ಒಟ್ಟು 277 ಕಡೆಗಳಲ್ಲಿ , 51 ದಾಸರು , 227 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು
ಹಿಂಡು ಉದ್ದಂಡ ನರಸಿಂಹನ ಕಂಡೆನಯ್ಯ ಪ ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ1 ಅರಿ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ2 ಸುರರು ಹೂಮಳೆಗರೆಯೆತರತರದ ವಾದ್ಯ ಸಂಭ್ರಮಗಳಿಂದಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವಕರುಣಾಳು ಕಾಗಿನೆಲೆಯಾದಿಕೇಶವನ3
--------------
ಕನಕದಾಸ
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ. ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ1 ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು2 ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವÀ ಮಾಡಿ ಕರೆದಳು 3 ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು4 ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು 5 ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು 6 ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು 7
--------------
ಗಲಗಲಿಅವ್ವನವರು
ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ ಪಾದ ಗಡನೆ ಪೋಗಿ ಪ ಧ್ಯಾನಧೃಢ ಅವನು ಇರುವ ಸ್ಥಾನ ಪೇಳುವೆ ಜಾಣೆ ಕೇಳೆ ಹಗಲು ಇರುಳು ಖೂನವಿಲ್ಲವನಿಹ್ಯ ಸ್ಥಳದಿ ತಾನೆತಾನಾಗಿ ಸೂಕ್ಷ್ಮದಿ ಶೂನ್ಯ ಪೀಠದಿ ವಾಸಿಪ ಜಾಣನ ಜವದಿಂ ಪೋಗಿ 1 ಅರಿದು ಮರೆದಿರೆ ಅವನ ಗುರುತು ಒರೆಯುವೆ ಜರಾಮರಣಿವಲ್ಲವಗೆ ಧರಿಸಿರುವಂತವತಾರ ತಿರುಗಲು ಮೂಡವು ಅಡಿಗಳು ನೆರಳೇ ಇಲ್ಲವು ನಿಲ್ಲಲು ಶರೀರವಿಲ್ಲದೆ ತೋರುವ ಪರಮನ ತ್ವರಿತದಿ ಹಿಡಿದು 2 ಪ್ರೇಮ ಸುಂದರೀ ಅವನ ನಾಮ ಪೇಳುವೆ ನೇಮದಿಂದ ಕೂಗುತಿಹ್ಯವು ಸಾಮಯಜುರಾದಿ ವೇದವು ಆಮಹಮಹಿಮನ ಘನತರ ನಾಮದ ನೆಲೆಯೇ ಸಿಗದಿದೆ ಕಾಮಿನಿಯಂಥ ಸ್ವಾಮಿ ಶ್ರೀ ರಾಮ ಸದ್ಗುರು ಪ್ರಭುವಿನ 3
--------------
ರಾಮದಾಸರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು
ಆಟಪಾಟವ ನೋಡಿ ಧನ್ಯರು ರಂಗಯ್ಯನಾಡ್ವಆಟಪಾಟವ ನೋಡಿ ಧನ್ಯರು ಪ.ಹೊಕ್ಕಳಲ್ಲಿರೊ ಮಗನು ಕಂಡರೆನಕ್ಕಾನೆಂಬ ಹೇಯ ಬಿಟ್ಟುಚಿಕ್ಕರೊಡನೆ ನಂದವ್ರಜದಿಮಕ್ಕಳಂತಲಿಪ್ಪ ರಂಗನಾಟ 1ಅಂಗಳದಲ್ಲಿದ್ದ ಪಂಕದಲ್ಲಿಮುಂಗೈಯ ಮುರಾರಿ ಕೃಷ್ಣಸಂಗದೆಳೆಯ ಮಕ್ಕಳೊಡನೆಹಿಂಗದೆ ಬೈಯ್ಯಾಟವಾಡುವಾಟ 2ಚಿನ್ನ ಬಾ ನೀ ಹಸಿದೆಯೆಂದುಚೆನ್ನ ನೀ ಉಣಿಸಿದರೊಲ್ಲದೆಕನ್ನವಿಕ್ಕಿ ಗೊಲ್ಲರ ಮನೆಯಬೆಣ್ಣೆಮೊಸರಸೂರ್ಯಾಡಿಮೆಲ್ಲುವಾಟ3ರಂಬಿಸಿಗೋಪಿನೀಲವರ್ಣದಬೊಂಬೆ ಬಾಲ ತೋಟಿ ಬೇಡೆನೆಕೊಂಬು ಕೊಳಲು ಸೆಳೆದು ಹೆಟ್ಟಿಕುಟ್ಟುವಡೆÉೂಂಬಿಕಾರ ವೀರಧೀರನಾಡುವಾಟ 4ಅಡಗಿದರ್ಭಕರ ಬಲ್ಪಿನಿಂದಲೆಹಿಡಿದುತಂದು ಚಿಣ್ಣಿ ಚಂಡನಾಡುತಬಡಿದು ಸೋಲಿಸಿ ದೂರು ಬರುವ ಮುನ್ನೆಹುಡಿಯ ಹೊರಳೇಳುವ ತೊಂಡೆಕಾರ ದೇವನಾಟ 5ಮೃತ್ತಿಕೆಯನುಂಬ ಮಗನ ಕಂಡುಮತ್ತೆಶೋದೆ ಅಕ್ಕಟೆಂದುತುತ್ತಿಸಿದ ಮಣ್ಣ ತೆಗೆಯಲಾಗಳೆಮತ್ರ್ಯನಾಕವಿಸ್ತಾರ ತೋರಿದ6ಹಲವು ಹಗ್ಗದಿಂ ಕಟ್ಟಿದಗೋಪಿಲಲನೆಗಚ್ಚರಿಯಾಗಿ ಉಲೂಖಲನ ಎಳೆದು ಮತ್ತಿಯ ಮರಗಳಛಲದಿ ಮುರಿದ ವಿಚಿತ್ರ ಚರಿತ್ರನ 7ಕರುಣದೋರಿ ಗೋಪಾಂಗನೇರತೋರದ ಮೊಲೆಯುಂಡ ವರಶಿಶುಗಳಉರುಳಗೆಡಹ್ಯವರೊಳು ನಲಿವದುರುಳಮಾಯಕಾರಖಿಳರೊಡೆಯನ8ಆರ ಪುಣ್ಯವೆಂತಂತೆ ಲೀಲೆಯತೆÉೂೀರಿ ಮುದ್ದು ಮೋಹವ ಬೀರಿದಸಾರಿದ ಭಕ್ತವತ್ಸಲ ನಮ್ಮಜಾರಚೋರ ಪ್ರಸನ್ವೆಂಕಟೇಶನಾಡುವ ಆಟ 9
--------------
ಪ್ರಸನ್ನವೆಂಕಟದಾಸರು
ಆಶಾವಿಡಿದು ಬಂದಿಹೆ ದೇಶಿಗ ನಾನು ಅಭಿಲಾಷೆ ಪೂರಿಸೆಮ್ಮಯ್ಯ ಶೇಷಗಿರಿಯ ತಿಮ್ಮ್ಮಯ್ಯ ಪ.ಘೊರ ಭವಾರಣ್ಯದಲ್ಲಿ ದಾರಾಪತ್ಯಬಂಧು ಜನರೆಂಬಕ್ರೂರಮೃಗಾಸ್ಯಕೆ ಸಿಲುಕಿ ದಾರಿವರಿಯೆನಾರಸಿಂಹ ನಿನ್ನವರು ತೋರಿದರು ಶ್ರೀಮಂಗಳಮೂರುತಿಯ ಕಂಡು ಸುಖಸಾರಾಮೃತವುಣ್ಣಲಾಗಿ 1ಒಡಲಿಗೋಸುಗವೃತ್ತಿಹಿಡಿದು ತಡವರಿಸುತಕಡೆಗಾಣದೊರಲಿ ಅಂಜ್ಯೋಡುತಿರಲುಒಡೆಯ ನಿನ್ನಯ ಸಿರಿಸಡಗರ ನಾಮಕೇಳಿಹುಡುಕುತ ನಲಿವಿಂದ ಬಡತನ ಹಿಂಗಲೆಂದು 2ಈಗಿದೆÉೀ ವೈಕುಂಠವೆಂದುಭೋಗಿವಾಸುದೇವನೆಂದುಬಾಗಿಶ್ರುತಿಸ್ಮøತಿಗಳು ಕೂಗುತಲಿವೆಯೋಗಿಪ್ರಸನ್ವೆಂಕಟ ಭಾಗವತರ ಪ್ರಿಯನೆಂದುಹೀಗೆ ಘನಗೋಳಿಡುತ ನಾ ನೀಗುವೆ ಚಿಂತೆಯನೆಂದು 3
--------------
ಪ್ರಸನ್ನವೆಂಕಟದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು
ಋಣವೆಂಬ ಸೂತಕವು ಬಹು ಬಾಧೆ ಬಡಿಸುತಿದೆ |ಗುಣನಿಧಿಯೆ ನೀ ಎನ್ನ ಕಡಹಾಯಿಸಯ್ಯ ಪಒಡಲಿನಾಸಗೆ ಪರರ ಕಡೆಯಿಂದ ಧನವನ್ನು |ತಡೆಯದಲೆ ತಂದು ಸಂತೋಷ ಪಡುವೆ ||ಕೊಡುವ ವೇಳೆಗೆಅವರಬಿರುನುಡಿಗಳನು ಕೇಳ್ವ |ಕಡು ಪಾಪವನ್ನು ನೀ ಕಡೆಹಾಯಿಸಯ್ಯ 1ಕೊಟ್ಟ ದೊರೆಗಳು ಬಂದು ನಿಷ್ಠುರದ ಮಾತಾಡಿ |ಎಷ್ಟು ಬೈಯ್ವರೊ ತಮ್ಮ ಮನದಣಿಯಲು ||ದಿಟ್ಟತನವಿಲ್ಲದಲೆ ಕಳೆಯಗುಂದಿದೆನಯ್ಯ |ಸೃಷ್ಟಿಗೊಡೆಯನೆ ಎನ್ನ ಕಷ್ಟ ಪರಿಹರಿಸೊ 2ಆಳಿದೊಡೆಯನ ಮಾತಕೇಳಿನಡೆಯಲು ಬಹುದು |ಉಳಿಗವ ಮಾಡಿ ಮನದಣಿಯ ಬಹುದು ||ಕಾಳೆಗವ ಪೊಕ್ಕು ಕಡಿದಾಡಿ ಜಯಿಸಲು ಬಹುದು |ಪೇಳಲಳವಲ್ಲ ಋಣದವಗೊಂದು ಸೊಲ್ಲ 3ಹರಿವ ಹಾವನು ಹಿಡಿದು ತಲೆಗೆ ಸುತ್ತಲು ಬಹುದು |ಮುರಿವ ಮಾಳಿಗೆಯ ಕೈಯೊಳು ನಿಲಿಸ ಬಹುದು ||ಉರಿವ ಉರಿಯೊಳು ಹೊಕ್ಕು ಹೊರ ಹೊರಟು ಬರಬಹುದು |(ಬೆರೆದು) ಸೇರಲು ಬಹುದು ವೈರಿಗಳ ಮನೆಯ 4ಹೆತ್ತಸೂತಕಹತ್ತುದಿನಕೆ ಪರಿಹಾರವು |ಮೃತ್ಯು ಸೂತಕವು ಹನ್ನೆರಡು ದಿನವು ||ಮತ್ತೆ ಋಣಸೂತಕವು ಜನ್ಮಜನ್ಮಾಂತರದಿ |ಹತ್ತಿಕೊಂಡಿಹುದು ಎತ್ತಲು ಹೋಗಗೊಡದೆ 5ಅವರದ್ರವ್ಯವ ದಾನ-ಧರ್ಮವನು ಮಾಡಿದರೆ |ಅವರಿಗಲ್ಲದೆ ಪುಣ್ಯ ಇವರಿಗುಂಟೆ ||ಅವರದ್ರವ್ಯದಿ ತೀರ್ಥ-ಯಾತ್ರೆಯನು ಮಾಡಿದರೆ |ಅವರಮನೆಬಾಡಿಗೆಯ ಎತ್ತಿನಂದದಲಿ6ಬಂಧುಗಳ ಮುಂದೆನ್ನ ಬಹುಮಾನಗಳು ಹೋಗಿ |ಕಂದಿ ಕುಂದಿದೆನಯ್ಯ ಕರುಣಾನಿಧೆ ||ಇಂದಿರಾರಮಣ ಶ್ರೀ ಪುರಂದರವಿಠಲನೆ |ಇಂದೆನ್ನ ಋಣದಿಂದ ಕಡೆ ಹಾಯಿಸಯ್ಯ 7
--------------
ಪುರಂದರದಾಸರು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು
ಎಷ್ಟು ಬಡಿವಾರೊ ನಿನ್ನಶ್ರೇಷ್ಠ ಸುಖಪೂರ್ಣ ಫನ್ನಅಷ್ಟ ಗುಣವನುಅತಿಗಳದ್ಯೊ ಯಾದವರನ್ನ ಪ.ಕುಕ್ಷಿಲೋಕನೆ ನಿನಗೆ ರಕ್ಷೆ ಇಟ್ಟಾಳೊಗೋಪಿವಕ್ಷ ಸ್ಥಳದಲ್ಲಿಹ ಲಕುಮಿಯುವಕ್ಷ ಸ್ಥಳದಲ್ಲಿಹ ಲಕುಮಿಯುಬೆರಗಾಗಿ ವೀಕ್ಷಿಸುತಲಿ ನಗತಾಳೊ 1ಅಂಧಕಾರದಿ ಜಲವೃಂದದಿ ದುಡುಕಿಸಿಒಂದೇ ಕೂಸಲ್ಲೊ ಪ್ರಳಯದಿಒಂದೇ ಕೂಸಲ್ಲೊ ಪ್ರಳಯದಿ ರಕ್ಷವತಂದು ಇಟ್ಟವರು ನಿನಗಾರೊ 2ಪುಟ್ಟ ಕೂಸೆಂದು ಸ್ತನ ಕೊಟ್ಟ ನಾರಿಯ ಕೊಂದೆಇಷ್ಟು ಕರುಣೆ ನಿನಗಿಲ್ಲೊಇಷ್ಟು ಕರುಣೆ ನಿನಗಿಲ್ಲೊ ದಯಾಬುದ್ದಿಕೆÀಟ್ಟು ಹೋಯಿತೇನೊ ಪ್ರಳಯದಿ 3ಕೃಷ್ಣ ಕೃಷ್ಣ ಎನುತ ಬಿಟ್ಟಳು ಪ್ರಾಣವದೃಷ್ಟಿಗೆ ಬೀಳೋದು ತಡವೇನೊದೃಷ್ಟಿಗೆ ಬೀಳೋದು ತಡವೇನೊ ನಿನ್ನವ್ಯಾಪ್ತಿ ಕೆಟ್ಟು ಹೋಯಿತೇನೊ ಪ್ರಳಯದಿ 4ಮಂದಮತಿಯರಗಂಡಮುಂದಕ್ಕೆ ಬಿಡಲೊಲ್ಲಇಂದಿರಾ ಪತಿಯೆ ಗತಿಯೆಂದಇಂದಿರಾ ಪತಿಯೆ ಗತಿಯೆಂದ ಭಕ್ತಳಕೊಂದೆಯಲ್ಲೊ ಪಾಪ ಬರಲಿಲ್ಲ 5ಕಡಲಶಾಯಿ ನಿನ್ನ ಬೆಡಗು ಎಷ್ಟು ಹೇಳಲಿಹಿಡ ಹಿಡಿದುಲಾಳಿಕೊಡುವಾಗಹಿಡ ಹಿಡಿದುಲಾಳಿಕೊಡುವಾಗ ಗೊಲ್ಲರಹುಡುಗರಿಗಿಂತ ಕಡೆಯೇನೊ 6ವೀರ ರಾಮೇಶ ನಿನ್ನಚಾರುಗುಣಗಳನೆಲ್ಲಸೂರಿಬಿಟ್ಟೇನೊ ಸುರರಿಗೆಸೂರಿಬಿಟ್ಟೇನೊ ಸುರರಿಗೆ ನಿನಗಿನ್ನುಯಾರೂ ಮನ್ನಿಸದ ಪರಿಯಂತ 7
--------------
ಗಲಗಲಿಅವ್ವನವರು
ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ ಪಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|ಕುಂದನ ಪಾಡುತ ಚದುರೆಯರೆಲ್ಲ 1ಹೊಂಗೊಡ ಬೆಳಗಿಟ್ಟು ಪೊಸಮೊಸರನೆತುಂಬಿ|ರಂಗನೀಲದ ಕಡೆಗೋಲನಿಟ್ಟು ||ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |ರಂಗನ ಪಾಡುತ ಚದುರೆಯರೆಲ್ಲ 2ಬಡನಡು ಬಳುಕುತ ಕುಚಗಳಲ್ಲಾಡುತ |ಕಡಗ-ಕಂಕಣ ಝಣಝಣರೆನ್ನುತ ||ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|ಲ್ಗಡಲೊಡೆಯನ ಪಾಡುತ ಚದುರೆಯರು 3ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |ಹಸಿದು ಆಕಳಿಸಿ ಬಾಯಾರುತಲಿ ||ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |ಪ್ರಾಣಪದಕ ಕೃಷ್ಣನಿಗೆ ಕೊಡಲು ||ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||ಜಾಣ ಪುರಂದರವಿಠಲನಪ್ಪಲುಗೋಪಿ5ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |ತಟ್ಟೆಯೊಳಾರತಿಗಳ ಬೆಳಗಿ ||ಥಟ್ಟನೆ ಉಪ್ಪು-ಬೇವುಗಳನಿವಾಳಿಸಿ|ತೊಟ್ಟಿಲೊಳಿಟ್ಟು ಮುದ್ದಾಡುವಳೊ 6ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |ಗುಮ್ಮ ಬಂದಿದೆ ಸುಮ್ಮನಿರು ಎನುತ ||ಅಮ್ಮಿಯನೀಯುತ ಅಮರರನಾಳ್ದನ |ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7ಏಸೊ ಬೊಮ್ಮಾಂಡವ ರೋಮದೊಳಿರಿಸಿದ |ವಾಸುದೇವನನೆತ್ತಿ ಕೊಂಬುವಳೊ ||ನಾಶರಹಿತನಾಯುಷ್ಯ ಹೆಚ್ಚಲೆಂದು |ರಾಶಿದೈವಕೆ ತಾ ಬೇಡಿಕೊಂಬುವಳೊ 8ಮಾಧವಬಾ ಮದುಸೂದನ ಬಾ ಬ್ರ-|ಹ್ಮಾದಿವಂದಿತಹರಿಬಾ ಯೆನುತ ||ಆದಿ ಮೂರುತಿ ಶ್ರೀ ಪುರಂದರವಿಠಲನ |ಆದರದಲಿ ಮುದ್ದಾಡುವಳೊ 9
--------------
ಪುರಂದರದಾಸರು
ಒಗತನದೊಳು ಸುಖವಿಲ್ಲ ಒಲ್ಲೆಂದರೆ ನೀ ಬಿಡೆಯಲ್ಲಜಗದೊಳುಹಗರಣಮಿಗಿಲಾಯಿತು ಪನ್ನಂಗನಗನಗರ ನಿವಾಸಮೂರು ಬಣ್ಣಿಗೆಯ ಮನೆಗೆ ಮೂರೆರಡು ಭೂತಗಳುಐದುಮಂದಿ ಭಾವನವರು ಐದುಮೈದುನರು ಕೂಡಿಆರಾರು ಎರಡುಸಾವಿರ ದಾರಿಲಿ ಹೋಗಿ ಬರುವರುಒಬ್ಬ ಬೆಳಕು ಮಾಡುವ ಮತ್ತೊಬ್ಬ ಕತ್ತಲೆಗೈಸುವಆರುಹತ್ತರ ಮೂಲದಿ ಆರುಮಂದಿ ಬಿಡದೆ ಎನ್ನಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳುಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದುಕಟ್ಟಿಮನೆಯೊಳು ನಾಳಿನ ಗ್ರಾಸಕ್ಕನುಮಾನ ಸಂದೇಹವಿಲ್ಲನಿನ್ನ ಹೊಂದಿ ಇಷ್ಟು ಬವಣೆಯನ್ನು ಬಡಲೀ ಜನರು
--------------
ಗೋಪಾಲದಾಸರು
ಕುಸುಮನಾಭನ ಮಡದಿಯರುಹೆಸರ್ಹೇಳ ಅರ್ಥಿಲಿಹಸುಳೆಯರು ಹಾಡಿ ಪಾಡಿಕುಶಲದಿಕೋಲಹೊಯ್ದುಪ.ಬಂದು ರುಕ್ಮಿಣಿ ಭಾವೆಗೆವಂದಿಸಿ ಭದ್ರೆ ದ್ರೌಪತಿಮಂದಾರಮಲ್ಲಿಗೆ ಸಂಪಿಗೆಚಂದದಿಸೂರ್ಯಾಡಿ1ಕೃಷ್ಣನರಸಿಯರು ಇಬ್ಬರುಬುಕ್ಕಿಟ್ಟುಸೂರ್ಯಾಡಿಗಟ್ಟಿ ಕಂಕಣದ ಕರದಲೆಮುಟ್ಟಿ ಆಲಂಗಿಸುತ 2ಹರದಿರುಕ್ಮಿಣಿ ಕೈಯಮರಿಯದಲೆ ಹಿಡಿದು ದ್ರೌಪತಿದೊರೆಯರ ಹೆಸರ್ಹೇಳಿಮುಂದಕೆ ಬರಬೇಕೆಂದರು 3ಸತ್ಯಭಾಮೆಯ ಕೈಯಅರ್ಥಿಲೆ ಹಿಡಿದು ದ್ರೌಪತಿಮತ್ತೆ ಪತಿಗಳ ಹೆಸರುವಿಸ್ತರಿಸೆಂದರು 4ವಾರಿಜಾಕ್ಷನಹೆಸರುನಾರಿಯರಿಬ್ಬರು ಹೇಳಿಶ್ರೀ ರಾಮೇಶನ ಮಡದಿಯರುಏರಿದರು ಆಸನವ 5
--------------
ಗಲಗಲಿಅವ್ವನವರು
ಕೊಡಬಹುದೇ ಮಗಳ - ಸಮುದ್ರರಾಜಕೊಡಬಹುದೇ ಮಗಳ ಪನಡೆದರೆ ಬಡವಹಳೆಂಬ ಕುಮಾರಿಯ |ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನುಅ.ಪಕುರುಹಬಲ್ಲವರಾರು, ಕುಲಗೋತ್ರವಾವುದೊ |ಅರಿತ ರಾಯರೊಳಗೆ ಆರ ಮಗನೊ ಇವ |ವರುಶಭಾಂಗಿಗೆ ತಕ್ಕ ವರನಹುದೆ ಇವ |ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |ಅರುಣಚ್ಛಾಯೆಯ ರೇಖೆ ಅರಳಿಸಿಹಾರುವ ||ಗರುಡಹಕ್ಕಿಯ ನೆಚ್ಚಿದ - ಎದೆಯ ಮೇಲೆ |ಭರದಿ ಒದೆಯ ಮೆಚ್ಚಿದ - ಘೋರರೂಪ |ಧರಿಸಿ ಕೋಪದಿ ಹೆಚ್ಚಿದ - ಕರೆವ ಗೋವ |ಕರುಗಳ ಕೊರಳುಚ್ಚಿದ - ಸಂಸಾರದೊಳ್ |ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ 1ಅಡಿಗಡಿಗೆ ಹತ್ತು ಅವತಾರವ ಮಾಡಿದ |ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |ಗಿಡದ ಮರೆಯಲಿದ್ದು ಕಪಿಯ ಕೊಂದನುಹೊಲ್ಲ |ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |ಮಡುಹಿದ ಮಾವನ ಮಧುರೆಯೊಳಗೆಖುಲ್ಲ |ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||ಕಡಹದ ಮರವೇರಿದ -ಅವರಮಾನ - |ಕೆಡಿಸಿ ಭಂಡರ ಮಾಡಿದ - ದಧಿಕ್ಷೀರ - |ಗಡಿಗೆ ಸೂರೆಯ ಮಾಡಿದ - ಕಾಳಿಂಗನ - |ಮಡುವ ಕಲಕಿ ನೋಡಿದ - ಸ್ಯಂದನವನು |ನಡೆಸುವ ಕಾರಣ ನರಗೆ ಸಾರಥಿಯಾದ 2ಊದುತ ಕೊಳಲನರಣ್ಯದೊಳ್ ಗೋಗಳ |ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |ಓದನವನು ಬೇಡಿ ಹೊಟ್ಟೆಯ ಹೊರೆದನು |ಯಾದವರೊಳಗಾಡಿ ಎಂಜಲನುಂಡನು |ಕ್ರೋಧದಿಂದ ಸುರರ ಕೊಂದು - ಕೊಂದಿಡುವನು |ಪಾದರಿ ಪೆಣ್ಣುಗಳೊಳಗಿರುತಿಪ್ಪನುಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |ಭೂದಿವಿಜರ ಕೂಡ ಬಿಕ್ಷಕೆ ಪೋಪನು ||ಮೇದಿನಿಯೊಳಗಿರುವ - ಮಸ್ತಕವು ಬೋ - |ಳಾದವರೊಳಗಿರುವ - ನೋಡಲು ಭೇದಾ - |ಭೇದದಂದದಿ ತೋರುವ - ಸಭೆಯೊಳಗೆ |ಬೈದರೆ ಮೈದೋರುವ ಶೇಷಶಾಯಿ - |ಯಾದಂಥಪುರಂದರ ವಿಠಲನೆಂದರಿಯದೆ3
--------------
ಪುರಂದರದಾಸರು