ಒಟ್ಟು 578 ಕಡೆಗಳಲ್ಲಿ , 80 ದಾಸರು , 485 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ಭಾಗ್ಯವಿದೂ | ಮಾನವೀದಾಸರ ಭಾಗ್ಯವಿದೂ || ಪ ಸುರಭೂಸುರ ಸೇವ್ಯವು | ಹರಿಕಥೆ ಅಮೃತವನೆರೆದು ಜನಾಳಿಯ | ಪೊರೆದಿಹುದೆಲ್ಲ ಅ.ಪ. ವೇದೋಪನಿಷದೆಲ್ಲ | ಶೋಧಿಸಿಬೋಧಿಸಿಹರು ಗ್ರಂಥ ||ವಾದಿಗಳನು ತಾ | ವಾದದಿ ಜಯಿಸುತಶ್ರೀದನೆ ಪರೆನೆಂಧ್ಹೇಳಿದುದೆಲ್ಲ 1 ಪಾತ್ರರ ಸಹವೆರಸೀ | ಭುವಿಯಲಿತೀರ್ಥ ಕ್ಷೇತ್ರ ಚರಿಸೀ ||ಗಾತ್ರ ಮಜ್ಜನದಿ | ತೀರ್ಥಂಗಳ ಪಾವಿತ್ರ್ಯ ಗೈಸಿದ ಮಹಿಮೆಗಳೆಲ್ಲ 2 ಇಂದು ಭಾಗದಲ್ಲೀ | ಅಂಕಿತಸಂದಿತು ಪಂಢರಿಲೀ ||ನಂದ ನಂದನ ಗುರು ಗೋವಿಂದ ವಿಠಲನೆಛಂದ ಬಂಧುರದಿಂದ ವಂದಿಪುದೆಲ್ಲ 3
--------------
ಗುರುಗೋವಿಂದವಿಠಲರು
ದಾಸರಾಯ ವಿಜಯದಾಸರಾಯ | ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ ಸಕಲಜಗತ್ತಿಗೆ ಲಕುಮೀಶಪರೆನೆಂದು ಮಖವಾಚರಿಪ ಮುನಿ ನಿಕರಕೆÉ ಸಾರಿದ 1 ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ | ಮಾನಸ ಕುಮುದಕೆÉ ಏಣಾಂಕನೆನಿಸಿದ 2 ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ ವಿಧ ವಿಧ ರಚಿಸಿದ ಸದಮಲ ಸುಚರಿತ್ರ 3 ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ | ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ 4 ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ 5 ಪೊರೆವ ಚಿಪ್ಪಶಿಖರನಿಲಯ 6 ಪಾಮರನಾದೆನಗೆ ಶಾಮಸುಂಧದರ ಸ್ವಾಮಿ ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ 7
--------------
ಶಾಮಸುಂದರ ವಿಠಲ
ದುರಿತ ತ್ಯಜಿಸೋ | ವರ ಮಾನವಿ ಪುರದಿ ಮೆರೆವ ಪ ಆದಿಯಲ್ಲಿ ಪ್ರಹ್ಲಾದನ ಸಹೋದರನೀತ | ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ | ಪುರಂದರ ದಾಸಾರ್ಯರ ಪ್ರೀತ | ಸಾಧುರಂಗವೊಲಿದ ಭಾಗವತರತಿ ಖ್ಯಾತ 1 ತ್ವರವಾಟದಿ ಕರುಣಿಕ ನರಸಾರ್ಯರಪುತ್ರ | ಧರೆಸುರ ಪರಿಪಾಲಕ ವರದೇಂದ್ರ ಛಾತ್ರ ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ 2 ಸೀಮದಿಂದ ಭಜಿಸುವರ ಕಾಮಿತ ಫಲವಾ | ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ || ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ | ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ 3
--------------
ಶಾಮಸುಂದರ ವಿಠಲ
ದೇವ ಬೆಳಗಾಯಿತೋ ಎನ್ನಯ ಸೇವಾ ಪ ಸ್ವೀಕರಿಸೋ ಮಹಾನುಭಾವ ದೇವ ಅ.ಪ ಮಧುರ ಗಾನವೇ ಗಂಗಾಸ್ನಾನ ಹೃದಯ ಶುದ್ಧಿಯೇ ಬದರಿಸ್ನಾನ ಬದಿಯಲಿರುವ ಭಕುತರ ಸಹವಾಸವೇ ನದಿನದಗಳವಗಾಹನ ಸ್ನಾನವೋ 1 ಹಾಲಿಗೆ ಕರದಲಿ ಥಾಲಿಯ ಪಿಡಿದು ಕೋಲಾಹಲ ಕಲಭಾಷಣ ಮಾಡುವ ಬಾಲರ ನಗುಮೊಗ ನೋಡಲು ಕೃಷ್ಣನ ಲೀಲೆಯ ಸಂದರ್ಶನಾನಂದವೋ 2 ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಕುಸುಮ ರಾಶಿಯ ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3 ತಾತನೆಂದು ಮೊರೆಯಿಡುವರು ನೀ ಅನ್ನ ದಾತನೆಂದು ಮೊರೆಯುತಿಹರೋ ತಾತನ ಕಿವಿಗೀ ಮಾತನು ತಿಳಿಸಲು ದೂತನು ನಾ ಕಾದಿಹೆನೊ ಪ್ರಸನ್ನನೇ 4
--------------
ವಿದ್ಯಾಪ್ರಸನ್ನತೀರ್ಥರು
ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯನಾದೆನಾ ಗುರು ಪ ಸನ್ನುತಾಂಗ ಗುರುರಾಜರ ನೋಡಿಅ.ಪ ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು | ಸುಖಗಳನೀವರ ನೋಡಿ 1 ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ| ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು| ಅಧಮರ ಮುರಿದಿಹ ಧೀರರ ನೋಡಿ2 ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಕೊಂಡಾಡುತೆ ನೋಡಿ3
--------------
ಶ್ರೀಶ ಕೇಶವದಾಸರು
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ಧುರಧೀರನಿವನೆಂದು ನೆರೆವೆರೆಯಲೈತಂದು ಮರುಳಾದೆ ನಾನಿಂದು ಮುಂದೆ ನಿಂದು ನಾರ್ವಟ್ಟೆಯುಟ್ಟಿರುವ ಅರಣ್ಯದೊಳಗಲೆವ ನಾರುಬೇರನೆ ಮೆಲುವ ಅರರೆ ಚಲುವ ಜನಪನಂದನನೆನಿಸಿ ಮುನಿಜನರ ತಾವೆರಸಿ ವನವನದಿ ಸಂಚರಿಸುತಿರುವ ಸಹಿಸಿ ಲಲನೆಯನು ಕರೆತರಲು ಪಲವು ಕಪಿಗಳನೆರೆದು ಜಲಧಿಯನು ಬಂಧಿಸಿದನಲಘುಬಲನೆ ಇನಿತು ಸಾಹಸವುಳ್ಳ ಸುಗುಣನಿಧಿಗೆ ಮನವೊಲಿದು ನಾ ಬಂದು ಮೋಸಪೋಗೆ ಮಿಣುಕಿ ಫಲವೇನಿನ್ನು ಮಿಂಚಿದುದಕೆ ಧಣಿಯೆನಗೆ ಶೇಷಾದ್ರಿವರನೆ ಸಾಕೆ
--------------
ನಂಜನಗೂಡು ತಿರುಮಲಾಂಬಾ
ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಙÁ್ಞನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಪ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ 1 ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು | ವರರಾಜ ತೀರ್ಥ ಮಾಧವನ ಸಾರುವೆನೆಂದು | ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು | ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ || ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ | ಸಿರಿ ಮಾಧವನ ಚರಣ | ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ 2 ತುರುಗಮ ನೆವದಿಂದ ಅರವತ್ತು ಸಾವಿರ ಸ | ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ | ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ | ಧುರಧಿ ತಪವನ್ನೆ ಮಾಡೇ | ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು | ಸಿರಿ | ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ | ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ3 ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು | ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ | ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು | ಸರಿ ಮಾಡಿ ತೊಲಗಲಾಗೀ || ಸುರರು ಶಿರದೂಗುತಿರೆ | ವರರಾಜತೀರ್ಥ ಮಹಾಭಾರವಾಗಲು ಇದಕೆ | ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ | ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ 4 ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ | ನರನು ತಿಲ ಹೋಮ ಯಮರಾಯಕಿಂಚಿತು ದಾನ | ನಿಋರುತಿತ ಪೈತೃಕಕರ್ಮ ವರುಣ ಜಲದಾನಸ್ತುತಿ | ಮರುತ ಭೂತನು ಕುಬೇರ || ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು | ಪರಿಪರಿಯಿಂದಲಿ ಒಲಿಸಿ ಮಾಧವನಿಂದ | ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ | ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ5 ಎರಡೊಂದು ಮೂರು ಕುಲದ ಮಧ್ಯ ನಿಂದು | ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ | ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ | ಕರಣ ನಿರ್ಮಲಿನರಾಗಿ | ವಿಪ್ರ ಚಂಡಾಲ || ಪರಿಯಂತ ವಪನವೆ ಮುಖ್ಯವೆಂದು ತಿಳಿದು | ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ | ಬರಿದೆ ಆಗದು ಕಾಣಿರೈಯ್ಯ ಅಯ್ಯ ಅಯ್ಯಾ6 ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ | ಉರುತರ ಬುದ್ದಿಯಿಂದ ಮಾಡಿಸಲಿ ಬೇಕು ವಿ | ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ | ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ || ಪುರಾಣದಲಿ ಪೇಳಿದ ಎರಡು ಭುಜದಲಿ ತಪ್ತ ಚಕ್ರ | ವಿರಹಿತರಾಗಿ ಬರಲು ಷಣ್ಮುತ ಜನಕ ಗತಿಯಿಲ್ಲ ಮತಿಯಿಲ್ಲ | ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ 7 ಎರಡೈದು ತುರಗ ಕೃತು ಮೊದಲಾದ ತೀರ್ಥಗಳು | ಪರಿಪರಿ ದೇವ ಮುನಿಗಳು ನಾಮದಲಿ ಉಂಟು | ಪರಮಭಕುತಿಯಿಂದ ಮಜ್ಜನಾದಿಯ ಮಾಡೆ | ಪರಲೋಕ ಕರತಳದೊಳು || ಇರುತಿಪ್ಪದು ನಿತ್ಯಾ ಪ್ರಯಾಗರಾಜನ | ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು | ಮಾಧವ ವೊಳಗೆ ಮೊಳೆವ | ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ 8 ಅರುಣೋದಯಲೆದ್ದು ಶುದ್ಧಾತ್ಮರಾಗಿ | ಪರಿಪರನೆಂಬೊ ಙÁ್ಞನದಲಿ ಹಾಡಿಪಾಡಿದವರ | ದುರಿತ ರಾಸಿಗಳ ದಹಿಸಿ ನಿಂ | ದಿರದೆ ಸಂತರ ಕೊಡಿಸಿ || ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು | ನೆರೆನಂಬಿ ಮಾನವನು ಮಾನಸದಲಿ ಭಜಿಸಿ | ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ | ದೊರಕುವದು ದೊರಕುವದಯ್ಯಾ ಅಯ್ಯಾ ಅಯ್ಯಾ 9
--------------
ವಿಜಯದಾಸ
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ನಡೆಯೇ ತೀರ್ಥವು ನುಡಿ ಪ್ರಸಾದವುಕೊಡುವುದೇ ತಾನೀಗನುಗ್ರಹವುಹಿಡಿವುದೇ ತತ್ವವು ಬಿಡುವುದೇ ವೈರಾಗ್ಯದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವುಘಟ್ಟಿಯಾಗಿಹುದೇ ಗಯವೀಗ ಗೋಕರ್ಣಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1 ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿಕಂಡದ್ದೆ ಕಂಚಿ ಕಾಳಹಸ್ತಿಮಂಡೆಗೆರಕೊಂಡುದೇ ಮೈಲಾರ ಮಧುರೆಯುಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2 ಸುಧಾ ಶರಧಿಯು ಆತ ಸಾಕ್ಷಾತ್ತು ದೈವವುವಿಧ ವಿಧದ ಜಗ ತಾನೆಯಾದಾತನುಮದಕಾಮ ಕ್ರೋಧ ಪಾಶ ಶೋಕ ವರ್ಜಿತಚಿದಾನಂದ ಗುರುವೇ ತಾನಾದ ಮಹಾತ್ಮನಾ 3
--------------
ಚಿದಾನಂದ ಅವಧೂತರು
ನಂದ ವೃಜ ಮಧುರಿ ದ್ವಾರಕೀಯೊಳಾಡಿದ ಕೂಸೆಎಂದು ಬಾಹುವಿ ಇಲ್ಲಿಗೆ ಪ ಮಧುರೆಯಲಿ ನೀಪುಟ್ಟಿ ಪಿತೃಗಳ ರಕ್ಷಿಸಿದಿಹಿತದಿಂದ ಯಾದವರ ತಲೆಯ ಕಾಯ್ದಿಮೃತವಾದ ಮಗುವನು ಗುರುಸತಿಯ ಮಾತಿಗೆ ಕೊಟ್ಟೆಪ್ರತಿಗಾಣೆನೊ ನಿನ್ನ ಬಲಕೆ ಛಲಕೆ 1 ವೈರಿ ಬಾಧೆಯ ಬಿಡಿಸಿಭೂರಿ ಸುಖವಿತ್ತು ಪೊರೆದಿ ಭರದಿ 2 ಸರಯು ತೀರದಿ ಅಯೋಧ್ಯಾ ಪುರದೊಳಗೆ ಕಾಂಚನದಪರಮ ಪೀಠದಿ ಕುಳಿತು ಸೀತೆಯೊಡನೆಹರಳು ಕೆತ್ತಿದ ನಾನಾ ಭೂಷಣಂಗಳನಿಟ್ಟುಮರುಳು ಮಾಡುವಿ ನಮ್ಮನೂ ನೀನು 3 ನಂದ ಗೋಕುಲದಿ ರವಿ ನಂದನೀಯ ತೀರದಲ್ಲಿಚಂದದಿಂದಲಿ ನಿಂತು ಕೊಳಲನೂದಿಮಂದಗಮನಿಯರ ಮನಸು ಮರುಳು ಮಾಡುತ ಸುಖವು ದ್ವಂದ್ವಲೋಕದಿ ಕೊಟ್ಟಿ ಭೆಟ್ಟಿ 4 ಸಿರಿ ಸಂಪತ್ತು ಬಲ್ಲೆಇಂದಿರೇಶನೆ ಎನ್ನ ಚಿತ್ತ ಮಂದಿರದೊಳು ನಿನ್ನಸುಂದರಾನನ ತೋರೋ ಬಾರೋ5
--------------
ಇಂದಿರೇಶರು
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ