ಮರುಳು ಮನುಜ ಹರಿಯ ಧ್ಯಾನಿಸೋ
ಸ್ಥಿರವಿಲ್ಲವೀದೇಹ ಪ
ಬರಿದೆ ಹೊನ್ನು ಮಣ್ಣಿಗಾಗಿ
ಇರುಳು ಹಗಲು ವ್ಯರ್ಥವಾಗಿ
ಕರೆಕರೆಯನು ಪಡುವೆಯಲ್ಲೊ ಅ.ಪ
ತಂದೆ ತಾಯಿ ಸತಿಯು ಸುತರು
ಬಂಧು ಬಳಗಗಳಾರಿದ್ದರು
ಕರ್ಮ ತಪ್ಪಿಪರಾರು
ಸಂದೇಹವಿಲ್ಲೆಂದು ತಿಳಿದು 1
ಜನರು ನಿನ್ನ ಸೇರುತಿಹರು
ಕೊನೆಗೆ ಯಾರು ದಿಕ್ಕು ಕಾಣೆ
ಮನೆಯಬಿಟ್ಟು ಹೋಗುವಾಗ 2
ಗುರುರಾಮವಿಠಲನಂಘ್ರಿ
ಸ್ಮರಿಸಿ ಸ್ಮರಿಸಿ ಹರುಷ ಪೊಂದಿ
ಪಾಪಿಯೆನ್ನಿಸಿಕೊಳ್ಳಬೇಡವೊ 3