ನಾನಾನಂತಪರಾಧಿ ಎನ-
ಗೇನಿಲ್ಲವು ದೃಢಬುದ್ಧಿಪ.
ನೀನೇ ಗತಿ ನಿನ್ಹೊರತು ಕಾವರನು
ಕಾಣೆನು ಕರುಣಾಂಬೋಧಿಅ.ಪ.
ಹಂದಿಯಂತೆ ತಿಂದು ಬೆಳದೆ ಎನ್ನ
ಮುಂದಣ ಗತಿಯನು ಮರೆತೆ
ಹಿಂದಿಲ್ಲವು ಮುಂದಿಲ್ಲವು ಲೋಕದಿ
ನಿಂದ್ಯಾಪಾತ್ರ ತಾನಾದೆ1
ಮುತ್ತಿತು ಯೆನಗಜ್ಞಾನ ಎನ್ನ
ಚಿತ್ತದಿ ಕೊಡು ನಿನ್ನ ಧ್ಯಾನ
ನಿತ್ಯ ತವಚರಣ ಭಕ್ತಿಜ್ಞಾನವ
ನಿತ್ತು ಕಾಯೊ ಸುತ್ರಾಣ2
ಗತಿಯಾರಿಲ್ಲನ್ಯತ್ರ ಶ್ರೀ-
ಪತಿಯೆ ಕಾಯೊ ಸುಚರಿತ್ರ
ಕ್ರತುಪಾಲ ಲಕ್ಷ್ಮೀನಾರಾಯಣ ಭಾ-
ರತಿಪತಿನುತ ಸುರಮಿತ್ರ3