಸಂಯುಕ್ತ ಶೇಷನುಭವಿಸಿದನು ನಿನ್ನಣ್ಣ ಬಲರಾಮನೆಂದು 17ನಿರ್ದೋಷನೀ ಸರ್ವ ಜಗನ್ನಿವಾಸನು ದೇವ-ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗವಿಧಿಭವಾದಿಗಳೆಲ್ಲ ಬಂದು ಸಂಸ್ತುತಿಸಿದರುಸತ್ಯಜ್ಞÕನಾನಂತಗುಣಪೂರ್ಣನಿನ್ನ18ಯಾವನು ಸರ್ವದಾ ಸರ್ವ ಬಹಿರಂತಸ್ಥಯಾವನು ಸರ್ವ ಹೃತ್ ಯೋಮದೊಳು ಇರುವಯಾವನಲ್ಲಿ ಸರ್ವವೂ ಸಮಾಹಿತವೋಅವನೇವೇ ನೀಹರಿವಿಷ್ಣು ಕೃಷ್ಣ ಅವತಾರ19ಪ್ರಾಕೃತಶರೀರ ವಿಕಾರಗಳು ನಿನಗಿಲ್ಲಪ್ರಾಕೃತಕಲಾವಿಲ್ಲ ಭಿನ್ನಾಂಶನಲ್ಲಏಕಪ್ರಕಾರಅಕ್ಷರಪೂರ್ಣಅಜನಿನ್ನಅಜ್ಞಾನದಲಿ ನರರು ಜನಿಸಿದಿ ಎಂಬುವರು 20ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನಕಿರೀಟಕುಂಡಲಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯಕೌಮೋದಕೀ ಸುದರ್ಶನ ಸರೋಜ 21ಉದ್ದಾಮ ಕಾಂಚಂಗದ ಕಂಕಣಾದಿಗಳಪೀತಾಂಬರ ಪಾದನೂಪುರ ಪೂರ್ಣೇಂದುಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟಮೋದಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ22ಈರೂಪವಾಸುದೇವನೋಡಿ ಸ್ತುತಿಸಿದನು ನಿನ್ನಅರಿಯೇ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯುಕಾಣುತ್ತಾ ನರಲೋಕ ವಿಡಂಬನಕ್ಕಾಗಿತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24ದೇವಕಿಯ ಸ್ತುತಿಕೇಳಿಯುಕ್ತ ಮಾತುಗಳಾಡಿದೇವ ನಿನ್ನೀಚ್ಛಾ ಶಕ್ತಿಯಿಂದಲೇವೇಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡುತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲುಆಶ್ಚರ್ಯವಲ್ಲ ನದಿಮಾರ್ಗಬಿಟ್ಟಿದ್ದುಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿವಸುದೇವ ಎತ್ತಿಪೋದನು ಅವಳ ಮಗಳ 26ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯವಸುದೇವ ತಂದು ದೇವಕಿ ಬದಿ ಇಡಲುಪ್ರಸವ ಸುದ್ದಿಯಕೇಳಿಕಂಸ ಆರ್ಭಟದಿಂದಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27ಅಂಬರದಿ ದಿವ್ಯ ರತ್ನಾಭರಣ ಭೂಷಿತೆಕಂಬುಚಕ್ರಾದಿಧರೆ ಅಷ್ಟ ಮಹಾಭುಜೆಯುಅಂಬಾ ಮಹಾದುರ್ಗಾ ಭಗವತೀ ಮಯಾದೇವಿಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28ಕಂಸನ್ನ ಎಚ್ಚರಿಸಿ ಭಗವತಿ ತೆರಳಲುಕಂಸನುಪರಮವಿಸ್ಮಿತನಾಗಿ ಬೇಗವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿಅಸುರ ಮಂತ್ರಿಗಳೊಡೆ ಆಲೋಚಿಸಿದನು 29ನಂದ ಯಶೋದೆಯು ತಮ್ಮ ಶಿಶು ನೀನೆಂದುನಂದ ಆನಂದದಿವಿಪ್ರವೈದಿಕರ ಕರೆದುಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿಚೆಂದದಿ ಅಲಂಕೃತ ಧೇನುಗಳ ಕೊಟ್ಟ 30ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯಬಾಲಲೀಲಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಸಣ್ಣ ಶಿಶುರೂಪ ನೀ ಪೂತನೀ ಶಕಟತೃಣಾವರ್ತರ ಕೊಂದಿ ನಮೋ ಅಮಿತಶೌರಿನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳಕಾಣಿಸಿದಿ ಮಾತೆಗೆ ನಮೋವಿಶ್ವವಿಷ್ಣೋ1ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲಅಗಣಿತಮಹಿಮ ಶ್ರೀ ವಿಷ್ಣು ನೀ ಎಂದುಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆಕಾಕುದುರ್ಮತಿಗಳು ದ್ವೇಷ ಬೆಳೆಸಿದರು2ಕಂಸ ಜರಾಸಂಧ ಕಾಲಯವನ ಕಲಿಯಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನಹಿಂಸಿಸಬೇಕೆಂದು ಆಗಾಗ ಯತ್ನಿಸಲುದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3ವತ್ಸಬಕಅಘಧೇನುಕ ಪ್ರಲಂಬಾರಿಷ್ಟಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿವಸುಮತಿಯ ಸಾಧುಗಳ ಭಯ ನಿವಾರಿಸಿದಿ 4ಬಲವಂತ ರಾಮ ಸಹ ಅಮಿತ ಪೌರುಷ ನೀನುಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿಶೀಲ ಭಕ್ತರಿಹಪರಸುಖ ಒದಗಿಸಿದಿಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀಸಂರಕ್ಷಿಸಿದಿ ವೃಜಗೋಪ ಜನರನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದಸಮ್ಮುದದಿ ನಂದನ್ನ ಕರತಂದಿ ಅಜಿತ 6ನಾಗಪತ್ನೀಯರು ಬಂದು ನಮಸ್ತುಭ್ಯಂಭಗವತೇ ಪೂರುಷಾಯ ಮಹಾತ್ಮನೇ ಎಂದುಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7ಶ್ರೀಧರನೇ ನಿನ್ನಯ ವೇಣುನಾದದ ಸುಧೆಯಮಾಧುರ್ಯ ರಸವನ್ನು ವರ್ಣಿಸಲಶಕ್ಯಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-ವಿಂದ ಮುಖದ ಆನಂದ ಸವಿದು ಸುಖಿಸುವಳು 8ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬಸೊಲ್ಲಿನ ತತ್ವವ ಬಲ್ಲವರೇ ಬಲ್ಲರುಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದುಮುಖ್ಯ ವಾಯು ಅಖನರ್ಮ ಸಮಗಿಲ್ಲಹೊಯ್ಯಿಸೆ ಮಳೆಶಕ್ರನೀ ಲೀಲೆಯಂ ಗೌರಿ ಎತ್ತಿಕಾಯ್ದಿ ಗೋಜನಗಳ ಅನ್ನದ ಅನ್ನಾದ 10ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂರಾಧಾದಿ ಗೋಪಿಗಳ ಅನಂದ ಉಕ್ಕಿಸಿಸ್ವರತಇಂದಿರಾಪತಿ ಗೋವಿಂದ ಗೋ ಕಾಯ್ದ 11ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟುಅದರಂತೆ ಭಕ್ತಿಯಲಿ ಅವರೋಚ್ಯ ಉಂಟುಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿಮಂದಗಮನೆಯರಿಗೆ ರಾಸಕ್ರೀಡೆಯಲಿ 12ನಂದವ್ರಜಗೋಕುಲ ಮಥುರೆ ಬೃಂದಾವನಚಂದ್ರ ಯಮುನೆವನಲತೆ ಪುಷ್ಪ ವೃಕ್ಷಸಿಂಧುದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13ವಿದ್ಯಾಧರ ಸುದರ್ಶನನು ಶಾಪದಿ ಅಹಿಯುನಂದನ್ನ ಕಾಯ್ದಿ ಆ ಅಹಿಯ ಬಾಯಿಂದಪಾದಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿದುರುಳವ್ರಜನ ಶಿರವ ಕತ್ತರಿಸಿ ಬಿಸುಟುವಿಪ್ರನಾರಿಯರ ಅನ್ನ ಉಂಡು ಒಲಿದಂತೆಕ್ಷಿಪ್ರವಾಯಕ ಗೊಲಿದಿ ಮಾಲಾಕಾರನಿಗೂ15ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದುಖಳದುಷ್ಟ ಕಂಸನ್ನ ದ್ವಂಸ ಮಾಡಿದಿಯೋಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿಬಲರಾಮ ಕೃಷ್ಣ ನಮೋಪಾಹಿಸಜ್ಜನರ16ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನುಗುರುವಿನ ಮೃತ ಪುತ್ರನ್ನ ಕರೆತಂದಿಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನುನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17ಈರಾರುಯೋಜನವು ದ್ವಾರಕಾ ದುರ್ಗವುಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆನೀಚ ದುರ್ಮತಿ ಕಾಲಯವನ ಹಿಂಬಾಲಿಸಿಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದುಸುಪವಿತ್ರ ನರನಾರಾಯಣ ಕ್ಷೇತ್ರಯೈದೇಉಪಾಯದಿಂದಲಿ ಮಾಗಧನ ಸಮ್ಮೋಹಿಸಿನೀ ಬಲರಾಮ ಸಹ ಸ್ವಪುರ ಸೇರಿದಿಯೋ 20ವನಜಸಂಭವಪ್ರೇರಿಸಲು ರೇವತರಾಜಅನರ್ತ ದೇಶಾಧಿಪತಿಯು ಶ್ರೀಮಂತತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21ಸುಧಾ ಕಲಶವ ಗರುಡ ಕಿತ್ತಿ ತಂದಂತೆಚೈದ್ಯಮಾಗಧಶಾಲ್ವಾದಿ ಕಡೆಯಿಂದಎತ್ತಿ ತಂದಿ ಸ್ವಯಂವರದಿಂ ಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 22ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 23-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಅಧ್ಯಾಯಕಲ್ಯಾಣ ಸುಧಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪವಿಧರ್ಭ ದೇಶಾಧಿಪತಿ ಭೀಷ್ಮಕರಾಜನುಸದ್ಧರ್ಮನಿಷ್ಟ ಕುಂಡಿನಿಪುರವಾಸಿಐದು ಮಂದಿ ಗಂಡು ಮಕ್ಕಳು ಅವನಿಗೆಮೊದಲನೆಯವನಿಗೆ ರುಗ್ಮಿ ಎಂದು ಹೆಸರು 1ರುಗ್ನಿ ಬಹು ದುಷ್ಟನು ಕೃಷ್ಣ ದ್ವೇಷಿ ಖಳರುಮಾಗಧಾದಿಗಳಲ್ಲಿ ಬಹು ಸ್ನೇಹರುಗ್ಮಿಗೆ ರುಕ್ಮರಥ, ರುಕ್ಮಬಾಹು ಮತ್ತುರುಕ್ಮಕೇಶಿ, ರುಕ್ಮಮಾಲಿ ಅನುಜರು2ಈ ಪುಣ್ಯವಂತ ರಾಜನಿಗೊಂದು ಮಗಳುಂಟುಈ ಪುತ್ರಿ ರುಕ್ಮಿಣಿ ಸ್ಫುರದ್ವಾರಾನನೆಯುಹೇ ಪುರುಷೋತ್ತಮನೇ ನಿನ್ನ ನಿಜಸತಿ ಲಕ್ಷ್ಮೀಅಪ್ರಮೇಯನೇ ನಿನ್ನ ಬಿಟ್ಟಗಲದವಳು 3ಉರುಗುಣಾರ್ಣವ ನಿನ್ನ ಅವತಾರಕನುಸರಿಸಿಶ್ರೀ ರಮಾದೇವಿಯೇ ಪ್ರಾದುರ್ಭವಿಸಿದಳುನರರ ನೋಟಕೆ ರಾಜಪುತ್ರಿಯಂತೆ ಇಹಳುಪುರಟಗರ್ಭನ ತಾಯಿ ಸರ್ವಜಗನ್ಮಾತೆ 4ಈ ಷÉೂೀಡಶ ಕಲಾಯುಕ್ ನಮ್ಮ ತನುವೋಲ್ ಅಲ್ಲಕ್ಲೇಶಸಂತಾಪಾದಿ ವಿಕಾರಗಳು ಇಲ್ಲದೋಷ ದೊರೆ ದುಃಖ ಅಸ್ಪøಷ್ಟೆ ಎಂದೆಂದೂಕೃಷ್ಣ ವಿಷ್ಣೋ ನಿನ್ನಾಧೀನೆ ಎಂದೆಂದೂ 5ಉತ್ತಮ ಮಹಾಪೂರುಷ ಶ್ರೀಕರನೇ ನಿನ್ನಉತ್ತಮ ಕ್ರಿಯಾರೂಪ ಗುಣವಿಶೇಷಗಳನ್ನಸಂತತ ಅಲೋಚಿಸಿ, ಹೊಸ ಹೊಸ ಅತಿಶಯವಸತತ ಕಾಣುತ ತಾ ಸನ್ನುತಿಸಿ ಸುಖಿಸುವಳು 6ವಿಮಲಆನಂದಮಯನಿನ್ನ ಸಹಲಕ್ಷ್ಮೀಬ್ರಹ್ಮರುದ್ರಾದಿ ಸುರರಿಂದ ಸನ್ನುತಳುಅಮಿತೋಚ್ಛ ಭಕ್ತಿಯಿಂ ಸದಾ ನಿನ್ನಸೇವಿಪಳುರಮಾ ಸಿಂಧುಜಾ ಜಾನಕೀಯೇವೇ ಭೈಷ್ಮಿ 7ಸಿರಿದೇವಿ ತಿಳಿದಷ್ಟುಹರಿನಿನ್ನ ತಿಳಿದವರುನರರಲ್ಲಿ ಸುರರಲ್ಲಿ ಯಾರೂನೂ ಇಲ್ಲನರಲೋಕದಲ್ಲಿ ನರರಂತೆ ನಟಿಸುವ ಸಿರಿಯುಅರಿಯಬೇಕೇ ಇತರರಿಂದ ಹೊಸದಾಗಿ 8ಅರಮನೆಗೆ ಬರುವವರು ನಾರದಾದಿಗಳಿಂದಹರಿಮುಕುಂದನೆ ನಿನ್ನರೂಪಗುಣಮಹಿಮೆಹರುಷದಿಂದಲಿ ಚೆನ್ನಾಗಿಕೇಳಿಮನದಲ್ಲಿವರಿಸಿದಳು ಸದಾ ನಿನ್ನ ಪ್ರೇಮದಿ ಭೈಷ್ಮಿ 9ಕೃಷ್ಣನಿಗೆಸಮ ಸದೃಶ ಪುರುಷ ಯಾರೂ ಇಲ್ಲರುಕ್ಮಿಣಿಗೆ ಸಮ ಸದೃಶ ಸ್ತ್ರೀ ಯಾರೂ ಇಲ್ಲಗುರುರೂಪ ಔದಾರ್ಯ ಬುದ್ದಿ ಲಕ್ಷಣಾಶ್ರಯಳುನಿನ್ನ ನಿಜಪತ್ನಿ ರುಕ್ಮಿಣಿ ಎಂದು ನೀ ಅರಿವಿ 10ಮದುವೆ ಮಾಡಲು ರುಕ್ಮಿಣಿಗೆ ಯೋಚಿಸಿನೃಪಬಂಧುಗಳು ಕೃಷ್ಣಗೆ ಕೊಡಲು ಇಚ್ಛೈಸೆಧೂರ್ತರುಗ್ಮಿ ಕೃಷ್ಣ ದ್ವೇಷಿ ತಡೆ ಮಾಡಿದನುಚೈದ್ಯ ಶಿಶುಪಾಲನಿಗೆ ಕೊಡಲು ನೆನೆದು 11ಸುತಗೆ ಕೃಷ್ಣನು ಮಾತ್ರ ವರನೆಂದು ತಿಳಿದರೂಪುತ್ರ ಸ್ನೇಹದಿ ರುಕ್ಮಿಗೆ ಒಡಂಬಟ್ಟ ರಾಜಚೈದ್ಯನಿಗೆ ಕೊಡಲು ಏರ್ಪಾಡು ಮಾಡಲುಆಪ್ತ ದ್ವಿಜವರ್ಯನ ಕರೆದಳು ಭೈಷ್ಮೀ 12ವಿಪ್ರನ ದ್ವಾರ ಸಂದೇಶ ಕಳುಹಿಸಿದಳುಪತ್ರ ಬರೆದಳು ನಿನಗೆ ಸತ್ತತ್ವ ನಿಮಿಡಆ ಬ್ರಾಹ್ಮಣ ಶ್ರೇಷ್ಟ ದ್ವಾರಕಾ ಪುರಿಯೈದುಪರಮಪೂರುಷ ನಿನ್ನ ನೋಡಿದನÀು ಮುದದಿ13ಕಾಂಚನಾಸನದಲ್ಲಿ ಕುಳಿತಿದ್ದ ನೀನುದ್ವಿಜವರ ಶ್ರೇಷ್ಠ ಬರುವುದು ಕಂಡಾಕ್ಷಣದಿತ್ಯಜಿಸಿಆಸನಪೋಗಿ ಎದುರ್ಗೊಂಡು ಕರೆತಂದುಪೂಜಿಸಿದೆಯೋ ಸ್ವಾಮಿ ಬ್ರಹ್ಮಾಂಡದೊಡೆಯ 14ಅಖಂಡೈಕ ಸಾರಾತ್ಮಾ ಸರ್ವರೂಪಾಟಿಭಿನ್ನಅಕಳಂಕ ಉರು ಸರ್ವ ಸಚ್ಛÀಕ್ತಿಪೂರ್ಣಏಕಾತ್ಮ ನೀ ಪೂಜ್ಯ ಪೂಜಕ ನೀಚೋಚ್ಛಗಳಕಾಕುಜನಮೋಹಕ್ಕೆ ಅಲ್ಲಲ್ಲಿ ತೋರ್ವಿ15ಸಜ್ಜನರ ಗತಿಪ್ರದನು ಅವ್ಯಯನು ನೀನುಭೋಜನಾದಿ ಬಹು ಉಪಚಾರ ಮಾಡಿದ್ವಿಜವರ್ಯನ ಹೊಗಳಿ ಸಾಧುಸನ್ಮತಿನೀತಿನಿಜ ಸುಖಪ್ರದಮಾರ್ಗಬೋಧಕ ಮಾತಾಡಿದಿ16ಭೂತ ಸಹೃತ್ತಮ ಸದಾ ಸಂತುಷ್ಟ ಮನಸ್ಸುಳ್ಳಸಾಧು ಆ ಬ್ರಾಹ್ಮಣನು ನಿನಗೆ ಸನ್ನಮಿಸಿಬಂದ ವಿಷಯವ ಪೇಳಿ ಪತ್ರವ ಸಮರ್ಪಿಸಿದವಂದೇ ಆ ಅಕುಟಿಲಗೆ ಭೈಷ್ಮೀ ಕೃಷ್ಣರಿಗೆ 17ಪತ್ರಸಾರಭುವನಸುಂದರ ನಿನ್ನ ಕಲ್ಯಾಣ ಗುಣಗಳಶ್ರವಣ ಮನನವಪರಮಆದರದಿ ಮಾಳ್ಪಜೀವರುಗಳ ಕಾಯಜಾದಿ ತಾಪಂಗಳುದ್ರಾವಿತವು ಆಗುವೆವು ಎಂದು ಕೇಳಿಹೆನು 18ಗುಣಕ್ರಿಯಾರೂಪಸುಶ್ರವಣ ಮನನವ ಮಾಡಿಧ್ಯಾನಿಪರಿಗೆ ನಿನ್ನರೂಪದರ್ಶನವುನಿನ್ನ ಅರಿತ ಭಕ್ತರಿಗೆ ಅವತಾರಾದಿ ದರ್ಶನವುಕಾಣುವವರಿಗೆ ಅಖಿಲಾರ್ಥ ಲಭಿಸುವವು 19ಇವು ಇಂತಹ ನಿನ್ನ ಉನ್ನತ ಮಹಿಮೆಗಳಶ್ರವಣ ಮಾಡಿ ಅಂತರಂಗದಿ ತನ್ನ ಮನಸ್ಧಾವಿಸುತ್ತೇ ನಿನ್ನಲ್ಲೇಅಚ್ಯುತಮುಕುಂದದೇವಿ ರುಕ್ಮಿಣಿ ಹೀಗೆ ಬರೆದಿಹಳು ವಿಭುವೇ 20ಸುಖರೂಪ ಲಕ್ಷ್ಮೀಶವಿಧಿಪಿತಜಗಜನ್ಮಾದಿಕರ್ತಶುಕ್ರ ನಿಷ್ಕಲಅಪ್ರಾಕೃತಅವ್ಯಕ್ತಅಖಂಡೈಕ ಸಾರಾತ್ಮ ಅನಂತೋರು ಸೌಂದರ್ಯನಿಗಮಗ್ಯ ಗಾಯತ್ರಿ ಅಮಾತ್ರ ತ್ರಿಮಾತ್ರ 21ಬೃಹತೀಸಹಸ್ರ ಸ್ವರವ್ಯಂಜನಾಕ್ಷರ ವಾಚ್ಯಅಹರ್ನೇತ್ರು ಭೂಮನ್ನಿತ್ಯನೀ ಸ್ವತಂತ್ರಮಹೈಶ್ವರ್ಯ ಪೂರ್ಣೇಂದ್ರ ಅಶೇಷ ಗುಣಾಧಾರಮಹಾಶಕ್ತಿ ದಿವಃಪರ ಪರಮೇಶ್ವರ - ಸ್ವ 22ನಿನ್ನ ಈ ಕುಲಶೀಲ ವಿದ್ಯಾದಿ ಗುಣರೂಪಅನುಪಮೈಶ್ವರ್ಯದಿ ನಿನಗೆ ನೀನೇತುಲ್ಯನಿನ್ನ ಗುಣಗಳು ಸರ್ವಾಕರ್ಷಕವಾಗಿರುವವುತನ್ನಾತ್ಮ ನಿವೇದನ ಮಾಡಿಯೇ ಎಂದಳು 23ಉನ್ನಾಮ ಉದ್ಧಾಮ ಅಚ್ಯುತನು ನೀನಿತ್ಯಆನಂದಚಿತ್ ತನು ಯದುಪತೇ ಕೃಷ್ಣನೀನೇವೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀ ಭೈಷ್ಮಿ ಸೂಚಿಸಿಹಳು24ರಾಜಪುತ್ರ ಎಂಬ ವಿಡಂಬನಾ ರೀತಿಯಲಿದುರ್ಜನರ ಭಯ ತನಗೆ ಇರುವಂತೆ ಬರೆದುಸೂಚಿಸಿದಳು ತನ್ನ ಅಂಬಿಕಾ ಗುಡಿಯಿಂದಅಚ್ಯುತನೇ ನೀ ಕರಕೊಂಡು ಹೋಗೆಂದು 25ರುಕ್ಮಿಣಿಯಲಿ ನಿನ್ನ ಪ್ರೇಮ ಪ್ರಕಟಿಸುತಬೇಗಸಾರಥಿದಾರುಕನ್ನ ನೀ ಕರೆದುಮೇಘಪುಷ್ಪ, ಶೈಭ್ಯ, ಬಲಾಹಕ ಸುಗ್ರೀವನಾಲ್ಕಶ್ವ ರಥದಲ್ಲಿ ದ್ವಿಜವರ ಸಹ ಕುಳಿತಿ 26ಖಗವೇಗದಿ ರಥದಿ ಏಕ ರಾತ್ರಿಯಲ್ಲೇಪೋಗಿ ಸೇರಿದಿ ಆ ಕುಂಡಿನಾಪುರವಸೊಗಸಾದ ಅಲಂಕಾರ ಪಚ್ಚೆ ತೋರಣಗಳುಪೂಗಿ ಮಾವು ಮೊದಲಾದ ಗೊಂಚಲುಗಳು 27ಎಲ್ಲಿ ನೋಡಿದರಲ್ಲಿ ಕಾಂಚನಾಭರಣದಿಪೊಳೆವ ಪೀತಾಂಬರ ಪಟ್ಟೆ ಉಟ್ಟಿದ್ದಲೋಲಾಯಿತಾಕ್ಷಿಯರು ವಿಪ್ರಜನ ಗುಂಪುಕೋಲಾಹಲವಾಗಿ ಕಂಡಿ ಕುಂಡಿನವ 28ಕಾರಣವು ತಿಳಿದಿದ್ದೆ ಭೀಷ್ಮಕರಾಜನುಪುತ್ರಸ್ನೇಹದಿ ಚೈದ್ಯಶಿಶುಪಾಲನಿಗೆಪುತ್ರಿಯ ಕೊಡಲಿಕ್ಕೆ ಕಾರ್ಯೋನ್ಮುಖನಾಗಿಪಿತೃ ದೇವಾರ್ಚನೆ ವಿಪ್ರಪೂಜೆಯಗೈದ 29ಚೇದಿಪತಿ ದಮಘೋಷ ಪುತ್ರ ಶಿಶುಪಾಲಗೆಮದುವೆಪೂರ್ವದ ಕಾರ್ಯ ತಾನೂ ಮಾಡಿಸಿದಮದುವೆ ಸಂಭ್ರಮಕ್ಕಾಗಿ ಸೈನ್ಯ ಸಹ ಬಂದರುವೈದರ್ಭ ಪೂಜಿಸಿದ ಉಪಚಾರದಿಂದ 30ಮಾಧವನೇ ನಿನ್ನಲ್ಲಿ ಭಯ ದ್ವೇಷ ಕಾರಣದಿಚೈದ್ಯ ಪಕ್ಷೀಯರು ಜರಾಸಂಧ ಸಾಲ್ವದಂತ ವಕ್ರಾದಿಗಳು ಸಹಸ್ರಾರು ಮಂದೀರುಬಂದುತುಂಬಿಎಚ್ಚರಿಕೆಯಲಿ ಇದ್ದರು31ಆ ಪರಿಸ್ಥಿತಿಯಲ್ಲಿ ಕುಂಡಿನಾಪುರಕೆ ನೀಒಬ್ಬನೇ ಪೋದದ್ದುಕೇಳಿಬಲರಾಮಕ್ಷಿಪ್ರದಿ ರಥಾದಿ ಯಾದವಸೈನ್ಯ ಸಹಿತತಾ ಬಂದ ಅಚ್ಯುತನೇ ನಿನ್ನ ಬದಿಗೆ 32ಸರೋರುಹಾಸನನಿಗೂ ಕೋಟಿಗುಣ ಉತ್ತಮಳುಸಿರಿದೇವಿ ರುಕ್ಮಿಣಿ ಭೀಷ್ಮ ಕನ್ಯಾಹರಿಯೇ ನಿನ್ನಾಗಮನ ಆಕಾಂಕ್ಷಿಯಾಗಿ ತಾನಿರೀಕ್ಷಿಸಿದಳು ನಿನ್ನ ಹಾಗೂ ಆ ದ್ವಿಜವರನ್ನ 33ಮೇದಿನಿಸ್ತ್ರೀಯರಿಗೆ ಎಡಗಣ್ಣು ತೊಡೆ ಭುಜಅದುರುವುದುಶುಭಸೂಚಕವೆಂದು ಪೇಳುವರುಸದಾನಿತ್ಯಸುಶುಭ ಮಂಗಳರೂಪಿ ದೇವಿಗೆಅದರಿದವು ಎಂಬುವುದು ಲೌಕಿಕ ದೃಷ್ಟಿ 34ಮುಖದಲ್ಲಿ ಸಂತೋಷ ಪ್ರಕಟಿಸುತ ವಿಪ್ರನುರುಕ್ಮಿಣಿ ಬಳಿ ಬಂದು ಸಮಸ್ತವೂ ಪೇಳೆಶ್ರೀ ಕೃಷ್ಣ ನಿನ್ನನ್ನು ಸಂಸ್ಮರಿಸುತ ಭೈಷ್ಮಿಲೋಕ ರೀತಿಯಲಿ ಆದ್ವಿಜಶ್ರೇಷ್ಠನ್ನ ಪೂಜಿಸಿದಳು35ಕೃಷ್ಣ ಬಲರಾಮರಿಗೆ ಬಿಡಾರವ ಕೊಟ್ಟುಭೀಷ್ಮಕನು ಪೂಜಿಸಿದ ಪುರದ ಸಜ್ಜನರುಕೃಷ್ಣನಿಗೆ ರುಕ್ಮಿಣಿಯೇ ರುಕ್ಮಿಣಿಗೆ ಕೃಷ್ಣನೇಘೋಷಿಸಿದ ರೀತಿ ಸಂತೋಷದಿಂದ 36ಸಂಪ್ರದಾಯವನುಸರಿಸಿ ಭೀಷ್ಮಕನುತನ್ನ ಪುತ್ರಿಯ ಕಾಲುನಡೆಯಲ್ಲಿ ಕರೆಕೊಂಡುಅಂಬಿಕಾಪೂಜೆಯ ಮಾಡಲು ಪೋಗಲುಸಂಭ್ರಮವ ಬಂದಿದ್ದ ರಾಜರು ನೋಡಿದರು 37ಮುಕುಂದ ನಿನ್ನಯ ಪಾದಪಂಕಜವ ಧ್ಯಾನಿಸುತರುಕ್ಮಿಣಿ ಅಂಬಿಕಾಆಲಯವ ಸೇರಿಬಾಗಿನಾದಿಗಳ ಕೊಟ್ಟು ನಿನ್ನ ಸಂಸ್ಮರಿಸುತ್ತರಾಕೇಂದುಮುಖಿ ನಿನ್ನಾಕಾಂಕ್ಷೆಯಿಂ ತಿರುಗಿದಳು38ರಥಗಜತುರಗಪದಾದಿಸೈನ್ಯಗಳುಪ್ರತಿರಹಿತರು ತಾವೆಂಬ ಡಾಂಭಿಕರಾಜರುಅತಿಗೂಢಚಾರ ರಾಜಭೃತ್ಯರು ಅಲ್ಲಲ್ಲಿಇತ್ತ ಅತ್ತ ಎಲ್ಲೂ ಪುರಜನ ಗುಂಪು 39ಮಂದಗಜಗಮನೆಯು ಸ್ವಚ್ಛ ಹಂಸದವೋಲುಚಂದಪಾದವ ಮೆಲ್ಲ ಮೆಲ್ಲನೆ ಇಡುತಸ್ವಯಂವರದಿ ಸಯಂದನದಿ ನೀ ಇರೆ ವಾರೆನೋಟ ನೋಡಿಬಂದಳು ಉದಯಾರ್ಕ ಪದುಮಮುಖ ಮುದದಿ 40ಮಂದಜಭವಾಂಡದಲ್ಲಿ ಎಲ್ಲೆಲ್ಲೂ ಇಲ್ಲದರೂಪಸೌಂದರ್ಯವತಿಯ ಮೋಹದಲ್ಲಿ ನೋಡಿಮಂಧಧೀ ರಾಜರು ಕಾಯದಿ ಮೈಮರೆಯೇಮಂದಜಕರದಿಂದ ನೀ ಎತ್ತಿಕೊಂಡಿ ಭೈಷ್ಮಿಯ41ಗರುಡಧ್ವಜದಿಂದ ಶೋಭಿಸುವ ರಥದಲ್ಲಿಸಿರಿರುಕ್ಮಿಣಿ ಸಹ ಕುಳಿತು ನೀನುಹೊರಟಿ ಸಸೈನ್ಯ ಬಲರಾಮ ಸಹ ಅದುರುಳರ ಕಣ್ಣು ಮುಂದೆಯೇ ಶ್ರೀಧರಾಚ್ಯುತನೇ 42ಹಾಹಾಕಾರದಲಿ ಕೂಗಿ ಆರ್ಭಟಮಾಡಿಮಹಾಸೈನ್ಯ ಸಹ ಜರಾಸಂಧಾದಿ ರಾಜರುಬಹುವಿಧ ಧನುರ್‍ಸ್ತ್ರಯುತ ಹಿಂಬಾಲಿಸಿಕುಹಕರು ಅತಿಘೋರ ಯುದ್ದ ಮಾಡಿದರು 43ಲೀಲೆಯಿಂದಲಿ ನೀನು ಬಲರಾಮ ಯಾದವರುಖಳಜರಾಸಂಧಾದಿಗಳ ಸೈನ್ಯದವರತಲೆ ಕಾಲು ಕತ್ತರಿಸಿ ಛಿನ್ನ ಭಿನ್ನ ಮಾಡೇಪೇಳದೆ ಓಡಿದನು ಜರಾಸುತನು ಸೋತ 44ಧಾಮಘೋಷನಲಿ ಪೋಗಿ ಅವನ್ನ ಆಶ್ವಾಸಿಸಿತಾಮರಳಿ ಪೋದನು ತನ್ನ ಪಟ್ಟಣಕ್ಕೆತಮ್ಮ ತಮ್ಮ ಪುರಿಗಳಿಗೆ ಇತರ ರಾಜರೂ ಪೋಗೇವರ್ಮದಿ ಯುದ್ಧವ ಮುಂದುವರೆಸಿದ ರುಗ್ಮಿ 45ಶಪಥ ಮಾತುಗಳಾಡಿ ಯುದ್ಧ ಮಾಡಿದ ರುಗ್ಮಿಚಾಪಶರಸಾರಥಿಅಶ್ವಗಳ ಕಳಕೊಂಡುಕೋಪೋಚ್ಛದಿ ಖಡ್ಗದಿ ಎತ್ತಿಕೊಂಡು ಬರಲುಶ್ರೀಪ ನೀ ಆ ಖಳನ್ನ ಕಟ್ಟಿಹಾಕಿದೆಯೋ 46ಜಲಜಾಕ್ಷಿ ಭೈಷ್ಮೀ ಪ್ರಾರ್ಥಿಸಲು ನೀ ರುಗ್ಮಿಯಕೊಲ್ಲದೇ ವಿರೂಪ ಮಾತ್ರವ ಮಾಡೇ ಆಗಬಲರಾಮ ವಾದಿಸಿ ಬಿಡುಗಡೆ ಆಗಿ ಆಖಳಓಡಿ ಪೋದನು ಭೋಜಘಟಕ್ಕೆ47ಜಯ ಕೃಷ್ಣ ಶ್ರೀರುಕ್ಮಿಣಿ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರುವಿಪ್ರಮುತ್ತೈದೆಯರುಜಯ ಜಯ ಎನ್ನುತ್ತ ಆನಂದದಿ ಮುಳುಗಿದರು 48ಯದುಪುರಿಯಲ್ಲಿ ಮನೆಮನೆಯಲ್ಲಿ ಮಹೋತ್ಸವವುಮುದದಿ ಅಲಂಕೃತರಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ಜಲ ದೀಪಾವಳಿ ಪೂರ್ಣ ಕುಂಭಗಳುಚೆಂದ ಗೊಂಚಲು ಪುಷ್ಪ ರತ್ನ ತೋರಣಗಳು 49ಸಂಜಯ ಕುರುಕೇಕಯಾದಿ ರಾಜರುಗಳುರಾಜಕನ್ಯೇಯರ ಗಜಗಳ ಒಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆಯ ಪೊಗಳಿದರು ನರನಾರಿಯರೆಲ್ಲಾ 50ಚತುರ್ಮುಖ ಸುವೀರೆ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದ ಸುರರ ಮುನೀಂದ್ರರ ವೇದಮಂತ್ರಗಳಮದುವೆ ಮಹೋತ್ಸವದ ವೈಭವಏನೆಂಬೆ ಜಯ ಜಯ ಜಯತು 51ಪೂರ್ಣ ಜ್ಞÕನಾತ್ಮನೇ ಪೂರ್ಣ ಐಶ್ವರ್ಯಾತ್ಮಪೂರ್ಣ ಪ್ರಭಾನಂದ ತೇಜಸ್ ಶಕ್ತ್ಯಾತ್ಮಆ ನಮಿಪೆ ಅಚ್ಯುತಾನಂದ ಗೋವಿಂದ ವಿಭೋಕೃಷ್ಣ ರುಕ್ಮಿಣೀನಾಥ ಜಗದೇಕವಂದ್ಯ 52ಆದರದಿ ಸುರವೃಂದ ರಾಜರೂ ವಿಪ್ರರೂಯಾದವರುಗಳು ಶ್ರೀ ಕೃಷ್ಣ ರುಕ್ಮಿಣೀನಿತ್ಯಸತಿಪತಿ ಮದುವೆ ನೋಡಿ ಮಹಾನಂದಹೊಂದಿದರು ಸೌಭಾಗ್ಯಪ್ರದ ಇದು ಪಠಿಸೆ 53ಯೋಗೇಶ್ವರ ದೇವ ದೇವ ಶ್ರೀಯಃಪತಿಅನಘಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀ ರಮಾರುಕ್ಮಿಣೀಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 54ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 55-ಇತಿ ಶ್ರೀ ರುಕ್ಮಿಣೀಶ ಕಲ್ಯಾಣ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟುಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆಪಡೆದಾಳೋ | ಮಗಾನೆಂದೂ ಪಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |ಮಿಗೆ ಹರೂಪದಾಲಿ ಲೊಲಾಡುವಾಳೂ |ಜಗಾದೂರಂಗಾಗಿ | ಮೊಗ ಬಂದು ರಕ್ಷಕ |ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ 1ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯಹೇಗೆ ಪಡದಾಳೊ 2ಸಾಗಾರಾ ಸುತಿಯಾರು |ಭೋಗಿ ಯನಾನಾ |ಯೋಗಾನಿದ್ರೆಯೊಳದ್ಯ ದೇವನಾ |ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ 3ಕಾಲಲಂದ್ಹುಗೆಕಿಂಕಿಣಿ ಹೊಂನ್ನು ಕಿರೂಗೆಜ್ಜೆ |ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯಹೇಗೆ ಪಾಡಾದಾಳೊ 4ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |ಭಾಮೆರೂಕಮಿಣಿ ಬಿಗಿದಪ್ಪುವಾ |ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವಪುಣ್ಯ ಹೇಗೆ ಪಾಡದಾಳೊ 5ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿರಾಯರಾಯರೂಗಾಗೆಲಿದಂತ | ರಾಯಾ ರಾಯಾಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯಹೇಗೆ ಪಡದಾಳೋ 6
--------------
ಪುರಂದರದಾಸರು
ಬಾರಯ್ಯ ಶ್ರೀ ಶ್ರೀನಿವಾಸ ಭಕ್ತವತ್ಸಲ ಸ್ವಾಮಿಬಾಗಿ ನಮಿಸುವೆನು ಭಾಗವತರ ಪ್ರಿಯ ಪಬಾರೋ ಭಕುತರ ಭವವಿಮೋಚನಬಾರೊ ದ್ರೌಪದಿಮಾನಸಂರಕ್ಷಣಬಾರೊ ಧ್ರುವ ಪ್ರಹ್ಲಾದ ಪಾಲಕಬಾರೋ ಗಜರಾಜೇಂದ್ರ ವರದ ಅ.ಪಕಾಲಲಂದುಗೆ ಗೆಜ್ಜೆ ಘಲುಘಲುರೆನುತಲಿಕಾಲಪಾಡಗರುಳಿ ಕಾಲಪೈಜನಿಸರಕಾಲಲ್ಲಿ ಅಸುರರ ಧೂಳಿ ಮಾಡಿದ ದಿವ್ಯಕಾಲಿಗೆರಗುವೆನು ಕಾಯೊ ಶ್ರೀಹರಿಶೌರೆಕಾಲಿನಲಿಶಿಲೆನಾರಿಯಾದಳುಕಾಳಿಮದ ನಿರ್ಮೂಲವಾಯಿತುಕಾಲಿನಲಿ ಗಂಗೆಯು ಜನಿಸಿದಳುಕಾಲು ಪಾರ್ಥನೆÀ ರಥದಿ ಮೆರೆಸಿದೆ 1ಎಡಬಲದಿ ನಿನ್ನ ಮಡದೇರಿಂದೊಪ್ಪುತತಡಮಾಡದಲೆ ಬಾರೊ ಮೃಡಸಖನೆಉಡುಪ ಮುಖನೆ ನಿನ್ನ ಅಡಿಗೆರಗುವರಯ್ಯತಡಮಾಡದಲೆ ತಾಳಮೇಳ ವಾದ್ಯಗಳಿಂದಬಿಡದೆಶ್ವೇತಛತ್ರಚಾಮರಎಡಬಲದಿ ನಿನ್ನ ಸ್ತುತಿಪ ಭಕ್ತರಕಡುಸ್ವರದ ವಾದ್ಯ ವೇದ ಘೋಷಣೆಬಿಡದೆ ಮಾಳ್ಪರೊ ಕಡಲೊಡೆಯನೆ 2ಕಮಲಸಂಭವನಯ್ಯ ಕಮಲಜಾತೆಯ ಪ್ರಿಯಕಮಲಪೊಕ್ಕಳಲಿ ಪಡೆದಾತನೆಕಮಲದಳಾಕ್ಷನೆಕಮನೀಯರೂಪನೇಕಮಲಾಕ್ಷಿಯೊಡಗೂಡಿ ಕರುಣದಿ ಬಾರಯ್ಯಕಮಲಮಲ್ಲಿಗೆ ಮಳೆಯ ಕರೆವರುಕಮಲಗಂಧಿಯರೆಲ್ಲ ಹರುಷದಿಕಮಲನಾಭವಿಠ್ಠಲನೆ ಪೊಳೆವ ಹೃ-ತ್ಕಮಲದೊಳು ಮಿಗೆ ಶೋಭಿಸುವಹರಿ3
--------------
ನಿಡಗುರುಕಿ ಜೀವೂಬಾಯಿ