ಒಟ್ಟು 3561 ಕಡೆಗಳಲ್ಲಿ , 121 ದಾಸರು , 2529 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುದಯನೆ ಮಲಗಿದ್ಯಾ ತಂದೆ ಗೋವಿಂದ ಇದು ಏನು ಮಾಡಿದ್ಯೋ ಭಕುತರಾನಂದ ಪ ಗಳಿಗೆಬಿಡದೆ ಹೊನ್ನು ಅಳೆದಳೆದು ಬೇಸತ್ತು ಮಲಗಿದಿ ಸುಮ್ಮನೆ ಕಲಿಜನರ ಗತಿಯೇನು 1 ಮಹಂತರ ಅಧಿಕಾರ ಭ್ರಾಂತರೊಶಕೆ ನೀಡಿ ಚಿಂತೆ ಪರಹಿತ ಮರೆದು ಸಂತಸದ್ಹಾವಿನ ಮೇಲೆ 2 ಪ್ರತಿ ವರುಷದುತ್ಸವಕೆ ಅತಿಭಕುತಲಿ ಬರುವ ಸುತರೊಳು ದಯತಪ್ಪಿ ಅತಿ ಆನಂದದಲಿ 3 ರೂಢಿಯ ಮೇಲೆ ಗಾಢನಿದ್ರೆಯೊಳು 4 ಕಾಮಿತಜನರ ಸುರಕಾಮಧೇನಲ್ಲವೆ ನೀನು ಭೂಮಿಪಾಲಿಸು ಏಳು ಸ್ವಾಮಿ ಶ್ರೀರಾಮಯ್ಯ 5
--------------
ರಾಮದಾಸರು
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ
ಸುಂದರಾಂಗ ವಿಠಲ | ತಂದೆ ಪೊರೆ ಇವಳಾ ಪ ಭವ ಸಿಂಧು ಉತ್ತರಿಸೀ ಅ.ಪ. ಭವ | ವಾರಿಧಿಗೆ ನವ ಪೋತಚಾರುತವನಾಮ ಸ್ಮøತಿ | ಆರೈಸುವಂತೇಮೂರೆರೆಡು ಭೇದಗಳು | ತಾರತಮ್ಯದ ಬಗೆಯತೋರಿಪೊರೆ ಕನ್ಯೆಯನು | ಮಾ ರಮಣ ದೇವಾ 1 ಆವ ಸ್ವಪ್ನದಿ ವೃದ್ಧ | ಭಾವದ್ಯತಿಗಳ ಕಂಡುಭಾವಿ ಮರುತರು ಎಂಬ ಭಾವದಲಿ ನಮಿಸೀಭಾವ ಭಕುತಿಲಿ ಭೀತಿ | ಭಾವವನೆ ತೋರುತ್ತತೀವರದಿ ಸಂಸ್ತಬ್ಧ | ಭಾವದಿರುತಿಹಳಾ 2 ಪತಿತ ಪಾವನ ರಂಗ | ಕೃತ ಪೂರ್ವ ಪುಣ್ಯದಿಂಮತಿಮಾಡಿ ಹರಿದಾಸ್ಯ | ಹಿತದಿಕಾಂಕ್ಷಿಪಳೋ |ಪತಿಸೇವೆ ದೊರಕಿಸುತ | ಕೃತಕಾರ್ಯಳೆಂದೆನಿಸೊಕ್ಷಿತಿಯೊಳಿವಳನು ಮೆರೆಸೊ | ಪ್ರತಿರಹಿತ ದೇವಾ 3 ಕರ್ಮಪ್ರಾಚೀನಗಳ | ನಿರ್ಮಲಿನ ಮಾಡುತ್ತಧರ್ಮ ಸಾಧನ ಮಾರ್ಗ | ಪೇರ್ಮೆಯಿಂಕೆಡಿಸೋ |ಭರ್ಮಗರ್ಭನನಯ್ಯ | ಹಮ್ಮು ಕಳೆದಿವಳ ತವಸೊಮ್ಮು ನಾಮಾಮೃತದ | ಉಮ್ಮು ನೀ ಕೊಡಿಸೋ 4 ಗಾಮಲ್ಲಗಣಿಗೊಲಿದು | ಧೀವರಗೆ ದೂರಸ್ಥಆವಸಂಗದ ವಿವರ | ಕಾಣ್ವ ಬಲವಿತ್ತಾಮಾವಾರಿಯಾದ ಗುರು | ಗೋವಿಂದ ವಿಠ್ಠಲನೆನೀವೊಲಿಯ ದಿನ್ನಾರ | ಕಾವರನಕಾಣೇ 5
--------------
ಗುರುಗೋವಿಂದವಿಠಲರು
ಸುಧೆಯನು ಸುರಿಸುವ ಸಮಯವಿದುಸದಯಾಕರ ಶ್ರೀಯಾದವ ಕುಲಪತಿ ಪ. ಇಂದಿರೆ ರಮಣನೇ 1 ಬಾಲೆರ ಮಧ್ಯದಿ ಕೋಲನೆ ಹಾಕುತಲೀಲೆಯ ತೋರಿದ ಬಾಲಗೋಪಾಲನೆ2 ಶಿರಿಯರಸ ತಂದೆವರದವಿಠಲನೆಚರಣಕಮಲ ತೋರೋ ಹೃದಯ ಮಂದಿರದಲಿ 3
--------------
ಸಿರಿಗುರುತಂದೆವರದವಿಠಲರು
ಸುಪರ್ಣಾದೇವಿ ಜಗವ ಪಾವನ ಮಾಳ್ಪ ವರದ ಮಾತೆ ಪ ಖಗರಾಜನಿಗೆ ಅತಿ ಪ್ರೀತಿ ಪಾತ್ರಳೆ ದೇವಿ ಅ.ಪ. ವರಹ ರೂಪದ ನಾಶಿಕದಿಂದ ಉದ್ಭವಿಸಿವಾಗ್ದೇವಿ ಸುತನಿಂ ಜಗದೊಳಗೆ ಪರಿದುವದನದಿಂದಲಿ ನಿಮ್ಮ ನಾಮಸ್ಮರಣೆಯ ಮಾಡೆವೇಗದಿ ಬರುವ ತಿಮಿರಗಳ ನಾಶಮಾಳ್ಪೇ 1 ಪಾದ ಕಮಲದ ಮಹಿಮೆಯನುಉನ್ನತವಾಗಿ ತೊರೆನ್ನ ಹೃದಯದಲಿ 2 ಅನುದಿನ ಮಾಡೆಯದುಪತಿಯ ಮಹಿಮೆಯನು ಶಿಷ್ಯರಿಗೆ ತೋರುತಲಿ ಚನ್ನ ಶ್ರೀಗುರುತಂದೆಗೋಪಾಲವಿಠಲ-ಪುರವ ಪೊಂದಿಸಿದ ಮರಿಯೇ 3
--------------
ಸಿರಿಗುರುತಂದೆವರದವಿಠಲರು
ಸುಮ್ಮನೆ ದೂರಿದರೆ ನಾನೆಂಬೆನು ರಂಗಂ ಗುಮ್ಮ ಬಂದನು ಎಂದರಂಜುವನು ಪ ಸುಳ್ಳು ಸಟೆಯನಾಡಬೇಡಿರೇ ಜಾತಿ ಗೊಲ್ಲತಿ ಯರು ನೀವಾದರೆ ಎಲ್ಲನಾರಿಯರೊಂದು ಗೂಡಿರೆ ಕಟ್ಟಿ ಕಳ್ಳ ಕೃಷ್ಣನ ತಂದು ತೋರಿರೆ 1 ಮುತ್ತಿ ಚಂಡಾಟವಾಡುವ ನಂದ ನೊತ್ತಿಲಿ ಪಾಲ್ಬೆಣ್ಣೆ ಮೆಲ್ಲುವ ಪಣಿಗೆ ವತ್ತು ಪೊಂಗಳಲ ನುಡಿಸುವ 2 ಕಾಲೊಳಂದಿಗೆ ಗಜ್ಜೆ ಧ್ವನಿ ಮಾಡುವ ತನ್ನ ತಾಳ ಗತಿಗೆ ತಾನೆ ಕುಣಿದಾಡುವ ನಂದ ನೋಲಗವನ್ನು ಕ್ಷಣ ಬಿಡದಿರುವ ಲಕ್ಷ್ಮೀ ಲೋಲ ತನ್ನೊಳು ತಾನೆ ನಲಿದಾಡುವ 3
--------------
ಕವಿ ಪರಮದೇವದಾಸರು
ಸುಮ್ಮನೆ ದೋರೈಯ್ಯಾ | ರಮ್ಮೆಯ ಕರದಲಿ | ಒಮ್ಮೆಗೆ ಅಗಲದೆ ನಮಿಸಿಕೊಳುತಿಹ ಪಾದಾ ಪ ಇಳೆಯ ನೆರೆ ಬೇಡುವ ನೆವದಲಿ ಬಂದು ಬಲಿಗುದ್ಧರಿಸೆಂದು | ಹಲವು ಕಾಲದಿ ಶಿಲೆಯಾದಂಗನೆಗೆ ಸತಿಗತಿ ನೀಡಿದ ಪಾದಾ 1 ಉರಗಾಶರ ಬರೆ ಉಂಗುಟ ಲೋತ್ತಿನರ ನುಳಹಿದ ಕೀರ್ತಿ | ಸುಯೋಧನನುರುಳಿಸಿಗೆಡಹಿದಾ ಪಾದಾ 2 ತಂದೆ ಮಹಿಪತಿ ಪ್ರಭುದಯದಿಂದಲಿ ಎಂದೆಂದು | ಮುನಿಜನ ನಯನ ಚಕೋರರ ಚಂದಿರವಾಗಿಹ ಪಾದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನೆಲ್ಯದ ತಾ ನೋಡಿ | ನಮ್ಮಯ್ಯನ ಕೃಪೆ | ಸುಮ್ಮನೆಲ್ಲ್ಯದ ತಾ ನೋಡಿ ವಮ್ಮನಾಗದೇ ಪ ಅಂದಿಗಿಂದಿಗೇ ಒಂದೆರಡಲ್ಲದೆ | ಸಂಧಿಸಿ ಬಂದಿಹ ಜನ್ಮಗಳಲ್ಲಿ | ಕುಂದದೆ ಪುಣ್ಯದ ವೃಂದದ ಪಡೆದಾ | ನಂದದ ಛಂದದಿ ನಿಂದವರಲ್ಲದೆ 1 ಗಾಧವ ಸೂಸುವೆ ಸಾಧಕನಾಗಿ | ಸದರದಲಿ ಗುರು ಬೋಧದ ಲಿಂದಾ | ಸಾಧಿಸಿ ಸಾಧಿಸಿ ಬೇಧಿಸಿ ತನ್ನೊಳು | ವೇದಾಂತರಿ-ತಿಹ ಸಾಧುರಿಗಲ್ಲದೆ 2 ಬಂದದ ನುಂಡು ಬಾರದ ಬಯಸದೆ | ನಿಂದಿಸಿ ಲೊಂದಿಸಿ ಕುಂದದೆ ಹಿಗ್ಗದೆ | ತಂದೆ ಮಹಿಪತಿ ನಂದನ ನುಡಿ ನಿಜ | ವೆಂದನುಭವಕೆ ತಂದವಗಲ್ಲದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ. ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1 ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2 ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3
--------------
ವೀರನಾರಾಯಣ
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ ಸುವ್ವಿ ಸಾಯೋಜ್ಯದೊಡೆಯನೆ ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು ಅನುಮಾನೆಂಬೆಳ್ಳ ಚಿಗಳಿಯ ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ ಗಣನಾಥಗಿಟ್ಟು ಬಲಗೊಂಡು 1 ಮನವೆಂಬ ಕಣಕವ ಘನವಾಗಿ ಕುಟ್ಟುತ ಜ್ಞಾನ ವೈರಾಗ್ಯದೊಡಗೂಡಿ ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು ಅನಂದ ಘನವ ಬಲಗೊಂಡು 2 ನಿರ್ಗುಣಾನಂದನು ಸುಗುಣವ ತಾಳಿದ ಅಗಣಿತಗುಣ ಪರಿಪೂರ್ಣ ಪರಿಪೂರ್ಣವಾಗಿಹ ಅಗಮ್ಯನುಪಮ ನಿಗಮ ಗೋಚರನ ಬಲಗೊಳ್ಳಿ 3 ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು ಮತ್ತೆ ತ್ರಿಗುಣವ ತಾಳಿದ ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ ನಿತ್ಯ ನಿರ್ಗುಣನ ಬಲಗೊಳ್ಳಿ 4 ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು ಹತ್ತವತಾರ ಧರಿಸಿದ ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು ಪತಿತಪಾವನನ ಬಲಗೊಳ್ಳಿ 5 ಅನಾಥಜನರ ದೈನ್ಯ ಹರಿಸಲಾಗಿ ಆನಂದದಿಂದ ಪುಟ್ಟಿಹ್ಯ ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ ಜ್ಞಾನದಲೊಮ್ಮೆ ಬಲಗೊಳ್ಳಿ 6 ಕುಸುವ ನಿಶ್ಚಯ ಒನಕಿಯ ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು ಹಸನಾಗಿ ಕಣಕ ಕುಟ್ಟುತ 7 ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ ಮದನ ಮೋಹನಗ ಮದುವೀಗ ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು ಮೊದಲಾದ ಗುರಿಯ ಮುತ್ತೈದೇರು 8 ಚದುರತನದಲಿ ಒದಗಿ ಮುತ್ತೈದೇರು ಯದುಕುಲೋತ್ತಮನ ನೆನವುತ ನೆನವುತ ಹದನದಿಂದಲಿ ಮನವಿಡುತ ಆದಿ ತ್ರಿಮೂರ್ತಿ ಬಲಗೊಂಡು 9 ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ ಹಸನಾಗಿ ಕಣಕ ಕುಟ್ಟುತ ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ ವಿಶ್ವ ವ್ಯಾಪಕನ ಮದುವಿಗೆ 10 ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ ಒಟ್ಟಿ ಉನ್ಮನೆಯ ಮುದ್ರಿಯಲಿ ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು ಕೊಟ್ಟ ಸದ್ಗುರು ಹರುಷವ 11 ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು ಕಣಕವ ಕುಟ್ಟಿ ದಣಿದರು ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು ಮೌನ್ಯ ಮೋನದಲಿ ಮುಸುಕಿರೆ 12 ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು ಹೆಸರಿಟ್ಟು ಏಸು ಪರಿಯಿಂದ ಪರಿಯಿಂದ ಮಾಡುತ ಬೀಸೋರಿಗಿಗಳು ವಾಸುದೇವನ ಮದುವಿಗೆ 13 ಅಡಿಗಿಯ ಮಾಡಿದ ಸಡಗರ ಪೇಳಲಿ ಪೊಡವಿಯೊಳಿನ್ನು ಅಳವಲ್ಲ ಅಳವಲ್ಲದಡಗಿಯ ಕೂಡಿ ಮುತ್ತೈದೇರು ಎಡಿಯು ಮಾಡಿದರು ತಡೆಯದೆ 14 ಒಂದೆ ಸಾಲದಲಿ ಕುಳಿತರು ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ ಒಂದೊಂದು ಪರಿಯ ಬಡಿಸುತ 15 ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು ಒಪ್ಪದಿಂದ ಬಡಿಸುತ ಬಡಿಸುತ ತಪ್ಪದೆ ಉಪ್ಪಿನೆಸರಗಳು ಶ್ರೀಪತಿ ಪ್ರಸ್ತದೆಡಿಯಲಿ 16 ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು ಮತ್ತೆ ಅನೇಕ ಪರಿಯಾದ ಪರಿಯಾದ ಶಾಖವು ಸುತ್ತ ಪಂಕ್ತಿಯಲಿ ಆತ್ಮದಿಂದ ಬಡಿಸುತ 17 ಪರಮಾನ್ನಗಳ ತಂದು ಹಿರಿಯ ಮುತ್ತೈದೇರು ಸರಿಯಾಗಿ ಎಡಿಯ ಬಡಿಸುತ್ತ ಬಡಿಸುತ ಅನ್ನ ಪರಮಾನ್ನ ಅನುಭವದ ಅನಂದದಿಂದ ಬಡಿಸಿದೆ 18 ಮನೋ ಅನುಮಿಷದ ಎಣ್ಣೋರಿಗಿಗಳು ಎಣಕಿಲ್ಲದಿಹ ಭಕ್ಷ್ಯವು ಭಕ್ಷ್ಯದ ಜಿನಸ ಅನೇಕ ಪರಿಯಲಿ ಘನದೊಲುವಿಂದ ಬಡಿಸುತ 1 9 ಸಖರಿ ತುಪ್ಪವು ಭಕ್ತಿಭಾವದಲಾದ ಬಡಿಸುತ ನಡೆದರು ಅಖರದಿಂದಲಿ ಏಕಶಾಂತನ ಮದುವಿಗೆ 20 ಮೊಸರು ಮಜ್ಜಿಗಿಯು ಸುವಾಸದಿಂದಾದ ಲೇಸಾಗಿ ದಣಿಯಬಡಿಸಿರೆ ಬಡಿಸಿದ ಷಡುರಸಾನ್ನವನುಂಡಿನ್ನು ಕಡುಬೇಗ ಪ್ರೇಮ ಉಕ್ಕಿತು 21 ಉಂಡುವೀಳೆಯುವ ಕೊಂಡು ಸಾಧುಸಭೆ ಮಂಡಲದೊಳು ಪೊಗಳಿತು ಪೊಗಳಿತಾ ಮಂಡಲದೊಳು ಪ್ರಚಂಡನ ಮದುವಿ ಅಖಂಡ ಹರುಷದಿ 22 ಗಂಧ ಕಸ್ತುರಿಯ ತಂದೆ ಗುರುಕೃಪೆಯ ಚಂದವಾಗಿಟ್ಟು ಮೆರೆದರು ಮೆರೆದು ಮೇದಿನಿಯೊಳು ಗುರುದಯ ಕರುಣಾದಿ ಪರಮ ಸುಪಥವ ಪಡೆದರು 23 ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು ಬೆರೆದು ಹರುಷವ ಪಡೆದರು24 ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು ಪರಮಾನಂದದ ಹರುಷಲಿ ಹರುಷವ ಕಂಡಿನ್ನು ಕರುಮುಗಿದು ಮಹಿಪತಿ ಹೃತ್ಕಮಲದಲ್ಲಿ ಸ್ತುತಿಸಿದ 25 ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ ಪಾತಕವಿಲ್ಲ ಭಯವಿಲ್ಲ ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ ಸಂತತ ಸುಖವ ಪಡೆವರು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುವ್ವಿಸತ್ಯಭಾವೆ ಸುವ್ವಿ ರುಕ್ಮಿಣಿದೇವಿ ಸುವ್ವಿ ಸುವ್ವಿ ಕೃಷ್ಣರಾಯ ಸುವ್ವಿ ಎಂದರು ಪಲ್ಲ ಮುಯ್ಯ ತಂದು ದ್ರೌಪದಿ ಸೈಯ ಸೈಯ ಎನ್ನಿಸಿಕೊಂಡು ಕೈಯ ಹೊಯಿದು ನಗುತ ಕೃಷ್ಣಸುವ್ವಿ ಎಂದರು1 ಮುದ್ದು ಸುಭದ್ರಾತಾನು ಗೆದ್ದು ಭಾವೆ ರುಕ್ಮಿಣಿಯರು ಬಿದ್ದು ನಗುತ ಕೈಯ ಹೊಯಿದು ಸುವ್ವಿ ಎಂದರು2 ದಿಟ್ಟೆರಿಬ್ಬರ ಗರ್ವಕುಟ್ಟಿ ಕೇರಿ ತೌಡು ತೆಗೆದು ಕೃಷ್ಣರಾಯನ ನೆನೆಸಿ ಸುವ್ವಿ ಎಂದರು3 ಚಲುವಿಭಾವೆ ರುಕ್ಮಿಣಿಯರು ಸುಲಭದಿಂದ ಗೆದ್ದುಕೊಂಡು ಹಲಧರನ ಪ್ರೀತಿ ಪಡಿಸಿ ಸುವ್ವಿ ಎಂದರು 4 ವೀತ ದೋಷ ರಾಮೇಶನ ಪ್ರೀತಿ ಬಡಿಸಿ ದ್ರೌಪತಿಯ ಮಾತಿನಿಂದ ಗೆದ್ದು ಕೊಂಡು ಸುವ್ವಿ ಎಂದರು 5
--------------
ಗಲಗಲಿಅವ್ವನವರು
ಸುಳಾದಿ ಕೌಸ್ತುಭ ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದÀಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ 1 ಮಠ್ಯತಾಳ ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ 2 ತ್ರಿಪುಟತಾಳ ಪಾದ ಪದುಮದ ನೆನಹೊಂದಿದ್ದರೆ ಸಾಕು 3 ರೂಪಕತಾಳ ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು 4 ಝಂಪೆತಾಳ ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ 5 ಆದಿತಾಳ ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ 6 ಏಕತಾಳ ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು 7 ಅಟ್ಟತಾಳ ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ 8 ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ 9 ರೂಪಕತಾಳ ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ 10 ಜತೆÀ ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]
--------------
ವಾದಿರಾಜ
ಸುಳಾದಿ ಧ್ರುವತಾಳ ಜಿಹ್ವೆ ಸಿರಿ ಗೋಪಾಲವಿಠಲಮೂರ್ತಿಮಂತನಾಗಿ ಇಪ್ಪ ಎಲ್ಲ ಸ್ಥಳದಿ 1 ಮಠ್ಯತಾಳ ಧನವೋದನವು ಇನ್ನು ಧನದೊಳಗಿಪ್ಪನ್ನನೆನೆದು ತೆಗೆದುಕೊ ಶೋಧನಮಾಡಿ ನೋಡಿತನುವಿಗೆ ಕೆಲಸವಿಡು ತನುಬಂಧುಗಳ ನೋಡುಎಣಿಕೆಗೆ ತಂದು ಭಾಗವನು ಮಾಡು ನಾಲ್ಕುಎಣಿಸುತಲ್ಲಲ್ಲಿ ನೆನೆ ಎಲ್ಲ ಸ್ಥಳದಿಗುಣ ಹರಿಯದೆಂದು ಗುಪ್ತನಾಗಿ ಇನ್ನುಅಣುಘನಪರಿಪೂರ್ಣ ಗೋಪಾಲವಿಠಲಅನಿಮಿತ್ತ ಬಂಧ್ವೆಂಬ ಗುಣವುಂಟವನಿಗೆ2 ರೂಪಕತಾಳ ಒಂದು ಅರ್ಥವು ನಿನಗೆ ದೊರಕಿದಡಾಯಿತೆಚಂದದಿ ಚಿಂತಿಸು ಅನಂತಪರಿಯಲ್ಲಿಒಂದುಭಾಗ ದೇವಸಮುದಾಯಕ್ಕೆ ಕೊಡುಒಂದುಭಾಗ ಪಿತೃಗಳಿಗೆ ಇನ್ನು ಮಾಡುಒಂದುಭಾಗ ಪರಿವಾರ ಬಂಧುಗಳಿಗೆಚಂದದಿ ಕೊಟ್ಟು ಆನಂದ ಉಣುಕಂಡ್ಯನಂದಗೋಪನ್ನ ಕಂದ ಗೋಪಾಲವಿಠಲನ್ನಚಂದದಿ ನಿನ್ನ ಮನಮಂದಿರದೊಳು ತಿಳಿ 3 ಝಂಪೆತಾಳ ಜ್ಞಾನವೆ ಮುಖ್ಯಸಾಧನ ನಿನಗೆ ನೋಡುಏನು ಧನದಿಂದಾಗೊ ಕರ್ಮವದರೊಳಗುಂಟುಪ್ರಾಣಹಿಂಸರಹಿತಕರ್ಮ ಮಾಡು ನಿತ್ಯಶ್ರೀನಿವಾಸನು ಅದಕೆ ಮೆಚ್ಚುವನುಜ್ಞಾನಮಯಕಾಯ ಗೋಪಾಲವಿಠಲರೇಯಕಾಣಿಸುವ ನಿನಗೆ ಕರುಣವಮಾಡಿ ನಿರುತ 4 ತ್ರಿಪುಟತಾಳ ತನುವು ಮಂಟಪಮಾಡು ಮನವೆ ಪೀಠವ ಇಡುನೆನೆದು ಕುಳ್ಳಿರಿಸು ನಿನ್ನ ಒಳಗಿದ್ದ ಮೂರ್ತಿಯಧ್ಯಾನ ಆವಾಹನಾದಿಗಳ ನೆನೆದು ಅಲ್ಲಿಪ್ಪಅಣುಮಹಾಮೂರ್ತಿಗೆ ಅಭಿಷೇಕ ಮಾಡಿಸುಗುಣಮೂರರೊಳಗಿದ್ದ ಹರಿಯ ನೆನೆದುಜಿನಸು ವಸನಾಭರಣ ಧೂಪದೀಪವ ಮಾಡಿನೆನಸು ಗಂಧ ಪುಷ್ಪವನು ಮಿಕ್ಕಾದದ್ದೆಲ್ಲಗುಣ ಮೂರುವಿಧದ ಪದಾರ್ಥಗಳನ್ನೆಲ್ಲನಿನಗೆ ಒಂದು ಉದಕಮಾತ್ರ ದೊರಕಿದರೆಇನಿತು ಪರಿಯು ಎಲ್ಲ ಅದರಿಂದ ಚಿಂತಿಸೊಧನದ ಪೂಜೆಗೆ ಅತ್ಯಾಯಾಸಪಡಲಿಬೇಡಘನದೈವ ನಮ್ಮ ಗೋಪಾಲವಿಠಲರೇಯನಿನಗೆಷ್ಟುಪರಿಯಲ್ಲಿ ಪೊರೆವನವನ ತಿಳಿ 5 ಅಟ್ಟತಾಳ ಒಳಗೆ ಬಂದರೆ ನಿನ್ನ ಒಳಗೆ ಇರುತಲಿಪ್ಪಸುಳಿಯುತಿಪ್ಪ ನಿನ್ನ ಸುತ್ತ ಬಿಡದೆ ಬೆನ್ನಹಲವುಪರಿಕರ್ಮ ನಿನಗಾಗಿ ಮಾಡುತ್ತಚೆಲುವ ನಿರ್ಲಿಪ್ತನ್ನ ತಿಳಿಯದೆ ಕೆಡುವಿ ಯಾಕೆಸುಲಭವಾಗಿ ಕರತಳದಲ್ಲಿದ್ದಂಥಫಲವ ನೀ ಕಾಣದೆ ಬಲು ದಣಿಸುವುದೇನೊಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿಚೆಲುವ ಗೋಪಾಲವಿಠಲರೇಯನ ನೀನುಗಳಿಗೆ ಮರೆಯಬೇಡ ಬಲುಪ್ರಿಯಾ ಬಲುಪ್ರಿಯಾ 6 ಆದಿತಾಳ ಸೂರ್ಯ ಅಧಿಷ್ಠಾನದಲ್ಲಿದ್ದುದೇವನ ಸ್ಮರಣೆಯು ಬರುತಿರಲಿ ಕಂಡ್ಯಾಕಾವನು ಬಿಡನಿನ್ನು ಗೋಪಾಲವಿಠಲ 7 ಜತೆ ಗೃಹಮೇಧಿ ಮಾಡಿ ನಿನ್ನ ಗೃಹದೊಳಗಿಪ್ಪಂಥಶ್ರೀಹರಿ ಗೋಪಾಲವಿಠಲನ್ನ ನೆನೆಕಂಡ್ಯಾ
--------------
ಗೋಪಾಲದಾಸರು
ಸುಳಾದಿ ರಾಗ :ಸಾರಂಗ ಧ್ರುವತಾಳ ಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸ ನಿನ್ನ ಶರಣಗೆ ಹಲವು ಹಂಬಲ ಸಲ್ಲ ಇನ್ನು ತಾನೊಮೊಮ್ಮೆ ಬಯಸಿದೇ ಭಕುತಿಗೆ ಅನ್ಯಥಾವಾಗದಂತೆ ಬಯಸಿಕೊಳಲಿ ಮನ ಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರ ಚನ್ನಾಗಿ ನೀನೆವೇ ಫಲವನ್ನು ಒಲಿದಿತ್ತ ವಾಕು ಆದರಿಸೊ ವಾಸುದೇವವಿಠಲ 1 ಮಟ್ಟತಾಳ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ ದಿಂಡೇರ ಕೈಯಿಂದ ನೋಯಗೊಳಿಸದಿರೊ ಅಂಡಜವಾಹನ ಬಿರುದು ನಿನ್ನದು ನೋಡು ಕೊಂಡಾಡುವೆ ವಾಸುದೇವವಿಠಲರೇಯ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ 2 ತ್ರಿವಿಡಿ ತಾಳ ಆವಾವ ಆಶ್ರಮವನ್ನು ಒಲಿದಿತ್ತು ನೀನೇವೆ ಆವಾವ ಬಗೆಯಲ್ಲಿ ಸಾಧನ ಮಾಡಿಸೊ ಆವಾವ ಬಗೆಯಲ್ಲಿ ಬಲ್ಲ ಸರ್ವಜ್ಞನೆ ಆವಾವ ವಿಧದಿಂದ ಬಿನ್ನೈಪುದೇನೆಲೊ ಕಾವ ಕರುಣಿ ವಾಸುದೇವವಿಠಲರೇಯಾ ಆವಾವ ಬಗೆಗಳ ಬಿನ್ನೈಪುದೇನಯ್ಯಾ 3 ಅಟ್ಟತಾಳ ಕೊಡಗೈಯ್ಯ ದೊರೆ ಎಂದು ನಂಬಿಲ್ಲಿಗೆ ಬಂದ ಬಡನಡವಳ ನೀನು ಕಡೆಗೆ ನೋಡುವರೇನೊ ತೊಡರುಗಳಿದ್ದರು ಬಿಡಿಸುವ ಬಗೆ ಬಲ್ಲ್ಯೋ ತಡೆಕೊಡುವ ದೋಷ ಒಡೆಯ ನಿನ್ನೆದುರಿಗೆ ಅಡರಿ ನಿಲ್ಲುವದುಂಟೆ ಆವಾವ ಕಾಲಕ್ಕೆ ಪೊಡವಿಯ ತಳದಲ್ಲಿ ಪುಟ್ಟಿ ಸಾಧನಗಳು ಪಡಿಯಲಿಬೇಕೆಂಬ ಭಕುತ ಜನರುಗಳು ಕಡಿಮೇನೊ ಅವರೊಶ ಮಾಡಿಸೊ ಭಕ್ತರ ಬಿಡಿಯ ಬಿರುದಿನ ವಾಸುದೇವವಿಟ್ಠಲ 4 ಆದಿತಾಳ ಒಂದೊಂದು ಕೊಡಲು ಮತ್ತೊಂದು ಕೊಡಲಿ ಎಂದು ಸಂದಣಿಸುತಲಿವೆ ವಿಷಯಗಳೊಂದು ತಂದೆ ತಡಮಾಡಬೇಡವೊ ಅದರಿಂದ ಒಂದೆ ಸಾಧನ ಬಹಳಾಗುವದೊ ಇಂದಿರೇಶ ಬಯಸಿದೆ ನಿನ್ನಲ್ಲಿ ಬಂದು ಒದಗಿಸೊ ವಾಸುದೇವವಿಠಲ 5 ಜತೆ ಕರುಣಾಳು ಸ್ವಾತಂತ್ರ ವಾಸುದೇವವಿಠಲ ಸರ್ವಜ್ಞ ನಿನಗೆ ಮೊರೆ ಇಡೊದಿದೆ ಚಿತ್ರ 6
--------------
ವ್ಯಾಸತತ್ವಜ್ಞದಾಸರು
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ- ಯನು ತಾತಂದು ಕೊಡಿಸಿ ಮನುಮಥನಾಟವೆಘನ ಬೋಧೆಯೆನ್ನಿಸಿ ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1 ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ ಅತಿದ್ವೇಷವೇ ಕೊಟ್ಟಳು ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2 ಇತರ ಚಿಂತೆ ಹೋಯ್ತು ಕುಲದಪ- ಧ್ಧತಿಯ ಮರಿಯ ಲಾಯ್ತು ಹಿತವೇ ಪೇಳಿದರ ಹಿತವಾಗಿ ತೋರುವೆ 3 ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4 ಸ್ಮರನಾಟಯಾವಾಗಲು ಅವಳನೋಡಿ ಕರಗುತ್ತ ಹಗಲಿರುಳು ಪರಗತಿ ಕೊಡುವಂಥ ಗುರುರಾಮ ವಿಠಲನೆ ಅರಿಯವ ಸಂಸಾರ ತೊರೆದು ತುಂಟರಾಗಿ 5
--------------
ಗುರುರಾಮವಿಠಲ