ಒಟ್ಟು 5271 ಕಡೆಗಳಲ್ಲಿ , 121 ದಾಸರು , 3265 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ
ರಾಜೀಸುವದು ನಾಭಿಯಾ ಸುರಗಂಗೆಯಂ ಶೇಧೀಭಿಯಾ ಪ ನೇತ್ರನ್ನದಯ ಪೂರ್ಣದಾ ಕಮಲಂ ಹಾರಿಸಿ ನೀಡುವ ಬುದ್ದಿ ವಿಮಲಂ ನೇ ಶ್ರೀ ವೆಂಕಟೇಶಂ ಸದಾ1 ಪೊಗಳಲಿಲ್ಲ ಮತಿ ಸಲ್ಲದೇ ಆಶ್ರಯಸಿ ನೆಲೆಗೊಳ್ಳದೇ ಭವಕಾದೆ ಪರಿಹಾರ ದಾ ಪರಿಯಂ ಕಾಣದೆ ಬೇಡಿ ಕೊಂಬೆ ಧೋರಿಯಂ ಶ್ರೀ ವೆಂಕಟೇಶಂ ಸದಾ 2 ಪಟನಾದೆ ನೆರೆ ಭಾಗ್ಯದೀ ನಡಲಂ ದೀಗಳಿ ಪಶ್ಚಾತ್ತಾಪ ಒಡಲಂ ಮನವಿಲ್ಲ ವೈರಾಗ್ಯ ದೀ ಮುಸುಕಿಷ್ಟು ದನಿವಾರ ದಾ ಕಡಲಂ ಮನಿಯೆ ಕಾಯೋ ಸಾಖರದಿಡಲಂ ಶ್ರೀ ವೆಂಕಟೇಶಂ ಸದಾ3 ಬಿದಿರೀಸಿ ವಢ ಮಾಡಿದೇ ಕೊನಿಯಿಂದ ಕಲಕ್ಯಾಡಿದೆ ಮುದವಿತ್ತೆ ಭಕ್ತಂಗದಾ ಮರಳಂ ಕಾವದು ಭಕ್ತಿಗಿಲ್ಲ ಹುರಳಂ ಶ್ರೀ ವೆಂಕಟೇಶಂ ಸದಾ 4 ಕಾಂತಿಚರಣಾಂಬುಜಭಾವ ಭಕ್ತಿಂದಲಿ ಶರಣಂ ಪೊಕ್ಕವರಿಂಗೆ ಜನ್ಮಮರಣಂ ಹರಿಸೂವದಯದಿಂದಲಿ ಸ್ಮರಣಂ ಮಾಡಲು ಪಾಪಹರಣಂ ಸಲೆ ಸಾಧ್ಯಸುರ ಸಂಪದಾ ಕರುಣ ಬೀರುತ ಕಾಯೋಯನ್ನಹರಣಂ ಶ್ರೀವೆಂಕಟೇಶಂ ಸದಾ 5 ಮಾನವ ತನುಂಪಡದೀಗ ಸದ್ಗತಿಯಾ ಗಡ ಹೊಂದಿ ವಿಷಯೇಚ್ಛೆಯಾ ಅಪರಾಧವನು ಗಣಿ ಸದಾ ಪಿತನಂ ತನ್ನಯ ಕಾಯೋ ಜ್ಞಾನ ಚ್ಯುತ ನಂ ಶ್ರೀ ವೆಂಕಟೇಶಂ ಸದಾ 6 ಮೆಚ್ಚಿ ಸುಮನ ನರಿಯೆನು ಯಂತ್ರಿಪ್ಪ ದಾಂನರಿಯೆನು ಗಜವಂ ತಾರಿಸಿದಂತೆಯನ್ನ ವೃಜಿನಂ ದಾಟೀ ಸುವಾ ಬಿರದಾ ಕುಜನಂ ಸೇರಿದಂತೆ ಯನ್ನಂ ಕಾಯೋದ್ವಿಜನಂ ಶ್ರೀ ವೆಂಕಟೇಶಂ ಸದಾ 7 ಸದನಂ ಸುದ್ಗುಣ ಗಾಣದಬ್ಜವದನಂ ಸ್ಪರ್ಧಿಸುತಿದನುಜರಾ ಕದನಂ ಕರ್ಕಶವಾಗಿ ಸೌಖ್ಯ ಪ್ರದನಂ ಭಾವಿಸುತಿಹ ಮನುಜರಾ ಸುಕುಮಾರ ಘನ ಶಾಮದಾ ಇದನಂ ಬಣ್ಣಿಪರಾರು ವೇದವಿದಿನಂ ಶ್ರೀ ವೆಂಕಟೇಶಂ ಸದಾ8 ಶಿಖಿ ಕೇತನಾ ಕಾಯ ಭಂಡಿಯವಾಧನು ಪ್ರಾರ್ಥನಾ ಪರಬ್ರಹ್ಮ ತುರುಗಾಯ್ವನೆಂದು ಪೊಗಳ್ವಾರಿಂತರಿವರೈ ಚರಿತದಾ ಗುರು ಮಹಿಪತಿ ಕಂದಸಲಹೋ ಸ್ಮರಿಸಲು ಅಷ್ಟಕವಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜೋಪಚಾರರಾಜೋಪಚಾರರಾಜೀವನೇತ್ರ ನೀನವಧರಿಸು ಬೇಗ ಪಸಾವಿರದ ದಳವುಳ್ಳ ಕಮಲವೊಂದಕೆ ಶಕ್ತಿಸಾವಿರದ ಮೌಕ್ತಿಕದ ಸರಗಳೊಪ್ಪಿಹವುಕಾವಿಹುದು ಸಕಲ ದೇವಾತ್ಮಕದ ಶಾರದೆಯುನಾ ವಹಿಸಿ ತುರಿಯ ಕಲಶದ ಛತ್ರವೆಂದೆಂಬ 1ಆವಗವು ಸತ್ವಾದಿ ಗುಣಗಳಿಂದೊಪ್ಪಿರುವಆವರಣ ವಿಕ್ಷೇಪ ಶಕ್ತಿಯೆಂಬೆರಡುದೇವ ನಿನ್ನುಭಯ ಪಾಶ್ರ್ವದಲೊಲವುತಿಹ ಸರ್ವಭಾವದಿಂದುಭಯ ಚಾಮರವೆರಡರಿಂದ 2ಗಂಧರ್ವ ನಗರದಿಂದೈತಂದ ನಾರಿಯರುಛಂದದಿಂ ನರ್ತಿಸುತಲಿಹರೈವರಿವರುಒಂದಾಗಿ ಬಳಿಕಿವರ ಹೊಂದಿ ಮತ್ತೈವರಿರೆಹಿಂದೆ ನಾಲ್ವರುವೆರಸಿ ನಲಿವ ನರ್ತನವೆಂಬ 3ಪರವೆಂದು ನಾಭಿಯಲಿ ಪಶ್ಯಂತಿ ಹೃದಯದಲಿಸ್ವರವಿಹುದು ಕಂಠದಲಿ ಮಧ್ಯಮಾಖ್ಯೆಯಲಿಸ್ಫುರಿಸಿ ಮುಖಕಮಲದಲಿ ವೇದಶಾಸ್ತ್ರಗಳಾಗಿಮೆರೆವ ವೈಖರಿಯೆಂಬ ಗೀತವಿದ ಕೇಳು 4ತಾಳ ಮರ್ದಳೆ ಘಂಟೆ ಭೇರಿ ಶಂಖಗಳಿಂದಮೇಲಾದ ವೀಣೆ ವೇಣುಗಳ ರವದಿಂದಲಾಲಿಸುವ ಛಿಣಿ ಛಿಣೀ ಛಿಣಿಗಳೆಂಬವರಿಂದನೀಲ ಮೇಘಧ್ವಾನ ದಶನಾದದಿಂದ 5ಪರಿಪರಿಯ ಗತಿಯುಳ್ಳ ಚಿತ್ತವೆಂಬಶ್ವವನುವರ ಸತ್ವ ಗುಣವೆಂಬ ಹಲ್ಲಣವ ಬಿಗಿದುನಿರತ ಪರಮಾತ್ಮನೀಕ್ಷಣದ ಕಡಿವಾಣವನುಪಿರಿದಾಗಿಯಳವಡಿಸಿ ಮುಂದೆ ನಿಂದಿಹುದಾಗಿ 6ಒಲವುತಿಹ ಸುಖ ದುಃಖವೆರಡು ಘಂಟೆಗಳಿಂದನೆಲನ ಸೋಕುವ ಕಾಮ ಸುಂಡಿಲದರಿಂದಫಲ ಚತುಷ್ಟಯ ಪಾದ ಮೇಲು ಮಂಟಪದಿಂದಬಲುಮೆಯಹ ಮೂಲ ಕಾರಣವೆಂಬ ಗಜವು 7ಹಿಂದೆಮುಂದರುವರೊಂದಾಗಿ ವಹಿಸಿರಲದಕೆಹೊಂದಿಸಿದ ಚೌಕಿ ಮನವೆಂಬುದದರಲ್ಲಿಮಂದ ಮೃದು ಬಹು ವಿಷಯ ಸುಖದ ಹಾಸಿಕೆ ಹಾಸಿದಂದಳವಿದನುಭವದ ಕೊಂಬಿನಿಂದೊಪ್ಪಿರುವ 8ಆರು ನೆಲೆಯುಳ್ಳ ರಥವದಕೆ ಶಕ್ತಿಗಳೆಂಬಮೂರು ಕಲಶಗಳಲ್ಲಿ ನಾಲ್ಕು ಸತ್ತಿಗೆಯುಮೂರವಸ್ಥೆಗಳದರ ತುರಿಯವೆಂಬುದೆ ನಾಲ್ಕುಮೂರುಲೋಕವನಾಳ್ವ ಮಹಿಮ ನೀ ಪ್ರತಿಗ್ರಹಿಸು 9ನುಡಿವುದೆಲ್ಲವು ವೇದ ನಡೆವುದೆಲ್ಲವು ಶಾಸ್ತ್ರಬಿಡದೆ ನಿನ್ನಾಜ್ಞೆಯೊಳಗಿರೆ ಪುರಾಣದೃಢವಾಗಿ ನಿನ್ನ ಭಜನೆಯ ಮಾಳ್ಪ ದಿವಸವದುಕಡುಪುಣ್ಯವಾದ ಪಂಚಾಂಗವೆನಿಸುವದು 10ಉದಯದಲಿ ನಿನ್ನ ಸ್ಮರಣೆಯ ಮಾಡೆ ಪುಣ್ಯತಿಥಿಒದಗಿಸುವ ಸತ್ಕರ್ಮ ವಾರವೆನಿಸುವದುಅದರಲ್ಲಿಯನುಭವವೆ ನಕ್ಷತ್ರ ನಿನ್ನಲ್ಲಿಹುದುಗೆ ಜೀವನು ಯೋಗ ಹುದುಗುವದೆ ಕರಣ 11ಸಕಲ ವೇದಂಗಳಲಿ ಪ್ರತಿಪಾದಿಸಿದ ಫಲವುವಿಕಳವಿಲ್ಲದೆ ನಿನ್ನ ನಿಮಿಷ ಧ್ಯಾನಿಸಲುಸಕಲ ತೀರ್ಥಸ್ನಾನ ದಾನ ಜಪ ತಪ ಯಜ್ಞಸಕಲವೂ ಬಹುದೆಂಬ ಸರ್ವೋಪಚಾರ 12ಸುರ ಸಿದ್ಧ ಮುನಿವೃಂದ ನಿರತ ಸೇವಿತ ಚರಣಶರಣಾಗತೋದ್ದರಣ ಶರಧಿಜಾರಮಣತಿರುಪತಿಯ ಸ್ಥಿರವಾಸ ನಿರುಪಮ ಮಹಾಕರುಣಮರೆಯೊಕ್ಕೆ ಸಲಹೆನ್ನ ಪ್ರಾಣ ವೆಂಕಟರಮಣ 13ಓಂ ಜುನೇ ನಮಃ
--------------
ತಿಮ್ಮಪ್ಪದಾಸರು
ರಾಮ ವರಶರಸಮರೈಕ ಶೂರ ರಾಮ ಶರಧಿಮದವಿದಾರ ಪ. ಸದಯ ಹೃದಯ ಪದ್ಮಾವತೀಪ್ರಿಯ ಪದ್ಮದಳೇಕ್ಷಣ ವೈದೇಹೀರಮಣಅ.ಪ. ಮಂದರಧರ ಗೋವಿಂದ ಸದಾನಂದ ಮಂದಸ್ಮಿತ ವದನಾರವಿಂದ 1 ನೀಲಮೇಘ ವರಶ್ಯಾಮಶರೀರ ಪಾಲಿತ ಭಕ್ತಜನ ಮಂದಾರ 2 ಕರುಣಾಕರ ರಮಾವರ ಭವದೂರ ವರಶೇಷಗಿರಿವರ ಶ್ರೀಧರ 3
--------------
ನಂಜನಗೂಡು ತಿರುಮಲಾಂಬಾ
ರಾಮ ಗೋವಿಂದ-ಹರಿ-ಕೃಷ್ಣ ಗೋವಿಂದ ಕೃಷ್ಣ ಗೋವಿಂದ- ಹರಿ-ರಾಮ ಗೊವಿಂದ ಪ ರಾಮ ರಾಮ ಕೃಷ್ಣಕೃಷ್ಣ _ ಕೃಷ್ಣಕೃಷ್ಣ ರಾಮರಾಮ ರಾಮ ಕೃಷ್ಣ ರಾಮರಾಮ _ ಕೃಷ್ಣ ರಾಮ ಕೃಷ್ಣ ಕೃಷ್ಣ ಅ.ಪ. ಮತ್ಸ್ಯಕೂರ್ಮ ಭೂವರಾಹ _ ಜೈ ಜೈ ವಾಮನ ನಾರಸಿಂಹ ತ್ರಿವಿಕ್ರಮ _ ಶರಣು ಉಪೇಂದ್ರ 1 ಬುದ್ಧ ಕಲ್ಕಿ _ ಭೃಗುಜ ಜಯೇಶ ವಾಸುದೇವ ಹೃಷಿಕೇಶ _ ಕೇಶವಾಚ್ಯುತ 2 ಅಧೋಕ್ಷಜ ಅನಿರುದ್ಧ ಶ್ರೀಧರ ವೇದವ್ಯಾಸ ಕಪಿಲದತ್ತ _ ಮಧುಸೂದನ 3 ತೈಜಸ ಪ್ರಾಜ್ಞತುರ್ಯ-ಬ್ರಹ್ಮ ಧಾಮ ಪೃಶ್ನಿಗರ್ಭ ಮಹಿದಾಸ _ ಪುರುಷೋತ್ತಮ 4 ಅಜಪರಶ್ರೀನಿವಾಸ _ ಸಾಸಿರಾನಂತ ಶಿಂಶುಮಾರ _ ಸಚ್ಚಿದಾನಂದ 5 ನಾರಾಯಣ ಜನಾರ್ದನ _ ಹಂಸ ಪ್ರದ್ಯುಮ್ನ ಮಾಧವ 6 ಅಪ್ಪ ಉರಗಾದ್ರಿ ವಾಸ _ ವೆಂಕಟೇಶ ಅಪ್ರಮೇಯ ರಂಗನಾಥ _ ಪಾಂಡುರಂಗ 7 ಸತ್ಯವ್ಯಕ್ತ ಸತ್ಯನೇತ್ರ _ ಸತ್ಯಪರ ಭಿನ್ನ ನಿತ್ಯತೃಪ್ತ _ ಸತ್ತದಾತ _ ಪುರುಷ ಮಹಾಂತ 8 ಲಕ್ಷ್ಮೀರಮಣ ಕೃಷ್ಣವಿಠಲ _ ಮುಕ್ತರಾಶ್ರಯ ಲಕ್ಷ್ಯಮಾಡೆ ಮುಕ್ತಿ ಕೊಡುವ _ ಭಕ್ತವತ್ಸಲ9
--------------
ಕೃಷ್ಣವಿಠಲದಾಸರು
ರಾಮ ನಾಮಕೆ ಸಮ ನಾಮವುಂಟೆ ಜಗದೀ ಪಾಮರರಘನಾಶಕೆ ಪ ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ ನಾಮಕೆ ಸಮವುಂಟೇ ಅ.ಪ ಕೋಸಲಪತಿಯೆನಿಸೀ ಅಸುರೆಯ ಸಂಹರಿಸೀ ದುರುಳರಪಹರಿಸೀ ಮುನಿ ಸತಿಯನುದ್ಧರಿಸಿದ 1 ಸತಿಯನುಜರ್ವೆರೆಸೀ ದಿತಿಜರ ಕುಲವಳಿಸೀ ಸತಿಯಳ ನೆಲೆಯರಸೀ ದಿತಿಜಾಂತಕನೆನಿಸಿದ 2 ಶರಣನ ಪತಿಕರಿಸೀ ನರನಾಟಕ ನಡೆಸೀ ಕರುಣಾನಿಧಿಯೆನಿಸೀ ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ 3
--------------
ರಘುರಾಮವಿಠಲದಾಸರು
ರಾಮ ನಿನ್ನಯ ಚರಿತೆ ರಘು ರಾಮ ನಿನ್ನಯ ಚರಿತೆ ಪ. ಪ್ರೇಮದಿ ಭಜಿಸಲು ಕ್ಷೇಮವಹುದು ರಘುರಾಮ ಅ.ಪ. ದಶರಥ ಪುತ್ರ ಕೌಶಿಕನ್ಯಾಗ ಕರ್ತ ಪಶುಪತಿ ಧನುಭಂಗ ಜಾನಕೀಪತಿ ರಘು 1 ಪರಶುರಾಮನ ಗರ್ವಮುರಿದ ವರ ಮಾತೆ ವಾಕ್ಯವ ಸಲಿಸೆ ಕಾನನಕೈದ ರಘುರಾಮ 2 ದಶಶಿರ ಸೀತೆಯ ಕದ್ದೊಯ್ಯಲು ಅರಸುತ ಪತಿ ಹನುಮಗುಂಗುರವಿತ್ತ ಧೀರ 3 ಶರಧಿಯ ಲಂಘಿಸಿ ವರಹನುಮನು ತನ್ನ ಕರದಲಿಯದ ವರ ಜಾನಕಿಗಿತ್ತ 4 ಚೂಡಾಮಣಿ ಮಾರುತಿಗೊಡೆ ಸೇತುವೆ ಅತಿಶಯದಲಿ ಬಂಧಿಶಿ ದಶಶಿರನಳಿದಾ ರಘುರಾಮ 5 ನಿನ್ನಡಿ ನೆನೆವರೆ ಧನ್ಯರು ನಿತ್ಯ ಸನ್ನುತ ಚರಿತ ಶ್ರೀ ಶ್ರೀನಿವಾಸ ರಘುರಾಮ 6
--------------
ಸರಸ್ವತಿ ಬಾಯಿ
ರಾಮ ರಕ್ಷಮಾಂ ರಾಮ ರಕ್ಷಮಾಂ ರಾಮ ರಕ್ಷಮಾಂ ರಾಮ ರಕ್ಷಾಮಾಂರಾಮ ರಕ್ಷಮಾಂ ಕಾಮಿತಾರ್ಥದ ಪ್ರೇಮಸಾಗರ ಶ್ರೀ ಮನೋಹರ ಪದಶರಥಾತ್ಮಜ ದಾನವಾಂತಕ ಶಶಿನಿಭಾನನ ಶತಮಖಾರ್ಚಿತಕುಶಿಕನಂದನ ವಶಮಖಾವನ ಶಶಿಮುಖೀತನೋಃ ಶಮಲವಾರಣ 1ಹರ ಶರಾಸನ ಹರ ಧರಾಸುತಾ ಕರ ಪರಿಗ್ರಹಾರಾಮ ನಿಗ್ರಹಗುರು ನಿಯೋಜಿತ ಗುಹ ಸುಪೂಜಿತ ವರ ವನಾಶ್ರಿತ ಭರತ ಪ್ರಾರ್ಥಿತ 2ಮೃಗ ನಿಷೂದನ ಖಗಪ ಪಾಲನ ಭಂಜನ ಶಬರಿ ಪಾವನಸುಗತಿ ದಾಯಕ ವಾಲಿಶಿಕ್ಷಕ ಮೃಗಪರಕ್ಷಕ ರಾಜ್ಯದಾಯಕ 3ಶರಧಿಬಂಧನ ಪುರ ವಿಮರ್ದನ ವರವಿಭೀಷಣ ಭಯನಿವಾರಣಧುರ ಧುರಂಧರ ದುಷ್ಟ ಖಳಸಹೋ ದರ ಶಿರೋಹರ ದೈತ್ಯಸಂಹರ 4ಧರಣಿಜಾನ್ವಿತ ದುರಿತ ವಾರಕ ಭರತವಂದಿತ ಪುರವರಸ್ಥಿತವರ ಮುನಿಸ್ತುತ ಸುರಸಮಾಶ್ರಿತ ತಿರುಪತೀಶ್ವರ ವೆಂಕಟೇಶ್ವರ 5ಓಂ ಕುಬ್ಜಾ ಕೃಷ್ಟಾಂಬರಧರಾಯ ನಮಃ
--------------
ತಿಮ್ಮಪ್ಪದಾಸರು
ರಾಮ ರಕ್ಷಿಸೋ ಸೀತಾರಾಮ ಪಾಲಿಸೋ ಪ ಕಾಮನ ಪಿತನಿಸ್ಸೀಮ ಸಾಹಸಗುಣಧಾಮ ಮ- ಹಾತ್ಮ ಸುಧಾಮ ರಮಣನೆ ಅ.ಪ ದಶರಥ ಪ್ರಥಮ ಪುತ್ರ ತ್ರ್ರಿದಶ ಸ್ತುತಿಗೆ ಪಾತ್ರ ಕುಶÀಲವರು ನಿನ್ನ ಹಸು ಮಕ್ಕಳು ಪೂರ್ಣ ಶಶಿಮುಖಿ ಸೀತೆ ನಿನ್ನ ವಶವಾದವಳು 1 ಕೋಸಲಾಧಿಪನೊ ಹೇ ದೇವ ನೀ ಕೌಸಲ್ಯ ಜಠರಜನೊ ಶೇಷನ ಪೂರ್ವಜ ನಾಶರಹಿತ ಅಶೇಷ ಮುನಿಗಣಕೆ ತೋಷಪೂರಿತನಾದಿ 2 ದುಷ್ಟರ ಸಂಹಾರ ಮಾಡಿದಿ ನೀ ಶಿಷ್ಟರ ಉದ್ಧಾರ ಸೃಷ್ಟಿಯೊಳಗೆ ಲೇಶ ಕಷ್ಟವಿಲ್ಲದೆ ನೀನು ಸುಷ್ಟು ಮಾಡಿ ಅಖಿಳೇಷ್ಟ ಪ್ರದನಾದಿ 3 ದೀನರಕ್ಷಕ ನೀನು ಮಹಾತ್ರಾಣಿ ಇಂದ್ರನ ಸೂನು ವಾನರಾಧಿಪಹನು ಮನಮಾತನು ಮಾನಿಸಿದಿಯೊ ನೀನು 4 ದೇವಶ್ರೇಷ್ಠ ನೀನು ಉದ್ಧರಿಸಿದಿ ಮಾವ ಜನಕನನ್ನು ಕಾವಲಾಗಿರು ಯನಗಾವಾಗ್ಯನು ಶ್ರೀವತ್ಸಾಂಕಿತ ವೆಂಕಟಪತಿಯೆ 5
--------------
ಸಿರಿವತ್ಸಾಂಕಿತರು
ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಪ ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು 1 ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು 2 ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು3
--------------
ವಿಜಯದಾಸ
ರಾಮ ರಾಮ ರಾಮ ಶ್ರೀರಾಮನೆನ್ನಿರೊ ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ ಅಂದದಿಂದ ಈ ದಶರಥನಂದನೆಂದು ---- ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ ಕಾಲ ಕಳೆಯ ಹೊಂದಿ ದೇವರ ಚರಣ ಕಮಲಾ ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1 ಕಾಮನಯ್ಯನ ಕಡಲೊಳಾಳ್ದÀ್ದನ ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ ವಾಮನ ಪರಶುರಾಮನಾದನಾ ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2 ಪಿತೃವಾಕ್ಯ ಪಾಲಿಸಿದವನು ಸತತ ಭಕ್ತರ ಸಲಹುತಿಹನು ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’ ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3
--------------
ಹೆನ್ನೆರಂಗದಾಸರು
ರಾಮ ವಂದಿಪೆ ಗುಣ ಧಾಮಾ ವಂದಿಪೆ ಘನ ಶ್ಯಾಮ ವಂದಿಪೆ ರಘು ರಾಮ ರಾಮ ರಾಮ ಪ ಬೋದ ಪ್ರದಾಯಕ ಸಾಧು ಜನಾವಳಿ ವೇದಾಂಗನುತ ರಘು ರಾಮ ರಾಮ ರಾಮ 1 ಇಂದ್ರಾದಿನುತ ಗುಣ ಸಾಂದ್ರಾನತಾವಳಿ ಮಂದಾರಧರ ಹರಿ ರಾಮ ರಾಮ ರಾಮ 2 ದಶರಥ ನಂದನ ದಶಶಿರ ಭಂಜನ ಶಶಿಕಲ ರಂಜನ ರಾಮ ರಾಮ ರಾಮ 3 ಸುಜನರ ಪಾಲನೆ ಕುಜನರ ಕಾಲನೆ ಭಜಕರ ಲೋಲನೆ ರಾಮ ರಾಮ ರಾಮ 4 ಅಂಬುಜನಯನನೆ ಅಬುಜೆರಮಣನೆ ನಂಬಿದೆ ತಾತನೆ ರಾಮ ರಾಮ ರಾಮ 5 ಪನ್ನಗಶಯನನೆ ಚಿನ್ಮಯ ರೂಪನೆ ಚನ್ನಕೇಶವ ರಾಮ ರಾಮ ರಾಮ 6
--------------
ಕರ್ಕಿ ಕೇಶವದಾಸ
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ರಾಮ ಸಲಹಯ್ಯ ಪುಣ್ಯನಾಮ | ಶ್ರೀ ರಾಘವೇಂದ್ರಾ ಪೂರಿತಕಾಮಾ ನೇಮಾ | ಶಾಮ ಪರಮಾ ಗುಣರತ್ನ ಧಾಮಾ ಪ ವನಜಾಂಬಕ ಕುಂದರದನಾ | ಅನುಪಮ ಸುಂದರ ವದನಾ | ರಣದಲಿ ಜಿತ ದಶವದನಾ | ಅನಂತವದನಾ ಲಾವಣ್ಯ ಸದನಾ 1 ಕರುಣಾ ಶರಣಾ ಭರಣಾ | ಧರಣಿ ಧರಣೋದ್ಧರಣಾ | ಸ್ಪುರಣ ಕಿರಣ ದೋರಣ ಚರಣಾ | ಅರುಣಾಂಬುಜಾಲಯ ರಮಣಾ 2 ವೀರಾಗುಣ ಗಂಭೀರಾ | ಕ್ರೂರಾಸುರ ಸಂಹಾರಾ | ಶೂರಾ ಜನ್ಮ ವಿದೂರಾ | ಮಹಿಪತಿ ಧೀರಾ ಕೃಷ್ಣನೊಡೆಯ ಉದಾರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ಸಲಹಯ್ಯ ಪುಣ್ಯನಾಮ ಶ್ರೀ ರಾಘವೇಂದ್ರ ಪೂರಿತಕಾಮ ನೇಮ ಶ್ಯಾಮ ಪರಮಗುಣ ರತ್ನಧಾಮ ಧ್ರುವ ವನಜಾಂತಕ ಕುಂದರದನ ಅನುಪಮ ಸುಂದರವದನ ಸದನ 1 ಕರುಣ ಶರಣ ಭರಣ ಭರಣ ಧರಣೋದ್ಧಾರಣ ಸ್ಪುರಣ ಕಿರಣದೊರಣ ಚರಣ ಅರುಣಾಂಬುಜಾಲಯರಮಣ 2 ವೀರಗುಣಗಂಭೀರ ಕ್ರೂರಾಸುರ ಸಂಹಾರ ಶೂರ ಜನ್ಮವಿದೂರ ಮಹಿಪತಿ ಧೀರ ಕೃಷ್ಣೊಡಿಯ ಉದಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು