ಒಟ್ಟು 222 ಕಡೆಗಳಲ್ಲಿ , 66 ದಾಸರು , 202 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬಾ ಬಾರೋ ಕೃಷ್ಣಬಾರೋ ಮುಖವ ತೋರೋ ಪಬಾರೋ ಮುಖವ ತೋರೋಸರಸಾಮೃತ ಬೀರೋ ಬಾ ಬಾ ಬಾ 1ಸಾ ಸಾ ಸಾ ಸಾಕೋ ನಿನಗೀಲೋಕಮಾಯ ಮೋಹನಾ |ಲೋಕಮಾಯ ಮೋಹನಾ |ಶೋಕನೇಕ ನಾಶನಾ 2ಕೋ ಕೋ ಕೋ ಕೊಡಿಸೊನಮ್ಮ ಉಡುವ ಶೀರೆಕುಪ್ಪಸಾ |ಉಡುವ ಶೀರೆ ಕುಪ್ಪಸಾ |ಮಡದಿಯರಿಗೆ ಒಪ್ಪಿಸಾ 3ಅಲ್ಲ ಲ್ಲ ಲ್ಲ ಲ್ಲದಿದನೆಲ್ಲಗೋಪಿವಲ್ಲಭನೊಳ್ | ಎಲ್ಲಗೋಪಿವಲ್ಲಭನೊಳ್ |ಸೊಲ್ಲಿಸುವೆವು ನಿಲ್ಲದೇ 4ನಂದಂದನ ನಂದಗೋಪಿ|ಕಂದನೇ ಮುಕುಂದನೆ |ಕಂದನೇ ಮುಕುಂದನೇ|ಸುಂದರಾ ಗೋವಿಂದನೇ 5
--------------
ಗೋವಿಂದದಾಸ
ಬಾರೋ ನಮ್ಮ ಮನೆಗೆ ಬೇಗನೆ ಗೋಪಾಲಕೃಷ್ಣಬಾರೋ ಶ್ಯಾಮ ಸುಂದರಾಂಗನೆ ಪಬಾರೊ ಭಾಮೆ ರುಕ್ಮಿಣೀಶ ಬಾರೊಯೋಗಿಹೃದಯವಾಸಬಾರೊ ದ್ವಾರಕಾಪುರೀಶ ಬಾರೊ ಭಕ್ತಜನರ ಪೋಷ ಅ.ಪಅಂದಿಗೆ ಕಾಲ್ಗೆಜ್ಜೆ ಸರಪಣಿ ಪಾಡಗರುಳಿಯುಕೆಂದಾವರೆಯು ಪೋಲ್ವಪಾದದಿನಂದಗೋಪತನಯಗೋಪವೃಂದದೊಳಗೆ ಕುಣಿದು ನಲಿದುಇಂದಿರೇಶ ಶ್ರೀಶನೆ ಬಂದೊಂದುಹೆಜ್ಜೆನಿಡುತ ಮುದದಿ 1ಉಟ್ಟದಟ್ಟಿಯು ಪಟ್ಟೆಚಲ್ಲಣ ಹವಳಕಟ್ಟುಗಟ್ಟಿ ಸರಪಣಿ ಕಿರುಗಂಟೆಯುಕಟ್ಟಿದ ಉಡುದಾರಗೆಜ್ಜೆಶ್ರೇಷ್ಠತನದಿ ಮೆರೆಯುತಿರಲುಪುಟ್ಟಬಾಲರೊಡನೆ ಪುಟ್ಟಪುಟ್ಟ ಹೆಜ್ಜೆನಿಡುತ ನಲಿದು 2ದುಂಡು ಕರಕೆ ಗುಂಡು ಬಿಂದಲಿ ಮುಂಗೈಮುರಿಗೆಉಂಗುರಗಳು ಶೋಭಿಸುತಲಿಬಂದಿ ಬಾಪುರಿಗಳು ತೋಳಬಂದಿ ನಾಗಮುರಿಗಿ ಕರದಿಚಂದ್ರನನ್ನು ಪಿಡಿದು ನಲಿದಸುಂದರಾಂಗ ಚೆಲುವ ಕೃಷ್ಣ 3ಪದಕ ಮುತ್ತಿನ ಸರಗಳ್ಹೊಳೆಯುತವೈಜಯಂತಿಮಾಲೆಸರಿಗೆ ಏಕಾವಳಿಗಳೊಲಿಯುತಪದುಮನಾಭ ನಿನಗೆ ದಿವ್ಯಮುದದಿಕೌಸ್ತುಭಮಾಲೆ ಹೊಳೆಯೆಯದುಕುಲೇಶ ಉಡುಪಿವಾಸಉದದಿ ಶ್ರೀಶಉದ್ಧವಸಖನೆ4ಸೋಮಸೂರ್ಯರ ಕಾಂತಿ ಸೋಲಿಪ ಮುಂಗುರುಳು ಮುಖವುಕಾಮಜನಕ ಕಮಲಲೋಚನಹೇಮಮಣಿ ಕಿರೀಟಕುಂಡಲಪ್ರೇಮತೋರ್ವ ಫಣಿಯ ತಿಲಕಶ್ರೀ ಮಹೀಶ ಶ್ರೀಶನೆ ಶ್ರೀ-ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ಬಾ ಮನೆಗೇ ರಂಗಯ್ಯ ನೀ |ತೋರೋ ಮುಖವೆನಗೆ ಪಘೋರಶರೀರ ಸುಂ |ದರಸೂಕ್ಷ್ಮಾಕಾರನೆ |ಕ್ರೂರ ದಯಾಕರ ಧೀರ ಉದಾರಿಯೆ ಅ.ಪನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲಭಯ ವಿದೂರ | ಫಾಳನೇತ್ರನಮಿತ್ರ|ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ 1ಶೇಷಶಯನ ದೇವಾ | ಭಕ್ತರಭವ|ದೋಷಹರ ಸಂಜೀವಾ |ನಾಶರಹಿತ ಸರ್ವ | ಆಶವಿನಾಶನ |ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ 2ಕಾಲೊಳಂದುಗೆಯೂ | ಪೀತಾಂಬರ |ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ |ವೈಜಯಂತಿಯ ಮಾಲೇ ಮೇಲಾದರತ್ನಕಿರೀಟಕುಂಡಲಧಾರೀ | ಗರುಡನ ಏರಿ 3ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ |ಪದ್ಮವ ಧರಿಸಿದ | ಪಂಕಜನೇತ್ರವೈ- |ಕುಂಠ ವೆಂಕಟಪತೇ 4ಧಾರುಣಿ ಭಾರವನೇ | ಇಳುಹಲವ |ತಾರಗಳೆತ್ತುವನೆ |ಚಾರುಭುಜಾನ್ವಿತ |ಕೌಸ್ತುಭಮಣಿಹಾರ | ವಾರಿಜನಾx
--------------
ಗೋವಿಂದದಾಸ
ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ108ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಮನಸಿಟ್ಟು ಭ್ರಮಿಸುವರೇನೆ -ಘನ - |ಗುಣವಂತನೇನವ ಜಾಣೆ ? ಪಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪಜಲವಾಸಿ ಮುಖವೊಳಸೆಳೆವ - ಇವ |ನೆಲವ ಕೆದರಿ ಕಂಬದಿ ಬಾಯ್ ತೆಗೆವ ||ಇಳೆಯನಳೆದ ಕೊರಳಗೊಯ್ಕ ವನವಾಸಿಯ |ಕೊಳಲಪಿಡಿದ ಕುರುಬಲವನಳಿದಾತಗೆ 1ಅಂದು ಮಧುರೆಯಲಿ ಪುಟ್ಟಿದನ - ಆ |ನಂದಗೋಪ - ಯಶೋದೆ ಕೋಮಲನ ||ಕಂದನಾಗಿ ಮೊಲೆಯುಂಡು ಪೂತನಿಯನು |ಕೊಂದು ಕಂಸರಪುರ ತಂದೆಗಿತ್ತವಗೆ2ಬತ್ತಲಿರುವ ಶ್ರೀನಿರ್ವಾಣಿ - ತೇಜಿ - |ಹತ್ತಿ ಪಿಡಿದ ಖಡ್ಗಪಾಣಿ ||ಮತ್ತರನೆಲ್ಲರ ಮರ್ದಿಸಿ ಬಲವಂತ |ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮುಸ್ತೈದು ಮಾಡಿದಮದನನಾರಿಯನೆತ್ತಿವಸ್ತು ತಿಳಿದವರಿಗೆ ಆಯಿತದು ಕತ್ತಿಪಎರಡು ಸ್ತನಗಳು ಎಂಬ ಎರಡು ಬಿರಡೆಯ ಮಾಡಿಪರಿಶುದ್ಧ ಪಚ್ಚಾಳವೆಂಬ ಪರಜು ಮಾಡಿಮುಕುರ ಮುಖವೆಂಬ ಮೂಲಮನೆ ಮಾಡಿಗರಿಯವೇಣಿಯು ಎಂಬ ಗೊಂಡೆಗಳನೇ ಮಾಡಿ1ದೇಹ ನಿಡಿದು ಎಂಬ ದೊಡ್ಡ ಅಲಗನೆ ಮಾಡಿಮೋಹವೆಂದೆಂಬ ಮೊನೆಯ ಮಾಡಿಸಾಹಸವೆಂದೆಂಬ ಸಾಣೆಯನೆ ಮಾಡಿಗಹಗಹಿಕೆ ಎಂದೆಂಬ ಘನತರಹದನ ಮಾಡಿ2ಭೋ ಎನುತ ಕೂಗಿ ಕೈಗೆ ಕತ್ತಿಯ ಕೊಂಡುಬಾಯ ಬಿಡಲು ಜಗವ ಬಿದಿರುತ್ತಲಿಮಾಯೆಹರಿದು ಚಿದಾನಂದ ಭಕ್ತರ ಮುಟ್ಟದೆದಾಯವರಿತು ಜಗವ ಧಾತುಗೆಡಿಸಿದನು3
--------------
ಚಿದಾನಂದ ಅವಧೂತರು
ಯಾವಾಗ ಬರುವನಂತೆ ನಿನ್ನಯ ರಮಣ-ಗ್ಯಾವ ರೂಪವೊ ಕಾಂತೆ ಪದೇವರ ದೇವನಂತೆ ಜೀವಿಗಳೊಡೆಯನಂತೆಭಾವಜನಯ್ಯನಂತೆ ದೇವಿ ನಿನ್ನದು ಕಾಂತೆ ಅ.ಪನೀರೊಳಗಿರುವನಂತೆ ಬೆನ್ನೊಳುಘೋರಭಾರವ ತಾಳ್ದನಂತೆ ಕೋಟೆಯೊಳಗೆಕ್ರೂರದೈತ್ಯನ ಸೀಳ್ದನಂತೆಸಾರಿ ಕಂಬದಿ ಕರುಳ ಹಾರ ಧರಿಸಿರ್ದನಂತೆ 1ಬಡವ ಬ್ರಾಹ್ಮಣನಂತೆ ಹಡೆದವಳನ್ನುಕಡಿದ ಮಹಾವೀರನಂತೆಅಡವಿಯೊಳ್ಕೋಡಗಬಲದೊಡನಿರ್ಪಂತೆಪೊಡವಿಯೊಳ್ ನರನ ಬಂಡಿ ಹೊಡೆಯುವನಂತೆ 2ಬತ್ತಲೆಯಿರುವನಂತೆ ಅಲ್ಲಲ್ಲಿತೇಜಿಹತ್ತಿ ಸುತ್ತಾಡುವನಂತೆಕುತ್ತಿಗೆ ಮೇಲಣ ಕುದುರೆಯ ಮುಖವಂತೆಉತ್ತಮನಂತೆಶ್ರಿೀನಿವಾಸ ಗೋವಿಂದನಂತೆ 3
--------------
ಗೋವಿಂದದಾಸ
ರಕ್ಷಿಸು ಮಹಮಾಯೆ ಕರುಣ ಕ-ಟಾಕ್ಷದಿಂದಲಿ ತಾಯೆ ಪ.ದಾಕ್ಷಾಯಿಣಿ ದೈತ್ಯಾಂತಕಿವರನಿಟಿ-ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.ವಾಸವಮುಖವಿನುತೆ ರವಿಸಂ-ಕಾಶೆ ಸುಗುಣಯೂಥೇಭಾಸುರಮಣಿಗಣಭೂಷೆ ತ್ರಿಲೋಕಾ-ಧೀಶೆ ಭಕ್ತಜನಪೋಷೆ ಪರೇಶೆ 1ಗುಹಗಣಪರಮಾತೆ ದುರಿತಾ-ಪಹೆ ದುರ್ಜನ ಘಾತೆಬಹುಕಾಮಿತಪ್ರದೆ ಭಜಕಜನೋರ್ಜಿತೆಮಹಿತೆ ಯೋಗಿಹೃದ್ಗುಹನಿವಾಸಿನಿಯೆ 2ಶುಂಭಾಸುರಮಥಿನಿ ಸುರನಿಕು-ರುಂಬಾರ್ಚಿತೆ ಸುಮನಿರಂಭಾದಿಸುರನಿತಂಬಿನೀ ಜನಕ-ದಂಬಸೇವಿತಪದಾಂಬುಜೆ ಗಿರಿಜೆ 3ಅಷ್ಟಾಯುಧಪಾಣಿ ಸದಾಸಂ-ತುಷ್ಟೆ ಸರಸವಾಣಿಸೃಷ್ಟಿಲಯೋದಯಕಾರಿಣಿ ರುದ್ರನಪಟ್ಟದ ರಾಣಿಪರಾಕುಕಲ್ಯಾಣಿ4ನೇತ್ರಾವತಿ ತಟದ ವಟಪುರ-ಕ್ಷೇತ್ರಮಂದಿರೆ ಶುಭದಾಸುತ್ರಾಣಿ ಲಕ್ಷ್ಮೀನಾರಾಯಣಿ ಸ-ರ್ವತ್ರ ಭರಿತೆ ಲೋಕತ್ರಯನಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು
ವಂದಿಪೆ ಶ್ರೀವರನೇ | ಸುಂದರನೇ |ವಂದಿಪೆ ಶ್ರೀವರನೇಪಆಶ ಪಾಶಕ್ಲೇಶವ ಬಿಡಿಸೈ |ದಾಸಗೆ ದಯತೋರಿ1ಧೀರನೆ ಶೂರನೆ | ವೇದೋದ್ಧಾರನೆ |ತೋರಿಸೊ ಮುಖವನ್ನೆ2ಶೋಕಮೋಹಾನೇಕದಿ ಬಳಲಿದೆ |ನೀ ಕೃಪೆ ತೋರಿನ್ನು3ನಂದನ ಕಂದ ಗೋವಿಂದನ ¥್ಞಲಿ¸Àುಚಂದದಿ ಮೈದೋರಿ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಶ್ರೀ ಗೋಪಾಲ ದಾಸಾರ್ಯವಿಜಯಶ್ರೀ ಲಕ್ಷ್ಮೀ137ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆಬಾಗಿ ಶರಣಾದೆನು ಸತತ ನಿಶ್ಚಯದಿಜಗದಾದಿಕರ್ತಅಜಅಘದೂರ ಸುಗುಣಾಬ್ಧಿತುರಗಾಸ್ಯವಿಜಯಶ್ರೀನಿವಾಸ ಪ್ರಿಯತಮರು || ಭಾಗಣ್ಣಪನಾರಸುಗುಣಾರ್ಣವನು ಶ್ರೀರಮಾಪತಿ ಹಂಸಸರಿಸಿಜಾಸನಸನಕದೂರ್ವಾಸಇಂಥಾಪರಮೋತ್ಕøಷ್ಟಗುರುಪರಂಪರೆಗೆ ಶರಣೆಂಬೆಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು 1ಸದಾಗಮಾಮಾಯಗಳು ಬ್ರಹ್ಮ ಧಾಮವೆÉಂದುಉದ್ಘೋಷಿಸುತಿವೆ ಮುಖ್ಯವಾಯುದೇವಮಾತರಿಶ್ವಸೂತ್ರಪವಮಾನಮುಖ್ಯಪ್ರಾಣಪ್ರತಿರಹಿತ ಬಲಜ್ಞಾನರೂಪಹನುಮ ಭೀಮ ಮಧ್ವನ್ನ2ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವಅಚ್ಯುತಪ್ರೇಕ್ಷರಲಿ ಸಂನ್ಯಾಸಕೊಂಡುಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದಸಜ್ಜನರನ್ನುದ್ಧರಿಸಿ ಸತ್‍ಜ್ಞಾನವಿತ್ತ 3ಶ್ರೀ ಮಧ್ವಗುರು ವಂಶಸ್ಥಪದ್ಮನಾಭನರಹರಿಮಾಧವಾಕ್ಷೋಭ್ಯಜಯ ವಿದ್ಯಾಧಿರಾಜವಿದ್ಯಾಧಿರಾಜರ ಶಿಷ್ಯರು ಈರ್ವರುಸಾಧು ಉತ್ಕøಷ್ಟರೀ ತೀರ್ಥರ್‍ಗಳಿಗೆ ಶರಣು 4ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರಹಸ್ತಪದ್ಮ ಜಾತರು ಜಯಧ್ವಜಾರ್ಯಮಾಧವನ ಏಕಾಂತ ಭಕ್ತ ಪುರುಷೋತ್ತಮರುತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು 5ಪದ್ಮನಾಭತೀರ್ಥಜ ಲಕ್ಷ್ಮೀಧರರ ವಂಶಜಾತ ಸುವರ್ಣವರ್ಣ ತೀರ್ಥಾಭಿದರಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀಪಾದರಾಜರು ಈ ಸರ್ವರಿಗೂ ಶರಣು 6ಶಿಂಶುಮಾರಪುಚ್ಛಶ್ರಿತರ ಅವತಾರರೇವಸುಮತೀಖ್ಯಾತ ಶ್ರೀಪಾದರಾಜರಲಿಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರಶಿಷ್ಯವರ್ಯ ವ್ಯಾಸರಾಜರು ಸೇರಿದರು 7ವಾದಿಗಜಕೇಸರಿಮಧ್ವಮತೋದ್ಧಾರರುಮೇದಿನೀ ಪ್ರಖ್ಯಾತ ಮಹಾಭಾಗವತರುಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿಸದಾ ಶರಣು ಪಾಲಿಪರುಪ್ರತಿಕ್ಷಣ ದಯದಿ8ಆನಂದ ಮುನಿಕರ ಅರವಿಂದ ಸಂಜಾತವಿಷ್ಣುತೀರ್ಥ ವಂಶಜ ವಾಗೀಶರಹಸ್ತವನರುಹೋತ್ಪನ್ನರು ಸುಮಹಾಮಹಿಮರುಘನದಯಾನಿಧಿ ವಾದಿರಾಜ ಸ್ವಾಮಿಗಳು9ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತುಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರುಭೂಧರಹಯಾಸ್ಯಪ್ರಿಯತಮ ಶ್ರೀ ವಾದಿರಾಜಾರ್ಯ10ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹಸದಾ ಸನ್ನಿಹಿತವಾಗಿರುವ ಮತ್ತುತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ 11ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿವಾದಿರಾಜರು ಭಾವೀಕಲ್ಪ ಮುಖ್ಯವಾಯುಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ 12ವಿದ್ಯಾಧಿರಾಜರ ಎರಡನೇ ಶಿಷ್ಯರುಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರದ್ವಿತೀಯಶಿಷ್ಯ ವಿದ್ಯಾನಿಧಿ ವಂಶಜಾತರುಆದ್ಭುತಮಹಿಮರು ಕರುಣಿ ರಘೋತ್ತಮರು 13ಕಾಮಿತಪ್ರದ ಟೀಕಾಭಾವ ಬೋಧಾರ್ಯರುಎಮ್ಮಪಾಲಿಪ ರಘೋತ್ತಮರಿಗೆ ಶರಣುರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ 14ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರುಸಜ್ಜನರುದ್ಧಾಕರು ಸುಧೀಂದ್ರಸೂರಿನಿಜವಿರಾಗಿ ಯಾದವೇಂದ್ರ ವಿಜ್ಞಾನಿಯುಭಜಕಜನಸುರಧೇನುರಾಘವೇಂದ್ರಾರ್ಯ15ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿಉತ್ಕøಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರುಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು 16ಸೂರಿಕುಲತಿಲಕರು ವಾದಿಕರಿಹರಿ ಖ್ಯಾತಸಿರಿವ್ಯಾಸರಾಯರಲಿ ಮುದ್ರಿಕೆಯಕೊಂಡನಾರದರ ಅವತಾರರೆಂದು ಪ್ರಸಿದ್ಧರುಪುರಂದರದಾಸಾರ್ಯ ಕರುಣಾಂಬುಧಿಗೆ ಆನಮಿಪೆ17ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣುವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ 18ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿಮಲಗಿರಲು ಶ್ರೀ ಗೋಪಾಲದಾಸಾರ್ಯರುಬಲುಕರುಣದಲ್ಲಿ ಮುಂದೆ ನಿಂತು ಯತಿಕೃತಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ 19ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನುಈ ಮಹೀಯಲ್ಲಿ ಗೋಪಾಲದಾಸರಾಗಿರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರುನಮಿಸಿ ಶರಣಾದೆ ಈ ಉದಾರ ಕರುಣಿಗೆ 20ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆಉಪದೇಶಮಾಡಿದ ಕಪಿಗೋತ್ರದವರುಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರುಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು 21ತರುಣತನಾರಭ್ಯ ಹರಿದಾಸತ್ವ ಒದಗಿಸಿಪರಿಪರಿ ವಿಧದಲ್ಲಿ ಔದಾರ್ಯದಿಂದಕಾರುಣ್ಯಬೀರಿ ಕಾಪಾಡುತಿರುವಂಥಾ ಈಹರಿಪ್ರತಿಮಾರೂಪ ಗುರುಸರ್ವರಿಗೂತಂದೆ ತಾಯಿಗೂ ಶರಣು 22ದಧಿಶಿಲಾ ಎಂಬುವರು ಆಡಂಬರ ಪ್ರಿಯರುಮಂದಿಗಳು ಮೊಸರು ಕಲ್ಲೆಂದು ಕರೆಯುವರುಸಾಧುವೈಷ್ಣವವಿಪ್ರಮುರಾರಿರಾಯರುಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ 23ಪುತ್ರ ರತ್ನಗಳು ನಾಲ್ಕು ಈ ದಂಪತಿಗೆಅಗ್ರಜಭಾಗಣ್ಣ, ಸೀನಪ್ಪ, ದಾಸಪ್ಪತರುವಾಯ ರಂಗಪ್ಪ ನಾಲ್ಕನೆಯವನಾಗಿಗೌರವದಿ ಚರಿಸಿತು ಮುರಾರಿರಾಯರ ಕುಟುಂಬ 24ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿಭೂಸುರವರ್ಯರು ಮುರಾರಿರಾಯರು ಸ್ವರ್ಗತಾ ಸೇರಿದರುಸತಿಸುತರನ್ನು ಬಿಟ್ಟು25ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲುಮಾಲೋಲ ಪಾಲಿಸುವ ಕರ್ತನ್ನೇ ನಂಬಿಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡುಒಳ್ಳೆಯ ಜನಪದ ಶಂಖಪುರವೈದಿದಳು 26ಶಂಖಪುರ ಹತ್ತಿರವೇ ಹನೂಮಂತನ ಗುಡಿಮಕ್ಕಳ ಸಹ ಅಲ್ಲಿ ವಾಸಮಾಡಿಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿಚಿಕ್ಕ ಜಮೀನು ಕೊಂಡಳು ದಾನವಾಗಿ 27ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತುದಾನಿಗಳುಭಾಗವತಶ್ರೇಷ್ಠರಾದ್ದರಿಂದಹನುಮ ಗೋಪಾಲಾನುಗ್ರಹದಿಂದ ಐವರೂಧಾನ್ಯಸಮೃದ್ದಿ ತೊರೆದರು ಆತಂಕ 28ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ 29ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂಅಧಮ ಅಧಿಕಾರಿ ಮಾಡಿದ ದ್ರೋಹದಿಂದಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ 30ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆದೀನ ರಕ್ಷಕ ಸತ್ಪತಿ ಶ್ರೀಹರಿಈವ31ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿಭಗವದ್ವಿಷಯ ಕಲಿತರೂ ಭಾಗಣ್ಣ 32ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿಬಂಧುಗಳಿವರನ್ನುದಾಸೀನಮಾಡಿದರುಇಂದಿರಾಪತಿವೆಂಕಟಕೃಷ್ಣಗೋಪಾಲಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ 33ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವಅಹರಹ ಸೂಕ್ಷ್ಮಾರ್ಥಅನುಸಂಧಾನವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ 34ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವುಮಾಧವನೇ ಗಾಯತ್ರಿನಾಮ ಹಯಗ್ರೀವಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನುಹೃದಯ ಪ್ರಾಣಾಧಾರದಿವ ಪರಸ್ವರೂಪಪಾದತ್ರಯವು ಜಗತ್ಪಾದಸದೃಶ35ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ 36ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯಶ್ರೀ ಗಾಯತ್ರೀನಾಮ ನಾರಾಯಣನನ್ನಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ 37ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವುಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ 38ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪಹಿತದಿ ಆಶೀರ್ವದಿಸಿ ಪೋದಂತೆ ಪೋಯಿತುಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ 39ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿಇಂದುತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರುಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ 40ತತ್ವಮಾತೃಕಾನ್ಯಾಸಗಳ ಚರಿಸಿಮಂತ್ರ ಮೂಲಪ್ರಣವಅಷ್ಟಾಕ್ಷರೀ ಗಾಯತ್ರೀಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯವ್ಯಾಪ್ತಿವಿಜ್ಞಾನಪುಟ್ಟಿತು ಈ ಚೌತಾಪರೋಕ್ಷಿಗೆ41ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿಬಂದು ಕೇಳುವವರಿಗೆ ಯೋಗ ಪೇಳಿದರು 42ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆಭಾಗಣ್ಣ ಈತತ್ವಜ್ಞಾನ ಪೂರ್ವಕದಿಲೌಕಿಕ ಧನ ಅಪೇಕ್ಷಿಸದಿದ್ದರೂ ಜನರುಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ 43ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆಸರ್ವೇಶನ ಸ್ತೋತ್ರಕವನ ಪಟು ಎಂದುಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತಕವಿಯನ್ನ ನಿಗ್ರಹಸಿ ಓಡಿಸಿದರು ಧೀರ 44ದಿಗ್ವಜಯ ಜಯಶೀಲನೆಂದು ಖ್ಯಾತ ಆಕವಿಭಾಗಣ್ಣ ಸೋಲಿಸಿ ಓಡಿಸಿದ್ದುಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿಭಾಗಣ್ಣಗೆ ಸನ್ಮಾನ ಮಾಡಿದರು 45ಗದ್ವಾಲರಾಜನು ಇನ್ನೂ ಬಹು ಪ್ರಮುಖರುಬಂದು ನೇರವಾಗಿ ಭಾಗಣ್ಣನಲ್ಲಿವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ 46ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆಇಂದುಶ್ರೀಕೃಷ್ಣನ ಒಲುಮೆಯಿಂದಬಂದು ಸೌಭಾಗ್ಯ ಶ್ರೀ ದ್ರವ್ಯಗಳುಔದಾರ್ಯದಿ ದಾನಾದಿಗಳ್ ಮಾಡಿದರು 47ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳುಕಡು ನಿರೋಧ ಮಾಡಿದರು ಮೂವರನ್ನು 48ವೆಂಕಟೇಶನ ಇಚ್ಛಾ ಈಮೂವರು ಅಣ್ಣಭಾಗಣ್ಣ ನಾಶ್ರಯದಲ್ಲೇವೆ ಇದ್ದುಅಗಲದೆ ಶ್ರೀಹರಿಗುಣಾನುವರ್ಣನಾಗಳಸುಗಾನ ಮಾಡುತ್ತಾ ಇರಬೇಕು ಎಂದು 49ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿಸುಗುಣವಂತ ತಮ್ಮಂದಿರನ್ನ ಕರೆತಂದುಅಗಣಿತಗುಣಾರ್ಣವ ಶ್ರೀಯಃ ಪತಿಯ ಸೇವೆಗೆಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು 50ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು 51ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡುದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದುಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲುಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ 52ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲುಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ 53ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮಉತ್ತಮ ಬ್ರಾಹ್ಮಣ ವೇಂಕಟನರಸಿಂಹಾಚಾರ್ಯದಂಪತಿಗೆ ಪುತ್ರರತ್ನ ವೇಂಕಟರಾಮಾಚಾರ್ಯಮಂದತನ ತೋರಿಸಿದ ಪುಸ್ತಕ ವಿದ್ಯೆಯಲ್ಲಿ 54ಭಾಗಣ್ಣ ಆರ್ಯರ ಪ್ರಭಾವದಲಿ ಆದರವೇಂಕಟನೃಸಿಂಹಾರ್ಯರ ಭಾರ್ಯೆಗೆ ಉಂಟುಭಾಗಣ್ಣನಲಿ ಪೋಗಿ ಮಗನ ತಿದ್ದುವ ಬಗೆಹೇಗೆಂದು ಅರಿಯಿರಿ ಎಂದಳು ಸಾಧ್ವೀ 55ಸಾಧ್ವೀ ಆಸ್ತ್ರೀರತ್ನಳಿಗೆ ಭಾಗಣ್ಣನುಔದಾರ್ಯದಿ ಒದಗುವ ಜ್ಞಾನಿವರ್ಯನೆಂದುಸುದೃಢದಿ ನಂಬಿದರೂ ಆಚಾರ್ಯ ಅರ್ಧಮನಸಿಂಪೋದರು ಕಂಡರು ಭಾಗಣ್ಣನ ಗುಡಿಯಲ್ಲಿ 56ವೇಂಕಟನೃಸಿಂಹಾರ್ಯ ತನ್ನ ಪಾಂಡಿತ್ಯ ಗುರುತನ ನೆನದುಆಕಸ್ಮಿಕ ಬೇಟಿಯಂತೆ ತೋರ್ಪಡಿಸಿವೇಂಕಟೇಶ ತುಳಸೀ ಸನ್ನಿಧಾನದಿ ಸಂಭಾಷಿಸಲುಶೀಘ್ರ ಕಂಡರು ಭಾಗಣ್ಣನ ಜ್ಞಾನಪ್ರಭಾವ 57ಭಾಗಣ್ಣ ಅಭಯವನಿತ್ತು ಆಚಾರ್ಯರನ್ನಹೋಗಿ ಬನ್ನಿ ಆತಂಕಬೇಡ ಮಹಾತ್ಮಮಗ ಸೂರಿಕುಲ ರತ್ನನು ವೇಂಕಟರಾಮಪ್ರಕಾಶಿಪುದು ಆತನ ಜ್ಞಾನಕ್ಷಿಪ್ರದಲೇ ಎಂದರು 58ಭಾಗಣ್ಣ ಆರ್ಯರು ಹೇಳಿದ ರೀತಿಯಲ್ಲೇವೇಂಕಟರಾಮಾರ್ಯ ಏಕವಾರ ಶ್ರವಣದಲ್ಲೇವೇಂಕಟನರಸಿಂಹಾಚಾರ್ಯ ಚಕಿತರಾಗುವಂತೆಅಕಳಂಕ ಪಾಂಡಿತ್ಯಪ್ರೌಢಿಮೆ ತೋರಿಸಿದ 59ಪ್ರತಿದಿನ ಐಜಿಯವರು ಭಾಗಣ್ಣ ದಾಸರೂ ಈರ್ವರುತತ್ವ ವಿಚಾರ ಹರಿಭಜನೆ ಮಾಡಿಒಂದು ದಿನ ಬ್ರಹ್ಮ ಜಿಜ್ಞಾಸ ಸ್ವಾರಸ್ಯದಲಿ ಸಾಯಂಸುಧ್ಯಾಕಾಲ ಅತಿಕ್ರಮವು ಆಯಿತು 60ಸೂರ್ಯಾಸ್ತ ಮನಃಪೂರ್ವಕರ್ತವ್ಯಕರ್ಮಬಿಟ್ಟದೋಷಪ್ರಾಯಶ್ಚಿತ್ತಾಘ್ರ್ಯ ಕೊಡಲಿಕ್ಕೆ ಇರಲುಭಯಬೇಡ ದೋಷವಿಲ್ಲ ಎಂದು ಭಾಗಣ್ಣಾರ್ಯಸೂರ್ಯನ್ನ ತಾನು ನೋಡಿ ತೋರಿಸಿದರು ಐಜೀಗೆ 61ಇಂದ್ರಜಾಲವಲ್ಲವು ಕ್ಷುದ್ರೋಪಾಸನಾದಿಗಳಿಂದಲ್ಲಅರ್ಧರಾತ್ರಿಯಲಿ ಸೂರ್ಯನ್ನ ನೋಡಿ ನೋಡಿಸಿದ್ದುಮಾಧವಶ್ರೀ ಮುಖ್ಯ ವಾಯುದೇವರು ರುದ್ರಸದಾ ಒಲಿದಿರುವ ಭಾಗಣ್ಣಗೆ ಇದು ಆಶ್ಚರ್ಯವಲ್ಲ 62ತೇಜೋಜಲ ಪೃಥ್ವೀಮುನಿಗಳು ಶ್ರೀ ಪ್ರಾಣರುದ್ರರುವಜ್ರ, ಅಗ್ನಿ, ವರುಣ ಪೃಥಿವ್ಯಾದಿ ಸರ್ವರೊಳಗೊರಾಜನೆ ನಿಯಮಿಸುವ ಅನಿರುದ್ಧ ಜಗದೀಶಜಗಜ್ಜನ್ಮಾದಿಕರ್ತ ಗಾಯತ್ರೀ ಭರ್ಗಸರ್ವಗನು 63ತೀರ್ಥಯಾತ್ರೆಯ ತೀರ್ಥರೂಪ ಭಾಗಣ್ಣ ತನ್ನಭ್ರಾತರೊಡಗೂಡಿ ಹೊರಟಿಹರುಮಂತ್ರಾಲಯ ವೇಂಕಟಗಿರಿ ಘಟಿಕಾದ್ರಿಹಸ್ತಿವರದಕಂಚಿ ಮೊದಲಾದ ಕ್ಷೇತ್ರ64ವೇಂಕಟ ಕೃಷ್ಣನ ಮುದ್ರೆಯಿಂ ಕವನಗಳಉತ್ಕøಷ್ಟ ರೀತಿಯಲ್ಲಿ ರಚಿಸಿ ಭಜಿಸುತ್ತಾಭಾಗಣ್ಣ ಆದವಾನೀಯಲ್ಲಿ ತಿಮ್ಮಣ್ಣಾರ್ಯರಲ್ಲಿಮುಕ್ಕಾಮು ಹಾಕಿದರು ಸ್ವಲ್ಪಕಾಲ 65ದಿವಾನು ತಿಮ್ಮಣ್ಣ ರಾಯರ ಉಪಚಾರಸರ್ವ ಅನುಕೂಲ ಆತಿಥ್ಯಕೊಳ್ಳುತ್ತಾದಿವ್ಯಮಾರುತೀ ಗುಡಿಗೆ ಪ್ರತಿದಿನ ಪೋಗಿಸೇವೆಸಲ್ಲಿಸಿದರು ಭಾಗಣ್ಣ ಶ್ರೀಹನುಮನಿಗೆ 66ಶ್ರೀ ವಿಜಯದಾಸಾರ್ಯರು ಶ್ರೀ ವ್ಯಾಸದೇವರ ಕಂಡುಶ್ರೀವರ ಒಲಿದು ಪುರಂದರಾರ್ಯರ ಕೈಯಿಂದದಿವ್ಯನಾಮಾಂಕಿತ ಬೀಜಾಕ್ಷರಗಳ ಹೊಂದಿಭುವಿಯಲಿ ಪ್ರಖ್ಯಾತರಾಗಿ ಬಂದಿದ್ದರಾಗ 67ವಿಜಯವಿಟ್ಠಲದಾಸರಾಯರು ತಮ್ಮನಿಜ ಶಿಷ್ಯವೃಂದದಲಿ ವ್ಯಾಸವಿಜಯಸಾರಥಿಗೋಪಾಲಹಯವದನಭಜನೀಯ ಈ ಮೂರು ಅಂಕಿತಕೊಡಬೇಕಾಗಿತ್ತು 68ಗೋಪಾಲವಿಠ್ಠಲಸುನಾಮಭಾಗಣ್ಣಗೆಸುಪ್ರಿಯ ಮನದಿಂದ ಇತ್ತು ಹಯವದನಸುಪವಿತ್ರ ಅಂಕಿತ ಚೀಕಲಪರವಿ ಆನಂದನಿಗೆಕೃಪಾಂಬುಧಿ ವಿಜಯದಾಸಾರ್ಯ ಇತ್ತರು 69ಶ್ರೀಪುರಂದರದಾಸಾರ್ಯರನುಗ್ರಹದಲಿಸುಪುಣ್ಯವಂತನು ಸಹನ ಶಾಲಿಯಾದಶ್ರೀಪಪ್ರಿಯ ತಿಮ್ಮಣ್ಣ ವೇಣುಗೋಪಾಲನಾಮತಾಪೊಂದಿದ ವಿಜಯದಾಸರು ಕೃಪದಿ ಕೊಡಲು 70ಶೋಭನ ಜ್ಞಾನಪ್ರದ ವ್ಯಾಸ ನಾಮಾಂಕಿತವಸುಬ್ಬಣ್ಣ ಕಲ್ಲೂರು ಪಂಡಿತೋತ್ತಮಗೆಲಭಿಸುವಂತೆ ವಿಜಯದಾಸ ಮಹಂತರುಕೃಪೆಯಿಂದ ಒದಗಿಸಿದರು ಔದಾರ್ಯನಿಧಿಯು 71ಗೋಪಾಲ ವಿಟ್ಠಲಾಂಕಿತದಲಿ ಭಾಗಣ್ಣಶ್ರೀಪಪ್ರಿಯತಮ ಪದ್ಯ ಸುಳಾದಿಗಳ ರಚಿಸಿಸುಪುಣ್ಯವಂತ ಸೀನಪ್ಪ ದಾಸಪ್ಪ ಈರ್ವರಿಗೂಉಪದೇಶ ಮಾಡಿದರು ಮಂತ್ರೋಪೇತ ನಾಮಾಂಕಿತಗಳನ್ನು 72ಕರಿರಾಜವರದನು ಗರುಡವಾಹನಸಿರಿವರವಾಸು ದೇವನೇ ವರದರಾಜನೆಂದೂಧರೆಯಲುತ್ತಮ ಕಂಚೀಪುರದಿ ಇರುವವನು ನಾಮವರದಗೋಪಾಲ ವಿಟ್ಠಲನಾಮ ಶ್ರೀನಿವಾಸನಿಗೆ 73ಇತರಾದೇವಿಯ ಸುತನೆನಿಸಿ ಮಹಿದಾಸನಾಮದಲಿಪ್ರಾದುರ್ಭವಿಸಿದ ಶ್ರೀಯಃಪತಿಗೆ ಪ್ರಿಯತಮವುಬೃಹತೀ ಸಹಸ್ರದಲಿ ವಿಷ್ಣು ನಾಮ ವಿಶ್ವಶಬ್ದಕ್ಕೆವಾಯುದೇವಾಂತರ್ಗತನು ಎಂದು ಜೆÕೀಯ 74ಮಧ್ವಾ ್ಯಖ್ಯ ವಾಯುದೇವರಗುರುಮಹಿದಾಸವೇದವ್ಯಾಸ ಹಂಸಾಖ್ಯ ಕಪಿಲ ಶ್ರೀಪತಿಯಉತ್ತಮನಾಮ ಗುರುಗೋಪಾಲ ವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 75ಭಂಗಾರದಂಥ ವೈಷ್ಣವ ಸಂತತಿಯ ಪಡೆದುರಂಗನಾಥನನುಗ್ರಹದಿ ಪಾಲಿಸುವಂಥಾರಂಗಪ್ಪರಾಯರಿಗೆ ತಂದೆ ಗೋಪಾಲವಿಟ್ಠಲನಾಮಅಕಳಂಕ ಯದುಪತಿಯ ನಾಮವ ಕೊಟ್ಟರು 76ವಿಜಯರಾಯರ ಪರಮಭಕ್ತಾನುಗ್ರಹಿವಿಜಯಸಾರಥಿಪ್ರಿಯ ಗೋಪಾಲರಾಯರುವಿಜಯಾರ್ಯರ ಸುಪ್ರಸಾದದ ಬಲದಿಂದಅನುಜರಿಗೆ ಒದಗಿಸಿದರುಅಪರೋಕ್ಷ77ಗೋಪಾಲ ವರದಗುರು ಗೋಪಾಲದಾಸರ್ಗಳಅಪರೋಕ್ಷಮಹಿಮೆಗಳ ಸಾಧು ಸಜ್ಜನಗಳತೋರ್ಪಡಿಸಿ ಬೇರೆ ಬೇರೆಯಾಗಿಟ್ಟು ಮೂವರನ್ನುಶ್ರೀಪಪ್ರಿಯ ಕವನವ ರಚಿಸಿಗುರುಹೇಳಿದರು78ಗುರುಅಂತರ್ಗತನಾದ ಗೋಪಾಲನೃಹರಿಯಸ್ಮರಿಸಿ ಮೂವರೂ ಗುರುನಾಮವೂ ತದಂತಸ್ಥಹರಿಗೆ ಸುಪ್ರೀತಿಕರಯೆಂದು ರಚಿಸಿದರುಗುರುಸತ್ಯಬೋಧರ ಪ್ರಭಾವತೋರ್ಪಡಿಸಿ79ಸೂರಿಗಳುಗೋಪಾಲದಾಸಾದಿ ಮೂವರೂಬರೆದ ಕೀರ್ತನೆಯಲ್ಲಿ ಸತ್ಯಬೋಧಾರ್ಯರಸ್ವರೂಪವ ಸೂಕ್ಷ್ಮದಲಿ ಸೂಚಿಸಿಹರು ಎಂದುಅರಿವರು ಜ್ಞಾನಿಗಳು ಬಲ್ಲೇನೇ ನಾನು? 80ನೆರೆÀದಿದ್ದ ಜನರೆಲ್ಲ ಆಶ್ಚರ್ಯ ಚಕಿತರುಪರಿಪರಿ ವಿಧದಲ್ಲಿ ಮೂವರನ್ನು ಕೊಂಡಾಡೆಗುರುಸತ್ಯಬೋಧರು ಯುಕ್ತ ರೀತಿಯಲ್ಲಿಭಾರಿತರ ಭೂಷಣಾನುಗ್ರಹ ಮಾಡಿದರು 81ತಂದೆ ಗೋಪಾಲದಾಸಾರ್ಯರು ಮನೆಯಲ್ಲೇನಿಂದುಸತಿಸುತರಿಗೆ ಹರಿಸೇವೆಯನ್ನಒದಗಿಸುತ ಮಾತ್ರಂತರ್ಯಾಮಿ ಹರಿಯನ್ನ ತಾನುಭಕ್ತಿಪೂರ್ವಕ ಮಾಡುತ್ತಿದ್ದರು ಸೇವಾ ಸುಧ್ಯಾನ ಪರರು 82ಹರಿಕ್ಷೇತ್ರ ಹರಿತೀರ್ಥಯಾತ್ರೆಯಗೈಯ್ಯಲುಸಿರಿವಿಜಯರಾಯರ ಅನುಗ್ರಹ ಕೊಂಡುಹೊರಟರು ಗೋಪಾಲದಾಸಾರ್ಯರುವರದಗುರುಗೋಪಾಲದಾಸರ ಸಮೇತ83ಉಡುಪಿಕ್ಷೇತ್ರಸ್ಥ ಹರಿಮೂರ್ತಿಸ್ಥ ತೀರ್ಥಸ್ಥಕಡಲಶಯನನ್ನ ನೋಡಿ ಸೇವಿಸಲಿಕ್ಕೆಒಡಹುಟ್ಟಿದವರ ಸಹ ನಡೆಯುತ್ತಿರುವಾಗಅಡ್ಡಗಟ್ಟಿದ ಕ್ರೂರನು ಭೀಮಾಭಿದನು 84ಶ್ರೀ ವಿಜಯದಾಸರಿಂ ಮೊದಲೇ ಅನುಗ್ರಹೀತಭಾವುಕಾಗ್ರಣೀ ಗೋಪಾಲಾರ್ಯರು ಹರಿಗುರುಗಳಿತ್ತದಿವ್ಯ ಸಾಮಥ್ರ್ಯದಿಂ ಸಸೈನ್ಯ ಭೀಮನ್ನತೀವ್ರ ನಿಶ್ಚೇಷ್ಟಗೈಸಿ ಶರಣರ ಮಾಡಿದರು 85ಉಡುಪಿಸುಕ್ಷೇತ್ರದಲ್ಲಿ ಗೋಪಾಲಾರ್ಯರುಮಾಡಿದ್ದು ವರ್ಣಿಸಲು ಬಲ್ಲೆನೇ ನಾನು ?ಆಟದಲಿ ಜಗಪಡೆವ ಕೃಷ್ಣ ತಾಸುತನಂತೆಆಟವಾಡಿದ ಬಾಲರೂಪದಿ ಕೃಪಾಳು 86ಪೂರ್ವ ದಕ್ಷಿಣ ವರುಣ ದಿಶೆಯಾತ್ರೆಮಾಡಿಶ್ರೀ ವೇಣೀಸೋಮಪುರಕೆ ಮರಳಿ ಬಂದುಕೋವಿದಕುಲರತ್ನ ವಾಸುದೇವವಿಟ್ಠಲ ರಾಮಶ್ರೀವೇಂಕಟರಾಮಾರ್ಯರನ್ನು ಕಂಡರು 87ಉತ್ತನೂರು ಪೋಗಿ ವೇಂಕಟಕೃಷ್ಣನ್ನವಂದಿಸಿ ಬಂಧುಗಳ ಕೂಡ ತಾ ಇದ್ದುಒಂದುದಿನ ನಿಶ್ಚೈಸಿದರು ಪಂಡರೀಪುರಕ್ಕೆ ಪೋಗಿಇಂದಿರಾಪತಿಯನ್ನ ನೋಡಿ ಸೇವಿಸಲು 88ಪತ್ರಪೂ ಪಲ್ಲವ ಫಲವೃಕ್ಷ ದೇಶವುಸುಪವಿತ್ರ ಶ್ರೀ ತುಳಸೀ ಉತ್ಕøಷ್ಟವನದಿಸುಪುಣ್ಯ ಶ್ಲೋಕ ಶ್ರೀದಾಸಾರ್ಯರನ್ನ ಸುತ್ತಿ ಅಟ್ಟಿಶ್ರೀಪತಿ ಕೇಳ್ದ ಅಲೇನಾಹಿ ಎಂದು 89ಶ್ರೀಹರಿ ಸ್ವೇಚ್ಛೆಯಿಂ ಪ್ರಕೃತಿ ಕ್ಷೋಭಿಸಿ ತ್ರಿಗುಣ ಬೆರೆಸಿಮಹದಹಂಕಾರಾದಿ ತತ್ವ ಸೃಷ್ಟಿಗೈದುಬ್ರಹ್ಮಾಂಡ ನಿರ್ಮಿಸಿ ತದಾಶ್ರಯನಾಗಿ ಇಪ್ಪವನು ತಾನೇಮಹಾದ್ಭುತ ಕುದುರೆ ಸವಾರನಾಗಿ ತೋರಿ ಮರೆಯಾದ 90ಆಲೋಚಿಸಿ ತಿಳಿದು ವಿಟ್ಠಲನೇ ಬಂದವನೆಂದುನೀಲಕುದುರೆ ಎಂಬ ಸ್ತೋತ್ರ ಮಾಡಿದರುಪೇಳ್ವರು ವ್ಯಾಪ್ತೋಪಾಸಕ ಜ್ಞಾನಿಗಳು ಇದರ ರ್ಥಮೊದಲನೇ ನುಡಿಯು ಮೇಲೆ ಹೇಳಿದಹರಿಮಹಿಮೆಯೆಂದು ಬಲ್ಲೆನೇ ನಾನು 91ಭೀಮರಥಿ ಸ್ನಾನವು ಪುರಂದರಾರ್ಯರ ನಮಿಸಿಭೂಯಾದಿ ಗುಣಗಣಾರ್ಣವ ವಿಟ್ಠಲನ್ನಪ್ರೇಮೋತ್ಸಾಹದಲಿ ಸನ್ನಮಿಸಿಸ್ತುತಿಸಿರಮ ರುಕ್ಮಿಣಿಯ ನಮಿಸಿದರು ದಾಸಾರ್ಯ 92ಕೋಲ್ಹಾಪುರ ಪೋಗಿ ಮಹಾಲಕ್ಷ್ಮಿ ಮಂದಿರದಿಶೀಲ ಪರಮಾದರದಿ ಲಕ್ಷ್ಮೀನಾರಾಯಣರನ್ನಕೀಲಾಲಜಾದಿ ಪುಷ್ಪಾರ್ಚನೆಗೈದು ಕಾಪಾಡೆಂದು ಕೀರ್ತನೆಗಳಿಂದ ಸ್ತುತಿಸಿದರು 93ಇನ್ನು ಬಹು ಬಹು ಕ್ಷೇತ್ರಯಾತ್ರೆ ಸೋದರರ ಕೂಡಿಅನವರತಸುವ್ರತ ಧ್ಯಾನಪರರಾಗಿಘನಮಹಿಮ ಗೋಪಾಲ ವಿಟ್ಠಲನ ಸ್ತುತಿಸುತ್ತವೇಣೀ ಸೋಮಪುರಕ್ಕೆ ಬಂದರು ತಿರುಗಿ 94ಗುರುಗಳು ವಿಜಯದಾಸಾರ್ಯರ ದ್ವಾರಾಯಾತ್ರಫಲ ಕೃಷ್ಣನಿಗೆ ಸಮರ್ಪಿಸಿಉದ್ದಾಮಪಂಡಿತವೇಂಕಟರಾಮಾರ್ಯರಲಿಇದ್ದು ಪೋದರು ಉತ್ತನೂರ ಸ್ವಕ್ಷೇತ್ರ 95ಉತ್ತನೂರು ವೇಂಕಟಕೃಷ್ಣನಾಲಯ ಮುಂದೆನಿಂತು ತುಳಸೀ ವನದಿಂದ ಸುಳ್ಳಿ ತೆಗೆವಾಗಬಂದರು ಭ್ಯಾಗವಟ್ಟಿ ಶ್ರೀನಿವಾಸಾಚಾರ್ಯವಂದಿಸಿ ನಿಂತರು ಕೈಮುಗಿದು ವಿನಯದಿ 96ಜ್ಞಾನದಲಿ ಋಜುಮಾರ್ಗ ಗರ್ವದಲ್ಲಿನಿತ್ಯಸಂಸಾರಿಮಾರ್ಗಜ್ಞಾನ ಬೋಧಿಸುವುದರಲ್ಲಿ ಪಂಡಿತರಮಾರ್ಗಮಾನುಷಾನ್ನವನುಂಡು ಮಂದಧೀಯಲ್ಲಿ ಗುರುನಿಂದಾಈ ಶ್ರೀನಿವಾಸಾಭಿದನು ಮಾಡಿ ನರಳುತಿದ್ದ 97ಭಾಗಣ್ಣ ಆರ್ಯರು ಶ್ರೀನಿವಾಸಾಚಾರ್ಯಗೆಅಘನಾಶವಿಜ್ಞಾನಲಭಿಸುವ ಸಾಧನವುನಿಗಮಾರ್ಥ ಬೋಧಕ ಉಪದೇಶ ಮಾಡಿ ಪಂಡರಿಪುರ ಪೋಗಿರಿಜಗನ್ನಾಥ ವಿಟ್ಠಲ ಒಲಿದು ಕಾಂಬ ಎಂದರು 98ಶ್ರೀನಿವಾಸಾಚಾರ್ಯರು ದಾಸಾರ್ಯಾರ್ ಹೇಳಿದಂತೆಸುನಿರ್ಮಲ ಭೀಮ ರಥಿಯಲ್ಲಿ ಸ್ನಾನಗೈದುಇನನಲಿ ಅನಿಲಾಂತರ್ಗತ ನಾರಾಯಣನ್ನಧ್ಯಾನಿಸಿ ಭಕ್ತಿಜ್ಞಾನದಿಂದ ಕೊಟ್ಟರು ಅಘ್ರ್ಯ 99ಐದೆರಡು ಸಾಧು ಭಕ್ತಿ ಪ್ರತಿಪಾದ್ಯ ಶ್ರೀ ನಾರಾಯಣನುವಾಗ್ದೇವಿವರವಾಯುಗಳಿಂದ ಋಕ್‍ಸಾಮದಿಂಸ್ತುತಇಪತ್ತೆರಡಕ್ಷರದಲ್ಲಿ ಎರಡನೇ ಮೂರಕ್ಷರ ಬೋಧಿತಆದಿತ್ಯಸ್ಥ ವಾಯುಸ್ಥನ್ನ ಸ್ಮರಿಸಿಕೊಟ್ಟರು ಅಘ್ರ್ಯ 100ಜಗನ್ನಾಥದಾಸರ್ಗೆ ಗೋಪಾಲದಾಸಾರ್ಯಗುರುಜಗತ್ತಲ್ಲಿ ಕಂಡಿಲ್ಲದ ಉದಾರದಲಿತೆಗೆದು ತನ್ನಾಯುಷ್ಯದಿಂ ಚತ್ವಾರಿವರ್ಷಕೊಟ್ಟರುಗುರುಗ ಶ್ರೀವಿಜಯಗೋಪಾಲ ಶ್ರೀನಿವಾಸನ ಪ್ರೀತಿಗೆ101ಭಕ್ತಿಯಲ್ಲಿ ಭಾಗಣ್ಣನೆಂದು ಸುಪ್ರಖ್ಯಾತಭಕ್ತ ಶಿರೋಮಣಿಯು ಗೋಪಾಲ ದಾಸಾರ್ಯಬೀದಿಯಲಿ ಜರುಗದ ರಥಕೂಢನ್ನ ಬಾರೈಯ್ಯಎಂದು ಸ್ತುತಿಸೆ ರಥ ಓಡೋಡಿ ಬಂತು 102ತಿರುಪತಿ ಶ್ರೀ ಶ್ರೀನಿವಾಸನ ರಥವುಸರಸರ ಬಂದದ್ದು ಜನರು ನೋಡಿಹರಿಭಕ್ತಾಗ್ರೇಸ ಗೋಪಾಲ ದಾಸರನ್ನಪರಿಪರಿ ವಿಧದಿ ಕೊಂಡಾಡಿದರು ಮುದದಿ 103ಕಂಚೀ ವರದರಾಜನ ದೇವಾಲಯದಲ್ಲಿಕಿಚ್ಚು ಸೋಕಿ ಚೀಲ ಉರಿಯಲು ಅದನ್ನದಾಸವರ್ಯ ದೂರದೇಶದಲಿದ್ದರೂ | ತನ್ನ ಚೀಲ |ಕಸಕಿ ಶಾಂತ ಮಾಡಿದರು ಕಂಚಿಯ ಉರಿಯ 104ದಾರಿದ್ರ್ಯ ಋಣರೋಗ ಅಪಮೃತ್ಯು ಅಪಿಚಾರಪರಿಪರಿ ಕಷ್ಟೋಪಟಳ ವಿಘ್ನಗಳಗುರುವಿಜಯರಾಯಾಂತರ್ಗತ ಗೋಪಾಲನ ಒಲುಮೆಯಿಂದಎರಗುವರ್ಗೆ ಕಳೆದಿಹರು ಅದ್ಯಾಪಿ ಒದಗುತಿಹರು 105ಗೋಪಾಲದಾಸರಿಗೆವಿಜಯದಾಸರಲ್ಲಿಇಪ್ಪ ಭಕ್ತಿಯ ವರ್ಣಿಸಲಶಕ್ಯಗೋಪಾಲ ದಾಸರನ್ನು ನಂಬಿದವರನ್ನ ವಿಜಯಾರ್ಯ ಕೈ ಬಿಡರುಗೋಪಾಲವಿಜಯವಿಟ್ಠಲ ಬಂದು ತಾನೇ ಒಲಿವ106ಗೋಪಾಲ ದಾಸಾರ್ಯರೇ ನೀವು ವಿಜಯಾರ್ಯರಲ್ಲಿತಪ್ಪದೇ ಮಾಡಿದ ಭಕ್ತಿಯಿಂದದಿ ಎನಗೆಸ್ವಲ್ಪವಾದರೂ ನಿಮ್ಮಲ್ಲಿ ಪುಟ್ಟುವಂತೆ ಮಾಡಿರಿಗೋಪಾಲ ಪ್ರಿಯತಮರೇ ಪಾಹಿಮಾಂ ಶರಣು 107ಹೆಳವನಕಟ್ಟೆ ಗಿರಿಯಮ್ಮ ಮೊದಲಾದಶೀಲ ಶಿಷ್ಯರು ಬಹುಮಂದಿಗಳುಬಲು ಭಕ್ತಿಶ್ರದ್ಧೆಯಿಂ ಉಪದೇಶಗೊಂಡುಜಲಜನಾಭನ ಒಲುಮೆ ಪಾತ್ರರಾಗಿಹರು 108ಜ್ಞಾನ ಭಕ್ತಿ ವೈರಾಗ್ಯವಂತಳು ಗಿರಿಯಮ್ಮಕ, ೃಷ್ಣ ಮಂತ್ರ ಉಪದೇಶ ದಾಸಾರ್ಯರಿಂದಕೊಂಡು ಶ್ರೀ ರಂಗವಿಟ್ಠಲ ಕೃಷ್ಣನ್ನ ಪ್ರತ್ಯಕ್ಷಕಾಣುವಂಥ ಸೌಭಾಗ್ಯ ಶಾಲಿಯಾಗಿಹಳು 109ಅದ್ವಿಜನು ಶೈವನು ಪತ್ನಿ ಸಹಸೇವಿಸಿಮಂತ್ರಾಲಯ ಗುರುಗಳಿಂ ಅನುಕೂಲ ಹೊಂದಿಕೃತಜÕಭಾವದಿ ಲಕ್ಷ ಬ್ರಾಹ್ಮಣ ಭೋಜನ ಮಾಡಿಸುವೆನುಎಂದು ಹರಕೆ ಮಾಡಿಸಲಿಕ್ಕಾಗಲಿಲ್ಲ 110ಸ್ವಪ್ನದಲಿ ಹೇಳಿದರು ಕರುಣಿ ಶ್ರೀ ರಾಘವೇಂದ್ರಗುರುತಪ್ಪದೇ ಹರಕೆ ಸಲ್ಲುವುದು ಮೂವರು ಬ್ರಾಹ್ಮಣರುಸುಪುಣ್ಯವಂತರು ಮಹಾತ್ಮರು ಮರುದಿನ ಬೆಳಿಗ್ಗೆಈ ಪಥದಿ ಬರುವರ್ಗೆ ಭೋಜನ ಮಾಡಿಸೆಂದು 111ವರದಗುರುಗೋಪಾಲದಾಸರು ದಾಸಾರ್ಯರುಅರಿತುಅಪರೋಕ್ಷಸಾಮಥ್ರ್ಯದಿ ಈ ಸ್ವಪ್ನನೇರಾಗಿ ಬರಲಾಗ ಆಶೈವಗುರುಭಕ್ತನುನಾರೀ ಸಹನಮಸ್ಕರಿಸಿ ಸ್ವಾಗತವನಿತ್ತ 112ಮೂವರಿಗೂ ಅಧಿಕವಾದ ಪದಾರ್ಥಗಳನರ್ಪಿಸಿದೇವರ ನೈವೇದ್ಯ ಮೂವರಿಗೂ ಭೋಜನದೇವಗುರುಬ್ರಾಹ್ಮಣ ಪ್ರೀತಿಯಾಗಲಿ ಎಂದು ನಮಿಸಿದರುಶೈವ ಕುಲೀನ ದಂಪತಿ ಭಕ್ತಿ ಪೂರ್ವಕದಿ 113ಅಂದು ರಾತ್ರಿ ಆ ಭಕ್ತ ದಂಪತಿಗೆ ಸ್ವಪ್ನದಲಿಪ್ರೀತಿ ಆಯಿತು ಕೃಷ್ಣನಿಗೆ ಹರಕೆ ಪೂರ್ಣ ಆಯ್ತುಎಂದು ರಾಘವೇಂದ್ರ ತೀರ್ಥ ಸ್ವಾಮಿಗಳು ಹೇಳಿಮುದದಿ ದಂಪತಿಯ ಕೃತ ಕೃತ್ಯ ಮಾಡಿದರು 114ಮೊದಲು ಆದರ ರಹಿತ ವೆಂಕಟನೃಸಿಂಹಾರ್ಯನಿಂದುಗೋಪಾಲ ದಾಸಾರ್ಯರಹರಿಪೂಜಾಪದ್ಧತಿಯ ನೋಡುತಿರೆ ಹನುಮಂತ ದೇವರುಮೂರ್ತಿಮತ್ ಕುಳಿತಿದ್ದುದು ಕಂಡರು 115ಬಂದು ವೆಂಕಟ ನೃಸಿಂಹಾಚಾರ್ಯರು ಮತ್ತುನಿಂದಿಸಿದ ವೈದಿಕರು ತತ್ವ ಕೀರ್ತನೆಗಳಅದ್ಭುತ ಸುಳಾದಿಕೇಳಿನಿರ್ಮತ್ಸರರಾಗಿಬಂದು ಶಿಷ್ಯತ್ವ ಬೇಡಿದರು ಆರ್ಯರಲಿ 116ವೈರಾಗ್ಯನಿಧಿ ಗಂಗಾಧರನ ಅನುಗ್ರಹದಿವೈರಾಗ್ಯ ಯುಕ್‍ಜ್ಞಾನಹರಿಭಕ್ತಿ ಲಭಿಸಿದ್ದಸೂರಿವರ ಗೋಪಾಲ ದಾಸಾರ್ಯ ಜರಿಗೆ ಶಾಲು ರೇಷ್ಮೆಭಾರಿ ಪಲ್ಲಕ್ಕಿ ವೈಭವದಿ ಮೆರೆದರುಹರಿಪ್ರೀತಿಗಾಗಿ117ಪನ್ನಗಾಚಲಶ್ರೀ ಶ್ರೀನಿವಾಸನ ಭಕ್ತಅನಿಮಿಷಾಂಶರು ಗೋಪಾಲ ದಾಸಾರ್ಯಶ್ರೀನಿವಾಸನಪ್ಪಣೆಕೊಂಡು ಊರಿಗೆ ಬಂದುಅವನೀಸುರರಿಗೆ ಔತಣವಿತ್ತು ಧ್ಯಾನದಿ ಕುಳಿತರು 118ಮುಖ್ಯಕಾರಣ ವಿಷ್ಣು ಸ್ವತಂತ್ರ ಎಂದುತಾ ಭಜಿಸಿಶಿಷ್ಯರಿಗೆ ಬೋಧಿಸಿ ಸಜ್ಜನರ ಪೊರೆದುಪುಷ್ಯ ಬಹುಲಾಷ್ಟಮೀಯಲ್ಲಿ ಪೂಷಯದುಪತಿಧಾಮಕೃಷ್ಣ ಭಕ್ತಿರಿಗೌತಣವಿತ್ತು ಐದಿದರು 119ಗದ್ವಾಲ ರಾಜ ಮೊದಲಾದ ರಾಜ ಪ್ರಮುಖರಿಂದಮೇದಿನೀ ಪ್ರಖ್ಯಾತ ಯತಿಗಳು ಪಂಡಿತರಿಂಎದುರಿಲ್ಲದಸೂರಿಐಜೀಯವರಿಂದಲುಸದಾ ಮರ್ಯಾದೆ ಕೊಂಡವರು ದಾಸಾರ್ಯ 120ವಿಜಯದಾಸಾರ್ಯ ಪೂಜಿಸಿದಹರಿಮೂರ್ತಿವಿಜಯವಿಟ್ಠಲ ಪ್ರತಿಮೆ ಅಂತರ್ಗತನ್ನವಿಜಯಸಾರಥಿಪ್ರಿಯ ಗೋಪಾಲ ದಾಸರು ಪೂಜಿಸಿರಾಜಿಸುತಿಹ ಮೂರ್ತಿಇಹುದುಅವರಮನೆಯಲ್ಲಿ121ಜ್ಞಾನ ಸುಖ ಬಲ ಪೂರ್ಣ ಜನ್ಮಾದಿಕರ್ತಅಜವನರುಹಜ ಪಿತ ಶ್ರೀಶಪ್ರಸನ್ನ ಶ್ರೀನಿವಾಸಅನಘಹಯಮುಖವಿಜಯಗೋಪಾಲ ಸರ್ವಗಗೆಘನ್ನ ಪ್ರಿಯ ಗೋಪಾಲ ದಾಸಾರ್ಯ ಶರಣು 122|| ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಜಗನ್ನಾಥದಾಸರ ಸ್ತೋತ್ರ138ಬಾಗುವೆ ಶಿರಪುರಂದರವಿಜಯಗೊಪಾಲಜಗನ್ನಾಥ ನಿನಗೂ ನಿನ್ನ ದಾಸರು ಸರ್ವರಿಗೂ ಪಜಗನ್ನಾಥದಾಸರ ನಾಮವರ್ಣಂಗಳಲಿಜಗನ್ನಾಥ ನೀಪೋಳೆದು ಸ್ಮರಿಪರ ಪಾಲಿಸುವಿ ಅ ಪ`ಜ' ಎನಲುಅಜಅಭಯಅಮೃತ ಉರುಕ್ರಮಅನಘಘನದಯದಿ ಭವವ ನದಿ ಸುಲಭದಿದಾಟಿಸುವಿ`ಗ' ಎನಲು ನಿಗಮೈಕ ವೇದ್ಯ ಪೀಡೆಗಳಳಿದುಜ್ಞಾನಭಕುತಿಗಳಿತ್ತು ಕಾಯ್ವ ವಿಪಗಮನ 1`ನಾ' ಎನಲು ಶ್ರೀಶಹರಿ ಬ್ರಹ್ಮಶಿವ ಮುಖವಂದ್ಯಆನತೇಷ್ಟಪ್ರದನೇ ಸೌಭಾಗ್ಯವೀವಿ`ಥ' ಎನಲು ರಕ್ಷಿಸುವಿ ಶ್ರೀ ಕೃಷ್ಣ ಗೋವಿಂದಅನ್ನಾದ ಅನ್ನದನೆ ಗಿರಿಧರ ಅನೀಶ 2ನರನರಪ ಗಂಧರ್ವ ಪಿತೃ ಋಷಿ ಸುರವೃಂದಸ್ಮರಗೋಪ ಗೌರೀಶ ಭಾರತೀ ವಾಣಿವರವಾಯು ವಿಧಿವಿನುತ ಶ್ರೀವಿಭಾವ ನವಿಭೋಪ್ರಸನ್ನ ಶ್ರೀನಿವಾಸ ಜಗನ್ನಾಥ ಶರಣು 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)34ಮೇರು ಸುತ ಗಿರಿವಾಸ |ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತನಿರ್ದೋಷ|||ಶ್ರೀ ಶ್ರೀನಿವಾಸ ||ವಿಷ್ಣು ಸರ್ವೋತ್ತಮ ಸಾಕ್ಷಾತ್ |ರಮಾದೇವಿ ತದಂತರಾ |ತದಧೌವಿಧಿವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |ವ್ಯಾಳಗಿರಿವಲ್ಮೀಕಪೊಕ್ಕಿ ಶ್ರೀವತ್ಸಶರಣು |ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪವೃಷಭಅಂಜನಶೇಷ|ವೇಂಕಟಾದ್ರಿಯ ನೆನೆಯೆ ಪಾಪವಿನಾಶ |ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ ||| ಶ್ರೀ ಶೇಷಾಚಲೇಶ ||ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |ಆಸಿಯತಲೆಯಲಿ ತಡೆದು ಗೋವನು ಕಾಯ್ದ _ಕರುಣಿಯೆ ಭಕ್ತವತ್ಸಲ |ತುಚ್ಛಗೋಪನು ಭಯದಿ ಅಸುಬಿಡೆಚೋಳರಾಯಗೆ ಶಾಪವಿತ್ತು |ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1ಅಸಮ ಸತ್ಯವಾಗೀಶ |ಜಗನ್ಮಾತೆಯೆಂದು ಪೇಳಿದಂತೆ ಆಕಾಶ |ಕಂಡಪದ್ಮದಿ ಪದುಮ ಸುಮುಖವಿಲಾಸ |ಶಿಶುವಕೊಂಡಳು ಧರಣಿ ಬಹು ಸಂತೋಷ ||| ದಿಂದ ವಿಹಿತ ಆಶ ||ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |ನಾರದನು ಬಹು ವೃದ್ಧರೂಪದಿ ಬಂದು -ಹಸ್ತರೇಖೆ ನೋಡುತ |ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2ಧರಣಿಯೊಡನೆ ಸಂವಾದ |ಮಾಡೆ ಬಕುಳಾ ಪೋಗೆ ನೀನು ಪುಳಿಂದ |ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ ||| ಕಣಿಪೇಳ್ವ ಚೆಂದ ||ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |ಭರದಿಶುಕಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ-ಗರುಡಶೇಷಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |ಸೇರಿಪುರಿಯ ಅಜರ ಮಂದಿರ ಪೋಲ್ವ -ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |ಸರಸಿಜಾಸನತಾತಪ್ರಸನ್ನ ಶ್ರೀನಿವಾಸನೆವಿಶ್ವಪಾಲಕ ಹೇ ದಯಾನಿಧೇ ಶರಣು -ಶರಣು ಹೇ ಸೌಭಾಗ್ಯದಾತಾ ಪ. 3||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವರದೇಂದ್ರವಿಜಯ121ವರದೇಂದ್ರ ತೀರ್ಥಾರ್ಯ ಗುರುವರರ ಪದಯುಗ್ಮ |ಸರಸೀರುಹದಲ್ಲಿ ಸತತ ನಾ ಶರಣಾದೆನು |ವರಸಮೀರಗ ಕೃಷ್ಣ ರಾಮಹಯಮುಖವ್ಯಾಸ |ನರಹರಿ ಪ್ರಿಯರಿವರು ಸಾಧುವರಪ್ರದರು ಪರಂಗನ ಪಾದೋದಕವು ಸುಪವಿತ್ರ ತಮವೆಂದುಗಂಗೆಯನು ಶಿರದ ಮೇಲಿಟ್ಟುಕೊಂಡಿಹ ಶಿವನು |ಲಿಂಗ ಮೂರುತಿ ಶಿವಗೆ ಸುಪೂರ್ಣಮತಿ ಗುರುವುಶಂಕೆಇಲ್ಲ ಬ್ರಹ್ಮಗುರು ಶಿವ ಶಿಷ್ಯಕೇಳಿಕೇನ1ರಜತ ಜಾಂಬೂನವ ತಾಮ್ರವÀನು ಮರಗದವ |ವಜ್ರಮಾಣಿಕ್ಯವನು ತನ್ನ ಗರ್ಭದಲಿ ನಿಲ್ಲಿರಿಸಿ |ದುರ್ಜನರಿಗೆ ಸುಲಭದಿ ಕಾಣಿಸದೆ ಈ ಕ್ಷೇತ್ರ |ರಾಜಿಸುತೆರವಿಸೋಮತಾರೆಗಳ ಜ್ಯೋತಿಯಿಂದ2ರಾಘವ ಯಾದವ ವೇಂಕಟಧಾಮ ಹನುಮ ಭೀಮ |ಈ ಗ್ರಾಮ ರಕ್ಷಣೆ ಮಾಡುತಿರೆ ಶಿವ ಜಪಿಸುವ |ಅಘದೂರ ಗುಣನಿಧಿ ಸಮೀರಗ ಮಹಿದಾಸ - |ನಿಗೆ ಪ್ರಿಯಬೃಹತಿಋಕ್ ಶ್ರೀ ವಿಷ್ಣು ಸಾಸಿರ ನಾಮ3ಈ ರೀತಿ ಬಹಿರ್ ಮುಖರ್ಗೆ ಪ್ರಿಯ ಲಿಂಗಸುಗೂರಲ್ಲಿಸುರವೃಂದದವರು ಮರುದ್ಗಣದವರು ತೋರಿ |ಇರುತಿದ್ದ ಕಾಲದಲಿವಿಜ್ಞಾನಭಕ್ತಿ ಯೋಗೀಶ |ವರದೇಂದ್ರ ತೀರ್ಥ ಗುರುರಾಜ್ವಿಜಯಮಾಡಿದರು4ಜಗನ್ನಾಥದಾಸರಸಖಶಿಷ್ಯರಾಗಿಹ ನಮ್ಮ |ಜಗಖ್ಯಾತ ಪ್ರಾಣೇಶದಾಸರು ಶ್ರೀ ಸ್ವಾಮಿಗಳಿಗೆ |ಸ್ವಾಗತ ವಿನಯ ಪೂರ್ವಕ ನೀಡಲು ಮುದದಿಂದ |ಶ್ರೀಗಳು ತಮ್ಮ ದಿಗ್ವಿಜಯ ತಾತ್ಪರ್ಯ ಹೇಳಿದರು 5ತಮ್ಮದ್ವಿತೀಯಸವನ ಮಧ್ಯ ಬ್ಯಾಗವಟ್ಟಿನರ- |ಸಿಂಹ ದಾಸರ ಯುವ ಆಟೋಪ ವಿದ್ಯಾವಾನ್ ಸುಗುಣಿಶ್ರೀ ಮಾಧ್ವ ಬಾದರಾಯಣಿಪರವಿದ್ಯಾಗ್ರಂಥಗಳ |ತಮ್ಮಲ್ಲಿ ಸಂಯಕ್ ಓದಿ ಈಗಲೂ ಬರುವ ಆಗಾಗ 6ಈ ತಮ್ಮ ಪ್ರಿಯ ಶ್ರೀನಿವಾಸಾಚಾರ್ಯರ ಪ್ರೀತಿ ಪಾತ್ರ |ಸಾತ್ವಿಕ ಶಿಷ್ಯರಲಿ ಶ್ರೀಮಠ ಬಂದದ್ದು ಸರಿಯೇ |ಇಂದಿಲ್ಲಿ ರಾಮ ವೇದವ್ಯಾಸ ಪೂಜೆ ಚರಿಸುವುದು |ಮುಂದಿಲ್ಲಿ ತತ್ತ ್ವವಾದ ಸಜ್ಞಾನ ವೃದ್ಧಿಯಾಗೆಹೇತು7ಪಾದಪೂಜೆ ಸಭ್ಯರಿಂದಲಿಗುರುಮರ್ಯಾದೆಗಳು |ಇಂಥ ಕಾರ್ಯಗಳ ನಿಮಿತ್ತ ವರದೇಂದ್ರ ಗುರುವು |ಮತ್ತು ಪೇಳುವ ಮಾತು ಪೂಜಾನಂತರ ಎನ್ನುತಲೆ |ಬಂದು ನೆರೆದ ಜನರಲಿಗಮನಬೀರಿದರು8ಲಿಂಗಸುಗೂರು ಮತ್ತು ಸುತ್ತ ಮುತ್ತ ಗ್ರಾಮ ಜನರ |ಕಂಗಳಿಗೆ ಹಬ್ಬವು ಮನಸ್ಸಿಗಾನಂದಕರವು |ಭಂಗಾರ ನವರತ್ನ ಮಂಟಪದಿ ಯತಿ ಕೃತ್ ಪೂಜೆ |ಶೃಂಗಾರ ದೀಪಾವಳಿ ತೋರಣ ವಿಪ್ರಜನ ಗುಂಪು 9ಮನೋದಾರ ವಾಕ್ಚತುರ ಶ್ರದ್ಧಾಳು ಭಕ್ತಿ ಭರಿತ |ಪ್ರಾಣೇಶದಾಸಾರ್ಯರ ಸೇವೆ ಮೆಚ್ಚಿದರು ಶ್ರೀಗಳು |ಅನಪೇಕ್ಷರು ಸ್ವಯಂ ತಾನೇ ವದಾನ್ಯರು ಕೇಳ್ದರು |ಮನೆ ಸ್ಥಳ ತಮಗೆ ದಾನಮಾಡೆಂದು ದಾಸರನ್ನ 10ಜ್ಞಾನಿವರ ಪ್ರಾಣೇಶದಾಸರಾಯರು ಎಂಥ ಭಾಗ್ಯ |ಎನ್ನುತ ಅನವಶ್ಯ ಹೆಚ್ಚುಸೊಲ್ಲುವೆಚ್ಚ ಮಾಡದೇ |ದಾನ ಮಾಡಿದರು ರಾಮಕೃಷ್ಣ ವ್ಯಾಸಾರ್ಪಣವೆಂದು |ಕನಿಕರದಿ ಸ್ವೀಕರಿಸಬೇಕೆಂದು ಬೇಡಿದರು 11ಜ್ಞಾನಿಕುಲ ತಿಲಕರು ದೇವ ಸ್ವಭಾವರು ನಮ್ಮ |ಘೃಣಿ ಶ್ರೀ ವರದೇಂದ್ರ ತೀರ್ಥಾರ್ಯಗುರುಮಹಂತರು |ದಾನ ಸ್ವೀಕರಿಸಿ ಬಹ್ವನುಗ್ರಹಿಸಿ ಹೊರಟರು |ಇನ್ನುಳಿದ ತಮ್ಮವಿಜಯಯಾತ್ರೆ ಕ್ಷೇತ್ರಗಳಿಗೆ12`ಶ್ರದ್ಧ ಯಾಧೇಯಂ' ಎಂಬ ಶೃತಿ ಶಾಸನ ಅನುಸಾರ |ಈ ದಾನ ದಾಸರು ಮಾಡಿದ್ದು ಲೋಕ ಕೊಂಡಾಡುತಿದೆ |ಅಂದಿನಾರಭ್ಯ ಲಿಂಗಸುಗೂರು ಪ್ರಾಣೇಶದಾಸರ |ಮಂದಿರ ವ್ಯಾಸದಾಸ ತತ್ತ ್ವವಾದ ಪೋಷಕವಾಯ್ತು 13ಶ್ರೀ ಮಠದ ಆಡಳಿತ ಪಾಠ ಪ್ರವಚನ ಇಂಥ |ತಮ್ಮ ಸ್ಥಾನಾಶ್ರಮ ಕೆಲಸ ಮಾಡುತ ಬಹುದಿನ |ತಮಗೆ ದತ್ತವಾದ ಲಿಂಗಸುಗೂರು ಭೂಮಿಯನ್ನು |ಸುಮ್ಮನೆ ಖಾಲಿಯಾಗಿ ಇಟ್ಟು ಪುಣೆಯಲ್ಲಿಗುರುನಿಂತರು14ನಿಯಮೇನ ಹರಿಪುರ ಯೈದಿ ಪುಣೆ ಮಠದಲ್ಲಿ |ದಿವ್ಯ ವೃಂದಾವನಸ್ಥರಾಗಿ ದಾಸರಿಗೆ ಸ್ವಪ್ನದಿ |ದಯಪಾಲಿಸಿದರು ತುಳಸಿ ವೃಕ್ಷ ಕುರುಹಲ್ಲಿ |ಶ್ರೀಯಃ ಪತಿಯ ಧ್ಯಾನಿಸುತ ಬಂದಿಹೆವು ವಾಸಕ್ಕೆ 15ಶ್ರೀ ಸ್ವಾಮಿಗಳ ಸ್ವಾಪ್ನ ಆಜ್ಞಾನುಸಾರವಾಗಿಯೇ | ವಿಶ್ವಾಸಉಕ್ಕುತ ಪ್ರಾಣೇಶದಾಸರು ವೃಂದಾವನವ |ಹಸನಾಗಿ ನಿರ್ಮಾಣ ಮಾಡಿ ಯೋಗ್ಯದಿನ ವಿಹಿತ |ಸಂಸ್ಕಾರದಿಂದ ಆವಾಹನ ಪ್ರತಿಷ್ಠೆ ಮಾಡಿದರು 16ಮಹಾನ್ ವರದೇಂದ್ರರು ಸ್ವಾಪ್ನ ಸಂದೇಶ ಪ್ರಕಾರವೇ |ಮಹಾನುಗ್ರಹ ಮಾಡಿ ತಾವೇ ಒಂದಂಶದಿ ಕುಳಿತು |ಅಹರಹ ಬಂದು ಸೇವಿಸುವರ್ಗೆ ವಾಂಛಿತವಿತ್ತು |ಸಲಹುತಲಿಹರು ಅದ್ಯಾಪಿ ಲಿಂಗಸುಗೂರಲ್ಲಿ 17ಈ ಪುಣ್ಯಶ್ಲೊಕ ವರದೇಂದ್ರ ತೀರ್ಥರಲಿ ತೀರ್ಥತ್ವ |ಇಪ್ಪುದರಿಂ ಪವಿತ್ರಕರ ಇವರ ಪಾದಸೇವಾ |ಪಾಪಹಾರಿಣಿ ಪುಣ್ಯದಾ ತುಳಸಿಯ ಮೂಲದಲಿ |ಸುಪವಿತ್ರಕರ ಸರ್ವತೀರ್ಥಗಳಿಪ್ಪುದು ಸಿದ್ಧ 18ಉರುಗಾಯ ಧನ್ವಂತರಿಯ ಆನಂದ ಬಾಷ್ಪಬಿಂದು |ಆಪ್ರಾಕೃತವಾದ್ದು ಹಸ್ತಸ್ಥಪ್ರಾಕೃತಪೀಯೂಷದೋಳ್ |ಪ್ರಕ್ಷಿಪ್ತವಾಗಿ ಧರೆಯಲ್ಲಿ ತುಳಸೀ ವೃಕ್ಷವಾಯ್ತು |ಹರಿಕೊಟ್ಟ ವರದಿಂ ವೃಂದಾದೇವಿ ತುಳಸಿಕಟ್ಟೆ19ದೋಷೋಜ್ಜಿತಗುಣಪೂರ್ಣ ಶ್ರೀಹರಿ ತುಳಸೀನಾಮ |ಲಕ್ಷ್ಮೀಸಮೇತ ಆ ವೃಕ್ಷ ಮಧ್ಯದಿ ಅಮೃತಾಂಧಸ್ |ಶ್ರೇಷ್ಠರ ಸಹ ಇರುವಂತೆ ವರದೇಂದ್ರರೋಳ್ ಛಂದಸಾಂ |ವೃಷಭಶ್ರೀಯಕ್ ಸಪರಿವಾರ ಜ್ವಲಿಸುತಿಹನು20ಉತ್ತಮ ಶ್ಲೋಕ ಪರಮೈಶ್ವರ್ಯರೂಪವಿಷ್ಣುವೇಅಧಿ|ಅಂದರೆ ಸರ್ವೋತ್ತಮ ಇಂಥಾ ಗುಣಜ್ಞಾನ ಪುಂಜವು |ವೇದಗಳು ತುಳಸ್ಯಾಗ್ರದಿ ಇರುವಂತೆ ಇವರೋಳ್ |ಮೇಧಾ ಪ್ರೌಢಿಮೆ ಇಹುದು ಮಧ್ವಸ್ಥವ್ಯಾಸಾನುಗ್ರಹ 21ಸುಮನಸವಂದಿತ ತುಳಸೀನಾಮಕ ಲಕ್ಷ್ಮಿಯು |ಸನ್ಮಂತ್ರವು ದ್ವಾದಶಾಕ್ಷರದಿ ಇರುವುದು ಅದು |ನಿರ್ಮಮ ನಿರ್ಮತ್ಸರ ಯೋಗ್ಯ ಅಧಿಕಾರಿಗಳಿಂದ |ರಮಾಮಾಧವ ಪ್ರೀತಿಗೆ ಜಪ್ಯ ಇಹಪರೇಷ್ಟಲಾಭ 22ಬಾದರಾಯಣತಾನೇ ನುಡಿಸಿದೀ ನುಡಿಗಳ್ ಭಕ್ತಿ |-ಯಿಂದೋದಿ ಕೇಳ್ವ್‍ರ್ಗೆ ವರದೇಂದ್ರ ಮಧ್ವಸ್ಥ ಅಜನ - |ಪಿತ `ಶ್ರೀ ಪ್ರಸನ್ನ ಶ್ರೀನಿವಾಸ' ಶ್ರೀಶ ತುಳಸೀಶ |ವಿತ್ತವಿದ್ಯಾಯುರಾರೋಗ್ಯ ಜ್ಞಾನ ಭಕ್ತ್ಯಾದಿಗಳೀವ23 ಪ|| ಇತಿ ಶ್ರೀ ವರದೇಂದ್ರವಿಜಯಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು