ಒಟ್ಟು 582 ಕಡೆಗಳಲ್ಲಿ , 76 ದಾಸರು , 431 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ 1 ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು 2 ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು 3
--------------
ಕೆಳದಿ ವೆಂಕಣ್ಣ ಕವಿ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಪಶುಪತಿ ಸುಲೋಲ ನಿನಗೊಪ್ಪಿತರು ನೂರು ಜಪಶ್ವಾಸ1ಯೋಗಭೋಗಾರೋಗ್ಯ ಭಕ್ತಿಕರ್ಮಾಂತರಾಯಾಗಮವನಳಿದುರ ಪರವಶವಾಗಿಸಾಗಿ ಸಾಧನಗಳಳವಟ್ಟು ಶ್ರೀ ಗುರುಕರುಣವಾಗುವಂದದಿ ನಡೆದ ಸನ್ಮಾರ್ಗಗಳಿಗೆ 2ಕರುಣದಿಂ ಚಿಕನಾಗಪುರದಿ ಭಕುತರಿಗಾಗಿಗುರುವಾಸುದೇವಾರ್ಯನೆನಿಸಿ ಮ'ಮೆಗಳಾಮೆರೆವ ವೆಂಕಟರಮಣ ಭಾವರಾಮೇಶ್ವರವರತನಯ ತದ್ಯಹಸ್ತಂಭಕೃತ ಸದನಾ 3
--------------
ವೆಂಕಟದಾಸರು
ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ ಮಾನಸಾನಂದಿಸೋ ಶತ ಭಾನುತೇಜನೇ ಪ ಹನ ಚಿತ್ರಭಾನು ದನುಜಾರಿ ಹರಿ ಅ.ಪ ಮಾಡುವೆನಯ್ಯ ಇಂದುವದನಾ ಶ್ರೀ ಪುಲಿಗಿರಿ ಮಂದಿರ ಮಂದರಧರ 1 ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟಫಲ ದಾಯಕ ತ್ರಿವಿಷ್ಟಪಾಧಿಪಾನುಭವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಉರಿಹಸ್ತ ಬೇಡಲು ಲೋಕಮೋಹಿನಿಯ ರೂಪು ಸ್ವೀಕರಿಸಿ ಶಿವನಕಾಯ್ದೆ 3 ಕೀರ್ತಿ ನೋಡಿಸೋ ನಿನ್ನಯಮೂರ್ತಿ ಬೇಡಿಸದಿರು ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ಶುಭ ವೇಷವಿಪುಲ ದುರಿತಗಣ ಶೋಷಣ ಶ್ರೀವರದವಿಠಲ 5
--------------
ಸರಗೂರು ವೆಂಕಟವರದಾರ್ಯರು
ಪಾರ್ಥಸಾರಥಿ ನಿಮ್ಮ ಸೇವೆಯ ಮಾಡಿ ಸಾರ್ಥಕವಾದೆನು ಪ ವಾರ್ಥಿಪುರುಷನೆ ನಿಮ್ಮ ಕೀರ್ತಿಯ ಕೊಂಡಾಡಲೆನಗೆ ಶಕ್ತಿಯ ವಿಸ್ತರಿಸೆನಗೆ ಯುಕ್ತಿಯ ಅ.ಪ ಆಚಾರ್ಯರಿಗೆ ಅಭಿವಂದನೆ ಮಾಡಿ ಅಜನರಾಣಿಯ ಭಜಿಸುವೆ ಅನಾದಿಕ್ರಮವನು ಪೇಳುವೆ 1 ಕೈರವಿಣಿಯಲ್ಲಿ ಸ್ನಾನವಮಾಡಿ ಕೈಮುಗಿದು ಮಾರುತಿಗೆ ನಾ ಕರುಣಿಆಚಾರ್ಯರಿಗೆ ವಂದಿಸಿ ಕರಿಯಬಳಿಗೆ ನಾ ಬಂದೆನು ನಾ ಕರಿಯ ಬಳಿಗೆ ಬಂದೆನು 2 ದವನೋತ್ಸವದ ಮಂಟಪಂಗಳು ಭಾಗವತರ ಭವನವು ಬಲವಬಳಸಿ ಭಕ್ತವತ್ಸಲನ ಚೆಲುವರಥವನು ನೋಡಿದೆ ನಾ ಶೇಷರಥವನು ಸೇವಿಸಿ 3 ಮೂಡಬೀದಿಯ ಸುತ್ತಿಬಂದು ಮಹದಾಹ್ವಯರನು ಸೇವಿಸಿ ಮಹಾನುಭಾವನ ವಿಮಾನವನು ನೋಡಿ ಮಾನವನ್ನು ಬಿಟ್ಯೆನೊ ದೇಹಾಭಿಮಾನವನ್ನು ಬಿಟ್ಯೆನೊ 4 ಕಾರಿಮಾರಿ ಪುತ್ರರಿಗೆ ಬಾರಿಬಾರಿಗೆ ವಂದಿಸಿ ವಾರಿಜಾಕ್ಷನ ಗೋಪುರವ ನೋಡಿ ಘೋರಪಾಪವ ಕಳೆದೆನೊ ಯನ್ನ ಘೋರಪಾಪವ ಕಳೆದೆನೊ 5 ಗರುಡಕಂಭವ ದೀಪಸ್ತಂಭವು ವಾಹನದ ಮಂಟಪಂಗಳು ವಾರಿಜನಾಭನ ಪಕ್ಷಿವಾಹನನ ನೋಡಿ ವಂದನೆಯ ಮಾಡಿದೆ ಅಭಿವಂದನೆಯ ನಾ ಮಾಡಿದೆ 6 ತೋರಣದ ಬಾಗಿಲನು ದಾಟಿ ವಾರುಣದೆದುರಲಿ ವಂದಿಸಿ ವಾರಿಜಾಕ್ಷಿ ಶ್ರೀವೇದವಲ್ಲಿಯ ಸಾರೂಪ್ಯವನು ನಾ ಬೇಡಿದೆ ಸಾಯುಜ್ಯವನು ನಾ ಬೇಡಿದೆ 7 ಭಕ್ತಿಸಾರರ ಚರಣಕೆರಗಿ ಹಸ್ತಗಿರೀಶನ ವಂದಿಸಿ ಸುತ್ತಿ ಗರುಡಕಂಬವನ್ನು ಮತ್ತೆ ಸಿಂಹನ ಸೇವಿಸಿ ದಿವ್ಯ ನಾರಸಿಂಹನ ಸೇವೆಸಿ 8 ವಿಷ್ಣುಚಿತ್ತರ ಪುತ್ರಿಯನ್ನು ಅರ್ಥಿಯಿಂದಲೆ ಸೇವಿಸಿ ಮುಕ್ತಿದಾಯಕ ರಂಗನ ಪಾದಕೆ ಮುದದಿ ವಂದನೆ ಮಾಡಿದೆ ನಾ ಮುದದಿ ವಂದನೆ ಮಾಡಿದೆ 9 ಯಾಮುನಾಚಾರ್ಯರಿಗೆ ವಂದಿಸಿ ಕಾಂಚೀಪೂರ್ಣರಿಗೆರಗುವೆ ವೇದಾಂತಾಚಾರ್ಯರ ವಂದನೆ ಮಾಡಿ ಅನಾದಿ ಪಾಪವ ಕಳೆದೆನೊ ನಾ ಅನಾದಿ ಪಾಪವ ಕಳೆದೆನೊ 10 ಭಾಷ್ಯಕಾರರ ಚರಣಕೆರಗಿ ವರಯೋಗಿಗಳಿಗೆ ವಂದಿಸಿ ಕುಲೇಶ ದಾಶರಥಿಗೆ ವಂದಿಸಿ ದ್ವಾರಪಾಲಕರ ನೋಡಿದೆ ನಾ ದ್ವಾರಪಾಲಕರ ನೋಡಿದೆ 11 ಗಂಟೆಬಾಗಿಲ ದಾಟಿ ಶ್ರೀವೈಕುಂಠವಾಸನ ಭಕ್ತರು ಹದಿ ನೆಂಟು ಆಳ್ವಾರುಗಳ ಸೇವಿಸಿ ಕಂಟಕಗಳ ಕಳೆದೆನೊ ಭವ ಕಂಟಕಗಳ ಕಳೆದೆನೊ 12 ಮಾಧವ ಅನಂತ ಶ್ರೀಪದ್ಮನಾಭನ ಸೇವಿಸಿ ಶ್ರೀರಾಮ ಲಕ್ಷ್ಮಣ ಭರತ ಶತ್ರುಘ್ನ ಸೀತೆಯನು ನಾ ನೋಡಿದೆ ಲೋಕಮಾತೆಯನು ನಾ ಬೇಡಿದೆ 13 ಆದಿಶೇಷನ ಮೇಲೆ ಮಲಗಿದ ಅನಾದಿರಂಗನ ಸೇವೆಗೆ ಕುಲ ಶೇಖರರ ಸ್ಥಾನದಲಿ ನಿಂದು ಯದುಕುಲೇಶನ ನೋಡಿದೆ ನಾನೆದುಕುಲೇಶನ ನೋಡಿದೆ 14 ಅನಿರುದ್ಧ ಸಹಿತಲೆ ಎಡದಿ ಸಾತ್ಯಕಿ ಪಂಚಮೂರ್ತಿಗಳ ನಡುವೆ ಪಾರ್ಥಸಾರಥಿ ಯೆಡಬಲದಿ ಶ್ರೀದೇವಿ ಭೂದೇವಿ 16 ಆದಿಶೇಷನ ಮೇಲೆ ತನ್ನಯ ಪಾದವನ್ನು ಪ್ರಸÀರಿಸಿ ವಿ ಅಂದುಗೆ ಗೆಜ್ಜೆ ಕುಂದಣದ ಪಾಡಗಗಳು ಆನಂದದ ಪಾಡಗಗಳು 17 ಕನ್ನಡಿಯಂದದಿ ಕಣಕಾಲುಗಳು ಉನ್ನತವಾದ ಪೀತಾಂಬರವು ಪನ್ನಗಶಯನನ ವಡ್ಯಾಣದಲಿ ಪರಮಮೂರ್ತಿಯ ಸರಗÀಳು ಶ್ರೀಮೂರ್ತಿ ಸರವನು ಸಿಕ್ಕಿಸಿ 18 ದುಷ್ಟನಿಗ್ರಹವನ್ನು ಮಾಡಿ ಶ್ರೇಷ್ಠರನ್ನು ಪರಿಪಾಲಿಪ ಶ್ರೀ ಕೃಷ್ಣಮೂರುತಿಯ ಎಡದ ಭಾಗದಿ ಶ್ರೇಷ್ಠವಾದ ಖಡ್ಗವು ಸರ್ವಶ್ರೇಷ್ಠವಾದ ಖಡ್ಗವು 19 ಸಿಂಧುರಾಜನ ಕೊಲ್ಲುವುದಕಾಗಿ ಅಂದು ಚಕ್ರವ ಕಳುಹಿದೆ ಒಂದು ಕೈಯಲಿ ಪಾದವ ತೋರುತ ಮತ್ತೊಂದು ಕೈಯಲಿ ಶಂಖವು ಅನಂದದಿಂದಲೆ ಶಂಖವು 20 ಸೃಷ್ಟಿಯೆಳಗ್ಹದಿನಾಲ್ಕು ಲೋಕವ ಪಕ್ಷಿವಾಹನವಂ ಬಿಟ್ಟು ವಕ್ಷಸ್ಥಳದಲಿ ಲಕ್ಷ್ಮಿದೇವಿಯ ರತ್ನಾದ್ಹಾರದಪದಕವು ನವರತ್ನದ್ಹಾರದ ಪದಕವು 21 ಕಂಠದೊಳಗಿಟ್ಟ ಕೌಸ್ತುಭಮಣಿ ಎಂಟುಪುಷ್ಪದ ಹಾರವು ವೈ ಕುಂಠವಾಸನ ಸೇವಿಸಿದರೆ ಕಂಟಕಂಗಳು ಕಳೆವುದು ಭವಕಂಟಕಗಳು ಕಳೆವುದು 22 ಕುಂದಕುಸುಮದಂತೆ ದಂತವು ಪವಳದಂತೆ ಅಧರಕಾಂತಿಯು [ಚೆಂದದಿ] ಪೊಳೆವ ಕರ್ಣಕುಂಡಲ ಚೆಲುವ ನಾಸಿಕದಂದವು ತಿಲಕುಸುಮನಾಸಿಕದಂದವು 23 ದೀಪದಂದದಿ ಕರುಣನೇತ್ರವು ಚಾಪದಂದದಿ ಪುಬ್ಬುಗಳಲಿ ವಿವೇಕವಾಗಿ ತೋರ್ಪುದು 24 ಪದುಮನಾಭನ ಸೇವಿಸಿದವರಿಗೆ ಒದಗಿ ಬರುವುದು ಮುಕ್ತಿಯು ಎಲ್ಲರಿಗೊದಗಿ ಬರುವುದಿಷ್ಟಾರ್ಥವು 25 ಪಾದದಿ ಕೇಶದ ಸೇವೆಯನು ಮಾಡಿ ಅನಾದಿಪಾಪವ ಕಳೆದೆನೊ ವೇದಮೂರುತಿ ವೆಂಕಟಕೃಷ್ಣನೆ ಪಾದವನ್ನು ತೋರಿಸು ನಿಮ್ಮ ಶ್ರೀ ಪಾದವನ್ನು ತೋರಿಸು 26
--------------
ಯದುಗಿರಿಯಮ್ಮ
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಪಾವನ ಮೂರ್ತಿಯೇ ಪ ಸತ್ಯಜ್ಞಾನಾನಂದತೀರ್ಥ ನಿನ್ನಯ ಉತ್ತಮ ಹಸ್ತವನಿಟ್ಟು ಅಭಯಾ ಭಕ್ತಗೆ ಅಂಕಿತವಿತ್ತು ಕಾಯೋ ಕರುಣಾನಿಧಿಯೇ 1 ಆನಂದತೀರ್ಥರ ಗ್ರಂಥಶ್ರವಣ ನೀನೆ ಮಾಡಿಸೆನ್ನೊಳಿಟ್ಟು ಕರುಣಾ ಮಾನಾಭಿಮಾನವು ನಿನ್ನ ಈ ದಾಸನಾ 2 ತಡವ್ಯಾಕೆ ತ್ವರಾ ಪಡೆಯೋ ಹನುಮೇಶವಿಠಲ ಪ್ರಿಯ ಕುವರಾ 3
--------------
ಹನುಮೇಶವಿಠಲ
ಪಾಲಿಸೊ ಪತಿತಪಾವನ್ನಾ ನಿನ್ನ ಪಾಲಿಗೆ ಬಂದೆ ಮೋಹನ್ನಾ -ಆಹಾ ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ ಬಂದೆನೊ ನಿನ್ನ ಹಂಬಲಿಸಿ ನಾನು ನೊಂದು ಸಂಸ್ಕøತಿಯಲ್ಲಿ ಸೂಸಿ ಈಸಿ ಮುಂದಣ ನೆಲೆಗಾಣೆ ಗುಣಿಸಿ ಏನೇ ನೆಂದು ಪೇಳಲೊ ವಿಸ್ತರಿಸಿ -ಆಹಾ ಮಂದರಧರ ನಿನ್ನ ಮಂದಿರದ ದಾಸಿ ಕಂದನು ನಾನೆಲೊ ಕಣ್ತೆರೆದು ನೋಡೊ 1 ಪೊಂದಿದೆ ಭಾರವವೊಹಿಸು ಪ್ರತಿ ಬಂಧಕವ ಪರಿಹರಿಸು ನಿನ ಗೊಂದಿಸುವೆ ಕೊಡು ಲೇಸು ಅತ್ಯಾ ನಂದದಲ್ಲಿ ಚಿತ್ತವಿಡಿಸು -ಆಹಾ ಇಂದಿರಾ ಮಂದಿರಾ ಸುಂದರ ಯೋಜನ ಗಂಧಿಯ ಬಸುರಿಲಿ ಬಂದ ಭವದೂರಾ 2 ನಿಂದ್ಯ ಕರ್ಮವು ಮಾಡಿದವನ ದೂತ ರಿಂದ ತರಿಸಿದೆ ತ್ರಿಭುವನಾ ಜಯ ವೆಂದು ಕೊಂಡಾಡಲು ಜವನಾ ಭೀತಿ ಯಿಂದ ಮಾಡಿದ ನಿನ್ನ ಸ್ತವನಾ -ಆಹ ಒಂದಾನಂತವಾಗಿ ದ್ವಂದ್ವಪಾಪಗಳಿಗೆ ನಿಂದಿರಬಲ್ಲವೆ ಸಂದರುಶನವಾಗೆ 3 ಕಂದುಕ ಪುಟಿ ಸೂತ ಬಳುಕಿ ದೈತ್ಯ ವೃಂದ ಮೋಹಕವಾಗಿ ಸಿಲುಕಿ ಸುರ ಸಂದೋಹಕೆ ನೀನೆ ಘಳಿಕಿ ನಿಜ ವೆಂದು ಮಾನವರಿಗೆ ಬಳಿಕಿ -ಆಹಾ ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ 4 ಹಂದಿ ನಾಯಿ ನರಿ ರಾಸಾ ಜನ್ಮ ಬಂದರೆ ಎನಗದು ಹರುಷಾ ಬಹು ಮುಂದುಂಟು ರಹಸ್ಯಾ ಮನಸಾಪೇಕ್ಷಾ ಸಂದೇಹ ಮಾಡಿಸೊ ಶ್ರೀಶಾ -ಆಹಾ ಯೋನಿ ಸಂದೀದ ಕಾಲಕ್ಕು ಒಂದು ವಿಂಶತಿ ಮತ ಹೊಂದಿಸದಿರು ಹರಿ5 ಅಂಧಃಕಾರದೊಳೆನ್ನ ತಂದೆ ಇದ ರಿಂದ ನಿನಗೇನೊ ಮುಂದೆ ಲಾಭ ಬಂದಾದರೂ ಇಲ್ಲಾ ಇಂದೆ ಸುಖ ಸಾಂದ್ರ ಕಡಿಮೆನೊ ಮುಂದೆ -ಆಹಾ 6 ಇಂದಿರಾವರ ರಾಮ ಶಾಮಾ ರಾಮ ಚಂದ್ರ ಚತುರ ಸಾರ್ವಭೌಮಾ ದಿವ್ಯ ಸಿರಿ ಉರಪ್ರೇಮಾ ಮುಚ ಕುಂದ ಪಾಲಕ ನಿಸ್ಸೀಮಾ -ಆಹಾ ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ 7 ದುಂದುಭಿ ಭೇರಿಯ ರಭಸಾ ಮಹಾ ಬಂಧುರಾ ನೆರೆದ ವಿಶೇಷಾ ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ ಕುಂದಗೊಡದೆ ಬೊಮ್ಮನಂದದಿ ಪಥತೋರಿ8 ಹಿಂದಣ ಬಲವನ್ನು ಕಾಣೆ ನಾನು ಅಂದು ನುಡಿದದ್ದು ಮಾಣೆ ಅನು ಬಂಧಗಳಿಗೆ ಕಾಮಧೇನೆ ಸತ್ಯ ಪತಿ ನೀನೆ -ಆಹಾ ನಂದನ ಮನೋಹಂಸಾ 9 ಸಂದಣೆ ತೊಲಗದೆಂಬಿಯಾ ಆಹಾ ಬಂದರೆ ಬರಲಿ ಎಂಬಿಯಾ ಇದೇ ಸಂದಲಿ ಅನುಗಾಲ ನ್ಯಾಯಾ ಅನು ಸಂಧಾನ ನಿನ್ನಲಿ ಪ್ರೀಯಾ -ಆಹಾ ಇಂಧನದೊಳು ವಾಯು ವ್ಯಾಪಿಸಿದದ ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ 10 ಕಂದರ್ಪ ಕೋಟಿ ಲಾವಣ್ಯ ಅರ ವಿಂದ ನಯನ ಗುಣ ಗಣ್ಯ ದೀನ ಮಂದಾರ ಸತತ ತಾರುಣ್ಯ ಸರಿ ಬಂದಂತೆ ಮಾಡೊ ಕಾರುಣ್ಯ -ಆಹಾ ವಂದೆದೈವವು ನಾನೆಂದ ಮುರಾರಿಯ ಕೊಂದು ಬಿಸುಟಾಧೀರ ನಂದಕುಮಾರಕ11 ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ ಕುಂದಣ ಪುಟದಂತೆ ವರಣಾ ಕಂಬು ಕಂಧರ ಪೊಳಿಯಲಿ ವಚನಾ -ಆಹಾ ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ ವೊಂದಿಬರಲಿ ಮುಕುಂದಾ ಮುದ್ದುರಂಗಾ12 ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ ಯೆಂದು ಕುಣಿಯೊ ಎನ್ನ ಧೊರಿಯೆ ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ ವೃಂದಾರಕ ಪುಷ್ಪಗರಿಯೆ -ಆಹಾ ಇಂದಿನ ಉತ್ಸಾಹ ಇಂದ್ರಾದ್ಯರು ಪೂತು ರೆಂದು ಪೊಗಳೆ ನಗೆಯಿಂದ ನೋಡುವದೆ 13 ಮಧ್ವರಮಣ ಪಾಪಿ ಭಕ್ತಿ ಜ್ಞಾನ ಸದ್ಧರ್ಮ ವೈರಾಗ್ಯಯುಕ್ತಿ ಕೊಡು ಭುಕ್ತಿ ಇತ್ತು ಮುದ್ರಧಾರನಾ ಮಾಡಿ ಮುಕ್ತಿ -ಆಹಾ ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ ಪತಿ 14 ಬಂಧೂರ ಕೀರ್ತಿ ಸಂಪನ್ನಾ ಕರಿ ಬಂಧ ವಿಮೋಚನ್ನ ನಾ ರಂದ ವರದ ಸುಪ್ರಸನ್ನಾ ಶತಾ ನಂದ ಕಾನನವಾಸಾ ಘನ್ನಾ -ಆಹಾ ಸಿಂಧುಜನಕನೆ ಪರಂಧಾಮತ್ರಯ ಸತ್ಯ ಸಂಧ ವಿಜಯವಿಠ್ಠಲೆಂದು ವದನ ಎನ್ನಾ15
--------------
ವಿಜಯದಾಸ
ಪಾಲಿಸೊ ಶ್ರೀಹರಿ ಎನ್ನ ಪಾಲಿಸೊ ಪಾಲಿಸೊ ನಾ ನಿನ್ನ ಕಾಲಿಗೆ ಎರಗುವೆ ಶ್ರೀಲೋಲ ನೀ ಹೃದಯಾಲಯದೊಳು ಬಂದು ಪ ಪರಿ ನಾಮಾಮೃತವನ್ನು ಪರಮ ಔಷಧÀವೆಂದು ಸುರಿದು ಸುಖಿಸುವಂತೆ 1 ಸುಂದರ ಸುಗುಣನೊಂದೊಂದು ಗುಣದ ಮಾತ್ರೆ ಸಂದೇಹವಿಲ್ಲದಾನಂದದಿಂದರೆದ್ಹಾಕಿ 2 ಭವ ಬಂಧ ಬಿಡಿಸಿನ್ನು ಅನುಮಾನವ್ಯಾತಕಾನಂತ ಹಸ್ತಗಳಿಂದ 3 ಲಕ್ಕುಮಿರಮಣನೆ ಲೆಕ್ಕಿಸೊ ಎನ ಮಾತು ದುಷ್ಟ ಜ್ವರವ ನಿನ್ನ ಚಕ್ರದಿಂದ್ಹತಮಾಡಿ 4 ಭೀತಿ ಬಡುವೆನಯ್ಯ ಭೀಮೇಶಕೃಷ್ಣನೆ ಯಾತಕೆ ತಡವಿನ್ನು ಪ್ರೀತಿಮಾಡೆನ್ನಲ್ಲಿ ಪಾಲಿಸೊ 5
--------------
ಹರಪನಹಳ್ಳಿಭೀಮವ್ವ
ಪಾಲಿಸೋಯನ್ನ ಪರಾತ್ಪರಾ - ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನ ಘಣಿಶೈಲ ನಿಲಯ-ಹರಿ ಅ.ಪ ಜಲಜಭವನ ನಿಜಕುಕ್ಷಿಯೊಳಿದ್ದ ಸುಲಲಿತ ವೇದಾಪಹಾರಿಯ ಕಂಡು ಜಲಜರೂಪಿನಿಂದಾ ಖಳ ಸಂಹರ ಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಅಂದು ದೂರ್ವಾಸನ ಶಾಪದಿ ಜಗವು ಇಂದಿರೆ ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ಧರಣಿಯನಪಹಾರಗೈಯ್ಯಲು ಬೇಗ ಸೂಕರ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ3 ಸರಸಿಜಜನ ವರದರ್ಪದಿ ಜಗವನುರುಹಿ ತರಳನ ಬಾಧೆಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ 4 ಬಲಿಯ ಮೂರಡಿಭೂಮಿ ದಾನವ ಬೇಡಿ ಅಳೆದು ಈರಡಿಮಾಡಿ ಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯ ಪೆತ್ತ ಚೆಲುವ ವಾಮನರೂಪ5 ಚಕ್ರಾಂಶನಾದ ಕಾರ್ತಿವೀರ್ಯನ ಭುಜ ಚಕ್ರದೊಡನೆ ದುಷ್ಟ ಭೂಪರ ಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ಕ್ರೂರ ರಾವಣ ಕುಂಭಕರ್ಣರ ಬಲು ಘೋರತನಕೆ ತ್ರಿವೇಶರ ದೊಡ್ಡ ದೂರ ಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀರಾಮ ಮೂರುತಿ 7 ಬಲಭದ್ರನೆಂಬುವ ನಾಮದಿ ಧುರದಿ ಹಲ ನೇಗಿಲುಗಳನು ಹಸ್ತದಿ ಪಿಡಿದು ಬಲವಂತರಾದ ದೈತ್ಯಕುಲವ ತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರನಿಭಚೇಲ 8 ಭಾರ ಸೃಷ್ಟೀಶನಲ್ಲಿ ದೂರಿಡೆ ಬಲು ಭ್ರಷ್ಟ ಕೌರವ ಯುಧಿಷ್ಠಿರಗೆ ವೈರ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ 9 ಕಲಿಯಿಂದ ಕಿಡೆ ನಿಜಧರ್ಮವು ಬಹು ಖಳರಿಂದ ವ್ಯಾಪಿಸೆ ಲೋಕವು ಆಗ ಲಲಿತ ತೇಜಿಯನೇರಿ ಕಲುಷಾತ್ಮಕರ ಕೊಂದು ವಿಲಸಿತ ಧರ್ಮವನು ಸಲಹಿದ ಕಲ್ಕಿರೂಪ 10 ಗಿರಿಜಾವಿವಾಹದಿ ತ್ವಷ್ಟ್ರನ ಶಾಪ ಶರಧಿಯೀಂಟಿದ ಮುನಿಗೈದಲು ಬೇಗ ವರವ್ಯಾಘ್ರ ಗಿರೀಶನೆ ಶರಣೆಂದ ಮುನಿಪಗೆ ವರವಿತ್ತು ಸಲಹಿದ ವರದವಿಠಲಹರಿ11
--------------
ವೆಂಕಟವರದಾರ್ಯರು
ಪಾಲಿಸೋಯನ್ನ ಪರಾತ್ಪರಾ ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನಫಣಿ ಶೈಲ ನಿಳಯ-ಹರಿ ಅ.ಪ. ವೇದಾಪಹಾರಿಯಕಂಡು ಜಲಚರ ರೂಪಿನಿಂದಾ ಖಳನ ಸಂಹರಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ದುರುಳ ಹಿರಣ್ಯಾಕ್ಷನೆಂಬುವ-ದೈತ್ಯ-ಧರಣಿಯನ ಪಹಾರಗೈಯಲು ಬೇಗ ಪರಮೇಷ್ಟಿಗೊಲಿದು ಸೂಕರನ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ 3 ಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ4 ಅಳೆದು ಈರಡಿಮೂಡಿಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯಪೆತ್ತ ಚಲುವ ವಾಮನ ರೂಪ 5 ಚಕ್ರದೊಡನೆದುಷ್ಟಭೂಪರಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ತ್ರಿದಿವೇಶರದೊಡ್ಡ ದೂರಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀ ರಾಮ ಮೂರುತಿ 7 ನೇಗಿಲುಗಳನು ಹಸ್ತದಿಪಿಡಿದು ಬಲವಂತರಾದ ದೈತ್ಯಕುಲವತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರ ನಿಭಚೇಲ 8 ಭಾರ ತಾಳದೆ-ಧರಣೀ-ಸೃಷ್ಟೀಶನಲ್ಲಿದೂರಿಡೆ ವೈರಿ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ9 ವ್ಯಾಪಿಸೆಲೋಕವು ಆಗ ಲಲಿತತೇಜಿಯನೇರಿ ಕಲುಷಾತ್ಮಕರಕೊಂದು ವಿಲಸಿತ ಧರ್ಮವನ್ನು ಸಲಹಿದ ಕಲ್ಕಿರೂಪ 10 ಮುನಿಗೈದಲುಬೇಗ ವರವ್ಯಾಘ್ರಗಿರೀಶನೆ ಶರಣೆಂದಮುನಿಪಗೆ ವರವಿತ್ತು ಸಲಹಿದ ವರದ ವಿಠಲ ಹರಿ11
--------------
ಸರಗೂರು ವೆಂಕಟವರದಾರ್ಯರು
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಕಾರುಣ್ಯನಿಧಿ ಹರಿ ಒಲಿವಾ ಅ.ಪ. ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದರ್ಭಶಯನ ಮಧ್ಯಾರ್ಜುನ 1 ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ ಒಂದೊಂದು ಕೋಟೀಶ್ವರಾ 2 ಸಿರಿ ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ ವೀರ ನಾರಾಯಣವೋ ಕೇದಾರ ಕುರುಕ್ಷೇತ್ರ ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ 3 ಉದ್ಭವ ಆದಿ ಅನಂತ ಬಲಕ್ಷೇತ್ರ ಪುಂಡರೀಕಾಕ್ಷ ಸುಧಿಯೆಂದು ಕನ್ಯಾಕುಮಾರಿ ಮುದದಿ ಮಹಂಕಾಳಿ ಹಸ್ತಿಪಳಿನಾಥ ಪದ ಮುರಳಿ ತ್ರಿವಿಕ್ರಮ 4 ಕೂರ್ಮ ನೆಲ್ಲನಪ ಧರಣೀಧರ ಚಾಪವಾಣಿ ಕ್ಷೇತ್ರ ಶ್ರೀನಿವಾಸನೆದ ನಿಧಿ ಗೌರೀ ಮನೋಹರ 5 ಶಂಕರನ ಕ್ಷೇತ್ರ ಗೋಗರ್ಭ ಶೇತುವನ ಗಜಾರಣ್ಯ ಓಂಕಾರನಾಥ ದೇವಾ ವೇದಿ ಗೋಪಾಲನಿಧಿ ಅಲಂಕಾರ ಮುಕ್ತಿ ಕ್ಷೇತ್ರ 6 ಮಳೂರಪ್ರಮೇಯ ಶಿವಾ ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ ನೀಲಾರಣ್ಯ ರಾಜವನ ನೈಮಿಷ ಭೋಕ್ತ 7 ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ ಮಹಾಲಕುಮಿ ರಘುನಾಥ ಶಿವಗಂಗೆ ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ 8 ಪೇಳಿದುದಕ್ಕೆ ಆರಿಗೆ ಅಳವಲ್ಲ ನೆನಸೋದು ಮಾನವರು ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ- ಪಾಲಿಸುವ ಕುಲಕೋಟಿಗಳ9
--------------
ವಿಜಯದಾಸ
ಪೂಜಾನುಷ್ಠಾನವ ಯೋಚಿಸಿ ಮನದೊಳುಪೂಜೆ ಷೋಡಶಗಳ ಮಾಜದೆ ಮಾಡಿರೋ ಪ ಉಷಃ ಕಾಲದಲೆದ್ದು | ಝಷಕೇತು ಪಿತ ನಾಮಉಸುರು ತಿಪ್ಪುದೇ ಪೂಜೆಯೋ 1 ಶೌಚ ಬಾಹ್ಯವು ಮೃತ್ತು ಶೌಚ ಮಾಡಿಕೊಂಡುಶುಚಿಷತ್ತು ನಿನ ನಾಮ ಉಚ್ಚರಿಪುದೆ ಪೂಜೆಯೋ2 ತುಲಸಿ ಮೃತ್ತಿಕೆ ಹಚ್ಚಿ | ತುಲಸಿ ವಂದನೆ ಮಾಡಿಅಲಸಾದೆ ಕೃಷ್ಣನ ವಲಿಸೂವುದೇ ಪೂಜೆಯೋ 3 ಗೋವನೆ ಬಳಸುತ್ತ ಗೋಪುಚ್ಛ ಪಿಡಿಯುತ್ತಗೋವ ವಂದಿಪುದೆಲ್ಲ ಗೋಪಾಲ ನಿನ ಪೂಜೆಯೋ4 ಸ್ನಾನ ಸಂಧ್ಯಾನ ಮೇಣೂಧ್ರ್ವ ಪುಂಡ್ರವ ಧರಿಸಿಭಾನುಗಘ್ರ್ಯವ ನೀಯೆ ಶ್ರೀನಿವಾಸ ಪೂಜೆಯೋ 5 ಪಾದ ತೀರ್ಥ ಸೇವನೆ ಪೂಜೆಯೋ 6 ಅಷ್ಟ ಮಹಾಮಂತ್ರ ಶಿಷ್ಪನಾಗುತ ಹೃದಯಅಷ್ಟ ಕಮಲದಲ್ಲಿ ಧ್ಯಾನ ಮಾಳ್ಪುದೆ ಪೂಜೆಯೋ 7 ಮಂಟಪೋತ್ತಮ ಪೂಜೆ ಸುಷ್ಠು ಕಲಶ ಪೂಜೆಶ್ರೇಷ್ಠ ಪಂಚಾಮೃತ ಪೀಠ ಶಂಖ ಪೂಜೆಯೋ 8 ಘಂಟನಾದಾ ಅಖಂಡ ಶ್ರೇಷ್ಠ ದೀವಿಗೆ ಪೂಜೆಪೀಠಾವರಣ ಹೃತ್ಪೀಠ ಚಿಂತನೆ ಪೂಜೆಯೋ 9 ಮೂರ್ತಿ ಗುರುಮೂತ್ರ್ವೆಕ್ಯವೆ ಪೂಜೆಯೋ || ಚಿಂತಿಸಿ ಸ್ವಾಂತಸ್ಥ ಬಿಂಬನೋಳೈಕ್ಯವಚಿಂತಿಸುತ್ತಾನೇಕ ಗೈವ ವೈಭವ ಪೂಜೆಯೋ 11 ಹೃತ್ಪುಂಡರೀಕಗೆ ಕಲ್ಪ ತರುವನೆ ಬೇಡುತ್ತಪ್ರೀತ್ಯಾದ ಮಾನಸ ಪದಾರ್ಥಗಳ ಪೂಜೆಯೋ 12 ಪೂರ್ಣ ಶೃತಿಯ ಭಾವ ಚೆನ್ನಾಗಿ ಗ್ರಹಿಸುತ್ತಪೂರ್ಣನ ಕಳೆಯೊಂದು ಪ್ರತಿಮಾದಲ್ಲಿರಿಸೋ 13 ನಿಷುಸೀದ ಶ್ರುತಿಯಂತೆ ವಸುದೇವ ಕೃಷ್ಣನೆಅಸಮ ಪೂಜಕ ಪೂಜ್ಯ ಅವನೇವೆ ತಿಳಿಯೊ 14 ಬಾಹ್ಯದರ್ಚನೆಗಳು ಶ್ರೀ ಹಸ್ತದಿಂದಲಿವ್ಯಾಹರಣೆಂಬೋದೆ ಹರಿ ಪೂಜೆಯೋ 15 ಆವಾಹನಭಿಷೇಕ ನೈವೇದ್ಯಾದಿ ಪೂಜೆದೇವಗಾರುತಿ ಶಂಖ ಭ್ರಮಣಾದಿ ಪೂಜೆಯೋ 16 ಸರ್ವವನರ್ಪಿಸಿ ಅಸ್ವಾತಂತ್ರ್ಯವ ಗ್ರಹಿಸಿಶರ್ವಾದಿ ವಂದ್ಯ ಬಿಂಬಗೆ ಸರ್ವ ಪೂಜೆಯೋ 17 ಸರ್ವಾಪರಾಧವ ಸರ್ವೇಶನಲಿ ಪೇಳಿವೈಶ್ವ ದೇವಾದಿಗಳ್ ಸತ್ಕರ್ಮಗಳೆ ಪೂಜೆಯೋ 18 ಯತಿಗಳರ್ಚನೆಯನ್ನು ಮತಿಯಿಂದ ಗೈಯುತ್ತಸುತ ವಿಪ್ರಾದಿಯ ಸಹ ಹುತಶೇಷ ಮೆಲ್ಲೋದೆ ಪೂಜೆಯೋ 19 ಪ್ರಾಣಾಗ್ನಿ ಹೋತ್ರಾನು ಸಂಧಾನದಲಿ ಮದ್ದುಪ್ರಾಣನ ಪ್ರಾಣ ವೈಶ್ವಾನರಗೀಯೋದೆ ಪೂಜೇ 20 ಅಂತರಂಗದ ಪೂಜೆಗೊಲಿದ ಸಂತತ ಹರಿಕಂತು ಪಿತನು ಗುರು ಗೋವಿಂದ ವಿಠಲಾ 21
--------------
ಗುರುಗೋವಿಂದವಿಠಲರು
ಪ್ರಸನ್ನ ಶ್ರೀ ವರಾಹ ಆದಿವರಾಹ ಸಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರಧ್ಧೇಶ ವಂದ್ಯ ಬದರಶೇಖರ ಮುಖ ಸುರವಿನುತ ವಾಂಛಿತದ ಮೋದಚಿನ್ಮಯ ಭೂವರಾಹ ಯಜÉ್ಞೀಶ ಪ ಅದ್ವಿತೀಯನು ನೀನೇ ಪದುಮಜಾಂಡದ ಒಡೆಯ ಪದುಮಭವನೊಳಿದ್ದು ಭುವನಗಳ ಸೃಜಿಸಿ ಕೃತಿ ನಡೆಸುತ್ತ ಒದಗುವಿ ಸುಖಜ್ಞಾನ ಬಲಪೂರ್ಣ ಹರಿಯೇ 1 ಅಂದು ಸ್ವಾಯಂಭುವ ಮನು ವೇನಗರ್ಭನಲಿ ಬಂದು ನಮಿಸಿ ಭಿನ್ನಹವ ಮಾಡೆ ವಿಧಿ ಹೇಳಿದ ಜನಾದರ್Àನ ಯಜ್ಞಪರಮಾತ್ಮ ಶ್ರೀದ ಭದ್ರದ ಈಜ್ಯ ಪೂಜ್ಯ ನೀನೇ ಎಂದು 2 ಸ್ವಾಯಂಭುವ ಸಾಮ್ರಾಟ್ ಪೇಳಿದ ಮಹಾ ಈ ಭೂಮಿ ಇರುವುದು ಉದ್ಧರಿಸಿ ಸ್ಥಾನವ ತನ್ ಪ್ರಜೆಗಳಿಗೆ ಒದಗಿಸಬೇಕು ಎಂದ 3 ಇರುವುದಕೆ ಸ್ಥಳ ಪ್ರಜೆಗಳಿಗೆ ಒದಗಿಸಲು ಪರಮೇಷ್ಟಿರಾಯ ತನ್ನ ಹೃದ್ ವನಜದಿ ಸುಪ್ರಕಾಶಿಪ ಪರಮ ಪೂರುಷ ನಿನ್ನನ್ನು ಪರಮಾದರದಲ್ಲಿ ಧ್ಯಾನಿಸಿದನು 4 ಮಹಿಶಿರಿಕಾಂತ ನಿನ್ನನು ಧ್ಯಾನಿಸುತಲಿದ್ದ ಬ್ರಹ್ಮನ ಮೂಗಿಂದ ಹರಿ ಅನಘ ನೀನು ವರಾಹ ಮರಿ ಅಂಗುಷ್ಟ ಮಾತ್ರ ಪ್ರಮಾಣದಿ ಬಹಿರ್ಗತನು ಆದಿಯೋ ಚಿದಾನಂದರೂಪ 5 ಒಂದೇ ಕ್ಷಣದಿ ಗಜಮಾತ್ರ ವರ್ಧಿಸಿದಿಯೋ ಅದ್ಭುತ ಈ ರೂಪ ಕಂಡು ಅಲ್ಲಿ ಇದ್ದ ಮರೀಚಿ ಪ್ರಮುಖ ವಿಪ್ರರು ಮನು ಮೊದಲಾದವರು ಬಹು ಬೆರಗಾದರಾಗ 6 ಸೂಕರ ರೂಪ ಕಂಡಿಲ್ಲ ಎಲ್ಲೂನು ಇದು ಮಹಾಶ್ಚರ್ಯ ಗಂಡ ಶಿಲಾವೋಲ್ ಕ್ಷಣ ಮಾತ್ರದಲಿ ಚಂಡ ಈ ಕ್ರೋಡವು ದೊಡ್ಡದಾಗಿಹುದು 7 ಸೂಕರ ರೂಪವ ನೋಡುತ್ತ ಮುನಿಗಳು ತರ್ಕಿಸಿ ಮೀಮಾಂಸ ಮಾಡೆ ಅನಿಮಿತ್ತಬಂಧು ಹರಿ ಒಲಿದು ಬಂದಿರುವಿ ಎಂದು ವನಜಸಂಭವ ಸಂತೋಷ ಹೊಂದಿದನು 8 ಮಹಾವರಾಹ ರೂಪನೇ ವಿಭೋ ನೀನು ಮಹಾಧ್ವನಿಯಲಿ ಗರ್ಜಿಸಿದಿ ಆಗ ಆ ಹೂಂಕಾರವು ದಿಕ್ಕು ವಿದಿಕ್ಕುಗಳ ಮಹಾಂಬರವ ತುಂಬಿತು ಪ್ರತಿಧ್ವನಿಯಿಂದ9 ಅಪ್ರತಿ ಮಹಾಮಹಿಮ ಉರುಪರಾಕ್ರಮ ನೀನು0 ಅಂಬುಧಿಯೊಳು ಲೀಲೆಯಿಂದಲಿ ಪೊಕ್ಕು ಸುಪವಿತ್ರತಮ ನಿನ್ನ ದಂಷ್ಟ್ರದ ಮೇಲಿಟ್ಟುಕೊಂಡು ಕ್ಷಿಪ್ರದಲಿ ನೀರಮೇಲ್ ತಂದಿ ಭೂಮಿಯನು 10 ನೀರೊಳಗಡೆ ತಡೆದ ಆದಿದೈತ್ಯನ ಕೊಂದು ನೀರಮೇಲ್ ಇರಿಸಿದಿ ಭೂಮಿಯ ಎತ್ತಿ ಸರಸಿಜೋದ್ಭವ ಮುಖ್ಯಸುರಮುನಿ ವೃಂದವು ಕರಮುಗಿದು ಸ್ತುತಿಸಿದರÀು ಕೃತಜ್ಞ ಭಕ್ತಿಯಲಿ 11 ಎಂದು ಜಯಷೋಷವ ಮಾಡಿ ಮುದದಿ ಸುತಪೋನಿಧಿಗಳು ಸ್ತುತಿಸಿ ನಮಿಸಿದರು ವೇದವೇದ್ಯನೇ ಸೂಕರರೂಪ ನಿನ್ನನ್ನ 12 ಅಖಿಳ ಮಂತ್ರದೇವತಾ ದ್ರವ್ಯಾಯ ಸರ್ವಕೃತವೇ ಕ್ರಿಯಾತ್ಮನೇ ವೈರಾಗ್ಯ ಭಕ್ತ್ಯಾತ್ಮಜಯಾನುಭಾವಿತ ಜ್ಞಾನಾಯ ವಿದ್ಯಾ ಗುರುವೇ ನಮೋ ನಮಃ13 ಈ ರೀತಿ ಇನ್ನೂ ಬಹುವಾಗಿ ಸ್ತುತಿಸಿದರು ಹರಿ ವರಾಹನೇ ಭೂದರ ಧರೋದ್ಧಾರ ನರಸುರರು ಶುಚಿಯಿಂ ಪಠಿಸಿ ಎಲ್ಲರೂ ಕೇಳೆ ಸುಪ್ರಸನ್ನನು ಆಗಿ ಭದ್ರÀವನು ಈವಿ 14 ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 15 -ಇತಿ ಪ್ರಥಮ ಅಧ್ಯಾಯ ಪೂರ್ಣಂ - ದ್ವಿತೀಯ ಅಧ್ಯಾಯ ಹಿರಣ್ಯಾಕ್ಷ ಸಂಹಾರ ಆದರದಿ ಶರಣಾದೆ ಭೂದರ ವರಾಹನೇ ವಿಧಿ ಶ್ರದ್ಧೇಶ ವಂದ್ಯ ಬದರಶೇಖರ ಮುಖ ಸುವಿನುತ ವಾಂಛಿತದ ಮೋದ ಚಿನ್ಮಯ ಭೂವರಾಹ ಯಜÉ್ಞೀಶ À ಜ್ಞಾನಸುಖ ಭೂಮಾದಿ ಗುಣಪೂರ್ಣ ನಿರ್ದೋಷ ಪೂರ್ಣಬಲ ಹರಿ ಯಜ್ಞಮೂರುತಿ ವರಾಹ ಹನನ ಮಾಡಿ ಆದಿದೈತ್ಯನ ನೀರಿಂದ ಕ್ಷೋಣಿಯ ನಿನ್ ದಂಷ್ಟ್ರ ಮೇಲಿಟ್ಟು ತಂದಿ 1 ಭೂಮಿ ಉದ್ಧರಿಸಲು ಮಾತ್ರವಲ್ಲದೇ ಆ ಹೇಮಾಕ್ಷ ಅಸುರನ್ನ ಸಂಹಾರ ಮಾಡೆ ನೀ ಮಹಾಕ್ರೋಡರೂಪವÀ ಪ್ರಕಟಿಸಿದಿ ವಿಭೋ ಅಪ್ರಾಕೃತ ಚಿನ್ಮಯ ವಪುಷ 2 ಏಕದಾ ಬ್ರಹ್ಮನ ಸುತರು ಸನಕಾದಿಗಳು ಏಕಾತ್ಮ ಶ್ರೀ ವಿಷ್ಣುಲೋಕಕ್ಕೆ ಬರಲು ದಿಗ್ವಾಸಸ ಶಿಶುರೂಪ ಆ ಮುನಿವರರ ಲೆಕ್ಕಿಸದೆ ತಡೆದರು ದ್ವಾರಪಾಲಕರು 3 ಜಯವಿಜಯರೆಂಬುವ ಆ ದ್ವಾರಪಾಲಕರಿಗೆ ಮಾಯೇಶ ಹರಿ ಪ್ರಿಯತರ ಮುನಿಶ್ರೇಷ್ಠರು ಈಯಲು ಶಾಪವ ಆ ವಿಷ್ಣು ಪಾರ್ಷದರು ದೈತ್ಯಜನ್ಮವ ಹೊಂದಿದರು ಪತನವಾಗಿ 4 ಪತಿ ಕಶ್ಯಪ ಮುನಿ ಅಹ್ನೀಕದಲಿ ಇರಲು ದಿತಿ ದೇವಿ ಬಂದು ಅಪತ್ಯಕಾಮದಲಿ ಸಂಧ್ಯಾಕಾಲದಿ ಇಚ್ಛಿಸಿ ನಿರ್ಬಂಧಿಸಿ ವಿಧಿ ವಿರುದ್ಧದಲಿ 5 ಸುತಪೋನಿಧಿ ಕಶ್ಯಪ ತೇಜೋಲ್ಬಣದಿ ದಿತಿದೇವಿ ಜಠರದಲಿ ವಿಷ್ಣುಪಾರ್ಶದರು ಪತಿತ ಆ ಜಯವಿಜಯರು ಪ್ರವೇಶಿಸಿದರು ಆ ಆದಿದೈತ್ಯನು ಸಹ ಮೊದಲೇ ಅಲ್ಲಿ ಹೊಕ್ಕಿದ್ದ 6 ಅಬ್ಧಿಯಿಂ ನೀ ಭೂಮಿ ಎತ್ತೆ ತಡೆದು ಹತ - ನಾದ ಆ ದೈತ್ಯನು ಅಬ್ಜದೋದ್ಭವನು ಶ್ರೀದ ನಿನ್ ಪಾರ್ಶದನು ಆವಿಷ್ಟನಾದ 7 ಆದಿ ಹೇಮಾಕ್ಷನೊಳು ವಿಷ್ಣು ದ್ವಾರಪ ವಿಜಯ ದಿತಿದೇವಿ ಅವರ ಸುತ ಹಿರಣ್ಯಾಕ್ಷನೆಂದು ಉದಿಸಿದನು ಅಣ್ಣ ಜಯ ಹಿರಣ್ಯಕಶಿಪು ಸಹ ಅತಿಪರಾಕ್ರಮಯುತನು ಲೋಕಕಂಟಕನು 8 ಗದೆ ಹಿಡಿದು ಹಿರಣ್ಯಾಕ್ಷ ದಿಗ್ವಿಜಯ ಮಾಡಿ ಭೀತಿ ಪಡಿಸಿದ ದೇವತಾ ಜನರನ್ನೆಲ್ಲ ಅತಿಬಲಯುತನಿವ ಧರೆಯ ಸೆಳಕೊಂಡು ಉದಧಿಯೊಳು ಹೊಕ್ಕನು ಆರ್ಭಟಮಾಡುತ್ತ 9 ಸುರರು ನಿನ್ನಲಿ ಮೊರೆ ಇಡಲು ವರಾಹ ಹರಿ ನೀನು ನೀರೊಳು ಲೀಲೆಯಿಂದಲಿ ಪೊಕ್ಕು ಆ ದೈತ್ಯ ಹಿರಣ್ಯಾಕ್ಷನ ಸಹ ಯುದ್ದ ಮಾಡಿದಿಯೋ 10 ಸುರವೃಂದ ಕ್ಷೇಮಾರ್ಥ ಪದುಮಜ ಪ್ರಾರ್ಥಿಸಲು ಕರದಿಂದ ಹೊಡೆದು ಆ ದೈತ್ಯನ ಕೊಂದು ಧರೆಯನುದ್ಧರಿಸಿ ನೀ ಮೇಲೆತ್ತಿ ತಂದಿಯೋ ಉರುಪರಾಕ್ರಮ ಭಕ್ತವತ್ಸಲ ಕೃಪಾಳೋ 11 ವರಾಹ ಹರಿ ನಿನ್ನ ಕೃತಜ್ಞ ಮನದಿ ಸನ್ನಮಿಸಿ ಸ್ತುತಿಸಿದರು ಉದಾರ ವಿಕ್ರಮ ಹಿರಣ್ಯಾಕ್ಷನ್ನ ನೀನು ಕೊಂದ ನಿನ್ನಯ ಕ್ರೀಡಾ ವರ್ಣಿಸಲಶಕ್ಯ 12 ಕಮಲಾರಮಣ ಶ್ವೇತವರಾಹ ಮೂರುತಿ ನಮೋ ಶಾಮಚಾರ್ವಾಂಗ ನಮೋ ಭೂವರಾಹ ಬ್ರಹ್ಮ ಪವಮಾನರಿಂದಲಿ ಸದಾ ಪೂಜ್ಯನೇ ಸ್ವಾಮಿ ಕರುಣಾಂಬುಧಿಯೇ ಶರಣು ಮಾಂಪಾಹಿ 13 ಕೂರ್ಮ ಕ್ರೋಢ ನರಸಿಂಹ ವಾಮನ ರೇಣುಕಾದೇವಿಯ ಸುತ ರಾಮಚಂದ್ರ ಬುದ್ಧ ಕಲ್ಕಿ ವ್ಯಾಸ ಹಯಗ್ರೀವ ಆನಮಿಪೆ ಅವನೀಶ ಭೂ ಶ್ರೀಶ ಪಾಹಿ 14 ವರಾಹ ನಮೋ ಸದಾನಂದಮಯ ಜಗಜ್ಜ£್ಮÁದಿ ಕರ್ತ ನಿರ್ದೋಷ ಗುಣಪೂರ್ಣ ಅನಿಷ್ಟ ಪರಿಹರಿಸಿ ವರ್ಧಿಸುವಿ ದಯದಿ 15 ಶ್ಯಾಮ ಅರಿಶಂಖಧರ ಅಭಯ ಸದ್ವರಹಸ್ತ ಭೂಮಿಧರ ಸರ್ವವಾಂಛಿತ ಸಿದ್ಧಿದಾತ ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನೇ ಮನ್ಮನದಿ ಸರ್ವದಾ ಹೊಳೆಯೋ ಕರುಣಾಳು 16 ಗುರು ಗುರೋರ್ಗುರು ಗುರೋರ್ಗುರುವಿನ ಗುರು ಶ್ರೀ ರಾಘವೇಂದ್ರ ಗುರುರಾಜ ಲಾತವ್ಯ ಋಜುವರ್ಯ ಮಧ್ವ ವಾರಿಜಾಸನ ಸರ್ವಹೃದ್ವನಜ ಅಂತಸ್ಥ ವರಾಹ ನಮೋ ಶರಣು 17 ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸ ಅನತೇಷ್ಟಪ್ರದ ಭೂವರಾಹ ಹಯಗ್ರೀವ ಶ್ರೀಶ ನರಸಿಂಹ ವಿಧಿತಾತ ನಮಸ್ತುಭ್ಯಂ ಪೂರ್ಣಪ್ರಜ್ಞರ ಹೃತ್‍ಸ್ಥ ಜನ್ಮಾದಿಕರ್ತ 18 -ಇತಿ ದ್ವಿತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು