ಒಟ್ಟು 11460 ಕಡೆಗಳಲ್ಲಿ , 130 ದಾಸರು , 4806 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಾಧೀನ ----------- ವೆಂಕಟಾದ್ರಿವಾಸ ವೆಂಕಟ ಪರಹರಿಸೊ ನೀ ಎನ್ನ ಸಂಕಟ ಪ ಚಿನ್ಮಯ-----ನಾದ-----ಶ್ರೀನಿವಾಸ ಪರಮಪುರಷ ಮುನ್ನ ನಾ ಮಾಡಿದ ದೋಷದಿಂದ ಅಮಲನಾಗಿ ವ್ಯರ್ಥ ಬಳಲುತಿಹೆನಾ ------ ಘನವೆ ನಿನಗೆ ಇರುವುದಿನ್ನು ಅನಿಮಿಷವು ನಿಮ್ಮ ಧ್ಯಾನದಲ್ಲಿ ಮಗ್ನರಾದ ಅವರಾ 1 ಶರಣರಾದ ಅವರಾ ಪೊರೆವ ಬಿರುದು ನಿನ್ನದಾಗಿ ಇರಲು ಪರಮ ಪತಿತ ಪಾವನನೆ ಭಕ್ತ ಜನರ ಬಿಡದೆ ಕಾಯ್ವ ಧೊರಿಯು ನೀನೇ ಎಂದು ನಿನ್ನ ಚರಣಕಮಲ ನೆಚ್ಚಿದವನಾ ಪರಿವೆ ಮಾಡದೆ ಇರುವುದಿನ್ನು ಭರದಿ ಮೋಚನ ಪಾಪನಾಶನ 2 --------ದೊಳಧಿಕನಾದವನ ವರಹೊನ್ನ ನಿ--------- ನಿಗಮಗೋಚರ 'ಹೊನ್ನವಿಠ್ಠಲಾ’ ನಿತ್ಯ ಸತ್ಯ ಜಗವಿಲಾಸ --------ಯಿಂದ ನಿನ್ನ ಪಾಡುವಂಥ ಭಜಕರನ್ನ------------- ರಕ್ಷಿಸುವ ಅಭಯ ನಿನ್ನದಾಗಿ ಇರಲೂ 3
--------------
ಹೆನ್ನೆರಂಗದಾಸರು
ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ ಪ ನಿನ್ನಿಂದ ನಿನ್ನ ದಾಸರೆ ಮಿಗಿಲಾಗಿಮನ್ನಿಸುವುದು ನಿನಗೇಸು ಪ್ರಿಯವೊರಂಗ ಅ.ಪ ತನ್ನ ¸ತ್ಯಕಾಗಿ ಸತ್ಯಕಾಮನೆಂಬ ನಿನ್ನ ಪ್ರತಿಜ್ಞೆಯ ಬಿಡಿಸನೆ ಭೀಷ್ಮನು 1 ಮೂರ್ಲೋಕಪತಿಯೆಂಬ ನಿನ್ನ ಧರ್ಮರಾಯಕಾಲು ತೊಳೆವ ಕೀಳು ಊಳಿಗಕ್ಕಿಕ್ಕನೆ2 ದೇವರಥಾಯೂಥಪತಿಯೆಂಬ ನಿನ್ನನುಬೋವನ ಮಾಡನೆ ಪಾರ್ಥನು ಬಂಡಿಯ3 ಬೊಮ್ಮಾದಿಗಳಗಮ್ಯಾಚೋರ ಪರ-ಬ್ರಹ್ಮ ನಿನ್ನನು ಬಲಿ ಬಾಗಿಲ ಕಾಯ್ಸನೆ 4 ಶ್ರೀಪತಿ ಭೂಪತಿ ಈ ಪೆಸರಿರಲುಗೋಪಾಂಗನೇಯರ ನೀ ಕೂಡಿದೆಯೊ ಕೃಷ್ಣ 5
--------------
ವ್ಯಾಸರಾಯರು
ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ಪ ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ ಅನುಗಾಲವೂ ಕಾಯೋ ಅನುಪಮ ಚಿಂತನ 1 ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2 ಕದರೂರು ಹನುಮೇಶ ಹಸನ್ಮುಖವಿಠಲನ ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3
--------------
ಮಹಾನಿಥಿವಿಠಲ
ನಿನ್ನೊರೆಗೆ ನಾ ತಿಳಿಯಲಾರೆ ಪ ಪನ್ನಗಾದ್ರಿವಾಸ ಶ್ರೀಹರೆ ಅ.ಪ. ಮಾನವ ನಾನು ಎನ್ನಿಂದ ಸಾಧ್ಯವಿರೆಇನ್ನೂ ಹೆಚ್ಚು ಹೆಚ್ಚು ಭಕುತಿಯನ್ನು ಬೇಡ ಬೇಡ 1 ಬೊಮ್ಮಾದಿ ದೇವತೆಗಳು ಅಮ್ಮ ಲಕುಮಿಯ ಸಹನಿಮ್ಮನ್ನು ತಿಳಿಯರಿನ್ನು ತಿಳಿವ ಹಮ್ಮು ನನಗೇಕೆ ಶೌರೇ 2 ಅನ್ಯಜೀವಿಯಂತರಂಗ ಎಂದೂ ತಿಳಿಯಲಾರೆ ನಾನುಇನ್ನು ಸರಸಿಜಾಮನೊಡಲ ನಿನ್ನ ತಿಳಿವುದೆಂತಹನೇ 3 ಇಷ್ಟೇ ಭಕುತಿಯಿಂದ ನೀನು ತುಷ್ಟನಾಗಿ ಸಲಹಬೇಕುಎಷ್ಟು ಕಷ್ಟಪಟ್ಟರೂ ನಿನ್ನಿಷ್ಟಕೆ ಸರಿ ಹೋಗುವದೆಷ್ಟು 4 ಭಕುತಿಯಲ್ಲಿ ಸತತವಿರಲು ಶಕುತಿಯನ್ನುನ್ನೀಯೊ ಎನಗೆಸಕಲ ಜಗದಿ ಮೆರೆವ ಗದುಗು ವೀರನಾರಾಯಣ5
--------------
ವೀರನಾರಾಯಣ
ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ ಪನ್ನಗಶಯನ ಶ್ರೀ ಆದಿರಂಗಯ್ಯ ಪ ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ ಇನ್ನೆಂದಿಗಾಗುವುದೊ ಇನಕುಲದ ಮಣಿಯೆ 1 ಎಂಟಾರರೊಳಗೆನ್ನ ಅಂಟಲೆಸಗೊಡಬೇಡ ಭಂಟನಾಗಿರು ವೈಕುಂಠನಾಯಕನೆ 2 ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ ಏಕನಾಯಕನೆ ಕೇಳಿದು ಸತ್ಯಸಿದ್ಧಂ 3 ದೇಶಿಕಾಯೇನಮಃ ದಾಸನಗಿರುತಿರುವೆ ದೋಷರಹಿತಾಗುರುವು ಶ್ರೀತುಲಶಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನೊಳು ನೀನೆ ನಿನ್ನೊಳು ನೀನೆ ನಿನ್ನೊಳು ನೀನೆ ನೋಡಿ ಪೂರ್ಣ ಚನ್ನಾಗೇನಾರೆ ಮಾಡು ಪ್ರಾಣಿ ಧ್ರುವ ಕಾಯಕ ವಾಚಕ ಮಾನಸದಿಂದ ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ ಮಾಯಿಕಗುಣದೋರುದು ಬಿಟ್ಟು ನಾಯಕನಾಗಿ ಕುಡು ಪ್ರಾಣಿ 1 ಸೆರಗ ಬಿಟ್ಟು ಮರಗಬ್ಯಾಡ ಕರಗಿ ಮನ ಕೂರು ಕರಗಿ ಮನ ಕೂಡು ಎರಗಿ ಗುರು ಪಾದಕ್ಕಿನ್ನು ತಿರುಗಿ ನಿನ್ನ ನೋಡು ಪ್ರಾಣಿ 2 ಮರೆವು ಮಾಯ ಮುಸುಕ ಬಿಟ್ಟು ಅರುವಿನೊಳು ಕೂಡು ಅರುವಿನೊಳು ಕೂಡು ತರಳ ಮಹಿಪತಿ ನಿನ್ನ ಗುರುತು ನಿಜ ಮಾಡು ಪ್ರಾಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನೊಳೇನ ಬೇಡಿಕೊಂಬೆನೋ ನಾ ಸನ್ನುತಾಂಗ ಪ ನಿನ್ನ ಪಾದವನ್ನು ಭಜಿಪ ಮನದ ಹೊರತು ಅ.ಪ ಮನೆಯು ಬೇಡ ಮಠವು ಬೇಡ ಧನವು ಬೇಡ ಕನಕ ಬೇಡ ಮನದ ಶುದ್ಧಿಯಿಂದ ನಿನ್ನ ನೆನೆವ ಮನದ ಭಾವ ಹೊರತು1 ಸತಿಯು ಸುತರು ಗತಿಯು ಮತಿಯು ಹಿತರು ಸಖರು ನೀನೇ ಎಂಬ ಮತವನಾಂತು ನಿನ್ನ ಪೂಜೆ ವ್ರತವು ಸಾಕು ಎನ್ನದೇ 2 ಸಿಂಧು ಯಮುನೆ ಕೃಷ್ಣೆ ತುಂಗಭದ್ರೆ ತಪತಿ ಕಪಿಲೆ ಮಂಗಳ ಕಾವೇರಿ [ಹೇವiವತಿಯ] ಮಾಂಗಿರೀಶ ನೀನೆ ಎನ್ನದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು
ನಿನ್ಹೊರತು ಪೊರೆವರಲಿಲ್ಲ ಹರಿ ಮುರಾರಿ ಪ. ಪೂರ್ಣಾತ್ಪೂರ್ಣ ಕ್ಷೀರಾರ್ಣವ ಶಯನ ವ- ರೇಣ್ಯ ಸ್ವತಂತ್ರವಿಹಾರಿ 1 ಜೀವನಿಚಯಕೃತ ಸೇವೆಯ ಕೈಗೊಂಡು ಪಾವನಗೈವೆ ಖರಾರಿ 2 ತಾಪತ್ರಯಹರ ಗೋಪಾಲ ವಿಠಲ ಆಪನ್ನಭಯನಿವಾರಿ 3 ಪ್ರಾಣನಾಥ ಸರ್ವ ಪ್ರಾಣನಿಯಾಮಕ ಪ್ರಾಣದಾನಂತಾವತಾರಿ 4 ಲಕ್ಷ್ಮೀನಾರಾಯಣ ಬ್ರಹ್ಮಾದಿ ವಿ- ಲಕ್ಷಣ ರಕ್ಷಣಕಾರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಿಮ್ಮಿಚ್ಛೆ ಏನೇನು ಇಲ್ಲ ಎಲ್ಲಾ ಪರಮಾತ್ಮ ನಾಟ ಪ ಪಗಲಿರುಳಾರಿಂದಬಹುದು ರವಿಶಶಿ ದಿಗುವಿವರವ ಬೆಳಗುತಲುದಿಸುವರು ಗಗನ ಮಾರ್ಗದಿ ಮಳೆ ಬಹುದು ಜಗದುದರನಾಟದಿ ಸೃಷ್ಟಿ ಸ್ಥಿತಿಲಯವಹುದು 1 ಮುಳಗದಂತೆ ಇಳೆಯು ಇರುತಿಹುದು ಸುಳಿದು ಗಾಳಿಯು ಬೀಸುತಿಹುದು ಮೃತ್ಯು ಕಾಲ ಬಳಿ ಕೊಲ್ಲುತಿಹುದು 2 ನಾನು ಮಾಡಿದೆನೆನ್ನುತಿಹುದು ಕೆಡಿಸಿದನೆನ್ನುತಿಹರು 3 ಬಾಲ್ಯಯೌವನವು ತೋರುವುದು ನಿನ್ನ ಕಾಲ ಕಾಲಕಾಗುವುದಾಗು ತಿಹುದುವಧಿ ಕಾಲತೀರಲು ತನಗೆ ತಾ ಲಯವಹುದು 4 ಉಳ್ಳಷ್ಟ ಮೀರ ದಂತಿಹುದು ಎಲೆ ನಿಲ್ಲದೊಡುವ ವಾಯುಸುತನ ಕೋಣೆಯ ಲಕ್ಷ್ಮೀ ಊಳಿಗ ಸಾಗುತಿಹುದು 5
--------------
ಕವಿ ಪರಮದೇವದಾಸರು
ನಿರಂಜನ ಸ್ವಾನುಭವವ ಪಡೆದು ನೋಡು ಪ ಬಿಡು ದೇಹದಿ ಆತ್ಮಭಾನ ಪಡೆ ಗುರುವಿನ ದಿವ್ಯ ಜ್ಞಾನ ನುಡಿ ಮನಸಿಗೆ ನಿಲುಕದಿರುವ ಕಡೆ ಇಲ್ಲದ ಸ್ಥಿತಿಯ ನೋಡು ಒಡಲುಪ್ರಾಣಮನಾದಿಗಳು ಜಡವಾದವು ಎಂದು ತಿಳಿದು ದೃಢನಿಶ್ಚಯದಿಂದ ಕಳೆಯೆ ಕಡೆಗುಳಿಯುವ ಮೂಲರೂಪ 1 ಪರಮಾತ್ಮನ ನೋಡುವುದಕೆ ಹೊರಗೆಲ್ಲಿಯು ಹೋಗಬೇಡ ಭರಿತನವನು ವಿಶ್ವದಲ್ಲಿ ಇರನೆ ನಿನ್ನ ಹೃದಯದಲ್ಲಿ ಮರೆಯದೆ ಈ ನುಡಿಯ ಬೇಗ ಅರಿತುಕೊಳ್ಳು ನಿನ್ನ ರೂಪ ಪರಮಪದವ ಪೊಂದುವಿ ನೀ ಗುರುಶಂಕರನುಕ್ತಿಯಂತೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಿರವಧಿ ಬಲ ಲಾವಣ್ಯ ಸಂಪನ್ನ ಪ ಚರಣ ಸೇವಕನೆಂದೆನಿಸಲೋ ಎನ್ನ ಅ.ಪ ನಿಖಿಲ ಜಗಂಗಳ ಜನನಾದಿಗಳಿಗೆ ಅಖಿಲ ಕಾರಣನೇ ಸುಖಮಯನೇ ಶುಕಭಾಷಣದಿಂ ಪೊಗಳುತಿಹನೋ ನಿನ್ನ ಭಕುತಿಯ ಮಾರ್ಗವ ತೋರಿ ಪೊರೆಯೆಲೋ 1 ಹೆಚ್ಚಿನ ಜ್ಞಾನದ ಕೆಚ್ಚೆನಗಿಲ್ಲವೊ ಉಚ್ಚಪದವು ನಿನ್ನ ಇಚ್ಛೆಯಿಂದಲ್ಲವೇ ಹುಚ್ಚನಾದೆನೊ ಜನಮೆಚ್ಚುಗೆ ಬಯಸುತ ಅಚ್ಯುತ ಎನ್ನ ಉಪೇಕ್ಷಿಸದಿರೆಲೊ 2 ನಿನ್ನನು ಪೂಜಿಸಿ ಧನ್ಯ ನಾನಾದೆನೊ ಎನ್ನ ಸತ್ಕಾಲವು ಮಾನ್ಯವಾಯಿತೊ ಇನ್ನು ನಿನ್ನಯ ಪ್ರಸನ್ನತೆಯಲ್ಲದೆ ಅನ್ಯ ವಿಷಯಗಳ ಬಯಸುವುದಿಲ್ಲವೊ 3
--------------
ವಿದ್ಯಾಪ್ರಸನ್ನತೀರ್ಥರು