ಒಟ್ಟು 3307 ಕಡೆಗಳಲ್ಲಿ , 122 ದಾಸರು , 2364 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆ ಜೀವಾಂಕಿತ ಪ್ರೇತ ನೋಡಿಭುವಿಗೆ ಭಾರನು ಅವನುಹರಿಹಗೆಯನುಪ.ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವಹರಿಯಗುಣ ಹೊಗಳದೊಣಪಂಟ ಬಡಿವವಹರಿಮರೆದು ಮಲಭಾಂಡವನು ತುಂಬಿಕೊಳುವವಹರಿಭಟರ ನಡೆನುಡಿಗೆ ಸೈರಿಸದವ 1ಹರಿಪ್ರಿಯರ ನೆರೆಗಾರದತ್ತತ್ತ ಜಾರುವವಹರಿಯವರಿಗುಣಿಸದೆ ಧನ ಕಳೆವವಹರಿಯಾತ್ರೆಗಂಜಿ ಬಲವನೆ ಕೊಳುವವಹರಿವ್ರತವ ಬಿಟ್ಟಿತರ ವ್ರತ ಕೊಳುವವ 2ಹರಿಪದಾಂಬುಜವಜರಿದುಹಲವು ನೀರ್ಕುಡಿವವಹರಿಲಾಂಛನಿಲ್ಲದ ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿಹರಿಪರದೈವವೆನ್ನದ್ಹೊಲೆಮನದವ3
--------------
ಪ್ರಸನ್ನವೆಂಕಟದಾಸರು
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ಆಟಪಾಟವ ನೋಡಿ ಧನ್ಯರು ರಂಗಯ್ಯನಾಡ್ವಆಟಪಾಟವ ನೋಡಿ ಧನ್ಯರು ಪ.ಹೊಕ್ಕಳಲ್ಲಿರೊ ಮಗನು ಕಂಡರೆನಕ್ಕಾನೆಂಬ ಹೇಯ ಬಿಟ್ಟುಚಿಕ್ಕರೊಡನೆ ನಂದವ್ರಜದಿಮಕ್ಕಳಂತಲಿಪ್ಪ ರಂಗನಾಟ 1ಅಂಗಳದಲ್ಲಿದ್ದ ಪಂಕದಲ್ಲಿಮುಂಗೈಯ ಮುರಾರಿ ಕೃಷ್ಣಸಂಗದೆಳೆಯ ಮಕ್ಕಳೊಡನೆಹಿಂಗದೆ ಬೈಯ್ಯಾಟವಾಡುವಾಟ 2ಚಿನ್ನ ಬಾ ನೀ ಹಸಿದೆಯೆಂದುಚೆನ್ನ ನೀ ಉಣಿಸಿದರೊಲ್ಲದೆಕನ್ನವಿಕ್ಕಿ ಗೊಲ್ಲರ ಮನೆಯಬೆಣ್ಣೆಮೊಸರಸೂರ್ಯಾಡಿಮೆಲ್ಲುವಾಟ3ರಂಬಿಸಿಗೋಪಿನೀಲವರ್ಣದಬೊಂಬೆ ಬಾಲ ತೋಟಿ ಬೇಡೆನೆಕೊಂಬು ಕೊಳಲು ಸೆಳೆದು ಹೆಟ್ಟಿಕುಟ್ಟುವಡೆÉೂಂಬಿಕಾರ ವೀರಧೀರನಾಡುವಾಟ 4ಅಡಗಿದರ್ಭಕರ ಬಲ್ಪಿನಿಂದಲೆಹಿಡಿದುತಂದು ಚಿಣ್ಣಿ ಚಂಡನಾಡುತಬಡಿದು ಸೋಲಿಸಿ ದೂರು ಬರುವ ಮುನ್ನೆಹುಡಿಯ ಹೊರಳೇಳುವ ತೊಂಡೆಕಾರ ದೇವನಾಟ 5ಮೃತ್ತಿಕೆಯನುಂಬ ಮಗನ ಕಂಡುಮತ್ತೆಶೋದೆ ಅಕ್ಕಟೆಂದುತುತ್ತಿಸಿದ ಮಣ್ಣ ತೆಗೆಯಲಾಗಳೆಮತ್ರ್ಯನಾಕವಿಸ್ತಾರ ತೋರಿದ6ಹಲವು ಹಗ್ಗದಿಂ ಕಟ್ಟಿದಗೋಪಿಲಲನೆಗಚ್ಚರಿಯಾಗಿ ಉಲೂಖಲನ ಎಳೆದು ಮತ್ತಿಯ ಮರಗಳಛಲದಿ ಮುರಿದ ವಿಚಿತ್ರ ಚರಿತ್ರನ 7ಕರುಣದೋರಿ ಗೋಪಾಂಗನೇರತೋರದ ಮೊಲೆಯುಂಡ ವರಶಿಶುಗಳಉರುಳಗೆಡಹ್ಯವರೊಳು ನಲಿವದುರುಳಮಾಯಕಾರಖಿಳರೊಡೆಯನ8ಆರ ಪುಣ್ಯವೆಂತಂತೆ ಲೀಲೆಯತೆÉೂೀರಿ ಮುದ್ದು ಮೋಹವ ಬೀರಿದಸಾರಿದ ಭಕ್ತವತ್ಸಲ ನಮ್ಮಜಾರಚೋರ ಪ್ರಸನ್ವೆಂಕಟೇಶನಾಡುವ ಆಟ 9
--------------
ಪ್ರಸನ್ನವೆಂಕಟದಾಸರು
ಆತನ ಪಾಡುವೆನನವರತ |ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪಆವಾತನ ಕೀರ್ತಿಯನುಪರೀಕ್ಷಿತ ಕೇಳೆ |ಪಾವನನಾದನು ಮೂಜಗವರಿಯೆ ||ಭಾವಶುದ್ಧಿಯಲಿ ಶುಕನಾರನು ಪೊಗಳುವ |ಆವಗಂ ಪ್ರಹ್ಲಾದನಾದವನ ನೆನೆವನಯ್ಯ 1ಶಿಲೆಯ ಬಾಲೆಯ ಮಾಡಿದ ಪಾದವಾರದು |ನಳಿನ ಸಂಭವನನು ಪೆತ್ತವನಾರು ||ಕಲಿಯುಗದ ಮನುಜರಿಗೆ ಆರನಾಮವುಗತಿ |ಇಳೆಯ ಭಾರವನಿಳುಹಿ ಸಲಹಿದರಾರಯ್ಯ 2ದ್ರುಪದನ ಸುತೆಯ ಮಾನರಕ್ಷಕನಾರು |ನೃಪಧರ್ಮನಿಗೆ ಸಂರಕ್ಷಕನಾರು |ಕೃಪೆಯಿಂದ ವಿದುರನ ಮನೆಯಲುಂಡವನಾರು |ಆಪತ್ಕಾಲದಿ ಗಜವ ಸಲಹಿದರಾರಯ್ಯ 3ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |ರಥವ ಪಿಡಿದು ನಡೆಸಿದವನಾರೊ ||ಪೃಥಿವಿಯೆಲ್ಲವಬಲಿ ಆರಿಗೊಪ್ಪಿಸಿದನು |ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ 4ಸಾಗರನ ಮಗಳಿಗೆ ಆರ ನಾಮವೆಗತಿ |ಯೋಗದಿ ನಾರದನಾರ ಭಜಿಪನಯ್ಯ ||ರಾಗರಹಿತ ಹನುಮಂತನೊಡೆಯನಾರು |ಭಾಗವತರ ಪ್ರಿಯ ಪುರಂದರವಿಠಲ 5
--------------
ಪುರಂದರದಾಸರು
ಆತ್ಮನಿವೇದನ ಭಕುತಿ ತನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮಗೆ ಪ.ಸರ್ವಕರ್ಮಕರ್ತ ಸರ್ವಕಾಲವರ್ತಸರ್ವಕಾರ್ಯಕೆಹರಿಸ್ವತಂತ್ರನುಸರ್ವಾರ್ಥದಲಿ ಪೂರ್ಣಸರ್ವೇಂದ್ರಿಯ ನಿಯಂತ್ರಸರ್ವದೇಶ ಕಾಲವ್ಯಾಪ್ತ ಗೋಪ್ತನೆಂದು 1ಕಾಸು ಕೋಶಗೇಹದೇಹೇಂದ್ರಿಯ ಪ್ರಾಣಸ್ತ್ರೀ ಸುತ ಪ್ರಿಯ ದಾಸಿ ದಾಸರನುಈಶಗರ್ಪಣೆ ಮಾಡಿ ದಾಸದಾಸನಾಗಿಲೇಶವು ತನಗೆನ್ನದೆ ಸರ್ವಾರ್ಪಿಸುವುದು 2ಜನ್ಮ ಜನ್ಮಾಂತರ ಧರ್ಮ ಕರ್ಮಂಗಳುನಿರ್ಮಲ ಜ್ಞಾನ ವೈರಾಗ್ಯ ಭಕ್ತಿಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆರಮೆಯ ರಮಣಗರ್ಪಣವೆಂಬ ನಿಷ್ಠೆಯ 3ಅಹರ್ನಿಶಿಶ್ವಾಸೋಚ್ಚ್ವಾಸಾವಸ್ಥಾತ್ರಯಬಹು ಜಪತಪ ಅರ್ಚನೆಸಂಭ್ರಮಬಹುಭಿ:ಶ್ರವಣ ಬಹುಧಾಶ್ರವಣ ಮನನಶ್ರೀಹರಿ ಧ್ಯಾನ ಧ್ಯಾಸಾತ್ಮಾಥರ್Àದಿ 4ಅಲಂಬುದ್ಧಿಯನು ಬಿಟ್ಟು ಅಲಸಮತಿಯನು ಸುಟ್ಟುಅಲಸಲಕ್ಷಣ ವಿಸ್ಮøತಿಯನುನೀಗಿಅಲವಬೋಧಾಚಾರ್ಯ ಮತದವರನು ಪೊಂದಿಲಲಿತ ಪ್ರಸನ್ವೆÉಂಕಟ ಚತುರಾತ್ಮಗೆ 5
--------------
ಪ್ರಸನ್ನವೆಂಕಟದಾಸರು
ಆರಿಗಾದರು ಪೂರ್ವಕಲ್ಪನೆ ತಪ್ಪದು ಪಬೇರೆ ಬಯಸಿದರೆ ಬರಲರಿಯದಯ್ಯ ಅರಾಮಚಂದ್ರನ ಸೇವೆ ಮಾಡಿ ಮೆಚ್ಚಿಸಿ ಮಹಾತಾಮಸನ ಗರ್ವವನು ಮುರಿದು ಬಂದರೋಮಕೋಟಿ ಲಿಂಗನೆನಿಸಿದ ಹುನುಮನಿಗೆ ಹೊರಗೆಗ್ರಾಮಗಳ ಕಾಯ್ದುಕೊಂಡಿಹುದೆ ಮನೆಯಾಯ್ತು1ಸುರಪತಿಯ ಗೆದ್ದು ಸುಧೆಯನು ತಂದು ಮಾತೆಯಸೆರೆಯ ಪರಿಹರಿಸಿ ಬಹು ಭಕ್ತನೆನಿಸಿಹರಿಗೆ ವಾಹನನಾಗಿ ಹದಿನಾಲ್ಕು ಲೋಕವನುಚರಿಸಿದ ಗರುಡನಿಗೆ ಮನೆ ಮರದ ಮೇಲಾಯ್ತು2ಪೊಡವಿ ಭಾರವ ಪೊತ್ತು ಮೃಡಗೆ ಭೂಷಣನಾಗಿಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡುಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆಅಡವಿಯೊಳಗಣ ಹುತ್ತು ಮನೆಯಾಯಿತಯ್ಯ3ಮೂರು ಲೋಕದ ಒಡೆಯ ಮುಕ್ಕಣ್ಣನೆಂಬಾತಸಾರುತಿದೆ ಸಟೆಯಲ್ಲ ವೇದವಾಕ್ಯಪಾರ್ವತೀ ಪತಿಯಾದ ಕೈಲಾಸದೊಡೆಯನಿಗೆಊರ ಹೊರಗಣ ಮಸಣ ಮನೆಯಾಯಿತಯ್ಯ4ಮೀರಲಳವಲ್ಲವೋ ಮುನ್ನ ಮಾಡಿದ್ದುದನುಯಾರು ಪರಿಹರಿಸಿಕೊಂಬವರಿಲ್ಲವೊಮಾರಪಿತ ಕಾಗಿನೆಲೆಯಾದಿಕೇಶವರಾಯಕಾರಣಕೆಕರ್ತನೀ ಕಡೆ ಹಾಯಿಸಯ್ಯ5
--------------
ಕನಕದಾಸ
ಆರಿತ್ತರಭವನೇ ಈ ಮನವನೆನಗೆವಾರಿಜೋದ್ಭವಪಿತನೆ ನೀನಲ್ಲದೆ ಬೇರೆ ಪಪರಮಪಾವನ ನಿನ್ನಪರಮಪರತರ ಚರಿತೆಸ್ಥಿರವೆಂದು ನೆರೆನಂಬಿ ಅರಿವ ಬುದ್ಧಿಯನುಮೆರೆವ ನಿಮ್ಮಯ ಬಿರುದ ಹರುಷದಿಂ ಸ್ಮರಿಸ್ಮರಿಸಿಹಿರಿ ಹಿರಿ ಹಿಗ್ಗುತ ಬರೆವ ಈಕರವ1ನಿನ್ನ ದಾಸರಪಾದಭಿನ್ನವಿಲ್ಲದೆ ನೋಡಿಉನ್ನತ ಸುಖಪಡೆವ ಧನ್ಯದ್ವಯನಯನಮುನ್ನ ನಾ ಮಾಡಿದ ಪುಣ್ಯಫಲವೆಂದರಿದುನಿನ್ನ ಚರಣಕೆ ನಮಿಪ ಮಹಪುಣ್ಯಶಿರವ 2ಗಾಢಮಹಿಮನೆ ನಿಮ್ಮ ಈಡಿಲ್ಲದ ಲೀಲೆರೂಢಿಯೊಳಧಿಕೆಂದು ಆಡ್ಯಾಡಿ ಕುಣಿದುಕಾಡಿ ಬೇಡುವ ಮಹಗಾಢ ನಿಮ್ಮಡಿಭಕ್ತಿನೀಡಿದವರೆನಗಾರುನೋಡುಶ್ರೀರಾಮ3
--------------
ರಾಮದಾಸರು
ಆರಿದ್ದರೇನಯ್ಯ ನೀನಲ್ಲದೆನಗಿಲ್ಲಕಾರುಣ್ಯ ನಿಧಿ ಹರಿಯೆ ಕೈಯ ಬೆಡಬೇಡ ಪದುರುಳಕೌರವನಂದು ದ್ರುಪದಜೆಯ ಸೀರೆಯನುಕರದಿಂದ ಸೆಳೆಯುತಿರೆ ಪತಿಗಳೆಲ್ಲ ||ಗರಹೊಯ್ದರಂತಿದ್ದರಲ್ಲದೇ ನರಹರಿಯೆಕರುಣದಿಂ ನೀನಲ್ಲದಾರು ಕಾಯ್ದವರು 1ಅಂದು ನೆಗಳಿನ ಬಾಧೆಯಿಂದ ಗಜರಾಜನನುತಂದೆ ನೀ ವೈಕುಂಠದಿಂದ ಬಂದು ||ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯಸಂಧಿಯನು ಸೀಳಿ ಪೊರೆದೆಯೆಲೊ ನರಹರಿಯೇ 2ಅಜಮಿಳನು ಕುಲಗೆಟ್ಟು ಕಾಲದೂತರು ಬರಲುನಿಜಸುತನ ಕರೆಯಲವನತಿ ವೇಗದಿ ||ತ್ರಿಜಗದೊಡೆಯನೆಪುರಂದರವಿಠಲ ಕರುಣದಲಿನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೇ 3
--------------
ಪುರಂದರದಾಸರು
ಆರು ಬದುಕಿದರಯ್ಯಹರಿನಿನ್ನ ನಂಬಿತೋರೋ ಈ ಜಗದೋಳಗೆ ಒಬ್ಬರನು ಕಾಣೆ ಪಕಲಹಬಾರದ ಹಾಗೆ ಕರ್ಣನನು ನೀ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆ ||ನೆಲನ ಬೇಡಲು ಪೋಗಿ ಬಲಿಯ ತಲೆಯನು ತುಳಿದೆಮೊಲೆಯನುಣಿಸಲು ಬಂದ ಪೂತನಿಯ ಕೊಂದೆ 1ಕರಪತ್ರದಿಂದ ತಾಮ್ರಧ್ವಜನ ತಂದೆಯನುಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ||ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ಬೆರೆದೆ 2ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆಗರುಡವಾಹನ ನಿನ್ನ ಚರಿಯವರಿಯೆ ||ದೊರೆಪುರಂದರವಿಠಲ ನಿನ್ನನ್ನು ನಂಬಿದರೆತಿರುಪೆಯಾ ಹುಟ್ಟಲೊಲ್ಲದು ಕೇಳೊ ಹರಿಯೆ 3
--------------
ಪುರಂದರದಾಸರು
ಆರೇನ ಮಾಡುವರು ಆರಿಂದಲೇನಹುದುಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪಐದು ವರುಷದತರಳ ತಾನೆತ್ತ ತಪವೆತ್ತ |ಬೈದು ಮಲತಾಯಿ ಅಡವಿಗೆ ನೂಕಲು ||ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |ಐದೆ ಬಂಧುಗಳಿದ್ದು ಏನ ಮಾಡಿದರು1ನೃಪರೊಳಗೆಅತಿ ಶ್ರೇಷ್ಠ ಬಲವಂತ ರಘುರಾಮ |ಅಪರಿಮಿತ ಶೂರ ಲಕ್ಷ್ಮಣದೇವರು |ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |ವಿಪರೀತ ವೀರರಿದ್ದೇನ ಮಾಡಿದರು ? 2ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |ಕೋಪದಿಂ ಮಾನಭಂಗವ ಮಾಡಲು ||ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |ಭೂಪತಿಗಳೈವರಿದ್ದೇನ ಮಾಡಿದರು ? 3ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |ಸೆಣಸಿ ಷಡುರಥದೊಡನೆ ಹೊಯ್ದಾಡಲು ||ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |ಸುಮ್ಮನೇ ಜಗವನೆಲ್ಲವ ತಿರುಗಿದ ||ಬೊಮ್ಮಮೂರುತಿಯಾದ ಪುರಂದರವಿಠಲನೇನಮ್ಮಅಳವಲ್ಲ ವಿಧಿಮೀರಿ ಬಾಳುವರೆ5
--------------
ಪುರಂದರದಾಸರು
ಆವ ಕುಲವಾದರೇನು ಪ.ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
--------------
ಪುರಂದರದಾಸರು
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.ಮಾರನನ್ನ ಪೆತ್ತನ ಕುಮಾರನೆಂದು ಕರೆದು ತನ್ನಮಾರಬೀಸಿ ಬಿಗಿದಪ್ಪಿ ಮೋರೆ ನೋಡಿ ಮೊಲೆಯ ಕೊಡುವ1ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆಕಾಲಮೇಲೆ ಮಲಗಿಸಿ ತ್ರಿಕಾಲದಲ್ಲಿ ಹಾಲನೆರೆವ2ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆನೀತಿ ಹೇಳಿ ನವನವನೀತವಿತ್ತು ರಂಜಿಸುವ 3ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ ದಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ 4ತೋಳನೋಡುಧೈರ್ಯದೀರ್ಹತ್ತು ತೋಳಿನವನ ಹೋರುವ ನಳಿತೋಳವಿಡಿದು ವಾರಂವಾರ ತೋಳನ್ನಾಡೊ ಮಗನೆ ಎಂಬ 5ತಾರಕೋಪದೇಶಕಗೆತಾರಕರಂಗನಳಲುತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ 6ದಟ್ಟವಾದ ಜೀವಜಾಲದಅಟ್ಟುಳಿನಿವಾರಣಂಗೆದಟ್ಟು ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ 7ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆಚಿನ್ನ ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ 8ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆದೃಷ್ಟಿ ತಾಕಿತೆಂದು ತೆಗೆದು ದೃಷ್ಟಿ ದಣಿಯೆತುಷ್ಟಿಬಡುವ9ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರುಪರಮಾನ್ನ ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ 10ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರನಿತ್ಯಕರ್ಮನ್ನೆತ್ತಿಕೊಂಡುನೆತ್ತಿಮೂಸಿ ಮುದ್ದಿಸುವ11ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉಯ್ಯಾಲೆಯಿಟ್ಟು ಮುದ್ದು ಮಾತನಾಲಿಸಿ ಜೋಗುಳವ ಪಾಡುವ 12ಅಂಜಲಿಪುಟದಿ ಸುರರಂಜಿಕೆಯ ಬಿಡಿಸುವ ನಿರÀಂಜನಗಭ್ಯಂಜನಿಸಿ ಅಂಜನಿಟ್ಟುಅಮ್ಮೆಕೊಡುವ13ಸಪ್ತ ಸಪ್ತಭುವನಜನಕೆಸುಪ್ತಿಎಚ್ಚರೀವನಿಗೆಸುಪ್ತಿಕಾಲವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ14ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ ಹಿಗ್ಗಿತನ್ನ ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ 15
--------------
ಪ್ರಸನ್ನವೆಂಕಟದಾಸರು
ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆ ಎರೆದ ಶ್ರೀ ಕೃಷ್ಣನಾಮ ||ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನ ಜಯಿಸಿತೈ ಕೃಷ್ಣನಾಮ |ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ 1ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||ಗೋಪವನಿತೆಯರೆಲ್ಲ ಕುಟ್ಟುತಲಿ - ಬೀಸುತಲಿ ಪಾಡುವುದು ಕೃಷ್ಣನಾಮ |ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ 2ಸುಖದ ಅವಸಾನದಲಿ ಈ ನಾಮ ಗಾಯನವು ಶ್ರೀಕೃಷ್ಣದಿವ್ಯನಾಮ |ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ 3
--------------
ಪುರಂದರದಾಸರು
ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂಚತಾರಿ ಕಾಣಿರೊ ಪಸಂತತ ಸುರರಿಗೆ ಅಮೃತವನುಣಿಸಿದಪಂತಿಯೊಳಗೆ ಪರಪಂತಿಯ ಮಾಡಿದ ಅ.ಪಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿಂದಲಿ ಕಡೆದಮೃತವ ತೆಗೆದು ||ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |ದಂಧನೆಯನು ಮಾಡಿ ದೈತ್ಯರ ವಂಚಿಸಿದ 1ವಿಸುವಾಸದಿಂದಲಿ ಅಸುರಗೆ ವರವಿತ್ತು |ತ್ರಿಶುಲಧರನು ಓಡಿ ಬರುತಿರಲು ||ನಸುನಗುತಲಿ ಬಂದು ಭಸುಮಾಸುರನಿಗೆ |ವಿಷಯದಾಸೆಯ ತೋರಿ ಭಸುಮವ ಮಾಡಿದ 2ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |ಬಸುರಿಲ್ಲದೆ ಬೊಮ್ಮನ ಪಡೆದಿಹಳು ||ಕುಸುಮನಾಭ ನಮ್ಮ ಪುರಂದರವಿಠಲನ |ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು 3
--------------
ಪುರಂದರದಾಸರು
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||ತಾನೇ ಅಗ್ನಿಯ ನುಂಗಿ ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
--------------
ಪ್ರಾಣೇಶದಾಸರು