ಒಟ್ಟು 283 ಕಡೆಗಳಲ್ಲಿ , 63 ದಾಸರು , 245 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೂರ್ಯಾಡುವ ಬನ್ನಿ ಹರಿಯ ನಾಮಾಮೃತವ ಪೂರ್ಣ ಧ್ರುವ ಸುರಿ ಸುರಿದು ಸಾರಾಯ ತರುತರುವಾಯ ಸೇವಿಸಿ ಥರಥರಲಿಡುವ ಬನ್ನಿ ಸುವಾಡವ ಕೊಂಡು 1 ಸಾರ್ಥಕ ಮಾಡುವದಿದೆ ಗುರ್ತಕ ಬಂದಿಹ ಜನಮ ತಾ ಕರ್ತು ಸದ್ಗುರು ಮಹಿಮೆ ಪ್ರಾರ್ಥಿಸಿ ಪರಿಪೂರ್ಣ 2 ಸವಿಸವಿ ಮಾಡಿಕೊಂಡು ಸೇವಿಸಿ ಮಹಿಪತಿ ನೋಡಿ ಪಾದ ನಿಜಗೂಡಿ ಭವಪಾಶೀಡ್ಯಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೇವಿಸುವೆ ನಿನ್ನನು ಶ್ರೀಪಾದರಾಯ ಪ ಭಾವವಿರತಿ ಕೊಡು ಭಾಗವತಗೇಯಾ ಅ.ಪ ದಾಸಕೂಟವೆಂಬುದ ಧರೆಯೊಳು ನಿಲಿಸಿದೆ 1 ಸುವರ್ಣವರ್ಣತೀರ್ಥಸುತ ಸುಜನಾಪ್ತ ಶ್ರೀವರ ನಾಮಾಮೃತದಾತ ಸುಮಿತ್ರ 2 ಪತಿ ಗುರುರಾಮವಿಠಲಗೆ ಪ್ರಿಯದಾಸ 3
--------------
ಗುರುರಾಮವಿಠಲ
ಸೋಮಶೇಖರ ತಾನೆ ಬಲ್ಲ ಶ್ರೀ-ರಾಮನಾಮಾಮೃತ ಸವಿಯನೆಲ್ಲ ಪ ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ 1 ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ2 ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ 3 ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ4 ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ 5 ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ6 ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ7
--------------
ವ್ಯಾಸರಾಯರು
ಸ್ವಾಗತವು ಸ್ವಾಗತವು ಯೋಗಿವರ್ಯರಿಗೆ ||ವಿಶ್ವೇಶ ತೀರ್ಥ ಶ್ರೀ ವಿದ್ಯ ಮಾನ್ಯರಿಗೇ ಪ ಪ್ರೊದಟೂರು ಜನನಿಮ್ಮ | ಮೋದಮಯ ಆಗಮಕೆಆದರದಿ ಕಾದಿಹರು | ವೇದ ಘೋಷಿಸುತ |ಹೇದಯಾ ಪರಿಪೂರ್ಣ | ಸಾದುಗಳೆ ನಮಿಸುವೆವುಮೋದ ಪ್ರಮೋದ ಗುಣ | ಬೋಧಿಪುದು ನಮಗೇ 1 ಸಿರಿ ಮೂರ್ತಿ | ಗುರುರಾಘವೇಂದ್ರಾ |ವರಸು ಬೃಂದಾವನವ | ಸ್ಥಿರ ಪಡಿಸಿ ನಿಮ್ಮಾಮೃತಕರದಿಂದಲಿಂದೀಗ | ವರ ಮಹೂರ್ತದಲೀ 2 ವತ್ಸರವು ಆನಂದ | ವೈಶಾಖ ಸ್ಥಿತ ದಶಮಿವಾತ್ಸಲ್ಯ ಯತಿಗಳು | ಸುಸ್ಥಿರವು ಆಗೀ |ವತ್ಸಾರಿ ಹರಿಭೃತ್ಯ | ವತ್ಸಲತಯಿಂನಿಂದುಸುಸ್ಥಿರವು ಆಗಿಹುದು | ಭೃತ್ಯರಿಗೆ ವರದಾ 3 ಪತಿ ಮಹಿಮೆ | ಈಂಟಿ ಮುದ ಹೊಂದೇ 4 ಪಾದ | ಪಾಂಸುಗಳ ಧರಿಸೀಕೇವಲಾನಂದಮಯ | ಭಾವದೊಳು ಇಹೆವುಗುರುಗೋವಿಂದ ವಿಠಲ ಪವ ತಾವರ್ಯಾ ಶ್ರೀತರೇ 5
--------------
ಗುರುಗೋವಿಂದವಿಠಲರು
ಹನುಮಂತ ದೇವರು (ದಂಡಕ) ಅಂಜನಿಯ ಉದರದಿಂ ಪುಟ್ಟುತಾರ್ಭಟಿಸುತಲಿ ಕಂಜಮಿತ್ರಂಗೆ ಹಾರ್ದೆ ಧೀರಾ ವಾಯುಕುಮಾರಾ ರಣರಂಗಧೀರಾ ಕದನಕಂಠೀರಾ ದಿನಮಣಿಯ ಪಿಡಿದು ನುಂಗುವೆನೆಂಬೊ ಸಮಯದೋಳ್ ಬರಲು ದೇವತೆ ನಿಕರಗಳೆಲ್ಲಾ ಬೆದರಿಸಿದಿ ಎಲ್ಲಾ ಭಾಪು ಭಲ ಭಲ್ಲ ಭಾರತಿಯ ನಲ್ಲ ಸೂರ್ಯಸುತನಂ ಕಂಡು ಪಂಪಾಸರೋವರದಿ ಭಾಸ್ಕರಾನ್ವಯಗೆರಗಿ- ದೆಂದು ಜಯ ಜಗದ್ಬಂಧು ಕಾರುಣ್ಯಸಿಂಧು ಸೀತಾಪತಿಯ ಕರುಣದಿಂದ ಗಗನಕ್ಕೆ ಖ್ಯಾತಿಯಿಂದಲಿ ಬ್ಯಾಗ ಬೆಳದಿ ವೃಷಿಗಳನಳದಿ ದೈತ್ಯರ ತುಳದಿ ರಾಮಮುದ್ರಿಯ ಕೊಂಡು ಅಜನಸುತ ಸಹಿತಾಗಿ ನೇಮದಿಂ ಶರಧಿಯಂ ನೋಡಿ ದುರಿತಗಳ ದೂಡಿ ಪಾಡಿ ಕೊಂಡಾಡಿ ಕೋಟಿ ಸಿಡಿಲಬ್ಬರಣೆಯಿಂದ ಜಲಧಿಯ ಜಿಗಿದು ದಾಟಿದಿ ಲಂಕಾಪುರ- ವನ್ನು ಪೇಳಲಿನ್ನೇನು ಭುಜಬಲವನ್ನು ತೃಣಬಿಂದು ಋಷಿಯ ಕಾಣುತಲಲ್ಲಿ ಕುಣಿದಾಡಿ ಪರಿಪರಿಯ ಚೇಷ್ಟೆ- ಗಳಿಂದ ಮಾಡಿದೈ ಛಂದ ಅಂಜನೆಯ ಕಂದ ಪುನಹ ಲಂಕೆಗೆ ಹಾರಿ ಲಂಕಿಣಿಯ ಸಂಹರಿಸಿ ಭೂಜಾತೆಯನು ಅರಸು- ತಲ್ಲಿ ಅತಿರೋಷದಲ್ಲಿ ತಿರುತಿರುಗುತಲ್ಲಿ ರಾಮನಾಮಾಮೃತವ ಜಿಹ್ವಾಗ್ರದೋಳ್ ಸುರಿವ ಭೂವಿಜಯ ಚರಣಮಂ ಕಂಡು.... ಮಾಡಿದೈ ಗಂಡು ರಘುವರನ ಮುದ್ರೆಯನಿತ್ತು ನಿಜಮಾತೆಗೆ ಹರುಷಬಡಿಸಿದಿ ಹನೂ- ಮಂತಾ ಗುರುಮುನಿಯ ಶಾಂತಾ ದಿವಸಾಧಿಪತಿಕೋಟಿತೇಜದಿಂ ಮೆರೆವಂಥಾ ಜಯ ಹನುಮ ಭೀಮ ಬಲವಂತಾ ಬಾಲದಿಂ ಬೆಂಕಿಯಂ ಹಚ್ಚಿ ಲಂಕಾಪುರವ ಲೀಲೆಯಿಂದಲಿ ದಹನಮಾಡಿ ಸುತ್ತ ಓಡ್ಯಾಡಿ ದೈತ್ಯರಂ ಕಾಡಿ ಸುರನಿಕರವಂದು ಆಕಾಶಮಾರ್ಗದಿ ಎಲ್ಲ ದೇವದುಂದುಭಿನಾದ ಗೈದು ..................................ಮಹಿಮೆ ಹೌಧೌದು ತ್ರಿಭುವನದೊಳಗಧಿಕನೈ ಕದರುಂಡಲಗಿರಾಯಾ ಅಭಯಮಂ ಕೊಡು ಎನ್ನ ಧೊರೆಯೆ ನಾ ನಿನ್ನ ಮರೆಯೆ ಅಗಡಿಪುರದಲಿ ನಿನ್ನ ಕೃಪೆಯಿಂದ ಪೇಳ್ದೆನೈ ಸೊಗಸಿನಿಂದ ಇಡು ಮಹಾರಾಯ ಅವನಾಯುಗೇಯಾ ಹನುಮಂತರಾಯಾ ಶ್ರೀಹನುಮಂತಗೌಡರ್À ಬಹಾದ್ದೂರರನ್ನು ಸರ್ಪಸುತಪುರದಲ್ಲಿ ಕಾಯ್ವ ಇಷ್ಟಾರ್ಥವೀವ ಭಕುತ ಸಂಜೀವ ಶ್ರೀ ಹನುಮಂತ ದಂಡಕವ ಕೇಳ್ದರ್ಗೆ ಇಹಪರದಿ ಶ್ರೀಹರಿಯೆ ಬಂದು ಅವರಲ್ಲಿ ನಿಂದು ಕಾರುಣ್ಯಸಿಂಧು ಪರಾಕು ಪರಾಕು
--------------
ಕದರುಂಡಲಗಿ ಹನುಮಯ್ಯ
ಹರಿ ಎನ್ನು ಹರಿ ಎನ್ನು ಹರಿ ಎನ್ನು ಮನವೆ ಪ. ನಿರುತದಿ ಪೊರೆವನ ಮರೆವರೆ ಮನವೆ ಅ.ಪ. ಸರಿಯುವುದು ಆಯುಷ್ಯ ಸಂಪತ್ತು ನೋಡು ಬರುತಿದೆ ಮೃತ್ಯುವು ಕರೆಯಲು ನೋಡು ಹರಿನಾಮ ಯಮದಂಡ ಕಡಿವುದು ನೋಡು ಪರಮಪುರುಷನ ನೀ ಬಿಡದೆ ಕೊಂಡಾಡು 1 ಹರಿಯ ನಾಮಾಮೃತ ಸುಜನಕೆ ನೀಡು ಹರಿಯ ಜ್ಞಾನಾನಂದಾಂಬುಧಿಯೊಳೊಲ್ಯಾಡು ಹರಿಯ ಮೂರುತಿಯನ್ನು ಮನದಲ್ಲಿ ನೋಡು ಹರಿಭಕ್ತಿ ಮದವೇರಿ ಕುಣಿ ಕುಣಿದಾಡು 2 ಹರಿಗುರು ಸ್ಮರಣೆಯ ನಿರುತದಿ ಮಾಡು ಹರಿಭಕ್ತಿ ಲಾಂಛನ ಮೈಯಲ್ಲಿ ಮೂಡು ಹರಿದಾಸ ಸಂಪತ್ತಿನೊಳಗೆ ಓಲಾಡು ಹರಿಯ ಮನದಿ ಕಂಡು ನಲಿನಲಿದಾಡು 3 ಕಾಮಕ್ರೋಧಗಳನ್ನು ಖಂಡಿಸೀಡ್ಯಾಡು ನೇಮ ಶ್ರೀ ಗುರು ಆಜ್ಞೆಯಂದದಿ ಮಾಡು ಯಾಮ ಯಾಮಕೆ ಹರಿನಾಮವ ಪಾಡು ಶ್ರೀಮದಾನಂದತೀರ್ಥರ ಮತ ನೋಡು 4 ಶ್ರೀ ಪರಮಾತ್ಮನ ಗುಣವ ಕೊಂಡಾಡು ಶ್ರೀಪತಿ ಭಕ್ತರ ಸಂಗದಿ ಕೂಡು ಭವ ಹರ ಸ್ತುತಿ ಮಾಡು ಗೋಪಾಲಕೃಷ್ಣವಿಠ್ಠಲನ ದಯ ಬೇಡು 5
--------------
ಅಂಬಾಬಾಯಿ
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿನಾಮಾಮೃತವನು ಸುರಿದು ಪರಿಪಕ್ವರಾಗಿ ಜರೆಮರಣೆಂದೆಂಬ ಉರುಲನು ಗೆಲ್ಲಿರೊ ಪ ತರಳತನದಿ ಸುರಿದು ಪರಮ ಪ್ರಹ್ಲಾದನು ಪರಮಕಂಟಕ ಗೆಲಿದು ವರಮೋಕ್ಷಕೈದಿದ ನಿರುತದಿಂ ವಿಭೀಷಣ ಸುರಿದು ಈ ಅಮೃತ ಸ್ಥಿರಪಟ್ಟವೇರಿದ್ದು ಅರಿವಿಟ್ಟು ನೋಡಿ 1 ಅಮೃತ ಕರಿ ತನ್ನ ಭಾವದಿ ಪರಮಾಪತ್ತು ಗೆಲಿದದ್ದರಿದು ಸ್ಮøತಿಯಿಂದ ಅಮೃತ ನರನು ಧರೆಯನೆಲ್ಲ ತಿರುಗುತ ಪರತರಧುರವ ಜೈಸಿದರಿದು 2 ಸೇವಿಸಿಅಮೃತ ಪಾವನೆನಿಸಿ ಯುವತಿ ಕೇವಲಮಾನದಿಂ ಬುವಿಯೊಳ್ಬಾಳಿದಳು ದೇವ ಶ್ರೀರಾಮನ ಪಾವನ ನಾಮಾಮೃತ ಭಾವದೊಳ್ಸವಿಯುತ ಕೇವಲರೆನಿಸಿರೊ 3
--------------
ರಾಮದಾಸರು
ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ. ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ. ಅಂಗಜ ಜನಕ ಶ್ರೀರಂಗನಾಯಕ ನಿಮ್ಮ ಸಂಗತಾಪದಿಂ ತಪಿಸುತಲಿ 1 ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ ಮೋಸವೋದೆನೋ ಮರುಳನಂದದಿ 2 [ಬಂದ] ಅರಿಯದ ಈ ಪಸುಳೆಯನು ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ3
--------------
ನಂಜನಗೂಡು ತಿರುಮಲಾಂಬಾ
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
(ಮೂಲ್ಕಿಯ ನರಸಿಂಹ ದೇವರು)ರಕ್ಷಿಸು ಮನದಾಪೇಕ್ಷೆಯ ಸಲಿಸುತಲಕ್ಷ್ಮೀನರಹರಿ ರಾಕ್ಷಸವೈರಿ ಪ.ಅಕ್ಷಮ ದುಶ್ಯೀಲ ದುವ್ರ್ಯಾಪಾರದಿಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.ಉಭಯ ಶುಚಿತ್ವವು ಊರ್ಜಿತವೆನೆ ಜಗ-ದ್ವಿಭುವಿಶ್ವಂಭರವಿಬುಧಾರಾದ್ಯಶುಭಮತಿ ಸಂಸ್ಥಿತಿಯಭಯವ ಪಾಲಿಸೊತ್ರಿಭುವನಮೋಹನ ಪ್ರಭು ನೀನನುದಿನ 1ತಂದೆಯ ಮುನಿಸಿನ ಕಂದನ ಸಲಹುತಸಿಂಧುಶಯನ ನಿತ್ಯಾನಂದ ಗುಣಾಬ್ಧೇಹಿಂದಣ ಪಾಪವು ಮುಂದೆಸಗದ ರೀತಿಮಂದರಾದ್ರಿಧರ ಮಾಮವ ದಯಾಕರ 2ಪಾಪಾತ್ಮರಲಿ ಭೂಪಾಲಕನು ನಾಶ್ರೀಪತಿ ಕರುಣದಿ ಕಾಪಾಡುವುದುಗೋಪೀರಂಜನ ಗೋದ್ವಿಜರಕ್ಷಣಕಾಪುರುಷರ ಭಯ ನೀ ಪರಿಹರಿಸಯ್ಯ 3ಸರ್ವೇಂದ್ರಿಯ ಬಲತುಷ್ಟಿಪುಷ್ಟಿಯಿತ್ತುಸರ್ವಾಂತರ್ಯದೊಳಿರುವನೆ ಸಲಹೊದುರ್ವಾರಾಮಿತ ದುರ್ವಿಷಯದಿ ಬೇ-ಸರ್ವೇನು ಪನ್ನಗಪರ್ವತವಾಸನೇ 4ಶರಣಾಗತನಾಗಿ ಸೆರಗೊಡ್ಡಿ ಬೇಡುವೆವರಮೂಲಿಕಪುರ ದೊರೆಯೇಹರಿಲಕ್ಷ್ಮೀನಾರಾಯಣತ್ರಿಜಗದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
126-1ದ್ವಿತೀಯಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡುವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1ತಿರುಪತಿಯಲಿ ಹನುಮದಾದಿ ಲಕ್ಷ್ಮಣಸೇವ್ಯಶ್ರೀರಾಮಸೀತಾ ಸಮೇತನಿಗೆ ನಮಿಪೆಉರುಗೇಶಶಯ್ಯ ಶ್ರೀ ಗೋವಿಂದರಾಜನಿಗುಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2ಒಂದು ಗಾವುದ ದೂರದೊಳಗೇವೆ ಇರುತಿಹುದುಪದ್ಮ ಸರೋವರವು ತತ್ತೀರದಲ್ಲಿವೇದವಿಗ್ರಹ ಘೃಣಿ ಆದಿತ್ಯ ಸೂರ್ಯನುನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3ಸಮೀಪದಲಿ ದೊಡ್ಡ ಆಲಯವಿಹುದಲ್ಲಿಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣರಾಮನ ಸಹಕುಳಿತು ವಂದಿಸುವ ಸಜ್ಜನರಕ್ಷೇಮಲಾಭವ ಸದಾ ಪಾಲಿಸುತಿಹನು 4ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜಲಕ್ಷ್ಮೀಸಮೇತನು ಕಾರುಣ್ಯಶರಧಿಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿವಿಷ್ಣು ಭಕ್ತರ ಸದಾಕಾಯುತಿಹನು 5ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿವನಜಆಸನದಲ್ಲಿ ಶ್ರೀ ಪದ್ಮಾವತಿಯುದೀನ ಕರುಣಾಕರಿಯುವರಅಭಯನೀಡುತ್ತಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿಪಾದ್ಯಳು ಪದ್ಮಾವತಿ ಕಮಲವಾಸಿನಿಯುಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7ವೇಂಕಟಾಚಲದ ಅಡಿವಾರದಲಿ ಇರುತಿದೆಅಕಳಂಕ ಸುಪವಿತ್ರ ಕಪಿಲತೀರ್ಥಲಿಂಗ ಆಕಾರದಲಿ ಕಪಿಲೇಶ್ವರ ಇಹನುಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿಗೋಪುರಾಲಯದಲ್ಲಿ ನೃಸಿಂಹನ ನಮಿಸಿಶ್ರೀಪವರಾಹವೇಂಕಟನ ಕಾಣಿಸುವಂತಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9ಸ್ವಾಮಿವೇಂಕಟನ ಆಲಯದ ಗೋಪುರಕಂಡುಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂನಮಿಸುವೆ ಅಶ್ವತ್ಥನಾರಾಯಣಗು 10ಕಪಿಲೇಶ್ವರಾನುಗ್ರಹದಿ ಹನುಮಂತನಅ ಪವನಜನ ದಯದಿ ಭೂಧರಾ ವರಾಹನಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆದೇವ ದೇವಶಿಖಾಮಣಿಕೃಪಾನಿಧಿ ಸುಹೃದನವರತ್ನ ಖಚಿತ ಆಭರಣ ಕಿರೀಟಿಯುಶಿವದವರಅಭಯಕರಕಟಿ ಚಕ್ರಿಶಂಖಿ12ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡುಪದುಮ ಸರೋವರಾಲಯಗಳ ಐದಿದರು 13ವೇಂಕಟಗಿರಿಯಿಂದ ಕರ್ನೂಲು ಗದ್ವಾಲಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿಭಕುತರಿಗೆ ದರ್ಶನ ಉಪದೇಶ ಕೊಟ್ಟರುಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸುಧೈರ್ಯವು ನಿರ್ಭಯತ್ವವು ಆರೋಗ್ಯವುದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 ಪ|| ಇತಿ ದ್ವಿತಿಯ ಕೀರ್ತನೆ ||
--------------
ಪ್ರಸನ್ನ ಶ್ರೀನಿವಾಸದಾಸರು
ಇನ್ನೂ ದಯ ಬಾರದೇ-ದಾಸನ ಮೇಲೆ-ಇನ್ನೂ ದಯ ಬಾರದೇ ಪಮುನ್ನ ಮಾಡಿದ ದುಷ್ಕರ್ಮಗಳೆಲ್ಲವಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪನಾನಾ ಜನ್ಮಗಳಲಿ ನಾನಾ ಜಾತಿಗಳಲಿನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||ನಾನು ನನ್ನದು ಎಂದು ನರಕದೊಳಗೆ ಬಿದ್ದುನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1ಕಾಮಾದಿ ಷಡುವರ್ಗ ಗಾಢಾಂಧಕಾರದಿಪಾಮರನಾಗಿ ಇದ್ದಂಥ ಪಾತಕನ ||ರಮಾಮನೋಹರಹರಿನೀನೇ ಗತಿಯೆಂದುನಾಮಾಮೃತವನು ಪಾನ ಮಾಡಿದ ಮೇಲೆ 2ಏನ ಓದಿದರೇನು ಏನ ಕೇಳಿದರೇನುಈ ನಾಮ ಸ್ಮರಣೆಗೆ ಸರಿಬಾರದು ||ಙ್ಞÕನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರಪುರಂದರವಿಠಲನೆ3
--------------
ಪುರಂದರದಾಸರು
ಎತ್ತೋದೆಯಮ್ಮ ನಂಗನ್ನೆತ್ತಿಕೊ ಅಮ್ಮ ಬಲುಹೊತ್ತು ಹತ್ತು ಬಂದೇನೆ ಇತ್ತೆಅಮ್ಮಿತಿಂದೇನೆಪ.ತುತಿಬಾಯಿ ವಂಗ್ಯಾವೆ ಬಿತಿ ಆವು ವಾಕಿಕ್ಕಿ ಬತ್ತಾವೆಅತಿ ಆವು ಉಪ್ಪುಕಾಯಿ ಅಮ್ಮ ಮಮ್ಮೊಲ್ಲೆಉತ್ತತ್ತಿ ಹನ್ನು ಬೆನ್ನೆ ತಿಂದೇನೆ 1ಕಲ್ಲ ಕಿತ್ನ ಎಂತಾಡೆ ಬಂಗಾಡ ಬುಲ್ಲಿ ಬೆಲ್ಲ ತಿಂತಾಡೆಗಲ್ಲ ಕತ್ತಿಉಮ್ಮುಕೊತ್ತು ಹಲ್ಲು ನತ್ತುತಾಡೆಕೊಲ್ಲಬಾಲದೆ ದೂತ್ತ ಗೊಲ್ಲತೇಲನ 2ಎಕ್ಕೋ ಬಾ ಎಂಬ್ಯಾಡೆ ಬಿಸಿ ನೀಲು ಬುಕಶ್ಶಿ ಮಾಬ್ಯಾಡೆಸಕ್ಕರಿ ಚಿನ್ನಿಪಾಲು ಬತ್ತಲ ತುಂಬ ಕೊಡುಬಕ್ಕು ಮರಿಗಳ ಕೂಡ ಉಂಡೇನೆ 3ನತ್ತೆತ್ರ ತಂದುಕೊಡೆ ಚಂದಮಾಮನಿತ್ತಿತ್ತ ಕಡತಾಡೆಪುತ್ತಮಿಲ್ಲಿ ತುಂಬ ವಲ್ಲೆ ಮುತ್ತು ಕೊತ್ತರೆ ಶನ್ನಬುತ್ತಿ ತುಂಬ ಹನ್ನು ತಂದು ತಿಂದೇನೆ 4ಲಾಲಿಮಾಡಿಸಬ್ಯಾಡೆ ಕಿತ್ತನ್ನ ಮ್ಯಾಲೆ ದೋಗುಲ ಪಾಡೆಬಾಲ ಬವು ಕಂಡ್ಯನಗಂಜಿಕಿ ಬತ್ತದೆದೂಲ ಎನ್ನ ಬಿತ್ತು ನೀ ವೋಗಬ್ಯಾಡೆ 5ಉಗ್ಗು ಕೂಸು ಬಾಯಂಗೆ ಬಚ್ಚನಿಗೆ ಮಗ್ಗಮ್ಮಿ ಕೂಯಂಗೆಕೊಗ್ಗ ಮೀಸಿ ಜೋಗಿಗೆ ಕೋಬ್ಯಾಡೆ ಬಾಗಿಲಹೊಗ್ಗೆ ಹೋಗದಿಲ್ಲ ಜತ್ತಿಗನಾಣೆ 6ಕೂಚಿಗಮ್ಮಿ ಕೋಬ್ಯಾಡೆ ನಂಗಂಗಚ್ಚತಾನೆ ಅಮ್ಮ ನೋಡೆಪೆಚನ್ನ ವೆಂಕತ ಕಿತ್ತಪ್ಪ ಕನ್ನಡೀಲಿನಚುನಗಿ ನಗುತಾನೆ ಕಡತಾಡೆ 7
--------------
ಪ್ರಸನ್ನವೆಂಕಟದಾಸರು