ಒಟ್ಟು 3932 ಕಡೆಗಳಲ್ಲಿ , 84 ದಾಸರು , 3314 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ ಪಾಲಿಸಯ್ಯಾ ಶ್ರೀ | ಪ್ರಾಣರಾಯ | ಪಾಲಿಸಯ್ಯಾ ||ಪಾಲಿಸಯ್ಯಾ ಶ್ರೀ ಲೋಲನ ಭೃತ್ಸನೆ |ವಾಲಯದಲಿ, ಮಹದುರಿತವ ತರಿದು ಪ ಶರಣು ಪೊಕ್ಕವರ ಸಲಹುವನೆಂದು |ವರವೇದಂಗಳು ಸಾರುತಲಿಹವೊ 1 ಶಿಶುವಿನ ತಪ್ಪೆಣಿಸದೆ ಆ ಜನನಿಯು |ಬಿಸುಟದೆ ತ್ಪರದಿಂ ಕರುಣ ಮಾಳ್ಪವೋಲ್ 2 ಶ್ರೀಶ ಪ್ರಾಣೇಶ ವಿಠಲನ ದಾಸಾಗ್ರಣಿ |ನೀ ಸದಾ ಕರುಣ್ಯುಪೇಕ್ಷ ಮಾಡದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಮುದ್ದು ಮೋಹನ್ನ | ವಿಠಲ ಪೊರೆ ಇವನಾ ಪ ನಾಮ ಸಂಸೃತಿ ಇವಗೆ | ಸತತ ನೀನಿತ್ತು ಅ.ಪ. ವೇಣುಲೋಲನ ಮಹಿಮೆ | ಗಾನಮಾಡಲು ಇವಗೆಜ್ಞಾನವಂಕುರಿಸಲ್ಕೆ | ಜ್ಞಾನಿಸಂಗವಕೊಡೊ |ಮಾನನಿಧಿ ಮಧ್ವಾಖ್ಯ | ಸನ್ಮತದಲುದಿಸಿಹನೊ ಮೌನಿಜನ ವೃಂದ ಸ | ನ್ಮಾನ ಮಾಳ್ವವನಾ 1 ಭವವನದಿ ನವಪೋತ | ಶ್ರವಣ ಸಾಧನವಿತ್ತುನವನವ ಸುವಿಶೇಷ | ಮಹಿಮಯುತ ಹರಿಯಾಪ್ರವರ ಗುಣರೂಪಗಳ | ಸ್ತವನ ಮಾಳ್ವಂತೆಸಗಿಪವನಾಂತರಾತ್ಮಕನೆ | ಪಾಲಿಸೊ ಇವನಾ 2 ಕಾಕು ಸಂಗವಕೊಡದೆಮಾಕಳತ್ರನದಾಸ | ಸಂಕುಲದಲಿರಿಸೋವ್ಯಾಕುಲಾರ್ಥಿಕ ಕಳೆಯೆ | ಬೇಕಾದ ವರಗಳನೆನೀ ಕೊಟ್ಟುಕಾಯೊ ಕೃ | ಪಾಕರನೆ ಹರಿಯೇ 3 ತೈಜಸನೆ ನೀನಾಗಿ | ಯೋಜಿಸಿದ ಅಂಕಿತವ ಮಾಜದಲೆ ಇತ್ತಿಹೆನೊ | ನೈಜ ಮಾರ್ಗದಲೀಮಾಜಗಜನ್ಮಾದಿ ನಿ | ವ್ಯಾಕಜ್ಯ ಕಾರುಣಿಕವಾಜಿವದನನೆ ಪೊರೆಯೊ | ವೃಜನಾರ್ಥನೆನಸೀ 4 ಸಂತ ಸಂಗವನಿತ್ತು | ಅಂತರಾತ್ಮಕ ನಿನ್ನಚಿಂತೆಯಲ್ಲಿರುಸುತಲಿ | ಭ್ರಾಂತಿಯಿರದೊಂದುಅಂತ ಗೈಯುವಮಾರ್ಗ | ಕಂತುಪಿತ ನೀನಿತ್ತುಕಾಂತ ಗುರು ಗೋವಿಂದ | ವಿಠಲಾ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಶ್ರೀ ಮುದ್ದುಮೋಹನದಾಸರು ಮುದದಿ ಪಾಲಿಸೊ | ಮುದ್ದು ಮೋಹನರಾಯಾ | ಮದ್ಗುರುವರ ಪ್ರೀಯಾ ಪ ಮಧ್ವೇಶನ ಪದ ಪದುಮ ಪೂಜಿಪ ಮಧುಪಾ ಪರಿಹರಿಸೆಲೊ ತಾಪಾ ಅ.ಪ. ಜನುಮ ಪೊತ್ತೆ ನೀ ದೊಡ್ಡ ಬಳ್ಳಾಪುರದೀ | ಅನುನಯದಲಿ ಓದೀ |ಗುಣವಂತೆಯು ಕನ್ಯೆಯ ತಾ ಸ್ವೀಕರಿಸೀ | ಕನ್ಯಾಸೆರೆ ಬಿಡಿಸೀ |ವನಜನಾಭನನು ಕಾಣಲು ಮನಮಾಡೀ | ಶ್ರೀ ವರರನು ಬೇಡೀ |ಗಾನ ಲೋಲ ಮುದ್ದು ಮೋಹನ ವಿಠ್ಠಲನಾ ಘನನಾಮ ಪೊತ್ತೆ ನಿನ್ನಾ 1 ಅಂಗಜಗಳು ಕದಲರ್ಧಾಂಗಿಯನಾಳೀ | ಯಾತ್ರೆಗೆ ಮನತಾಳೀ |ಗಂಗೆಯಾತ್ರೆ ಮೂರೊಂದು ಬಾರಿ ಮಾಡೀ | ಉಡುಪಿಗೆ ಬಲುಬಾರೀ | ತುಂಗ ಮಹಿಮ ನಮ್ಮ ವೆಂಕಟ ನಿಲಯನ್ನಾ | ತುಂಗೆ ತೀರಗನನ್ನಾ |ಭಂಗವಿಲ್ಲದಾನೇಕ ಬಾರಿ ನೋಡೀ | ಮಂಗಳಾಂಗನ ಪಾಡೀ 2 ಸಿರಿ ವಿಜಯ ವಿಟ್ಠಲನ ನಿಜಪುರದಲ್ಲೀ | ಸಂಸ್ಥಾಪಿಸುತಲ್ಲೀ |ಪರಮ ಶಿಷ್ಯರಿಗುಪದೇಶಗಳನ್ನಾ | ವಿರಚಿಸಿದಿಯೊ ಘನ್ನಾ |ಪರಿಸರ ಮತ ಸರ್ವೋತ್ತಮವೆಂದೂ | ಸಾರಿದೆ ದಯಾಸಿಂಧೂ 3 ಸಿರಿ ತಂದೆ ಮುದ್ದು ಮೋಹನರಾ | ಉದ್ಧರಿಸಿದ ಧೀರಾ |ಮಧ್ವ ಮತಾಗಮ ಸದ್ವನದಿ ವಿಹಾರ | ಬುಧಜನರಘ ಹರಾ |ವಿದ್ವದಾರ್ಯ ಮುದ್ದು ಮೋಹನ ರಾಯ | ಮುದ ಬೇಡುವೆ ಜೀಯ 4 ಕೃತನಿತ್ಯಾಹ್ನಿಕನಾಗಿ ತೆವಳಿ ಬಂದೂ | ಚಕ್ರದಿ ಕುಳಿತಂದೂ |ವತ್ಸರ ವಿಳಂಬಿ ವದ್ಯ ಕಾರ್ತೀಕದೀ | ಚತುರ್ದಶಿ ನಡುದಿನದಿ|ಅತುಳ ಮಹಿಮ ಗುರುಗೋವಿಂದ ವಿಠಲನ್ನ | ಹೃದಯಾಬ್ಜದಿ ಪವನಾ | ಆತುಮಾಂತರದಿ ಕಾಣುತಲವನಾ | ಕಿತ್ತೊಗೆದೆಯೊ ತನುವಾ 5
--------------
ಗುರುಗೋವಿಂದವಿಠಲರು
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ. ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1 ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2 ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಮೋಹನದಾಸರು ಇನ್ನಾದರು ಎನ್ನ ಪೊರೆಯೊ | ಮೋಹನರಾಯನಿನ್ನವನಲ್ಲವೇನೋ ಪ ಬನ್ನ ಬಡಿಪದುಚಿತವೇನೋಚೆನ್ನ ಶ್ರೀ ವಿಜಯ ದಾಸಾರ್ಯರ ಚಿಣ್ಣಾ ಅ.ಪ. ಎನ್ನ ಪಾಲಿಸಿದಂದದೀ | ಸಕಲ ಪ್ರಪನ್ನರ ಸಲಹುವುದೆಂದೂ ಬಿನ್ನಪಗೈದು ಮೋಹನ್ನ ವಿಠಲನೀಗೆ ಘನ್ನುಪಕಾರವ ಮಾಡಿದ ಧೀರಾ 1 ಮನ್ನವಚ ಕಾಯದಿ | ನಿನ್ನಯ ಚರಣ |ವನ್ನು ಪೂಜಿಪೆ ಮೋಹನ್ನ |ಮನ್ನಿಸಿಯೆನ್ನಯ ಅವಗುಣವೆಣಿಸದೆಕುನ್ನಿಯ ಕಾಯೊ ಸದ್ಗುರುವೆ ಪ್ರಸನ್ನ 2 ಸಾರ |ಭಕ್ತರಿಗರ್ಥಿಲಿ ಸ್ತವನ |ಮುಕ್ತಿದಾಯಕ ಗುರುಗೋವಿಂದ ವಿಠಲನವ್ಯಕ್ತಮಾಡಿಸೊ ಗುರು ಮೋಹನ್ನರಾಯಾ 3
--------------
ಗುರುಗೋವಿಂದವಿಠಲರು
ಶ್ರೀ ರಘುಕಾಂತ ತೀರ್ಥರ ಸ್ತೋತ್ರ ಪದಕಂಜಸಾರಿಭಜಿಪ ಭಕ್ತರ ದೂರವೋಡಿಸುವ ಶಕ್ತ ವಿರಕ್ತ ಪ ದಿನಕರ ಕುಲಜಾತ ವನಜಾರಾಧ್ಯಸು - ಮನಸವ್ರಾತ ಸನ್ನುತ ಇನಕೋಟಿಪ್ರಭೆಗಾತ್ರ ಮನಸಿಜ ಪಿತಸ - ನ್ಮುನಿಗಣನುತ ರಾಮಚಂದ್ರ ಪಾದಭೃಂಗ 1 ಯತಿಕುಲ ರತುನ ಭಕುತಸುರತರುವೆ ಸ - ದ್ಗತಿ ದಾತಾ ಜಿತಮದನ ಪತಿತಪಾವನ ಮುನಿ ಯತಿ ರಘುದಾಂತತೀ ಪಾದ ಪಂಕೇಜ 2 ಕಾಮಿತಫಲದ ನಿಸ್ಸೀಮ ಮಹಿಮ ಭಕ್ತ ಪ್ರೇಮ ಪಾವನ ಚರಿತ ಸಾಮಜವರದ ಶ್ರೀ ವರದೇಶವಿಠಲನ ಪ್ರೇಮ ಪಾತ್ರ ಮಹಾ ಮಹಿಮ ನಿಷ್ಕಾಮ3
--------------
ವರದೇಶವಿಠಲ
ಶ್ರೀ ರಘುದಾಂತತೀರ್ಥರ ಸ್ತೋತ್ರ ನಮೋ ನಮೋ ಶ್ರೀ ರಘುದಾಂತ ತೀರ್ಥ ಮುನಿಯ ಮತಮಹಮಸಿರಿಯೆ ಭ್ರಮರನೆನಿಪಗುರುವೆ ಪ ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ ನೀರಜ ಶರವಿಜಿತ ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ 1 ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ ಸ್ತೋತ್ರಗೈಯ್ಯುತಿಪ್ಪ ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ 2 ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ ಶರಧಿ ಕುಂಭಜಾತ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ 3 ಅನಘನಿನ್ನಪದವನಜÀಜದರಜವನು ವಿನಯದಿರಿಸಿ ಶಿರದಿ ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ ಸನುಮಾರ್ಗಪ್ರದ, ದರುಶÀನದು ಪ್ರಕೃತಿನೆನೆವೆನು ಇಹಪÀರದಿ 4 ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ ಪತಿ ಧೀಮಂತಪ್ರಿಯನೆ ನಿಮ್ಮ ಪ್ರೇಮದಿನಂಬಿಹೆನೆ ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ 5
--------------
ವರದೇಶವಿಠಲ
ಶ್ರೀ ರಘೂತ್ತಮತೀರ್ಥರು ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ. ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ 1 ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ 2 ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ 3
--------------
ಶ್ರೀದವಿಠಲರು
ಶ್ರೀ ರಘೋತ್ತಮತೀರ್ಥರು ನಮೋ ದೈಶಿಕಾರ್ಯ | ರಘೂತ್ತಮ ಪದನಮೋ ದೇವತಾತ್ಮ ಪ ವಿಮಲ ರಾಮ ಸನ್ಮಹಿಮ ಭಜಕಗುರುನಮೋ ನಮೋ ಪೂತಾತ್ಮ ಅ.ಪ. ಚಾರು ವ್ಯಾಖ್ಯ ಕೃತ ದೀಕ್ಷಭಾರಿ ಗ್ರಂಥ ಬೃಹದಾರಣ್ಯ ವಿವರಣ ನ್ಯಾಯ ಗ್ರಂಥಲಕ್ಷ್ಯಸಾರ ತತ್ವಪ್ರಭೆ ಚಾರುಗೀತ ಪ್ರಭೆ ತೋರ್ದ ಭಾವದಕ್ಷ 1 ಬೋಧ ಕಾರ್ಯತೀವ್ರ ಮನದ ದುರ್ಭಾವ ಕಳೆದು ಹರಿಭಾವ ಈಯೊ ವರ್ಯಭಾವ ಕೊಲಿವ ಕರ್ಮಾವಳಿಗಲ್ಲೆನೆ ಓವಿ ಪೇಳ್ದ ದಾಸಾರ್ಯಕಾವ ಕರುಣಿ ಹರಿಭಾವದಿ ನಿಲ್ಲುವ ಭಾವ ಬೋಧಕೃತ ಆರ್ಯಾ 2 ತೈಜಸ ಒರಯ ನ್ಯಾಯ ಸುಧೆ ಪೇಳ್ದ ಕೋಣಾಧ್ಯಕ್ಷಪರಿಪರಿ ಪ್ರಾರ್ಥಿಪೆ ಗುರು ಗೋವಿಂದ ವಿಠಲನ ಚರಣದಿ ದೀಕ್ಷ 3
--------------
ಗುರುಗೋವಿಂದವಿಠಲರು
ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ 1 ಸಿರಿ ಬೊಮ್ಮ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು 2 ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ರಾಘವೇಂದ್ರರು ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ಪ ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ. ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ ಬಂದ ಬಂದ ಜನರಿಗೆಲ್ಲ ಆನಂದ ನೀಡುತ ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ 1 ಬಂದ ಬಂದ ಜನರಿಗೆ ಅಭೀಷ್ಟವ ನೀಡುತ ಛಂದಾಗಿ ಅಭಯವ ನೀಡುತಿಹರಮ್ಮ ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ ಅಂದಿನ ಆನಂದನ ಕಾಣಮ್ಮ 2 ಬಂದ ಬಂದ ಜನರು ಪ್ರದಕ್ಷಿಣೆ ನಮಸ್ಕಾರ ತಾಂವ ದಿಂಡು ಉರುಳುವರಮ್ಮಾ ಬಂದ ಬಂದ ಜನರಿಗೆಲ್ಲಾ ಅಭಯವ ನೀಡುತ ತಾಂವ ತುಂಗಾ ತಟದೊಳು ಇರುತಿಹರಮ್ಮಾ 3 ಮೈಯೊಳು ಕೇಸರಿಗಂಧಾ ಪೋಷಿಸಿದಾರಮ್ಮಾ ಎದುರಲಿ ಶ್ರೀ ಕೃಷ್ಣನ ಪೂಜಿಪರಮ್ಮಾ ಢಾಳ ಅಕ್ಷಂತಿ ತಿದ್ದಿದ ಅಂಗಾರವು ಮುದ್ರಿಯು ತಾಂವ್ ಧರಿಸಿಹರಮ್ಮ 4 ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್ ಧರಿಸಿಹರಮ್ಮಾ ಬಿಡದೆ ನಿರಂತರ ನರಸಿಂಹವಿಠಲನ ಜಪಿಸುತ ತಾಂವರಿಂದಾವನದೊಳ್ ಇರುಹರಮ್ಮಾ 5
--------------
ನರಸಿಂಹವಿಠಲರು
ಶ್ರೀ ರಾಘವೇಂದ್ರರು ಎಲ್ಲಿರುವೆ ತಂದೆ ಬಾರೊ ಗುರುರಾಯನೆ ಪ ಬಳಲುವೆ ಭವದಿ ತಳಮಳಿಸುವೆನೊ ಕಳವಳಿಕೆಯ ಬಿಡಿಸೊ ಗುರುರಾಯನೆ 1 ತಡ ನೀ ಮಾಡಲು ತಡೆಯದಾಗದೋ ಗಡ ಬಾ ಇಡು ದಯವಾ 2 ಸಕಲರಲ್ಲಿ ವ್ಯಾಪಕನೆಂದ್ಹರಿಯನು ಪ್ರಕಟಿಸಿದಿ ಜಗದಿ 3 ಹರಿನಾಮವು ಸರ್ವತಾರಕವೆಂಬÉೂೀದು ಮೆರಸಿದಿ ಧರೆಯೊಳಗೆ 4 ಧೀರನಾದ ಹನುಮೇಶ ವಿಠಲನಾ ಧ್ಯಾನದಿ ಮನ ನಿಲ್ಲಿಸೋ5
--------------
ಹನುಮೇಶವಿಠಲ
ಶ್ರೀ ರಾಘವೇಂದ್ರರು ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1 ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2 ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3 ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4 ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5 ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
--------------
ಗೋಪತಿವಿಠಲರು
ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ 1 ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು 2 ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು 3 ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 4 ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 5
--------------
ಗುರುಪ್ರಾಣೇಶವಿಠಲರು