ಒಟ್ಟು 13659 ಕಡೆಗಳಲ್ಲಿ , 138 ದಾಸರು , 6755 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ. ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1 ಕನಕಮಯ ಸರಪಳಿ ಥಳಥಳನೆ ಹೊಳೆಯೆ ಮಿನುಗುವಾಭರಣಗಳು ಝಗ ಝಗಿಸುತಿರಲು ಸನಕಾದಿ ಒಡೆಯನ ಫಣಿಪ ಹಿಂತೂಗೆ ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2 ವೇದವನೆ ಕದ್ದವನ ಕೊಂದವನೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ಜಲಧಿ ಮೇದಿನಿ ತಂದೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3 ಬಲಿಯನೊಂಚಿಸಿದಂಥ ತರಳನೆ ಜೋ ಜೋ ಕುಲವನೆ ಸವರಿದ ಬಲಶಾಲಿ ಜೋ ಜೋ ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4 ತ್ರಿಪುರ ಸತಿಯರ ವ್ರತವಳಿದೆ ಜೋ ಜೋ ಚಪಲತನದಿಂ ಹಯವನೇರಿದನೆ ಜೋ ಜೋ ಅಪರಿವಿತದವತಾರದಿಂ ಬಳಲಿ ಬಂದು ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5 ಅರಸು ಜಯದೇವಿ ಸಂಕರ್ಷಣನೆ ಜೋ ಜೋ ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6 ನಾರದಾದಿಗಳೆಲ್ಲ ನರ್ತನದಿ ಪಾಡೆ ಊರ್ವಶಿ ಅಪ್ಸರರು ನೃತ್ಯವನು ಮಾಡೆ ತೋರೆ ಗಂಧರ್ವರು ಗಾನಗಳ ರಚನೆ ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7 ಭಕ್ತನಾದ ವಾಯು ಸಹಿತ ಪವಡಿಸಿದೆ ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8 ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9
--------------
ಅಂಬಾಬಾಯಿ
ಜೋ ಜೋ ಶ್ರೀಗುರು ಪ್ರಹ್ಲಾದರಾಜ ಜೋಜೋ ಭಜಕರ ಕಲ್ಪಮ ಹೀಜ ಸ್ತಂಭ ದರ್ಶಿತ ನರಮೃಗರಾಜ ಜೋಜೋ ಭಂಗಾರಕÀಶಿಪುತನುಜ ಜೋ ಜೋ 1 ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ ನಂದಿತ ಭೂಮಿ ವೃಂದಾರಕ ವೃಂದಾ ವಂದಿಪರಘಕುಲ ಪನ್ನಗವೀಂದ್ರ ವಂದಿಸುವೆನು ಗುರು ವ್ಯಾಸಯತೀಂದ್ರ2 ಜೋ ಜೋ ಮಧ್ವಮತಾಂಬುಧಿ ಚಂದ್ರ ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ ರಾಜಾಧಿರಾಜ ಶ್ರೀ ಗುರು ರಾಘವೇಂದ್ರ 3 ಮಂತ್ರಮಂದಿರದಿ ನಿಂತು ಶೇವಕರ ಚಿಂತಿಪ ಫಲಗಳ ಕೊಡುವ ಉದಾರ ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ ಪಂಥವ ತೋರಿಸಿ ಮಾಡೊ ಉದ್ಧಾರ 4 ಶುಭ ಚರಿಯ ನಿರುತಸ್ಮರಿಪರಘ ತಿಮಿರಕೆ ಸೂರ್ಯ ಧರಿಸುರ ಶೇವಿತ ಪರಿಮಳಾಚಾರ್ಯ ಶಿರಿ ಕಾರ್ಪರನರಹರಿ ಗತಿ ಪ್ರಿಯ5
--------------
ಕಾರ್ಪರ ನರಹರಿದಾಸರು
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ ಸ್ವೀಕರಿಸಬೇಕು ಕ್ಷಣದಿ ಪ ನಾಕಾರು ವಿಧಗಳಲಿ ನೀಪೇಳಿದುದನೆಲ್ಲ ಏಕಮನದಲಿ ಮಾಡಿದೆ ಕೃಷ್ಣ ಅ.ಪ ಬಾಲತನದಲಿ ಬಹಳ ಲೋಲನಾಗಿರು ಎಂದು ಪೇಳಲಿಲ್ಲವೆ ಯೋಚಿಸು ಕೀಳುಜೀವನದಲ್ಲಿ ಕಾಲವನು ಕಳೆ ಎಂದು ಪೇಳಿದುದ ನೀ ಮರೆತೆಯಾ ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ ಪೇಳಿದುದ ಮಾಡಿರುವೆನೊ 1 ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ ಪಾಪ ಪುಣ್ಯಕೆ ಕಾರಣ ಈ ಪರಿಯ ನಿನ್ನ ಸಂಕಲ್ಪವನು ಮೀರಲು ತಾಪಸೋತ್ತಮರಿಗಳವೆ ಆಪತ್ತು ಸಂಪತ್ತು ನಿನ್ನಧೀನಗಳೆಂದು ತಾಪತ್ರಯವ ಸಹಿಸಿದೆ 2 ಇಂದಿರಾಪತಿ ನಿನ್ನ ಒಂದೊಂದು ದಿನದಲಾ ನಂದ ಪೂಜೆಗೈಯಲು ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ ಇಂದು ಮಾಡುವರ್ಯಾರು ಸಂದೇಹವಿಲ್ಲವೆನಗೆ 3 ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ ಸಂತಸದಿ ಮುಳುಗಿರುವೆನೊ ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ ಶಾಂತಿಯನು ದಯಮಾಡೆಲೊ ಸಂತತ ನೀನು ಎನ್ನಂತರಂಗದಲಿರಲು ಕಂತೆಯಂದದಿ ಕಾಂಬೆನೊ ಜಗವ 4 ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು ಯಾರ ಭಯವೆನಗಿಲ್ಲವೊ ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು ಮೀರಿ ನಡೆಯುವುದಿಲ್ಲವೊ ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ ಯಾರಿರುವರೊ ಜಗದಲಿ ನಿನ್ಹೊರತು 5
--------------
ವಿದ್ಯಾಪ್ರಸನ್ನತೀರ್ಥರು
ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ ಗಗನ ಮಣಿಯ ಮೀರುವ ತೇಜದ ದತ್ತ ದಿಗಂಬರ ನೆನಿಪೆ ನೋಡಮ್ಮಾ ಪ ತವೆ ಸಂಜೆ ಧಾರೆಗಳು ಹೊಳೆವ ಲೊ ಪ್ಪುವ ಕೆಂಜೆಡಿಯಗಳು ಕುವಲಯ ಶಾಮನು ಕಿರೀಟ ಕುಂಡಲದಿಂದ ಠವಠವಿಸುವ ಮೊಗದಾ ನೋಡಮ್ಮಾ 1 ಕೇಶರ ಗಂಧವನು ನುಂಪಿಟ್ಟು ತ್ರಿಸರೋಜ ಮಾಲೆಯನು ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ ಘೋಷಿಪ ಘಂಟೆಗಳು ನೋಡಮ್ಮಾ 2 ಮೆಟ್ಟಿದ ಪಾದುಕೆಯಾ ರತನದ ಬೊಟ್ಟಿಲಿ ಜಪ ಮಾಲೆಯಾ ನೆಟ್ಟನೆ ನೆನೆವ ರುದ್ಧರಿಸಲು ತಾರಕ ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3 ಆದಿ ಯೋಗವನು ಪ್ರಕಟಿಸಿ ಹಾದಿಯ ತೋರುವನು ದ್ವಾದಶ ನಾದದ ಭೇದ ತೋರುವ ಶಂಖ ನೂಡುತ ನಲಿಯುತಲಿಹ ನೋಡಮ್ಮಾ 4 ಮೂರ್ತಿ ಚಿ-ಹ್ನವನು ದೋರುವಾ ಶ್ರೀ ಮನೋರಮ ದೇವನು ನೇಮದ ಮಹಿಪತಿ ನಂದನ ಪ್ರಭು ಭಕ್ತ ಕಾಮಿತಾರ್ಥವ ನೀಡುವ ನೋಡಮ್ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಗಿ ಬಂದನೋಗೋವಿಂದಾ | ನಮ್ಮ | ಬಾಗಿಲಿಗೆ ನಡೆತಂದಾ || ಬೇಗನೇ ಪವಡಿಸು ಕಂದಾ | ನಾನು | ಜೋಗುಳಪಾಡುವೆ ಛಂದಾ || ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ | ಯೋಗಿಗಳರಸನು ಝಗ ಝಗಿಸುವ ಪ ಜಡೆಯಲಿಗಂಗೆಯಧರಿಸಿ ಮುಂ | ಗುಡಿಯಲಿ ಚಂದ್ರನನಿಲಿಸಿ | ಫಣಿ ಕುಂಡಲ ವಿರಿಸಿ| ಬಿಡದೆ ವಿಷವನುಂಡು ಕಡುಗಪ್ಪುಗೋರಳಲಿ | ಒಡನೆರುಂಡಮಾಲೆಯ ಗಡಬಡಿಸುವ 1 ಇಟ್ಟವಿಭೂತಿಯತನುವಾ | ಶಿವ | ತೊಟ್ಟರುದ್ರಾಕ್ಷದಿ ಮೆರೆವಾ | ದುಟ್ಟಿಹಹುಲಿಚರ್ಮಾಂಬರವಾ | ನೆಟ್ಟನೆ ಡವರವ | ಮುಟ್ಟಿ | ನುಡಿಸುತಲಿ | ಛಟ ಫಟ ಧ್ವನಿಯಾರ್ಭಟದ ವೈರಾಗಿ2 ಕರದಿಕಪಾಲವ ಪಿಡಿದು | ಸಿಂಧು | ಗೋಕುಲದ ಶಿರಿನೋಡಲಾಗಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಜೋ ಕಂದÀರ್ಪಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ ಪ . ಜೋಜೋ ನಂದನ ಸುಕೃತದ ಫಲವೆಜೋಜೋ ಮುನಿಮನಮಧುಪ ಕಮಲವೆಅ.ಪ. ಪೊನ್ನ ತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟ್ಟಿ ಪಟ್ಟೆಯ ಮೇಲ್ವಾಸಿನಲಿಚಿನ್ನ ಶ್ರೀಕೃಷ್ಣನ ಮಲಗಿಸಿ ಗೋಕುಲದಕನ್ನೆಯರೆಲ್ಲ ತೂಗುತ ಪಾಡಿದರೆ 1 ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆಪೊಸಕೆಂದಾವರೆಯಂದದಿ ಮೃದುಪದನೆಬಿಸರುಹನಯನ ಬಿಡದಿರೆಮ್ಮ ಕಂದ 2 ಪೂತನಿ ಅಸುವನೀಂಟಿದ ಪೋತ ಶಿಶುವೆವಾತದೈತ್ಯನ ಗೆಲಿದದುಭುತ ಬಾಲಭೂತಗಳನಂಜಿಸುವರ್ಭಕನೆಓತೆಮ್ಮ ಶಿಶುಗಳ ಸಲಹೊ ಶ್ರೀಹರಿಯೆ 3 ಅಮೃತವನೂಡಿ ಸುರರ ಬೆಳೆಸಿದನೆಭ್ರಮಿತನಾದ ಕರಿವರನ ಕಾಯ್ದವನೆಸುಮುಖತನದಿ ಪರೀಕ್ಷಿತನ ಪೊರೆದನೆಮಮತೆಯಿಂದೆಮ್ಮ ಶಿಶುಗಳ ನೀ ಸಲಹೊ 4 ಪೊಳೆÀವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು-ಗಳ ಭಾವವಿಡಿದೆಯೆಂದೆಂಬರು ನಿನ್ನ5 ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ-ಹಿಮೆಯ ತುತಿಸುವ ಶ್ರುತಿವನಿತೆಯರುವ್ಯಾಮೋಹದಿ ಬಂದು ಲಲನೆಯರಾದರುಆ ಮುಗ್ಧೆಯರು ಪಾಡುತ ತೂಗಿದರೆ 6 ನೀ. ಶಿಶುವಾದರೆ ನಿನ್ನುದರದೊಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೊವೇಷಧರನಾಗಿ ಶಿಶುಗಳ ವಾಸಿನೊಲಿದೆವಾಸುದೇವ ನಮ್ಮ ಬಿಡದಿರು ಶ್ರೀ ಕೃಷ್ಣ 7 ಆವಳಿಸಲು ನಿನ್ನ ಗರ್ಭದೊಳಗೆ ಭುವ-ನಾವಳಿ ಗೋಪಗೋಪಿಯರನ್ನು ತೋರಿದೆಶ್ರೀವರ ನೀನೆಲ್ಲರ ತಂದೆಯಲ್ಲದೆಭಾವಜ್ಞರ ಮತದಿ ಶಿಶುವೆಂತಪ್ಪೆ 8 ಹಯವದನನಾಗಿ ವೇದವÀ ತಂದುಪ್ರಿಯಸುತ ಚತುರಮುಖಗೆ ಪೇಳಿದಖಿಳ ವಿ-ದ್ಯೆಯ ಖನಿ ನೀನೀಗಳೇನೆಂದು ನುಡಿಯಲ-ರಿಯದ ಬಾಲಕನಾದ ಬಗೆ ಪೊಸತಯ್ಯ
--------------
ವಾದಿರಾಜ
ಜೋಜೋ ಜೋಜೋ ಲಾಲಿ ಗೋವಿಂದ ಜೋಜೋ ಜೋಜೋ ಲಾಲಿ ಮುಕುಂದ ಜೋಜೋ ಜೋಜೋ ಲಾಲಿ ಆನಂದ ಜೋಜೋ ಜೋಜೋ ಲಾಲಿ ಗೋಪಿಯ ಕಂದ ಪ ಚಿನ್ನದ ತೊಟ್ಳಿಗೆ ರನ್ನದ ಮಲುಕು ಕನ್ನಡಿ ಹೊಳೆವೊ ಮೇಲ್ಕಟ್ಟಿನ ಬೆಳಕು ಸ್ವರ್ಣ ಮಂಟಪದಿ ರಾಜಿಪದಿವ್ಯ ಹೊಳಪು ಕರ್ನೇರಲಂಕರಿಸಿ ನಲಿಯುವ ಕುಲುಕು ಜೋ ಜೋ1 ಅರಿಶಿನ ಕುಂಕುಮ ಗಂಧ ಪುಷ್ಪಗಳು ಸರಸೀಜಾಕ್ಷಗೆ ಮುತ್ತಿನ್ಹಾರ ಪದಕಗಳು ಸುರರೊಡೆಯಗೆ ಪಟ್ಟೆ ಪೀತಾಂಬರಗಳು ಹರುಷದಿಂದಿರಿಸಿ ನಲಿವ ಸ್ತ್ರೀಯರುಗಳು ಜೋ ಜೋ2 ಮುತ್ತೈದೆಯರೆಲ್ಲ ಬಂದು ನೆರೆದರು ಉತ್ತಮ ಸ್ವರ್ಗ ಕಲಶವ ಪೂಜಿಸುವರು ಚಿತ್ತಜನಯ್ಯನ ಎತ್ತಿಕೊಂಡಿಹರು ಜೋ ಜೋ3 ಕೇಶವನನ್ನು ತನ್ನಿ ನಾರಾಯಣನ್ನ ಮಾಧವ ಗೋವಿಂದನನ್ನ ಸಾಸಿರ ನಾಮದ ವಿಷ್ಣು ಮಧುಸೂದನನ್ನ ಸೋಸಿಲಿ ತ್ರಿವಿಕ್ರಮ ವಾಮನನ್ನ ಜೋ ಜೋ 4 ಶ್ರದ್ಧೆಯಲಿ ಶ್ರೀಧರ ಹೃಷಿಕೇಶನನ್ನ ಪದ್ಮನಾಭನ ಕೊಳ್ಳಿ ದಾಮೋದರನ್ನ ಶುದ್ಧ ಮನದಿ ಸಂಕರ್ಷಣ ವಾಸುದೇವನನ್ನ ಪ್ರದ್ಯುಮ್ನನನು ತನ್ನಿ ಅನಿರುದ್ಧನನ್ನ ಜೋ ಜೋ5 ಪುರುಷೋತ್ತಮನ ಕೊಳ್ಳಿ ಅದೋಕ್ಷಜನನ್ನ ನಾರಸಿಂಹನ ತನ್ನಿ ಅಚ್ಚುತನನ್ನ ಸರಸದಿ ಜನಾರ್ದನ ಉಪೇಂದ್ರನನ್ನ ಹರುಷದಿಂದಲಿ ಕೊಳ್ಳಿ ಹರಿ ಶ್ರೀಕೃಷ್ಣನನ್ನ ಜೋ ಜೋ 6 ಹೀಗೆಂದು ತೂಗುತ ಜೋಗುಳ ಹಾಡಿ ನಾಗವೇಣಿಯರು ಸಂಭ್ರಮದಿಂದ ಕೂಡಿ ಆಗ ಕಮಲನಾಭ ವಿಠ್ಠಲನ್ನ ನೋಡೀ ಬೇಗ ರಕ್ಷೆಗಳನಿತ್ತರು ತ್ವರೆ ಮಾಡಿ ಜೋ ಜೋ 7
--------------
ನಿಡಗುರುಕಿ ಜೀವೂಬಾಯಿ
ಜ್ಞಾನ ಸಖೀಕೇಳೆ ಜ್ಞಾನಿಗಳಾರಾಧಿಸುವಾ | ಶ್ರೀನಿವಾಸನಾ ತಂದುತೋರೆ ತನುವಿನೋಳು ಪ ಹಲವು ಸಾದಿನದಿಂದ ಬಳಲಿ ಹಂಬಲಿಸಿದೆ | ಜಲ ಜಾಕ್ಷ ಮೈಯ್ಯ ದೋರನೇ 1 ಕಣ್ಣಿಗೆ ಕಣ್ಣಾಗದನಕಾ ಬಣ್ಣ ಬಣ್ಣದ ಚಿತ್ಸುಖಾ | ಕನ್ನಿಕಾ ರನ್ನಳೆ ತಂದು ತೋರೇ 2 ಸೋಹ್ಯ ಸೊನ್ನಿಯ ದೋರಿಸಿ ಬಾಹ್ಯರಂಗ ಮರೆಸಿ | ಸಹ ಜಾನಂದದ ಕೂಡಿಸೇ 3 ಗುರು ಮಹಿಪತಿ ಸ್ವಾಮಿ ಸ್ಮರಿಸುವರಂತರ್ಯಾಮಿ | ನೆರೆದು ತಾನೇ ತಾನಾದನೇ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜ್ಞಾನಕಿದೇ ನಡಿ ಕುರುಹು | ಶ್ರೀ ರಮಾನಾಥಾಂಘ್ರಿಯ ಕಾಣುವದರಿತು ಪ ಕೋಪ ತಾಪವ ಬಿಡಬೇಕು ಪಶ್ಚಾ | ತ್ತಾಪದಿ ವೈರಾಗ್ಯ ಘನ ಬಲಿಬೇಕು | ಪಾಪವಿರಹಿತಾಗಬೇಕು | ಗತಿ | ಸೋಪಾನವಾದಾ ಶಾಂತಿಯ ಜಡಿಬೇಕು 1 ಕರುಣ ಮೂರುತಿ ಆಗಬೇಕು ಸರ್ವ | ಧರೆಯು ಜನಕ ಪ್ರಿಯವಾಗಿರಬೇಕು | ನೆರೆ ಲೋಭವನು ಜರಿಬೇಕು ತನ್ನ | ತೆರನರಿ ತನ್ನವ ನೀಡಲಿಬೇಕು 2 ದುರಿತ ಭಯವ ಬಿಡಬೇಕು | ದುಃಖ | ದುರ್ವಾಣಿಯಲಿ ತಾ ಬಳಲದಿರಬೇಕು | ಹರಿಭಕ್ತಿ ದೃಢಗೊಳ್ಳಬೇಕು ಗುರು | ಬೋಧ ನಿಜವೆನಬೇಕು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರುಬಲವನು ನೀ ಪಡೆಯೋ ಪ ನಾದಗಳೆತ್ತನು ಹೂಡು ಅದಕೆ ತ್ರಿಗುಣದ ಕೂರಿಗೆ ಜೋಡುಬೋಧದ ಬೀಜವು ನೋಡು ಮನಸಿನ ಹೊಲದಲಿ ಬಿತ್ತಿಬಿಡು 1 ಕರ್ಮ ಕಸವ ಕಳೆದುನಿರ್ಮಳ ಬೆಳೆಗೊಂಡು ಗುರು ತಾ ಸ್ವರ್ಮಣಿ ಬಲಗೊಂಡು 2 ತೇಜರಾಶಿಗಳನೆಳೆದು ರಾಜಿಪ ರಾಜ ಕೊಳಗದಲಿ ಅಳೆದುಭೋಜನಕೆ ಎಡೆಮಾಡಿ ಚಿದಾನಂದ ಸಹಜ ಮೂರುತಿಗೂಡಿ3
--------------
ಚಿದಾನಂದ ಅವಧೂತರು
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ. ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1 ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2 ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3 ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4 ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಜ್ಞಾನಭ್ಯಾಸವ ಮಾಡಿ ಹೀಗೆ ತಾನೊಲಿದು ಜ್ಞಾನ ಗುರು ಖೂನಾಗುವ್ಹಾಂಗೆ ಧ್ರುವ ಮನದಲಿ ಬಾವ್ಹಾಂಗ ನೆನೆದಲಿ ಕಾಂಬ್ಹಾಂಗೆ ತನುವಿನಲಿ ನಿಜಗೊಂಡು ತಾ ನೆಲೆಯಗೊಂಬ್ಹಾಂಗೆ ಅನುದಿನನದಲ್ಯನುಭವಿಸುವ್ಹಾಂಗೆ ಕನಗರಸಿದಲಿ ಮನೋಹರ ಮಾಡುವ್ಹಾಂಗೆ 1 ಅರ್ವಿನಲಿರುವ್ಹಾಂಗೆ ಕುರುಹುದೋರುವ್ಹಾಂಗೆ ಇರುವ್ಹ ನೆಲೆಗೊಂಡು ತಾನೆವೆ ಸ್ಥಿರವಾಗುವ್ಹಾಂಗೆ ಮರವು ಮರದೀಡ್ಯಾಡುವ್ಹಾಂಗೆ ಗುರು ಚರಣ ಕಮಲವನು ಗುರುತಾಗುವ್ಹಾಂಗೆ 2 ಧ್ಯಾಸ ನೀಜ ಬಲುವ್ಹಾಂಗೆ ವಾಸನೆ ಪೂರಿಸುಹಾಂಗೆ ಭಾಸ್ಕರ ಕೋಟಿ ಪ್ರಕಾಶ ಭಾಸಿಸುವ್ಹಾಂಗೆ ಭಾಸ್ಕರ ಬಾಹ್ಯಾಂತ್ರಲಿವ್ಹಾಂಗೆ ಲೇಸಾಗಿ ಮಹಿಪತಿ ಸ್ವಾಮಿಒಲುವ್ಹಾಂಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜ್ಞಾನವನೆ ಕೊಟ್ಟು ಸಲಹೊ ಶ್ರೀ ಪ್ರಾಣರಾಯಾ ಪ ವಿಜ್ಞಾನ ಮಸ್ತಕ ಘನ ಗಿರೀಶಗೆ ರಾಜನೇ ಅ.ಪ. ಅಂಜನೆ ಕಂದನೆನಿಸಿ ರಘುಕುಲೇಂದ್ರನ ನಾಮದುಂಗುರ ಇಂದುಮುಖಿಯಳಿಗಿತ್ತು ಖಳನಂದನನ ಮಡುಹಿದ ಧೀರವಿಜ್ಞಾ£ À 1 ಭವಭಯಕೆ ನಿರ್ಭೀಕರಾನೆನಿಸಿ ಭಾನುಸುತನಾಶ್ರಯಿಸಿದವ ಭೇದವಿಲ್ಲದೆ ಬಹುಬಾಧೆ ಬಿಡಿಸಿ ಭೂಭಾರನಿಳುಹಿದೇ ಭಾವಿ ಬ್ರಹ್ಮ ಸುಜ್ಞಾನ 2 ದಾಸರೆಲ್ಲರೂ ಮಹಿಮ ದಾಸರಾಗುತಿರೆ ಸಮಯ ಸೂಸುತ ಶಶಿಯಂತೆ ವಸುಧಿಗಿಳಿದು ಪೋಷಿಸಿದೆ ತಂದೆವರದಗೋಪಾಲವಿಠಲನ ದಾಸಾ 3
--------------
ತಂದೆವರದಗೋಪಾಲವಿಠಲರು